ಸೂರಾ ಅನ್-ನಿಸಾ ಅರೇಬಿಕ್ ಮತ್ತು ಕನ್ನಡ

ಸೂರಾ ಅನ್-ನಿಸಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (176 ಆಯತ್ — مدنية). ಅನ್-ನಿಸಾ ಆಲಿಸಿ, ಅನ್-ನಿಸಾ ಅನುವಾದ, ಅನ್-ನಿಸಾ mp3, ಅನ್-ನಿಸಾ pdf.

ಸೂರಾ ಅನ್-ನಿಸಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
يَا أَيُّهَا النَّاسُ اتَّقُوا رَبَّكُمُ الَّذِي خَلَقَكُم مِّن نَّفْسٍ وَاحِدَةٍ وَخَلَقَ مِنْهَا زَوْجَهَا وَبَثَّ مِنْهُمَا رِجَالًا كَثِيرًا وَنِسَاءً ۚ وَاتَّقُوا اللَّهَ الَّذِي تَسَاءَلُونَ بِهِ وَالْأَرْحَامَ ۚ إِنَّ اللَّهَ كَانَ عَلَيْكُمْ رَقِيبًا ۝١
📖 ಅನುವಾದ ಆಯತ್ 1
ಓ ಜನರೇ, ನೀವು ನಿಮ್ಮ ಪರಿಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಮತ್ತು ಅದರಿಂದಲೇ ಅದರ ಜೋಡಿಯನ್ನು ಸೃಷ್ಟಿಸಿ ಅವರಿಬ್ಬರಿಂದ ಅನೇಕ ಪುರುಷರನ್ನೂ, ಸ್ತಿçÃಯರನ್ನೂ ಸೃಷ್ಟಿಸಿ (ಭೂಮಿಯಲ್ಲಿ) ಹರಡಿಸಿದನು. ನೀವು ಯಾರ ಹೆಸರಿನಲ್ಲಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ ಮತ್ತು ಕುಟುಂಬ ಸಂಬAಧಗಳನ್ನು ಮುರಿಯಬೇಡಿರಿ ನಿಸ್ಸಂಶಯವಾಗಿಯು ಅಲ್ಲಾಹನು ನಿಮ್ಮ ಮೇಲ್ವಿಚಾರಕನಾಗಿರುವನು.
وَآتُوا الْيَتَامَىٰ أَمْوَالَهُمْ ۖ وَلَا تَتَبَدَّلُوا الْخَبِيثَ بِالطَّيِّبِ ۖ وَلَا تَأْكُلُوا أَمْوَالَهُمْ إِلَىٰ أَمْوَالِكُمْ ۚ إِنَّهُ كَانَ حُوبًا كَبِيرًا ۝٢
📖 ಅನುವಾದ ಆಯತ್ 2
ಅನಾಥರಿಗೆ ಅವರ ಸೊತ್ತುಗಳನ್ನು ನೀವು ಕೊಟ್ಟುಬಿಡಿರಿ. ಅವರ ಒಳ್ಳೆಯ ವಸ್ತುಗಳ ಬದಲಾಗಿ ಕೆಟ್ಟವಸ್ತುಗಳನ್ನು ನೀಡಬೇಡಿರಿ ಮತ್ತು ನೀವು ನಿಮ್ಮ ಸೊತ್ತಿನೊಂದಿಗೆ ಅವರ ಸೊತ್ತುಗಳನ್ನು ಸೇರಿಸಿ ತಿನ್ನಬೇಡಿರಿ. ನಿಸ್ಸಂದೇಹವಾಗಿಯು ಇದು ಘೋರ ಅಪರಾಧವಾಗಿದೆ.
وَإِنْ خِفْتُمْ أَلَّا تُقْسِطُوا فِي الْيَتَامَىٰ فَانكِحُوا مَا طَابَ لَكُم مِّنَ النِّسَاءِ مَثْنَىٰ وَثُلَاثَ وَرُبَاعَ ۖ فَإِنْ خِفْتُمْ أَلَّا تَعْدِلُوا فَوَاحِدَةً أَوْ مَا مَلَكَتْ أَيْمَانُكُمْ ۚ ذَٰلِكَ أَدْنَىٰ أَلَّا تَعُولُوا ۝٣
📖 ಅನುವಾದ ಆಯತ್ 3
ಅನಾಥ ಹುಡುಗಿಯರನ್ನು ಮದುವೆಯಾಗಿ ನಿಮಗೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂದು ನೀವು ಭಯಪಡುವುದಾದರೆ ನಿಮಗಿಷ್ಟವಿರುವ ಇತರ ಸ್ತಿçÃಯರ ಪೈಕಿ ಇಬ್ಬರು ಅಥವಾ ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಆದರೆ ನಿಮಗೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂಬ ಭಯವಿದ್ದರೆ ಒಬ್ಬಳನ್ನೇ ವಿವಾಹವಾಗಿರಿ ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮ ಸ್ತಿçÃಯನ್ನು ಸ್ವೀಕರಿಸಿರಿ. ಹೀಗೆ ನೀವು ಅನ್ಯಾಯ ಮಾಡದಿರಲು ಹೆಚ್ಚು ನಿಕಟವಾಗಿದೆ.
وَآتُوا النِّسَاءَ صَدُقَاتِهِنَّ نِحْلَةً ۚ فَإِن طِبْنَ لَكُمْ عَن شَيْءٍ مِّنْهُ نَفْسًا فَكُلُوهُ هَنِيئًا مَّرِيئًا ۝٤
📖 ಅನುವಾದ ಆಯತ್ 4
ಮತ್ತು ಸ್ತಿçÃಯರಿಗೆ ಅವರ ವಧುಧನವನ್ನು ಆತ್ಮ ಸಂತೃಪ್ತಿಯಿAದ ನೀಡಿರಿ, ಅವರು ತಮ್ಮ ಸ್ವ-ಇಚ್ಛೆಯಿಂದ ಅದರಿಂದ ಅಲ್ಪವನ್ನು ನಿಮಗೆ ಬಿಟ್ಟು ಬಿಡುವುದಾದರೆ ಅದನ್ನು ಸಂತೋಷದಿAದ ಉಪಯೋಗಿಸಿರಿ.
وَلَا تُؤْتُوا السُّفَهَاءَ أَمْوَالَكُمُ الَّتِي جَعَلَ اللَّهُ لَكُمْ قِيَامًا وَارْزُقُوهُمْ فِيهَا وَاكْسُوهُمْ وَقُولُوا لَهُمْ قَوْلًا مَّعْرُوفًا ۝٥
📖 ಅನುವಾದ ಆಯತ್ 5
ಅಲ್ಲಾಹನು ನಿಮ್ಮ ಜೀವನೋಪಾಯಕ್ಕಾಗಿ ನಿಶ್ಚಯಿಸಿರುವ ಸಂಪತ್ತನ್ನು ಅವಿವೇಕಿಗಳಿಗೆ ನೀಡಬೇಡಿರಿ. ಆದರೆ, ಅವರಿಗೆ ಅದರಿಂದ ಉಣ್ಣಲು, ಉಡಲು ಕೊಡಿರಿ ಹಾಗೂ ಅವರೊಂದಿಗೆ ಸದಾಚಾರದೊಂದಿಗೆ ಮೃದುವಾದ ಮಾತುಗಳನ್ನಾಡಿರಿ.
وَابْتَلُوا الْيَتَامَىٰ حَتَّىٰ إِذَا بَلَغُوا النِّكَاحَ فَإِنْ آنَسْتُم مِّنْهُمْ رُشْدًا فَادْفَعُوا إِلَيْهِمْ أَمْوَالَهُمْ ۖ وَلَا تَأْكُلُوهَا إِسْرَافًا وَبِدَارًا أَن يَكْبَرُوا ۚ وَمَن كَانَ غَنِيًّا فَلْيَسْتَعْفِفْ ۖ وَمَن كَانَ فَقِيرًا فَلْيَأْكُلْ بِالْمَعْرُوفِ ۚ فَإِذَا دَفَعْتُمْ إِلَيْهِمْ أَمْوَالَهُمْ فَأَشْهِدُوا عَلَيْهِمْ ۚ وَكَفَىٰ بِاللَّهِ حَسِيبًا ۝٦
📖 ಅನುವಾದ ಆಯತ್ 6
ನೀವು ಅನಾಥರನ್ನು ಅವರು ಪ್ರಾಯಕ್ಕೆ ತಲುಪುವ ತನಕ ಸುಧಾರಿಸುತ್ತಾ, ಪರೀಕ್ಷಿಸಿರಿ. ನೀವು ಅವರಲ್ಲಿ ವ್ಯವಹಾರ ಪ್ರಜ್ಞೆಯನ್ನು ಕಂಡರೆ ಅವರ ಸಂಪತ್ತನ್ನು ಅವರಿಗೆ ಹಸ್ತಾಂತರಿಸಿರಿ. ಅವರು ಪ್ರೌಢರಾಗುತ್ತಿದ್ದಾರೆಂಬ ಭಯದಿಂದ ಅವರ ಸಂಪತ್ತನ್ನು ಲಗುಬಗನೆ ಅಮಿತವ್ಯಯದಿಂದ ಹಾಳು ಮಾಡದಿರಿ. ಶ್ರೀಮಂತರು (ಅವರ ಸಂಪತ್ತಿನಿAದ) ತಮ್ಮನ್ನು ದೂರವಿಡಲಿ. ಆದರೆ ನಿರ್ಗತಿಕನು ಅಗತ್ಯವಿದ್ದರೆ ಶಿಷ್ಟಾಚಾರದಂತೆ ನಿರ್ದಿಷ್ಟವಾಗಿ ತಿನ್ನಲಿ. ಅನಂತರ ಅವರ ಸೊತ್ತನ್ನು ಅವರಿಗೆ ನೀವು ಹಸ್ತಾಂತರಿಸುವಾಗ ಜನರನ್ನು ಸಾಕ್ಷಿಯಾಗಿರಿಸಿಕೊಳ್ಳಿರಿ ಲೆಕ್ಕಪರಿಶೋಧನೆಗೆ ಅಲ್ಲಾಹನೇ ಸಾಕು.
لِّلرِّجَالِ نَصِيبٌ مِّمَّا تَرَكَ الْوَالِدَانِ وَالْأَقْرَبُونَ وَلِلنِّسَاءِ نَصِيبٌ مِّمَّا تَرَكَ الْوَالِدَانِ وَالْأَقْرَبُونَ مِمَّا قَلَّ مِنْهُ أَوْ كَثُرَ ۚ نَصِيبًا مَّفْرُوضًا ۝٧
📖 ಅನುವಾದ ಆಯತ್ 7
ಮಾತಾಪಿತರು ಮತ್ತು ಆಪ್ತ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಪುರುಷರಿಗೆ ಒಂದು ಪಾಲಿದೆ; ಮಾತಾಪಿತರು ಮತ್ತು ಆಪ್ತ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಸ್ತಿçÃಯರಿಗೂ ಒಂದು ಪಾಲಿದೆ ಆ ಸಂಪತ್ತು ಕಡಿಮೆಯಿರಲಿ; ಹೆಚ್ಚಿರಲಿ. (ಅದು ಅಲ್ಲಾಹನಿಂದ) ನಿಶ್ಚಯಿಸಲಾದ ಪಾಲಾಗಿದೆ.
وَإِذَا حَضَرَ الْقِسْمَةَ أُولُو الْقُرْبَىٰ وَالْيَتَامَىٰ وَالْمَسَاكِينُ فَارْزُقُوهُم مِّنْهُ وَقُولُوا لَهُمْ قَوْلًا مَّعْرُوفًا ۝٨
📖 ಅನುವಾದ ಆಯತ್ 8
ಪಾಲು ಮಾಡುವ ಸಂದರ್ಭದಲ್ಲಿ (ಹಕ್ಕುದಾರರಲ್ಲದ) ನಿಕಟಬಂಧುಗಳಾಗಲಿ, ಅನಾಥರಾಗಲಿ, ಬಡವರಾಗಲಿ ಉಪಸ್ಥಿತರಿದ್ದರೆ, ಅದರಿಂದ ನೀವು ಅವರಿಗೂ ಅಲ್ಪವನ್ನು ಕೊಟ್ಟುಬಿಡಿರಿ ಮತ್ತು ಅವರೊಂದಿಗೆ ನಯವಾಗಿ ಮಾತನ್ನಾಡಿರಿ.
وَلْيَخْشَ الَّذِينَ لَوْ تَرَكُوا مِنْ خَلْفِهِمْ ذُرِّيَّةً ضِعَافًا خَافُوا عَلَيْهِمْ فَلْيَتَّقُوا اللَّهَ وَلْيَقُولُوا قَوْلًا سَدِيدًا ۝٩
📖 ಅನುವಾದ ಆಯತ್ 9
ತಮ್ಮ ಹಿಂದೆ ಮಕ್ಕಳನ್ನು ಬಿಟ್ಟುಹೋಗುವ ಪಕ್ಷದಲ್ಲಿ ಅವರಿಗೇನಾಗುವುದೆಂದು ಭಯಗ್ರಸ್ತರಾಗುವವರು ಇತರ ಅನಾಥ ಮಕ್ಕಳ ಕುರಿತು ಭಯಪಡಲಿ. ಅಲ್ಲಾಹನನ್ನು ಭಯಪಟ್ಟು ಸರಿಯಾದ ಮಾತುಗಳನ್ನಾಡಲಿ.
إِنَّ الَّذِينَ يَأْكُلُونَ أَمْوَالَ الْيَتَامَىٰ ظُلْمًا إِنَّمَا يَأْكُلُونَ فِي بُطُونِهِمْ نَارًا ۖ وَسَيَصْلَوْنَ سَعِيرًا ۝١٠
📖 ಅನುವಾದ ಆಯತ್ 10
ಅನಾಥರ ಸೊತ್ತುಗಳನ್ನು ಅನ್ಯಾಯವಾಗಿ ತಿನ್ನುವವರಾರೋ ಅವರು ತಮ್ಮ ಹೊಟ್ಟೆಗಳನ್ನು ಬೆಂಕಿಯಿAದ ತುಂಬಿಸುತ್ತಿದ್ದಾರೆ. ಶೀಘ್ರವೇ ಅವರು ನರಕಕ್ಕೆ ಪ್ರವೇಶಿಸಲಿರುವರು
يُوصِيكُمُ اللَّهُ فِي أَوْلَادِكُمْ ۖ لِلذَّكَرِ مِثْلُ حَظِّ الْأُنثَيَيْنِ ۚ فَإِن كُنَّ نِسَاءً فَوْقَ اثْنَتَيْنِ فَلَهُنَّ ثُلُثَا مَا تَرَكَ ۖ وَإِن كَانَتْ وَاحِدَةً فَلَهَا النِّصْفُ ۚ وَلِأَبَوَيْهِ لِكُلِّ وَاحِدٍ مِّنْهُمَا السُّدُسُ مِمَّا تَرَكَ إِن كَانَ لَهُ وَلَدٌ ۚ فَإِن لَّمْ يَكُن لَّهُ وَلَدٌ وَوَرِثَهُ أَبَوَاهُ فَلِأُمِّهِ الثُّلُثُ ۚ فَإِن كَانَ لَهُ إِخْوَةٌ فَلِأُمِّهِ السُّدُسُ ۚ مِن بَعْدِ وَصِيَّةٍ يُوصِي بِهَا أَوْ دَيْنٍ ۗ آبَاؤُكُمْ وَأَبْنَاؤُكُمْ لَا تَدْرُونَ أَيُّهُمْ أَقْرَبُ لَكُمْ نَفْعًا ۚ فَرِيضَةً مِّنَ اللَّهِ ۗ إِنَّ اللَّهَ كَانَ عَلِيمًا حَكِيمًا ۝١١
📖 ಅನುವಾದ ಆಯತ್ 11
ಅಲ್ಲಾಹು ನಿಮ್ಮ ಮಕ್ಕಳ ವಿಷಯದಲ್ಲಿ ಆದೇಶ ನೀಡುತ್ತಾನೆ: ಗಂಡಿನ ಪಾಲು ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ಸಮಾನವಾಗಿದೆ. ಮತ್ತು ಕೇವಲ ಹೆಣ್ಣು ಮಕ್ಕಳು ಮಾತ್ರವಿದ್ದರೆ ಮತ್ತು ಅವರು ಎರಡಕ್ಕಿಂತಲೂ ಹೆಚ್ಚಿದ್ದರೆ ಬಿಟ್ಟುಹೋದ ಸೊತ್ತಿನ ಮೂರನೇ ಎರಡಂಶವು ಅವರಿಗೆ ಲಭಿಸುತ್ತವೆ. ಓರ್ವ ಮಗಳು ಮಾತ್ರವಿದ್ದರೆ ಅವಳಿಗೆ ಅರ್ಧಾಂಶವಿರುವುದು ಮತ್ತು ಮೃತ ವ್ಯಕ್ತಿಯ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಅವನು ಬಿಟ್ಟು ಹೋದ ಸೊತ್ತಿನ ಆರನೇ ಒಂದರAತೆ ಪಾಲು ಲಭಿಸುತ್ತದೆ; ಅವನಿಗೆ (ಮೃತವ್ಯಕ್ತಿಗೆ) ಮಕ್ಕಳಿದ್ದರೆ. ಇನ್ನು ಮಕ್ಕಳಿರದಿದ್ದರೆ ಮತ್ತು ಮಾತಾಪಿತರು ಅವನ ವಾರೀಸುದಾರರಾಗುವುದಾದರೆ ಅವನ ತಾಯಿಗೆ ಮೂರನೇ ಒಂದAಶವು ಲಭಿಸುತ್ತದೆ. ಇನ್ನು ಅವನಿಗೆ ಸಹೋದರರಿದ್ದರೆ ಅವನ ತಾಯಿಗೆ ಆರನೇ ಒಂದAಶವು ಲಭಿಸುತ್ತದೆ. ಈ ಪಾಲುಗಳೆಲ್ಲವೂ ಮೃತ ವ್ಯಕ್ತಿ ಮಾಡಿ ಹೋದ ಉಯಿಲಿನ ನಂತರ ಅಥವಾ ಸಾಲ ಪಾವತಿಯ ನಂತರವಾಗಿದೆ. ನಿಮ್ಮ ತಂದೆ, ತಾಯಿಗಳಾಗಲಿ, ಅಥವಾ ನಿಮ್ಮ ಪುತ್ರರಾಗಲಿ ಅವರಲ್ಲಿ ನಿಮಗೆ ಪ್ರಯೋಜನ ನೀಡುವುದರಲ್ಲಿ ಹೆಚ್ಚು ನಿಕಟವಿರುವವರು ಯಾರೆಂದು ನಿಮಗೆ ತಿಳಿದಿಲ್ಲ. ಪಾಲುಗಳು ಅಲ್ಲಾಹನ ಕಡೆಯಿಂದ ನಿಶ್ಚಯವಾಗಿವೆ. ನಿಸ್ಸಂಶಯವಾಗಿಯು ಅಲ್ಲಾಹನು ಸಂಪೂರ್ಣ ಜ್ಞಾನವುಳ್ಳವನೂ ಮತ್ತು ಯುಕ್ತಿಪೂರ್ಣನೂ ಆಗಿದ್ದಾನೆ.
۞ وَلَكُمْ نِصْفُ مَا تَرَكَ أَزْوَاجُكُمْ إِن لَّمْ يَكُن لَّهُنَّ وَلَدٌ ۚ فَإِن كَانَ لَهُنَّ وَلَدٌ فَلَكُمُ الرُّبُعُ مِمَّا تَرَكْنَ ۚ مِن بَعْدِ وَصِيَّةٍ يُوصِينَ بِهَا أَوْ دَيْنٍ ۚ وَلَهُنَّ الرُّبُعُ مِمَّا تَرَكْتُمْ إِن لَّمْ يَكُن لَّكُمْ وَلَدٌ ۚ فَإِن كَانَ لَكُمْ وَلَدٌ فَلَهُنَّ الثُّمُنُ مِمَّا تَرَكْتُم ۚ مِّن بَعْدِ وَصِيَّةٍ تُوصُونَ بِهَا أَوْ دَيْنٍ ۗ وَإِن كَانَ رَجُلٌ يُورَثُ كَلَالَةً أَوِ امْرَأَةٌ وَلَهُ أَخٌ أَوْ أُخْتٌ فَلِكُلِّ وَاحِدٍ مِّنْهُمَا السُّدُسُ ۚ فَإِن كَانُوا أَكْثَرَ مِن ذَٰلِكَ فَهُمْ شُرَكَاءُ فِي الثُّلُثِ ۚ مِن بَعْدِ وَصِيَّةٍ يُوصَىٰ بِهَا أَوْ دَيْنٍ غَيْرَ مُضَارٍّ ۚ وَصِيَّةً مِّنَ اللَّهِ ۗ وَاللَّهُ عَلِيمٌ حَلِيمٌ ۝١٢
📖 ಅನುವಾದ ಆಯತ್ 12
ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ ಅವರು ಬಿಟ್ಟು ಹೋದ ಸೊತ್ತಿನ ಅರ್ಧಾಂಶವು ನಿಮ್ಮದಾಗಿರುತ್ತದೆ ಮತ್ತು ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಸೊತ್ತಿನ ನಾಲ್ಕನೇ ಒಂದAಶವು ನಿಮ್ಮದಾಗಿರುತ್ತದೆ. ಇದು ಅವರು ಮಾಡಿ ಹೋದ ಉಯಿಲಿನ ನಂತರ ಮತ್ತು ಸಾಲ ಪಾವತಿಯ ನಂತರವಾಗಿದೆ. ಮತ್ತು ನಿಮಗೆ ಮಕ್ಕಳಿಲ್ಲದಿದ್ದರೆ ನೀವು ಬಿಟ್ಟು ಹೋದ ಸೊತ್ತಿನ ನಾಲ್ಕನೇ ಒಂದAಶವು ಅವರಿಗಾಗಿರುತ್ತದೆ; ಇನ್ನು ನಿಮಗೆ ಮಕ್ಕಳಿದ್ದರೆ ನೀವು ಬಿಟ್ಟುಹೋದ ಸೊತ್ತಿನ ಎಂಟನೇ ಒಂದAಶವು ಅವರಿಗೆ ಲಭಿಸುತ್ತದೆ. ಇದು ನೀವು ಮಾಡಿ ಹೋಗುವ ಉಯಿಲಿನ ನಂತರ ಮತ್ತು ಸಾಲ ಪಾವತಿಯ ನಂತರವಾಗಿದೆ ಮತ್ತು ಕಲಾಲಃ (ತಂದೆ ಹಾಗೂ ಮಕ್ಕಳಿಲ್ಲದವರು) ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಅವನಿಗೆ ತಾಯಿಯ ಕಡೆಯಿಂದ ಒಬ್ಬ ಸಹೋದರನಾಗಲಿ ಅಥವಾ ಒಬ್ಬಳು ತಾಯಿಯ ಕಡೆಯಿಂದ ಸಹೋದರಿಯಾಗಲಿ ಇದ್ದರೆ ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದAಶವಿರುತ್ತದೆ. ಇನ್ನು ಅವರು ಅದಕ್ಕಿಂತಲೂ ಹೆಚ್ಚಿದ್ದರೆ ಅವರು ಮೂರನೇ ಒಂದAಶದಲ್ಲಿ ಎಲ್ಲರೂ ಪಾಲುದಾರರಾಗಿರುವರು. ಇದು ಉಯಿಲು ಮಾಡಲಾದ ಮತ್ತು ಸಾಲ ಪಾವತಿಯ ನಂತರವಾಗಿದೆ; ಆದರೆ ಇತರರೊಂದಿಗೆ ಅನ್ಯಾಯ ನಡೆದಿರಬಾರದು. ಈ ನಿಶ್ಚಯವು ಅಲ್ಲಾಹನ ಕಡೆಯಿಂದಾಗಿದೆ. ಮತ್ತು ಅಲ್ಲಾಹನು ಸರ್ವಜ್ಞನೂ, ವಿವೇಕಪೂರ್ಣನೂ ಆಗಿದ್ದಾನೆ.
تِلْكَ حُدُودُ اللَّهِ ۚ وَمَن يُطِعِ اللَّهَ وَرَسُولَهُ يُدْخِلْهُ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ وَذَٰلِكَ الْفَوْزُ الْعَظِيمُ ۝١٣
📖 ಅನುವಾದ ಆಯತ್ 13
ಇವು ಅಲ್ಲಾಹನ ಮೇರೆಗಳು ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಅನುಸರಿಸುತ್ತಾನೋ ಅವನನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಅವರು ಅದರಲ್ಲಿ ಶಾಶ್ವತರಾಗಿರುವರು ಮತ್ತು ಇದು ಮಹಾ ಯಶಸ್ಸಾಗಿದೆ.
وَمَن يَعْصِ اللَّهَ وَرَسُولَهُ وَيَتَعَدَّ حُدُودَهُ يُدْخِلْهُ نَارًا خَالِدًا فِيهَا وَلَهُ عَذَابٌ مُّهِينٌ ۝١٤
📖 ಅನುವಾದ ಆಯತ್ 14
ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಧಿಕ್ಕರಿಸುತ್ತಾನೋ ಮತ್ತು ಅವನ ಮೇರೆಗಳನ್ನು ಮೀರುತ್ತಾನೋ ಅವನನ್ನು ಅಲ್ಲಾಹನು ನರಕದಲ್ಲಿ ಹಾಕುವನು. ಅವನದರಲ್ಲಿ ಶಾಶ್ವತನಾಗಿರುವನು. ಅಂಥಹವನಿಗೇ ಅಪಮಾನಕರ ಶಿಕ್ಷೆಯಿರುವುದು.
وَاللَّاتِي يَأْتِينَ الْفَاحِشَةَ مِن نِّسَائِكُمْ فَاسْتَشْهِدُوا عَلَيْهِنَّ أَرْبَعَةً مِّنكُمْ ۖ فَإِن شَهِدُوا فَأَمْسِكُوهُنَّ فِي الْبُيُوتِ حَتَّىٰ يَتَوَفَّاهُنَّ الْمَوْتُ أَوْ يَجْعَلَ اللَّهُ لَهُنَّ سَبِيلًا ۝١٥
📖 ಅನುವಾದ ಆಯತ್ 15
ನಿಮ್ಮ ಸ್ತಿçÃಯರ ಪೈಕಿ ಯಾರು ನಿರ್ಲಜ್ಜೆಯ ಕೃತ್ಯಗಳನ್ನು ಮಾಡುತ್ತಾರೋ ಅವರ ವಿರುದ್ಧ ನೀವು ನಿಮ್ಮ ಪೈಕಿಯ ನಾಲ್ಕು ಜನ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ಆ ಸ್ತಿçÃಯರನ್ನು ಮರಣವು ಅವರ ಆಯುಸ್ಸನ್ನು ಮುಗಿಸುವವರಗೆ ಅಥವಾ ಅಲ್ಲಾಹನು ಅವರಿಗೆ ಇನ್ನಾವುದಾದರೂ ಮಾರ್ಗವನ್ನು ನಿಶ್ಚಯಿಸುವವರಗೆ ಗೃಹಬಂಧನದಲ್ಲಿಡಿರಿ.
وَاللَّذَانِ يَأْتِيَانِهَا مِنكُمْ فَآذُوهُمَا ۖ فَإِن تَابَا وَأَصْلَحَا فَأَعْرِضُوا عَنْهُمَا ۗ إِنَّ اللَّهَ كَانَ تَوَّابًا رَّحِيمًا ۝١٦
📖 ಅನುವಾದ ಆಯತ್ 16
ನಿಮ್ಮ ಪೈಕಿ ಅಂತಹ ಕೃತ್ಯ ಮಾಡಿದ ಇಬ್ಬರಿಗೆ ಶಿಕ್ಷೆ ಕೊಡಿರಿ. ಆದರೆ ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ನೀವು ಅವರನ್ನು ಬಿಟ್ಟುಬಿಡಿರಿ. ನಿಸ್ಸಂದೇಹವಾಗಿಯು ಅಲ್ಲಾಹನು ಅತ್ಯಧಿಕ ಪಾಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
إِنَّمَا التَّوْبَةُ عَلَى اللَّهِ لِلَّذِينَ يَعْمَلُونَ السُّوءَ بِجَهَالَةٍ ثُمَّ يَتُوبُونَ مِن قَرِيبٍ فَأُولَٰئِكَ يَتُوبُ اللَّهُ عَلَيْهِمْ ۗ وَكَانَ اللَّهُ عَلِيمًا حَكِيمًا ۝١٧
📖 ಅನುವಾದ ಆಯತ್ 17
ಅಜ್ಞಾನದಿಂದ ತಪ್ಪು ಮಾಡಿ ಕೂಡಲೇ ಪಶ್ಚಾತ್ತಾಪ ಪಡುವವರ ಪಶ್ಚಾತ್ತಾಪವೇ ಅಲ್ಲಾಹನ ಬಳಿ ಸ್ವೀಕಾರಾರ್ಹವಾಗಿದೆ. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಮಹಾ ಜ್ಞಾನವಂತನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَلَيْسَتِ التَّوْبَةُ لِلَّذِينَ يَعْمَلُونَ السَّيِّئَاتِ حَتَّىٰ إِذَا حَضَرَ أَحَدَهُمُ الْمَوْتُ قَالَ إِنِّي تُبْتُ الْآنَ وَلَا الَّذِينَ يَمُوتُونَ وَهُمْ كُفَّارٌ ۚ أُولَٰئِكَ أَعْتَدْنَا لَهُمْ عَذَابًا أَلِيمًا ۝١٨
📖 ಅನುವಾದ ಆಯತ್ 18
ಪಾಪವೆಸಗುತ್ತಲೇ ಇದ್ದು ಮರಣಾ ಸನ್ನತೆಯುಂಟಾದಾಗ ನಾನೀಗ ಪಶ್ಚಾತ್ತಾಪ ಪಟ್ಟಿರುತ್ತೇನೆ ಎಂದು ಹೇಳುವವರ ಪಶ್ಚಾತ್ತಾಪವು ಸ್ವೀಕಾರಾರ್ಹವಲ್ಲ. ಮತ್ತು ಸತ್ಯನಿಷೇಧದಲ್ಲೇ ಮರಣ ಹೊಂದುವವರ ಪಶ್ಚಾತ್ತಾಪವು ಸ್ವೀಕಾರಾರ್ಹವಲ್ಲ ಅವರಿಗೇ ನಾವು ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿರುತ್ತೇವೆ.
يَا أَيُّهَا الَّذِينَ آمَنُوا لَا يَحِلُّ لَكُمْ أَن تَرِثُوا النِّسَاءَ كَرْهًا ۖ وَلَا تَعْضُلُوهُنَّ لِتَذْهَبُوا بِبَعْضِ مَا آتَيْتُمُوهُنَّ إِلَّا أَن يَأْتِينَ بِفَاحِشَةٍ مُّبَيِّنَةٍ ۚ وَعَاشِرُوهُنَّ بِالْمَعْرُوفِ ۚ فَإِن كَرِهْتُمُوهُنَّ فَعَسَىٰ أَن تَكْرَهُوا شَيْئًا وَيَجْعَلَ اللَّهُ فِيهِ خَيْرًا كَثِيرًا ۝١٩
📖 ಅನುವಾದ ಆಯತ್ 19
ಓ ಸತ್ಯವಿಶ್ವಾಸಿಗಳೇ, ಸ್ತಿçÃಯರನ್ನು ಬಲವಂತವಾಗಿ ವಾರೀಸು ಸೊತ್ತಿನಂತೆ ಕೈವಶವಿರಿಸಕೊಳ್ಳವುದು ನಿಮಗೆ ಸಮ್ಮತಾರ್ಹವಲ್ಲ. ನೀವು ಅವರಿಗೆ ನೀಡಿರುವುದರಲ್ಲಿ (ವಧುಧನದಿಂದ) ಸ್ವಲ್ಪವನ್ನು ಪಡೆಯಲಿಕ್ಕಾಗಿ ನೀವವರನ್ನು ತಡೆದಿರಿಸಿಕೊಳ್ಳಬೇಡಿರಿ. ಇನ್ನು ಅವರು ಬಹಿರಂಗವಾದ ಯಾವುದಾದರೂ ನಿರ್ಲಜ್ಜೆಯ ಕಾರ್ಯವನ್ನು ಕೈಗೊಂಡರೆ ಅದು ಬೇರೆ ವಿಚಾರ. ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ. ನಿಮಗೆ ಅವರು ಅಪ್ರಿಯವೆನಿಸುವುದಾದರೆ ನಿಮ್ಮ ಅಪ್ರಿಯವಾದ ಆ ಒಂದು ವಿಚಾರದಲ್ಲಿ ಅಲ್ಲಾಹನು ಧಾರಾಳ ಒಳಿತುಗಳನ್ನುಂಟು ಮಾಡಬಹುದು.
وَإِنْ أَرَدتُّمُ اسْتِبْدَالَ زَوْجٍ مَّكَانَ زَوْجٍ وَآتَيْتُمْ إِحْدَاهُنَّ قِنطَارًا فَلَا تَأْخُذُوا مِنْهُ شَيْئًا ۚ أَتَأْخُذُونَهُ بُهْتَانًا وَإِثْمًا مُّبِينًا ۝٢٠
📖 ಅನುವಾದ ಆಯತ್ 20
ಮತ್ತು ನೀವು ಓರ್ವ ಪತ್ನಿಯ ಸ್ಥಾನದಲ್ಲಿ ಇನ್ನೋರ್ವ ಪತ್ನಿಯನ್ನು ವರಿಸಲು ಬಯಸುವುದಾದರೆ ಅವರಲ್ಲಿ ಒಬ್ಬಳಿಗೆ ನೀವು ಧನದ ಭಂಡಾರವನ್ನು ನೀಡಿದ್ದರೂ ಅದರಿಂದ ಸ್ವಲ್ಪವನ್ನೂ ಪಡೆಯಬೇಡಿರಿ. ಸುಳ್ಳಾರೋಪ ಹೊರಿಸಿ ಸ್ಪಷ್ಟವಾದ ಪಾಪದೊಂದಿಗೆ ನೀವದನ್ನು ಪಡೆದುಕೊಳ್ಳುವಿರಾ?
وَكَيْفَ تَأْخُذُونَهُ وَقَدْ أَفْضَىٰ بَعْضُكُمْ إِلَىٰ بَعْضٍ وَأَخَذْنَ مِنكُم مِّيثَاقًا غَلِيظًا ۝٢١
📖 ಅನುವಾದ ಆಯತ್ 21
ನೀವು ಪರಸ್ಪರ ರಸಾನಂದವನ್ನು ಸವಿದಿರುವಾಗ ಮತ್ತು ಅವರು ನಿಮ್ಮಿಂದ ಬಲಿಷ್ಠ ಕರಾರನ್ನು ಪಡೆದಿರುವಾಗ ನೀವು ಹೇಗೆ ಅದನ್ನು ಹಿಂದಕ್ಕೆ ಪಡೆಯುವಿರಿ,
وَلَا تَنكِحُوا مَا نَكَحَ آبَاؤُكُم مِّنَ النِّسَاءِ إِلَّا مَا قَدْ سَلَفَ ۚ إِنَّهُ كَانَ فَاحِشَةً وَمَقْتًا وَسَاءَ سَبِيلًا ۝٢٢
📖 ಅನುವಾದ ಆಯತ್ 22
ನಿಮ್ಮ ತಂದೆಯರು ವಿವಾಹ ಮಾಡಿದ್ದ ಸ್ತಿçÃಯರನ್ನು ನೀವು ವಿವಾಹವಾಗ ಬೇಡಿರಿ; ಆದರೆ ಹಿಂದೆ ಕಳೆದದ್ದು ಕಳೆದು ಹೋಯಿತು. ವಾಸ್ತವದಲ್ಲಿ ಇದು ಅಶ್ಲೀಲವೂ, ಕೋಪಹೇತುವೂ, ಮತ್ತು ದುಷ್ಟ ಸಂಪ್ರದಾಯವು ಆಗಿದೆ.
حُرِّمَتْ عَلَيْكُمْ أُمَّهَاتُكُمْ وَبَنَاتُكُمْ وَأَخَوَاتُكُمْ وَعَمَّاتُكُمْ وَخَالَاتُكُمْ وَبَنَاتُ الْأَخِ وَبَنَاتُ الْأُخْتِ وَأُمَّهَاتُكُمُ اللَّاتِي أَرْضَعْنَكُمْ وَأَخَوَاتُكُم مِّنَ الرَّضَاعَةِ وَأُمَّهَاتُ نِسَائِكُمْ وَرَبَائِبُكُمُ اللَّاتِي فِي حُجُورِكُم مِّن نِّسَائِكُمُ اللَّاتِي دَخَلْتُم بِهِنَّ فَإِن لَّمْ تَكُونُوا دَخَلْتُم بِهِنَّ فَلَا جُنَاحَ عَلَيْكُمْ وَحَلَائِلُ أَبْنَائِكُمُ الَّذِينَ مِنْ أَصْلَابِكُمْ وَأَن تَجْمَعُوا بَيْنَ الْأُخْتَيْنِ إِلَّا مَا قَدْ سَلَفَ ۗ إِنَّ اللَّهَ كَانَ غَفُورًا رَّحِيمًا ۝٢٣
📖 ಅನುವಾದ ಆಯತ್ 23
ನಿಮ್ಮ ಮೇಲೆ ನಿಷಿದ್ಧ ಮಾಡಲಾದವರು ನಿಮ್ಮ ತಾಯಂದಿರು, ನಿಮ್ಮ ಪುತ್ರಿಯರು, ನಿಮ್ಮ ಸಹೋದರಿಯರು, ನಿಮ್ಮ ಸೋದರತ್ತೆಯರು ನಿಮ್ಮ ಮಾತೃ ಸಹೋದರಿಯರು, (ಚಿಕ್ಕಮ್ಮ, ದೊಡ್ಡಮ್ಮ) ನಿಮ್ಮ ಸಹೋದರ ಪುತ್ರಿಯರು, ನಿಮ್ಮ ಸಹೋದರಿ ಪುತ್ರಿಯರು, ನಿಮಗೆ ಮೊಲೆಹಾಲುಣಿಸಿದ ನಿಮ್ಮ ಸಾಕುತಾಯಂದಿರು, ಮೊಲೆ ಹಾಲಿನಲ್ಲಿ ಪಾಲುಗೊಂಡಿರುವ ನಿಮ್ಮ ಸಹೋದರಿಯರು, ನಿಮ್ಮ ಪತ್ನಿಯರ ತಾಯಂದಿರು, ನೀವು ಸಂಭೋಗ ಮಾಡಿರುವ ಪತ್ನಿಯರಿಂದಿರುವ ನಿಮ್ಮ ಮಲಪುತ್ರಿಯರು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇನ್ನು ನೀವು ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ನಿಮ್ಮ ಸ್ವಂತ ಪುತ್ರರ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲಕ್ಕೆ ವಿವಾಹವಾಗುವುದನ್ನು ನಿಷಿದ್ಧಗೊಳಿಸಲಾಗಿದೆ. ಆದರೆ ಹಿಂದೆ ಕಳೆದದ್ದು ಕಳೆದುಹೋಯಿತು. ನಿಶ್ಚಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರಣಾನಿಧಿಯೂ ಆಗಿದ್ದಾನೆ.
۞ وَالْمُحْصَنَاتُ مِنَ النِّسَاءِ إِلَّا مَا مَلَكَتْ أَيْمَانُكُمْ ۖ كِتَابَ اللَّهِ عَلَيْكُمْ ۚ وَأُحِلَّ لَكُم مَّا وَرَاءَ ذَٰلِكُمْ أَن تَبْتَغُوا بِأَمْوَالِكُم مُّحْصِنِينَ غَيْرَ مُسَافِحِينَ ۚ فَمَا اسْتَمْتَعْتُم بِهِ مِنْهُنَّ فَآتُوهُنَّ أُجُورَهُنَّ فَرِيضَةً ۚ وَلَا جُنَاحَ عَلَيْكُمْ فِيمَا تَرَاضَيْتُم بِهِ مِن بَعْدِ الْفَرِيضَةِ ۚ إِنَّ اللَّهَ كَانَ عَلِيمًا حَكِيمًا ۝٢٤
📖 ಅನುವಾದ ಆಯತ್ 24
ಮತ್ತು ವೈವಾಹಿಕ ಸಂಬAಧದಲ್ಲಿರುವ ಇತರೆ ಸ್ತಿçÃಯರು (ನಿಷಿದ್ಧರಾಗಿದ್ದಾರೆ) ಆದರೆ ನಿಮ್ಮ ಒಡೆತನಕ್ಕೆ ಬಂದವರ (ದಾಸಿಯರ) ಹೊರತು ಅಲ್ಲಾಹನು ಈ ನಿಯಮಗಳನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಿರುವನು ಈ ಸ್ತಿçÃಯರ ಹೊರತಾದ ಇತರ ಸ್ತಿçÃಯರನ್ನು ನೀವು ನಿಮ್ಮ ಸಂಪತ್ತಿನ ವಧುಧನದ ಮೂಲಕ ಅವರನ್ನು ವಿವಾಹವಾಗಲು ಇಚ್ಛಿಸುವುದಾದರೆ. ನಿಮಗೆ ಧರ್ಮಸಮ್ಮತಗೊಳಿಸಲಾಗಿದೆ. ವೈವಾಹಿಕ ಸಂಬAಧವಾಗಿರಬೇಕು. ಅನೈತಿಕ ಸಂಬAಧವಾಗಿರಬಾರದು ಆದ್ದರಿಂದ ನೀವು ಅವರಿಂದ ಸುಖಭೋಗವನ್ನು ಪಡೆದಿದ್ದರೆ ಅವರಿಗೆ ನಿಶ್ಚಯಿಸಲಾದ ವಧುಧನವನ್ನು ಕೊಟ್ಟು ಬಿಡಿರಿ. ಮತ್ತು ವಧುಧನ ನಿಶ್ಚಯವಾದ ಬಳಿಕ ನೀವು ಪರಸ್ಪರ ಸಂತೃಪ್ತಿಯೊAದಿಗೆ ವಿನಾಯಿತಿ ತೋರುವುದರಲ್ಲಿ ನಿಮ್ಮ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಸ್ಸಂದೇಹವಾಗಿಯು ಅಲ್ಲಾಹನು ಎಲ್ಲವನ್ನೂ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَمَن لَّمْ يَسْتَطِعْ مِنكُمْ طَوْلًا أَن يَنكِحَ الْمُحْصَنَاتِ الْمُؤْمِنَاتِ فَمِن مَّا مَلَكَتْ أَيْمَانُكُم مِّن فَتَيَاتِكُمُ الْمُؤْمِنَاتِ ۚ وَاللَّهُ أَعْلَمُ بِإِيمَانِكُم ۚ بَعْضُكُم مِّن بَعْضٍ ۚ فَانكِحُوهُنَّ بِإِذْنِ أَهْلِهِنَّ وَآتُوهُنَّ أُجُورَهُنَّ بِالْمَعْرُوفِ مُحْصَنَاتٍ غَيْرَ مُسَافِحَاتٍ وَلَا مُتَّخِذَاتِ أَخْدَانٍ ۚ فَإِذَا أُحْصِنَّ فَإِنْ أَتَيْنَ بِفَاحِشَةٍ فَعَلَيْهِنَّ نِصْفُ مَا عَلَى الْمُحْصَنَاتِ مِنَ الْعَذَابِ ۚ ذَٰلِكَ لِمَنْ خَشِيَ الْعَنَتَ مِنكُمْ ۚ وَأَن تَصْبِرُوا خَيْرٌ لَّكُمْ ۗ وَاللَّهُ غَفُورٌ رَّحِيمٌ ۝٢٥
📖 ಅನುವಾದ ಆಯತ್ 25
ಮತ್ತು ನಿಮ್ಮ ಪೈಕಿ ಯಾರಿಗೆ ಸತ್ಯವಿಶ್ವಾಸಿನಿಗಳಾದ ಸ್ವತಂತ್ರ ಸ್ತಿçÃಯರನ್ನು ವಿವಾಹವಾಗುವ ಸಾಮರ್ಥ್ಯವಿಲ್ಲವೋ ಅವರು ನಿಮ್ಮ ಒಡೆತನದಲ್ಲಿರುವ ಸತ್ಯವಿಶ್ವಾಸಿಗಳಾದ ಗುಲಾಮ ಸ್ತಿçÃಯರಲ್ಲಿ ಯಾರನ್ನಾದರೂ (ವಿವಾಹ ಮಾಡಿಕೊಳ್ಳÀಬಹುದು) ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ. ನೀವು ಪರಸ್ಪರರು ಒಂದೇ ಆಗಿರುವಿರಿ. ಆದ್ದರಿಂದ ಅವರ ಒಡೆಯರ ಅನುಮತಿಯೊಂದಿಗೆ ವಿವಾಹವಾಗಿರಿ ಮತ್ತು ನೀವು ಶಿಷ್ಟಾಚಾರಕ್ಕಾನುಸಾರವಾಗಿ ವಧುಧನವನ್ನು ಅವರಿಗೆ ನೀಡಿರಿ. ಅವರು ಚಾರಿತ್ರö್ಯವಂತರಾಬೇಕೇ ಹೊರತು ಬಹಿರಂಗವಾಗಿ ನೀಚ ಕೃತ್ಯವನ್ನೇಸಗುವವರೂ, ರಹಸ್ಯ ಸಂಬAಧವಿರಿಸಿ ಕೊಳ್ಳುವವರೂ ಆಗಿರಬಾರದು. ಅವರು ವಿವಾಹಿತರಾದ ಬಳಿಕ ನಿರ್ಲಜ್ಜೆಯ ಕೃತ್ಯವನ್ನೆಸಗಿದರೆ ಸ್ವತಂತ್ರ ಸ್ತಿçÃಯರಿಗೆ ಕೊಡಲಾಗುವ ಶಿಕ್ಷೆಯ ಅರ್ಧಾಂಶವನ್ನು ಅವರಿಗೆ ಕೊಡಲಾಗುವುದು. (ದಾಸಿಯರನ್ನು ವಿವಾಹವಾಗುವ) ಈ ಅನುಮತಿಯು ನಿಮ್ಮ ಪೈಕಿ ಪಾಪದ ಭಯ ಹೊಂದಿರುವವರಿಗಾಗಿರುತ್ತದೆ ಮತ್ತು ನಿಮ್ಮನ್ನು ನಿಂಯತ್ರಿಸಿಕೊAಡರೆ ಅದು ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
يُرِيدُ اللَّهُ لِيُبَيِّنَ لَكُمْ وَيَهْدِيَكُمْ سُنَنَ الَّذِينَ مِن قَبْلِكُمْ وَيَتُوبَ عَلَيْكُمْ ۗ وَاللَّهُ عَلِيمٌ حَكِيمٌ ۝٢٦
📖 ಅನುವಾದ ಆಯತ್ 26
ಅಲ್ಲಾಹನು ನಿಮಗೋಸ್ಕರ ನಿಯಮಗಳನ್ನು ಸ್ಪಷ್ಟಪಡಿಸಿಕೊಡಲೆಂದೂ, ನಿಮ್ಮನ್ನು ನಿಮ್ಮ ಮುಂಚಿನ (ಸಜ್ಜನ) ಪೂರ್ವಿಕರ ಮಾರ್ಗದಲ್ಲಿ ಮುನ್ನಡೆಸಲೆಂದು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದೂ ಇಚ್ಛಿಸುತ್ತಾನೆ. ಮತ್ತು ಅಲ್ಲಾಹನು ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَاللَّهُ يُرِيدُ أَن يَتُوبَ عَلَيْكُمْ وَيُرِيدُ الَّذِينَ يَتَّبِعُونَ الشَّهَوَاتِ أَن تَمِيلُوا مَيْلًا عَظِيمًا ۝٢٧
📖 ಅನುವಾದ ಆಯತ್ 27
ಮತ್ತು ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಇಚ್ಛಿಸುತ್ತಾನೆ ತಮ್ಮ ಸ್ವೇಚ್ಛೆಯನ್ನು ಅನುಸರಿಸುವವರು ನೀವು ಸತ್ಯವನ್ನು ತ್ಯಜಿಸಿ ಮಿಥ್ಯವನ್ನು ಅನುಸರಿಸಿಲಿಚ್ಛಿಸುವರು.
يُرِيدُ اللَّهُ أَن يُخَفِّفَ عَنكُمْ ۚ وَخُلِقَ الْإِنسَانُ ضَعِيفًا ۝٢٨
📖 ಅನುವಾದ ಆಯತ್ 28
ಅಲ್ಲಾಹನು ನಿಮ್ಮಿಂದ ಭಾರವನ್ನು ಹಗುರಗೊಳಿಸಲಿಚ್ಛಿಸುತ್ತಾನೆ. ಏಕೆಂದರೆ ಮನುಷ್ಯನು ದುರ್ಬಲನಾಗಿ ಸೃಷ್ಠಿಸಲಾಗಿದ್ದಾನೆ.
يَا أَيُّهَا الَّذِينَ آمَنُوا لَا تَأْكُلُوا أَمْوَالَكُم بَيْنَكُم بِالْبَاطِلِ إِلَّا أَن تَكُونَ تِجَارَةً عَن تَرَاضٍ مِّنكُمْ ۚ وَلَا تَقْتُلُوا أَنفُسَكُمْ ۚ إِنَّ اللَّهَ كَانَ بِكُمْ رَحِيمًا ۝٢٩
📖 ಅನುವಾದ ಆಯತ್ 29
ಓ ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ಸಂತೃಪ್ತಿಯೊAದಿಗೆ ನಡೆಸುವ ವ್ಯವಹಾರದ ಮೂಲಕವಲ್ಲದೇ, ನೀವು ಪರಸ್ಪರರ ಸೊತ್ತನ್ನು ಅಕ್ರಮದಿಂದ ತಿನ್ನಬೇಡಿರಿ. ಮತ್ತು ನೀವು ನಿಮ್ಮನ್ನೇ ಕೊಲ್ಲಬೇಡಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಬಗ್ಗೆ ಕರುಣಾನಿಧಿಯಾಗಿದ್ದಾನೆ.
وَمَن يَفْعَلْ ذَٰلِكَ عُدْوَانًا وَظُلْمًا فَسَوْفَ نُصْلِيهِ نَارًا ۚ وَكَانَ ذَٰلِكَ عَلَى اللَّهِ يَسِيرًا ۝٣٠
📖 ಅನುವಾದ ಆಯತ್ 30
ಅತಿರೇಕ ಮತ್ತು ಅನ್ಯಾಯವಾಗಿ (ಯಾರು ಇಂತಹ ಪಾಪವನ್ನು)ಮಾಡುತ್ತಾನೋ ಸದ್ಯದಲ್ಲೇ ನಾವು ಅವನನ್ನು ನರಕಾಗ್ನಿಗೆ ಪ್ರವೇಶಿಸುವೆವು ಮತ್ತು ಇದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
إِن تَجْتَنِبُوا كَبَائِرَ مَا تُنْهَوْنَ عَنْهُ نُكَفِّرْ عَنكُمْ سَيِّئَاتِكُمْ وَنُدْخِلْكُم مُّدْخَلًا كَرِيمًا ۝٣١
📖 ಅನುವಾದ ಆಯತ್ 31
ನಿಮಗೆ ನಿಷಿದ್ಧಿಸಲಾದ ಮಹಾಪಾಪಗಳಿಂದ ನೀವು ದೂರನಿಲ್ಲುವುದಾದರೆ ನಿಮ್ಮ ಚಿಕ್ಕ ದೋಷಗಳನ್ನು ನಾವು ನಿಮ್ಮಿಂದ ಅಳಿಸಿಬಿಡುವೆವು ಮತ್ತು ನಿಮ್ಮನ್ನು ಗೌರವಾನ್ವಿತ ಹಾಗೂ ಉನ್ನತವಾದ ಸ್ಥಾನಕ್ಕೆ ಪ್ರವೇಶಗೊಳಿಸುವೆವು.
وَلَا تَتَمَنَّوْا مَا فَضَّلَ اللَّهُ بِهِ بَعْضَكُمْ عَلَىٰ بَعْضٍ ۚ لِّلرِّجَالِ نَصِيبٌ مِّمَّا اكْتَسَبُوا ۖ وَلِلنِّسَاءِ نَصِيبٌ مِّمَّا اكْتَسَبْنَ ۚ وَاسْأَلُوا اللَّهَ مِن فَضْلِهِ ۗ إِنَّ اللَّهَ كَانَ بِكُلِّ شَيْءٍ عَلِيمًا ۝٣٢
📖 ಅನುವಾದ ಆಯತ್ 32
ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಇನ್ನು ಕೆಲವರಿಗಿಂತ ಹೆಚ್ಚು ಅನುಗ್ರಹಗಳನ್ನು ಕೊಟ್ಟಿರುವುದನ್ನು ನೀವು ಹಂಬಲಿಸದಿರಿ. ಪುರುಷರು ಸಂಪಾದಿಸಿರುವುದು ಅವರಿಗಿದೆ. ಮತ್ತು ಸ್ತಿçÃಯರು ಸಂಪಾದಿಸಿರುವುದು ಅವರಿಗಿದೆ. ಅಲ್ಲಾಹನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಅರಿವುಳ್ಳವನಾಗಿದ್ದಾನೆ.
وَلِكُلٍّ جَعَلْنَا مَوَالِيَ مِمَّا تَرَكَ الْوَالِدَانِ وَالْأَقْرَبُونَ ۚ وَالَّذِينَ عَقَدَتْ أَيْمَانُكُمْ فَآتُوهُمْ نَصِيبَهُمْ ۚ إِنَّ اللَّهَ كَانَ عَلَىٰ كُلِّ شَيْءٍ شَهِيدًا ۝٣٣
📖 ಅನುವಾದ ಆಯತ್ 33
ಮಾತಾಪಿತರು ಅಥವಾ ನಿಕಟ ಬಂಧುಗಳು ಬಿಟ್ಟುಹೋದ ಸಂಪತ್ತಿನಲ್ಲಿ ಪ್ರತಿಯೊಬ್ಬರನ್ನು ನಾವು ಅದರ ಹಕ್ಕುದಾರರಾಗಿ ನಿಶ್ಚಯಿಸಿದ್ದೇವೆ. ನೀವು ಒಪ್ಪಂದ ಮಾಡಿರುವವರಿಗೂ ಅವರ ಪಾಲನ್ನು ನೀಡಿರಿ. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿರುವನು.
الرِّجَالُ قَوَّامُونَ عَلَى النِّسَاءِ بِمَا فَضَّلَ اللَّهُ بَعْضَهُمْ عَلَىٰ بَعْضٍ وَبِمَا أَنفَقُوا مِنْ أَمْوَالِهِمْ ۚ فَالصَّالِحَاتُ قَانِتَاتٌ حَافِظَاتٌ لِّلْغَيْبِ بِمَا حَفِظَ اللَّهُ ۚ وَاللَّاتِي تَخَافُونَ نُشُوزَهُنَّ فَعِظُوهُنَّ وَاهْجُرُوهُنَّ فِي الْمَضَاجِعِ وَاضْرِبُوهُنَّ ۖ فَإِنْ أَطَعْنَكُمْ فَلَا تَبْغُوا عَلَيْهِنَّ سَبِيلًا ۗ إِنَّ اللَّهَ كَانَ عَلِيًّا كَبِيرًا ۝٣٤
📖 ಅನುವಾದ ಆಯತ್ 34
ಪುರಷರು ಸ್ತಿçÃಯರ ಮೇಲ್ವಿಚಾರಕರಾಗಿದ್ದಾರೆ. ಇದೇಕೆಂದರೆ ಅಲ್ಲಾಹನು ಅವರಲ್ಲಿ ಒಬ್ಬರನ್ನು ಇನ್ನೊಬ್ಬರ ಮೇಲೆ ಶ್ರೇಷ್ಠತೆ ನೀಡಿರುವುದರಿಂದಲೂ, ಪುರಷರು ತಮ್ಮ ಧನವನ್ನು ವ್ಯಯಿಸುವುದರಿಂದಲೂ ಆಗಿದೆ. ಇನ್ನು ಸುಖಿಲೆಯರು ಅನುಸರಣಾ ಮನೋಭಾವವುಳ್ಳವರಾದ ಸ್ತಿçÃಯರು, ಪತಿಯ ಅನುಪಸ್ಥಿತಿಯಲ್ಲಿ ಅಲ್ಲಾಹನ ರಕ್ಷಣೆಯಲ್ಲಿದ್ದು, ಪತಿಯ ಸಂಪತ್ತು ಮತ್ತು ಶೀಲವನ್ನು ಸಂರಕ್ಷಿಸುವವರಾಗಿದ್ದಾರೆ. ಮತ್ತು ಸ್ತಿçÃಯರ ಅವಿಧೇಯತೆಯಿಂದ ನೀವು ಭಯಪಟ್ಟರೆ ಅವರನ್ನು ನೀವು ಉಪದೇಶಿಸಿರಿ. (ಅದು ಫಲಕಾರಿಯಾಗದಿದ್ದರೆ) ಅವರನ್ನು ಪ್ರತ್ಯೇಕ ಹಾಸಿಗೆಯಲ್ಲಿ ಬಿಟ್ಟುಬಿಡಿರಿ. (ಅದೂ ಫಲಕಾರಿಯಾಗದಿದ್ದರೆ) ಅವರಿಗೆ ಹೊಡೆಯಿರಿ. (ಸಭ್ಯತೆಯನ್ನು ಕಲಿಸಲು) ಅನಂತರ ಅವರು ನಿಮಗೆ ವಿಧೇಯತೆ ತೋರಿದರೆ ಅವರ ವಿರುದ್ಧ ಬೇರೆ ಮಾರ್ಗವನ್ನು ಹುಡುಕಬೇಡಿರಿ. ನಿಸ್ಸಂದೇಹವಾಗಿಯೂ ಅಲ್ಲಾಹನು ಮಹೋನ್ನತನೂ, ಮಹಾನನೂ ಆಗಿದ್ದಾನೆ.
وَإِنْ خِفْتُمْ شِقَاقَ بَيْنِهِمَا فَابْعَثُوا حَكَمًا مِّنْ أَهْلِهِ وَحَكَمًا مِّنْ أَهْلِهَا إِن يُرِيدَا إِصْلَاحًا يُوَفِّقِ اللَّهُ بَيْنَهُمَا ۗ إِنَّ اللَّهَ كَانَ عَلِيمًا خَبِيرًا ۝٣٥
📖 ಅನುವಾದ ಆಯತ್ 35
ಇನ್ನು ಪತಿ ಪತ್ನಿಯರ ನಡುವೆ ನಿಮಗೆ ಒಡಕುವುಂಟಾಗುವುದೆAಬ ಭಯವಿದ್ದರೆ ಪತಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು, ಪತ್ನಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು ನಿಶ್ಚಯಿಸಿರಿ. ಅವರೀರ್ವರೂ ಸಂಧಾನ ಮಾಡಿಸುವುದನ್ನು ಬಯಸುವುದಾದರೆ ಅಲ್ಲಾಹನು ಅವರಿಬ್ಬರಲ್ಲಿ ಹೊಂದಾಣಿಕೆÉಯನ್ನು ಮೂಡಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞನು, ಸಂಪೂರ್ಣಜ್ಞಾನಿಯೂ ಆಗಿರುವನು.
۞ وَاعْبُدُوا اللَّهَ وَلَا تُشْرِكُوا بِهِ شَيْئًا ۖ وَبِالْوَالِدَيْنِ إِحْسَانًا وَبِذِي الْقُرْبَىٰ وَالْيَتَامَىٰ وَالْمَسَاكِينِ وَالْجَارِ ذِي الْقُرْبَىٰ وَالْجَارِ الْجُنُبِ وَالصَّاحِبِ بِالْجَنبِ وَابْنِ السَّبِيلِ وَمَا مَلَكَتْ أَيْمَانُكُمْ ۗ إِنَّ اللَّهَ لَا يُحِبُّ مَن كَانَ مُخْتَالًا فَخُورًا ۝٣٦
📖 ಅನುವಾದ ಆಯತ್ 36
ಮತ್ತು ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ ಮತ್ತು ಮಾತಾಪಿತರೊಂದಿಗೆ ಸದ್ವರ್ತನೆ ತೋರಿರಿ. ಮತ್ತು ಬಂಧುಗಳೊAದಿಗೆ, ಅನಾಥರೊಂದಿಗೆ, ನಿರ್ಗತಿಕರೊಂದಿಗೆ, ಕುಟುಂಬ ಸಂಬAಧವಿರುವ ನೆರೆಹೊರೆಯವರೊಂದಿಗೆ, ಅನ್ಯರಾದ ನೆÀರೆಹೊರೆಯವರೊಂದಿಗೆ, ಹತ್ತಿರದ ಸಹವರ್ತಿಗಳೊಂದಿಗೆ, ಪ್ರಯಾಣಿಕರೊಂದಿಗೆ ಮತ್ತು ನಿಮ್ಮ ಸ್ವಾಧೀನದಲ್ಲಿರುವ ಗುಲಾಮರೊಂದಿಗೆ (ಸದ್ವರ್ತನೆ ತೋರಿರಿ) ಖಂಡಿತವಾಗಿಯು ಅಲ್ಲಾಹನು ದುರಹಂಕಾರಿ ಮತ್ತು ದುರಭಿಮಾನಿಯನ್ನು ಮೆಚ್ಚುವುದಿಲ್ಲ.
الَّذِينَ يَبْخَلُونَ وَيَأْمُرُونَ النَّاسَ بِالْبُخْلِ وَيَكْتُمُونَ مَا آتَاهُمُ اللَّهُ مِن فَضْلِهِ ۗ وَأَعْتَدْنَا لِلْكَافِرِينَ عَذَابًا مُّهِينًا ۝٣٧
📖 ಅನುವಾದ ಆಯತ್ 37
ಯಾರು ಸ್ವತಃ ಜಿಪುಣತೆ ತೋರಿಸುತ್ತಾ ಇತರರಿಗೂ ಜಿಪುಣತೆ ತೋರಿಸಲು ಪ್ರೇರಣೆ ನೀಡುವರೂ ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದನ್ನು ಅಡಿಗಿಸಿಡುವವರು ಕೃತಘ್ನರಾಗಿದ್ದಾರೆ. ಇಂತಹ ಕೃತಘ್ನರಿಗೆ ನಾವು ನಿಂದಯಿತೆಯ ಪ್ರಹಾರವನ್ನು ಸಿದ್ಧಗೊಳಿಸಿದ್ದೇವೆ.
وَالَّذِينَ يُنفِقُونَ أَمْوَالَهُمْ رِئَاءَ النَّاسِ وَلَا يُؤْمِنُونَ بِاللَّهِ وَلَا بِالْيَوْمِ الْآخِرِ ۗ وَمَن يَكُنِ الشَّيْطَانُ لَهُ قَرِينًا فَسَاءَ قَرِينًا ۝٣٨
📖 ಅನುವಾದ ಆಯತ್ 38
ಅವರು ಜನರಿಗೆ ತೋರಿಸುವುದಕ್ಕಾಗಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರಾಗಿದ್ದಾರೆ ಮತ್ತು ಅಲ್ಲಾಹನಲ್ಲಿ, ಅಂತ್ಯ ದಿನದಲ್ಲಿ ವಿಶ್ವಾಸವಿಡದವರಾಗಿದ್ದಾರೆ. ಮತ್ತು ಯಾರ ಜೊತೆಗಾರನು ಶೈತಾನನಾಗಿರುವನೋ ಅವನು ಅದೆಷ್ಟೋ ನಿಕೃಷ್ಟ ಜೊತೆಗಾರನಾಗಿರುವನು!
وَمَاذَا عَلَيْهِمْ لَوْ آمَنُوا بِاللَّهِ وَالْيَوْمِ الْآخِرِ وَأَنفَقُوا مِمَّا رَزَقَهُمُ اللَّهُ ۚ وَكَانَ اللَّهُ بِهِمْ عَلِيمًا ۝٣٩
📖 ಅನುವಾದ ಆಯತ್ 39
ಅವರು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರಾಗಿರುತ್ತಿದ್ದರೆ ಮತ್ತು ಅಲ್ಲಾಹನು ಅವರಿಗೆ ನೀಡಿದವುಗಳಿಂದ ಖರ್ಚು ಮಾಡುವವರಾಗಿದ್ದರೆ ಅವರಿಗೆ ಆಗುವ ನಷ್ಟವಾದರೂ ಏನು? ಅವರ ಬಗ್ಗೆ ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ.
إِنَّ اللَّهَ لَا يَظْلِمُ مِثْقَالَ ذَرَّةٍ ۖ وَإِن تَكُ حَسَنَةً يُضَاعِفْهَا وَيُؤْتِ مِن لَّدُنْهُ أَجْرًا عَظِيمًا ۝٤٠
📖 ಅನುವಾದ ಆಯತ್ 40
ನಿಸ್ಸಂದೇಹವಾಗಿಯು ಅಲ್ಲಾಹನು ಒಂದು ಅಣು ಗಾತ್ರದಷ್ಟು ಅನ್ಯಾಯವನ್ನು ಮಾಡುವುದಿಲ್ಲ ಮತ್ತು ಒಳಿತೇನಾದರೂ ಇದ್ದರೆ ಅದನ್ನು ಅವನು ದುಪ್ಪಟ್ಟಾಗಿಸಿಕೊಡುವನು ಮತ್ತು ಅವನು ತನ್ನ ವತಿಯ ಮಹಾಪ್ರತಿಫಲವನ್ನು ನೀಡುವನು.
فَكَيْفَ إِذَا جِئْنَا مِن كُلِّ أُمَّةٍ بِشَهِيدٍ وَجِئْنَا بِكَ عَلَىٰ هَٰؤُلَاءِ شَهِيدًا ۝٤١
📖 ಅನುವಾದ ಆಯತ್ 41
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ತರುವಾಗ ಮತ್ತು ಓ ಪೈಗಂಬರರೇ ನಿಮ್ಮನ್ನು ಅವರ ಮೇಲೆ ಸಾಕ್ಷಿಯಾಗಿ ತರುವಾಗ ಅವರ ಪರಿಸ್ಥಿತಿ ಹೇಗಿರಬಹುದು?
يَوْمَئِذٍ يَوَدُّ الَّذِينَ كَفَرُوا وَعَصَوُا الرَّسُولَ لَوْ تُسَوَّىٰ بِهِمُ الْأَرْضُ وَلَا يَكْتُمُونَ اللَّهَ حَدِيثًا ۝٤٢
📖 ಅನುವಾದ ಆಯತ್ 42
ಅಂದು ಸತ್ಯನಿಷೇಧಿಗಳು ಮತ್ತು ಸಂದೇಶವಾಹಕರಿಗೆ ಧಿಕ್ಕಾರ ತೋರಿದವರು ತಮ್ಮನ್ನು ಭೂಮಿಯಲ್ಲಿ ಹೂತು ನೆಲಸಮಗೊಳಿಸಲಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಆಶಿಸುವರು ಮತ್ತು ಅಲ್ಲಾಹನಿಂದ ಯಾವೂಂದು ವಿಚಾರವನ್ನು ಬಚ್ಚಿಡಲು ಅವರಿಗೆ ಸಾಧ್ಯವಾಗದು.
يَا أَيُّهَا الَّذِينَ آمَنُوا لَا تَقْرَبُوا الصَّلَاةَ وَأَنتُمْ سُكَارَىٰ حَتَّىٰ تَعْلَمُوا مَا تَقُولُونَ وَلَا جُنُبًا إِلَّا عَابِرِي سَبِيلٍ حَتَّىٰ تَغْتَسِلُوا ۚ وَإِن كُنتُم مَّرْضَىٰ أَوْ عَلَىٰ سَفَرٍ أَوْ جَاءَ أَحَدٌ مِّنكُم مِّنَ الْغَائِطِ أَوْ لَامَسْتُمُ النِّسَاءَ فَلَمْ تَجِدُوا مَاءً فَتَيَمَّمُوا صَعِيدًا طَيِّبًا فَامْسَحُوا بِوُجُوهِكُمْ وَأَيْدِيكُمْ ۗ إِنَّ اللَّهَ كَانَ عَفُوًّا غَفُورًا ۝٤٣
📖 ಅನುವಾದ ಆಯತ್ 43
ಓ ಸತ್ಯವಿಶ್ವಾಸಿಗಳೇ, ನೀವು ಅಮಲಿನಲ್ಲಿದ್ದರೆ ನೀವು ನಿಮ್ಮ ಮಾತನ್ನು ಗ್ರಹಿಸಿಕೊಳ್ಳುವ ತನಕ ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ ಮತ್ತು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿಕೊಳ್ಳುವ ತನಕ (ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ)ಆದರೆ ನೀವು ಮಸೀದಿಯಿಂದ ಹಾದು ಹೋಗುವವರಾಗಿದ್ದರೆ ಬೇರೆ ವಿಚಾರ. ಇನ್ನು ನೀವು ರೋಗಿಗಳಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೋರ್ವನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಪರ್ಕ ಮಾಡಿದರೆ ಮತ್ತು ನಿಮಗೆ ನೀರು ಲಭಿಸದಿದ್ದಲ್ಲಿ ನೀವು ಶುದ್ಧವಾಗಿರುವ ಮಣ್ಣಿನಿಂದ ತಯಮ್ಮುಮ್ ಮಾಡಿರಿ ಮತ್ತು ನಿಮ್ಮ ಮುಖಗಳನ್ನು ಕೈಗಳನ್ನು ಸವರಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಮನ್ನಿಸುವವನು, ಕ್ಷಮೆ ನೀಡುವವನು ಆಗಿದ್ದಾನೆ.
أَلَمْ تَرَ إِلَى الَّذِينَ أُوتُوا نَصِيبًا مِّنَ الْكِتَابِ يَشْتَرُونَ الضَّلَالَةَ وَيُرِيدُونَ أَن تَضِلُّوا السَّبِيلَ ۝٤٤
📖 ಅನುವಾದ ಆಯತ್ 44
ಗ್ರಂಥದ ಅಲ್ಪಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ದುರ್ಮಾರ್ಗವನ್ನು ಖರೀದಿಸುವವರು ಮತ್ತು ನೀವು ಸಹ ಮಾರ್ಗ ಭ್ರಷ್ಟರಾಗಬೇಕೆಂದು ಬಯಸುವವರಾಗಿದ್ದರೆ.
وَاللَّهُ أَعْلَمُ بِأَعْدَائِكُمْ ۚ وَكَفَىٰ بِاللَّهِ وَلِيًّا وَكَفَىٰ بِاللَّهِ نَصِيرًا ۝٤٥
📖 ಅನುವಾದ ಆಯತ್ 45
ಅಲ್ಲಾಹನು ನಿಮ್ಮ ಶತ್ರುಗಳನ್ನು ಚೆನ್ನಾಗಿ ಅರಿತಿದ್ದಾನೆ ಮತ್ತು ಮಿತ್ರನಾಗಿ ಅಲ್ಲಾಹನೇ ಸಾಕು ಮತ್ತು ಸಹಾಯಕನಾಗಿ ಅಲ್ಲಾಹನೇ ಸಾಕು.
مِّنَ الَّذِينَ هَادُوا يُحَرِّفُونَ الْكَلِمَ عَن مَّوَاضِعِهِ وَيَقُولُونَ سَمِعْنَا وَعَصَيْنَا وَاسْمَعْ غَيْرَ مُسْمَعٍ وَرَاعِنَا لَيًّا بِأَلْسِنَتِهِمْ وَطَعْنًا فِي الدِّينِ ۚ وَلَوْ أَنَّهُمْ قَالُوا سَمِعْنَا وَأَطَعْنَا وَاسْمَعْ وَانظُرْنَا لَكَانَ خَيْرًا لَّهُمْ وَأَقْوَمَ وَلَٰكِن لَّعَنَهُمُ اللَّهُ بِكُفْرِهِمْ فَلَا يُؤْمِنُونَ إِلَّا قَلِيلًا ۝٤٦
📖 ಅನುವಾದ ಆಯತ್ 46
ಕೆಲವು ಯಹೂದರು ದೈವ ವಚನಗಳನ್ನು ಅವುಗಳ ನೈಜ ಸ್ಥಾನದಿಂದ ಅಸ್ತವ್ಯಸ್ತಗೊಳಿಸುತ್ತಾರೆ ಮತ್ತು ನಾವು ಆಲಿಸಿದೆವು ಮತ್ತು ಧಿಕ್ಕಾರ ತೋರಿದೆವು. ನೀವು ಕೇಳಿರಿ ನಿಮ್ಮನ್ನು ಕೇಳದಂತಾಗಲೆAದು ಹೇಳುತ್ತಾರೆ. ಮತ್ತು “ರಾಯಿನಾ” (ನಮ್ಮತ್ತ ಲಕ್ಷö್ಯ ಕೊಡಿರಿ) ಎಂಬ ಮಾತನ್ನು ತಮ್ಮ ನಾಲಗೆಯ ಮೂಲಕ ತಿರುಚಿಕೊಳ್ಳುತ್ತಾರೆ ಮತ್ತು ಧರ್ಮನಿಂದನೆ ಮಾಡುತ್ತಾರೆ. ಆದರೆ ಅವರು ಇದರ ಹೊರತು ನಾವು ಆಲಿಸಿದೆವು ಮತ್ತು ವಿಧೇಯತೆ ತೋರಿದೆವು ಮತ್ತು ನೀವು ಕೇಳಿಸಿಕೊಳ್ಳಿರಿ ಮತ್ತು ನಮ್ಮನ್ನು ನೋಡಿರಿರೆಂದು ಅವರು ಹೇಳಿರುತ್ತಿದ್ದರೆ ಅದು ಅವರಿಗೆ ಅತ್ಯುತ್ತಮವೂ, ಅತ್ಯಂತ ಯೋಗ್ಯವೂ ಆಗಿರುತ್ತಿತ್ತು. ಆದರೆ ಅಲ್ಲಾಹನು ಅವರ ನಿಷೇಧದ ನಿಮಿತ್ತ ಅವರನ್ನು ಶಪಿಸಿರುತ್ತಾನೆ. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುತ್ತಾರೆ.
يَا أَيُّهَا الَّذِينَ أُوتُوا الْكِتَابَ آمِنُوا بِمَا نَزَّلْنَا مُصَدِّقًا لِّمَا مَعَكُم مِّن قَبْلِ أَن نَّطْمِسَ وُجُوهًا فَنَرُدَّهَا عَلَىٰ أَدْبَارِهَا أَوْ نَلْعَنَهُمْ كَمَا لَعَنَّا أَصْحَابَ السَّبْتِ ۚ وَكَانَ أَمْرُ اللَّهِ مَفْعُولًا ۝٤٧
📖 ಅನುವಾದ ಆಯತ್ 47
ಓ ಗ್ರಂಥ ನೀಡಲ್ಪಟ್ಟವರೇ ನಿಮ್ಮ ಬಳಿ ಇರುವುದನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿರುವುದರಲ್ಲಿ (ಕುರ್‌ಆನ್) ವಿಶ್ವಾಸವಿಡಿರಿ. ನಾವು ಕೆಲವು ಮುಖಗಳನ್ನು ವಿಕೃತಗೊಳಿಸಿ ಅದನ್ನು ಬೆನ್ನ ಹಿಂದಕ್ಕೆ ತಿರುಗಿಸುವುದಕ್ಕೆ ಮುನ್ನ ಅಥವಾ ಸಬ್ತ್ನ (ಶನಿವಾರದ) ಜನರನ್ನು ನಾವು ಶಪಿಸಿದಂತೆ ಅವರನ್ನು ಶಪಿಸುವುದಕ್ಕೆ ಮುನ್ನ ಅಲ್ಲಾಹನ ಆಜ್ಞೆಯು ಜಾರಿಗೆ ಬಂದೇ ತೀರುವುದು.
إِنَّ اللَّهَ لَا يَغْفِرُ أَن يُشْرَكَ بِهِ وَيَغْفِرُ مَا دُونَ ذَٰلِكَ لِمَن يَشَاءُ ۚ وَمَن يُشْرِكْ بِاللَّهِ فَقَدِ افْتَرَىٰ إِثْمًا عَظِيمًا ۝٤٨
📖 ಅನುವಾದ ಆಯತ್ 48
ನಿಸ್ಸಂದೇಹವಾಗಿ ಅಲ್ಲಾಹನು ತನ್ನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸಲಾಗುವುದನ್ನು ಖಂಡಿತ ಕ್ಷಮಿಸುವುದಿಲ್ಲ. ಮತ್ತು ಅದರ ಹೊರತಾದುದನ್ನು ತಾನಿಚ್ಛಿಸಿದವರಿಗೆ ಅವನು ಕ್ಷಮಿಸುವನು. ಯಾರು ಅಲ್ಲಾಹನೊಂದಿಗೆ ಸಹಭಾಗಿಯನ್ನು ನಿಶ್ಚಯಿಸುವನೋ ಅವನು ಘೋರ ಪಾಪವನ್ನು, ಸುಳ್ಳಾರೋಪವನ್ನು ಮಾಡಿದನು.
أَلَمْ تَرَ إِلَى الَّذِينَ يُزَكُّونَ أَنفُسَهُم ۚ بَلِ اللَّهُ يُزَكِّي مَن يَشَاءُ وَلَا يُظْلَمُونَ فَتِيلًا ۝٤٩
📖 ಅನುವಾದ ಆಯತ್ 49
ಆತ್ಮ ಪ್ರಶಂಸೆ ಮಾಡುವವರನ್ನು ನೀವು ನೋಡಲಿಲ್ಲವೇ? ಆದರೆ ಅಲ್ಲಾಹನು ಯಾರನ್ನು ಇಚ್ಛಿಸುತ್ತಾನೋ ಅವರನ್ನು ಪರಿಶುದ್ಧಗೊಳಿಸುತ್ತಾನೆ. ಅವರೊಂದಿಗೆ ಒಂದು ನೂಲಿನಷ್ಟೂ ಅನ್ಯಾಯ ಮಾಡಲಾಗದು.
انظُرْ كَيْفَ يَفْتَرُونَ عَلَى اللَّهِ الْكَذِبَ ۖ وَكَفَىٰ بِهِ إِثْمًا مُّبِينًا ۝٥٠
📖 ಅನುವಾದ ಆಯತ್ 50
ಅವರು ಅಲ್ಲಾಹನ ಮೇಲೆ ಹೇಗೆ ಸುಳ್ಳಾರೋಪ ಮಾಡುತ್ತಿದ್ದಾರೆಂದು ನೋಡಿರಿ. ಮತ್ತು ಪ್ರತ್ಯಕ್ಷ ಪಾಪಕ್ಕೆ ಅದೇ ಸಾಕು.
أَلَمْ تَرَ إِلَى الَّذِينَ أُوتُوا نَصِيبًا مِّنَ الْكِتَابِ يُؤْمِنُونَ بِالْجِبْتِ وَالطَّاغُوتِ وَيَقُولُونَ لِلَّذِينَ كَفَرُوا هَٰؤُلَاءِ أَهْدَىٰ مِنَ الَّذِينَ آمَنُوا سَبِيلًا ۝٥١
📖 ಅನುವಾದ ಆಯತ್ 51
ಗ್ರಂಥದಿAದ ಒಂದು ಪಾಲು ನೀಡಲಾದವರನ್ನು ನೀವು ನೋಡಲಿಲ್ಲವೇ? ಅವರು ವಿಗ್ರಹಗಳಲ್ಲೂ ದುಷ್ಟ ಶಕ್ತಿಗಳಲ್ಲೂ ವಿಶ್ವಾಸವಿಡುತ್ತಾರೆ ಮತ್ತು ಅವರು ಸತ್ಯನಿಷೇಧಿಗಳ ಬಗ್ಗೆ ಸತ್ಯವಿಶ್ವಾಸಿಗಳಿಗಿಂತ ಹೆಚ್ಚು ಸನ್ಮಾರ್ಗದಲ್ಲಿದ್ದಾರೆಂದು ಹೇಳುತ್ತಾರೆ.
أُولَٰئِكَ الَّذِينَ لَعَنَهُمُ اللَّهُ ۖ وَمَن يَلْعَنِ اللَّهُ فَلَن تَجِدَ لَهُ نَصِيرًا ۝٥٢
📖 ಅನುವಾದ ಆಯತ್ 52
ಅಲ್ಲಾಹನು ಶಪಿಸಿರುವುದು ಅವರನ್ನೇ ಆಗಿದೆ. ಮತ್ತು ಅಲ್ಲಾಹನು ಯಾರನ್ನೂ ಶಪಿಸಿರುವನೋ ಅವನಿಗೆ ಯಾವೊಬ್ಬ ಸಹಾಯಕನನ್ನೂ ನೀವು ಕಾಣಲಾರಿರಿ.
أَمْ لَهُمْ نَصِيبٌ مِّنَ الْمُلْكِ فَإِذًا لَّا يُؤْتُونَ النَّاسَ نَقِيرًا ۝٥٣
📖 ಅನುವಾದ ಆಯತ್ 53
ಅಧಿಪತ್ಯದಲ್ಲಿ ಅವರಿಗೆ ಯಾವುದಾದರೂ ಪಾಲಿದೆಯೇ? ಹಾಗೇನಾದರೂ ಇರುತ್ತಿದ್ದರೆ ಅವರು ಯಾರಿಗೂ ಎಳ್ಳಷ್ಟನ್ನೂ ನೀಡುತ್ತಿರಲಿಲ್ಲ.
أَمْ يَحْسُدُونَ النَّاسَ عَلَىٰ مَا آتَاهُمُ اللَّهُ مِن فَضْلِهِ ۖ فَقَدْ آتَيْنَا آلَ إِبْرَاهِيمَ الْكِتَابَ وَالْحِكْمَةَ وَآتَيْنَاهُم مُّلْكًا عَظِيمًا ۝٥٤
📖 ಅನುವಾದ ಆಯತ್ 54
ಅಥವಾ ಅಲ್ಲಾಹನು ತನ್ನ ಔದಾರ್ಯದಿಂದ ಇತರರಿಗೆ ನೀಡಿರುವ ವಿಚಾರದಲ್ಲಿ ಅವರು ಅಸೂಯೆಪಡುತ್ತಿದ್ದಾರೆಯೇ? ಹಾಗೆಯೇ ನಾವು ಇಬ್ರಾಹೀಮರ ಕುಟುಂಬಕ್ಕೆ ಗ್ರಂಥವನ್ನೂ, ಸುಜ್ಞಾನವನ್ನೂ ನೀಡಿದ್ದೇವೆ ಮತ್ತು ಅವರಿಗೆ ನಾವು ಮಹಾ ಅಧಿಪತ್ಯವನ್ನೂ ಕರುಣಿಸಿದ್ದೇವೆ.
فَمِنْهُم مَّنْ آمَنَ بِهِ وَمِنْهُم مَّن صَدَّ عَنْهُ ۚ وَكَفَىٰ بِجَهَنَّمَ سَعِيرًا ۝٥٥
📖 ಅನುವಾದ ಆಯತ್ 55
ಅನಂತರ ಅವರ ಪೈಕಿ ಕೆಲವರು ಈ ಗ್ರಂಥವನ್ನು ನಂಬಿದರು ಮತ್ತು ಇನ್ನು ಕೆಲವರು ಸ್ಥಗಿತಗೊಂಡರು ಮತ್ತು ಅವರಿಗೆ ಧಗಧಗಿಸುವ ನರಕಾಗ್ನಿಯೇ ಸಾಕು.
إِنَّ الَّذِينَ كَفَرُوا بِآيَاتِنَا سَوْفَ نُصْلِيهِمْ نَارًا كُلَّمَا نَضِجَتْ جُلُودُهُم بَدَّلْنَاهُمْ جُلُودًا غَيْرَهَا لِيَذُوقُوا الْعَذَابَ ۗ إِنَّ اللَّهَ كَانَ عَزِيزًا حَكِيمًا ۝٥٦
📖 ಅನುವಾದ ಆಯತ್ 56
ಯಾರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದರೋ, ಅವರನ್ನು ನಾವು ಖಂಡಿತ ನರಕಾಗ್ನಿಯಲ್ಲಿ ಹಾಕಿಬಿಡವೆವು. ಅವರ ಚರ್ಮಗಳು ಕರಗಿ ಹೋದಾಗಲೆಲ್ಲಾ ಅವರು ಶಿಕ್ಷೆಯನ್ನು ಸವಿಯುತ್ತಿರಲೆಂದು ನಾವು ಅವರಿಗೆ ಬೇರೆ ಚರ್ಮಗಳನ್ನು ಬದಲಾಯಿಸಿ ಕೊಡುವೆವು. ಖಂಡಿತವಾಗಿಯು ಅಲ್ಲಾಹನು ಪ್ರಬಲನೂ, ಸುಜ್ಞಾನಿಯೂ ಆಗಿದ್ದಾನೆ.
وَالَّذِينَ آمَنُوا وَعَمِلُوا الصَّالِحَاتِ سَنُدْخِلُهُمْ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ لَّهُمْ فِيهَا أَزْوَاجٌ مُّطَهَّرَةٌ ۖ وَنُدْخِلُهُمْ ظِلًّا ظَلِيلًا ۝٥٧
📖 ಅನುವಾದ ಆಯತ್ 57
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡುತ್ತಾರೋ ಅವರನ್ನು ನಾವು ಸದ್ಯದಲ್ಲೇ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವೆವು. ಅವರು ಅದರಲ್ಲಿ ಶಾಶ್ವತವಾಗಿರುವರು. ಅವರಿಗೆ ಅಲ್ಲಿ ಪರಿಶುದ್ಧರಾದ ಪತ್ನಿಯರಿರುವರು ನಾವು ದಟ್ಟವಾದ ನೆರಳುಗಳಲ್ಲಿ ಅವರನ್ನು ಪ್ರವೇಶಗೊಳಿಸುವೆವು.
۞ إِنَّ اللَّهَ يَأْمُرُكُمْ أَن تُؤَدُّوا الْأَمَانَاتِ إِلَىٰ أَهْلِهَا وَإِذَا حَكَمْتُم بَيْنَ النَّاسِ أَن تَحْكُمُوا بِالْعَدْلِ ۚ إِنَّ اللَّهَ نِعِمَّا يَعِظُكُم بِهِ ۗ إِنَّ اللَّهَ كَانَ سَمِيعًا بَصِيرًا ۝٥٨
📖 ಅನುವಾದ ಆಯತ್ 58
ಅಮಾನತ್ತುಗಳನ್ನು ಅದರ ಹಕ್ಕುದಾರರಿಗೆ ತಲುಪಿಸಿಕೊಡಬೇಕೆಂದೂ, ಜನರ ಮಧ್ಯೆ, ನೀವು ತೀರ್ಪು ನೀಡುವಾಗ ನ್ಯಾಯಪೂರ್ವಕವಾಗಿ ತೀರ್ಪು ನೀಡಬೇಕೆಂದೂ ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ. ಖಂಡಿತವಾಗಿಯು ಅಲ್ಲಾಹನು ನಿಮಗೆ ಉತ್ತಮವಾದ ಉಪದೇಶವನ್ನು ನೀಡುತ್ತಾನೆ. ನಿಸ್ಸಂಶಯವಾಗಿಯು ಅಲ್ಲಾಹನು ಆಲಿಸುವವನೂ, ನೋಡುವವನೂ ಆಗಿದ್ದಾನೆ.
يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنكُمْ ۖ فَإِن تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِن كُنتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا ۝٥٩
📖 ಅನುವಾದ ಆಯತ್ 59
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಅಲ್ಲಾಹನ ಸಂದೇಶವಾಹಕರನ್ನೂ, ಹಾಗೂ ನಿಮ್ಮಿಂದಲೇ ಇರುವ ಆಡಳಿತಾಧಿಕಾರಿಗಳನ್ನೂ ಅನುಸರಿಸಿರಿ. ಇನ್ನು ಯಾವುದಾದರೂ ವಿಚಾರದಲ್ಲಿ ನೀವು ಭಿನ್ನರಾದರೆ ನೀವು ಅದನ್ನು ಅಲ್ಲಾಹನೆಡೆಗೂ, ಸಂದೇಶವಾಹಕರೆಡೆಗೂ ಮರಳಿಸಿರಿ. ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿರುಸುವುದಾದರೆ. ಇದು ತುಂಬಾ ಉತ್ತಮವೂ, ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.
أَلَمْ تَرَ إِلَى الَّذِينَ يَزْعُمُونَ أَنَّهُمْ آمَنُوا بِمَا أُنزِلَ إِلَيْكَ وَمَا أُنزِلَ مِن قَبْلِكَ يُرِيدُونَ أَن يَتَحَاكَمُوا إِلَى الطَّاغُوتِ وَقَدْ أُمِرُوا أَن يَكْفُرُوا بِهِ وَيُرِيدُ الشَّيْطَانُ أَن يُضِلَّهُمْ ضَلَالًا بَعِيدًا ۝٦٠
📖 ಅನುವಾದ ಆಯತ್ 60
ಓ ಪೈಗಂಬರರೇ ತಮ್ಮೆಡೆಗೆ ಅವತೀರ್ಣಗೊಳಿಸಲಾದುದರಲ್ಲೂ, ತಮಗಿಂತ ಮುಂಚೆ ಅವತೀರ್ಣಗೊಳಿಸಲಾದುದರಲ್ಲೂ ನಾವು ವಿಶ್ವಾಸವಿಟ್ಟಿದ್ದೇವೆಂದು ವಾದಿಸುವ, ಜನರನ್ನು ನೀವು ಕಂಡಿಲ್ಲವೇ? ಆದರೆ ಅವರು (ಶೈತಾನನ ಹಿಂಬಾಲಕರು)ತಮ್ಮ ತೀರ್ಪನ್ನು ಮಿಥ್ಯಶಕ್ತಿಯೆಡೆಗೆ ಕೊಂಡೊಯ್ಯಲು ಬಯಸುತ್ತಾರೆ. ವಾಸ್ತವದಲ್ಲಿ ಶೈತಾನನನ್ನು ನಿರಾಕರಿಸಲು ಅವರು ಆದೇಶಿಸಲಾಗಿದ್ದರು. ಶೈತಾನನಂತೂ ಅವರನ್ನು ಪಥಭ್ರಷ್ಟತೆಗೊಳಿಸಿ ಬಹುದೂರ ಕೊಂಡೊಯ್ಯಲು ಬಯಸುತ್ತಾನೆ.
وَإِذَا قِيلَ لَهُمْ تَعَالَوْا إِلَىٰ مَا أَنزَلَ اللَّهُ وَإِلَى الرَّسُولِ رَأَيْتَ الْمُنَافِقِينَ يَصُدُّونَ عَنكَ صُدُودًا ۝٦١
📖 ಅನುವಾದ ಆಯತ್ 61
ಅಲ್ಲಾಹನು ಅವತೀರ್ಣಗೊಳಿಸಿರುವುದರ (ಕುರ್‌ಆನ್) ಕಡೆಗೆ ಮತ್ತು ಸಂದೇಶವಾಹಕರ ಕಡೆಗೆ ಬನ್ನಿರಿ ಎಂದು ಅವರೊಂದಿಗೆ ಹೇಳಲಾದರೆ ಆ ಕಪಟವಿಶ್ವಾಸಿಗಳು ತಮ್ಮಿಂದ ವಿಮುಖರಾಗಿ ಹೋಗುವುದನ್ನು ನೀವು ಕಾಣುತ್ತೀರಿ.
فَكَيْفَ إِذَا أَصَابَتْهُم مُّصِيبَةٌ بِمَا قَدَّمَتْ أَيْدِيهِمْ ثُمَّ جَاءُوكَ يَحْلِفُونَ بِاللَّهِ إِنْ أَرَدْنَا إِلَّا إِحْسَانًا وَتَوْفِيقًا ۝٦٢
📖 ಅನುವಾದ ಆಯತ್ 62
ಅವರ (ಕಪಟಿಗಳ) ಕೈಗಳು ಮಾಡಿದ ಪಾಪಗಳ ಫಲವಾಗಿ ಅವರಿಗೇನಾದರೂ ಆಪತ್ತು ಬಾಧಿಸಿದರೆ. ಅವರು ತಮ್ಮ ಬಳಿಗೆ ಬಂದು ನಾವು ಕೇವಲ ಒಳಿತು ಮತ್ತು ಸಂಧಾನವಲ್ಲದೇ ಬೇರೇನೂ ಉದ್ದೇಶಿಸಿರಲಿಲ್ಲವೆಂದು ಅಲ್ಲಾಹನ ಮೇಲೆ ಆಣೆ ಹಾಕುತ್ತಾ ಹೇಳುತ್ತಾರೆ. ಅವರ ಅವಸ್ಥೆ ಏನಾದಿತು?
أُولَٰئِكَ الَّذِينَ يَعْلَمُ اللَّهُ مَا فِي قُلُوبِهِمْ فَأَعْرِضْ عَنْهُمْ وَعِظْهُمْ وَقُل لَّهُمْ فِي أَنفُسِهِمْ قَوْلًا بَلِيغًا ۝٦٣
📖 ಅನುವಾದ ಆಯತ್ 63
ಅವರ ಮನಸ್ಸುಗಳಲ್ಲಿ ಏನಿದೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ನೀವು ಅವರನ್ನು ಕಡೆಗಣಿಸಿರಿ ಮತ್ತು ಅವರಿಗೆ ಸದುಪದೇಶವನ್ನು ನೀಡಿರಿ ಮತ್ತು ಅವರ ಹೃದಯವನ್ನು ಸ್ಪರ್ಶಿಸುವಂತಹ ಮಾತನ್ನು ಅವರಿಗೆ ಹೇಳಿರಿ.
وَمَا أَرْسَلْنَا مِن رَّسُولٍ إِلَّا لِيُطَاعَ بِإِذْنِ اللَّهِ ۚ وَلَوْ أَنَّهُمْ إِذ ظَّلَمُوا أَنفُسَهُمْ جَاءُوكَ فَاسْتَغْفَرُوا اللَّهَ وَاسْتَغْفَرَ لَهُمُ الرَّسُولُ لَوَجَدُوا اللَّهَ تَوَّابًا رَّحِيمًا ۝٦٤
📖 ಅನುವಾದ ಆಯತ್ 64
ನಾವು ಪ್ರತಿಯೊಬ್ಬ ಸಂದೇಶವಾಹಕನನ್ನು ಅಲ್ಲಾಹನ ಅಪ್ಪಣೆಯಂತೆ ಅವನನ್ನು ಅನುಸರಿಸಲಿಕ್ಕಾಗಿಯೇ ನಿಯೋಗಿಸಿದ್ದೇವೆ ಮತ್ತು ಅವರು ತಮ್ಮ ಮೇಲೆ ಅಕ್ರಮವನ್ನು ಮಾಡಿ, ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಮತ್ತು ಅವರಿಗೋಸ್ಕರ ಸಂದೇಶವಾಹಕನು ಸಹ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಖಂಡಿತ ಅವರು ಅಲ್ಲಾಹನನ್ನು ಕ್ಷಮೆ ನೀಡುವವನಾಗಿಯು, ಕರುಣೆಯುಳ್ಳವನಾಗಿಯು ಕಾಣುತ್ತಿದ್ದರು.
فَلَا وَرَبِّكَ لَا يُؤْمِنُونَ حَتَّىٰ يُحَكِّمُوكَ فِيمَا شَجَرَ بَيْنَهُمْ ثُمَّ لَا يَجِدُوا فِي أَنفُسِهِمْ حَرَجًا مِّمَّا قَضَيْتَ وَيُسَلِّمُوا تَسْلِيمًا ۝٦٥
📖 ಅನುವಾದ ಆಯತ್ 65
ಆದ್ದರಿಂದ ನಿಮ್ಮ ಪ್ರಭುವಿನಾಣೆ ಅವರು ತಮ್ಮ ನಡುವಿನ ಸಕಲ ಭಿನ್ನತೆಯ ವಿಷಯಗಳಲ್ಲಿ ನಿಮ್ಮನ್ನು ತೀರ್ಪುಗಾರನನ್ನಾಗಿಸಿ ಬಳಿಕ ನೀವು ನೀಡಿದ ತೀರ್ಪಿನ ಕುರಿತು ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಅತೃಪ್ತಿಯು ಉಂಟಾಗದೇ ಸಂಪೂರ್ಣ ವಿಧೇಯತೆಯೊಂದಿಗೆ ಅದನ್ನು ಸ್ವೀಕರಿಸುವವರೆಗೆ ಅವರು ಸತ್ಯವಿಶ್ವಾಸಿಗಳಾಗಲಾರರು.
وَلَوْ أَنَّا كَتَبْنَا عَلَيْهِمْ أَنِ اقْتُلُوا أَنفُسَكُمْ أَوِ اخْرُجُوا مِن دِيَارِكُم مَّا فَعَلُوهُ إِلَّا قَلِيلٌ مِّنْهُمْ ۖ وَلَوْ أَنَّهُمْ فَعَلُوا مَا يُوعَظُونَ بِهِ لَكَانَ خَيْرًا لَّهُمْ وَأَشَدَّ تَثْبِيتًا ۝٦٦
📖 ಅನುವಾದ ಆಯತ್ 66
ನೀವು ನಿಮ್ಮ ಜೀವಗಳನ್ನೇ ಬಲಿಯರ್ಪಿಸಿರಿ ಅಥವಾ ನಿಮ್ಮ ಮನೆಗಳಿಂದ ಹೊರಟು ಹೋಗಿರಿ ಎಂದು ನಾವು ಅವರ ಮೇಲೆ ಕಡ್ಡಾಯಗೊಳಿಸಿರುತ್ತಿದ್ದರೆ ಅವರ ಪೈಕಿ ಅತ್ಯಲ್ಪ ಜನರ ಹೊರತು ಅದನ್ನು ಪಾಲಿಸುತ್ತಿರಲಿಲ್ಲ. ಮತ್ತು ಅವರು ತಮಗೆ ಉಪದೇಶಿಸಲಾಗುವುದನ್ನು ಮಾಡುತ್ತಿದ್ದರೆ ಖಂಡಿತ ಅದು ಅವರ ಪಾಲಿಗೆ ಉತ್ತಮವೂ, ಧರ್ಮದಲ್ಲಿ ಸದೃಢಗೊಳಿಸುವಂತದ್ದೂ ಆಗಿರುತ್ತಿತ್ತು.
وَإِذًا لَّآتَيْنَاهُم مِّن لَّدُنَّا أَجْرًا عَظِيمًا ۝٦٧
📖 ಅನುವಾದ ಆಯತ್ 67
ಹಾಗಿದ್ದರೆ ನಾವು ಅವರಿಗೆ ನಮ್ಮ ವತಿಯ ಮಹಾ ಪ್ರತಿಫಲವನ್ನು ದಯಪಾಲಿಸುತ್ತಿದ್ದೆವು.
وَلَهَدَيْنَاهُمْ صِرَاطًا مُّسْتَقِيمًا ۝٦٨
📖 ಅನುವಾದ ಆಯತ್ 68
ಮತ್ತು ನಾವವರಿಗೆ ಖಂಡಿತ ನೇರ ಮಾರ್ಗವನ್ನು ತೋರಿಸುತ್ತಿದ್ದೆವು.
وَمَن يُطِعِ اللَّهَ وَالرَّسُولَ فَأُولَٰئِكَ مَعَ الَّذِينَ أَنْعَمَ اللَّهُ عَلَيْهِم مِّنَ النَّبِيِّينَ وَالصِّدِّيقِينَ وَالشُّهَدَاءِ وَالصَّالِحِينَ ۚ وَحَسُنَ أُولَٰئِكَ رَفِيقًا ۝٦٩
📖 ಅನುವಾದ ಆಯತ್ 69
ಯಾರು ಅಲ್ಲಾಹನನ್ನೂ, ಸಂದೇಶವಾಹಕರನ್ನೂ ಅನುಸರಿಸುತ್ತಾರೋ ಅವರು ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾದ ಪೈಗಂಬರರು ಸತ್ಯಸಂಧರು, ಹುತಾತ್ಮರು, ಸಜ್ಜನರ ಜೊತೆ ಸ್ವರ್ಗದಲ್ಲಿರುವವರು. ಅವರು ಅತ್ಯುತ್ತಮ ಸಂಗಾತಿಗಳಾಗಿರುವರು.
ذَٰلِكَ الْفَضْلُ مِنَ اللَّهِ ۚ وَكَفَىٰ بِاللَّهِ عَلِيمًا ۝٧٠
📖 ಅನುವಾದ ಆಯತ್ 70
ಇದು ಅಲ್ಲಾಹನ ವತಿಯಿಂದ ಇರುವ ಅನುಗ್ರಹವಾಗಿದೆ ಎಲ್ಲವನ್ನೂ ಬಲ್ಲವನಾಗಿ ಅಲ್ಲಾಹನೇ ಸಾಕು.
يَا أَيُّهَا الَّذِينَ آمَنُوا خُذُوا حِذْرَكُمْ فَانفِرُوا ثُبَاتٍ أَوِ انفِرُوا جَمِيعًا ۝٧١
📖 ಅನುವಾದ ಆಯತ್ 71
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮ ರಕ್ಷಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳಿರಿ ಅನಂತರ ಸಣ್ಣ ಸಣ್ಣ ತುಕಡಿಗಳಾಗಿ ಅಥವಾ ಒಟ್ಟಾಗಿ ಯುದ್ಧಕ್ಕಾಗಿ ಸಜ್ಜಾಗಿರಿ.
وَإِنَّ مِنكُمْ لَمَن لَّيُبَطِّئَنَّ فَإِنْ أَصَابَتْكُم مُّصِيبَةٌ قَالَ قَدْ أَنْعَمَ اللَّهُ عَلَيَّ إِذْ لَمْ أَكُن مَّعَهُمْ شَهِيدًا ۝٧٢
📖 ಅನುವಾದ ಆಯತ್ 72
ಖಂಡಿತವಾಗಿಯು ನಿಮ್ಮ ಪೈಕಿ ಕೆಲವರು ಯುದ್ಧದಿಂದ ಹಿಂದುಳಿಯುವವರಿದ್ದಾರೆ. ಅನಂತರ ನಿಮಗೇನಾದರೂ ದುರಂತ ಬಾಧಿಸಿದರೆ 'ನಾನು ಅವರೊಂದಿಗೆ ಹಾಜರಾಗದಿರುವ ಮೂಲಕ ಅಲ್ಲಾಹನು ನನ್ನನ್ನು ಅನುಗ್ರಹಿಸಿದ್ದಾನೆಂದು ಅವನು ಹೇಳುತ್ತಾನೆ.
وَلَئِنْ أَصَابَكُمْ فَضْلٌ مِّنَ اللَّهِ لَيَقُولَنَّ كَأَن لَّمْ تَكُن بَيْنَكُمْ وَبَيْنَهُ مَوَدَّةٌ يَا لَيْتَنِي كُنتُ مَعَهُمْ فَأَفُوزَ فَوْزًا عَظِيمًا ۝٧٣
📖 ಅನುವಾದ ಆಯತ್ 73
ನಿಮಗೆ ಅಲ್ಲಾಹನ ವತಿಯಿಂದ ಏನಾದರೂ ಅನುಗ್ರಹವು ಲಭಿಸಿದರೆ, ನಿಮ್ಮ ಮತ್ತು ಅವನ ನಡುವೆ ಪರಸ್ಪರ ಯಾವ ಗೆಳೆತನವೂ ಇರಲಿಲ್ಲವೆಂಬ ಮಟ್ಟಿನಲ್ಲಿ ಅಯ್ಯೋ ನಾನೂ ಸಹ ಅವರ ಜೊತೆಗಿರುತ್ತಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು ಹಾಗೆಯೇ ನಾನೂ ವಿಜಯವನ್ನು ಗಳಿಸುತ್ತಿದ್ದೆ ಎಂದು ಹೇಳುವನು.
۞ فَلْيُقَاتِلْ فِي سَبِيلِ اللَّهِ الَّذِينَ يَشْرُونَ الْحَيَاةَ الدُّنْيَا بِالْآخِرَةِ ۚ وَمَن يُقَاتِلْ فِي سَبِيلِ اللَّهِ فَيُقْتَلْ أَوْ يَغْلِبْ فَسَوْفَ نُؤْتِيهِ أَجْرًا عَظِيمًا ۝٧٤
📖 ಅನುವಾದ ಆಯತ್ 74
ಯಾರು ಪರಲೋಕ ಜೀವನದ ಬದಲಿಗೆ ಇಹಲೋಕ ಜೀವನವನ್ನು ಮಾರುವರೋ ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿ ಮತ್ತು ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ ಹುತಾತ್ಮನಾಗುತ್ತಾನೋ ಅಥವಾ ಜಯಗಳಿಸುತ್ತಾನೋ ನಾವು ಅವನಿಗೆ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
وَمَا لَكُمْ لَا تُقَاتِلُونَ فِي سَبِيلِ اللَّهِ وَالْمُسْتَضْعَفِينَ مِنَ الرِّجَالِ وَالنِّسَاءِ وَالْوِلْدَانِ الَّذِينَ يَقُولُونَ رَبَّنَا أَخْرِجْنَا مِنْ هَٰذِهِ الْقَرْيَةِ الظَّالِمِ أَهْلُهَا وَاجْعَل لَّنَا مِن لَّدُنكَ وَلِيًّا وَاجْعَل لَّنَا مِن لَّدُنكَ نَصِيرًا ۝٧٥
📖 ಅನುವಾದ ಆಯತ್ 75
'ಓ ನಮ್ಮ ಪ್ರಭು, ಈ ಅಕ್ರಮಿಗಳ ನಾಡಿನಿಂದ ನಮ್ಮನ್ನು ಪಾರು ಮಾಡು ಮತ್ತು ನಿನ್ನ ವತಿಯಿಂದ ನಮಗಾಗಿ ರಕ್ಷಕನನ್ನು ನಿಶ್ಚಯಿಸಿಕೊಡು ಹಾಗೂ ನಮಗಾಗಿ ನಿನ್ನ ವತಿಯಿಂದ ಸಹಾಯಕನನ್ನು ಕೊಡು' ಎಂದು ಮರ್ದಿತರಾದ ಪುರಷರು, ಸ್ತಿçÃಯರು ಮತ್ತು ಪುಟ್ಟ ಪುಟ್ಟ ಮಕ್ಕಳು ಪ್ರಾರ್ಥಿಸುತ್ತಿರುವಾಗ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಿಮಗೇನಾಗಿದೆ.?
الَّذِينَ آمَنُوا يُقَاتِلُونَ فِي سَبِيلِ اللَّهِ ۖ وَالَّذِينَ كَفَرُوا يُقَاتِلُونَ فِي سَبِيلِ الطَّاغُوتِ فَقَاتِلُوا أَوْلِيَاءَ الشَّيْطَانِ ۖ إِنَّ كَيْدَ الشَّيْطَانِ كَانَ ضَعِيفًا ۝٧٦
📖 ಅನುವಾದ ಆಯತ್ 76
ಸತ್ಯವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಮತ್ತು ಸತ್ಯನಿಷೇಧಿಗಳು ಅಲ್ಲಾಹನ ಹೊರತಾದ ಮಿಥ್ಯಾರಾಧ್ಯರ ಮಾರ್ಗದಲ್ಲಿ ಯುದ್ಧ ಮಾಡುತ್ತಿದ್ದಾರೆ. ಆದ್ದರಿಂದ ನೀವು ಶೈತಾನನ ಮಿತ್ರರೊಂದಿಗೆ ಯುದ್ಧ ಮಾಡಿರಿ. ಖಂಡಿತವಾಗಿಯು ಶೈತಾನನ ಕುತಂತ್ರವು ದುರ್ಬಲವಾಗಿದೆ.
أَلَمْ تَرَ إِلَى الَّذِينَ قِيلَ لَهُمْ كُفُّوا أَيْدِيَكُمْ وَأَقِيمُوا الصَّلَاةَ وَآتُوا الزَّكَاةَ فَلَمَّا كُتِبَ عَلَيْهِمُ الْقِتَالُ إِذَا فَرِيقٌ مِّنْهُمْ يَخْشَوْنَ النَّاسَ كَخَشْيَةِ اللَّهِ أَوْ أَشَدَّ خَشْيَةً ۚ وَقَالُوا رَبَّنَا لِمَ كَتَبْتَ عَلَيْنَا الْقِتَالَ لَوْلَا أَخَّرْتَنَا إِلَىٰ أَجَلٍ قَرِيبٍ ۗ قُلْ مَتَاعُ الدُّنْيَا قَلِيلٌ وَالْآخِرَةُ خَيْرٌ لِّمَنِ اتَّقَىٰ وَلَا تُظْلَمُونَ فَتِيلًا ۝٧٧
📖 ಅನುವಾದ ಆಯತ್ 77
(ಯುದ್ಧಕ್ಕೆ ಹಾತೊರೆಯುತ್ತಿದ್ದವರಿಗೆ) ನಿಮ್ಮ ಕೈಗಳನ್ನು ತಡೆಹಿಡಿದುಕೊಳ್ಳಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂಬ ಆದೇಶ ನೀಡಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರ ಪೈಕಿಯ ಒಂದು ಗುಂಪು ಅಲ್ಲಾಹನನ್ನು ಭಯಪಡುವಂತೆ ಜನರನ್ನು ಭಯಪಡಲಾರಂಭಿಸಿದರು ಅಥವಾ ಅದಕ್ಕಿಂತಲೂ ತೀವ್ರವಾಗಿ ಹೇಳಿದರು: 'ಓ ನಮ್ಮ ಪ್ರಭೂ, ನೀನು ನಮ್ಮ ಮೇಲೆ ಯುದ್ಧವನ್ನು ಏಕೆ ಕಡ್ಡಾಯಗೊಳಿಸಿದೆ? ನಮಗೆ ಇನ್ನೊಂದಿಷ್ಟು ಕಾಲವಕಾಶವೇಕೆ ನೀಡಲಿಲ್ಲ'. ನೀವು ಹೇಳಿರಿ:; ಇಹಲೋಕದ ಸುಖಾನುಭವವು ಅತ್ಯಲ್ಪವಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಪರಲೋಕವೇ ಅತ್ಯುತ್ತಮವಾಗಿದೆ. ನಿಮ್ಮೊಂದಿಗೆ ಒಂದು ನೂಲಿನಷ್ಟು ಅನ್ಯಾಯ ಮಾಡಲಾಗದು.
أَيْنَمَا تَكُونُوا يُدْرِككُّمُ الْمَوْتُ وَلَوْ كُنتُمْ فِي بُرُوجٍ مُّشَيَّدَةٍ ۗ وَإِن تُصِبْهُمْ حَسَنَةٌ يَقُولُوا هَٰذِهِ مِنْ عِندِ اللَّهِ ۖ وَإِن تُصِبْهُمْ سَيِّئَةٌ يَقُولُوا هَٰذِهِ مِنْ عِندِكَ ۚ قُلْ كُلٌّ مِّنْ عِندِ اللَّهِ ۖ فَمَالِ هَٰؤُلَاءِ الْقَوْمِ لَا يَكَادُونَ يَفْقَهُونَ حَدِيثًا ۝٧٨
📖 ಅನುವಾದ ಆಯತ್ 78
ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ಹಿಡಿಯುವುದು. ನೀವು ಸುಭದ್ರ ಕೋಟೆಯೊಳಗಿದ್ದರೂ ಸರಿಯೇ. ಅವರಿಗೇನಾದರೂ ಒಳಿತು ಲಭಿಸಿದರೆ ಇದು ಅಲ್ಲಾಹನಿಂದ ಲಭಿಸಿದೆ ಮತ್ತು ಏನಾದರೂ ಕೆಡುಕು ಬಾಧಿಸಿದರೆ ಇದು ನಿನ್ನಿಂದಾಗಿ ಉಂಟಾಗಿದೆAದು ಹೇಳುತ್ತಾರೆ. ಅವರಿಗೆ ಹೇಳಿರಿ: ಇವೆಲ್ಲವೂ ಅಲ್ಲಾಹನ ಕಡೆಯಿಂದಾಗಿದೆ. ಅವರಿಗೇನಾಗಿಬಿಟ್ಟಿದೆ? ಅವರು ಯಾವುದೇ ಮಾತನ್ನು ಅರ್ಥ ಮಾಡಿಕೊಳ್ಳುವ ಸನಿಹದಲ್ಲಿಲ್ಲವಲ್ಲಾ?
مَّا أَصَابَكَ مِنْ حَسَنَةٍ فَمِنَ اللَّهِ ۖ وَمَا أَصَابَكَ مِن سَيِّئَةٍ فَمِن نَّفْسِكَ ۚ وَأَرْسَلْنَاكَ لِلنَّاسِ رَسُولًا ۚ وَكَفَىٰ بِاللَّهِ شَهِيدًا ۝٧٩
📖 ಅನುವಾದ ಆಯತ್ 79
ಓ ಮಾನವ ಲಭಿಸುವ ಪ್ರತಿಯೊಂದು ಒಳಿತು ನಿನಗೆ ಅಲ್ಲಾಹನ ಕಡೆಯಿಂದಾಗಿದೆ ಮತ್ತು ನಿನಗೆ ಬಾಧಿಸುವ ಪ್ರತಿಯೊಂದು ಕೆಡುಕು ಸ್ವತಃ ನಿನ್ನಿಂದಲೇ ಉಂಟಾಗಿರುತ್ತದೆ. ಓ ಪೈಗಂಬರÀರೇ ನಾವು ನಿಮ್ಮನ್ನು ಸಕಲ ಮನುಷ್ಯರಿಗೆ ಸಂದೇಶವಾಹಕರಾಗಿ ಕಳುಹಿಸಿದ್ದೇವೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.
مَّن يُطِعِ الرَّسُولَ فَقَدْ أَطَاعَ اللَّهَ ۖ وَمَن تَوَلَّىٰ فَمَا أَرْسَلْنَاكَ عَلَيْهِمْ حَفِيظًا ۝٨٠
📖 ಅನುವಾದ ಆಯತ್ 80
ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಖಂಡಿತವಾಗಿಯು ಅವನು ಅಲ್ಲಾಹನನ್ನು ಅನುಸರಿಸಿದನು ಮತ್ತು ಯಾರು ವಿಮುಖನಾಗುತ್ತಾನೊ ಅವರ ಮೇಲೆ ನಾವು ನಿಮ್ಮನ್ನು ಕಾವಲುಗಾರನಾಗಿ ನಿಯೋಗಿಸಿಲ್ಲ.
وَيَقُولُونَ طَاعَةٌ فَإِذَا بَرَزُوا مِنْ عِندِكَ بَيَّتَ طَائِفَةٌ مِّنْهُمْ غَيْرَ الَّذِي تَقُولُ ۖ وَاللَّهُ يَكْتُبُ مَا يُبَيِّتُونَ ۖ فَأَعْرِضْ عَنْهُمْ وَتَوَكَّلْ عَلَى اللَّهِ ۚ وَكَفَىٰ بِاللَّهِ وَكِيلًا ۝٨١
📖 ಅನುವಾದ ಆಯತ್ 81
ನಾವು ಅನುಸರಿಸುವೆವು ಎಂದು ಅವರು ಹೇಳುತ್ತಾರೆ ಅನಂತರ ಅವರು ನಿಮ್ಮ ಬಳಿಯಿಂದ ಎದ್ದು ಹೋದರೆ ಅವರಲ್ಲಿನ ಒಂದು ಗುಂಪು ನೀವು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ ರಾತ್ರಿ ವೇಳೆ ಗೂಢಾಲೋಚನೆ ನಡೆಸುತ್ತಾರೆ. ಅವರ ರಾತ್ರಿ ವೇಳೆಯ ಗೂಢಾಲೋಚನೆಗಳನ್ನು ಅಲ್ಲಾಹನು ದಾಖಲಿಸುತ್ತಿರುವನು. ಆದ್ದರಿಂದ ನೀವು ಅರವನ್ನು ಕಡೆಗಣಿಸಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಕಾರ್ಯನಿರ್ವಾಹಕನಾಗಿ ಅಲ್ಲಾಹನೇ ಸಾಕು.
أَفَلَا يَتَدَبَّرُونَ الْقُرْآنَ ۚ وَلَوْ كَانَ مِنْ عِندِ غَيْرِ اللَّهِ لَوَجَدُوا فِيهِ اخْتِلَافًا كَثِيرًا ۝٨٢
📖 ಅನುವಾದ ಆಯತ್ 82
ಅವರು ಕುರ್‌ಆನಿನ ಕುರಿತು ಆಳವಾಗಿ ಚಿಂತಿಸುವುದಿಲ್ಲವೇ? ಅದು ಅಲ್ಲಾಹನ ಹೊರತು ಇನ್ನಾರದೇ ಕಡೆಯಿಂದಿರುತ್ತಿದ್ದರೆ ಖಂಡಿತ ಅವರು ಅದರಲ್ಲಿ ಬಹಳ ವೈರುಧ್ಯಗಳನ್ನು ಕಾಣುತ್ತಿದ್ದರು.
وَإِذَا جَاءَهُمْ أَمْرٌ مِّنَ الْأَمْنِ أَوِ الْخَوْفِ أَذَاعُوا بِهِ ۖ وَلَوْ رَدُّوهُ إِلَى الرَّسُولِ وَإِلَىٰ أُولِي الْأَمْرِ مِنْهُمْ لَعَلِمَهُ الَّذِينَ يَسْتَنبِطُونَهُ مِنْهُمْ ۗ وَلَوْلَا فَضْلُ اللَّهِ عَلَيْكُمْ وَرَحْمَتُهُ لَاتَّبَعْتُمُ الشَّيْطَانَ إِلَّا قَلِيلًا ۝٨٣
📖 ಅನುವಾದ ಆಯತ್ 83
ಅವರಿಗೆ ಯಾವುದಾದರೂ ಶಾಂತಿ ಅಥವಾ ಭೀತಿಯ ಸುದ್ಧಿ ಲಭಿಸಿದರೆ ಅವರದನ್ನು ಪ್ರಚಾರ ಮಾಡುತ್ತಾರೆ. ಅವರೇನಾದರೂ ಅದನ್ನು ಸಂದೇಶವಾಹಕ(ಸ)ರಿಗೂ ಮತ್ತು ಅಧಿಕಾರಸ್ಥರಿಗೆ ಒಪ್ಪಿಸುತ್ತಿದ್ದರೆ ಅವರ ಪೈಕಿ ವಿಚಾರಗಳನ್ನು ಆಳವಾಗಿ ಚಿಂತಿಸುವವರು ಅದರ ವಾಸ್ತವಿಕತೆಯನ್ನು ಅರಿತುಕೊಳ್ಳುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಇಲ್ಲದಿರುತ್ತಿದ್ದರೆ ಕೆಲವರ ಹೊರತು ನೀವೆಲ್ಲರೂ ಶೈತಾನನನ್ನು ಅನುಸರಿಸುತ್ತಿದ್ದೀರಿ.
فَقَاتِلْ فِي سَبِيلِ اللَّهِ لَا تُكَلَّفُ إِلَّا نَفْسَكَ ۚ وَحَرِّضِ الْمُؤْمِنِينَ ۖ عَسَى اللَّهُ أَن يَكُفَّ بَأْسَ الَّذِينَ كَفَرُوا ۚ وَاللَّهُ أَشَدُّ بَأْسًا وَأَشَدُّ تَنكِيلًا ۝٨٤
📖 ಅನುವಾದ ಆಯತ್ 84
ಆದ್ದರಿಂದ (ಓ ಪೈಗಂಬರರೇ) ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನಿಮ್ಮ ಮೇಲೆ ನಿಮ್ಮದಲ್ಲದೆ ಇತರರ ಹೊಣೆಯಿಲ್ಲ. ನೀವು ಸತ್ಯವಿಶ್ವಾಸಿಗಳನ್ನು (ಯುದ್ಧಕ್ಕಾಗಿ) ಹುರಿದುಂಬಿಸಿರಿ ಅಲ್ಲಾಹನು ಸತ್ಯನಿಷೇಧಿಗಳ ಅತಿಕ್ರಮಣವನ್ನು ತಡೆಯುವ ಹೆಚ್ಚಿನ ಸಾಧ್ಯತೆಯಿದೆ. ಅಲ್ಲಾಹನು ಅತ್ಯಂತ ಆಕ್ರಮಣ ಶೀಲನೂ, ಕಠಿಣವಾಗಿ ಶಿಕ್ಷಿಸುವವನು ಆಗಿದ್ದಾನೆ.
مَّن يَشْفَعْ شَفَاعَةً حَسَنَةً يَكُن لَّهُ نَصِيبٌ مِّنْهَا ۖ وَمَن يَشْفَعْ شَفَاعَةً سَيِّئَةً يَكُن لَّهُ كِفْلٌ مِّنْهَا ۗ وَكَانَ اللَّهُ عَلَىٰ كُلِّ شَيْءٍ مُّقِيتًا ۝٨٥
📖 ಅನುವಾದ ಆಯತ್ 85
ಯಾರು ಯಾವುದಾದರೂ ಒಳಿತಿನ ಶಿಫಾರಸ್ಸು ಮಾಡುತ್ತಾನೋ ಅವನಿಗೂ ಅದರಲ್ಲಿ ಒಂದು ಪಾಲು ಲಭಿಸುವುದು ಮತ್ತು ಯಾರು ಕೆಡುಕಿನ ಶಿಫಾರಸ್ಸು ಮಾಡುತ್ತಾನೋ ಅದರಲ್ಲಿ ಅವನಿಗೊಂದು ಪಾಲಿದೆ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
وَإِذَا حُيِّيتُم بِتَحِيَّةٍ فَحَيُّوا بِأَحْسَنَ مِنْهَا أَوْ رُدُّوهَا ۗ إِنَّ اللَّهَ كَانَ عَلَىٰ كُلِّ شَيْءٍ حَسِيبًا ۝٨٦
📖 ಅನುವಾದ ಆಯತ್ 86
ನಿಮಗೆ ಸಲಾಮ್ ಹೇಳಲಾದರೆ ನೀವು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ಅಥವಾ ಅದೇ ರೀತಿಯಲ್ಲಿ ಪ್ರತಿ ಸಲಾಮ್ ಹೇಳಿರಿ. ಖಂಡಿತವಾಗಿಯು ಅಲ್ಲಾಹನು ಪ್ರತಿಯೊಂದು ಸಂಗತಿಯ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.
اللَّهُ لَا إِلَٰهَ إِلَّا هُوَ ۚ لَيَجْمَعَنَّكُمْ إِلَىٰ يَوْمِ الْقِيَامَةِ لَا رَيْبَ فِيهِ ۗ وَمَنْ أَصْدَقُ مِنَ اللَّهِ حَدِيثًا ۝٨٧
📖 ಅನುವಾದ ಆಯತ್ 87
ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಪುನರುತ್ಥಾನದ ದಿನ ಖಂಡಿತ ಅವನು ನಿಮ್ಮೆಲ್ಲರನ್ನು ಒಟ್ಟು ಸೇರಿಸುವನು. ಅದರ ಆಗಮನದಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲಾಹನಿಗಿಂತ ಅಧಿಕ ಸತ್ಯ ಮಾತನ್ನಾಡುವವನು ಇನ್ನಾರಿದ್ದಾನೆ?
۞ فَمَا لَكُمْ فِي الْمُنَافِقِينَ فِئَتَيْنِ وَاللَّهُ أَرْكَسَهُم بِمَا كَسَبُوا ۚ أَتُرِيدُونَ أَن تَهْدُوا مَنْ أَضَلَّ اللَّهُ ۖ وَمَن يُضْلِلِ اللَّهُ فَلَن تَجِدَ لَهُ سَبِيلًا ۝٨٨
📖 ಅನುವಾದ ಆಯತ್ 88
ಕಪಟ ವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗುತ್ತೀರಿ? ವಸ್ತುತಃ ಅವರನ್ನು ಅಲ್ಲಾಹನು ಅವರ ಕರ್ಮಗಳ ನಿಮಿತ್ತ ಅಧೋಮುಖಿಗಳನ್ನಾಗಿಸಿರುವನು. ಅಲ್ಲಾಹನು ಪಥಭ್ರಷ್ಟಗೊಳಿಸಿರುವವನನ್ನು ನೀವು ಸನ್ಮಾರ್ಗ ನೀಡಲು ಇಚ್ಛಿಸುತ್ತೀರಾ? ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವನಿಗೆ ನೀವು ಯಾವ ಮಾರ್ಗವನ್ನೂ ಪಡೆಯಲಾರಿರಿ.
وَدُّوا لَوْ تَكْفُرُونَ كَمَا كَفَرُوا فَتَكُونُونَ سَوَاءً ۖ فَلَا تَتَّخِذُوا مِنْهُمْ أَوْلِيَاءَ حَتَّىٰ يُهَاجِرُوا فِي سَبِيلِ اللَّهِ ۚ فَإِن تَوَلَّوْا فَخُذُوهُمْ وَاقْتُلُوهُمْ حَيْثُ وَجَدتُّمُوهُمْ ۖ وَلَا تَتَّخِذُوا مِنْهُمْ وَلِيًّا وَلَا نَصِيرًا ۝٨٩
📖 ಅನುವಾದ ಆಯತ್ 89
ಅವರು ಸತ್ಯನಿಷೇಧಿಗಳಾಗಿರುವಂತೆ ನೀವು ಸತ್ಯನಿಷೇಧಿಗಳಾಗಿ ಅನಂತರ ಎಲ್ಲರೂ ಸಮಾನರಾಗಬೇಕೆಂದು ಅವರು ಬಯಸುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ನಾಡನ್ನು ತ್ಯಜಿಸುವವರಗೆ ನೀವು ಅವರ ಪೈಕಿ ಯಾರನ್ನೂ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಇನ್ನು ಅವರು ವಿಮುಖರಾಗುವುದಾದರೆ ನೀವು ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ ಮತ್ತು ನೀವು ಅವರ ಪೈಕಿ ಯಾರನ್ನೂ ನಿಮ್ಮ ಮಿತ್ರರಾಗಿ ಹಾಗೂ ಸಹಾಯಕರಾಗಿ ಮಾಡಿಕೊಳ್ಳಬೇಡಿರಿ.
إِلَّا الَّذِينَ يَصِلُونَ إِلَىٰ قَوْمٍ بَيْنَكُمْ وَبَيْنَهُم مِّيثَاقٌ أَوْ جَاءُوكُمْ حَصِرَتْ صُدُورُهُمْ أَن يُقَاتِلُوكُمْ أَوْ يُقَاتِلُوا قَوْمَهُمْ ۚ وَلَوْ شَاءَ اللَّهُ لَسَلَّطَهُمْ عَلَيْكُمْ فَلَقَاتَلُوكُمْ ۚ فَإِنِ اعْتَزَلُوكُمْ فَلَمْ يُقَاتِلُوكُمْ وَأَلْقَوْا إِلَيْكُمُ السَّلَمَ فَمَا جَعَلَ اللَّهُ لَكُمْ عَلَيْهِمْ سَبِيلًا ۝٩٠
📖 ಅನುವಾದ ಆಯತ್ 90
ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಒಂದು ಸಮೂಹದೊಂದಿಗೆ ಸೇರಿಕೊಂಡವರ ಅಥವಾ ನಿಮ್ಮೊಂದಿಗೆ ಯುದ್ಧ ಮಾಡಲಿಕ್ಕಾಗಲೀ, ಸ್ವತಃ ತಮ್ಮ ಜನರೊಂದಿಗೆ ಯುದ್ಧ ಮಾಡಲಿಕ್ಕಾಗಿ ಇಷ್ಟವಿಲ್ಲದೆ ನಿಮ್ಮ ಬಳಿಗೆ ಬರುವವರ ಹೊರತು. ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ನೀಡುತ್ತಿದ್ದನು. ಮತ್ತು ನಿಮ್ಮೆಡೆಗೆ ಶಾಂತಿಯ ಪ್ರಸ್ತಾಪವನ್ನಿಟ್ಟರೆ ಅಲ್ಲಾಹನು ಅವರ ವಿರುದ್ಧ ಯಾವ ಯುದ್ಧ ಮಾರ್ಗವನ್ನೂ ನಿಮಗೆ ಕೊಟ್ಟಿರುವುದಿಲ್ಲ.
سَتَجِدُونَ آخَرِينَ يُرِيدُونَ أَن يَأْمَنُوكُمْ وَيَأْمَنُوا قَوْمَهُمْ كُلَّ مَا رُدُّوا إِلَى الْفِتْنَةِ أُرْكِسُوا فِيهَا ۚ فَإِن لَّمْ يَعْتَزِلُوكُمْ وَيُلْقُوا إِلَيْكُمُ السَّلَمَ وَيَكُفُّوا أَيْدِيَهُمْ فَخُذُوهُمْ وَاقْتُلُوهُمْ حَيْثُ ثَقِفْتُمُوهُمْ ۚ وَأُولَٰئِكُمْ جَعَلْنَا لَكُمْ عَلَيْهِمْ سُلْطَانًا مُّبِينًا ۝٩١
📖 ಅನುವಾದ ಆಯತ್ 91
ಬೇರೊಂದು ಸಮುದಾಯವನ್ನು ನೀವು ಕಾಣುವಿರಿ. ಅವರು ನಿಮ್ಮೊಂದಿಗೂ ಸ್ವತಃ ತಮ್ಮ ಜನರೊಂದಿಗೂ ಅಭಯವನ್ನು ಬಯಸುತ್ತಾರೆ. (ಆದರೆ) ಕ್ಷೆÆÃಭೆಯೆಡೆಗೆ ಅವರನ್ನು ಮರಳಿಸಲಾಗುವಾಗ ಅದರಲ್ಲಿ ಅವರು ಅಧೋಮುಖಿಗಳಾಗಿ ಬೀಳುತ್ತಾರೆ. ಅವರೇನಾದರೂ ನಿಮ್ಮಿಂದ ದೂರ ಸರಿದು ನಿಮ್ಮ ಮುಂದೆ ಶಾಂತಿಯ ಪ್ರಸ್ತಾಪವನ್ನಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ. ನಾವು ಅವರ ವಿರುದ್ಧ ನಿಮಗೆ ಸ್ಪಷ್ಟವಾದ ಅಧಿಕಾರವನ್ನು ನೀಡಿರುತ್ತೇವೆ.
وَمَا كَانَ لِمُؤْمِنٍ أَن يَقْتُلَ مُؤْمِنًا إِلَّا خَطَأً ۚ وَمَن قَتَلَ مُؤْمِنًا خَطَأً فَتَحْرِيرُ رَقَبَةٍ مُّؤْمِنَةٍ وَدِيَةٌ مُّسَلَّمَةٌ إِلَىٰ أَهْلِهِ إِلَّا أَن يَصَّدَّقُوا ۚ فَإِن كَانَ مِن قَوْمٍ عَدُوٍّ لَّكُمْ وَهُوَ مُؤْمِنٌ فَتَحْرِيرُ رَقَبَةٍ مُّؤْمِنَةٍ ۖ وَإِن كَانَ مِن قَوْمٍ بَيْنَكُمْ وَبَيْنَهُم مِّيثَاقٌ فَدِيَةٌ مُّسَلَّمَةٌ إِلَىٰ أَهْلِهِ وَتَحْرِيرُ رَقَبَةٍ مُّؤْمِنَةٍ ۖ فَمَن لَّمْ يَجِدْ فَصِيَامُ شَهْرَيْنِ مُتَتَابِعَيْنِ تَوْبَةً مِّنَ اللَّهِ ۗ وَكَانَ اللَّهُ عَلِيمًا حَكِيمًا ۝٩٢
📖 ಅನುವಾದ ಆಯತ್ 92
ಒಬ್ಬ ಸತ್ಯವಿಶ್ವಾಸಿಯನ್ನು ವಧಿಸುವುದು ಪ್ರಮಾದದ ಹೊರತು ಭೂಷಣವಲ್ಲ. ಪ್ರಮಾದವಶಾತ್ ಯಾರಾದರೂ ಒಬ್ಬ ಸತ್ಯವಿಶ್ವಾಸಿಯನ್ನು ವಧಿಸಿಬಿಟ್ಟರೆ ಪ್ರಾಯಶ್ಚಿತವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಬಿಡುಗಡೆಗೊಳಿಸಬೇಕು. ಮತ್ತು ಅವನ (ಹತನಾದವನ) ಕುಟುಂಬದವರಿಗೆ ಪರಿಹಾರ ಧನವನ್ನು ನೀಡಬೇಕು. ಆದರೆ ಅವರು ಕುಟುಂಬದವರು ಅದನ್ನು ದಾನವಾಗಿ ಬಿಟ್ಟುಕೊಡುವುದಾದರೆ ಬೇರೆ ವಿಚಾರ ಮತ್ತು ಕೊಲೆಗೀಡಾದವನು ನಿಮ್ಮ ಶತ್ರು ಸಮೂಹದವನಾಗಿದ್ದು, ಅವನು ವಿಶ್ವಾಸಿಯಾಗಿದ್ದರೆ ಕೇವಲ ಸತ್ಯವಿಶ್ವಾಸಿಯಾದ ಓರ್ವ ಗುಲಾಮನನ್ನು ಬಿಡುಗಡೆ ಗೊಳಿಸುವುದು ಕಡ್ಡಾಯವಾಗಿದೆ. ಇನ್ನು ಅವನು (ಕೊಲೆಗೀಡಾದವನು) ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಸಮೂಹದವನಾಗಿದ್ದರೆ ಪರಿಹಾರಧನ ಕಡ್ಡಾಯವಾಗಿದೆ. ಮತ್ತು ಅವನ ವಾರೀಸುದಾರರಿಗೆ ಅದನ್ನು ನೀಡಬೇಕು. ಮತ್ತು ಒಬ್ಬ ವಿಶ್ವಾಸಿಯಾದ ಗುಲಾಮನನ್ನು ಬಿಡುಗಡೆಗೊಳಿಸಬೇಕಾಗಿದೆ. ಇನ್ನು ಯಾರಿಗಾದರು ಅದರ ಸಾಮರ್ಥ್ಯವಿಲ್ಲದಿದ್ದರೆ ಅವನ ಮೇಲೆ ನಿರಂತರ ಎರಡು ತಿಂಗಳು ಉಪವಾಸ ಆಚರಿಸುವ ಹೊಣೆಯಿದೆ. ಇದು ಅಲ್ಲಾಹನಿಂದ ಕ್ಷಮೆ ಸಿಗಲೆಂದಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَمَن يَقْتُلْ مُؤْمِنًا مُّتَعَمِّدًا فَجَزَاؤُهُ جَهَنَّمُ خَالِدًا فِيهَا وَغَضِبَ اللَّهُ عَلَيْهِ وَلَعَنَهُ وَأَعَدَّ لَهُ عَذَابًا عَظِيمًا ۝٩٣
📖 ಅನುವಾದ ಆಯತ್ 93
ಯಾರಾದರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ಕೊಂದರೆ ಅವನಿಗಿರುವ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಶಾಶ್ವತವಾಗಿರುವನು. ಅವನ ಮೆಲೆ ಅಲ್ಲಾಹನ ಕ್ರೋಧ ಹಾಗೂ ಶಾಪವಿದೆ. ಅವನನ್ನು ಅಲ್ಲಾಹನು ಶಪಿಸುವನು ಮತ್ತು ಅವನಿಗೋಸ್ಕರ ಅಲ್ಲಾಹನು ಮಹಾಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
يَا أَيُّهَا الَّذِينَ آمَنُوا إِذَا ضَرَبْتُمْ فِي سَبِيلِ اللَّهِ فَتَبَيَّنُوا وَلَا تَقُولُوا لِمَنْ أَلْقَىٰ إِلَيْكُمُ السَّلَامَ لَسْتَ مُؤْمِنًا تَبْتَغُونَ عَرَضَ الْحَيَاةِ الدُّنْيَا فَعِندَ اللَّهِ مَغَانِمُ كَثِيرَةٌ ۚ كَذَٰلِكَ كُنتُم مِّن قَبْلُ فَمَنَّ اللَّهُ عَلَيْكُمْ فَتَبَيَّنُوا ۚ إِنَّ اللَّهَ كَانَ بِمَا تَعْمَلُونَ خَبِيرًا ۝٩٤
📖 ಅನುವಾದ ಆಯತ್ 94
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನ ಮಾರ್ಗದಲ್ಲಿ ಪ್ರಯಾಣಕ್ಕೆ ಹೊರಟರೆ ಮತ್ತು ಯಾರಾದರೂ ನಿಮಗೆ ಸಲಾಮ್ ಹೇಳಿದರೆ ಅವನೊಂದಿಗೆ ನೀನು ವಿಶ್ವಾಸಿಯಲ್ಲ ಎಂದು ಹೇಳಬೇಡಿರಿ. ನೀವು ಐಹಿಕ ಜೀವನೋಪಾಯಗಳನ್ನು ಬಯಸುತ್ತಿದ್ದರೆ ಅಲ್ಲಾಹನ ಬಳಿ ಧಾರಾಳ ಸಂಪತ್ತುಗಳಿವೆ. ಈ ಮುಂಚೆ ನೀವು ಸಹ ಅವಿಶ್ವಾಸಿಗಳಾಗಿದ್ದೀರಿ. ಅನಂತರ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದನು. ಆದ್ದರಿಂದ ನೀವು ತನಿಖೆ ಮಾಡಿ ತಿಳಿದುಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಸೂಕ್ಷö್ಮ ಅರಿವುಳ್ಳನಾಗಿದ್ದಾನೆ.
لَّا يَسْتَوِي الْقَاعِدُونَ مِنَ الْمُؤْمِنِينَ غَيْرُ أُولِي الضَّرَرِ وَالْمُجَاهِدُونَ فِي سَبِيلِ اللَّهِ بِأَمْوَالِهِمْ وَأَنفُسِهِمْ ۚ فَضَّلَ اللَّهُ الْمُجَاهِدِينَ بِأَمْوَالِهِمْ وَأَنفُسِهِمْ عَلَى الْقَاعِدِينَ دَرَجَةً ۚ وَكُلًّا وَعَدَ اللَّهُ الْحُسْنَىٰ ۚ وَفَضَّلَ اللَّهُ الْمُجَاهِدِينَ عَلَى الْقَاعِدِينَ أَجْرًا عَظِيمًا ۝٩٥
📖 ಅನುವಾದ ಆಯತ್ 95
ತನ್ನ ಜೀವ ಮತ್ತು ಸಂಪತ್ತುಗಳೊAದಿಗೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವ ಸತ್ಯವಿಶ್ವಾಸಿಗಳು ಮತ್ತು ಕಾರಣವಿಲ್ಲದೆಯೇ ಮನೆಗಳಲ್ಲಿ ಕುಳಿತು ಬಿಟ್ಟಿರುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತಮ್ಮ ಜೀವ ಮತ್ತು ಸಂಪತ್ತುಗಳೊAದಿಗೆ ಯುದ್ಧ ಮಾಡುವವರನ್ನು ಮನೆಗಳಲ್ಲಿ ಕುಳಿತುಕೊಂಡಿರುವವರ ಮೇಲೆ ಅಲ್ಲಾಹನು ಪದವಿಗಳಲ್ಲಿ ಶ್ರೇಷ್ಠತೆ ನೀಡಿರುವನು. ಅಲ್ಲಾಹನು ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ಆದರೆ ಅಲ್ಲಾಹನು ಮನೆಗೆಗಳಲ್ಲಿ ಕುಳಿತುಕೊಂಡಿರುವವರಿ ಗಿಂತ ಹೋರಾಡುವವರಿಗೆ ಮಹಾ ಪ್ರತಿಫಲವನ್ನು ನೀಡಿ ಶ್ರೇಷ್ಠರನ್ನಾಗಿ ಮಾಡಿರುವನು.
دَرَجَاتٍ مِّنْهُ وَمَغْفِرَةً وَرَحْمَةً ۚ وَكَانَ اللَّهُ غَفُورًا رَّحِيمًا ۝٩٦
📖 ಅನುವಾದ ಆಯತ್ 96
ಅವನ ವತಿಯಿಂದ ಪದವಿಗಳು ಪಾಪವಿಮೋಚನೆ ಮತ್ತು ಕಾರುಣ್ಯವು ಲಭಿಸುವುದು ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
إِنَّ الَّذِينَ تَوَفَّاهُمُ الْمَلَائِكَةُ ظَالِمِي أَنفُسِهِمْ قَالُوا فِيمَ كُنتُمْ ۖ قَالُوا كُنَّا مُسْتَضْعَفِينَ فِي الْأَرْضِ ۚ قَالُوا أَلَمْ تَكُنْ أَرْضُ اللَّهِ وَاسِعَةً فَتُهَاجِرُوا فِيهَا ۚ فَأُولَٰئِكَ مَأْوَاهُمْ جَهَنَّمُ ۖ وَسَاءَتْ مَصِيرًا ۝٩٧
📖 ಅನುವಾದ ಆಯತ್ 97
ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿರುವವರ ಆತ್ಮವನ್ನು ದೂತರು ವಶಪಡಿಸಿಕೊಳ್ಳುವಾಗ ನೀವು ಯಾವ ಸ್ಥಿತಿಯಲ್ಲಿದ್ದಿರಿ? ಎಂದು ಅವರೊಂದಿಗೆ ಕೇಳುವರು: ನಾವು ನಮ್ಮ ನಾಡಿನಲ್ಲಿ ದುರ್ಬಲರಾಗಿದ್ದೆವು ಎಂದು ಅವರು ಉತ್ತರಿಸುವರು. ಅವರು (ದೂತರು) ಕೇಳುವರು: ನೀವು ನಿಮ್ಮ ನಾಡನ್ನು ಬಿಟ್ಟು ಅನ್ಯ ನಾಡಿಗೆ ಹೋಗುವಷ್ಟು ಅಲ್ಲಾಹನ ಭೂಮಿ ವಿಶಾಲವಾಗಿರಲಿಲ್ಲವೇ? ಅಂತಹ ಜನರ ವಾಸಸ್ಥಳವು ನರಕವಾಗಿದೆ. ಮತ್ತು ಅದು ಕೆಟ್ಟ ವಾಸಸ್ಥಳವಾಗಿದೆ.
إِلَّا الْمُسْتَضْعَفِينَ مِنَ الرِّجَالِ وَالنِّسَاءِ وَالْوِلْدَانِ لَا يَسْتَطِيعُونَ حِيلَةً وَلَا يَهْتَدُونَ سَبِيلًا ۝٩٨
📖 ಅನುವಾದ ಆಯತ್ 98
ಆದರೆ ಯಾವುದೇ ಯೋಜನೆಯನ್ನು ರೂಪಿಸಲಾಗದ, ಮತ್ತು ಮರ್ಗೋಪಾಯವಿಲ್ಲದ ಅಸಹಾಯಕ ಸ್ತಿçÃ-ಪುರುಷರು ಮತ್ತು ಮಕ್ಕಳ ಹೊರತು;
فَأُولَٰئِكَ عَسَى اللَّهُ أَن يَعْفُوَ عَنْهُمْ ۚ وَكَانَ اللَّهُ عَفُوًّا غَفُورًا ۝٩٩
📖 ಅನುವಾದ ಆಯತ್ 99
ಅಲ್ಲಾಹನು ಅವರನ್ನು ಮನ್ನಿಸಿಬಿಡಬಹುದು. ಅಲ್ಲಾಹನು ಅತ್ಯಧಿಕ ಮನ್ನಿಸುವವನು, ಕ್ಷಮಾಶೀಲನು ಆಗಿದ್ದಾನೆ.
۞ وَمَن يُهَاجِرْ فِي سَبِيلِ اللَّهِ يَجِدْ فِي الْأَرْضِ مُرَاغَمًا كَثِيرًا وَسَعَةً ۚ وَمَن يَخْرُجْ مِن بَيْتِهِ مُهَاجِرًا إِلَى اللَّهِ وَرَسُولِهِ ثُمَّ يُدْرِكْهُ الْمَوْتُ فَقَدْ وَقَعَ أَجْرُهُ عَلَى اللَّهِ ۗ وَكَانَ اللَّهُ غَفُورًا رَّحِيمًا ۝١٠٠
📖 ಅನುವಾದ ಆಯತ್ 100
ಯಾರು ಅಲ್ಲಾಹನ ಮಾರ್ಗದಲ್ಲಿ ತನ್ನ ನಾಡನ್ನು ತ್ಯಜಿಸುತ್ತಾನೋ ಅವನು ಭೂಮಿಯಲ್ಲಿ ಧಾರಾಳ ಅಭಯಸ್ಥಾನಗಳನ್ನೂ, ವೈಶಾಲ್ಯತೆಗಳನ್ನೂ ಪಡೆಯುವನು ಮತ್ತು ಯಾರು ತನ್ನ ಮನೆಯಿಂದ ಅಲ್ಲಾಹನೆಡೆಗೂ, ಅವನ ಸಂದೇಶವಾಹಕ ರೆಡೆಗೂ ಹೊರಟು ಅನಂತರ ಸಾವಿಗೀಡಾದರೆ ಖಂಡಿತ ಅವನ ಪ್ರತಿಫಲ ಅಲ್ಲಾಹನ ಬಳಿ ಖಚಿತವಾಗಿ ಬಿಟ್ಟಿತು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
وَإِذَا ضَرَبْتُمْ فِي الْأَرْضِ فَلَيْسَ عَلَيْكُمْ جُنَاحٌ أَن تَقْصُرُوا مِنَ الصَّلَاةِ إِنْ خِفْتُمْ أَن يَفْتِنَكُمُ الَّذِينَ كَفَرُوا ۚ إِنَّ الْكَافِرِينَ كَانُوا لَكُمْ عَدُوًّا مُّبِينًا ۝١٠١
📖 ಅನುವಾದ ಆಯತ್ 101
ನೀವು ಪ್ರಯಾಣಿಸುತ್ತಿರುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದಲ್ಲಿ ನೀವು ನಮಾಝನ್ನು ಸಂಕ್ಷಿಪ್ತಗೊಳಿಸಿ ನಿರ್ವಹಿಸುವುದರಲ್ಲಿ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಖಂಡಿತವಾಗಿಯು ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
وَإِذَا كُنتَ فِيهِمْ فَأَقَمْتَ لَهُمُ الصَّلَاةَ فَلْتَقُمْ طَائِفَةٌ مِّنْهُم مَّعَكَ وَلْيَأْخُذُوا أَسْلِحَتَهُمْ فَإِذَا سَجَدُوا فَلْيَكُونُوا مِن وَرَائِكُمْ وَلْتَأْتِ طَائِفَةٌ أُخْرَىٰ لَمْ يُصَلُّوا فَلْيُصَلُّوا مَعَكَ وَلْيَأْخُذُوا حِذْرَهُمْ وَأَسْلِحَتَهُمْ ۗ وَدَّ الَّذِينَ كَفَرُوا لَوْ تَغْفُلُونَ عَنْ أَسْلِحَتِكُمْ وَأَمْتِعَتِكُمْ فَيَمِيلُونَ عَلَيْكُم مَّيْلَةً وَاحِدَةً ۚ وَلَا جُنَاحَ عَلَيْكُمْ إِن كَانَ بِكُمْ أَذًى مِّن مَّطَرٍ أَوْ كُنتُم مَّرْضَىٰ أَن تَضَعُوا أَسْلِحَتَكُمْ ۖ وَخُذُوا حِذْرَكُمْ ۗ إِنَّ اللَّهَ أَعَدَّ لِلْكَافِرِينَ عَذَابًا مُّهِينًا ۝١٠٢
📖 ಅನುವಾದ ಆಯತ್ 102
ಪೈಗಂಬರರೇ, ನೀವು ಅವರ (ಮುಜಾಹಿದ್‌ಗಳ) ಜೊತೆಗಿದ್ದು, ಅವರ ನಮಾಝ್‌ನ ನೇತೃತ್ವ ನಿರ್ವಹಿಸುತ್ತಿರುವಾಗ ಅವರಲ್ಲಿ ಒಂದು ಗುಂಪು ನಿಮ್ಮ ಹಿಂದೆ ಬಂದು ನಿಲ್ಲಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್(ಸಾಷ್ಟಾಂಗ)ಮುಗಿಸಿದ ನಂತರ ಸರಿದು ನಿಂತು ನಮಾಝ್ ಮಾಡಿರದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ಮಾಡಲಿ. ಅವರು ಎಚ್ಚರ ವಹಿಸಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಆಯುಧಗಳನ್ನು ಮತ್ತು ಸಾವiಗ್ರಿಗಳ ಕುರಿತು ಅಲಕ್ಷö್ಯರಾದರೆ, ನಿಮ್ಮ ಮೇಲೆ ಒಮ್ಮೇಲೆ ಮುಗಿಬೀಳಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನಿಮಗೆ ಮಳೆ ಅಥವಾ ರೋಗದ ನಿಮಿತ್ತ ತೊಂದರೆಯಿದ್ದರೆ ನಿಮ್ಮ ಆಯುಧಗಳನ್ನು ಕೆಳಗಿಡುವುದುರಲ್ಲಿ ದೋಷವಿಲ್ಲ ಮತ್ತು ನೀವು ನಿಮ್ಮ ಎಚ್ಚರ ವಹಿಸಿರಿ ಖಂಡಿತವಾಗಿಯು ಅಲ್ಲಾಹನು ಆ ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
فَإِذَا قَضَيْتُمُ الصَّلَاةَ فَاذْكُرُوا اللَّهَ قِيَامًا وَقُعُودًا وَعَلَىٰ جُنُوبِكُمْ ۚ فَإِذَا اطْمَأْنَنتُمْ فَأَقِيمُوا الصَّلَاةَ ۚ إِنَّ الصَّلَاةَ كَانَتْ عَلَى الْمُؤْمِنِينَ كِتَابًا مَّوْقُوتًا ۝١٠٣
📖 ಅನುವಾದ ಆಯತ್ 103
ನೀವು ನಮಾಝ್ ನಿರ್ವಹಿಸಿದ ನಂತರ ನಿಂತುಕೊAಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹನನ್ನು ಸ್ಮರಿಸಿರಿ. ಮತ್ತು ಶಾಂತತೆ ಪ್ರಾಪ್ತವಾದರೆ ನಮಾಝನ್ನು ಕ್ರಮ ಪ್ರಕಾರ ನಿರ್ವಹಿಸಿರಿ. ಖಂಡಿತವಾಗಿಯು ನಮಾಝನ್ನು ಸತ್ಯವಿಶ್ವಾಸಿಗಳ ಮೇಲೆ ನಿಶ್ಚಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.
وَلَا تَهِنُوا فِي ابْتِغَاءِ الْقَوْمِ ۖ إِن تَكُونُوا تَأْلَمُونَ فَإِنَّهُمْ يَأْلَمُونَ كَمَا تَأْلَمُونَ ۖ وَتَرْجُونَ مِنَ اللَّهِ مَا لَا يَرْجُونَ ۗ وَكَانَ اللَّهُ عَلِيمًا حَكِيمًا ۝١٠٤
📖 ಅನುವಾದ ಆಯತ್ 104
ಶತ್ರುಗಳನ್ನು ಬೆನ್ನಟ್ಟಿ ಹೋಗುವ ವಿಚಾರದಲ್ಲಿ ನೀವು ಎದೆಗುಂದಬಾರದು. ನೀವು ನೋವು ಅನುಭವಿಸಿದಂತೆ ಅವರೂ ನೋವು ಅನುಭವಿಸುತ್ತಾರೆ. ಮತ್ತು ಅವರು ನಿರೀಕ್ಷಿಸದ ಅನುಗ್ರಹವನ್ನು ನೀವೂ ಅಲ್ಲಾಹನಿಂದ (ಅವನ ಸನ್ನಿಧಿ ಹಾಗೂ ಸ್ವರ್ಗವನ್ನು) ನಿರೀಕ್ಷಿಸುತ್ತೀರಿ ಮತ್ತು ಅಲ್ಲಾಹನು ಸರ್ವಜ್ಞನೂ, ಯುಕ್ತಿಪೂರ್ಣನೂ ಆಗಿದ್ದಾನೆ.
إِنَّا أَنزَلْنَا إِلَيْكَ الْكِتَابَ بِالْحَقِّ لِتَحْكُمَ بَيْنَ النَّاسِ بِمَا أَرَاكَ اللَّهُ ۚ وَلَا تَكُن لِّلْخَائِنِينَ خَصِيمًا ۝١٠٥
📖 ಅನುವಾದ ಆಯತ್ 105
ಇದೇಕೆಂದರೆ ನೀವು (ಓ ಪೈಗಂಬರರೇ) ಅಲ್ಲಾಹನು ತೋರಿಸಿಕೊಟ್ಟ ಪ್ರಕಾರ ಜನರ ನಡುವೆ ತೀರ್ಪನ್ನು ನೀಡಲೆಂದು ನಾವು ಗ್ರಂಥವನ್ನು ನಿಮ್ಮೆಡೆಗೆ ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದೇವೆ. ನೀವು ಮೋಸಗಾರರಿಗೆ ಬೆಂಬಲಿಗನಾಗಬೇಡಿರಿ.
وَاسْتَغْفِرِ اللَّهَ ۖ إِنَّ اللَّهَ كَانَ غَفُورًا رَّحِيمًا ۝١٠٦
📖 ಅನುವಾದ ಆಯತ್ 106
ಮತ್ತು ಅಲ್ಲಾಹನಲ್ಲಿ ಪಾಪವಿಮೋಚನೆಯನ್ನು ಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
وَلَا تُجَادِلْ عَنِ الَّذِينَ يَخْتَانُونَ أَنفُسَهُمْ ۚ إِنَّ اللَّهَ لَا يُحِبُّ مَن كَانَ خَوَّانًا أَثِيمًا ۝١٠٧
📖 ಅನುವಾದ ಆಯತ್ 107
ಆತ್ಮವಂಚನೆ ಮಾಡುವವರ ಪರವಾಗಿ ನೀವು ವಾದಿಸಬೇಡಿರಿ. ಖಂಡಿತವಾಗಿಯು ಮಹಾ ವಂಚಕ ಮತ್ತು ಪಾಪಿಯಾಗಿರುವ ಯಾರನ್ನೂ ಅಲ್ಲಾಹನು ಮೆಚ್ಚುವುದಿಲ್ಲ.
يَسْتَخْفُونَ مِنَ النَّاسِ وَلَا يَسْتَخْفُونَ مِنَ اللَّهِ وَهُوَ مَعَهُمْ إِذْ يُبَيِّتُونَ مَا لَا يَرْضَىٰ مِنَ الْقَوْلِ ۚ وَكَانَ اللَّهُ بِمَا يَعْمَلُونَ مُحِيطًا ۝١٠٨
📖 ಅನುವಾದ ಆಯತ್ 108
ಅವರು ಜನರಿಂದ ಮರೆಯಾಗಿಬಿಡುತ್ತಾರೆ. (ಆದರೆ) ಅವರು ಅಲ್ಲಾಹುವಿನಿಂದ ಮರೆಯಾಗಿರಲು ಸಾಧ್ಯವಿಲ್ಲ. ಅಲ್ಲಾಹನು ಇಷ್ಟಪಡದ ಮಾತುಗಳ ಕುರಿತು ಅವರು ರಾತ್ರಿ ವೇಳೆ ಗೂಢಾಲೋಚನೆ ನಡೆಸುತ್ತಿರುವಾಗಲೂ ಅವರೊಂದಿಗೆ ಅಲ್ಲಾಹನಿರುತ್ತಾನೆ. ಅವರು ಮಾಡುತ್ತಿರುವ ಸಕಲ ಕರ್ಮಗಳನ್ನು ಅವನು ಆವರಿಸುವವನಾಗಿದ್ದಾನೆ.
هَا أَنتُمْ هَٰؤُلَاءِ جَادَلْتُمْ عَنْهُمْ فِي الْحَيَاةِ الدُّنْيَا فَمَن يُجَادِلُ اللَّهَ عَنْهُمْ يَوْمَ الْقِيَامَةِ أَم مَّن يَكُونُ عَلَيْهِمْ وَكِيلًا ۝١٠٩
📖 ಅನುವಾದ ಆಯತ್ 109
ಐಹಿಕ ಜೀವನದಲ್ಲಿ ನೀವು ಅವರ ಪರವಾಗಿ ವಾದಿಸಿದಿರಿ. ಆದರೆ ಪುನರುತ್ಥಾನದ ದಿನದಂದು ಅವರ ಪರವಾಗಿ ಅಲ್ಲಾಹನ ಮುಂದೆ ವಾದಿಸುವವನಾರಿದ್ದಾನೆ. ಮತ್ತು ಅವರ ರಕ್ಷಕನಾಗಿ ಯಾರಿದ್ದಾನೆ?
وَمَن يَعْمَلْ سُوءًا أَوْ يَظْلِمْ نَفْسَهُ ثُمَّ يَسْتَغْفِرِ اللَّهَ يَجِدِ اللَّهَ غَفُورًا رَّحِيمًا ۝١١٠
📖 ಅನುವಾದ ಆಯತ್ 110
ಯಾವಾತನು ಕೆಡುಕನ್ನು ಮಾಡಿದರೆ ಅಥವಾ ತನ್ನ ಮೇಲೆಯೇ ಅಕ್ರಮವೆಸಗಿದರೆ ಅನಂತರ ಅಲ್ಲಾಹನೊಂದಿಗೆ ಪಾಪವಿಮೋಚನೆಯನ್ನು ಬೇಡಿದರೆ ಅವನು ಅಲ್ಲಾಹನನ್ನು ಕ್ಷಮಿಸುವವನನ್ನಾಗಿ ಮತ್ತು ಕರುಣಾನಿಧಿಯನ್ನಾಗಿ ಕಾಣುವನು.
وَمَن يَكْسِبْ إِثْمًا فَإِنَّمَا يَكْسِبُهُ عَلَىٰ نَفْسِهِ ۚ وَكَانَ اللَّهُ عَلِيمًا حَكِيمًا ۝١١١
📖 ಅನುವಾದ ಆಯತ್ 111
ಯಾವಾತನು ಪಾಪ ಮಾಡುತ್ತಾನೋ ಅದರ ದುಷ್ಪರಿಣಾಮವೂ ಅವನ ಮೆಲೆಯೇ ಇರುವುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَمَن يَكْسِبْ خَطِيئَةً أَوْ إِثْمًا ثُمَّ يَرْمِ بِهِ بَرِيئًا فَقَدِ احْتَمَلَ بُهْتَانًا وَإِثْمًا مُّبِينًا ۝١١٢
📖 ಅನುವಾದ ಆಯತ್ 112
ಯಾರಾದರೂ ತಪ್ಪು ಅಥವಾ ಪಾಪ ಮಾಡಿ, ಅನಂತರ ಅದನ್ನು ಓರ್ವ ನಿರಪರಾಧಿಯ ಮೇಲೆ ಹೊರಿಸಿದರೆ ಖಂಡಿತವಾಗಿಯು ಅವನು ಒಂದು ಸುಳ್ಳಾರೋಪವನ್ನು ಸ್ಪಷ್ಟವಾದ ಪಾಪವನ್ನು ಹೊತ್ತುಕೊಂಡನು.
وَلَوْلَا فَضْلُ اللَّهِ عَلَيْكَ وَرَحْمَتُهُ لَهَمَّت طَّائِفَةٌ مِّنْهُمْ أَن يُضِلُّوكَ وَمَا يُضِلُّونَ إِلَّا أَنفُسَهُمْ ۖ وَمَا يَضُرُّونَكَ مِن شَيْءٍ ۚ وَأَنزَلَ اللَّهُ عَلَيْكَ الْكِتَابَ وَالْحِكْمَةَ وَعَلَّمَكَ مَا لَمْ تَكُن تَعْلَمُ ۚ وَكَانَ فَضْلُ اللَّهِ عَلَيْكَ عَظِيمًا ۝١١٣
📖 ಅನುವಾದ ಆಯತ್ 113
ಪೈಗಂಬರರೇ, ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕಾರುಣ್ಯವು ಇಲ್ಲದಿರುತ್ತಿದ್ದರೆ ಅವರಲ್ಲಿ ಒಂದು ಗುಂಪು ನಿಮ್ಮನ್ನು ದಾರಿಗೆಡಿಸುವ ನಿರ್ಧಾರ ಮಾಡಿಬಿಡುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ತಮ್ಮನ್ನೇ ದಾರಿಗೆಡಿಸುತ್ತಿದ್ದಾರೆ. ಅವರು ನಿಮಗೆ ಯಾವ ಹಾನಿಯನ್ನುಂಟು ಮಾಡಲಾರರು. ಅಲ್ಲಾಹನು ನಿಮ್ಮ ಮೇಲೆ ಗ್ರಂಥವನ್ನೂ, ಸುಜ್ಞಾನವನ್ನೂ ಅವತೀರ್ಣಗೊಳಿಸಿದ್ದಾನೆ ಮತ್ತು ನಿಮಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟಿದ್ದಾನೆ. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹವು ಅತ್ಯಂತ ಮಹತ್ತರವಾದುದಾಗಿದೆ.
۞ لَّا خَيْرَ فِي كَثِيرٍ مِّن نَّجْوَاهُمْ إِلَّا مَنْ أَمَرَ بِصَدَقَةٍ أَوْ مَعْرُوفٍ أَوْ إِصْلَاحٍ بَيْنَ النَّاسِ ۚ وَمَن يَفْعَلْ ذَٰلِكَ ابْتِغَاءَ مَرْضَاتِ اللَّهِ فَسَوْفَ نُؤْتِيهِ أَجْرًا عَظِيمًا ۝١١٤
📖 ಅನುವಾದ ಆಯತ್ 114
ಅವರ ಹೆಚ್ಚಿನ ಗೂಢಾಲೋಚನೆಗಳಲ್ಲಿ ಯಾವುದೇ ಒಳಿತಿರುವುದಿಲ್ಲ. ಆದರೆ! ದಾನಧರ್ಮ ಮಾಡುವುದಕ್ಕಾಗಲೀ, ಸದಾಚಾರ ಕೈಗೊಳ್ಳುವುದಕ್ಕಾಗಲೀ, ಅಥವಾ ಜನರ ಮಧ್ಯೆ ಸಾಮರಸ್ಯ ಉಂಟು ಮಾಡಲಿಕ್ಕಾಗಿ ನಡೆಸಲಾಗುವ ಗೂಢಾಲೋಚನೆಗಳ ಹೊರತು ಯಾರು ಅಲ್ಲಾಹನ ಸಂತೃಪ್ತಿಯನ್ನು ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಾನೋ ಅವನಿಗೆ ನಾವು ಮಹಾ ಪ್ರತಿಫಲವನ್ನು ನೀಡುವೆವು.
وَمَن يُشَاقِقِ الرَّسُولَ مِن بَعْدِ مَا تَبَيَّنَ لَهُ الْهُدَىٰ وَيَتَّبِعْ غَيْرَ سَبِيلِ الْمُؤْمِنِينَ نُوَلِّهِ مَا تَوَلَّىٰ وَنُصْلِهِ جَهَنَّمَ ۖ وَسَاءَتْ مَصِيرًا ۝١١٥
📖 ಅನುವಾದ ಆಯತ್ 115
ಯಾವ ವ್ಯಕ್ತಿಯು ತನಗೆ ಸನ್ಮಾರ್ಗವು ಸ್ಪಷ್ಟವಾದ ನಂತರವೂ ಸಂದೇಶವಾಹಕ(ಸ)ರನ್ನು ವಿರೋಧಿಸುತ್ತಾನೋ ಮತ್ತು ಸತ್ಯವಿಶ್ವಾಸಿಗಳ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗವನ್ನು ಅನುಸರಿಸುತ್ತಾನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸಿಬಿಡುವೆವು ಮತ್ತು (ಕೊನೆಗೆ ಅವನನ್ನು)ನರಕಾಗ್ನಿಯಲ್ಲಿ ಹಾಕುವೆವು. ಅದು ಅತೀ ನಿಕೃಷ್ಟ ವಾಸಸ್ಥಳವಾಗಿದೆ.
إِنَّ اللَّهَ لَا يَغْفِرُ أَن يُشْرَكَ بِهِ وَيَغْفِرُ مَا دُونَ ذَٰلِكَ لِمَن يَشَاءُ ۚ وَمَن يُشْرِكْ بِاللَّهِ فَقَدْ ضَلَّ ضَلَالًا بَعِيدًا ۝١١٦
📖 ಅನುವಾದ ಆಯತ್ 116
ಅಲ್ಲಾಹನು ತನ್ನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸಲಾಗುವುದನ್ನು ಖಂಡಿತ ಕ್ಷಮಿಸುವುದಿಲ್ಲ. ಆದರೆ ಅದರ ಹೊರತು ಇತರ ಪಾಪಗಳನ್ನು ತಾನಿಚ್ಛಿಸುವವರೆಗೆ ಅವನು ಕ್ಷಮಿಸುತ್ತಾನೆ. ಯಾರು ಅಲ್ಲಾಹನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸುವನೋ ನಿಸ್ಸಂದೇಹವಾಗಿಯು ಅವನು ಅತೀ ವಿದೂರ ಪಥಭ್ರಷ್ಟತೆಯಲ್ಲಿ ಸಾಗಿಬಿಟ್ಟನು.
إِن يَدْعُونَ مِن دُونِهِ إِلَّا إِنَاثًا وَإِن يَدْعُونَ إِلَّا شَيْطَانًا مَّرِيدًا ۝١١٧
📖 ಅನುವಾದ ಆಯತ್ 117
ಅವರು (ಬಹುದೇವಾರಾಧಕರು) ಅಲ್ಲಾಹನನ್ನು ಬಿಟ್ಟು ಕೇವಲ ಸ್ತಿçÃಯರನ್ನು ಕರೆದು ಬೇಡುತ್ತಾರೆ ವಾಸ್ತವದಲ್ಲಿ ಅವರು ಕೇವಲ ದುಷ್ಟ ಶೈತಾನನನ್ನು ಆರಾಧಿಸುತ್ತಿದ್ದಾರೆ.
لَّعَنَهُ اللَّهُ ۘ وَقَالَ لَأَتَّخِذَنَّ مِنْ عِبَادِكَ نَصِيبًا مَّفْرُوضًا ۝١١٨
📖 ಅನುವಾದ ಆಯತ್ 118
ಅವನನ್ನು ಅಲ್ಲಾಹನು ಶಪಿಸಿದ್ದಾನೆ ಮತ್ತು ಅವನು (ಶೈತಾನನು) ಹೇಳಿದನು. ನಿನ್ನ ದಾಸರ ಪೈಕಿ ನಿಶ್ಚಿತ ಪಾಲನ್ನು ನಾನು ಪಡೆದೇ ತೀರುವೆನು.
وَلَأُضِلَّنَّهُمْ وَلَأُمَنِّيَنَّهُمْ وَلَآمُرَنَّهُمْ فَلَيُبَتِّكُنَّ آذَانَ الْأَنْعَامِ وَلَآمُرَنَّهُمْ فَلَيُغَيِّرُنَّ خَلْقَ اللَّهِ ۚ وَمَن يَتَّخِذِ الشَّيْطَانَ وَلِيًّا مِّن دُونِ اللَّهِ فَقَدْ خَسِرَ خُسْرَانًا مُّبِينًا ۝١١٩
📖 ಅನುವಾದ ಆಯತ್ 119
ನಾನು ಖಂಡಿತ ಅವರನ್ನು ದಾರಿಗೆಡುಸುವೆನು ಮತ್ತು ಅವರಿಗೆ ಅಮಿಷಗಳನ್ನು ಒಡ್ಡಿ ಅವರು ಜಾನುವಾರುಗಳ ಕಿವಿಗಳನ್ನು ಕತ್ತರಿಸಲೆಂದು ಅವರಿಗೆ ಆದೇಶಿಸುವೆನು. ಮತ್ತು ಅವರು ಅಲ್ಲಾಹನ ಸೃಷ್ಟಿಯನ್ನು ವಿಕೃತಗೊಳಿಸಲೆಂದು ನಾನು ಅವರಿಗೆ ಹೇಳುವೆನು. ಯಾರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತನ್ನ ಮಿತ್ರನನ್ನಾಗಿ ಮಾಡುತ್ತಾನೋ ಅವನು ಸ್ಪಷ್ಟವಾದ ನಷ್ಟಕ್ಕೊಳಗಾದನು.
يَعِدُهُمْ وَيُمَنِّيهِمْ ۖ وَمَا يَعِدُهُمُ الشَّيْطَانُ إِلَّا غُرُورًا ۝١٢٠
📖 ಅನುವಾದ ಆಯತ್ 120
ಅವನು ಅವರಿಗೆ ವಾಗ್ದಾನವನ್ನು ಮಾಡುತ್ತಾನೆ ಮತ್ತು ಅವರಿಗೆ ಅಮಿಷಗಳನ್ನು ಒಡ್ಡುತ್ತಾನೆ. ಶೈತಾನನು ಅವರಿಗೆ ನೀಡುವ ವಾಗ್ದಾನವು ವಂಚನೆಯಲ್ಲದೇ ಇನ್ನೇನೂ ಅಲ್ಲ.
أُولَٰئِكَ مَأْوَاهُمْ جَهَنَّمُ وَلَا يَجِدُونَ عَنْهَا مَحِيصًا ۝١٢١
📖 ಅನುವಾದ ಆಯತ್ 121
ಅಂಥವರ ವಾಸಸ್ಥಳವು ನರಕವಾಗಿದೆ ಅದರಿಂದ ಪಾರಾಗಲು ಅವರು ಯಾವುದೇ ದಾರಿಯನ್ನು ಕಾಣಲಾರರು.
وَالَّذِينَ آمَنُوا وَعَمِلُوا الصَّالِحَاتِ سَنُدْخِلُهُمْ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ وَعْدَ اللَّهِ حَقًّا ۚ وَمَنْ أَصْدَقُ مِنَ اللَّهِ قِيلًا ۝١٢٢
📖 ಅನುವಾದ ಆಯತ್ 122
ಸತ್ಯವಿಶ್ವಾಸವಿಟ್ಟು ಮತ್ತು ಸತ್ಕರ್ಮ ಮಾಡುವವರಿಗೆ ನಾವು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವೆವು. ಅವರು ಅದರಲ್ಲಿ ಶಾಶ್ವತವಾಗಿರುವರು. ಇದು ಅಲ್ಲಾಹನ ಸತ್ಯವಾದ ವಾಗ್ದಾನವಾಗಿದೆ. ಮತ್ತು ಅಲ್ಲಾಹನಿಗಿಂತ ಅಧಿಕ ಸತ್ಯವಂತನು ಇನ್ನಾರಿದ್ದಾನೆ?
لَّيْسَ بِأَمَانِيِّكُمْ وَلَا أَمَانِيِّ أَهْلِ الْكِتَابِ ۗ مَن يَعْمَلْ سُوءًا يُجْزَ بِهِ وَلَا يَجِدْ لَهُ مِن دُونِ اللَّهِ وَلِيًّا وَلَا نَصِيرًا ۝١٢٣
📖 ಅನುವಾದ ಆಯತ್ 123
ಶ್ರೇಷ್ಠತೆಯು ನಿಮ್ಮ ಇಚ್ಛೆಗನುಸಾರವಾಗಿರುವುದಿಲ್ಲ ಮತ್ತು ಗ್ರಂಥದವರ ಇಚ್ಛೆಗನುಸಾರವಾಗಿರುವುದೂ ಇಲ್ಲ. ಯಾರು ಪಾಪ ಮಾಡುತ್ತಾನೋ ಅವನು ಅದರ ಶಿಕ್ಷೆಯನ್ನು ಪಡೆಯುವನು. ಅವನು ಅಲ್ಲಾಹನ ಎದುರು ತನಗೆ ರಕ್ಷಣೆ ಮಾಡುವ ಮತ್ತು ಸಹಾಯ ಮಾಡುವ ಯಾವೊಬ್ಬನನ್ನೂ ಕಾಣಲಾರನು.
وَمَن يَعْمَلْ مِنَ الصَّالِحَاتِ مِن ذَكَرٍ أَوْ أُنثَىٰ وَهُوَ مُؤْمِنٌ فَأُولَٰئِكَ يَدْخُلُونَ الْجَنَّةَ وَلَا يُظْلَمُونَ نَقِيرًا ۝١٢٤
📖 ಅನುವಾದ ಆಯತ್ 124
ಗಂಡಾಗಿರಲೀ, ಹೆಣ್ಣಾಗಿರಲೀ ಸತ್ಯವಿಶ್ವಾಸಿಗಳಾಗಿ ಸತ್ಕರ್ಮಗಳನ್ನು ಮಾಡಿದರೆ ಖಂಡಿತ ಅಂತಹವರು ಸ್ವರ್ಗಕ್ಕೆ ಹೋಗುವರು. ಅವರಿಗೆ ಎಳ್ಳಷ್ಟೂ ಅನ್ಯಾಯ ಮಾಡಲಾಗದು.
وَمَنْ أَحْسَنُ دِينًا مِّمَّنْ أَسْلَمَ وَجْهَهُ لِلَّهِ وَهُوَ مُحْسِنٌ وَاتَّبَعَ مِلَّةَ إِبْرَاهِيمَ حَنِيفًا ۗ وَاتَّخَذَ اللَّهُ إِبْرَاهِيمَ خَلِيلًا ۝١٢٥
📖 ಅನುವಾದ ಆಯತ್ 125
ಸ್ವತಃ ಸದಾಚಾರಿಯಾಗಿದ್ದು ತನ್ನನ್ನು ಅಲ್ಲಾಹನಿಗೆ ವಿಧೇಯಗೊಳಿಸಿ ನೇರ ಮಾರ್ಗದಲ್ಲಿದ್ದ ಇಬ್ರಾಹೀಮರ ಮಾರ್ಗವನ್ನು ಅನುಸರಿಸುವವನಿಗಿಂತ ಉತ್ತಮ ಧರ್ಮನಿಷ್ಠನು ಇನ್ನಾರಿದ್ದಾನೆ. ಮತ್ತು ಅಲ್ಲಾಹನು ಇಬ್ರಾಹೀಮರನ್ನು ತನ್ನ ಆಪ್ತ ಮಿತ್ರನಾಗಿ ಮಾಡಿಕೊಂಡಿದ್ದಾನೆ.
وَلِلَّهِ مَا فِي السَّمَاوَاتِ وَمَا فِي الْأَرْضِ ۚ وَكَانَ اللَّهُ بِكُلِّ شَيْءٍ مُّحِيطًا ۝١٢٦
📖 ಅನುವಾದ ಆಯತ್ 126
ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ ಮತ್ತು ಅಲ್ಲಾಹನು ಸಕಲ ವಿಷಯಗಳನ್ನು ಆವರಿಸುವವನಾಗಿದ್ದಾನೆ.
وَيَسْتَفْتُونَكَ فِي النِّسَاءِ ۖ قُلِ اللَّهُ يُفْتِيكُمْ فِيهِنَّ وَمَا يُتْلَىٰ عَلَيْكُمْ فِي الْكِتَابِ فِي يَتَامَى النِّسَاءِ اللَّاتِي لَا تُؤْتُونَهُنَّ مَا كُتِبَ لَهُنَّ وَتَرْغَبُونَ أَن تَنكِحُوهُنَّ وَالْمُسْتَضْعَفِينَ مِنَ الْوِلْدَانِ وَأَن تَقُومُوا لِلْيَتَامَىٰ بِالْقِسْطِ ۚ وَمَا تَفْعَلُوا مِنْ خَيْرٍ فَإِنَّ اللَّهَ كَانَ بِهِ عَلِيمًا ۝١٢٧
📖 ಅನುವಾದ ಆಯತ್ 127
(ಓ ಪೈಗಂಗರರೇ) ಅವರು ನಿಮ್ಮೊಂದಿಗೆ ಸ್ತಿçÃಯರ ಕುರಿತು ಧರ್ಮವಿಧಿ ಕೇಳುತ್ತಾರೆ. ನೀವು ಹೇಳಿರಿ: ಅಲ್ಲಾಹನು ಅವರ ಕುರಿತು ನಿಮಗೆ ವಿಧಿ ನೀಡುತ್ತಾನೆ. ಹಾಗೂ ಜೊತೆಗೆ ನಿಮಗೆ ಈ ಗ್ರಂಥದಲ್ಲಿ ಜನರಿಗೆ ಅನಾಥ ಸ್ತಿçÃಯರ ಬಗ್ಗೆ ತಿಳಿಸಲಾಗುತ್ತಿದೆ. ಆ ಅನಾಥ ಯುವತಿಯರ ವಧು ಧನವನ್ನು ನೀಡದೇ ಅವರೊಡನೆ ವಿವಾಹವಾಗಲು ಬಯಸುತ್ತೀರಿ. ಇದೇ ಪ್ರಕಾರ ಆಶ್ರಯ ರಹಿತ ಯುವತಿಯರ ಕುರಿತು ನೀಡಲಾಗಿರುವ ಆಜ್ಞೆಗಳು (ಅವುಗಳನ್ನು ಸಹ ನೆನಪಿಸುತ್ತಾನೆ) ಹಾಗೂ ಆ ಆಜ್ಞೆಯಲ್ಲೂ ಅನಾಥರೊಡನೆ ನ್ಯಾಯವನ್ನು ಪಾಲಿಸಿರಿ ನೀವು ಮಾಡುವ ಕಾರ್ಯಗಳನ್ನು ಅಲ್ಲಾಹನು ಬಲ್ಲವನಾಗಿದ್ದಾನೆ.
وَإِنِ امْرَأَةٌ خَافَتْ مِن بَعْلِهَا نُشُوزًا أَوْ إِعْرَاضًا فَلَا جُنَاحَ عَلَيْهِمَا أَن يُصْلِحَا بَيْنَهُمَا صُلْحًا ۚ وَالصُّلْحُ خَيْرٌ ۗ وَأُحْضِرَتِ الْأَنفُسُ الشُّحَّ ۚ وَإِن تُحْسِنُوا وَتَتَّقُوا فَإِنَّ اللَّهَ كَانَ بِمَا تَعْمَلُونَ خَبِيرًا ۝١٢٨
📖 ಅನುವಾದ ಆಯತ್ 128
ಓರ್ವ ಸ್ತಿçà ತನ್ನ ಪತಿಯಿಂದ ವೈಮನಸ್ಸು ಮತ್ತು ತಿರಸ್ಕಾರದಿಂದ ಭಯಪಟ್ಟರೆ ಅವರು ಸಂಧಾನ ಮಾಡುವುದರಲ್ಲಿ ಯಾವ ದೋಷವಿಲ್ಲ. ಸಂಧಾನವು ಅತ್ಯಂತ ಉತ್ತಮವಾದುದಾಗಿದೆ. ಜಿಪುಣತೆ ಮತ್ತು ವ್ಯಾಮೋಹವು ಪ್ರತಿಯೊಬ್ಬನಲ್ಲೂ ಅಂತರ್ಗತಗೊಳಿಸಲಾಗಿದೆ. ನೀವು ಉತ್ತಮ ರೀತಿಯಲ್ಲಿ ವರ್ತಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಸೂಕ್ಷö್ಮ ಜ್ಞಾನಿಯಾಗಿದ್ದಾನೆ.
وَلَن تَسْتَطِيعُوا أَن تَعْدِلُوا بَيْنَ النِّسَاءِ وَلَوْ حَرَصْتُمْ ۖ فَلَا تَمِيلُوا كُلَّ الْمَيْلِ فَتَذَرُوهَا كَالْمُعَلَّقَةِ ۚ وَإِن تُصْلِحُوا وَتَتَّقُوا فَإِنَّ اللَّهَ كَانَ غَفُورًا رَّحِيمًا ۝١٢٩
📖 ಅನುವಾದ ಆಯತ್ 129
ನೀವು ಎಷ್ಟೇ ಬಯಸಿದರೂ, ಪತ್ನಿಯರ ನಡುವೆ ನ್ಯಾಯ ಪಾಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ನೀವು ಒಬ್ಬಳ ಕಡೆಗೆ ವಾಲಿಕೊಂಡು ಇನ್ನೊಬ್ಬಳನ್ನು ತೂಗಾಡುತ್ತಿರುವ ಸ್ಥಿತಿಯಲ್ಲಿ ಬಿಟ್ಟುಬಿಡಬೇಡಿರಿ. ನೀವು ಸುಧಾರಣೆ ಮಾಡುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
وَإِن يَتَفَرَّقَا يُغْنِ اللَّهُ كُلًّا مِّن سَعَتِهِ ۚ وَكَانَ اللَّهُ وَاسِعًا حَكِيمًا ۝١٣٠
📖 ಅನುವಾದ ಆಯತ್ 130
ಮತ್ತು ಪತಿ-ಪತ್ನಿಯರು ಬೇರ್ಪಡುವುದಾದರೆ ಅಲ್ಲಾಹನು ತನ್ನ ವಿಶಾಲವಾದ ಸಾಮರ್ಥ್ಯದಿಂದ ಅವರಲ್ಲಿ ಪ್ರತಿಯೊಬ್ಬರನ್ನೂ ನಿರಾವಲಂಬಿಯನ್ನಾಗಿ ಮಾಡುವನು. ಅಲ್ಲಾಹನು ವಿಶಾಲ ಸಾಮರ್ಥ್ಯವುಳ್ಳವನೂ ಯುಕ್ತಿಪೂರ್ಣನೂ ಆಗಿದ್ದಾನೆ.
وَلِلَّهِ مَا فِي السَّمَاوَاتِ وَمَا فِي الْأَرْضِ ۗ وَلَقَدْ وَصَّيْنَا الَّذِينَ أُوتُوا الْكِتَابَ مِن قَبْلِكُمْ وَإِيَّاكُمْ أَنِ اتَّقُوا اللَّهَ ۚ وَإِن تَكْفُرُوا فَإِنَّ لِلَّهِ مَا فِي السَّمَاوَاتِ وَمَا فِي الْأَرْضِ ۚ وَكَانَ اللَّهُ غَنِيًّا حَمِيدًا ۝١٣١
📖 ಅನುವಾದ ಆಯತ್ 131
ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಮತ್ತು ಖಂಡಿತವಾಗಿಯೂ ನೀವು ಅಲ್ಲಾಹನನ್ನು ಭಯಪಡಿರಿ ಎಂದು ನಾವು ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಗೂ, ನಿಮಗೂ ಇದೇ ಆದೇಶವನ್ನು ನೀಡಿದ್ದೇವೆ. ಇನ್ನು ನೀವು ನಿಷೇಧಿಸುವುದಾದರೆ ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ ಮತ್ತು ಅಲ್ಲಾಹನು ನಿರಪೇಕ್ಷನೂ ಸ್ತುತರ್ಹ್ಯನೂ ಆಗಿದ್ದಾನೆ.
وَلِلَّهِ مَا فِي السَّمَاوَاتِ وَمَا فِي الْأَرْضِ ۚ وَكَفَىٰ بِاللَّهِ وَكِيلًا ۝١٣٢
📖 ಅನುವಾದ ಆಯತ್ 132
ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಅಧಿಪತ್ಯದಲ್ಲಿವೆ. ಮೇಲ್ವಿಚಾರಕನಾಗಿ ಅಲ್ಲಾಹನೇ ಸಾಕು.
إِن يَشَأْ يُذْهِبْكُمْ أَيُّهَا النَّاسُ وَيَأْتِ بِآخَرِينَ ۚ وَكَانَ اللَّهُ عَلَىٰ ذَٰلِكَ قَدِيرًا ۝١٣٣
📖 ಅನುವಾದ ಆಯತ್ 133
ಓ ಜನರೇ, ಅವನು ಬಯಸಿದರೆ ನಿಮ್ಮನ್ನು ನಾಶಮಾಡಿ ಇತರರನ್ನು ತರುವನು. ಅಲ್ಲಾಹನು ಅದಕ್ಕೆ ಸಂಪೂರ್ಣ ಸಾಮರ್ಥ್ಯವುಳ್ಳವನಾಗಿದ್ದಾನೆ.
مَّن كَانَ يُرِيدُ ثَوَابَ الدُّنْيَا فَعِندَ اللَّهِ ثَوَابُ الدُّنْيَا وَالْآخِرَةِ ۚ وَكَانَ اللَّهُ سَمِيعًا بَصِيرًا ۝١٣٤
📖 ಅನುವಾದ ಆಯತ್ 134
ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ ಅಲ್ಲಾಹನ ಬಳಿಯಂತು ಇಹಲೋಕ ಮತ್ತು ಪರಲೋಕ (ಇವೆರಡರ) ಪ್ರತಿಫಲವು ಇದೆ ಮತ್ತು ಅಲ್ಲಾಹನು ಎಲ್ಲವನ್ನು ಆಲಿಸುವವನೂ, ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.
۞ يَا أَيُّهَا الَّذِينَ آمَنُوا كُونُوا قَوَّامِينَ بِالْقِسْطِ شُهَدَاءَ لِلَّهِ وَلَوْ عَلَىٰ أَنفُسِكُمْ أَوِ الْوَالِدَيْنِ وَالْأَقْرَبِينَ ۚ إِن يَكُنْ غَنِيًّا أَوْ فَقِيرًا فَاللَّهُ أَوْلَىٰ بِهِمَا ۖ فَلَا تَتَّبِعُوا الْهَوَىٰ أَن تَعْدِلُوا ۚ وَإِن تَلْوُوا أَوْ تُعْرِضُوا فَإِنَّ اللَّهَ كَانَ بِمَا تَعْمَلُونَ خَبِيرًا ۝١٣٥
📖 ಅನುವಾದ ಆಯತ್ 135
ಈ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೋಸ್ಕರ ಸಾಕ್ಷಿ ವಹಿಸುವವರಾಗಿರುತ್ತಾ ದೃಢವಾಗಿ ನಿಂತು ನ್ಯಾಯಪಾಲಿಸುವವರಾಗಿರಿ. ಅದು ಸ್ವತಃ ನಿಮಗೆ ಅಥವಾ ನಿಮ್ಮ ತಂದೆ ತಾಯಿಗೆ ಅಥವಾ ನಿಕಟ ಸಂಬAಧಿಕರಿಗೆ ವಿರುದ್ಧವಾಗಿದ್ದರೂ ಸರಿ (ನ್ಯಾಯ ಬೇಡುವಾತ) ಸಿರಿವಂತನಾಗಿರಲಿ, ಬಡವನಾಗಿರಲಿ ಅವರಿಬ್ಬರೊಂದಿಗೂ ಹೆಚ್ಚು ಸಂಬAಧ ಹೊಂದಿದವನು ಅಲ್ಲಾಹನಾಗಿದ್ದಾನೆ. ಆದುದರಿಂದ ನೀವು ಸ್ವೇಚ್ಛೆಗಳನ್ನು ಅನುಸರಿಸುತ್ತಾ ನ್ಯಾಯ ನೀತಿಯನ್ನು ಬಿಡಬೇಡಿ. ನೀವು ಸತ್ಯವನ್ನು ತಿರುಚಿದರೆ ಅಥವಾ ಸಾಕ್ಷಿ ಹೇಳುವುದರಿಂದ ಹಿಮ್ಮೆಟ್ಟಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಸಂಪೂರ್ಣವಾಗಿ ಅರಿಯುವವನಾಗಿದ್ದಾನೆ.
يَا أَيُّهَا الَّذِينَ آمَنُوا آمِنُوا بِاللَّهِ وَرَسُولِهِ وَالْكِتَابِ الَّذِي نَزَّلَ عَلَىٰ رَسُولِهِ وَالْكِتَابِ الَّذِي أَنزَلَ مِن قَبْلُ ۚ وَمَن يَكْفُرْ بِاللَّهِ وَمَلَائِكَتِهِ وَكُتُبِهِ وَرُسُلِهِ وَالْيَوْمِ الْآخِرِ فَقَدْ ضَلَّ ضَلَالًا بَعِيدًا ۝١٣٦
📖 ಅನುವಾದ ಆಯತ್ 136
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ಅವನು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥದಲ್ಲೂ ಮತ್ತು ಇದಕ್ಕಿಂತ ಮುಂಚೆ ಅವತೀರ್ಣಗೊಳಿಸಿದ ಗ್ರಂಥಗಳಲ್ಲೂ ವಿಶ್ವಾಸವಿಡಿರಿ. ಯಾರು ಅಲ್ಲಾಹನಲ್ಲೂ ಅವನ ಮಲಕ್‌ಗಳಲ್ಲೂ ಅವನ ಗ್ರಂಥಗಳಲ್ಲೂ, ಅವನ ಸಂದೇಶವಾಹಕರಲ್ಲೂ ಮತ್ತು ಅಂತ್ಯದಿನದಲ್ಲೂ ಅವಿಶ್ವಾಸ ಹೊಂದುತ್ತಾನೋ ಖಂಡಿತವಾಗಿಯು ಅವನು ವಿದೂರವಾದ ಪಥಭ್ರಷ್ಟತೆಯಲ್ಲಿರುವನು.
إِنَّ الَّذِينَ آمَنُوا ثُمَّ كَفَرُوا ثُمَّ آمَنُوا ثُمَّ كَفَرُوا ثُمَّ ازْدَادُوا كُفْرًا لَّمْ يَكُنِ اللَّهُ لِيَغْفِرَ لَهُمْ وَلَا لِيَهْدِيَهُمْ سَبِيلًا ۝١٣٧
📖 ಅನುವಾದ ಆಯತ್ 137
ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಅನಂತರ ನಿಷೇಧಿಸಿದರೋ, ಬಳಿಕ ಪುನಃ ವಿಶ್ವಾಸವಿಟ್ಟು, ಅನಂತರ ಪುನಃ ನಿಷೇಧಿಸಿದರೋ, ಅನಂತರ ತಮ್ಮ ನಿಷೇಧದಲ್ಲಿ ಮುಂದುವರೆದರೋ ಖಂಡಿತ ಅವರಿಗೆ ಅಲ್ಲಾಹನು ಕ್ಷಮಿಸುವುದಿಲ್ಲ ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.
بَشِّرِ الْمُنَافِقِينَ بِأَنَّ لَهُمْ عَذَابًا أَلِيمًا ۝١٣٨
📖 ಅನುವಾದ ಆಯತ್ 138
ನೀವು ಕಪಟ ವಿಶ್ವಾಸಿಗಳಿಗೆ ವೇದನಾಜನಕವಾದ ಶಿಕ್ಷೆಯಿದೆಯೆಂಬ ಸುವಾರ್ತೆಯನ್ನು ತಿಳಿಸಿರಿ.
الَّذِينَ يَتَّخِذُونَ الْكَافِرِينَ أَوْلِيَاءَ مِن دُونِ الْمُؤْمِنِينَ ۚ أَيَبْتَغُونَ عِندَهُمُ الْعِزَّةَ فَإِنَّ الْعِزَّةَ لِلَّهِ جَمِيعًا ۝١٣٩
📖 ಅನುವಾದ ಆಯತ್ 139
ಅವರು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವವರಾಗಿದ್ದಾರೆ. ಏನು ಅವರು ಅವರ ಬಳಿ ಗೌರವವನ್ನು ಅರಿಸಿ ಹೋಗುತ್ತಿದ್ದಾರೆಯೆ? ಗೌರವವು ಸಂಪೂರ್ಣವಾಗಿಯು ಅಲ್ಲಾಹನ ಅಧೀನದಲ್ಲಿದೆ.
وَقَدْ نَزَّلَ عَلَيْكُمْ فِي الْكِتَابِ أَنْ إِذَا سَمِعْتُمْ آيَاتِ اللَّهِ يُكْفَرُ بِهَا وَيُسْتَهْزَأُ بِهَا فَلَا تَقْعُدُوا مَعَهُمْ حَتَّىٰ يَخُوضُوا فِي حَدِيثٍ غَيْرِهِ ۚ إِنَّكُمْ إِذًا مِّثْلُهُمْ ۗ إِنَّ اللَّهَ جَامِعُ الْمُنَافِقِينَ وَالْكَافِرِينَ فِي جَهَنَّمَ جَمِيعًا ۝١٤٠
📖 ಅನುವಾದ ಆಯತ್ 140
ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಾ, ಗೇಲಿ ಮಾಡುತ್ತಾ ಇರುವ ಯಾವುದಾದರೂ ಸಭೆಯನ್ನು ನೀವು ಆಲಿಸಿದರೆ ಅವರು ಬೇರಾವುದಾದರೂ ವಿಚಾರವನ್ನು ಆರಂಭಿಸುವ ತನಕ ನೀವು ಅವರೊಂದಿಗೆ ಕುಳಿತುಕೊಳ್ಳಬೇಡಿರಿ ಎಂದು ಅಲ್ಲಾಹನು ನಿಮ್ಮ ಬಳಿಯಿರುವ ಗ್ರಂಥದಲ್ಲಿ ಆದೇಶ ನೀಡಿರುತ್ತಾನೆ. ಇಲ್ಲವಾದರೆ ನೀವು ಸಹ ಅವರಂತೆಯೇ ಆಗಿ ಬಿಡುವಿರಿ ಖಂಡಿತವಾಗಿಯು ಅಲ್ಲಾಹನು ಸಕಲ ಸತ್ಯನಿಷೇಧಿಗಳನ್ನೂ, ಸಕಲ ಕಪಟವಿಶ್ವಾಸಿಗಳನ್ನೂ ನರಕದಲ್ಲಿ ಒಟ್ಟುಗೂಡಿಸಲಿರುವನು.
الَّذِينَ يَتَرَبَّصُونَ بِكُمْ فَإِن كَانَ لَكُمْ فَتْحٌ مِّنَ اللَّهِ قَالُوا أَلَمْ نَكُن مَّعَكُمْ وَإِن كَانَ لِلْكَافِرِينَ نَصِيبٌ قَالُوا أَلَمْ نَسْتَحْوِذْ عَلَيْكُمْ وَنَمْنَعْكُم مِّنَ الْمُؤْمِنِينَ ۚ فَاللَّهُ يَحْكُمُ بَيْنَكُمْ يَوْمَ الْقِيَامَةِ ۗ وَلَن يَجْعَلَ اللَّهُ لِلْكَافِرِينَ عَلَى الْمُؤْمِنِينَ سَبِيلًا ۝١٤١
📖 ಅನುವಾದ ಆಯತ್ 141
ಇವರು (ಕಪಟವಿಶ್ವಾಸಿಗಳು) ನಿಮಗೊದಗುವ ಪರಿಣಾಮವನ್ನು ನಿರೀಕ್ಷಿಸುತ್ತಿರುತ್ತಾರೆ. ಅನಂತರ ನಿಮಗೆ ಅಲ್ಲಾಹನು ವಿಜಯವನ್ನು ಕರುಣಿಸಿದರೆ ನಾವು ನಿಮ್ಮ ಜೊತೆಗಾರರಲ್ಲವೆ? ಎನ್ನುವರು. ಮತ್ತು ಸತ್ಯನಿಷೇಧಿಗಳಿಗೇನಾದರು ಯಶಸ್ಸು ಲಭಿಸಿದರೆ (ಅವರೊಂದಿಗೆ) ಹೇಳುವರು: ನಾವು ನಿಮ್ಮ ಮೇಲೆ ಯಶಸ್ಸು ಸಾಧಿಸಿದಾಗ ಮತ್ತು ನಿಮನ್ನು ವಿಶ್ವಾಸಿಗಳ ಕೈಗಳಿಂದ ರಕ್ಷಿಸಲಿಲ್ಲವೆ? ಆದರೆ ಪುನರುತ್ಥಾನ ದಿನದಂದು ಸ್ವತಃ ಅಲ್ಲಾಹನೇ ನಿಮ್ಮ ಮಧ್ಯೆ ತೀರ್ಪು ನೀಡುವನು. ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ವಿಶ್ವಾಸಿಗಳ ಮೇಲೆ ಎಂದೂ ಮಾರ್ಗವನ್ನು ತೆರೆದು ಕೊಡಲಾರನು.
إِنَّ الْمُنَافِقِينَ يُخَادِعُونَ اللَّهَ وَهُوَ خَادِعُهُمْ وَإِذَا قَامُوا إِلَى الصَّلَاةِ قَامُوا كُسَالَىٰ يُرَاءُونَ النَّاسَ وَلَا يَذْكُرُونَ اللَّهَ إِلَّا قَلِيلًا ۝١٤٢
📖 ಅನುವಾದ ಆಯತ್ 142
ನಿಸ್ಸಂಶಯವಾಗಿಯು ಕಪಟ ವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಲು ಯತ್ನಿಸುವರು ಮತ್ತು ಅವನು ಅವರನ್ನೇ ವಂಚನೆಗಳಿಗೆ ಸಿಲುಕಿಸುತ್ತಾನೆ. ಮತ್ತು ಅವರು ನಮಾಝ್‌ಗಾಗಿ ನಿಂತರೆ ತುಂಬಾ ಉದಾಸೀನರಾಗಿ ನಿಲ್ಲುತ್ತಾರೆ ಮತ್ತು ಜನರಿಗೆ ತೋರಿಸಲಿಕ್ಕಾಗಿ ನಿಲ್ಲುತ್ತಾರೆ. ಮತ್ತು ಅಲ್ಪವೇ ವಿನಃ ಅವರು ಅಲ್ಲಾಹನನ್ನು ಸ್ಮರಿಸಲಾರರು.
مُّذَبْذَبِينَ بَيْنَ ذَٰلِكَ لَا إِلَىٰ هَٰؤُلَاءِ وَلَا إِلَىٰ هَٰؤُلَاءِ ۚ وَمَن يُضْلِلِ اللَّهُ فَلَن تَجِدَ لَهُ سَبِيلًا ۝١٤٣
📖 ಅನುವಾದ ಆಯತ್ 143
ಅವರು ಆ ಗುಂಪಿಗೂ ಸೇರದೆ ಈ ಗುಂಪಿಗೂ ಸೇರದೇ ಮಧ್ಯದಲ್ಲಿ ಸಿಲುಕಿಕೊಂಡು ಹೊಯ್ದಾಡುತ್ತಿರುತ್ತಾರೆ. ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುತ್ತಾನೋ ಅವನಿಗೆ ನೀವು ಯಾವುದೇ ಮಾರ್ಗವನ್ನೂ ಕಾಣಲಾರಿರಿ.
يَا أَيُّهَا الَّذِينَ آمَنُوا لَا تَتَّخِذُوا الْكَافِرِينَ أَوْلِيَاءَ مِن دُونِ الْمُؤْمِنِينَ ۚ أَتُرِيدُونَ أَن تَجْعَلُوا لِلَّهِ عَلَيْكُمْ سُلْطَانًا مُّبِينًا ۝١٤٤
📖 ಅನುವಾದ ಆಯತ್ 144
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಅಪ್ತಮಿತ್ರರನ್ನಾಗಿ ಮಾಡಬೇಡಿರಿ. ನೀವು ನಿಮ್ಮ ವಿರುದ್ಧ ಅಲ್ಲಾಹನ ಸ್ಪಷ್ಟ ಪುರಾವೆಯು ಉಂಟುಮಾಡಲು ಇಚ್ಛಿಸುತ್ತಿರಾ?
إِنَّ الْمُنَافِقِينَ فِي الدَّرْكِ الْأَسْفَلِ مِنَ النَّارِ وَلَن تَجِدَ لَهُمْ نَصِيرًا ۝١٤٥
📖 ಅನುವಾದ ಆಯತ್ 145
ಖಂಡಿತವಾಗಿಯು ಕಪಟವಿಶ್ವಾಸಿಗಳು ನರಕದ ಅತ್ಯಂತ ತಳಭಾಗದಲ್ಲಿರುವರು. ನೀವು ಅವರಿಗೆ ಅಲ್ಲಾಹನೆದುರು ಯಾವ ಸಹಾಯಕನನ್ನು ಕಾಣಲಾರಿರಿ.
إِلَّا الَّذِينَ تَابُوا وَأَصْلَحُوا وَاعْتَصَمُوا بِاللَّهِ وَأَخْلَصُوا دِينَهُمْ لِلَّهِ فَأُولَٰئِكَ مَعَ الْمُؤْمِنِينَ ۖ وَسَوْفَ يُؤْتِ اللَّهُ الْمُؤْمِنِينَ أَجْرًا عَظِيمًا ۝١٤٦
📖 ಅನುವಾದ ಆಯತ್ 146
ಆದರೆ ಯಾರು ಪಶ್ಚಾತ್ತಾಪ ಪಟ್ಟು ಮರಳುತ್ತಾರೋ ಸುಧಾರಣೆ ಮಾಡಿಕೊಳ್ಳುತ್ತಾರೋ ಅಲ್ಲಾಹನಲ್ಲಿ ದೃಢವಿಶ್ವಾಸ ಹೊಂದುತ್ತಾರೋ ಮತ್ತು ಅಲ್ಲಾಹನಿಗೋಸ್ಕರ ತಮ್ಮ ಧರ್ಮವನ್ನು ಮೀಸಲಿಡುತ್ತಾರೊ ಅವರು ಸತ್ಯವಿಶ್ವಾಸಿಗಳ ಜೊತೆಗಿರುವರು. ಅಲ್ಲಾಹನು ಸತ್ಯವಿಶ್ವಾಸಿಗಳಿಗೆ ಮಹಾಪ್ರತಿಫಲವನ್ನು ನೀಡುವನು.
مَّا يَفْعَلُ اللَّهُ بِعَذَابِكُمْ إِن شَكَرْتُمْ وَآمَنتُمْ ۚ وَكَانَ اللَّهُ شَاكِرًا عَلِيمًا ۝١٤٧
📖 ಅನುವಾದ ಆಯತ್ 147
ನೀವು ಕೃತಜ್ಞತೆ ತೋರಿದರೆ ಮತ್ತು ಸತ್ಯವಿಶ್ವಾಸ ಹೊಂದಿದರೆ ಅಲ್ಲಾಹನು ನಿಮ್ಮನ್ನು ಶಿಕ್ಷಿಸಿ ಏನು ಮಾಡುವನು? ಅಲ್ಲಾಹನು ಆದರಿಸುವವನೂ ಸರ್ವಜ್ಞನೂ ಆಗಿದ್ದಾನೆ.
۞ لَّا يُحِبُّ اللَّهُ الْجَهْرَ بِالسُّوءِ مِنَ الْقَوْلِ إِلَّا مَن ظُلِمَ ۚ وَكَانَ اللَّهُ سَمِيعًا عَلِيمًا ۝١٤٨
📖 ಅನುವಾದ ಆಯತ್ 148
ಕೆಟ್ಟ ಪದಗಳನ್ನು ಬಹಿರಂಗಪಡಿಸುವುದನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಆದರೆ ಅನ್ಯಾಯಕ್ಕೊಳಗಾದವನಿಗೆ ಅನುಮತಿಯಿದೆ ಮತ್ತು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಅರಿಯುವವನೂ ಆಗಿದ್ದಾನೆ.
إِن تُبْدُوا خَيْرًا أَوْ تُخْفُوهُ أَوْ تَعْفُوا عَن سُوءٍ فَإِنَّ اللَّهَ كَانَ عَفُوًّا قَدِيرًا ۝١٤٩
📖 ಅನುವಾದ ಆಯತ್ 149
ನೀವು ಯಾವುದೇ ಒಳಿತನ್ನು ಬಹಿರಂಗವಾಗಿಸಿರಿ ಅಥವಾ ಮುಚ್ಚಿಡಿರಿ ಅಥವಾ ಯಾವುದಾದರೂ ತಪ್ಪನ್ನು ಕ್ಷಮಿಸಿರಿ ಖಂಡಿತವಾಗಿಯು ಅಲ್ಲಾಹನು ಕ್ಷಮಿಸುವವನೂ ಸರ್ವಶಕ್ತನೂ ಆಗಿದ್ದಾನೆ.
إِنَّ الَّذِينَ يَكْفُرُونَ بِاللَّهِ وَرُسُلِهِ وَيُرِيدُونَ أَن يُفَرِّقُوا بَيْنَ اللَّهِ وَرُسُلِهِ وَيَقُولُونَ نُؤْمِنُ بِبَعْضٍ وَنَكْفُرُ بِبَعْضٍ وَيُرِيدُونَ أَن يَتَّخِذُوا بَيْنَ ذَٰلِكَ سَبِيلًا ۝١٥٠
📖 ಅನುವಾದ ಆಯತ್ 150
ಯಾರು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ನಿಷೇಧ ಹೊಂದುತ್ತಾರೋ ಮತ್ತು ಯಾರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ (ಮೇಲೆ ವಿಶ್ವಾಸವಿಡುವ ವಿಚಾರದಲ್ಲಿ) ತಾರತಮ್ಯವುನುಂಟು ಮಾಡಲು ಬಯಸುತ್ತಾರೋ ಮತ್ತು “ನಾವು ಕೆಲವು ಪೈಗಂಬರ್‌ರನ್ನು ನಂಬುತ್ತೇವೆ, ಇನ್ನು ಕೆಲವರನ್ನು ನಂಬುವುದಿಲ್ಲ ಎಂದು ಹೇಳುತ್ತಾರೋ ಮತ್ತು ಅದರ ಮಧ್ಯೆ ಬೇರೆ ಮಾರ್ಗವನ್ನು ಸ್ವೀಕರಿಸಲು ಬಯಸುತ್ತಾರೋ
أُولَٰئِكَ هُمُ الْكَافِرُونَ حَقًّا ۚ وَأَعْتَدْنَا لِلْكَافِرِينَ عَذَابًا مُّهِينًا ۝١٥١
📖 ಅನುವಾದ ಆಯತ್ 151
ಖಂಡಿತವಾಗಿಯು ಅವರೆಲ್ಲ ನೈಜ ಸತ್ಯನಿಷೇಧಿಗಳಾಗಿದ್ದಾರೆ ಮತ್ತು ಸತ್ಯನಿಷೇಧಿಗಳಿಗೆ ನಾವು ನಿಂದ್ಯತೆಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
وَالَّذِينَ آمَنُوا بِاللَّهِ وَرُسُلِهِ وَلَمْ يُفَرِّقُوا بَيْنَ أَحَدٍ مِّنْهُمْ أُولَٰئِكَ سَوْفَ يُؤْتِيهِمْ أُجُورَهُمْ ۗ وَكَانَ اللَّهُ غَفُورًا رَّحِيمًا ۝١٥٢
📖 ಅನುವಾದ ಆಯತ್ 152
ಯಾರು ಅಲ್ಲಾಹನ ಮೇಲೆ ಮತ್ತು ಅವನ ಸಕಲ ಸಂದೇಶವಾಹಕರ ಮೇಲೆ ವಿಶ್ವಾಸವಿಡುತ್ತಾರೋ ಮತ್ತು ಅವರ ಮಧ್ಯೆ ತಾರತಮ್ಯ ಮಾಡುವುದಿಲ್ಲವೋ ಅಲ್ಲಾಹನು ಅವರ ಪ್ರತಿಫಲವನ್ನು ಸಂಪೂರ್ಣವಾಗಿ ನೀಡಲಿರುವನು. ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
يَسْأَلُكَ أَهْلُ الْكِتَابِ أَن تُنَزِّلَ عَلَيْهِمْ كِتَابًا مِّنَ السَّمَاءِ ۚ فَقَدْ سَأَلُوا مُوسَىٰ أَكْبَرَ مِن ذَٰلِكَ فَقَالُوا أَرِنَا اللَّهَ جَهْرَةً فَأَخَذَتْهُمُ الصَّاعِقَةُ بِظُلْمِهِمْ ۚ ثُمَّ اتَّخَذُوا الْعِجْلَ مِن بَعْدِ مَا جَاءَتْهُمُ الْبَيِّنَاتُ فَعَفَوْنَا عَن ذَٰلِكَ ۚ وَآتَيْنَا مُوسَىٰ سُلْطَانًا مُّبِينًا ۝١٥٣
📖 ಅನುವಾದ ಆಯತ್ 153
ನೀವು (ಪೈಗಂಬರರೇ) ಅವರ ಬಳಿ ಯಾವುದಾದರೊಂದು ಗ್ರಂಥವನ್ನು ಆಕಾಶದಿಂದ ಇಳಿಸಿಕೊಡಬೇಕೆಂದು ಗ್ರಂಥದವರು ನಿಮ್ಮೊಂದಿಗೆ ಕೇಳುತ್ತಾರೆ. ಇದಕ್ಕಿಂತಲೂ ಘೋರವಾದುದನ್ನು ಅವರು ಮೂಸಾರೊಂದಿಗೆ ಕೇಳಿದ್ದರು: ಅಂದರೆ ನಮಗೆ ಅಲ್ಲಾಹನನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಿರಿ. ಆಗ ಅವರ ಅಕ್ರಮದ ನಿಮಿತ್ತ ಅವರನ್ನು ಸಿಡಿಲು ಬಡಿದು ಬಿಟ್ಟಿತು. ನಂತರ ಸ್ಪಷ್ಟವಾದ ಪುರಾವೆಗಳು ಬಂದು ತಲುಪಿದ ಬಳಿಕವೂ ಅವರು ಕರುವನ್ನು ತಮ್ಮ ಆರಾಧ್ಯನÀನ್ನಾಗಿ ಮಾಡಿಕೊಂಡರು. ಆದರೆ ನಾವದನ್ನೂ ಕ್ಷಮಿಸಿಬಿಟ್ಟೆವು. ಪೈಗಂಬರ್ ಮೂಸಾರಿಗೆ ನಾವು ಸ್ಪಷ್ಟವಾದ ವಿಜಯವನ್ನು ನೀಡಿದೆವು.
وَرَفَعْنَا فَوْقَهُمُ الطُّورَ بِمِيثَاقِهِمْ وَقُلْنَا لَهُمُ ادْخُلُوا الْبَابَ سُجَّدًا وَقُلْنَا لَهُمْ لَا تَعْدُوا فِي السَّبْتِ وَأَخَذْنَا مِنْهُم مِّيثَاقًا غَلِيظًا ۝١٥٤
📖 ಅನುವಾದ ಆಯತ್ 154
(ತೌರಾತಿನ ಆದೇಶಗಳನ್ನು ಯಹೂದಿಯರು ನಿರಾಕರಿಸಿದಾಗ) ಮತ್ತು ಅವರಿಂದ (ಬಲವಾದ) ಕರಾರು ಪಡೆÀಯುವುದಕ್ಕಾಗಿ ನಾವು ಅವರ ತಲೆಯ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದೆವು. ಮತ್ತು ನಾವು ಅವರಿಗೆ ನೀವು ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಎಂದು ಹೇಳಿದೆವು ಹಾಗೂ ನೀವು ಸಬ್ತ್ (ಶನಿವಾರದ ಮೀನಿನ ಬೇಟೆಯ ನಿಷೇಧ) ದಿನದಂದು ಅತಿಕ್ರಮ ತೋರಬಾರದೆಂದು ನಾವು ಅವರಿಗೆ ಹೇಳಿದೆವು ಹಾಗೂ ಅವರಿಂದ ಭದ್ರವಾದ ಕರಾರನ್ನು ಪಡೆದುಕೊಂಡೆವು.
فَبِمَا نَقْضِهِم مِّيثَاقَهُمْ وَكُفْرِهِم بِآيَاتِ اللَّهِ وَقَتْلِهِمُ الْأَنبِيَاءَ بِغَيْرِ حَقٍّ وَقَوْلِهِمْ قُلُوبُنَا غُلْفٌ ۚ بَلْ طَبَعَ اللَّهُ عَلَيْهَا بِكُفْرِهِمْ فَلَا يُؤْمِنُونَ إِلَّا قَلِيلًا ۝١٥٥
📖 ಅನುವಾದ ಆಯತ್ 155
ಅವರು ಕರಾರನ್ನು ಉಲ್ಲಂಘಿಸಿದರ ನಿಮಿತ್ತ ಅಲ್ಲಾಹನ ನಿಯಮಗಳನ್ನು ನಿಷೇಧಿಸಿದುದರ ನಿಮಿತ್ತ, ಅನ್ಯಾಯವಾಗಿ ಅಲ್ಲಾಹನ ಪೈಗಂಬರರನ್ನು ವಧಿಸಿದುದರ ನಿಮಿತ್ತ, ತಮ್ಮ ಹೃದಯಗಳು ಮುಚ್ಚಿಹೋಗಿವೆಯೆಂದು ಅವರು ಹೇಳಿದುದರ ನಿಮಿತ್ತ (ಅಲ್ಲಾಹನು ಅವರನ್ನು ಶಪಿಸಿದನು) ವಸ್ತುತಃ ಅವರ ಸತ್ಯನಿಷೇಧದ ಕಾರಣದಿಂದ ಅಲ್ಲಾಹನು ಹೃದಯಗಳ ಮೆಲೆ ಮುದ್ರೆಯೊತ್ತಿರುವನು. ಆದ್ದರಿಂದ ಅವರು ಅತ್ಯಲ್ಪವೇ ವಿಶ್ವಾಸವಿಡುತ್ತಾರೆ.
وَبِكُفْرِهِمْ وَقَوْلِهِمْ عَلَىٰ مَرْيَمَ بُهْتَانًا عَظِيمًا ۝١٥٦
📖 ಅನುವಾದ ಆಯತ್ 156
ಮತ್ತು ಅವರ ಸತ್ಯನಿಷೇಧದ ನಿಮಿತ್ತ, ಹಾಗೂ ಮರ್ಯಮಳ ಮೇಲೆ ಅವರು ಹೊರಿಸಿದ ಘೋರ ಸುಳ್ಳಾರೋಪದ ನಿಮಿತ್ತವೂ (ಅಲ್ಲಾಹನು ಅವರನ್ನು ಶಪಿಸಿದನು)
وَقَوْلِهِمْ إِنَّا قَتَلْنَا الْمَسِيحَ عِيسَى ابْنَ مَرْيَمَ رَسُولَ اللَّهِ وَمَا قَتَلُوهُ وَمَا صَلَبُوهُ وَلَٰكِن شُبِّهَ لَهُمْ ۚ وَإِنَّ الَّذِينَ اخْتَلَفُوا فِيهِ لَفِي شَكٍّ مِّنْهُ ۚ مَا لَهُم بِهِ مِنْ عِلْمٍ إِلَّا اتِّبَاعَ الظَّنِّ ۚ وَمَا قَتَلُوهُ يَقِينًا ۝١٥٧
📖 ಅನುವಾದ ಆಯತ್ 157
ಅಲ್ಲಾಹನ ಸಂದೇಶವಾಹಕ ಮಸೀಹ ಈಸಾ ಬಿನ್ ಮರ್ಯಮರನ್ನು ನಾವು ಕೊಂದಿದ್ದೇವೆAದು ಅವರು ಹೇಳಿದ ನಿಮಿತ್ತವೂ (ಅವರನ್ನು ಶಪಿಸಲಾಯಿತು) ವಾಸ್ತವದಲ್ಲಿ ಅವರು ಅವರನ್ನು ವಧಿಸಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ಆದರೆ ಅವರಿಗೆ ಅವರ ವಾಸ್ತವ ವಿಚಾರವನ್ನು ಅಸ್ಪಷ್ಟಗೊಳಿಸಲಾಯಿತು. ಖಂಡಿತವಾಗಿಯು ಅವರ (ಈಸಾರವರ) ವಿಚಾರದಲ್ಲಿ ಭಿನ್ನಾಭಿಪ್ರಾಯ ತೋರಿದವರು ಅವರ ಕುರಿತು ಸಂದೇಹದಲ್ಲಿದ್ದಾರೆ ಮತ್ತು ಅವರು (ಯಹೂದಿಗಳು) ಕೇವಲ ಊಹಾಪೊಹಗಳನ್ನು ಅನುಸರಿಸುತ್ತಿದ್ದಾರೆಯೇ ಹೊರತು ಅದರ ಕುರಿತು ಅವರಿಗೆ ಜ್ಞಾನವಿಲ್ಲ ಅವರು (ಯಹೂದಿಗಳು) ಅವರನ್ನು (ಈಸಾರವರನ್ನು) ಖಂಡಿತ ವಧಿಸಿಲ್ಲ.
بَل رَّفَعَهُ اللَّهُ إِلَيْهِ ۚ وَكَانَ اللَّهُ عَزِيزًا حَكِيمًا ۝١٥٨
📖 ಅನುವಾದ ಆಯತ್ 158
ಆದರೆ ಅಲ್ಲಾಹ್ ಅವರನ್ನು ತನ್ನ ಕಡೆಗೆ ಎತ್ತಿಕೊಂಡಿರುವನು ಮತ್ತು ಅಲ್ಲಾಹನು ಮಹಾ ಪ್ರತಾಪಶಾಲಿಯು ಯುಕ್ತಿಪೂರ್ಣನೂ ಆಗಿದ್ದಾನೆ.
وَإِن مِّنْ أَهْلِ الْكِتَابِ إِلَّا لَيُؤْمِنَنَّ بِهِ قَبْلَ مَوْتِهِ ۖ وَيَوْمَ الْقِيَامَةِ يَكُونُ عَلَيْهِمْ شَهِيدًا ۝١٥٩
📖 ಅನುವಾದ ಆಯತ್ 159
ಗ್ರಂಥದವರ ಪೈಕಿ ಯಾವೊಬ್ಬನು ಪ್ರವಾದಿ ಈಸಾ(ಅ)ರ ಮರಣಕ್ಕೆ ಮೊದಲು ಅವರಲ್ಲಿ ವಿಶ್ವಾಸವಿಡದೇ ಉಳಿದಿರಲಾರನು ಮತ್ತು ಪುನರುತ್ಥಾನ ದಿನದಂದು ಈಸಾರವರು ಅವರ ಕುರಿತು ಸಾಕ್ಷö್ಯವಹಿಸುವರು.
فَبِظُلْمٍ مِّنَ الَّذِينَ هَادُوا حَرَّمْنَا عَلَيْهِمْ طَيِّبَاتٍ أُحِلَّتْ لَهُمْ وَبِصَدِّهِمْ عَن سَبِيلِ اللَّهِ كَثِيرًا ۝١٦٠
📖 ಅನುವಾದ ಆಯತ್ 160
ಯಹೂದರಿಗೆ ಅವರ ಅಕ್ರಮದ ನಿಮಿತ್ತ ಮತ್ತು ಅವರು ಅಲ್ಲಾಹನ ಮಾರ್ಗದಿಂದ ಅನೇಕ ಜನರನ್ನು ತಡೆ ಹಿಡಿಯುತ್ತಿದ್ದ ನಿಮಿತ್ತ ಅವರಿಗೆ ಧರ್ಮ ಸಮ್ಮತವಾದ ಹಲವಾರು ಉತ್ತಮ ವಸ್ತುಗಳನ್ನು ನಾವು ನಿಷಿದ್ಧಗೊಳಿಸಿದೆವು.
وَأَخْذِهِمُ الرِّبَا وَقَدْ نُهُوا عَنْهُ وَأَكْلِهِمْ أَمْوَالَ النَّاسِ بِالْبَاطِلِ ۚ وَأَعْتَدْنَا لِلْكَافِرِينَ مِنْهُمْ عَذَابًا أَلِيمًا ۝١٦١
📖 ಅನುವಾದ ಆಯತ್ 161
ಬಡ್ಡಿಯನ್ನು ಅವರಿಗೆ ನಿಷೇಧಿಸಲಾಗಿದ್ದರೂ ಅವರು ಅದನ್ನು ಪಡೆದುದರ ನಿಮಿತ್ತ ಮತ್ತು ಅವರು ಜನರ ಸಂಪತ್ತನ್ನು ಅನ್ಯಾಯವಾಗಿ ತಿನ್ನುತ್ತಿದ್ದುದರ ನಿಮಿತ್ತ ನಾವು ಅವರ ಪೈಕಿ ಸತ್ಯನಿಷೇಧಿಗಳಿಗೆ ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
لَّٰكِنِ الرَّاسِخُونَ فِي الْعِلْمِ مِنْهُمْ وَالْمُؤْمِنُونَ يُؤْمِنُونَ بِمَا أُنزِلَ إِلَيْكَ وَمَا أُنزِلَ مِن قَبْلِكَ ۚ وَالْمُقِيمِينَ الصَّلَاةَ ۚ وَالْمُؤْتُونَ الزَّكَاةَ وَالْمُؤْمِنُونَ بِاللَّهِ وَالْيَوْمِ الْآخِرِ أُولَٰئِكَ سَنُؤْتِيهِمْ أَجْرًا عَظِيمًا ۝١٦٢
📖 ಅನುವಾದ ಆಯತ್ 162
ಆದರೆ ಅವರ ಪೈಕಿ ಪರಿಪಕ್ವ ಜ್ಞಾನವಿರುವವರು ಮತ್ತು ನಿಮಗೆ ಅವತೀರ್ಣವಾದುದರಲ್ಲೂ ನಿಮಗಿಂತ ಮುಂಚೆ ಅವತೀರ್ಣವಾದುದರಲ್ಲೂ ವಿಶ್ವಾಸವಿಡುವ ಸತ್ಯ ವಿಶ್ವಾಸಿಗಳಾಗಿರುವರು ಮತ್ತು ಅವರು ನಮಾಝನ್ನು ಸಂಸ್ಥಾಪಿಸುವರು, ಝಕಾತ್ ನೀಡುವವರು ಮತ್ತು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರಾಗಿದ್ದಾರೆ. ಅಂತಹವರಿಗೆ ನಾವು ಮಹಾಪ್ರತಿಫಲವನ್ನು ನೀಡಲಿರುವೆವು.
۞ إِنَّا أَوْحَيْنَا إِلَيْكَ كَمَا أَوْحَيْنَا إِلَىٰ نُوحٍ وَالنَّبِيِّينَ مِن بَعْدِهِ ۚ وَأَوْحَيْنَا إِلَىٰ إِبْرَاهِيمَ وَإِسْمَاعِيلَ وَإِسْحَاقَ وَيَعْقُوبَ وَالْأَسْبَاطِ وَعِيسَىٰ وَأَيُّوبَ وَيُونُسَ وَهَارُونَ وَسُلَيْمَانَ ۚ وَآتَيْنَا دَاوُودَ زَبُورًا ۝١٦٣
📖 ಅನುವಾದ ಆಯತ್ 163
ಖಂಡಿತವಾಗಿಯೂ ನೂಹ್ ಮತ್ತು ಅವರ ನಂತರದ ಪೈಗಂಬರರಿಗೆ ದಿವ್ಯ ಸಂದೇಶವನ್ನು ನೀಡಿದಂತೆ, ನಾವು ನಿಮ್ಮೆಡೆಗೂ ದಿವ್ಯಸಂದೇಶವನ್ನು ನೀಡಿದ್ದೇವೆ; ಇಬ್ರಾಹೀಮ್, ಇಸ್ಮಾಹೀಲ್, ಇಸ್‌ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತತಿಗಳಿಗೆ ಮತ್ತು ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ಮುಂತಾದವರೆಡೆಗೆ ನಾವು ದಿವ್ಯ ಸಂದೇಶವನ್ನು ನೀಡಿದ್ದೆವು ಮತ್ತು ದಾವೂದ್‌ರಿಗೆ ನಾವು ಝಬೂರ್ ನೀಡಿದ್ದೆವು.
وَرُسُلًا قَدْ قَصَصْنَاهُمْ عَلَيْكَ مِن قَبْلُ وَرُسُلًا لَّمْ نَقْصُصْهُمْ عَلَيْكَ ۚ وَكَلَّمَ اللَّهُ مُوسَىٰ تَكْلِيمًا ۝١٦٤
📖 ಅನುವಾದ ಆಯತ್ 164
ಮತ್ತು ನಾವು ನಿಮಗಿಂತ ಮುಂಚಿನ ಅನೇಕ ಸಂದೇಶವಾಹಕರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿದ್ದೇವೆ ಇನ್ನೂ ಅನೇಕ ಸಂದೇಶವಾಹಕರ (ವೃತ್ತಾಂತಗಳನ್ನು ವಿವರಿಸಿ ಕೊಟ್ಟಿಲ್ಲ) ಮೂಸಾರೊಂದಿಗೆ ಅಲ್ಲಾಹನು ನೇರವಾಗಿ ಮಾತನಾಡಿರುವನು.
رُّسُلًا مُّبَشِّرِينَ وَمُنذِرِينَ لِئَلَّا يَكُونَ لِلنَّاسِ عَلَى اللَّهِ حُجَّةٌ بَعْدَ الرُّسُلِ ۚ وَكَانَ اللَّهُ عَزِيزًا حَكِيمًا ۝١٦٥
📖 ಅನುವಾದ ಆಯತ್ 165
ಅವರು ಶುಭವಾರ್ತೆ ನೀಡುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರಾಗಿದ್ದರು. ಇದೇಕೆಂದರೆ ಸಂದೇಶವಾಹಕರ (ಆಗಮನದ) ನಂತರ ಜನರಿಗೆ ಅಲ್ಲಾಹನ ವಿರುದ್ಧ ಯಾವ ಪುರಾವೆಯು ಇಲ್ಲದಿರಲೆಂದಾಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
لَّٰكِنِ اللَّهُ يَشْهَدُ بِمَا أَنزَلَ إِلَيْكَ ۖ أَنزَلَهُ بِعِلْمِهِ ۖ وَالْمَلَائِكَةُ يَشْهَدُونَ ۚ وَكَفَىٰ بِاللَّهِ شَهِيدًا ۝١٦٦
📖 ಅನುವಾದ ಆಯತ್ 166
ಆದರೆ ಅಲ್ಲಾಹನು ನಿಮ್ಮೆಡೆಗೆ ಅವತೀರ್ಣಗೊಳಿಸಿರುವುದನ್ನು ತನ್ನ ಜ್ಞಾನದಿಂದಲೇ ಅವತೀರ್ಣಗೊಳಿಸಿದ್ದಾನೆಂದು ಅವನೇ ಸಾಕ್ಷö್ಯ ವಹಿಸುತ್ತಿದ್ದಾನೆ ಮತ್ತು ಮಲಕ್‌ಗಳು ಸಾಕ್ಷö್ಯ ವಹಿಸುತ್ತಾರೆ. ಸಾಕ್ಷಿಯಾಗಿ ಅಲ್ಲಾಹನೇ ಸಾಕು.
إِنَّ الَّذِينَ كَفَرُوا وَصَدُّوا عَن سَبِيلِ اللَّهِ قَدْ ضَلُّوا ضَلَالًا بَعِيدًا ۝١٦٧
📖 ಅನುವಾದ ಆಯತ್ 167
ಯಾರು ಸತ್ಯನಿಷೇಧಿಸಿದರೋ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದರೋ ಅವರು ಖಂಡಿತವಾಗಿಯು ಪಥಭ್ರಷ್ಟತೆಯಲ್ಲಿ ಬಹುದೂರ ಸಾಗಿಬಿಟ್ಟರು.
إِنَّ الَّذِينَ كَفَرُوا وَظَلَمُوا لَمْ يَكُنِ اللَّهُ لِيَغْفِرَ لَهُمْ وَلَا لِيَهْدِيَهُمْ طَرِيقًا ۝١٦٨
📖 ಅನುವಾದ ಆಯತ್ 168
ಯಾರು ಸತ್ಯನಿಷೇಧಿಸಿದರೋ ಮತ್ತು ಅಕ್ರಮವೆಸಗಿದರೋ ಅಲ್ಲಾಹನು ಅವರಿಗೆಂದಿಗೂ ಕ್ಷಮಿಸುವುದಿಲ್ಲ. ಮತ್ತು ಅವರಿಗೆ ಯಾವ ದಾರಿಯನ್ನು ತೋರಿಸುವುದಿಲ್ಲ.
إِلَّا طَرِيقَ جَهَنَّمَ خَالِدِينَ فِيهَا أَبَدًا ۚ وَكَانَ ذَٰلِكَ عَلَى اللَّهِ يَسِيرًا ۝١٦٩
📖 ಅನುವಾದ ಆಯತ್ 169
ಆದರೆ ನರಕದ ದಾರಿಯ ಹೊರತು ಅದರಲ್ಲವರು ಶಾಶ್ವತವಾಗಿರುವರು ಮತ್ತು ಇದು ಅಲ್ಲಾಹನಿಗೆ ಅತೀ ಸುಲಭವಾಗಿದೆ.
يَا أَيُّهَا النَّاسُ قَدْ جَاءَكُمُ الرَّسُولُ بِالْحَقِّ مِن رَّبِّكُمْ فَآمِنُوا خَيْرًا لَّكُمْ ۚ وَإِن تَكْفُرُوا فَإِنَّ لِلَّهِ مَا فِي السَّمَاوَاتِ وَالْأَرْضِ ۚ وَكَانَ اللَّهُ عَلِيمًا حَكِيمًا ۝١٧٠
📖 ಅನುವಾದ ಆಯತ್ 170
ಓ ಜನರೇ, ನಿಮ್ಮ ಪ್ರಭುವಿನ ವತಿಯ ಸತ್ಯದೊಂದಿಗೆ ನಿಮ್ಮ ಬಳಿಗೆ ಸಂದೇಶವಾಹಕರು ಬಂದಿರುತ್ತಾರೆ. ಆದ್ದರಿಂದ ನಿಮ್ಮ ಒಳಿತಿಗಾಗಿ ನೀವು ವಿಶ್ವಾಸವಿಡಿರಿ ಇನ್ನು ನೀವು ನಿರಾಕರಿಸುವುದಾದರೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಮತ್ತು ಅಲ್ಲಾಹನು ಎಲ್ಲವನ್ನೂ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
يَا أَهْلَ الْكِتَابِ لَا تَغْلُوا فِي دِينِكُمْ وَلَا تَقُولُوا عَلَى اللَّهِ إِلَّا الْحَقَّ ۚ إِنَّمَا الْمَسِيحُ عِيسَى ابْنُ مَرْيَمَ رَسُولُ اللَّهِ وَكَلِمَتُهُ أَلْقَاهَا إِلَىٰ مَرْيَمَ وَرُوحٌ مِّنْهُ ۖ فَآمِنُوا بِاللَّهِ وَرُسُلِهِ ۖ وَلَا تَقُولُوا ثَلَاثَةٌ ۚ انتَهُوا خَيْرًا لَّكُمْ ۚ إِنَّمَا اللَّهُ إِلَٰهٌ وَاحِدٌ ۖ سُبْحَانَهُ أَن يَكُونَ لَهُ وَلَدٌ ۘ لَّهُ مَا فِي السَّمَاوَاتِ وَمَا فِي الْأَرْضِ ۗ وَكَفَىٰ بِاللَّهِ وَكِيلًا ۝١٧١
📖 ಅನುವಾದ ಆಯತ್ 171
ಓ ಗ್ರಂಥದವರೇ, ನೀವು ನಿಮ್ಮ ಧರ್ಮದ ವಿಷಯದಲ್ಲಿ ಮಿತಿಮೀರದಿರಿ. ಅಲ್ಲಾಹನ ಹೆಸರಿನಲ್ಲಿ ಸತ್ಯವನ್ನಲ್ಲದೇ ಇನ್ನೇನನ್ನೂ ಹೇಳಬೇಡಿರಿ. ಮರ್ಯಮರ ಮಗನಾದ ಮಸೀಹ ಈಸಾ ಕೇವಲ ಅಲ್ಲಾಹನ ಸಂದೇಶವಾಹಕರೂ, ಮತ್ತು ಮರ್ಯಮರ ಕಡೆಗೆ ಹಾಕಲಾದ ಅವನ ವಚನವೂ ಮತ್ತು ಅವನ ಕಡೆಯ ಒಂದು ಆತ್ಮವೂ ಮಾತ್ರ ಆಗಿರುವರು. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ ಮತ್ತು ತ್ರೀಏಕತ್ವ ಎಂದು ಹೇಳಬೇಡಿರಿ. ನೀವು (ಹಾಗೆ ಹೇಳುವುದನ್ನು) ಬಿಟ್ಟುಬಿಡಿರಿ ಅದುವೇ ನಿಮಗೆ ಉತ್ತಮವಾಗಿದೆ, ಅಲ್ಲಾಹನು ಮಾತ್ರ ಏಕಮೇವ ಆರಾಧ್ಯನಾಗಿದ್ದಾನೆ. ತನಗೆ ಸಂತಾನವು ಉಂಟಾಗುವುದರಿAದ ಅವನು ಅದೆಷ್ಟೋ ಪಾವನನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದೇ ಆಗಿದೆ. ಕಾರ್ಯ ನಿರ್ವಾಹಕನಾಗಿ ಅಲ್ಲಾಹನೇ ಸಾಕು.
لَّن يَسْتَنكِفَ الْمَسِيحُ أَن يَكُونَ عَبْدًا لِّلَّهِ وَلَا الْمَلَائِكَةُ الْمُقَرَّبُونَ ۚ وَمَن يَسْتَنكِفْ عَنْ عِبَادَتِهِ وَيَسْتَكْبِرْ فَسَيَحْشُرُهُمْ إِلَيْهِ جَمِيعًا ۝١٧٢
📖 ಅನುವಾದ ಆಯತ್ 172
ಮಸೀಹ ಈಸಾರಿಗೆ ಅಲ್ಲಾಹನ ದಾಸರಾಗಿರುವುದರಲ್ಲಿ ಯಾವುದೇ ಸಂಕೋಚ ಉಂಟಾಗಲಾರದು ಮತ್ತು ಸಾಮಿಪ್ಯಗಳಿಸಿದ ಮಲಕ್‌ಗಳಿಗೂ ಸಹ ಇನ್ನು ಯಾರಾದರೂ ಅಲ್ಲಾಹನ ಆರಾಧನೆಯಲ್ಲಿ ತನಗಾಗಿ ವೈಮನಸ್ಸು ತಾಳುತ್ತಾರೋ ಹಾಗೂ ದರ್ಪ ತೋರುತ್ತಾರೋ ಅವರನ್ನು ಅವನು ತನ್ನೆಡೆಗೆ ಒಟ್ಟುಗೂಡಿಸಲಿರುವನು.
فَأَمَّا الَّذِينَ آمَنُوا وَعَمِلُوا الصَّالِحَاتِ فَيُوَفِّيهِمْ أُجُورَهُمْ وَيَزِيدُهُم مِّن فَضْلِهِ ۖ وَأَمَّا الَّذِينَ اسْتَنكَفُوا وَاسْتَكْبَرُوا فَيُعَذِّبُهُمْ عَذَابًا أَلِيمًا وَلَا يَجِدُونَ لَهُم مِّن دُونِ اللَّهِ وَلِيًّا وَلَا نَصِيرًا ۝١٧٣
📖 ಅನುವಾದ ಆಯತ್ 173
ಇನ್ನು ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದರೋ ಅವರ ಪ್ರತಿಫಲವನ್ನು ಅವನು ಅವರಿಗೆ ಸಂಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಅಧಿಕವಾಗಿ ನೀಡುವನು. ಆದರೆ ದರ್ಪ ಹಾಗೂ ವೈಮನಸ್ಸು ತೋರಿಸುವವರಿಗೆ ಅವನು ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ಅವರು ತಮಗೆ ಅಲ್ಲಾಹನ ಹೊರತು ಯಾವೊಬ್ಬ ಮಿತ್ರನನ್ನಾಗಲೀ, ಸಹಾಯಕನನ್ನಾಗಲೀ ಪಡೆಯಲಾರರು.
يَا أَيُّهَا النَّاسُ قَدْ جَاءَكُم بُرْهَانٌ مِّن رَّبِّكُمْ وَأَنزَلْنَا إِلَيْكُمْ نُورًا مُّبِينًا ۝١٧٤
📖 ಅನುವಾದ ಆಯತ್ 174
ಓ ಜನರೇ, ಖಂಡಿತವಾಗಿಯು ನಿಮ್ಮ ಪ್ರಭುವಿನ ಬಳಿಯಿಂದ ನಿಮಗೆ ಸ್ಪಷ್ಟವಾದ ಪುರಾವೆ (ಕುರ್‌ಆನ್) ಬಂದಿರುತ್ತದೆ ಮತ್ತು ನಾವು ನಿಮ್ಮೆಡೆಗೆ ಸ್ಪಷ್ಟವಾದ ಪ್ರಕಾಶವನ್ನು ಇಳಿಸಿಕೊಟ್ಟಿದ್ದೇವೆ.
فَأَمَّا الَّذِينَ آمَنُوا بِاللَّهِ وَاعْتَصَمُوا بِهِ فَسَيُدْخِلُهُمْ فِي رَحْمَةٍ مِّنْهُ وَفَضْلٍ وَيَهْدِيهِمْ إِلَيْهِ صِرَاطًا مُّسْتَقِيمًا ۝١٧٥
📖 ಅನುವಾದ ಆಯತ್ 175
ಇನ್ನು ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ-ಮತ್ತು ಅವನ ಪಾಶವನ್ನು ದೃಢವಾಗಿ ಹಿಡಿದು ಕೊಳ್ಳುತ್ತಾನೋ ಅವರನ್ನು ಅವನು ತನ್ನ ಕಾರುಣ್ಯದಲ್ಲೂ, ಅನುಗ್ರಹದಲ್ಲೂ ಪ್ರವೇಶಗೊಳಿಸುವನು. ಮತ್ತು ಅವನು ಅವರಿಗೆ ತನ್ನ ಕಡೆಯ ನೇರಮಾರ್ಗವನ್ನು ತೋರಿಸಿಕೊಡುವನು.
يَسْتَفْتُونَكَ قُلِ اللَّهُ يُفْتِيكُمْ فِي الْكَلَالَةِ ۚ إِنِ امْرُؤٌ هَلَكَ لَيْسَ لَهُ وَلَدٌ وَلَهُ أُخْتٌ فَلَهَا نِصْفُ مَا تَرَكَ ۚ وَهُوَ يَرِثُهَا إِن لَّمْ يَكُن لَّهَا وَلَدٌ ۚ فَإِن كَانَتَا اثْنَتَيْنِ فَلَهُمَا الثُّلُثَانِ مِمَّا تَرَكَ ۚ وَإِن كَانُوا إِخْوَةً رِّجَالًا وَنِسَاءً فَلِلذَّكَرِ مِثْلُ حَظِّ الْأُنثَيَيْنِ ۗ يُبَيِّنُ اللَّهُ لَكُمْ أَن تَضِلُّوا ۗ وَاللَّهُ بِكُلِّ شَيْءٍ عَلِيمٌ ۝١٧٦
📖 ಅನುವಾದ ಆಯತ್ 176
ಅವರು ನಿಮ್ಮೊಂದಿಗೆ ಧರ್ಮವಿಧಿ ಕೇಳುತ್ತಾರೆ. ಹೇಳಿರಿ: (ಸ್ವತಃ) ಅಲ್ಲಾಹನು ನಿಮಗೆ ಕಲಾಲ(ತಂದೆ ಹಾಗು ಸಂತಾನವಿಲ್ಲದವನು)ದ ಕುರಿತು ನಿಮಗೆ ಧರ್ಮವಿಧಿಯನ್ನು ನೀಡುತ್ತಾನೆ. ತಂದೆ ಮತ್ತು ಸಂತಾನವಿಲ್ಲದ ಒಬ್ಬ ವ್ಯಕ್ತಿಯು ಮೃತಪಟ್ಟರೆ ಮತ್ತು ಅವನಿಗೆ ಒಬ್ಬಳು ಸ್ವಂತ ಸಹೋದರಿಯಿದ್ದರೆ ಅವನು ಬಿಟ್ಟು ಹೋದ ಸಂಪತ್ತಿನ ಅರ್ಧಭಾಗ ಅವಳಿಗಿರುವುದು. ಮತ್ತು (ಮೃತಪಟ್ಟ ವ್ಯಕ್ತಿಯು) ಮಹಿಳೆಯಾಗಿದ್ದು, ಅವಳಿಗೆ ಸಂತಾನವಿಲ್ಲದಿದ್ದರೆ ಅವನ ಸ್ವಂತ ಸಹೋದರನು ಅವಳ ವಾರೀಸುದಾರನಾಗುವನು; ಇನ್ನು ಮೃತ ವ್ಯಕ್ತಿಗೆ ಇಬ್ಬರು ಸಹೋದರಿಯರಿದ್ದರೆ ಬಿಟ್ಟು ಹೋದ ಸಂಪತ್ತಿನ ಮೂರನೇ ಎರಡು ಭಾಗವು ಅವರಿಗಿರುವುದು. ಮತ್ತು ಅನೇಕ ಮಂದಿ ಸಹೋದರರು ಸಹೋದರಿಯರಿದ್ದರೆ ಇಬ್ಬರು ಸ್ತಿçÃಯರಿಗೆ ದೊರಕುವ ಸಮಾನ ಪಾಲು ಒಬ್ಬ ಪುರುಷನಿಗಿರುವುದು. ನೀವು ದಾರಿ ತಪ್ಪಬಾರದೆಂದು ಅಲ್ಲಾಹನು ನಿಮಗೆ ವಿಷಯಗಳನ್ನು ವಿವರಿಸಿಕೊಡುತ್ತಿದ್ದಾನೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಕುರಿತು ಅರಿವುಳ್ಳವನಾಗಿದ್ದಾನೆ.
← 3 ಅನ್-ನಿಸಾ (4/114) 5 →
ಓದಿ ಸೂರಾ ಅನ್-ನಿಸಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

4النساء An-Nisa 📚 176 ಆಯತ್ مدنية

ಆಯತ್‌ವಾರು – ಸೂರಾ ಅನ್-ನಿಸಾ — 176 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers