📖 0/604 ಓದಿದ ಪುಟಗಳು
📄 249
ಸೂರಾ ಅರ್-ರಾದ್

ಸೂರಾ ಅರ್-ರಾದ್

13:1
الٓمٓرۚ تِلۡكَ ءَايَٰتُ ٱلۡكِتَٰبِۗ وَٱلَّذِيٓ أُنزِلَ إِلَيۡكَ مِن رَّبِّكَ ٱلۡحَقُّ وَلَٰكِنَّ أَكۡثَرَ ٱلنَّاسِ لَا يُؤۡمِنُونَ ١
ಅಲಿಫ್ ಲಾಮ್ ಮೀಮ್ ರಾ. ಇವು ದೈವಿಕಗ್ರಂಥದ ಸೂಕ್ತಿಗಳಾಗಿವೆ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಿದ್ದೇಲ್ಲವೂ ಸತ್ಯವಾಗಿದೆ. ಆದರೆ ಅಧಿಕÀ ಜನರು ವಿಶ್ವಾಸವಿಡುವುದಿಲ್ಲ.
13:2
ٱللَّهُ ٱلَّذِي رَفَعَ ٱلسَّمَٰوَٰتِ بِغَيۡرِ عَمَدٍ تَرَوۡنَهَاۖ ثُمَّ ٱسۡتَوَىٰ عَلَى ٱلۡعَرۡشِۖ وَسَخَّرَ ٱلشَّمۡسَ وَٱلۡقَمَرَۖ كُلٌّ يَجۡرِي لِأَجَلٍ مُّسَمًّىۚ يُدَبِّرُ ٱلۡأَمۡرَ يُفَصِّلُ ٱلۡأٓيَٰتِ لَعَلَّكُم بِلِقَآءِ رَبِّكُمۡ تُوقِنُونَ ٢
ಅಲ್ಲಾಹನೆಂದರೆ ನೀವು ನೋಡುವಂತಹ ಸ್ತಂಭಗಳಿಲ್ಲದ ಆಕಾಶಗಳನ್ನು ಮೇಲಕ್ಕೇರಿಸಿದವನು. ಅನಂತರ ಅವನು ವಿಶ್ವಸಿಂಹಾಸನದ ಮೇಲೆ ಆರೋಢನಾದನು. ಅವನೇ ಸೂರ್ಯ ಮತ್ತು ಚಂದ್ರನನ್ನು ಒಂದು ನಿಯಮಕ್ಕೆ ಅಧೀನಗೊಳಿಸಿದನು. ಪ್ರತಿಯೊಂದು ಸಹ ಒಂದು ನಿರ್ದಿಷÀ್ಟ ಅವಧಿಯ ತನಕ ಸಂಚರಿಸುತ್ತಿವೆ. ಅವನೇ ಪ್ರತಿಯೊಂದು ಕಾರ್ಯವನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪ್ರಭುವಿನ ಭೇಟಿಯನ್ನು ದೃಢವಾಗಿ ನಂಬಲೆAದು ತನ್ನ ದೃಷ್ಟಾಂತಗಳನ್ನು ಸ್ಪಷÀ್ಟವಾಗಿ ವಿವರಿಸುತ್ತಾನೆ.
13:3
وَهُوَ ٱلَّذِي مَدَّ ٱلۡأَرۡضَ وَجَعَلَ فِيهَا رَوَٰسِيَ وَأَنۡهَٰرًاۖ وَمِن كُلِّ ٱلثَّمَرَٰتِ جَعَلَ فِيهَا زَوۡجَيۡنِ ٱثۡنَيۡنِۖ يُغۡشِي ٱلَّيۡلَ ٱلنَّهَارَۚ إِنَّ فِي ذَٰلِكَ لَأٓيَٰتٍ لِّقَوۡمٍ يَتَفَكَّرُونَ ٣
ಅವನೇ ಭೂಮಿಯನ್ನು ವಿಸ್ತಾರಗೊಳಿಸಿದನು ಮತ್ತು ಅದರಲ್ಲಿ ಪರ್ವತಗಳನ್ನು ನದಿಗಳನ್ನು ಉಂಟುಮಾಡಿದನು ಮತ್ತು ಅವನೇ ಪ್ರತಿಯೊಂದು ಬಗೆಯ ಫಲಗಳಲ್ಲಿ ಎರಡು ಜೋಡಿಗಳನ್ನು ಉಂಟುಮಾಡಿದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ಯೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
13:4
وَفِي ٱلۡأَرۡضِ قِطَعٌ مُّتَجَٰوِرَٰتٌ وَجَنَّٰتٌ مِّنۡ أَعۡنَٰبٍ وَزَرۡعٌ وَنَخِيلٌ صِنۡوَانٌ وَغَيۡرُ صِنۡوَانٍ يُسۡقَىٰ بِمَآءٍ وَٰحِدٍ وَنُفَضِّلُ بَعۡضَهَا عَلَىٰ بَعۡضٍ فِي ٱلۡأُكُلِۚ إِنَّ فِي ذَٰلِكَ لَأٓيَٰتٍ لِّقَوۡمٍ يَعۡقِلُونَ ٤
ಮತ್ತು ಭೂಮಿಯಲ್ಲಿ ಒಂದಕ್ಕೊAದು ಅಂಟಿಕೊAಡಿರುವ ವಿಭಿನ್ನ ಭೂ ಭಾಗಗಳಿವೆ, ದ್ರಾಕ್ಷಿ ತೋಟಗಳಿವೆ, ಮತ್ತು ಕೃಷಿ ಹೊಲಗಳಿವೆ, ಖರ್ಜೂರದ ಮರಗಳಿವೆ ಮತ್ತು ಅವುಗಳಲ್ಲಿ ಕೆಲವು ಕವಲೊಡೆದ ಮತ್ತು ಇನ್ನು ಕೆಲವು ಕವಲೊಡೆಯದ ಮರಗಳಿವೆ. ಎಲ್ಲವೂ ಒಂದೇ ನೀರಿನಿಂದ ಉಣಿಸಲಾಗುತ್ತವೆ. ಹಾಗು ನಾವು ಕೆಲವನ್ನು ಕೆಲವುಗಳ ಮೇಲೆ ರುಚಿಯಲ್ಲಿ ಶ್ರೇಷ್ಠಗೊಳಿಸುತ್ತೇವೆ. ಖಂಡಿತವಾಗಿಯೂ ಇದರಲ್ಲಿ ವಿವೇಚಿಸುವವರಿಗೆ ಹಲವಾರು ದೃಷ್ಟಾಂತಗಳಿವೆ.
13:5
۞ وَإِن تَعۡجَبۡ فَعَجَبٌ قَوۡلُهُمۡ أَءِذَا كُنَّا تُرَٰبًا أَءِنَّا لَفِي خَلۡقٍ جَدِيدٍۗ أُوْلَٰٓئِكَ ٱلَّذِينَ كَفَرُواْ بِرَبِّهِمۡۖ وَأُوْلَٰٓئِكَ ٱلۡأَغۡلَٰلُ فِيٓ أَعۡنَاقِهِمۡۖ وَأُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ ٥
ಇನ್ನು ನೀವು ಆಶ್ಚರ್ಯಪಡುವುದಾದರೆ ವಾಸ್ತವದಲ್ಲಿ ಅವರ ಈ ಮಾತು ಆಶ್ಚರ್ಯಕರವಾಗಿದೆ. "ನಾವು ಮಣ್ಣಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?" ಅವರೇ ತಮ್ಮ ಪ್ರಭುವಿನ ನಿಷÉÃಧ ಕೈಗೊಂಡವರು ಮತ್ತು ಅವರ ಕೊರಳಲ್ಲಿ ಕಡಗಗಳಿರುವವು ಅವರೇ ನರಕವಾಸಿಗಳು. ಅದರಲ್ಲಿ ಅವರು ಶಾಶ್ವತವಾಗಿರುವರು.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, August 25, 2026
Don't forget us in your sincere prayers







