ಸೂರಾ ಮುಹಮ್ಮದ್ ಅರೇಬಿಕ್ ಮತ್ತು ಕನ್ನಡ

ಸೂರಾ ಮುಹಮ್ಮದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (38 ಆಯತ್ — مدنية). ಮುಹಮ್ಮದ್ ಆಲಿಸಿ, ಮುಹಮ್ಮದ್ ಅನುವಾದ, ಮುಹಮ್ಮದ್ mp3, ಮುಹಮ್ಮದ್ pdf.

ಸೂರಾ ಮುಹಮ್ಮದ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
الَّذِينَ كَفَرُوا وَصَدُّوا عَن سَبِيلِ اللَّهِ أَضَلَّ أَعْمَالَهُمْ ۝١
📖 ಅನುವಾದ ಆಯತ್ 1
ಸತ್ಯನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ತಡೆದಿರುವರಾರೋ ಅವರ ಕರ್ಮಗಳನ್ನು ಅಲ್ಲಾಹನು ವ್ಯರ್ಥಗೊಳಿಸಿದನು.
وَالَّذِينَ آمَنُوا وَعَمِلُوا الصَّالِحَاتِ وَآمَنُوا بِمَا نُزِّلَ عَلَىٰ مُحَمَّدٍ وَهُوَ الْحَقُّ مِن رَّبِّهِمْ ۙ كَفَّرَ عَنْهُمْ سَيِّئَاتِهِمْ وَأَصْلَحَ بَالَهُمْ ۝٢
📖 ಅನುವಾದ ಆಯತ್ 2
ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು, ಮುಹಮ್ಮದ್‌ರವರ ಮೇಲೆ ಅವತೀರ್ಣಗೊಳಿಸಲಾದುದರಲ್ಲಿ ವಿಶ್ವಾಸವಿರಿಸಿದರೋ ವಸ್ತುತಃ ಅದು ಅವರ ಪ್ರಭುವಿನಿಂದ ಇರುವ ಸತ್ಯಧರ್ಮವಾಗಿದೆ. ಅಲ್ಲಾಹನು ಅವರ ಪಾಪಗಳನ್ನು ಅವರಿಂದ ದೂರಮಾಡಿದನು ಮತ್ತು ಅವರ ಸ್ಥಿತಿಯನ್ನು ಉತ್ತಮಗೊಳಿಸಿದನು.
ذَٰلِكَ بِأَنَّ الَّذِينَ كَفَرُوا اتَّبَعُوا الْبَاطِلَ وَأَنَّ الَّذِينَ آمَنُوا اتَّبَعُوا الْحَقَّ مِن رَّبِّهِمْ ۚ كَذَٰلِكَ يَضْرِبُ اللَّهُ لِلنَّاسِ أَمْثَالَهُمْ ۝٣
📖 ಅನುವಾದ ಆಯತ್ 3
ಇದೇಕೆಂದರೆ ಸತ್ಯನಿಷೇಧಿಸಿದವರು ಮಿಥ್ಯವನ್ನು ಅನುಸರಿಸಿದರು ಹಾಗು ಸತ್ಯವಿಶ್ವಾಸಿಗಳು ತಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವನ್ನು ಅನುಸರಿಸಿದರು, ಇದೇ ರೀತಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ನೀಡುತ್ತಾನೆ.
فَإِذَا لَقِيتُمُ الَّذِينَ كَفَرُوا فَضَرْبَ الرِّقَابِ حَتَّىٰ إِذَا أَثْخَنتُمُوهُمْ فَشُدُّوا الْوَثَاقَ فَإِمَّا مَنًّا بَعْدُ وَإِمَّا فِدَاءً حَتَّىٰ تَضَعَ الْحَرْبُ أَوْزَارَهَا ۚ ذَٰلِكَ وَلَوْ يَشَاءُ اللَّهُ لَانتَصَرَ مِنْهُمْ وَلَٰكِن لِّيَبْلُوَ بَعْضَكُم بِبَعْضٍ ۗ وَالَّذِينَ قُتِلُوا فِي سَبِيلِ اللَّهِ فَلَن يُضِلَّ أَعْمَالَهُمْ ۝٤
📖 ಅನುವಾದ ಆಯತ್ 4
ಆದುದರಿಂದ ನೀವು ರಣರಂಗದಲ್ಲಿ ಸತ್ಯನಿಷೇಧಿಗಳನ್ನು ಎದುರಾದರೆ (ಕದನ ಸಂದರ್ಭದಲ್ಲಿ) ಅವರ ಕತ್ತುಗಳನ್ನು ಕಡಿಯಿರಿ. ನೀವು ಅವರನ್ನು ಚೆನ್ನಾಗಿ ಸದೆಬಡಿದಾಗ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಅನಂತರ ಒಂದೋ ಸೌಜನ್ಯದಿಂದ ಅವರನ್ನು ಬಿಡುಗಡೆಗೊಳಿಸಿರಿ. ಇಲ್ಲವೇ ವಿಮೋಚನಾ ಧನ ಪಡೆಯಿರಿ. ಯುದ್ಧವು ಆಯುಧವನ್ನು ಕೆಳಗಿಳಿಸುವವರೆಗೆ, ಇದುವೇ ಆದೇಶವಾಗಿದೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಸ್ವತಃ ಅವನೇ ಅವರಿಂದ ಪ್ರತಿಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೂಲಕ ಪರೀಕ್ಷಿಸಲೆಂದಾಗಿದೆ. ಅಲ್ಲಾಹನು ತನ್ನ ಮಾರ್ಗದಲ್ಲಿ ಕೊಲ್ಲಲ್ಪಟ್ಟವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.
سَيَهْدِيهِمْ وَيُصْلِحُ بَالَهُمْ ۝٥
📖 ಅನುವಾದ ಆಯತ್ 5
ಅವನು ಸಧ್ಯದಲ್ಲೇ ಅವರಿಗೆ ಮಾರ್ಗದರ್ಶನ ಮಾಡುವನು. ಹಾಗು ಅವರ ಸ್ಥಿತಿಯನ್ನು ಸುಧಾರಿಸುವನು.
وَيُدْخِلُهُمُ الْجَنَّةَ عَرَّفَهَا لَهُمْ ۝٦
📖 ಅನುವಾದ ಆಯತ್ 6
ಮತ್ತು ಅವರಿಗೆ ಪರಿಚಯಿಸಲಾದ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.
يَا أَيُّهَا الَّذِينَ آمَنُوا إِن تَنصُرُوا اللَّهَ يَنصُرْكُمْ وَيُثَبِّتْ أَقْدَامَكُمْ ۝٧
📖 ಅನುವಾದ ಆಯತ್ 7
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನೂ ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.
وَالَّذِينَ كَفَرُوا فَتَعْسًا لَّهُمْ وَأَضَلَّ أَعْمَالَهُمْ ۝٨
📖 ಅನುವಾದ ಆಯತ್ 8
ಇನ್ನು ಸತ್ಯನಿಷೇಧಿಸಿದವರಿಗೆ ನಾಶವಿರಲಿ, ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
ذَٰلِكَ بِأَنَّهُمْ كَرِهُوا مَا أَنزَلَ اللَّهُ فَأَحْبَطَ أَعْمَالَهُمْ ۝٩
📖 ಅನುವಾದ ಆಯತ್ 9
ಇದೇಕೆಂದರೆ ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನನ್ನು ಇಷ್ಟಪಡದಿರುವುದರ ಕಾರಣದಿಂದಾಗಿದೆ. ಹೀಗೆ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
۞ أَفَلَمْ يَسِيرُوا فِي الْأَرْضِ فَيَنظُرُوا كَيْفَ كَانَ عَاقِبَةُ الَّذِينَ مِن قَبْلِهِمْ ۚ دَمَّرَ اللَّهُ عَلَيْهِمْ ۖ وَلِلْكَافِرِينَ أَمْثَالُهَا ۝١٠
📖 ಅನುವಾದ ಆಯತ್ 10
ಅವರು ತಮಗಿಂತ ಮುಂಚಿನವರ ಪರಿಣಾಮವು ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಸರ್ವನಾಶ ಮಾಡಿದನು ಮತ್ತು ಸತ್ಯನಿಷೇಧಿಗಳಿಗೆ ಇದೇ ರೀತಿಯ ಶಿಕ್ಷೆಗಳಿರುವುವು
ذَٰلِكَ بِأَنَّ اللَّهَ مَوْلَى الَّذِينَ آمَنُوا وَأَنَّ الْكَافِرِينَ لَا مَوْلَىٰ لَهُمْ ۝١١
📖 ಅನುವಾದ ಆಯತ್ 11
ಇದೇಕೆಂದರೆ ಖಂಡಿತವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಕಮಿತ್ರನಾಗಿ ರುವನು ಮತ್ತು ನಿಶ್ಚಯವಾಗಿಯು ಸತ್ಯನಿಷೇಧಿಗಳಿಗೆ ಯಾವೊಬ್ಬ ರಕ್ಷಕಮಿತ್ರನಿಲ್ಲ.
إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ ۖ وَالَّذِينَ كَفَرُوا يَتَمَتَّعُونَ وَيَأْكُلُونَ كَمَا تَأْكُلُ الْأَنْعَامُ وَالنَّارُ مَثْوًى لَّهُمْ ۝١٢
📖 ಅನುವಾದ ಆಯತ್ 12
ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಖಂಡಿತ ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು ಮತ್ತು ಸತ್ಯನಿಷೇಧಿಸಿರುವವರು ಇಹಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುತ್ತಾ ಜಾನುವಾರುಗಳು ತಿನ್ನುವಂತೆ ತಿನ್ನುತ್ತಿದ್ದಾರೆ. ನರಕಾಗ್ನಿಯೇ ಅವರ ನೆಲೆಯಾಗಿದೆ.
وَكَأَيِّن مِّن قَرْيَةٍ هِيَ أَشَدُّ قُوَّةً مِّن قَرْيَتِكَ الَّتِي أَخْرَجَتْكَ أَهْلَكْنَاهُمْ فَلَا نَاصِرَ لَهُمْ ۝١٣
📖 ಅನುವಾದ ಆಯತ್ 13
ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು ಅವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಅವರ ಸಹಾಯಕನಾರೂ ಇರಲಿಲ್ಲ.
أَفَمَن كَانَ عَلَىٰ بَيِّنَةٍ مِّن رَّبِّهِ كَمَن زُيِّنَ لَهُ سُوءُ عَمَلِهِ وَاتَّبَعُوا أَهْوَاءَهُم ۝١٤
📖 ಅನುವಾದ ಆಯತ್ 14
ತನ್ನ ಪ್ರಭುವಿನ ಕಡೆಯಿಂದ ಸುಸ್ಪಷ್ಟ ಆಧಾರದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ದುಷ್ಕರ್ಮವು ಸುಂದರಗೊಳಿಸಲಾದ, ಮತ್ತು ತನ್ನ ಸ್ವೇಚ್ಛೆಗಳನ್ನು ಅನುಸರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯಂತಾಗುವನೇ ?
مَّثَلُ الْجَنَّةِ الَّتِي وُعِدَ الْمُتَّقُونَ ۖ فِيهَا أَنْهَارٌ مِّن مَّاءٍ غَيْرِ آسِنٍ وَأَنْهَارٌ مِّن لَّبَنٍ لَّمْ يَتَغَيَّرْ طَعْمُهُ وَأَنْهَارٌ مِّنْ خَمْرٍ لَّذَّةٍ لِّلشَّارِبِينَ وَأَنْهَارٌ مِّنْ عَسَلٍ مُّصَفًّى ۖ وَلَهُمْ فِيهَا مِن كُلِّ الثَّمَرَاتِ وَمَغْفِرَةٌ مِّن رَّبِّهِمْ ۖ كَمَنْ هُوَ خَالِدٌ فِي النَّارِ وَسُقُوا مَاءً حَمِيمًا فَقَطَّعَ أَمْعَاءَهُمْ ۝١٥
📖 ಅನುವಾದ ಆಯತ್ 15
ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು.
وَمِنْهُم مَّن يَسْتَمِعُ إِلَيْكَ حَتَّىٰ إِذَا خَرَجُوا مِنْ عِندِكَ قَالُوا لِلَّذِينَ أُوتُوا الْعِلْمَ مَاذَا قَالَ آنِفًا ۚ أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَاتَّبَعُوا أَهْوَاءَهُمْ ۝١٦
📖 ಅನುವಾದ ಆಯತ್ 16
(ಓ ಪೈಗಂಬರರೇ) ಅವರಲ್ಲಿ ಕೆಲವು ಕಪಟಿಗಳು ತಮ್ಮ ಮಾತನ್ನು ಕಿವಿಕೊಟ್ಟು ಕೇಳುತ್ತಾರೆ. ಕೊನೆಗೆ ಅವರು ನಿಮ್ಮ ಬಳಿಯಿಂದ ಹೊರಟುಹೋದರೆ ಜ್ಞಾನ ನೀಡಲ್ಪಟ್ಟವರೊಂದಿಗೆ (ಗೇಲಿ ಮಾಡುತ್ತಾ) ಈಗ ಅವರು ಹೇಳಿದ್ದೇನು ? ಎಂದು ಕೇಳುತ್ತಾರೆ, ಅವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು, ಮತ್ತು ಅವರು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ.
وَالَّذِينَ اهْتَدَوْا زَادَهُمْ هُدًى وَآتَاهُمْ تَقْوَاهُمْ ۝١٧
📖 ಅನುವಾದ ಆಯತ್ 17
ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.
فَهَلْ يَنظُرُونَ إِلَّا السَّاعَةَ أَن تَأْتِيَهُم بَغْتَةً ۖ فَقَدْ جَاءَ أَشْرَاطُهَا ۚ فَأَنَّىٰ لَهُمْ إِذَا جَاءَتْهُمْ ذِكْرَاهُمْ ۝١٨
📖 ಅನುವಾದ ಆಯತ್ 18
ಅಂತ್ಯಗಳಿಗೆಯು ತಮ್ಮೆಡೆಗೆ ಹಠಾತ್ತನೆ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಯೇ? ನಿಶ್ಚಯವಾಗಿಯೂ ಅದರ ಕುರುಹುಗಳು ಬಂದುಬಿಟ್ಟಿವೆ. ಇನ್ನು ಅವರೆಡೆಗೆ ಅದು ಬಂದರೆ ಅವರಿಗೆ ಉಪದೇಶ ಪಡೆಯುವ ಅವಕಾಶವೆಲ್ಲಿದೆ?
فَاعْلَمْ أَنَّهُ لَا إِلَٰهَ إِلَّا اللَّهُ وَاسْتَغْفِرْ لِذَنبِكَ وَلِلْمُؤْمِنِينَ وَالْمُؤْمِنَاتِ ۗ وَاللَّهُ يَعْلَمُ مُتَقَلَّبَكُمْ وَمَثْوَاكُمْ ۝١٩
📖 ಅನುವಾದ ಆಯತ್ 19
ಓ ಪೈಗಂಬರರೇ ಖಂಡಿತವಾಗಿಯು ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ನಿಮ್ಮ ಪರವಾಗಿ ಮತ್ತು ಸತ್ಯವಿಶ್ವಾಸಿ-ವಿಶ್ವಾಸಿನಿಗಳ ಪರವಾಗಿಯು ಕ್ಷಮೆಯನ್ನು ಬೇಡಿರಿ. ನಿಮ್ಮ ಚಟುವಟಿಕೆಗಳನ್ನು ಮತ್ತು ನಿಮ್ಮ ತಂಗುದಾಣವನ್ನು ಅಲ್ಲಾಹನು ಬಲ್ಲನು.
وَيَقُولُ الَّذِينَ آمَنُوا لَوْلَا نُزِّلَتْ سُورَةٌ ۖ فَإِذَا أُنزِلَتْ سُورَةٌ مُّحْكَمَةٌ وَذُكِرَ فِيهَا الْقِتَالُ ۙ رَأَيْتَ الَّذِينَ فِي قُلُوبِهِم مَّرَضٌ يَنظُرُونَ إِلَيْكَ نَظَرَ الْمَغْشِيِّ عَلَيْهِ مِنَ الْمَوْتِ ۖ فَأَوْلَىٰ لَهُمْ ۝٢٠
📖 ಅನುವಾದ ಆಯತ್ 20
ಸತ್ಯವಿಶ್ವಾವಿರಿಸಿದವರು ಹೇಳುತ್ತಾರೆ; (ಯುದ್ಧದ ಕುರಿತು) ಒಂದು ಅಧ್ಯಾಯ ಅವತೀರ್ಣಗೊಳಿಸಲಾಗಿಲ್ಲವೇಕೆ? ಬಳಿಕ ನಿಖರವಾದ ನಿಯಮಗಳೊಂದಿಗೆ ಕೂಡಿದ ಒಂದು ಅಧ್ಯಾಯವನ್ನು ಅವತೀರ್ಣ ಗೊಳಿಸಲಾದರೆ ಹಾಗು ಅದರಲ್ಲಿ ಯುದ್ಧದ ಪ್ರಸ್ತಾಪವನ್ನು ಮಾಡಲಾದರೆ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ಮೃತ್ಯು ಆವರಿಸಿದವನೊಬ್ಬನು ನೋಡುವ ಹಾಗೆ ನಿಮ್ಮೆಡೆಗೆ ನೋಡುತ್ತಿರುವುದಾಗಿ ನೀವು ಕಾಣುವಿರಿ, ಆದ್ದರಿಂದ ಅವರಿಗೆ ಅದೆ ತಕ್ಕದ್ದಾಗಿದೆ.
طَاعَةٌ وَقَوْلٌ مَّعْرُوفٌ ۚ فَإِذَا عَزَمَ الْأَمْرُ فَلَوْ صَدَقُوا اللَّهَ لَكَانَ خَيْرًا لَّهُمْ ۝٢١
📖 ಅನುವಾದ ಆಯತ್ 21
ಆಜ್ಞಾನುಸರಣೆ ಮತ್ತು ಒಳ್ಳೆಯ ಮಾತು ಅವರಿಗೆ ಉತ್ತಮವಾಗಿತ್ತು. ಇನ್ನು ಯುದ್ಧದ ಸಂಗತಿಯು ನಿರ್ಧರಿಸಲಾದಾಗ ಅವರು ಅಲ್ಲಾಹನೊಡನೆ ಪ್ರಾಮಾಣಿಕರಾಗಿರುತ್ತಿದ್ದರೆ ಅದು ಅವರಿಗೆ ಅತ್ತುö್ಯತ್ತಮವಾಗಿರುತ್ತಿತ್ತು.
فَهَلْ عَسَيْتُمْ إِن تَوَلَّيْتُمْ أَن تُفْسِدُوا فِي الْأَرْضِ وَتُقَطِّعُوا أَرْحَامَكُمْ ۝٢٢
📖 ಅನುವಾದ ಆಯತ್ 22
ನಿಮಗೆ ಆಡಳಿತಾಧಿಕಾರ ಪ್ರಾಪ್ತವಾದರೆ ನೀವು ಭೂಮಿಯಲ್ಲಿ ಕ್ಷೆÆÃಭೆ ಹರಡುವಿರಿ ಮತ್ತು ಕುಟುಂಬ ಸಂಬAಧಗಳನ್ನು ಮುರಿದುಬಿಡುವಿರಿ ಎಂಬುದೇ ನಿಮ್ಮಿಂದ ನಿರೀಕ್ಷೆಯಿದೆ.
أُولَٰئِكَ الَّذِينَ لَعَنَهُمُ اللَّهُ فَأَصَمَّهُمْ وَأَعْمَىٰ أَبْصَارَهُمْ ۝٢٣
📖 ಅನುವಾದ ಆಯತ್ 23
ಅಂಥವರನ್ನು ಅಲ್ಲಾಹನು ಶಪಿಸಿರುವನು ಮತ್ತು ಅವರನ್ನು ಕಿವುಡರನ್ನಾಗಿಯು, ಕುರುಡರನ್ನಾಗಿಯು ಮಾಡಿದ್ದಾನೆ.
أَفَلَا يَتَدَبَّرُونَ الْقُرْآنَ أَمْ عَلَىٰ قُلُوبٍ أَقْفَالُهَا ۝٢٤
📖 ಅನುವಾದ ಆಯತ್ 24
ಇವರು ಈ ಕುರ್‌ಆನಿನಲ್ಲಿ ಚಿಂತನೆ ನಡೆಸುವುದಿಲ್ಲವೇ ? ಅಥವ ಅವರ ಹೃದಯಗಳ ಮೇಲೆ ಬೀಗ ಜಡೆದಿದೆಯೇ?
إِنَّ الَّذِينَ ارْتَدُّوا عَلَىٰ أَدْبَارِهِم مِّن بَعْدِ مَا تَبَيَّنَ لَهُمُ الْهُدَى ۙ الشَّيْطَانُ سَوَّلَ لَهُمْ وَأَمْلَىٰ لَهُمْ ۝٢٥
📖 ಅನುವಾದ ಆಯತ್ 25
ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ತಮ್ಮ ಬೆನ್ನುಗಳನ್ನು ತಿರುಗಿಸುವವರಿಗೆ ಶೈತಾನನು(ಅವರ ಕರ್ಮಗಳನ್ನು) ಮನಮೋಹಕಗೊಳಿಸಿರುವನು ಹಾಗೂ ಅವರನ್ನು ಸಡಿಲುಬಿಟ್ಟಿರುವನು.
ذَٰلِكَ بِأَنَّهُمْ قَالُوا لِلَّذِينَ كَرِهُوا مَا نَزَّلَ اللَّهُ سَنُطِيعُكُمْ فِي بَعْضِ الْأَمْرِ ۖ وَاللَّهُ يَعْلَمُ إِسْرَارَهُمْ ۝٢٦
📖 ಅನುವಾದ ಆಯತ್ 26
ಇದೇಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿರುವ ದಿವ್ಯವಾಣಿಯನ್ನು ಇಷ್ಟಪಡದಿರುವ ಜನರಿಗೆ ನಾವು ಸಧ್ಯವೇ ಕೆಲವೊಂದು ವಿಚಾರಗಳಲ್ಲಿ ನಿಮ್ಮನ್ನು ಅನುಸರಿಸುತ್ತೇವೆ ಎಂದು ಹೇಳಿದರು. ಮತ್ತು ಅಲ್ಲಾಹನು ಅವರ ರಹಸ್ಯ ಮಾತುಗಳನ್ನು ಚೆನ್ನಾಗಿ ಅರಿಯುತ್ತಾನೆ.
فَكَيْفَ إِذَا تَوَفَّتْهُمُ الْمَلَائِكَةُ يَضْرِبُونَ وُجُوهَهُمْ وَأَدْبَارَهُمْ ۝٢٧
📖 ಅನುವಾದ ಆಯತ್ 27
ದೇವದೂತರು ಅವರ ಆತ್ಮಗಳನ್ನು ವಶಪಡಿಸುತ್ತಾ ಅವರ ಮುಖಗಳ ಮತ್ತು ಬೆನ್ನುಗಳ ಮೇಲೆ ಹೊಡೆಯುವಾಗ ಅವರ ಸ್ಥಿತಿ ಹೇಗಿರಬಹುದು?
ذَٰلِكَ بِأَنَّهُمُ اتَّبَعُوا مَا أَسْخَطَ اللَّهَ وَكَرِهُوا رِضْوَانَهُ فَأَحْبَطَ أَعْمَالَهُمْ ۝٢٨
📖 ಅನುವಾದ ಆಯತ್ 28
ಇದೇಕೆಂದರೆ ಅವರು ಅಲ್ಲಾಹನಿಗೆ ಕುಪಿತಗೊಳಿಸುವ ಮಾರ್ಗವನ್ನು ಅನುಸರಿಸಿದ ನಿಮಿತ್ತ ಮತ್ತು ಅವನ ಸಂತೃಪ್ತಿಯನ್ನು ಅವರು ಇಷ್ಟಪಡದಿದ್ದುದರ ನಿಮಿತ್ತವಾಗಿದೆ. ಆಗ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿಬಿಟ್ಟನು.
أَمْ حَسِبَ الَّذِينَ فِي قُلُوبِهِم مَّرَضٌ أَن لَّن يُخْرِجَ اللَّهُ أَضْغَانَهُمْ ۝٢٩
📖 ಅನುವಾದ ಆಯತ್ 29
ಅಥವಾ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ತಮ್ಮ ದ್ವೇಷ-ಗಳನ್ನು ಅಲ್ಲಾಹನು ಹೊರತರಲಾರನೆಂದು ಭಾವಿಸಿಕೊಂಡಿರುವರೇ ?
وَلَوْ نَشَاءُ لَأَرَيْنَاكَهُمْ فَلَعَرَفْتَهُم بِسِيمَاهُمْ ۚ وَلَتَعْرِفَنَّهُمْ فِي لَحْنِ الْقَوْلِ ۚ وَاللَّهُ يَعْلَمُ أَعْمَالَكُمْ ۝٣٠
📖 ಅನುವಾದ ಆಯತ್ 30
ಮತ್ತು ನಾವಿಚ್ಛಿಸಿರುತ್ತಿದ್ದರೆ ಅವರೆಲ್ಲರನ್ನೂ ನಿನಗೆ ತೋರಿಸಿಕೊಡುತ್ತಿದ್ದೆವು. ಆಗ ನೀವು ಅವರನ್ನು ಅವರ ಮುಖ ಲಕ್ಷಣಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಿರಿ ಹಾಗು ಖಂಡಿತ ನೀವು ಅವರನ್ನು ಅವರ ಮಾತಿನ ಶೈಲಿಯಿಂದಲೇ ಗುರುತಿಸಿಕೊಳ್ಳುವಿರಿ, ಅಲ್ಲಾಹನು ನಿಮ್ಮ ಸಕಲ ಕರ್ಮಗಳನ್ನು ಚೆನ್ನಾಗಿ ಬಲ್ಲನು.
وَلَنَبْلُوَنَّكُمْ حَتَّىٰ نَعْلَمَ الْمُجَاهِدِينَ مِنكُمْ وَالصَّابِرِينَ وَنَبْلُوَ أَخْبَارَكُمْ ۝٣١
📖 ಅನುವಾದ ಆಯತ್ 31
ನಿಮ್ಮಲ್ಲಿ ಹೋರಾಡುವವರು ಸಹನಾಶೀಲರು ಯಾರೆಂದು ತಿಳಿಯುವ ತನಕ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸಲಿದ್ದೇವೆ ಮತ್ತು ನಾವು ನಿಮ್ಮ ಸ್ಥಿತಿಗತಿಗಳನ್ನೂ ಪರೀಕ್ಷಿಸುವೆವು.
إِنَّ الَّذِينَ كَفَرُوا وَصَدُّوا عَن سَبِيلِ اللَّهِ وَشَاقُّوا الرَّسُولَ مِن بَعْدِ مَا تَبَيَّنَ لَهُمُ الْهُدَىٰ لَن يَضُرُّوا اللَّهَ شَيْئًا وَسَيُحْبِطُ أَعْمَالَهُمْ ۝٣٢
📖 ಅನುವಾದ ಆಯತ್ 32
ನಿಶ್ಚಯವಾಗಿಯೂ ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದು ಅನಂತರ ಸಂದೇಶವಾಹಕರನ್ನು ವಿರೋಧಿಸಿದವರಾರೋ ಅವರು ಅಲ್ಲಾಹನಿಗೆ ಸ್ವಲ್ಪವೂ ಹಾನಿಯನ್ನುಂಟು ಮಾಡಲಾರರು. ಸದ್ಯದಲ್ಲೇ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸುವನು.
۞ يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَلَا تُبْطِلُوا أَعْمَالَكُمْ ۝٣٣
📖 ಅನುವಾದ ಆಯತ್ 33
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗು ಸಂದೇಶವಾಹಕರನ್ನು ಅನುಸರಿಸಿರಿ, ಮತ್ತು ನಿಮ್ಮ ಕರ್ಮಗಳನ್ನು ವ್ಯರ್ಥಗೊಳಿಸಬೇಡಿರಿ.
إِنَّ الَّذِينَ كَفَرُوا وَصَدُّوا عَن سَبِيلِ اللَّهِ ثُمَّ مَاتُوا وَهُمْ كُفَّارٌ فَلَن يَغْفِرَ اللَّهُ لَهُمْ ۝٣٤
📖 ಅನುವಾದ ಆಯತ್ 34
ಸತ್ಯನಿಷೇಧಿಸಿ ಅಲ್ಲಾಹನ ಮಾರ್ಗದಿಂದ ತಡೆದು ಅನಂತರ ಸತ್ಯನಿಷೇಧಿಗಳಾಗಿದ್ದ ಪರಿಸ್ಥತಿಯಲ್ಲೇ ಮರಣಹೊಂದಿದವರಿಗೆ ಅಲ್ಲಾಹನು ಎಂದಿಗೂ ಕ್ಷಮಿಸುವುದಿಲ್ಲ.
فَلَا تَهِنُوا وَتَدْعُوا إِلَى السَّلْمِ وَأَنتُمُ الْأَعْلَوْنَ وَاللَّهُ مَعَكُمْ وَلَن يَتِرَكُمْ أَعْمَالَكُمْ ۝٣٥
📖 ಅನುವಾದ ಆಯತ್ 35
ಆದ್ದರಿಂದ (ಓ ಸತ್ಯವಿಶ್ವಾಸಿಗಳೇ) ನೀವು ಬಲಹೀನರಾಗಬೇಡಿರಿ, ಮತ್ತು ಸಂಧಾನದ ಬೇಡಿಕೆಯನ್ನಿಡಬೇಡಿರಿ, ವಸ್ತುತಃ ನೀವೇ ವಿಜಯಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಜೊತೆಯಲ್ಲಿದ್ದಾನೆ, ಅವನು ನಿಮ್ಮ ಕರ್ಮಗಳನ್ನು ಖಂಡಿತ ಕಡಿತಗೊಳಿಸುವುದಿಲ್ಲ.
إِنَّمَا الْحَيَاةُ الدُّنْيَا لَعِبٌ وَلَهْوٌ ۚ وَإِن تُؤْمِنُوا وَتَتَّقُوا يُؤْتِكُمْ أُجُورَكُمْ وَلَا يَسْأَلْكُمْ أَمْوَالَكُمْ ۝٣٦
📖 ಅನುವಾದ ಆಯತ್ 36
ವಾಸ್ತವದಲ್ಲಿ ಇಹಲೋಕದ ಜೀವನವು ಆಟ-ವಿನೋದ ಮಾತ್ರವಾಗಿದೆ. ನೀವು ವಿಶ್ವಾಸವಿರಿಸಿದರೆ ಹಾಗು ಭಯಭಕ್ತಿಯನ್ನು ಹೊಂದಿದರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ಕರುಣಿಸುವನು. ಅವನು ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳುವುದಿಲ್ಲ.
إِن يَسْأَلْكُمُوهَا فَيُحْفِكُمْ تَبْخَلُوا وَيُخْرِجْ أَضْغَانَكُمْ ۝٣٧
📖 ಅನುವಾದ ಆಯತ್ 37
ಅವನು ನಿಮ್ಮಿಂದ ಸಂಪತ್ತನ್ನು ಕೇಳಿ ಒತ್ತಾಯ ಮಾಡುತ್ತಿದ್ದರೆ ಆಗ ನೀವು ಜಿಪುಣತೆ ತೋರುತ್ತಿದ್ದಿರಿ ಮತ್ತು ಅವನು ನಿಮ್ಮ ದ್ವೇಷವನ್ನು ಹೊರತರುತ್ತಿದ್ದನು.
هَا أَنتُمْ هَٰؤُلَاءِ تُدْعَوْنَ لِتُنفِقُوا فِي سَبِيلِ اللَّهِ فَمِنكُم مَّن يَبْخَلُ ۖ وَمَن يَبْخَلْ فَإِنَّمَا يَبْخَلُ عَن نَّفْسِهِ ۚ وَاللَّهُ الْغَنِيُّ وَأَنتُمُ الْفُقَرَاءُ ۚ وَإِن تَتَوَلَّوْا يَسْتَبْدِلْ قَوْمًا غَيْرَكُمْ ثُمَّ لَا يَكُونُوا أَمْثَالَكُم ۝٣٨
📖 ಅನುವಾದ ಆಯತ್ 38
ತಿಳಿದುಕೊಳ್ಳಿರಿ! ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಸಲುವಾಗಿ ನಿಮ್ಮನ್ನು ಕರೆಯಲಾರದೆ ನಿಮ್ಮಲ್ಲಿ ಕೆಲವರು ಜಿಪುಣತೆ ತೋರತೊಡಗುತ್ತಾರೆ ಮತ್ತು ಯಾರು ಜಿಪುಣತೆ ತೋರುತ್ತಾನೋ ವಾಸ್ತವದಲ್ಲಿ ಅವನು ತನ್ನೊಂದಿಗೆ ಜಿಪುಣತೆ ತೋರುತ್ತಿದ್ದಾನೆ. ಅಲ್ಲಾಹನು ನಿರಪೇಕ್ಷÀನು ಮತ್ತು ನೀವೇ ಅವನ ಅವಲಂಬಿತರು. ಇನ್ನು ನೀವು ವಿಮುಖರಾಗಿಬಿಟ್ಟರೆ ಅವನು ನಿಮ್ಮ ಹೊರತು ಬೇರೊಂದು ಜನಾಂಗವನ್ನು ತರುವನು , ಅವರು ನಿಮ್ಮಂತೆ ಆಗಲಾರರು.
← 46 ಮುಹಮ್ಮದ್ (47/114) 48 →
ಓದಿ ಸೂರಾ ಮುಹಮ್ಮದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

47محمد Muhammad 📚 38 ಆಯತ್ مدنية

ಆಯತ್‌ವಾರು – ಸೂರಾ ಮುಹಮ್ಮದ್ — 38 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers