ಅರ್-ರಾದ್ · 32/43
ಅನುವಾದ ಉಚ್ಚಾರಣೆ — ಸೂರಾ ಅರ್-ರಾದ್
وَلَقَدِ اسْتُهْزِئَ بِرُسُلٍ مِّن قَبْلِكَ فَأَمْلَيْتُ لِلَّذِينَ كَفَرُوا ثُمَّ أَخَذْتُهُمْ ۖ فَكَيْفَ كَانَ عِقَابِ ۝٣٢
Wa laqadis tuhzi`a bi Rusulim min qablika fa amlaitu lillazeena kafaroo summa akhaztuhum fakaifa kaana `iqaab
📖 ಕನ್ನಡ ಅರ್ಥ
ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?

🎧 ಆಲಿಸಿ


📜 ಆಯತ್ 30-34 — ಸೂರಾ ಅರ್-ರಾದ್

30كَذَٰلِكَ أَرْسَلْنَاكَ فِي أُمَّةٍ قَدْ خَلَتْ مِن قَبْلِهَا أُمَمٌ لِّتَتْلُوَ عَلَيْهِمُ الَّذِي أَوْحَيْنَا إِلَيْكَ وَهُمْ يَكْفُرُونَ بِالرَّحْمَٰنِ ۚ قُلْ هُوَ رَبِّي لَا إِلَٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ
ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.
31وَلَوْ أَنَّ قُرْآنًا سُيِّرَتْ بِهِ الْجِبَالُ أَوْ قُطِّعَتْ بِهِ الْأَرْضُ أَوْ كُلِّمَ بِهِ الْمَوْتَىٰ ۗ بَل لِّلَّهِ الْأَمْرُ جَمِيعًا ۗ أَفَلَمْ يَيْأَسِ الَّذِينَ آمَنُوا أَن لَّوْ يَشَاءُ اللَّهُ لَهَدَى النَّاسَ جَمِيعًا ۗ وَلَا يَزَالُ الَّذِينَ كَفَرُوا تُصِيبُهُم بِمَا صَنَعُوا قَارِعَةٌ أَوْ تَحُلُّ قَرِيبًا مِّن دَارِهِمْ حَتَّىٰ يَأْتِيَ وَعْدُ اللَّهِ ۚ إِنَّ اللَّهَ لَا يُخْلِفُ الْمِيعَادَ
ಕುರ್‌ಆನಿನ ಮೂಲಕ ಪರ್ವತಗಳನ್ನು ಚಲಿಸುವಂತೆಯು ಅಥವಾ ಭೂಮಿಯನ್ನು ಸೀಳಿಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತನಾಡುವಂತೆ ಮಾಡಲಾಗುತ್ತಿದ್ದರೂ ಅವರು ಸತ್ಯ ವಿಶ್ವಾಸ ಸ್ವೀಕರಿಸುತ್ತಿರಲಿಲ್ಲ ವಾಸ್ತವವೇನೆಂದರೆ ಕಾರ್ಯವೆಲ್ಲವು ಅಲ್ಲಾಹನ ವಶದಲ್ಲಿರುವುದು. ಅಲ್ಲಾಹನು ಇಚ್ಛಿಸುವುದಾದರೆ ಸರ್ವರಿಗೂ ಸನ್ಮಾರ್ಗ ನೀಡುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೆ ? ಸತ್ಯ ನಿಷÉÃಧಿಗಳಿಗೆ ತಮ್ಮ ನಿಷÉÃಧದ ಫಲವಾಗಿ ಯಾವುದಾದರೂ ವಿಪತ್ತು ಬಾಧಿಸುತ್ತಲೇ ಇರುವುದು ಅಥವಾ ಅದು ಅಲ್ಲಾಹನ ವಾಗ್ದಾನ ಬರುವತನಕ ಅವರ ಮನೆಗಳ ಸಮೀಪದಲ್ಲೇ ಎರಗುತ್ತಲೇ ಇರುವುದು ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
32وَلَقَدِ اسْتُهْزِئَ بِرُسُلٍ مِّن قَبْلِكَ فَأَمْلَيْتُ لِلَّذِينَ كَفَرُوا ثُمَّ أَخَذْتُهُمْ ۖ فَكَيْفَ كَانَ عِقَابِ
ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?
33أَفَمَنْ هُوَ قَائِمٌ عَلَىٰ كُلِّ نَفْسٍ بِمَا كَسَبَتْ ۗ وَجَعَلُوا لِلَّهِ شُرَكَاءَ قُلْ سَمُّوهُمْ ۚ أَمْ تُنَبِّئُونَهُ بِمَا لَا يَعْلَمُ فِي الْأَرْضِ أَم بِظَاهِرٍ مِّنَ الْقَوْلِ ۗ بَلْ زُيِّنَ لِلَّذِينَ كَفَرُوا مَكْرُهُمْ وَصُدُّوا عَنِ السَّبِيلِ ۗ وَمَن يُضْلِلِ اللَّهُ فَمَا لَهُ مِنْ هَادٍ
ಪ್ರತಿಯೊಬ್ಬ ವ್ಯಕ್ತಿಯ ಸಂಪಾದನೆಯ ಮೇಲೆ ಮೇಲ್ವಿಚಾರಣೆ ಮಾಡುವ ಅಲ್ಲಾಹನಿಗೆ ಅವರು ಸಹಭಾಗಿಗಳನ್ನು ನಿಶ್ಚಯಿಸಿಕೊಂಡಿದ್ದಾರೆಯೇ? ಹೇಳಿರಿ; ಒಮ್ಮೆ ಅವುಗಳ ಹೆಸರುಗಳನ್ನಾದರೂ ತಿಳಿಸಿರಿ. ಅಥವಾ ನೀವು ಅಲ್ಲಾಹನಿಗೆ ಅವನು ಭೂಮಿಯಲ್ಲಿ ಅರಿತೇ ಇಲ್ಲದುದನ್ನು ತಿಳಿಸಿಕೊಡುತ್ತಿರುವಿರಾ ? ಅಥವಾ ನೀವು ಬಾಹ್ಯಾ ಮಾತುಗಳನ್ನು ಹೇಳಿಬಿಡುತ್ತೀರಾ? ವಾಸ್ತವ ವಿಚಾರವೇನೆಂದರೆ ಸತ್ಯ ನಿಷÉÃಧಿಸುವವರಿಗೆ ಅವರ ಕುತಂತ್ರಗಳನ್ನು ಸುಂದರವಾಗಿಸಲಾಗಿದೆ. ಮತ್ತು ಅವರು ನೈಜ ಮಾರ್ಗದಿಂದ ತಡೆಯಲಾಗಿದ್ದಾರೆ ಮತ್ತು ಯಾರನ್ನು ಅಲ್ಲಾಹನು ದಾರಿತಪ್ಪಿಸುವನೋ ಅವನಿಗಾರು ಮಾರ್ಗದರ್ಶಕನಿಲ್ಲ.
34لَّهُمْ عَذَابٌ فِي الْحَيَاةِ الدُّنْيَا ۖ وَلَعَذَابُ الْآخِرَةِ أَشَقُّ ۖ وَمَا لَهُم مِّنَ اللَّهِ مِن وَاقٍ
ಅವರಿಗೆ ಇಹಲೋಕದ ಜೀವನದಲ್ಲಿ ಯಾತನೆ ಇದೆ ಮತ್ತು ಪರಲೋಕದ ಯಾತನೆಯು ಅತ್ಯಂತ ಕಠಿಣವಾಗಿರುತ್ತದೆ, ಮತ್ತು ಅಲ್ಲಾಹನಿಂದ ಅವರನ್ನು ರಕ್ಷಿಸುವವನು ಯಾರು ಇರಲಾರನು.
ಅರ್-ರಾದ್ಕುರಾನ್ ಸೂಚಿ
43ಆಯತ್
MedinanRevelation
32ಆಯತ್

ಅನುವಾದ — ಅರ್-ರಾದ್ 32

ಸೂರಾ ಅರ್-ರಾದ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ…

ಸೂರಾ ಆಯತ್ 32/43 — ಸೂರಾ ಅರ್-ರಾದ್ الرعد (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಾದ್ ಆಲಿಸಿ, ಸೂರಾ ಅರ್-ರಾದ್ ಅನುವಾದ, ಸೂರಾ ಅರ್-ರಾದ್ mp3, ಸೂರಾ ಅರ್-ರಾದ್ pdf. ಆಯತ್ 30–34. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers