ಅರ್-ರಾದ್ · 28/43
ಅನುವಾದ ಉಚ್ಚಾರಣೆ — ಸೂರಾ ಅರ್-ರಾದ್
الَّذِينَ آمَنُوا وَتَطْمَئِنُّ قُلُوبُهُم بِذِكْرِ اللَّهِ ۗ أَلَا بِذِكْرِ اللَّهِ تَطْمَئِنُّ الْقُلُوبُ ۝٢٨
Allazeena aamanoo wa tatma`innu quloobuhum bizikril laah; alaa bizikril laahi tatma`innul quloob
📖 ಕನ್ನಡ ಅರ್ಥ
ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳಿಗೆ ಶಾಂತಿ ದೊರಕುತ್ತದೆ.

🎧 ಆಲಿಸಿ


📜 ಆಯತ್ 26-30 — ಸೂರಾ ಅರ್-ರಾದ್

26اللَّهُ يَبْسُطُ الرِّزْقَ لِمَن يَشَاءُ وَيَقْدِرُ ۚ وَفَرِحُوا بِالْحَيَاةِ الدُّنْيَا وَمَا الْحَيَاةُ الدُّنْيَا فِي الْآخِرَةِ إِلَّا مَتَاعٌ
ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಇಹಲೋಕದ ಜೀವನದಲ್ಲಿ ತಲ್ಲೀನರಾಗಿದ್ದಾರೆ. ವಸ್ತುತಃ ಇಹಲೋಕ ಜೀವನವು ಪರಲೋಕದ ಮುಂದೆ ತಾತ್ಕಾಲಿಕ ಸುಖಾನುಭವ ಮಾತ್ರವಾಗಿದೆ.
27وَيَقُولُ الَّذِينَ كَفَرُوا لَوْلَا أُنزِلَ عَلَيْهِ آيَةٌ مِّن رَّبِّهِ ۗ قُلْ إِنَّ اللَّهَ يُضِلُّ مَن يَشَاءُ وَيَهْدِي إِلَيْهِ مَنْ أَنَابَ
ಸತ್ಯ ನಿಷÉÃಧಿಗಳು ಹೇಳುತ್ತಾರೆ; ಮುಹಮ್ಮದ್‌ರವರ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದಾದರೂ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ಉತ್ತರಿಸಿರಿ; ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ಅವನೆಡೆಗೆ ಮರಳುವವರಿಗೆ ಮಾರ್ಗದರ್ಶನ ಮಾಡುತ್ತಾನೆ.
28الَّذِينَ آمَنُوا وَتَطْمَئِنُّ قُلُوبُهُم بِذِكْرِ اللَّهِ ۗ أَلَا بِذِكْرِ اللَّهِ تَطْمَئِنُّ الْقُلُوبُ
ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳಿಗೆ ಶಾಂತಿ ದೊರಕುತ್ತದೆ.
29الَّذِينَ آمَنُوا وَعَمِلُوا الصَّالِحَاتِ طُوبَىٰ لَهُمْ وَحُسْنُ مَآبٍ
ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಶುಭವಾರ್ತೆ ಇದೆ ಮತ್ತು ಉತ್ತಮ ತಾಣವಿದೆ.
30كَذَٰلِكَ أَرْسَلْنَاكَ فِي أُمَّةٍ قَدْ خَلَتْ مِن قَبْلِهَا أُمَمٌ لِّتَتْلُوَ عَلَيْهِمُ الَّذِي أَوْحَيْنَا إِلَيْكَ وَهُمْ يَكْفُرُونَ بِالرَّحْمَٰنِ ۚ قُلْ هُوَ رَبِّي لَا إِلَٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ
ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.
ಅರ್-ರಾದ್ಕುರಾನ್ ಸೂಚಿ
43ಆಯತ್
MedinanRevelation
28ಆಯತ್

ಅನುವಾದ — ಅರ್-ರಾದ್ 28

ಸೂರಾ ಅರ್-ರಾದ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ…

ಸೂರಾ ಆಯತ್ 28/43 — ಸೂರಾ ಅರ್-ರಾದ್ الرعد (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಾದ್ ಆಲಿಸಿ, ಸೂರಾ ಅರ್-ರಾದ್ ಅನುವಾದ, ಸೂರಾ ಅರ್-ರಾದ್ mp3, ಸೂರಾ ಅರ್-ರಾದ್ pdf. ಆಯತ್ 26–30. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers