ಅನ್-ನಿಸಾ · 93/176
ಅನುವಾದ ಉಚ್ಚಾರಣೆ — ಸೂರಾ ಅನ್-ನಿಸಾ
وَمَن يَقْتُلْ مُؤْمِنًا مُّتَعَمِّدًا فَجَزَاؤُهُ جَهَنَّمُ خَالِدًا فِيهَا وَغَضِبَ اللَّهُ عَلَيْهِ وَلَعَنَهُ وَأَعَدَّ لَهُ عَذَابًا عَظِيمًا ۝٩٣
Wa mai yaqtul mu`minammuta `ammidan fajazaaa`uhoo Jahannamu khaalidan feehaa wa ghadibal laahu` alaihi wa la`anahoo wa a`adda lahoo `azaaban `azeemaa
📖 ಕನ್ನಡ ಅರ್ಥ
ಯಾರಾದರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ಕೊಂದರೆ ಅವನಿಗಿರುವ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಶಾಶ್ವತವಾಗಿರುವನು. ಅವನ ಮೆಲೆ ಅಲ್ಲಾಹನ ಕ್ರೋಧ ಹಾಗೂ ಶಾಪವಿದೆ. ಅವನನ್ನು ಅಲ್ಲಾಹನು ಶಪಿಸುವನು ಮತ್ತು ಅವನಿಗೋಸ್ಕರ ಅಲ್ಲಾಹನು ಮಹಾಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.

🎧 ಆಲಿಸಿ


📜 ಆಯತ್ 91-95 — ಸೂರಾ ಅನ್-ನಿಸಾ

91سَتَجِدُونَ آخَرِينَ يُرِيدُونَ أَن يَأْمَنُوكُمْ وَيَأْمَنُوا قَوْمَهُمْ كُلَّ مَا رُدُّوا إِلَى الْفِتْنَةِ أُرْكِسُوا فِيهَا ۚ فَإِن لَّمْ يَعْتَزِلُوكُمْ وَيُلْقُوا إِلَيْكُمُ السَّلَمَ وَيَكُفُّوا أَيْدِيَهُمْ فَخُذُوهُمْ وَاقْتُلُوهُمْ حَيْثُ ثَقِفْتُمُوهُمْ ۚ وَأُولَٰئِكُمْ جَعَلْنَا لَكُمْ عَلَيْهِمْ سُلْطَانًا مُّبِينًا
ಬೇರೊಂದು ಸಮುದಾಯವನ್ನು ನೀವು ಕಾಣುವಿರಿ. ಅವರು ನಿಮ್ಮೊಂದಿಗೂ ಸ್ವತಃ ತಮ್ಮ ಜನರೊಂದಿಗೂ ಅಭಯವನ್ನು ಬಯಸುತ್ತಾರೆ. (ಆದರೆ) ಕ್ಷೆÆÃಭೆಯೆಡೆಗೆ ಅವರನ್ನು ಮರಳಿಸಲಾಗುವಾಗ ಅದರಲ್ಲಿ ಅವರು ಅಧೋಮುಖಿಗಳಾಗಿ ಬೀಳುತ್ತಾರೆ. ಅವರೇನಾದರೂ ನಿಮ್ಮಿಂದ ದೂರ ಸರಿದು ನಿಮ್ಮ ಮುಂದೆ ಶಾಂತಿಯ ಪ್ರಸ್ತಾಪವನ್ನಿಡದಿದ್ದರೆ ಮತ್ತು ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ. ನಾವು ಅವರ ವಿರುದ್ಧ ನಿಮಗೆ ಸ್ಪಷ್ಟವಾದ ಅಧಿಕಾರವನ್ನು ನೀಡಿರುತ್ತೇವೆ.
92وَمَا كَانَ لِمُؤْمِنٍ أَن يَقْتُلَ مُؤْمِنًا إِلَّا خَطَأً ۚ وَمَن قَتَلَ مُؤْمِنًا خَطَأً فَتَحْرِيرُ رَقَبَةٍ مُّؤْمِنَةٍ وَدِيَةٌ مُّسَلَّمَةٌ إِلَىٰ أَهْلِهِ إِلَّا أَن يَصَّدَّقُوا ۚ فَإِن كَانَ مِن قَوْمٍ عَدُوٍّ لَّكُمْ وَهُوَ مُؤْمِنٌ فَتَحْرِيرُ رَقَبَةٍ مُّؤْمِنَةٍ ۖ وَإِن كَانَ مِن قَوْمٍ بَيْنَكُمْ وَبَيْنَهُم مِّيثَاقٌ فَدِيَةٌ مُّسَلَّمَةٌ إِلَىٰ أَهْلِهِ وَتَحْرِيرُ رَقَبَةٍ مُّؤْمِنَةٍ ۖ فَمَن لَّمْ يَجِدْ فَصِيَامُ شَهْرَيْنِ مُتَتَابِعَيْنِ تَوْبَةً مِّنَ اللَّهِ ۗ وَكَانَ اللَّهُ عَلِيمًا حَكِيمًا
ಒಬ್ಬ ಸತ್ಯವಿಶ್ವಾಸಿಯನ್ನು ವಧಿಸುವುದು ಪ್ರಮಾದದ ಹೊರತು ಭೂಷಣವಲ್ಲ. ಪ್ರಮಾದವಶಾತ್ ಯಾರಾದರೂ ಒಬ್ಬ ಸತ್ಯವಿಶ್ವಾಸಿಯನ್ನು ವಧಿಸಿಬಿಟ್ಟರೆ ಪ್ರಾಯಶ್ಚಿತವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಬಿಡುಗಡೆಗೊಳಿಸಬೇಕು. ಮತ್ತು ಅವನ (ಹತನಾದವನ) ಕುಟುಂಬದವರಿಗೆ ಪರಿಹಾರ ಧನವನ್ನು ನೀಡಬೇಕು. ಆದರೆ ಅವರು ಕುಟುಂಬದವರು ಅದನ್ನು ದಾನವಾಗಿ ಬಿಟ್ಟುಕೊಡುವುದಾದರೆ ಬೇರೆ ವಿಚಾರ ಮತ್ತು ಕೊಲೆಗೀಡಾದವನು ನಿಮ್ಮ ಶತ್ರು ಸಮೂಹದವನಾಗಿದ್ದು, ಅವನು ವಿಶ್ವಾಸಿಯಾಗಿದ್ದರೆ ಕೇವಲ ಸತ್ಯವಿಶ್ವಾಸಿಯಾದ ಓರ್ವ ಗುಲಾಮನನ್ನು ಬಿಡುಗಡೆ ಗೊಳಿಸುವುದು ಕಡ್ಡಾಯವಾಗಿದೆ. ಇನ್ನು ಅವನು (ಕೊಲೆಗೀಡಾದವನು) ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಸಮೂಹದವನಾಗಿದ್ದರೆ ಪರಿಹಾರಧನ ಕಡ್ಡಾಯವಾಗಿದೆ. ಮತ್ತು ಅವನ ವಾರೀಸುದಾರರಿಗೆ ಅದನ್ನು ನೀಡಬೇಕು. ಮತ್ತು ಒಬ್ಬ ವಿಶ್ವಾಸಿಯಾದ ಗುಲಾಮನನ್ನು ಬಿಡುಗಡೆಗೊಳಿಸಬೇಕಾಗಿದೆ. ಇನ್ನು ಯಾರಿಗಾದರು ಅದರ ಸಾಮರ್ಥ್ಯವಿಲ್ಲದಿದ್ದರೆ ಅವನ ಮೇಲೆ ನಿರಂತರ ಎರಡು ತಿಂಗಳು ಉಪವಾಸ ಆಚರಿಸುವ ಹೊಣೆಯಿದೆ. ಇದು ಅಲ್ಲಾಹನಿಂದ ಕ್ಷಮೆ ಸಿಗಲೆಂದಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
93وَمَن يَقْتُلْ مُؤْمِنًا مُّتَعَمِّدًا فَجَزَاؤُهُ جَهَنَّمُ خَالِدًا فِيهَا وَغَضِبَ اللَّهُ عَلَيْهِ وَلَعَنَهُ وَأَعَدَّ لَهُ عَذَابًا عَظِيمًا
ಯಾರಾದರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ಕೊಂದರೆ ಅವನಿಗಿರುವ ಪ್ರತಿಫಲವು ನರಕವೇ ಆಗಿದೆ. ಅವನು ಅದರಲ್ಲಿ ಶಾಶ್ವತವಾಗಿರುವನು. ಅವನ ಮೆಲೆ ಅಲ್ಲಾಹನ ಕ್ರೋಧ ಹಾಗೂ ಶಾಪವಿದೆ. ಅವನನ್ನು ಅಲ್ಲಾಹನು ಶಪಿಸುವನು ಮತ್ತು ಅವನಿಗೋಸ್ಕರ ಅಲ್ಲಾಹನು ಮಹಾಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ.
94يَا أَيُّهَا الَّذِينَ آمَنُوا إِذَا ضَرَبْتُمْ فِي سَبِيلِ اللَّهِ فَتَبَيَّنُوا وَلَا تَقُولُوا لِمَنْ أَلْقَىٰ إِلَيْكُمُ السَّلَامَ لَسْتَ مُؤْمِنًا تَبْتَغُونَ عَرَضَ الْحَيَاةِ الدُّنْيَا فَعِندَ اللَّهِ مَغَانِمُ كَثِيرَةٌ ۚ كَذَٰلِكَ كُنتُم مِّن قَبْلُ فَمَنَّ اللَّهُ عَلَيْكُمْ فَتَبَيَّنُوا ۚ إِنَّ اللَّهَ كَانَ بِمَا تَعْمَلُونَ خَبِيرًا
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನ ಮಾರ್ಗದಲ್ಲಿ ಪ್ರಯಾಣಕ್ಕೆ ಹೊರಟರೆ ಮತ್ತು ಯಾರಾದರೂ ನಿಮಗೆ ಸಲಾಮ್ ಹೇಳಿದರೆ ಅವನೊಂದಿಗೆ ನೀನು ವಿಶ್ವಾಸಿಯಲ್ಲ ಎಂದು ಹೇಳಬೇಡಿರಿ. ನೀವು ಐಹಿಕ ಜೀವನೋಪಾಯಗಳನ್ನು ಬಯಸುತ್ತಿದ್ದರೆ ಅಲ್ಲಾಹನ ಬಳಿ ಧಾರಾಳ ಸಂಪತ್ತುಗಳಿವೆ. ಈ ಮುಂಚೆ ನೀವು ಸಹ ಅವಿಶ್ವಾಸಿಗಳಾಗಿದ್ದೀರಿ. ಅನಂತರ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದನು. ಆದ್ದರಿಂದ ನೀವು ತನಿಖೆ ಮಾಡಿ ತಿಳಿದುಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಸೂಕ್ಷö್ಮ ಅರಿವುಳ್ಳನಾಗಿದ್ದಾನೆ.
95لَّا يَسْتَوِي الْقَاعِدُونَ مِنَ الْمُؤْمِنِينَ غَيْرُ أُولِي الضَّرَرِ وَالْمُجَاهِدُونَ فِي سَبِيلِ اللَّهِ بِأَمْوَالِهِمْ وَأَنفُسِهِمْ ۚ فَضَّلَ اللَّهُ الْمُجَاهِدِينَ بِأَمْوَالِهِمْ وَأَنفُسِهِمْ عَلَى الْقَاعِدِينَ دَرَجَةً ۚ وَكُلًّا وَعَدَ اللَّهُ الْحُسْنَىٰ ۚ وَفَضَّلَ اللَّهُ الْمُجَاهِدِينَ عَلَى الْقَاعِدِينَ أَجْرًا عَظِيمًا
ತನ್ನ ಜೀವ ಮತ್ತು ಸಂಪತ್ತುಗಳೊAದಿಗೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವ ಸತ್ಯವಿಶ್ವಾಸಿಗಳು ಮತ್ತು ಕಾರಣವಿಲ್ಲದೆಯೇ ಮನೆಗಳಲ್ಲಿ ಕುಳಿತು ಬಿಟ್ಟಿರುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತಮ್ಮ ಜೀವ ಮತ್ತು ಸಂಪತ್ತುಗಳೊAದಿಗೆ ಯುದ್ಧ ಮಾಡುವವರನ್ನು ಮನೆಗಳಲ್ಲಿ ಕುಳಿತುಕೊಂಡಿರುವವರ ಮೇಲೆ ಅಲ್ಲಾಹನು ಪದವಿಗಳಲ್ಲಿ ಶ್ರೇಷ್ಠತೆ ನೀಡಿರುವನು. ಅಲ್ಲಾಹನು ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ಆದರೆ ಅಲ್ಲಾಹನು ಮನೆಗೆಗಳಲ್ಲಿ ಕುಳಿತುಕೊಂಡಿರುವವರಿ ಗಿಂತ ಹೋರಾಡುವವರಿಗೆ ಮಹಾ ಪ್ರತಿಫಲವನ್ನು ನೀಡಿ ಶ್ರೇಷ್ಠರನ್ನಾಗಿ ಮಾಡಿರುವನು.
ಅನ್-ನಿಸಾಕುರಾನ್ ಸೂಚಿ
176ಆಯತ್
MedinanRevelation
93ಆಯತ್

ಅನುವಾದ — ಅನ್-ನಿಸಾ 93

ಸೂರಾ ಅನ್-ನಿಸಾ ಆಯತ್ 93 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರಾದರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕವಾಗಿ ಕೊಂದರೆ ಅವನಿಗಿರುವ ಪ್ರತಿಫಲವು ನರಕವೇ ಆಗಿದೆ. ಅವನು…

ಸೂರಾ ಆಯತ್ 93/176 — ಸೂರಾ ಅನ್-ನಿಸಾ النساء (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಿಸಾ ಆಲಿಸಿ, ಸೂರಾ ಅನ್-ನಿಸಾ ಅನುವಾದ, ಸೂರಾ ಅನ್-ನಿಸಾ mp3, ಸೂರಾ ಅನ್-ನಿಸಾ pdf. ಆಯತ್ 91–95. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers