ಸೂರಾ ಅರ್-ರಾದ್ ಅರೇಬಿಕ್ ಮತ್ತು ಕನ್ನಡ

ಸೂರಾ ಅರ್-ರಾದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (43 ಆಯತ್ — مدنية). ಅರ್-ರಾದ್ ಆಲಿಸಿ, ಅರ್-ರಾದ್ ಅನುವಾದ, ಅರ್-ರಾದ್ mp3, ಅರ್-ರಾದ್ pdf.

ಸೂರಾ ಅರ್-ರಾದ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
المر ۚ تِلْكَ آيَاتُ الْكِتَابِ ۗ وَالَّذِي أُنزِلَ إِلَيْكَ مِن رَّبِّكَ الْحَقُّ وَلَٰكِنَّ أَكْثَرَ النَّاسِ لَا يُؤْمِنُونَ ۝١
📖 ಅನುವಾದ ಆಯತ್ 1
ಅಲಿಫ್ ಲಾಮ್ ಮೀಮ್ ರಾ. ಇವು ದೈವಿಕಗ್ರಂಥದ ಸೂಕ್ತಿಗಳಾಗಿವೆ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಿದ್ದೇಲ್ಲವೂ ಸತ್ಯವಾಗಿದೆ. ಆದರೆ ಅಧಿಕÀ ಜನರು ವಿಶ್ವಾಸವಿಡುವುದಿಲ್ಲ.
اللَّهُ الَّذِي رَفَعَ السَّمَاوَاتِ بِغَيْرِ عَمَدٍ تَرَوْنَهَا ۖ ثُمَّ اسْتَوَىٰ عَلَى الْعَرْشِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُّسَمًّى ۚ يُدَبِّرُ الْأَمْرَ يُفَصِّلُ الْآيَاتِ لَعَلَّكُم بِلِقَاءِ رَبِّكُمْ تُوقِنُونَ ۝٢
📖 ಅನುವಾದ ಆಯತ್ 2
ಅಲ್ಲಾಹನೆಂದರೆ ನೀವು ನೋಡುವಂತಹ ಸ್ತಂಭಗಳಿಲ್ಲದ ಆಕಾಶಗಳನ್ನು ಮೇಲಕ್ಕೇರಿಸಿದವನು. ಅನಂತರ ಅವನು ವಿಶ್ವಸಿಂಹಾಸನದ ಮೇಲೆ ಆರೋಢನಾದನು. ಅವನೇ ಸೂರ್ಯ ಮತ್ತು ಚಂದ್ರನನ್ನು ಒಂದು ನಿಯಮಕ್ಕೆ ಅಧೀನಗೊಳಿಸಿದನು. ಪ್ರತಿಯೊಂದು ಸಹ ಒಂದು ನಿರ್ದಿಷÀ್ಟ ಅವಧಿಯ ತನಕ ಸಂಚರಿಸುತ್ತಿವೆ. ಅವನೇ ಪ್ರತಿಯೊಂದು ಕಾರ್ಯವನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪ್ರಭುವಿನ ಭೇಟಿಯನ್ನು ದೃಢವಾಗಿ ನಂಬಲೆAದು ತನ್ನ ದೃಷ್ಟಾಂತಗಳನ್ನು ಸ್ಪಷÀ್ಟವಾಗಿ ವಿವರಿಸುತ್ತಾನೆ.
وَهُوَ الَّذِي مَدَّ الْأَرْضَ وَجَعَلَ فِيهَا رَوَاسِيَ وَأَنْهَارًا ۖ وَمِن كُلِّ الثَّمَرَاتِ جَعَلَ فِيهَا زَوْجَيْنِ اثْنَيْنِ ۖ يُغْشِي اللَّيْلَ النَّهَارَ ۚ إِنَّ فِي ذَٰلِكَ لَآيَاتٍ لِّقَوْمٍ يَتَفَكَّرُونَ ۝٣
📖 ಅನುವಾದ ಆಯತ್ 3
ಅವನೇ ಭೂಮಿಯನ್ನು ವಿಸ್ತಾರಗೊಳಿಸಿದನು ಮತ್ತು ಅದರಲ್ಲಿ ಪರ್ವತಗಳನ್ನು ನದಿಗಳನ್ನು ಉಂಟುಮಾಡಿದನು ಮತ್ತು ಅವನೇ ಪ್ರತಿಯೊಂದು ಬಗೆಯ ಫಲಗಳಲ್ಲಿ ಎರಡು ಜೋಡಿಗಳನ್ನು ಉಂಟುಮಾಡಿದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ಯೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
وَفِي الْأَرْضِ قِطَعٌ مُّتَجَاوِرَاتٌ وَجَنَّاتٌ مِّنْ أَعْنَابٍ وَزَرْعٌ وَنَخِيلٌ صِنْوَانٌ وَغَيْرُ صِنْوَانٍ يُسْقَىٰ بِمَاءٍ وَاحِدٍ وَنُفَضِّلُ بَعْضَهَا عَلَىٰ بَعْضٍ فِي الْأُكُلِ ۚ إِنَّ فِي ذَٰلِكَ لَآيَاتٍ لِّقَوْمٍ يَعْقِلُونَ ۝٤
📖 ಅನುವಾದ ಆಯತ್ 4
ಮತ್ತು ಭೂಮಿಯಲ್ಲಿ ಒಂದಕ್ಕೊAದು ಅಂಟಿಕೊAಡಿರುವ ವಿಭಿನ್ನ ಭೂ ಭಾಗಗಳಿವೆ, ದ್ರಾಕ್ಷಿ ತೋಟಗಳಿವೆ, ಮತ್ತು ಕೃಷಿ ಹೊಲಗಳಿವೆ, ಖರ್ಜೂರದ ಮರಗಳಿವೆ ಮತ್ತು ಅವುಗಳಲ್ಲಿ ಕೆಲವು ಕವಲೊಡೆದ ಮತ್ತು ಇನ್ನು ಕೆಲವು ಕವಲೊಡೆಯದ ಮರಗಳಿವೆ. ಎಲ್ಲವೂ ಒಂದೇ ನೀರಿನಿಂದ ಉಣಿಸಲಾಗುತ್ತವೆ. ಹಾಗು ನಾವು ಕೆಲವನ್ನು ಕೆಲವುಗಳ ಮೇಲೆ ರುಚಿಯಲ್ಲಿ ಶ್ರೇಷ್ಠಗೊಳಿಸುತ್ತೇವೆ. ಖಂಡಿತವಾಗಿಯೂ ಇದರಲ್ಲಿ ವಿವೇಚಿಸುವವರಿಗೆ ಹಲವಾರು ದೃಷ್ಟಾಂತಗಳಿವೆ.
۞ وَإِن تَعْجَبْ فَعَجَبٌ قَوْلُهُمْ أَإِذَا كُنَّا تُرَابًا أَإِنَّا لَفِي خَلْقٍ جَدِيدٍ ۗ أُولَٰئِكَ الَّذِينَ كَفَرُوا بِرَبِّهِمْ ۖ وَأُولَٰئِكَ الْأَغْلَالُ فِي أَعْنَاقِهِمْ ۖ وَأُولَٰئِكَ أَصْحَابُ النَّارِ ۖ هُمْ فِيهَا خَالِدُونَ ۝٥
📖 ಅನುವಾದ ಆಯತ್ 5
ಇನ್ನು ನೀವು ಆಶ್ಚರ್ಯಪಡುವುದಾದರೆ ವಾಸ್ತವದಲ್ಲಿ ಅವರ ಈ ಮಾತು ಆಶ್ಚರ್ಯಕರವಾಗಿದೆ. "ನಾವು ಮಣ್ಣಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?" ಅವರೇ ತಮ್ಮ ಪ್ರಭುವಿನ ನಿಷÉÃಧ ಕೈಗೊಂಡವರು ಮತ್ತು ಅವರ ಕೊರಳಲ್ಲಿ ಕಡಗಗಳಿರುವವು ಅವರೇ ನರಕವಾಸಿಗಳು. ಅದರಲ್ಲಿ ಅವರು ಶಾಶ್ವತವಾಗಿರುವರು.
وَيَسْتَعْجِلُونَكَ بِالسَّيِّئَةِ قَبْلَ الْحَسَنَةِ وَقَدْ خَلَتْ مِن قَبْلِهِمُ الْمَثُلَاتُ ۗ وَإِنَّ رَبَّكَ لَذُو مَغْفِرَةٍ لِّلنَّاسِ عَلَىٰ ظُلْمِهِمْ ۖ وَإِنَّ رَبَّكَ لَشَدِيدُ الْعِقَابِ ۝٦
📖 ಅನುವಾದ ಆಯತ್ 6
ಅವರು (ಸತ್ಯ ನಿಷÉÃಧಿಗಳು) ನಿಮ್ಮಲ್ಲಿ ಒಳಿತಿಗಿಂತ ಮೊದಲೇ ಕೇಡಿಗಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅವರಿಗಿಂತ ಮುಂಚೆ ಇಂತಹವರಿಗೆ ಪಾಠ ಕಲಿಸುವ ಶಿಕ್ಷೆಗಳು ಗತಿಸಿಹೋಗಿವೆ, ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ಜನರು ಅತಿಕ್ರಮವೆಸಗಿದಾಗಲೂ ಕ್ಷಮೆಯನ್ನು ನೀಡುವವನಾಗಿದ್ದಾನೆ. ನಿಶ್ಚಯವಾಗಿಯೂ ನಿಮ್ಮ ಪ್ರಭು ಅತ್ಯುಗ್ರ ಯಾತನೆಯನ್ನು ಕೊಡುವವನಾಗಿದ್ದಾನೆ.
وَيَقُولُ الَّذِينَ كَفَرُوا لَوْلَا أُنزِلَ عَلَيْهِ آيَةٌ مِّن رَّبِّهِ ۗ إِنَّمَا أَنتَ مُنذِرٌ ۖ وَلِكُلِّ قَوْمٍ هَادٍ ۝٧
📖 ಅನುವಾದ ಆಯತ್ 7
ಸತ್ಯನಿಷÉÃಧಿಗಳು ಹೇಳುತ್ತಾರೆ; ಅವನ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದೇ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ವಾಸ್ತವದಲ್ಲಿ ನೀವು ಕೇವಲ ಮುನ್ನೆಚ್ಚರಿಕೆ ನೀಡುವವರಾಗಿರುವಿರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಒಬ್ಬ ಮಾರ್ಗದರ್ಶಕನಿದ್ದಾನೆ.
اللَّهُ يَعْلَمُ مَا تَحْمِلُ كُلُّ أُنثَىٰ وَمَا تَغِيضُ الْأَرْحَامُ وَمَا تَزْدَادُ ۖ وَكُلُّ شَيْءٍ عِندَهُ بِمِقْدَارٍ ۝٨
📖 ಅನುವಾದ ಆಯತ್ 8
ಪ್ರತಿಯೊಬ್ಬ ಹೆಣ್ಣು ಧರಿಸುವ ಗರ್ಭವನ್ನು ಮತ್ತು ಗರ್ಭಾಶಯಗಳಲ್ಲಾಗುವ ವೃದ್ಧಿಕ್ಷಯಗಳನ್ನು ಅಲ್ಲಾಹನು ಅರಿಯುತ್ತಾನೆ. ಮತ್ತು ಪ್ರತಿಯೊಂದು ವಸ್ತುವು ಅವನ ಬಳಿ ಪ್ರಮಾಣಬದ್ಧವಾಗಿದೆ.
عَالِمُ الْغَيْبِ وَالشَّهَادَةِ الْكَبِيرُ الْمُتَعَالِ ۝٩
📖 ಅನುವಾದ ಆಯತ್ 9
ಗೋಚರ ಮತ್ತು ಅಗೋಚರದ ಜ್ಞಾನಿಯವನು, ಅವನು ಮಹಾನನು, ಉನ್ನತನಾಗಿದ್ದಾನೆ,
سَوَاءٌ مِّنكُم مَّنْ أَسَرَّ الْقَوْلَ وَمَن جَهَرَ بِهِ وَمَنْ هُوَ مُسْتَخْفٍ بِاللَّيْلِ وَسَارِبٌ بِالنَّهَارِ ۝١٠
📖 ಅನುವಾದ ಆಯತ್ 10
ನಿಮ್ಮ ಪೈಕಿ ತನ್ನ ಮಾತನ್ನು ರಹಸ್ಯವಾಗಿಟ್ಟವನು, ಅದನ್ನು ಬಹಿರಂಗಗೊಳಿಸಿದವನು, ರಾತ್ರಿಯಲ್ಲಿ ಅಡಗಿ ಕೊಂಡವನು ಮತ್ತು ಹಗಲಿನಲ್ಲಿ ಸಂಚರಿಸುವವನು ಜ್ಞಾನದ ಮಟ್ಟಿಗೆ ಎಲ್ಲರೂ ಅಲ್ಲಾಹನಿಗೆ ಸಮಾನರಾಗಿದ್ದಾರೆ.
لَهُ مُعَقِّبَاتٌ مِّن بَيْنِ يَدَيْهِ وَمِنْ خَلْفِهِ يَحْفَظُونَهُ مِنْ أَمْرِ اللَّهِ ۗ إِنَّ اللَّهَ لَا يُغَيِّرُ مَا بِقَوْمٍ حَتَّىٰ يُغَيِّرُوا مَا بِأَنفُسِهِمْ ۗ وَإِذَا أَرَادَ اللَّهُ بِقَوْمٍ سُوءًا فَلَا مَرَدَّ لَهُ ۚ وَمَا لَهُم مِّن دُونِهِ مِن وَالٍ ۝١١
📖 ಅನುವಾದ ಆಯತ್ 11
ಪ್ರತಿಯೊಬ್ಬ ಮನುಷÀ್ಯನ ಹಿಂದೆಯೂ ಮುಂದೆಯೂ ಅವನ ಕಾವಲುಗಾರರಾಗಿ ಮಲಕ್‌ಗಳಿದ್ದಾರೆ. ಅವರು ಅಲ್ಲಾಹನ ಆದೇಶದಂತೆ ಅವನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನತೆಯು ಸ್ವತಃ ತಮ್ಮ ಸ್ಥಿತಿಯನ್ನು ಬದಲಾಯಿಸುವವರೆಗೆ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಮತ್ತು ಅಲ್ಲಾಹನು ಯಾವುದೇ ಜನತೆಗೆ (ಅವರ ದುಷÀ್ಕರ್ಮಗಳ ನಿಮಿತ್ತ) ಶಿಕ್ಷೆ ನೀಡಲು ಇಚ್ಛಿಸಿದರೆ ಅದನ್ನು ಯಾರಿಂದಲೂ ತಡೆಯಲಾಗದು ಮತ್ತು ಅವನ ಹೊರತು ಅವರಿಗೆ ಯಾವೊಬ್ಬ ಕಾರ್ಯಸಾಧಕನೂ ಇಲ್ಲ.
هُوَ الَّذِي يُرِيكُمُ الْبَرْقَ خَوْفًا وَطَمَعًا وَيُنشِئُ السَّحَابَ الثِّقَالَ ۝١٢
📖 ಅನುವಾದ ಆಯತ್ 12
ಅವನೇ ನಿಮಗೆ ಭಯ ಪಡಿಸಲು ಮತ್ತು ನಿರೀಕ್ಷೆ ಹೊಂದಲು ಮಿಂಚನ್ನು ತೋರಿಸುವವನು ಮತ್ತು ಅವನೇ ಘನೀಕೃತ ಮೇಘಗಳನ್ನು ನಿರ್ಮಿಸುವವನು.
وَيُسَبِّحُ الرَّعْدُ بِحَمْدِهِ وَالْمَلَائِكَةُ مِنْ خِيفَتِهِ وَيُرْسِلُ الصَّوَاعِقَ فَيُصِيبُ بِهَا مَن يَشَاءُ وَهُمْ يُجَادِلُونَ فِي اللَّهِ وَهُوَ شَدِيدُ الْمِحَالِ ۝١٣
📖 ಅನುವಾದ ಆಯತ್ 13
ಮತ್ತು ಗುಡುಗು ಅವನನ್ನು ಸ್ತುತಿಸುವುದರೊಂದಿಗೆ ಅವರ ಕೀರ್ತನೆಯನ್ನು ಮಾಡುತ್ತದೆ ಮತ್ತು ಮಲಕ್‌ಗಳು ಸಹ ಅವನ ಭಯದ ನಿಮಿತ್ತ ಸ್ತುತಿಸುತ್ತಾರೆ ಅವನೇ ಸಿಡಿಲು ಮಿಂಚುಗಳನ್ನು ಕಳುಹಿಸಿ ತಾನಿಚ್ಛಿಸಿದವರವರಿಗೆ ಎರಗಿಸುತ್ತಾನೆ. ನಿಷÉÃಧಿಗಳು ಅಲ್ಲಾಹನ ವಿಷÀಯದಲ್ಲಿ ತರ್ಕಿಸುತ್ತಿದ್ದಾರೆ ಮತ್ತು ಅವನು ಕಠಿಣವಾಗಿ ದಂಡಿಸುವನಾಗಿರುವನು.
لَهُ دَعْوَةُ الْحَقِّ ۖ وَالَّذِينَ يَدْعُونَ مِن دُونِهِ لَا يَسْتَجِيبُونَ لَهُم بِشَيْءٍ إِلَّا كَبَاسِطِ كَفَّيْهِ إِلَى الْمَاءِ لِيَبْلُغَ فَاهُ وَمَا هُوَ بِبَالِغِهِ ۚ وَمَا دُعَاءُ الْكَافِرِينَ إِلَّا فِي ضَلَالٍ ۝١٤
📖 ಅನುವಾದ ಆಯತ್ 14
ಅವನನ್ನೇ ಪ್ರಾರ್ಥಿಸುವುದು ಸತ್ಯವಾಗಿದೆ ಅವರು ಅವನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿರುವರು ಯಾವುದಕ್ಕೂ ಉತ್ತರ ನೀಡಲಾರರು. ಅವರ ಸ್ಥಿತಿ ಒಬ್ಬ ವ್ಯಕ್ತಿ ಬಾಯಿಗೆ ನೀರು ತಲುಪಲೆಂದು ತನ್ನೆರಡು ಕೈಗಳನ್ನು ನೀರಿನ ಕಡೆಗೆ ಚಾಚಿಕೊಂಡವನAತೆ ವಸ್ತುತಃ ಆ ನೀರು ಅವನ ಬಾಯಿಗೆ (ತನ್ನಷÀ್ಟಕ್ಕೆ ತಾನೇ) ಎಂದೂ ತಲುಪಲಾರದು, ಮತ್ತು ಆ ಸತ್ಯ ನಿಷÉÃಧಿಗಳ ಪ್ರಾರ್ಥನೆಗಳೆಲ್ಲವೂ ವ್ಯರ್ಥವಲ್ಲದೆ ಇನ್ನೇನೂ ಅಲ್ಲ.
وَلِلَّهِ يَسْجُدُ مَن فِي السَّمَاوَاتِ وَالْأَرْضِ طَوْعًا وَكَرْهًا وَظِلَالُهُم بِالْغُدُوِّ وَالْآصَالِ ۩ ۝١٥
📖 ಅನುವಾದ ಆಯತ್ 15
ಭೂಮಿ ಆಕಾಶಗಳಲ್ಲಿ ಇರುವ ಸಕಲ ಸೃಷ್ಟಿಗಳು ಇಚ್ಛಾಪೂರ್ವಕವಾಗಿಯೂ ಅನಿವಾರ್ಯವಾಗಿಯೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿವೆ ಮತ್ತು ಮುಂಜಾನೆಯಲ್ಲೂ, ಸಂಜೆಯಲ್ಲೂ ಅವರ ನೆರಳುಗಳು ಸಹ ಬಾಗುತ್ತಿವೆ
قُلْ مَن رَّبُّ السَّمَاوَاتِ وَالْأَرْضِ قُلِ اللَّهُ ۚ قُلْ أَفَاتَّخَذْتُم مِّن دُونِهِ أَوْلِيَاءَ لَا يَمْلِكُونَ لِأَنفُسِهِمْ نَفْعًا وَلَا ضَرًّا ۚ قُلْ هَلْ يَسْتَوِي الْأَعْمَىٰ وَالْبَصِيرُ أَمْ هَلْ تَسْتَوِي الظُّلُمَاتُ وَالنُّورُ ۗ أَمْ جَعَلُوا لِلَّهِ شُرَكَاءَ خَلَقُوا كَخَلْقِهِ فَتَشَابَهَ الْخَلْقُ عَلَيْهِمْ ۚ قُلِ اللَّهُ خَالِقُ كُلِّ شَيْءٍ وَهُوَ الْوَاحِدُ الْقَهَّارُ ۝١٦
📖 ಅನುವಾದ ಆಯತ್ 16
ಪ್ರಶ್ನಿಸಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು ? ಉತ್ತರಿಸಿರಿ; " ಅಲ್ಲಾಹನು" . ಹೇಳಿರಿ; ಹಾಗಿದ್ದು ನೀವು ಅವನ ಹೊರತು ಸ್ವತಃ ತಮ್ಮ ಲಾಭ ಮತ್ತು ಹಾನಿಯ ಅಧಿಕಾರ ಹೊಂದಿಲ್ಲದವರನ್ನು ರಕ್ಷಕ ಮಿತ್ರರನ್ನಾಗಿ ನಿಶ್ಚಯಿಸಿಕೊಂಡಿರುವಿರಾ ? ಹೇಳಿರಿ: ಕುರುಡನೂ ಮತ್ತು ದೃಷ್ಟಿಯುಳ್ಳವನೂ ಸಮಾನರೇ? ಅಥವಾ ಕತ್ತಲು ಮತ್ತು ಬೆಳಕು ಸಮಾನವೇ? ಅಥವಾ ಅವರು ಅಲ್ಲಾಹನಿಗೆ ಯಾರನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವರು ಅವರು ಅಲ್ಲಾಹನ ಹಾಗೆ ಸೃಷ್ಟಿಗಳನ್ನು ಉಂಟುಮಾಡಿದ್ದಾರೆಯೇ? ಹೀಗೆ ಆ ಸೃಷ್ಟಿಯು ಅವರ ದೃಷ್ಟಿಯಲ್ಲಿ (ಗುರುತಿಸಲು) ಸದೃಶ್ಯವಾಗಿ ಬಿಟ್ಟಿದೆಯೇ? ಹೇಳಿರಿ ಪ್ರತಿಯೊಂದರ ಸೃಷ್ಟಿಕರ್ತನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನು ಏಕೈಕನೂ ಪ್ರಚಂಡನೂ ಆಗಿದ್ದಾನೆ.
أَنزَلَ مِنَ السَّمَاءِ مَاءً فَسَالَتْ أَوْدِيَةٌ بِقَدَرِهَا فَاحْتَمَلَ السَّيْلُ زَبَدًا رَّابِيًا ۚ وَمِمَّا يُوقِدُونَ عَلَيْهِ فِي النَّارِ ابْتِغَاءَ حِلْيَةٍ أَوْ مَتَاعٍ زَبَدٌ مِّثْلُهُ ۚ كَذَٰلِكَ يَضْرِبُ اللَّهُ الْحَقَّ وَالْبَاطِلَ ۚ فَأَمَّا الزَّبَدُ فَيَذْهَبُ جُفَاءً ۖ وَأَمَّا مَا يَنفَعُ النَّاسَ فَيَمْكُثُ فِي الْأَرْضِ ۚ كَذَٰلِكَ يَضْرِبُ اللَّهُ الْأَمْثَالَ ۝١٧
📖 ಅನುವಾದ ಆಯತ್ 17
ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಹಳ್ಳಕೊಳ್ಳಗಳು ತಮ್ಮ ತಮ್ಮ ಪ್ರಮಾಣದಲ್ಲಿ ತುಂಬಿ ಹರಿದವು, ಹಾಗೆಯೇ ಪ್ರವಾಹವು ತೇಲುತ್ತಿರುವ ನೊರೆಯನ್ನು ಹೊತ್ತೊಯ್ಯಿತು ಮತ್ತು ಇದೇ ತರಹದ ನೊರೆಯು ಆಭರಣ ಅಥವಾ ಉಪಕರಣವನ್ನು ಮಾಡಲಿಕ್ಕಾಗಿ ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ, ಇದೇ ಪ್ರಕಾರ ಅಲ್ಲಾಹನು ಸತ್ಯಾಸತ್ಯತೆಗಳ ಉಪಮೆಯನ್ನು ನೀಡುತ್ತಾನೆ. ಇನ್ನು ನೊರೆಯಾದರೂ ಆರಿಹೋಗುತ್ತದೆ. ಆದರೆ ಜನರಿಗೆ ಉಪಯುಕ್ತವಾದದ್ದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ.
لِلَّذِينَ اسْتَجَابُوا لِرَبِّهِمُ الْحُسْنَىٰ ۚ وَالَّذِينَ لَمْ يَسْتَجِيبُوا لَهُ لَوْ أَنَّ لَهُم مَّا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ ۚ أُولَٰئِكَ لَهُمْ سُوءُ الْحِسَابِ وَمَأْوَاهُمْ جَهَنَّمُ ۖ وَبِئْسَ الْمِهَادُ ۝١٨
📖 ಅನುವಾದ ಆಯತ್ 18
ತಮ್ಮ ಪ್ರಭುವಿನ ಕರೆಗೆ ಓಗೊಟ್ಟವರಿಗೆ ಸ್ವರ್ಗವಿದೆ ಮತ್ತು ಅವನ ಕರೆಗೆ ಓಗೊಡದವರ ಬಳಿ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಮತ್ತು ಅದರ ಜೊತೆಯಲ್ಲಿ ಅದರಷÉ್ಟÃ ಬೇರೆಯೂ ಇರುತ್ತಿದ್ದರು ಅವೆಲ್ಲವನ್ನು ಪ್ರಾಯಶ್ಚಿತವಾಗಿ ಕೊಟ್ಟುಬಿಡುತ್ತಿದ್ದರು. ಅವರಿಗೆ ಕೆಟ್ಟ ರೀತಿಯ ವಿಚಾರಣೆ ಇದೆ. ಅವರ ನೆಲೆಯೂ ನರಕವಾಗಿರುತ್ತದೆ ಮತ್ತು ಅದು ಅತ್ಯಂತ ನಿಕೃಷÀ್ಟ ತಾಣವಾಗಿದೆ.
۞ أَفَمَن يَعْلَمُ أَنَّمَا أُنزِلَ إِلَيْكَ مِن رَّبِّكَ الْحَقُّ كَمَنْ هُوَ أَعْمَىٰ ۚ إِنَّمَا يَتَذَكَّرُ أُولُو الْأَلْبَابِ ۝١٩
📖 ಅನುವಾದ ಆಯತ್ 19
ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣವಾಗಿರುವುದು ಸತ್ಯವೆಂದು ಅರಿಯುವವನು ಒಬ್ಬ ಅಂಧನAತೆ ಆಗುವನೇ ? ನಿಶ್ಚಯವಾಗಿಯೂ ಬುದ್ಧಿವಂತರೇ ಉಪದೇಶ ಸ್ವೀಕರಿಸುತ್ತಾರೆ.
الَّذِينَ يُوفُونَ بِعَهْدِ اللَّهِ وَلَا يَنقُضُونَ الْمِيثَاقَ ۝٢٠
📖 ಅನುವಾದ ಆಯತ್ 20
ಅವರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪೂರ್ಣಗೊಳಿಸುತ್ತಾರೆ ಮತ್ತು ಅವರು ಕರಾರನ್ನು ಮುರಿಯುವುದಿಲ್ಲ.
وَالَّذِينَ يَصِلُونَ مَا أَمَرَ اللَّهُ بِهِ أَن يُوصَلَ وَيَخْشَوْنَ رَبَّهُمْ وَيَخَافُونَ سُوءَ الْحِسَابِ ۝٢١
📖 ಅನುವಾದ ಆಯತ್ 21
ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿರುವ ಆ ಸಂಬAಧವನ್ನು ಕೂಡಿಸುತ್ತಾರೆ ಮತ್ತು ತಮ್ಮ ಪ್ರಭುವನ್ನು ಭಯಪಡುತ್ತಾರೆ ಹಾಗೂ ಕೆಟ್ಟ ರೀತಿಯ ವಿಚಾರಣೆಯಿಂದ ಹೆದರುತ್ತಾರೆ.
وَالَّذِينَ صَبَرُوا ابْتِغَاءَ وَجْهِ رَبِّهِمْ وَأَقَامُوا الصَّلَاةَ وَأَنفَقُوا مِمَّا رَزَقْنَاهُمْ سِرًّا وَعَلَانِيَةً وَيَدْرَءُونَ بِالْحَسَنَةِ السَّيِّئَةَ أُولَٰئِكَ لَهُمْ عُقْبَى الدَّارِ ۝٢٢
📖 ಅನುವಾದ ಆಯತ್ 22
ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಸಹನೆ ವಹಿಸುತ್ತಾರೆ, ನಮಾಜನ್ನು ಸಂಸ್ಥಾಪಿಸುತ್ತಾರೆ, ನಾವು ಅವರಿಗೆ ದಯಪಾಲಿಸಿದವುಗಳಿಂದ ಖರ್ಚು ಮಾಡುತ್ತಾರೆ, ಮತ್ತು ಕೆಡುಕನ್ನು ಒಳಿತಿನಿಂದ ತಡೆಯುತ್ತಾರೆ. ಅಂತಹವರಿಗೆ ಪರಲೋಕದ ಅತ್ಯುತ್ತಮ ಭವನವಿದೆ,
جَنَّاتُ عَدْنٍ يَدْخُلُونَهَا وَمَن صَلَحَ مِنْ آبَائِهِمْ وَأَزْوَاجِهِمْ وَذُرِّيَّاتِهِمْ ۖ وَالْمَلَائِكَةُ يَدْخُلُونَ عَلَيْهِم مِّن كُلِّ بَابٍ ۝٢٣
📖 ಅನುವಾದ ಆಯತ್ 23
ದರೆ ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳಿವೆ, ಅವರು ಹಾಗೂ ಅವರ ಪೂರ್ವಜರು ಅವರ ಸಂಗಾತಿಗಳ ಮತ್ತು ಅವರ ಸಂತತಿಗಳ ಪೈಕಿ ಸಜ್ಜನರಾದವರು ಅವುಗಳಲ್ಲಿ ಪ್ರವೇಶಿಸುವರು, ಅವರ ಬಳಿಗೆ ಮಲಕ್‌ಗಳು ಎಲ್ಲಾ ದ್ವಾರಗಳಿಂದಲೂ ಬರುವರು,
سَلَامٌ عَلَيْكُم بِمَا صَبَرْتُمْ ۚ فَنِعْمَ عُقْبَى الدَّارِ ۝٢٤
📖 ಅನುವಾದ ಆಯತ್ 24
ಹೇಳುವರು; ನೀವು ಸಹನೆವಹಿಸಿದುದರ ಫಲವಾಗಿ ನಿಮ್ಮ ಮೇಲೆ ಶಾಂತಿ ಇರಲಿ ಅಗೋ ಪರಲೋಕ ಭವನವು ಅದೆಷÀÄ್ಟ ಉತ್ತಮವಾಗಿದೆ.
وَالَّذِينَ يَنقُضُونَ عَهْدَ اللَّهِ مِن بَعْدِ مِيثَاقِهِ وَيَقْطَعُونَ مَا أَمَرَ اللَّهُ بِهِ أَن يُوصَلَ وَيُفْسِدُونَ فِي الْأَرْضِ ۙ أُولَٰئِكَ لَهُمُ اللَّعْنَةُ وَلَهُمْ سُوءُ الدَّارِ ۝٢٥
📖 ಅನುವಾದ ಆಯತ್ 25
ಇನ್ನು ಯಾರು ಅಲ್ಲಾಹನೊಂದಿಗೆ ಮಾಡಲಾದ ಕರಾರನ್ನು ಅದು ಸದೃಡವಾದ ಬಳಿಕ ಉಲ್ಲಂಘಿಸುತ್ತಾರೋ ಮತ್ತು ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿಸಿರುವನೋ ಅದನ್ನು ಮುರಿದು ಹಾಕುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾರೋ ಅವರಿಗೆ ಶಾಪವಿದೆ, ಹಾಗೂ ಅವರಿಗೆ ನಿಕೃಷÀ್ಟ ತಾಣವಿದೆ.
اللَّهُ يَبْسُطُ الرِّزْقَ لِمَن يَشَاءُ وَيَقْدِرُ ۚ وَفَرِحُوا بِالْحَيَاةِ الدُّنْيَا وَمَا الْحَيَاةُ الدُّنْيَا فِي الْآخِرَةِ إِلَّا مَتَاعٌ ۝٢٦
📖 ಅನುವಾದ ಆಯತ್ 26
ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಇಹಲೋಕದ ಜೀವನದಲ್ಲಿ ತಲ್ಲೀನರಾಗಿದ್ದಾರೆ. ವಸ್ತುತಃ ಇಹಲೋಕ ಜೀವನವು ಪರಲೋಕದ ಮುಂದೆ ತಾತ್ಕಾಲಿಕ ಸುಖಾನುಭವ ಮಾತ್ರವಾಗಿದೆ.
وَيَقُولُ الَّذِينَ كَفَرُوا لَوْلَا أُنزِلَ عَلَيْهِ آيَةٌ مِّن رَّبِّهِ ۗ قُلْ إِنَّ اللَّهَ يُضِلُّ مَن يَشَاءُ وَيَهْدِي إِلَيْهِ مَنْ أَنَابَ ۝٢٧
📖 ಅನುವಾದ ಆಯತ್ 27
ಸತ್ಯ ನಿಷÉÃಧಿಗಳು ಹೇಳುತ್ತಾರೆ; ಮುಹಮ್ಮದ್‌ರವರ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದಾದರೂ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ಉತ್ತರಿಸಿರಿ; ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ಅವನೆಡೆಗೆ ಮರಳುವವರಿಗೆ ಮಾರ್ಗದರ್ಶನ ಮಾಡುತ್ತಾನೆ.
الَّذِينَ آمَنُوا وَتَطْمَئِنُّ قُلُوبُهُم بِذِكْرِ اللَّهِ ۗ أَلَا بِذِكْرِ اللَّهِ تَطْمَئِنُّ الْقُلُوبُ ۝٢٨
📖 ಅನುವಾದ ಆಯತ್ 28
ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳಿಗೆ ಶಾಂತಿ ದೊರಕುತ್ತದೆ.
الَّذِينَ آمَنُوا وَعَمِلُوا الصَّالِحَاتِ طُوبَىٰ لَهُمْ وَحُسْنُ مَآبٍ ۝٢٩
📖 ಅನುವಾದ ಆಯತ್ 29
ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಶುಭವಾರ್ತೆ ಇದೆ ಮತ್ತು ಉತ್ತಮ ತಾಣವಿದೆ.
كَذَٰلِكَ أَرْسَلْنَاكَ فِي أُمَّةٍ قَدْ خَلَتْ مِن قَبْلِهَا أُمَمٌ لِّتَتْلُوَ عَلَيْهِمُ الَّذِي أَوْحَيْنَا إِلَيْكَ وَهُمْ يَكْفُرُونَ بِالرَّحْمَٰنِ ۚ قُلْ هُوَ رَبِّي لَا إِلَٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ ۝٣٠
📖 ಅನುವಾದ ಆಯತ್ 30
ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.
وَلَوْ أَنَّ قُرْآنًا سُيِّرَتْ بِهِ الْجِبَالُ أَوْ قُطِّعَتْ بِهِ الْأَرْضُ أَوْ كُلِّمَ بِهِ الْمَوْتَىٰ ۗ بَل لِّلَّهِ الْأَمْرُ جَمِيعًا ۗ أَفَلَمْ يَيْأَسِ الَّذِينَ آمَنُوا أَن لَّوْ يَشَاءُ اللَّهُ لَهَدَى النَّاسَ جَمِيعًا ۗ وَلَا يَزَالُ الَّذِينَ كَفَرُوا تُصِيبُهُم بِمَا صَنَعُوا قَارِعَةٌ أَوْ تَحُلُّ قَرِيبًا مِّن دَارِهِمْ حَتَّىٰ يَأْتِيَ وَعْدُ اللَّهِ ۚ إِنَّ اللَّهَ لَا يُخْلِفُ الْمِيعَادَ ۝٣١
📖 ಅನುವಾದ ಆಯತ್ 31
ಕುರ್‌ಆನಿನ ಮೂಲಕ ಪರ್ವತಗಳನ್ನು ಚಲಿಸುವಂತೆಯು ಅಥವಾ ಭೂಮಿಯನ್ನು ಸೀಳಿಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತನಾಡುವಂತೆ ಮಾಡಲಾಗುತ್ತಿದ್ದರೂ ಅವರು ಸತ್ಯ ವಿಶ್ವಾಸ ಸ್ವೀಕರಿಸುತ್ತಿರಲಿಲ್ಲ ವಾಸ್ತವವೇನೆಂದರೆ ಕಾರ್ಯವೆಲ್ಲವು ಅಲ್ಲಾಹನ ವಶದಲ್ಲಿರುವುದು. ಅಲ್ಲಾಹನು ಇಚ್ಛಿಸುವುದಾದರೆ ಸರ್ವರಿಗೂ ಸನ್ಮಾರ್ಗ ನೀಡುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೆ ? ಸತ್ಯ ನಿಷÉÃಧಿಗಳಿಗೆ ತಮ್ಮ ನಿಷÉÃಧದ ಫಲವಾಗಿ ಯಾವುದಾದರೂ ವಿಪತ್ತು ಬಾಧಿಸುತ್ತಲೇ ಇರುವುದು ಅಥವಾ ಅದು ಅಲ್ಲಾಹನ ವಾಗ್ದಾನ ಬರುವತನಕ ಅವರ ಮನೆಗಳ ಸಮೀಪದಲ್ಲೇ ಎರಗುತ್ತಲೇ ಇರುವುದು ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
وَلَقَدِ اسْتُهْزِئَ بِرُسُلٍ مِّن قَبْلِكَ فَأَمْلَيْتُ لِلَّذِينَ كَفَرُوا ثُمَّ أَخَذْتُهُمْ ۖ فَكَيْفَ كَانَ عِقَابِ ۝٣٢
📖 ಅನುವಾದ ಆಯತ್ 32
ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?
أَفَمَنْ هُوَ قَائِمٌ عَلَىٰ كُلِّ نَفْسٍ بِمَا كَسَبَتْ ۗ وَجَعَلُوا لِلَّهِ شُرَكَاءَ قُلْ سَمُّوهُمْ ۚ أَمْ تُنَبِّئُونَهُ بِمَا لَا يَعْلَمُ فِي الْأَرْضِ أَم بِظَاهِرٍ مِّنَ الْقَوْلِ ۗ بَلْ زُيِّنَ لِلَّذِينَ كَفَرُوا مَكْرُهُمْ وَصُدُّوا عَنِ السَّبِيلِ ۗ وَمَن يُضْلِلِ اللَّهُ فَمَا لَهُ مِنْ هَادٍ ۝٣٣
📖 ಅನುವಾದ ಆಯತ್ 33
ಪ್ರತಿಯೊಬ್ಬ ವ್ಯಕ್ತಿಯ ಸಂಪಾದನೆಯ ಮೇಲೆ ಮೇಲ್ವಿಚಾರಣೆ ಮಾಡುವ ಅಲ್ಲಾಹನಿಗೆ ಅವರು ಸಹಭಾಗಿಗಳನ್ನು ನಿಶ್ಚಯಿಸಿಕೊಂಡಿದ್ದಾರೆಯೇ? ಹೇಳಿರಿ; ಒಮ್ಮೆ ಅವುಗಳ ಹೆಸರುಗಳನ್ನಾದರೂ ತಿಳಿಸಿರಿ. ಅಥವಾ ನೀವು ಅಲ್ಲಾಹನಿಗೆ ಅವನು ಭೂಮಿಯಲ್ಲಿ ಅರಿತೇ ಇಲ್ಲದುದನ್ನು ತಿಳಿಸಿಕೊಡುತ್ತಿರುವಿರಾ ? ಅಥವಾ ನೀವು ಬಾಹ್ಯಾ ಮಾತುಗಳನ್ನು ಹೇಳಿಬಿಡುತ್ತೀರಾ? ವಾಸ್ತವ ವಿಚಾರವೇನೆಂದರೆ ಸತ್ಯ ನಿಷÉÃಧಿಸುವವರಿಗೆ ಅವರ ಕುತಂತ್ರಗಳನ್ನು ಸುಂದರವಾಗಿಸಲಾಗಿದೆ. ಮತ್ತು ಅವರು ನೈಜ ಮಾರ್ಗದಿಂದ ತಡೆಯಲಾಗಿದ್ದಾರೆ ಮತ್ತು ಯಾರನ್ನು ಅಲ್ಲಾಹನು ದಾರಿತಪ್ಪಿಸುವನೋ ಅವನಿಗಾರು ಮಾರ್ಗದರ್ಶಕನಿಲ್ಲ.
لَّهُمْ عَذَابٌ فِي الْحَيَاةِ الدُّنْيَا ۖ وَلَعَذَابُ الْآخِرَةِ أَشَقُّ ۖ وَمَا لَهُم مِّنَ اللَّهِ مِن وَاقٍ ۝٣٤
📖 ಅನುವಾದ ಆಯತ್ 34
ಅವರಿಗೆ ಇಹಲೋಕದ ಜೀವನದಲ್ಲಿ ಯಾತನೆ ಇದೆ ಮತ್ತು ಪರಲೋಕದ ಯಾತನೆಯು ಅತ್ಯಂತ ಕಠಿಣವಾಗಿರುತ್ತದೆ, ಮತ್ತು ಅಲ್ಲಾಹನಿಂದ ಅವರನ್ನು ರಕ್ಷಿಸುವವನು ಯಾರು ಇರಲಾರನು.
۞ مَّثَلُ الْجَنَّةِ الَّتِي وُعِدَ الْمُتَّقُونَ ۖ تَجْرِي مِن تَحْتِهَا الْأَنْهَارُ ۖ أُكُلُهَا دَائِمٌ وَظِلُّهَا ۚ تِلْكَ عُقْبَى الَّذِينَ اتَّقَوا ۖ وَّعُقْبَى الْكَافِرِينَ النَّارُ ۝٣٥
📖 ಅನುವಾದ ಆಯತ್ 35
ಭಯಭಕ್ತಿಯುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗೋದ್ಯಾನದ ಸ್ವರೂಪ ಹೀಗಿದೆ; ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವವು. ಅದರ ಫಲಗಳು ಶಾಶ್ವತವಾದುದು ಮತ್ತು ಅದರ ನೆರಳು ಕೂಡ, ಇದುವೇ ಭಯ-ಭಕ್ತಿಯುಳ್ಳವರ ಪರ್ಯಾವಸಾನವಾಗಿದೆ ಮತ್ತು ಸತ್ಯನಿಷÉÃಧಿಗಳ ಪರ್ಯಾವಸಾನವು ನರಕಾಗ್ನಿಯಾಗಿದೆ.
وَالَّذِينَ آتَيْنَاهُمُ الْكِتَابَ يَفْرَحُونَ بِمَا أُنزِلَ إِلَيْكَ ۖ وَمِنَ الْأَحْزَابِ مَن يُنكِرُ بَعْضَهُ ۚ قُلْ إِنَّمَا أُمِرْتُ أَنْ أَعْبُدَ اللَّهَ وَلَا أُشْرِكَ بِهِ ۚ إِلَيْهِ أَدْعُو وَإِلَيْهِ مَآبِ ۝٣٦
📖 ಅನುವಾದ ಆಯತ್ 36
ಯಾರಿಗೆ ನಾವು ಮೊದಲು ಗ್ರಂಥವನ್ನು ನೀಡಿರುವೆವೋ ಅವರು ನಿಮಗೆ ನಾವು ಅವತೀರ್ಣ ಗೊಳಿಸಿರುವ ಗ್ರಂಥದಿAದ ಸಂತುಷ್ಟರಾಗಿದ್ದಾರೆ. ಮತ್ತು ಅವರ (ಯಹೂದರು ಮತ್ತು ಕ್ರೈಸ್ತರು) ಇತರ ಗುಂಪುಗಳು ಅದರಲ್ಲಿರುವ ಕೆಲವು ವಿಚಾರಗಳ ನಿಷÉÃಧಿಗಳಾಗಿದ್ದಾರೆ, ಹೇಳಿರಿ; ನನಗಂತೂ ಅಲ್ಲಾಹನನ್ನು ಆರಾಧಿಸಲು ಮತ್ತು ಅವನೊಂದಿಗೆ ಸಹಭಾಗಿಯನ್ನು ನಿಶ್ಚಯಿಸದಿರಲು ಆದೇಶ ನೀಡಲಾಗಿದೆ, ಅವನೆಡೆಗೇ ನಾನು ಕರೆಯುತ್ತಿದ್ದೇನೆ ಮತ್ತು ಅವನೆಡೆಗೇ ಮರಳಬೇಕಾಗಿದೆ,
وَكَذَٰلِكَ أَنزَلْنَاهُ حُكْمًا عَرَبِيًّا ۚ وَلَئِنِ اتَّبَعْتَ أَهْوَاءَهُم بَعْدَمَا جَاءَكَ مِنَ الْعِلْمِ مَا لَكَ مِنَ اللَّهِ مِن وَلِيٍّ وَلَا وَاقٍ ۝٣٧
📖 ಅನುವಾದ ಆಯತ್ 37
ಇದೇ ಪ್ರಕಾರ ನಾವು ಈ ಕುರ್‌ಆನನ್ನು ಅರಬೀ ಭಾಷÉಯಲ್ಲಿರುವ ನಿಯಮ ಶಾಸನವನ್ನಾಗಿ ಅವತೀರ್ಣಗೊಳಿರುತ್ತೇವೆ, ಇನ್ನೇನಾದರೂ ನಿಮಗೆ ಜ್ಞಾನವು ಬಂದ ಬಳಿಕ ಅವರ ಇಚ್ಛೆಗಳನ್ನು ನೀವು ಅನುಸರಿಸಿದರೆ ಅಲ್ಲಾಹನ ಎದುರು ನಿಮಗೆ ರಕ್ಷಕಮಿತ್ರನಾಗಲಿ, ಕಾಪಾಡುವವನಾಗಲಿ ಯಾರೂ ಇರಲಾರರು.
وَلَقَدْ أَرْسَلْنَا رُسُلًا مِّن قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَن يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ ۝٣٨
📖 ಅನುವಾದ ಆಯತ್ 38
ಓ ಮುಹಮ್ಮದರೇ ನಿಮಗಿಂತ ಮುಂಚೆಯೂ ನಾವು ಅನೇಕ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ, ನಾವು ಅವರಿಗೆ ಪತ್ನಿಯರನ್ನು ಸಂತಾನವನ್ನು ನೀಡಿದ್ದೆವು ಮತ್ತು ಯಾವ ಸಂದೇಶವಾಹಕನು ಅಲ್ಲಾಹನ ಅಪ್ಪಣೆಯ ವಿನಃ ಯಾವೊಂದು ದೃಷ್ಟಾಂತವನ್ನು ತರಲಾರನು. ಪ್ರತಿಯೊಂದು ನಿರ್ದಿಷÀ್ಟ ಅವಧಿಗೂ ಒಂದು ದಾಖಲೆ ಇದೆ.
يَمْحُو اللَّهُ مَا يَشَاءُ وَيُثْبِتُ ۖ وَعِندَهُ أُمُّ الْكِتَابِ ۝٣٩
📖 ಅನುವಾದ ಆಯತ್ 39
ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸುವನು ತಾನಿಚ್ಛಿಸಿದ್ದನ್ನು ಸ್ಥಿರಗೊಳಿಸುವನು ಮತ್ತು ಅವನ ಬಳಿಯೇ ಮೂಲ ಗ್ರಂಥವಿದೆ.
وَإِن مَّا نُرِيَنَّكَ بَعْضَ الَّذِي نَعِدُهُمْ أَوْ نَتَوَفَّيَنَّكَ فَإِنَّمَا عَلَيْكَ الْبَلَاغُ وَعَلَيْنَا الْحِسَابُ ۝٤٠
📖 ಅನುವಾದ ಆಯತ್ 40
ಮತ್ತು ನಾನು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವವುಗಳಿಂದ ಕೆಲವು ಸಂಗತಿಗಳನ್ನು ನಿಮಗೆ ತೋರಿಸಬಹುದು ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮಗೆ ಮರಣ ಕೊಡಬಹುದು, ಮತ್ತು ಸಂದೇಶ ತಲುಪಿಸುವುದೇ ನಿಮ್ಮ ಮೇಲಿನ ಹೊಣೆಯಾಗಿದೆ ವಿಚಾರಣೆ ನಡೆಸುವುದು ನಮ್ಮ ಮೇಲಿನ ಹೊಣೆಯಾಗಿದೆ.
أَوَلَمْ يَرَوْا أَنَّا نَأْتِي الْأَرْضَ نَنقُصُهَا مِنْ أَطْرَافِهَا ۚ وَاللَّهُ يَحْكُمُ لَا مُعَقِّبَ لِحُكْمِهِ ۚ وَهُوَ سَرِيعُ الْحِسَابِ ۝٤١
📖 ಅನುವಾದ ಆಯತ್ 41
ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ? ಮತ್ತು ಅಲ್ಲಾಹನೇ ತೀರ್ಮಾನಿಸುತ್ತಾನೆ; ಅವನ ತೀರ್ಮಾನಗಳನ್ನು ಬದಲಾಯಿಸುವವನಾರಿಲ್ಲ ಅವನು ಅತಿ ಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
وَقَدْ مَكَرَ الَّذِينَ مِن قَبْلِهِمْ فَلِلَّهِ الْمَكْرُ جَمِيعًا ۖ يَعْلَمُ مَا تَكْسِبُ كُلُّ نَفْسٍ ۗ وَسَيَعْلَمُ الْكُفَّارُ لِمَنْ عُقْبَى الدَّارِ ۝٤٢
📖 ಅನುವಾದ ಆಯತ್ 42
ಅವರ ಮುಂಚಿನವರು ಸಹ ಕುತಂತ್ರಗಳನ್ನು ಹೂಡಿದ್ದರು. ಆದರೆ ತಂತ್ರವೆಲ್ಲವೂ ಅಲ್ಲಾಹನಿಗೆ ಇರುವವು, ಪ್ರತಿಯೊಬ್ಬ ವ್ಯಕ್ತಿಯು ಸಂಪಾದಿಸಿದ್ದನ್ನು ಅಲ್ಲಾಹನು ಅರಿಯುತ್ತಾನೆ. ಸದ್ಯದಲ್ಲೇ ಸತ್ಯನಿಷÉÃಧಿಗಳು ಪರಲೋಕದ ಭವನ ಯಾರಿಗಿದೆಯೆಂದು ತಿಳಿಯುವರು.
وَيَقُولُ الَّذِينَ كَفَرُوا لَسْتَ مُرْسَلًا ۚ قُلْ كَفَىٰ بِاللَّهِ شَهِيدًا بَيْنِي وَبَيْنَكُمْ وَمَنْ عِندَهُ عِلْمُ الْكِتَابِ ۝٤٣
📖 ಅನುವಾದ ಆಯತ್ 43
ಓ ಮುಹಮ್ಮದರೇ ನೀವು ಅಲ್ಲಾಹನ ಸಂದೇಶವಾಹಕರಲ್ಲವೆAದು ಸತ್ಯನಿಷÉÃಧಿಗಳು ಹೇಳುತ್ತಾರೆ, ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು, ಮತ್ತು ಯಾರ ಬಳಿ ಗ್ರಂಥದ ಜ್ಞಾನವಿದೆಯೋ ಅವರ ಸಾಕ್ಷ್ಯ ಸಾಕು.
← 12 ಅರ್-ರಾದ್ (13/114) 14 →
ಓದಿ ಸೂರಾ ಅರ್-ರಾದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

13الرعد Ar-Ra'd 📚 43 ಆಯತ್ مدنية

ಆಯತ್‌ವಾರು – ಸೂರಾ ಅರ್-ರಾದ್ — 43 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers