ಸೂರಾ ಅಸ್-ಸಜ್ದಾ ಅರೇಬಿಕ್ ಮತ್ತು ಕನ್ನಡ
ಸೂರಾ ಅಸ್-ಸಜ್ದಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್ನ ಅರ್ಥ. (30 ಆಯತ್ — مكية). ಅಸ್-ಸಜ್ದಾ ಆಲಿಸಿ, ಅಸ್-ಸಜ್ದಾ ಅನುವಾದ, ಅಸ್-ಸಜ್ದಾ mp3, ಅಸ್-ಸಜ್ದಾ pdf.ಸೂರಾ ಅಸ್-ಸಜ್ದಾ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
تَنزِيلُ الْكِتَابِ لَا رَيْبَ فِيهِ مِن رَّبِّ الْعَالَمِينَ ٢
📖 ಅನುವಾದ
ಆಯತ್ 2
ಈ ಗ್ರಂಥವು ಸರ್ವಲೋಕದ ಪ್ರಭುವಿನ ವತಿಯಿಂದ ಅವತೀರ್ಣಗೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
أَمْ يَقُولُونَ افْتَرَاهُ ۚ بَلْ هُوَ الْحَقُّ مِن رَّبِّكَ لِتُنذِرَ قَوْمًا مَّا أَتَاهُم مِّن نَّذِيرٍ مِّن قَبْلِكَ لَعَلَّهُمْ يَهْتَدُونَ ٣
📖 ಅನುವಾದ
ಆಯತ್ 3
ಇದನ್ನು ಪ್ರವಾದಿಯವರು ಸ್ವತಃ ರಚಿಸಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ಇದು ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಯಾರು ಮುನ್ನೆಚ್ಚರಿಕೆಗಾರರು ಬಂದಿರದAತಹ ಒಂದು ಸಮೂಹಕ್ಕೆ ನೀವು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರು ಸನ್ಮಾರ್ಗ ಪಡೆಯಲೂಬಹುದು.
اللَّهُ الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۖ مَا لَكُم مِّن دُونِهِ مِن وَلِيٍّ وَلَا شَفِيعٍ ۚ أَفَلَا تَتَذَكَّرُونَ ٤
📖 ಅನುವಾದ
ಆಯತ್ 4
ಅಲ್ಲಾಹನೆಂದರೆ ಆಕಾಶಗಳನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ಮಧ್ಯಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾಗಿದ್ದಾನೆ. ತರುವಾಯ ಸಿಂಹಾಸನದ ಮೇಲೆ ಆರೋಢನಾದನು. ಅವನ ಹೊರತು ನಿಮಗೆ ಯಾವ ರಕ್ಷಕನಾಗಲೀ, ಶಿಫಾರಸ್ಸುಗಾರನಾಗಲೀ ಇಲ್ಲ. ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
يُدَبِّرُ الْأَمْرَ مِنَ السَّمَاءِ إِلَى الْأَرْضِ ثُمَّ يَعْرُجُ إِلَيْهِ فِي يَوْمٍ كَانَ مِقْدَارُهُ أَلْفَ سَنَةٍ مِّمَّا تَعُدُّونَ ٥
📖 ಅನುವಾದ
ಆಯತ್ 5
ಅವನು ಆಕಾಶದಿಂದ ಭೂಮಿಯವರೆಗೆ ಸಕಲ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ತರುವಾಯ ಆ ಕಾರ್ಯವು ಅವನೆಡೆಗೆ ಏರಿಹೋಗುವುದು ಇಂತಹಾ ಒಂದು ದಿನದಲ್ಲಿ ಅದರÀ ವಿಸ್ತಾರವು ನೀವು ಗಣಿಸುವ ಸಾವಿರ ವರ್ಷಗಳಾಗಿರುವುದು.
ذَٰلِكَ عَالِمُ الْغَيْبِ وَالشَّهَادَةِ الْعَزِيزُ الرَّحِيمُ ٦
📖 ಅನುವಾದ
ಆಯತ್ 6
ಅವನೇ ಗೋಚರ ಅಗೋಚರಗಳನ್ನು ಅರಿಯುವವನೂ, ಪ್ರತಾಪಶಾಲಿಯು, ಕರುಣಾನಿಧಿಯು ಆಗಿರುವÀನು.
الَّذِي أَحْسَنَ كُلَّ شَيْءٍ خَلَقَهُ ۖ وَبَدَأَ خَلْقَ الْإِنسَانِ مِن طِينٍ ٧
📖 ಅನುವಾದ
ಆಯತ್ 7
ಅವನು ಸಕಲ ವಸ್ತುಗಳನ್ನೂ ಚೆನ್ನಾಗಿ ಸೃಷ್ಟಿಸಿದನು ಮತ್ತು ಮಾನವನ ಸೃಷ್ಟಿಯನ್ನು ಅವನು ಆವೇ ಮಣ್ಣಿನಿಂದ ಆರಂಭಿಸಿದನು.
ثُمَّ جَعَلَ نَسْلَهُ مِن سُلَالَةٍ مِّن مَّاءٍ مَّهِينٍ ٨
📖 ಅನುವಾದ
ಆಯತ್ 8
ತರುವಾಯ ಅವನ ಸಂತತಿಯನ್ನು ತುಚ್ಛವಾದ ನೀರಿನ ಸತ್ವದಿಂದ ಮುಂದುವರಿಸಿದನು.
ثُمَّ سَوَّاهُ وَنَفَخَ فِيهِ مِن رُّوحِهِ ۖ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَّا تَشْكُرُونَ ٩
📖 ಅನುವಾದ
ಆಯತ್ 9
ತರುವಾಯ ಅವನು ಅವನಿಗೆ ಉತ್ತಮ ಸ್ವರೂಪವನ್ನು ನೀಡಿ ತನ್ನವತಿಯ ಆತ್ಮವನ್ನು ಅವನಲ್ಲಿ ಊದಿದನು. ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನು, ಹೃದಯಗಳನ್ನೂ ಉಂಟುಮಾಡಿದವನು. ನೀವು ಸ್ವಲ್ಪ ಮಾತ್ರವೇ ಕೃತಜ್ಞತೆ ಸಲ್ಲಿಸುತ್ತೀರಿ.
وَقَالُوا أَإِذَا ضَلَلْنَا فِي الْأَرْضِ أَإِنَّا لَفِي خَلْقٍ جَدِيدٍ ۚ بَلْ هُم بِلِقَاءِ رَبِّهِمْ كَافِرُونَ ١٠
📖 ಅನುವಾದ
ಆಯತ್ 10
ಅವರು ಹೇಳಿದರು: ನಾವು ಭೂಮಿಯಲ್ಲಿ ಮಣ್ಣು ಪಾಲಾಗಿಬಿಟ್ಟರೂ ನಾವು ಹೊಸದಾಗಿ ಸೃಷ್ಟಿಸಲಾಗುವೆವೋ? ಹಾಗಲ್ಲ, ಅವರು ತಮ್ಮ ಪ್ರಭುವಿನ ಭೇಟಿಯನ್ನು ನಿಷೇಧಿಸುವವರಾಗಿದ್ದಾರೆ.
۞ قُلْ يَتَوَفَّاكُم مَّلَكُ الْمَوْتِ الَّذِي وُكِّلَ بِكُمْ ثُمَّ إِلَىٰ رَبِّكُمْ تُرْجَعُونَ ١١
📖 ಅನುವಾದ
ಆಯತ್ 11
ಹೇಳಿರಿ: ಓ ಪೈಗಂಬರರೇ! ನಿಮ್ಮ ಮೇಲೆ ನಿಯೋಗಿಸಲಾದ ಮರಣದ ದೂತನು ನಿಮ್ಮನ್ನು ಮೃತಪಡಿಸಲಿದ್ದಾನೆ. ತರುವಾಯ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವಿರಿ.
وَلَوْ تَرَىٰ إِذِ الْمُجْرِمُونَ نَاكِسُو رُءُوسِهِمْ عِندَ رَبِّهِمْ رَبَّنَا أَبْصَرْنَا وَسَمِعْنَا فَارْجِعْنَا نَعْمَلْ صَالِحًا إِنَّا مُوقِنُونَ ١٢
📖 ಅನುವಾದ
ಆಯತ್ 12
ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು ಹೇಳುತ್ತಿರುವರು: ನಮ್ಮ ಪ್ರಭೂ, ನಾವಿಂದು ಕಂಡಿರುವೆವು ಮತ್ತು ಕೇಳಿಸಿಕೊಂಡಿರುವೆವು. ಆದ್ದರಿಂದ ನಮ್ಮನ್ನು ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ಖಂಡಿತವಾಗಿಯು ನಾವು ಈಗ ದೃಢವಿಶ್ವಾಸವುಳ್ಳವರಾಗಿದ್ದೇವೆ.
وَلَوْ شِئْنَا لَآتَيْنَا كُلَّ نَفْسٍ هُدَاهَا وَلَٰكِنْ حَقَّ الْقَوْلُ مِنِّي لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ ١٣
📖 ಅನುವಾದ
ಆಯತ್ 13
ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ನಾವು ಅವನ ಸನ್ಮಾರ್ಗವನ್ನು ಕರುಣಿಸುತ್ತಿದ್ದೆವು. ಆದರೆ ಯಕ್ಷ ಮತ್ತು ಮಾನವರಿಂದ ನಾನು ನರಕವನ್ನು ತುಂಬಿ ಬಿಡುವೆನು ಎಂಬ ನನ್ನ ಕಡೆಯ ಮಾತು ಸ್ಥಿರವಾಗಿಬಿಟ್ಟಿದೆ.
فَذُوقُوا بِمَا نَسِيتُمْ لِقَاءَ يَوْمِكُمْ هَٰذَا إِنَّا نَسِينَاكُمْ ۖ وَذُوقُوا عَذَابَ الْخُلْدِ بِمَا كُنتُمْ تَعْمَلُونَ ١٤
📖 ಅನುವಾದ
ಆಯತ್ 14
ಆದ್ದರಿಂದ ನೀವು ನಿಮ್ಮ ಈ ದಿನದ ಭೇಟಿಯನ್ನು ಮರೆತು ಬಿಟ್ಟಿರುವ ಕಾರಣ ಶಿಕ್ಷೆಯನ್ನು ಸವಿಯಿರಿ. ನಾವು ಸಹ ನಿಮ್ಮನ್ನು ಮರೆತು ಬಿಟ್ಟಿದ್ದೇವೆ. ನೀವು ಮಾಡುತ್ತಿದ್ದಂತಹ ಕರ್ಮದ (ಫಲವಾಗಿ) ಶಾಶ್ವತ ಶಿಕ್ಷೆಯನ್ನು ಸವಿಯಿರಿ.
إِنَّمَا يُؤْمِنُ بِآيَاتِنَا الَّذِينَ إِذَا ذُكِّرُوا بِهَا خَرُّوا سُجَّدًا وَسَبَّحُوا بِحَمْدِ رَبِّهِمْ وَهُمْ لَا يَسْتَكْبِرُونَ ۩ ١٥
📖 ಅನುವಾದ
ಆಯತ್ 15
ನಮ್ಮ ಸೂಕ್ತಗಳ ಮೂಲಕ ಬೋಧಿಸಲಾದಾಗ ಸಾಷ್ಟಾಂಗವೆರಗುವವರು ಮತ್ತು ತಮ್ಮ ಪ್ರಭುವನ್ನು ಸ್ತುತಿಸುವವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ವಾಸವಿಡುತ್ತಾರೆ ಮತು ್ತಅವರು ಅಹಂಕಾರತೋರುವುದಿಲ್ಲ.
تَتَجَافَىٰ جُنُوبُهُمْ عَنِ الْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَاهُمْ يُنفِقُونَ ١٦
📖 ಅನುವಾದ
ಆಯತ್ 16
ಅವರ ಪಾರ್ಶ್ವಗಳು ತಮ್ಮ ಹಾಸಿಗೆಗಳಿಂದ ಬೇರ್ಪಟ್ಟಿರುತ್ತವೆ. ಅವರು ಭಯ ಮತ್ತು ನಿರೀಕ್ಷೆಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದರಿಂದ ಅವರು ಖರ್ಚು ಮಾಡುತ್ತಾರೆ.
فَلَا تَعْلَمُ نَفْسٌ مَّا أُخْفِيَ لَهُم مِّن قُرَّةِ أَعْيُنٍ جَزَاءً بِمَا كَانُوا يَعْمَلُونَ ١٧
📖 ಅನುವಾದ
ಆಯತ್ 17
ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ ವ್ಯಕ್ತಿಯು ಅರಿಯುವುದಿಲ್ಲ.
أَفَمَن كَانَ مُؤْمِنًا كَمَن كَانَ فَاسِقًا ۚ لَّا يَسْتَوُونَ ١٨
📖 ಅನುವಾದ
ಆಯತ್ 18
ಏನು; ಸತ್ಯವಿಶ್ವಾಸಿಯು ಧಿಕ್ಕಾರಿಯಂತಾಗುವನೇ? ಅವರು ಸಮಾನರಲ್ಲ.
أَمَّا الَّذِينَ آمَنُوا وَعَمِلُوا الصَّالِحَاتِ فَلَهُمْ جَنَّاتُ الْمَأْوَىٰ نُزُلًا بِمَا كَانُوا يَعْمَلُونَ ١٩
📖 ಅನುವಾದ
ಆಯತ್ 19
ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮವನ್ನೂ ಮಾಡಿದರೋ ಅವರಿಗೆ ಅತಿಥ್ಯವಾಗಿ ಶಾಶ್ವತ ವಾಸದ ಸ್ವರ್ಗೋದ್ಯಾನಗಳಿವೆ. ಇದು ಅವರು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ.
وَأَمَّا الَّذِينَ فَسَقُوا فَمَأْوَاهُمُ النَّارُ ۖ كُلَّمَا أَرَادُوا أَن يَخْرُجُوا مِنْهَا أُعِيدُوا فِيهَا وَقِيلَ لَهُمْ ذُوقُوا عَذَابَ النَّارِ الَّذِي كُنتُم بِهِ تُكَذِّبُونَ ٢٠
📖 ಅನುವಾದ
ಆಯತ್ 20
ಇನ್ನು ಧಿಕ್ಕಾರವೆಸಗಿದವರ ವಾಸಸ್ಥಳವು ನರಕವಾಗಿದೆ. ಅವರು ಅಲ್ಲಿಂದ ಹೊರಬರಲು ಬಯಸುವಾಗಲೆಲ್ಲ ಅಲ್ಲಿಗೇ ಮರಳಿಸಲಾಗುವರು ಮತ್ತು ನಿಮ್ಮ ನಿಷೇಧದ ಪ್ರತಿಫಲವಾಗಿ ನರಕಾಗ್ನಿಯ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು.
وَلَنُذِيقَنَّهُم مِّنَ الْعَذَابِ الْأَدْنَىٰ دُونَ الْعَذَابِ الْأَكْبَرِ لَعَلَّهُمْ يَرْجِعُونَ ٢١
📖 ಅನುವಾದ
ಆಯತ್ 21
ಖಂಡಿತವಾಗಿಯು ನಾವು ಅವರಿಗೆ ಮಹಾ ಶಿಕ್ಷೆಯ ಮೊದಲು ಇಹಲೋಕದಲ್ಲೇ ಸಣ್ಣ ಶಿಕ್ಷೆಯ ರುಚಿಯನ್ನು ಸವಿಸುವೆವು. ಇದು ಅವರು ಮರಳಲೆಂದಾಗಿದೆ.
وَمَنْ أَظْلَمُ مِمَّن ذُكِّرَ بِآيَاتِ رَبِّهِ ثُمَّ أَعْرَضَ عَنْهَا ۚ إِنَّا مِنَ الْمُجْرِمِينَ مُنتَقِمُونَ ٢٢
📖 ಅನುವಾದ
ಆಯತ್ 22
ತನ್ನ ಪ್ರಭುವಿನ ಸೂಕ್ತಿಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಅವುಗಳಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳಿಂದ ನಾವು ಪ್ರತೀಕಾರ ಪಡೆಯುವೆವು.
وَلَقَدْ آتَيْنَا مُوسَى الْكِتَابَ فَلَا تَكُن فِي مِرْيَةٍ مِّن لِّقَائِهِ ۖ وَجَعَلْنَاهُ هُدًى لِّبَنِي إِسْرَائِيلَ ٢٣
📖 ಅನುವಾದ
ಆಯತ್ 23
ನಿಸ್ಸಂಶಯವಾಗಿಯು ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದ್ದೇವು. ಆದ್ದರಿಂದ ನೀವು ಅವರನ್ನು ಭೇಟಿಯಾಗುವ ವಿಚಾರದಲ್ಲಿ ಸಂದೇಹಕ್ಕೊಳಗಾಗ ಬೇಡಿರಿ. ನಾವು ತೌರಾತನ್ನು ಇಸ್ರಾಯೀಲ್ ಸಂತತಿಗಳಿಗೆ ಸನ್ಮಾರ್ಗದರ್ಶನವನ್ನಾಗಿ ಮಾಡಿದೆವು.
وَجَعَلْنَا مِنْهُمْ أَئِمَّةً يَهْدُونَ بِأَمْرِنَا لَمَّا صَبَرُوا ۖ وَكَانُوا بِآيَاتِنَا يُوقِنُونَ ٢٤
📖 ಅನುವಾದ
ಆಯತ್ 24
ಅವರು ಸಹನೆ ಪಾಲಿಸಿದಾಗ ಅವರ ಪೈಕಿ ನಮ್ಮ ಆಜ್ಞೆಯನ್ನು ಅನುಸರಿಸಿ ಮಾರ್ಗದರ್ಶನ ನೀಡುವಂತಹ ನಾಯಕರನ್ನು ನಾವು ಉಂಟುಮಾಡಿದೆವು ಮತ್ತು ಅವರು ನಮ್ಮ ಸೂಕ್ತಿಗಳ ಮೇಲೆ ದೃಢವಿಶ್ವಾಸ ಹೊಂದಿದ್ದರು
إِنَّ رَبَّكَ هُوَ يَفْصِلُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ ٢٥
📖 ಅನುವಾದ
ಆಯತ್ 25
ಅವರು ಪರಸ್ಪರ ಭಿನ್ನತೆತೋರುವ ವಿಷಯಗಳಲ್ಲಿ ಪುನರುತ್ಥಾನ ದಿನದಂದು ಅವರ ಮಧ್ಯೆ ನಿಮ್ಮ ಪ್ರಭು ತೀರ್ಪು ನೀಡುವನು.
أَوَلَمْ يَهْدِ لَهُمْ كَمْ أَهْلَكْنَا مِن قَبْلِهِم مِّنَ الْقُرُونِ يَمْشُونَ فِي مَسَاكِنِهِمْ ۚ إِنَّ فِي ذَٰلِكَ لَآيَاتٍ ۖ أَفَلَا يَسْمَعُونَ ٢٦
📖 ಅನುವಾದ
ಆಯತ್ 26
ಇವರಿಗಿಂತ ಮುಂಚೆ ಅದೆಷ್ಟೋ ಪೀಳಿಗೆಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವÀರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ನಾಡುಗಳಲ್ಲಿ ಅವರು ಹಾದು ಹೋಗುತ್ತಿದ್ದಾರೆ. ಖಂಡಿತವಾಗಿಯೂ ಇದರಲ್ಲಿ ದೊಡ್ಡ ದೃಷ್ಟಾಂತಗಳಿವೆ. ಹಾಗಿದ್ದೂ ಇವರು ಅದನ್ನು ಆಲಿಸುವುದಿಲ್ಲವೇ?
أَوَلَمْ يَرَوْا أَنَّا نَسُوقُ الْمَاءَ إِلَى الْأَرْضِ الْجُرُزِ فَنُخْرِجُ بِهِ زَرْعًا تَأْكُلُ مِنْهُ أَنْعَامُهُمْ وَأَنفُسُهُمْ ۖ أَفَلَا يُبْصِرُونَ ٢٧
📖 ಅನುವಾದ
ಆಯತ್ 27
ನಾವು ಬರಡು ಭೂಮಿಯೆಡೆಗೆ ನೀರನ್ನು ಹರಿಸಿ ತನ್ಮೂಲಕ ಅವರ ಜಾನುವಾರುಗಳಿಗೂ ಮತ್ತು ಸ್ವತಃ ಅವರಿಗೂ ತಿನ್ನುವಂತಹ ಕೃಷಿಯನ್ನು ನಾವು ಉತ್ಪಾದಿಸುತ್ತೇವೆ ಎಂಬುದನ್ನು ಅವರು ಕಾಣಲಿಲ್ಲವೇ? ಹಾಗಿದ್ದೂ ಅವರು ನೋಡುವುದಿಲ್ಲವೇ?
وَيَقُولُونَ مَتَىٰ هَٰذَا الْفَتْحُ إِن كُنتُمْ صَادِقِينَ ٢٨
📖 ಅನುವಾದ
ಆಯತ್ 28
ಅವರು ಕೇಳುತ್ತಾರೆ, ಈ ತೀರ್ಪು ಯಾವಾಗ? ನೀವು ಸತ್ಯವಂತರಾಗಿದ್ದರೆ.
قُلْ يَوْمَ الْفَتْحِ لَا يَنفَعُ الَّذِينَ كَفَرُوا إِيمَانُهُمْ وَلَا هُمْ يُنظَرُونَ ٢٩
📖 ಅನುವಾದ
ಆಯತ್ 29
ಪೈಗಂಬರರೇ ಉತ್ತರಿಸಿರಿ: ಅವಿಶ್ವಾಸಿಗಳಾಗಿರುವ ಜನರಿಗೆ ತೀರ್ಪಿನ ದಿನ ವಿಶ್ವಾಸ ತಾಳುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
فَأَعْرِضْ عَنْهُمْ وَانتَظِرْ إِنَّهُم مُّنتَظِرُونَ ٣٠
📖 ಅನುವಾದ
ಆಯತ್ 30
ಆದ್ದರಿಂದ ನೀವು ಅವರನ್ನು ನಿರ್ಲಕ್ಷಿಸಿರಿ ಮತ್ತು ನಿರೀಕ್ಷಿಸುತ್ತಿರಿ. ಅವರು ಸಹ ನಿರೀಕ್ಷಿಸುವವರಾಗಿದ್ದಾರೆ.
ಓದಿ ಸೂರಾ ಅಸ್-ಸಜ್ದಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

