ಮುಹಮ್ಮದ್ · 17/38
ಅನುವಾದ ಉಚ್ಚಾರಣೆ — ಸೂರಾ ಮುಹಮ್ಮದ್
وَالَّذِينَ اهْتَدَوْا زَادَهُمْ هُدًى وَآتَاهُمْ تَقْوَاهُمْ ۝١٧
Wallazeenah tadaw zaadahum hudanw wa aataahum taqwaahum
📖 ಕನ್ನಡ ಅರ್ಥ
ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.

🎧 ಆಲಿಸಿ


📜 ಆಯತ್ 15-19 — ಸೂರಾ ಮುಹಮ್ಮದ್

15مَّثَلُ الْجَنَّةِ الَّتِي وُعِدَ الْمُتَّقُونَ ۖ فِيهَا أَنْهَارٌ مِّن مَّاءٍ غَيْرِ آسِنٍ وَأَنْهَارٌ مِّن لَّبَنٍ لَّمْ يَتَغَيَّرْ طَعْمُهُ وَأَنْهَارٌ مِّنْ خَمْرٍ لَّذَّةٍ لِّلشَّارِبِينَ وَأَنْهَارٌ مِّنْ عَسَلٍ مُّصَفًّى ۖ وَلَهُمْ فِيهَا مِن كُلِّ الثَّمَرَاتِ وَمَغْفِرَةٌ مِّن رَّبِّهِمْ ۖ كَمَنْ هُوَ خَالِدٌ فِي النَّارِ وَسُقُوا مَاءً حَمِيمًا فَقَطَّعَ أَمْعَاءَهُمْ
ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು.
16وَمِنْهُم مَّن يَسْتَمِعُ إِلَيْكَ حَتَّىٰ إِذَا خَرَجُوا مِنْ عِندِكَ قَالُوا لِلَّذِينَ أُوتُوا الْعِلْمَ مَاذَا قَالَ آنِفًا ۚ أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَاتَّبَعُوا أَهْوَاءَهُمْ
(ಓ ಪೈಗಂಬರರೇ) ಅವರಲ್ಲಿ ಕೆಲವು ಕಪಟಿಗಳು ತಮ್ಮ ಮಾತನ್ನು ಕಿವಿಕೊಟ್ಟು ಕೇಳುತ್ತಾರೆ. ಕೊನೆಗೆ ಅವರು ನಿಮ್ಮ ಬಳಿಯಿಂದ ಹೊರಟುಹೋದರೆ ಜ್ಞಾನ ನೀಡಲ್ಪಟ್ಟವರೊಂದಿಗೆ (ಗೇಲಿ ಮಾಡುತ್ತಾ) ಈಗ ಅವರು ಹೇಳಿದ್ದೇನು ? ಎಂದು ಕೇಳುತ್ತಾರೆ, ಅವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು, ಮತ್ತು ಅವರು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ.
17وَالَّذِينَ اهْتَدَوْا زَادَهُمْ هُدًى وَآتَاهُمْ تَقْوَاهُمْ
ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.
18فَهَلْ يَنظُرُونَ إِلَّا السَّاعَةَ أَن تَأْتِيَهُم بَغْتَةً ۖ فَقَدْ جَاءَ أَشْرَاطُهَا ۚ فَأَنَّىٰ لَهُمْ إِذَا جَاءَتْهُمْ ذِكْرَاهُمْ
ಅಂತ್ಯಗಳಿಗೆಯು ತಮ್ಮೆಡೆಗೆ ಹಠಾತ್ತನೆ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಯೇ? ನಿಶ್ಚಯವಾಗಿಯೂ ಅದರ ಕುರುಹುಗಳು ಬಂದುಬಿಟ್ಟಿವೆ. ಇನ್ನು ಅವರೆಡೆಗೆ ಅದು ಬಂದರೆ ಅವರಿಗೆ ಉಪದೇಶ ಪಡೆಯುವ ಅವಕಾಶವೆಲ್ಲಿದೆ?
19فَاعْلَمْ أَنَّهُ لَا إِلَٰهَ إِلَّا اللَّهُ وَاسْتَغْفِرْ لِذَنبِكَ وَلِلْمُؤْمِنِينَ وَالْمُؤْمِنَاتِ ۗ وَاللَّهُ يَعْلَمُ مُتَقَلَّبَكُمْ وَمَثْوَاكُمْ
ಓ ಪೈಗಂಬರರೇ ಖಂಡಿತವಾಗಿಯು ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ನಿಮ್ಮ ಪರವಾಗಿ ಮತ್ತು ಸತ್ಯವಿಶ್ವಾಸಿ-ವಿಶ್ವಾಸಿನಿಗಳ ಪರವಾಗಿಯು ಕ್ಷಮೆಯನ್ನು ಬೇಡಿರಿ. ನಿಮ್ಮ ಚಟುವಟಿಕೆಗಳನ್ನು ಮತ್ತು ನಿಮ್ಮ ತಂಗುದಾಣವನ್ನು ಅಲ್ಲಾಹನು ಬಲ್ಲನು.
ಮುಹಮ್ಮದ್ಕುರಾನ್ ಸೂಚಿ
38ಆಯತ್
MedinanRevelation
17ಆಯತ್

ಅನುವಾದ — ಮುಹಮ್ಮದ್ 17

ಸೂರಾ ಮುಹಮ್ಮದ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.

ಸೂರಾ ಆಯತ್ 17/38 — ಸೂರಾ ಮುಹಮ್ಮದ್ محمد (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮುಹಮ್ಮದ್ ಆಲಿಸಿ, ಸೂರಾ ಮುಹಮ್ಮದ್ ಅನುವಾದ, ಸೂರಾ ಮುಹಮ್ಮದ್ mp3, ಸೂರಾ ಮುಹಮ್ಮದ್ pdf. ಆಯತ್ 15–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers