ಸೂರಾ ಹೂದ್ ಅರೇಬಿಕ್ ಮತ್ತು ಕನ್ನಡ
ಸೂರಾ ಹೂದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್ನ ಅರ್ಥ. (123 ಆಯತ್ — مكية). ಹೂದ್ ಆಲಿಸಿ, ಹೂದ್ ಅನುವಾದ, ಹೂದ್ mp3, ಹೂದ್ pdf.ಸೂರಾ ಹೂದ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
الر ۚ كِتَابٌ أُحْكِمَتْ آيَاتُهُ ثُمَّ فُصِّلَتْ مِن لَّدُنْ حَكِيمٍ خَبِيرٍ ١
📖 ಅನುವಾದ
ಆಯತ್ 1
ಅಲಿಫ್ ಲಾಮ್ ರಾ, ಇದೊಂದು ಉನ್ನತವಾದಂತಹ ಗ್ರಂಥ, ಇದರ ಸೂಕ್ತಿಗಳಲ್ಲಿ ಯುಕ್ತಿಯನ್ನು ತುಂಬಲಾಗಿದೆ ಅನಂತರ ಇವು ಸುಜ್ಞಾನಿಯು ಯುಕ್ತಿ ಪೂರ್ಣನು ಆದ ಅಲ್ಲಾಹನ ಕಡೆಯಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿವೆ.
أَلَّا تَعْبُدُوا إِلَّا اللَّهَ ۚ إِنَّنِي لَكُم مِّنْهُ نَذِيرٌ وَبَشِيرٌ ٢
📖 ಅನುವಾದ
ಆಯತ್ 2
ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ. ನಿಶ್ಚಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಮುನ್ನೆಚ್ಚರಿಕೆ ನೀಡುವವನೂ ಶುಭವಾರ್ತೆ ಕೊಡುವವನು ಆಗಿದ್ದೇನೆ.
وَأَنِ اسْتَغْفِرُوا رَبَّكُمْ ثُمَّ تُوبُوا إِلَيْهِ يُمَتِّعْكُم مَّتَاعًا حَسَنًا إِلَىٰ أَجَلٍ مُّسَمًّى وَيُؤْتِ كُلَّ ذِي فَضْلٍ فَضْلَهُ ۖ وَإِن تَوَلَّوْا فَإِنِّي أَخَافُ عَلَيْكُمْ عَذَابَ يَوْمٍ كَبِيرٍ ٣
📖 ಅನುವಾದ
ಆಯತ್ 3
ನೀವು ನಿಮ್ಮ ಪ್ರಭುವಿನಿಂದ ನಿಮ್ಮ ಪಾಪಗಳ ಕ್ಷಮೆಯಾಚಿಸಿರಿ ಅನಂತರ ಪಶ್ಚಾತ್ತಾಪ ಪಟ್ಟು ಅವನೆಡೆಗೆ ಮರಳಿರಿ. ಅವನು ನಿಮಗೆ ನಿರ್ದಿಷ್ಟ ಅವಧಿಯವರೆಗೆ ಉತ್ತಮ ಜೀವನ ಅನುಕೂಲತೆಯನ್ನು ದಯಪಾಲಿಸುವನು ಮತ್ತು ಪ್ರತಿಯೊಬ್ಬ ಅಧಿಕ ಕರ್ಮಗಳುಳ್ಳವನಿಗೆ ಅವನು ಪ್ರತಿಫಲವನ್ನು ನೀಡುವನು. ಇನ್ನು ನೀವು ವಿಮುಖರಾದರೆ ನನಗೆ ನಿಮ್ಮ ಮೇಲೆ ಒಂದು ಮಹಾ ದಿನದ ಯಾತನೆಯ ಭಯವಿದೆ.
إِلَى اللَّهِ مَرْجِعُكُمْ ۖ وَهُوَ عَلَىٰ كُلِّ شَيْءٍ قَدِيرٌ ٤
📖 ಅನುವಾದ
ಆಯತ್ 4
ನಿಮಗೆ ಅಲ್ಲಾಹನೆಡೆಗೇ ಮರಳಬೇಕಾಗಿದೆ ಮತ್ತು ಅವನು ಸರ್ವ ವಸ್ತುಗಳ ಮೇಲೆ ಸಾಮರ್ಥ್ಯ ಉಳ್ಳವನಾಗಿದ್ದಾನೆ.
أَلَا إِنَّهُمْ يَثْنُونَ صُدُورَهُمْ لِيَسْتَخْفُوا مِنْهُ ۚ أَلَا حِينَ يَسْتَغْشُونَ ثِيَابَهُمْ يَعْلَمُ مَا يُسِرُّونَ وَمَا يُعْلِنُونَ ۚ إِنَّهُ عَلِيمٌ بِذَاتِ الصُّدُورِ ٥
📖 ಅನುವಾದ
ಆಯತ್ 5
ಎಚ್ಚರಿಕೆ ನಿಜವಾಗಿಯೂ ಅವರು ತಮ್ಮ ವಿದ್ವೇಷ ಹಾಗೂ ಸತ್ಯ ನಿಷೇಧವನ್ನು(ಅಲ್ಲಾಹನಿಂದ) ಮುಚ್ಚಿಡಲೆಂದು ತಮ್ಮ ಎದೆಗಳನ್ನು ಮುದುಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ! ಅವರು ತಮ್ಮ ಉಡುಪುಗಳಿಂದ ತಮ್ಮನ್ನು ಮುಚ್ಚಿಕೊಳ್ಳುವಾಗಲೂ ಅಲ್ಲಾಹನು ಅವರು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನೂ ಅರಿಯುತ್ತಾನೆ. ಖಂಡಿತವಾಗಿಯೂ ಅವನು ಹೃದಯಾಂತರಾಳದಲ್ಲಿರುವುದನ್ನು ಚೆನ್ನಾಗಿ ಅರಿಯುತ್ತಾನೆ.
۞ وَمَا مِن دَابَّةٍ فِي الْأَرْضِ إِلَّا عَلَى اللَّهِ رِزْقُهَا وَيَعْلَمُ مُسْتَقَرَّهَا وَمُسْتَوْدَعَهَا ۚ كُلٌّ فِي كِتَابٍ مُّبِينٍ ٦
📖 ಅನುವಾದ
ಆಯತ್ 6
ಭೂಮಿಯಲ್ಲಿ ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜೀವನಾಧಾರವು ಅಲ್ಲಾಹನ ಹೊಣೆಯಲ್ಲಿದೆ ಮತ್ತು ಅವನು ಅವುಗಳ ಇಹದ ತಾತ್ಕಾಲಿಕ ಮತ್ತು ಪರದ ತಂಗುದಾಣವನ್ನು ಅರಿಯುತ್ತಾನೆ. ಸಕಲವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಟ್ಟಿವೆ.
وَهُوَ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ وَكَانَ عَرْشُهُ عَلَى الْمَاءِ لِيَبْلُوَكُمْ أَيُّكُمْ أَحْسَنُ عَمَلًا ۗ وَلَئِن قُلْتَ إِنَّكُم مَّبْعُوثُونَ مِن بَعْدِ الْمَوْتِ لَيَقُولَنَّ الَّذِينَ كَفَرُوا إِنْ هَٰذَا إِلَّا سِحْرٌ مُّبِينٌ ٧
📖 ಅನುವಾದ
ಆಯತ್ 7
ಅವನೇ ಆಕಾಶಗಳನ್ನು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ಅವನ ಸಿಂಹಾಸನವು ಜಲದ ಮೇಲಿತ್ತು, ಇದು ನಿಮ್ಮ ಪೈಕಿ ಅತ್ಯುತ್ತಮ ಕರ್ಮಗಳನ್ನು ಎಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿದೆ, ನೀವು ಮರಣಾನಂತರ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದರೆ ಖಂಡಿತವಾಗಿಯೂ ಇದು ಸ್ಪಷ್ಟ ಜಾದುವೇ ಆಗಿದೆ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
وَلَئِنْ أَخَّرْنَا عَنْهُمُ الْعَذَابَ إِلَىٰ أُمَّةٍ مَّعْدُودَةٍ لَّيَقُولُنَّ مَا يَحْبِسُهُ ۗ أَلَا يَوْمَ يَأْتِيهِمْ لَيْسَ مَصْرُوفًا عَنْهُمْ وَحَاقَ بِهِم مَّا كَانُوا بِهِ يَسْتَهْزِئُونَ ٨
📖 ಅನುವಾದ
ಆಯತ್ 8
ಒಂದು ನಿಶ್ಚಿತ ಅವಧಿಯವರೆಗೆ ಅವರಿಂದ ಯಾತನೆಯನ್ನು ನಾವು ತಡೆದು ಇರಿಸಿದಾಗ ಪರಿಹಾಸ್ಯವಾಗಿ ಯಾವ ವಸ್ತುವೂ ಅದನ್ನು ತಡೆ ಹಿಡಿಯಿತು ? ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಜಾಗ್ರತೆ! ಅದು ಬಂದೆರಗುವ ದಿನದಂದು, ಯಾರಿಂದಲೂ ಅದನ್ನು ಸರಿಸಲಾಗದು, ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಕೊಳ್ಳುವುದು.
وَلَئِنْ أَذَقْنَا الْإِنسَانَ مِنَّا رَحْمَةً ثُمَّ نَزَعْنَاهَا مِنْهُ إِنَّهُ لَيَئُوسٌ كَفُورٌ ٩
📖 ಅನುವಾದ
ಆಯತ್ 9
ನಾವು ಮನುಷ್ಯನಿಗೆ ನಮ್ಮಿಂದ ಯಾವುದಾದರೂ ಕೃಪೆಯ ಸವಿಯನ್ನುಣಿಸಿ ಅನಂತರ ಅದನ್ನು ಅವನಿಂದ ಕಸಿದುಕೊಂಡರೆ ಖಂಡಿತವಾಗಿಯೂ ಅವನು ನಿರಾಶನು ಕೃತಘ್ನನೂ ಆಗಿಬಿಡುತ್ತಾನೆ.
وَلَئِنْ أَذَقْنَاهُ نَعْمَاءَ بَعْدَ ضَرَّاءَ مَسَّتْهُ لَيَقُولَنَّ ذَهَبَ السَّيِّئَاتُ عَنِّي ۚ إِنَّهُ لَفَرِحٌ فَخُورٌ ١٠
📖 ಅನುವಾದ
ಆಯತ್ 10
ಮತ್ತು ಅವನಿಗೆ ಬಾಧಿಸಿದ ಸಂಕಷ್ಟದ ನಂತರ ನಾವು ಅವನಿಗೆ ಯಾವುದಾದರೂ ಸುಖಾನುಗ್ರಹದ ಸವಿಯನ್ನುಣಿಸಿದರೆ ನನ್ನಿಂದ ಕೆಡುಕುಗಳು ತೊಲಗಿದವು ಎಂದು ಅವನು ಹೇಳತೊಡಗುತ್ತಾನೆ. ನಿಜವಾಗಿಯೂ ಅವನು ಹರ್ಷಿತನೂ, ಅಹಂಕಾರಿಯೂ ಆಗಿಬಿಡುತ್ತಾನೆ.
إِلَّا الَّذِينَ صَبَرُوا وَعَمِلُوا الصَّالِحَاتِ أُولَٰئِكَ لَهُم مَّغْفِرَةٌ وَأَجْرٌ كَبِيرٌ ١١
📖 ಅನುವಾದ
ಆಯತ್ 11
ಆದರೆ ಸಹನೆ ವಹಿಸಿ ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರಿಗೆ ಕ್ಷಮೆ ಮತ್ತು ಅತ್ಯುತ್ತಮ ಪ್ರತಿಫಲವಿದೆ.
فَلَعَلَّكَ تَارِكٌ بَعْضَ مَا يُوحَىٰ إِلَيْكَ وَضَائِقٌ بِهِ صَدْرُكَ أَن يَقُولُوا لَوْلَا أُنزِلَ عَلَيْهِ كَنزٌ أَوْ جَاءَ مَعَهُ مَلَكٌ ۚ إِنَّمَا أَنتَ نَذِيرٌ ۚ وَاللَّهُ عَلَىٰ كُلِّ شَيْءٍ وَكِيلٌ ١٢
📖 ಅನುವಾದ
ಆಯತ್ 12
ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು.
أَمْ يَقُولُونَ افْتَرَاهُ ۖ قُلْ فَأْتُوا بِعَشْرِ سُوَرٍ مِّثْلِهِ مُفْتَرَيَاتٍ وَادْعُوا مَنِ اسْتَطَعْتُم مِّن دُونِ اللَّهِ إِن كُنتُمْ صَادِقِينَ ١٣
📖 ಅನುವಾದ
ಆಯತ್ 13
ಅಥವಾ ಈ ಸತ್ಯನಿಷೇಧಿಗಳು ಕುರ್ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
فَإِلَّمْ يَسْتَجِيبُوا لَكُمْ فَاعْلَمُوا أَنَّمَا أُنزِلَ بِعِلْمِ اللَّهِ وَأَن لَّا إِلَٰهَ إِلَّا هُوَ ۖ فَهَلْ أَنتُم مُّسْلِمُونَ ١٤
📖 ಅನುವಾದ
ಆಯತ್ 14
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
مَن كَانَ يُرِيدُ الْحَيَاةَ الدُّنْيَا وَزِينَتَهَا نُوَفِّ إِلَيْهِمْ أَعْمَالَهُمْ فِيهَا وَهُمْ فِيهَا لَا يُبْخَسُونَ ١٥
📖 ಅನುವಾದ
ಆಯತ್ 15
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
أُولَٰئِكَ الَّذِينَ لَيْسَ لَهُمْ فِي الْآخِرَةِ إِلَّا النَّارُ ۖ وَحَبِطَ مَا صَنَعُوا فِيهَا وَبَاطِلٌ مَّا كَانُوا يَعْمَلُونَ ١٦
📖 ಅನುವಾದ
ಆಯತ್ 16
ಇಂಥವರಿಗೆ ಪರಲೋಕದಲ್ಲಿ ನರಕವಲ್ಲದೆ ಇನ್ನೇನೂ ಇಲ್ಲ . ಇವರು (ಸತ್ಯನಿಷೇಧಿಗಳು) ಇಲ್ಲಿ ಮಾಡಿದ್ದೆಲ್ಲವೂ ವ್ಯರ್ಥವಾಗಿಬಿಟ್ಟಿತ್ತು. ಮತ್ತು ಅವರ ಕರ್ಮಗಳೆಲ್ಲವೂ ನಿರರ್ಥಕವಾದವು.
أَفَمَن كَانَ عَلَىٰ بَيِّنَةٍ مِّن رَّبِّهِ وَيَتْلُوهُ شَاهِدٌ مِّنْهُ وَمِن قَبْلِهِ كِتَابُ مُوسَىٰ إِمَامًا وَرَحْمَةً ۚ أُولَٰئِكَ يُؤْمِنُونَ بِهِ ۚ وَمَن يَكْفُرْ بِهِ مِنَ الْأَحْزَابِ فَالنَّارُ مَوْعِدُهُ ۚ فَلَا تَكُ فِي مِرْيَةٍ مِّنْهُ ۚ إِنَّهُ الْحَقُّ مِن رَّبِّكَ وَلَٰكِنَّ أَكْثَرَ النَّاسِ لَا يُؤْمِنُونَ ١٧
📖 ಅನುವಾದ
ಆಯತ್ 17
ಒಬ್ಬ ವ್ಯಕ್ತಿಯು ತನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರದೊಂದಿಗೆ ಇದ್ದು ಅವನ ಜೊತೆಗೆ ಅಲ್ಲಾಹನ ಕಡೆಯ ಒಂದು ಸಾಕ್ಷಿಯೂ ಬಂದಿದ್ದು ಮತ್ತು ಇದಕ್ಕೆ ಮುಂಚೆ ಮೂಸಾರವರ ಗ್ರಂಥ ಮಾರ್ಗದರ್ಶಕವಾಗಿಯೂ, ಕೃಪೆಯಾಗಿಯೂ ಆಗಿರುವಾಗ (ಇಂತಹ ವ್ಯಕ್ತಿ ಮಿಥ್ಯವಾದಿಯಾಗಲು ಸಾಧ್ಯವೇ ?) ಇವರೇ ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಆ ಗುಂಪುಗಳ ಪೈಕಿ ಇದರಲ್ಲಿ ನಿಷೇಧ ತಾಳುವ ಯಾರೇ ಆಗಲಿ ಅವರ ಅಂತಿಮ ವಾಗ್ದತ್ತ ನೆಲೆಯು ನರಕವಾಗಿರುತ್ತದೆ. ಇನ್ನು ನೀವು ಇದರಲ್ಲಿ (ಕುರ್ಆನಿನಲ್ಲಿ) ಯಾವುದೇ ಸಂದೇಹಕ್ಕೆ ಒಳಗಾಗದಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
وَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا ۚ أُولَٰئِكَ يُعْرَضُونَ عَلَىٰ رَبِّهِمْ وَيَقُولُ الْأَشْهَادُ هَٰؤُلَاءِ الَّذِينَ كَذَبُوا عَلَىٰ رَبِّهِمْ ۚ أَلَا لَعْنَةُ اللَّهِ عَلَى الظَّالِمِينَ ١٨
📖 ಅನುವಾದ
ಆಯತ್ 18
ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರು ತಮ್ಮ ಪ್ರಭುವಿನ ಮುಂದೆ ಹಾಜರುಪಡಿಸಲಾಗುವರು ಮತ್ತು ಸಾಕ್ಷಿಗಳು (ದೂತರು) ಹೇಳುವರು, ಇವರೇ ತಮ್ಮ ಪ್ರಭುವಿನ ಮೇಲೆ ಸುಳ್ಳು ಹೇಳಿದವರು. ಜಾಗ್ರತೆ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.
الَّذِينَ يَصُدُّونَ عَن سَبِيلِ اللَّهِ وَيَبْغُونَهَا عِوَجًا وَهُم بِالْآخِرَةِ هُمْ كَافِرُونَ ١٩
📖 ಅನುವಾದ
ಆಯತ್ 19
ಇಂತಹವರೇ ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಾರೆ. ಇವರೇ ಪರಲೋಕದ ನಿಷೇಧಿಗಳಾಗಿದ್ದಾರೆ.
أُولَٰئِكَ لَمْ يَكُونُوا مُعْجِزِينَ فِي الْأَرْضِ وَمَا كَانَ لَهُم مِّن دُونِ اللَّهِ مِنْ أَوْلِيَاءَ ۘ يُضَاعَفُ لَهُمُ الْعَذَابُ ۚ مَا كَانُوا يَسْتَطِيعُونَ السَّمْعَ وَمَا كَانُوا يُبْصِرُونَ ٢٠
📖 ಅನುವಾದ
ಆಯತ್ 20
ಅವರು ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾರರು ಮತ್ತು ಅಲ್ಲಾಹನ ಹೊರತು ಅವರಿಗೆ ರಕ್ಷಕ ಮಿತ್ರರೂ ಇರಲಾರರು. ಅವರಿಗೆ ಶಿಕ್ಷೆಯು ಇಮ್ಮಡಿಗೊಳಿಸಲಾಗುವುದು ಅವರು ಸತ್ಯವನ್ನು ಕೇಳುವ ಮತ್ತು ನೋಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ.
أُولَٰئِكَ الَّذِينَ خَسِرُوا أَنفُسَهُمْ وَضَلَّ عَنْهُم مَّا كَانُوا يَفْتَرُونَ ٢١
📖 ಅನುವಾದ
ಆಯತ್ 21
ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿಕೊಂಡವರು ಅವರೇ ಆಗಿದ್ದಾರೆ, ಮತ್ತು ಅವರು ಸುಳ್ಳು ಸೃಷ್ಟಿಸಿದ್ದ (ಆರಾಧ್ಯರೂ) ಎಲ್ಲವೂ ಅವರಿಂದ ಕಣ್ಮರೆಯಾಗಿ ಬಿಟ್ಟಿತ್ತು.
لَا جَرَمَ أَنَّهُمْ فِي الْآخِرَةِ هُمُ الْأَخْسَرُونَ ٢٢
📖 ಅನುವಾದ
ಆಯತ್ 22
ನಿಸ್ಸಂಶಯವಾಗಿಯೂ ಅವರೇ ಪರಲೋಕದಲ್ಲಿ ಅತ್ಯಂತ ನಷ್ಟ ಹೊಂದಿದವರಾಗಿರುತ್ತಾರೆ.
إِنَّ الَّذِينَ آمَنُوا وَعَمِلُوا الصَّالِحَاتِ وَأَخْبَتُوا إِلَىٰ رَبِّهِمْ أُولَٰئِكَ أَصْحَابُ الْجَنَّةِ ۖ هُمْ فِيهَا خَالِدُونَ ٢٣
📖 ಅನುವಾದ
ಆಯತ್ 23
ನಿಶ್ಚಯವಾಗಿಯೂ ಯಾರು ಸತ್ಯ ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು ತಮ್ಮ ಪ್ರಭುವಿನೆಡೆಗೆ ಧೈನ್ಯರಾಗುತ್ತಾರೆ ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿರುವರು.
۞ مَثَلُ الْفَرِيقَيْنِ كَالْأَعْمَىٰ وَالْأَصَمِّ وَالْبَصِيرِ وَالسَّمِيعِ ۚ هَلْ يَسْتَوِيَانِ مَثَلًا ۚ أَفَلَا تَذَكَّرُونَ ٢٤
📖 ಅನುವಾದ
ಆಯತ್ 24
ಸತ್ಯವಿಶ್ವಾಸಿ ಹಾಗೂ ಸತ್ಯನಿಷೇಧಿ ಎರಡು ಬಣಗಳ ಉಪಮೆಯು ಅಂಧನೂ, ಕಿವುಡನೂ ಆದ ಒಬ್ಬನಂತಿದೆ ಮತ್ತು ನೋಡುವವನೂ ಕೇಳುವವನೂ ಆದ ಇನ್ನೊಬ್ಬನಂತಿದೆ. ಈ ಉಪಮೆಯಲ್ಲಿ ಇಬ್ಬರೂ ಸರಿಸಮಾನರೇ? ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ ?
وَلَقَدْ أَرْسَلْنَا نُوحًا إِلَىٰ قَوْمِهِ إِنِّي لَكُمْ نَذِيرٌ مُّبِينٌ ٢٥
📖 ಅನುವಾದ
ಆಯತ್ 25
ನಿಶ್ಚಯವಾಗಿಯೂ ನಾವು ನೂಹ್ರವರನ್ನು ಅವರ ಜನಾಂಗದೆಡೆಗೆ ಸಂದೇಶವಾಹಕರಾಗಿ ಕಳುಹಿಸಿದೆವು. ನೂಹ್ರವರು ಹೇಳಿದರು: ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
أَن لَّا تَعْبُدُوا إِلَّا اللَّهَ ۖ إِنِّي أَخَافُ عَلَيْكُمْ عَذَابَ يَوْمٍ أَلِيمٍ ٢٦
📖 ಅನುವಾದ
ಆಯತ್ 26
ನೀವು ಅಲ್ಲಾಹನ ಹೊರತು ಇನ್ನಾರ ಆರಾಧನೆ ಮಾಡಬೇಡಿರಿ. ನಾನಂತೂ ನಿಮ್ಮ ಮೇಲೆ ಒಂದು ವೇದನಾಜನಕ ದಿನದ ಶಿಕ್ಷೆಯ ಬಗ್ಗೆ ಭಯಪಡುತ್ತೇನೆ.
فَقَالَ الْمَلَأُ الَّذِينَ كَفَرُوا مِن قَوْمِهِ مَا نَرَاكَ إِلَّا بَشَرًا مِّثْلَنَا وَمَا نَرَاكَ اتَّبَعَكَ إِلَّا الَّذِينَ هُمْ أَرَاذِلُنَا بَادِيَ الرَّأْيِ وَمَا نَرَىٰ لَكُمْ عَلَيْنَا مِن فَضْلٍ بَلْ نَظُنُّكُمْ كَاذِبِينَ ٢٧
📖 ಅನುವಾದ
ಆಯತ್ 27
ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ಕಾಣುತ್ತೇವೆ ಮತ್ತು ನಮ್ಮ ಜನಾಂಗದ ಕೀಳು ವರ್ಗದವರು ಮುಂದಾಲೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದಾಗಿ ನಾವು ಕಾಣುತ್ತೇವೆ. ನಾವು ನಿಮ್ಮಲ್ಲಿ ನಮಗಿಂತ ಮಿಗಿಲಾದ ಯಾವ ಶ್ರೇಷ್ಟತೆಯನ್ನು ಕಾಣುತ್ತಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.
قَالَ يَا قَوْمِ أَرَأَيْتُمْ إِن كُنتُ عَلَىٰ بَيِّنَةٍ مِّن رَّبِّي وَآتَانِي رَحْمَةً مِّنْ عِندِهِ فَعُمِّيَتْ عَلَيْكُمْ أَنُلْزِمُكُمُوهَا وَأَنتُمْ لَهَا كَارِهُونَ ٢٨
📖 ಅನುವಾದ
ಆಯತ್ 28
ನೂಹ್ರವರು ಹೇಳಿದರು : ಓ ನನ್ನ ಜನಾಂಗದವರೇ ಸ್ವಲ್ಪ ಯೋಚಿಸಿರಿ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣವನ್ನು ಹೊಂದಿದ್ದು ಮತ್ತು ಅವನು ತನ್ನ ಬಳಿಯ ಕೃಪೆಯನ್ನು(ಪ್ರವಾದಿತ್ವ) ನೀಡಿರುವನು. ಅದು ನಿಮಗೆ ಪರೋಕ್ಷವಾಗಿದೆ. ನೀವು ಅದನ್ನು ಇಷ್ಟಪಡದಿದ್ದರೂ ನಾನದನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಬಿಡುತ್ತೇನೆಯೇ ?
وَيَا قَوْمِ لَا أَسْأَلُكُمْ عَلَيْهِ مَالًا ۖ إِنْ أَجْرِيَ إِلَّا عَلَى اللَّهِ ۚ وَمَا أَنَا بِطَارِدِ الَّذِينَ آمَنُوا ۚ إِنَّهُم مُّلَاقُو رَبِّهِمْ وَلَٰكِنِّي أَرَاكُمْ قَوْمًا تَجْهَلُونَ ٢٩
📖 ಅನುವಾದ
ಆಯತ್ 29
ಓ ನನ್ನ ಜನಾಂಗದವರೇ ನಾನು ಇದಕ್ಕಾಗಿ ನಿಮ್ಮಿಂದ ಧನವನ್ನೇನೂ ಬೇಡುತ್ತಿಲ್ಲ, ನನ್ನ ಪ್ರತಿಫಲವಂತೂ ಕೇವಲ ಅಲ್ಲಾಹನ ಬಳಿಯಲ್ಲಿದೆ ಮತ್ತು ನಾನು ಸತ್ಯ ವಿಶ್ವಾಸಿಗಳನ್ನು ನನ್ನ ಬಳಿಯಿಂದ ದೂರಕ್ಕಟ್ಟುವುದೂ ಇಲ್ಲ. ಅವರಿಗೆ ತಮ್ಮ ಪ್ರಭುವನ್ನು ಭೇಟಿಯಾಗಲಿಕ್ಕಿದೆ, ಆದರೆ ನಾನು ನಿಮ್ಮನ್ನು ಅವಿವೇಕ ತೋರುತ್ತಿರುವುದಾಗಿ ಕಾಣುತ್ತಿದ್ದೇನೆ.
وَيَا قَوْمِ مَن يَنصُرُنِي مِنَ اللَّهِ إِن طَرَدتُّهُمْ ۚ أَفَلَا تَذَكَّرُونَ ٣٠
📖 ಅನುವಾದ
ಆಯತ್ 30
ಓ ನನ್ನ ಜನಾಂಗದವರೇ ನಾನವರನ್ನು (ಸತ್ಯವಿಶ್ವಾಸಿಗಳನ್ನು) ನನ್ನ ಬಳಿಯಿಂದ ದೂರಕ್ಕಟ್ಟಿದರೆ ಅಲ್ಲಾಹನ ಎದುರು ನನಗೆ ಸಹಾಯ ಮಾಡುವವರಾರು ? ಹಾಗಿದ್ದೂ ನೀವು ಯೋಚಿಸುವುದಿಲ್ಲವೇ?
وَلَا أَقُولُ لَكُمْ عِندِي خَزَائِنُ اللَّهِ وَلَا أَعْلَمُ الْغَيْبَ وَلَا أَقُولُ إِنِّي مَلَكٌ وَلَا أَقُولُ لِلَّذِينَ تَزْدَرِي أَعْيُنُكُمْ لَن يُؤْتِيَهُمُ اللَّهُ خَيْرًا ۖ اللَّهُ أَعْلَمُ بِمَا فِي أَنفُسِهِمْ ۖ إِنِّي إِذًا لَّمِنَ الظَّالِمِينَ ٣١
📖 ಅನುವಾದ
ಆಯತ್ 31
ನಾನು ನನ್ನ ಬಳಿ ಅಲ್ಲಾಹನ ಭಂಡಾರಗಳಿವೆಯೆAದು, ನಾನು ಅಗೋಚರ ಜ್ಞಾನವನ್ನು ಹೊಂದಿದ್ದೇನೆAದು ಹೇಳುತ್ತಿಲ್ಲ. ನಾನೊಬ್ಬ ದೇವಚರನೆಂದೂ ಹೇಳುತ್ತಿಲ್ಲ, ಮತ್ತು ನಿಮ್ಮ ದೃಷ್ಟಿಗೆ ಕೀಳಾಗಿ ಕಾಣುತ್ತಿರುವವರಿಗೆ ಅಲ್ಲಾಹನು ಯಾವುದೇ ಒಳಿತನ್ನು ನೀಡಲಾರೆನೆಂದೂ ನಾನು ಹೇಳುತ್ತಿಲ್ಲ. ಅವರ ಮನಸ್ಸಿನಲ್ಲಿರುವುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು ನಾನೇನಾದರೂ ಅಂತಹ ಮಾತನ್ನು ಹೇಳಿದರೆ ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಾಗುವೆನು.
قَالُوا يَا نُوحُ قَدْ جَادَلْتَنَا فَأَكْثَرْتَ جِدَالَنَا فَأْتِنَا بِمَا تَعِدُنَا إِن كُنتَ مِنَ الصَّادِقِينَ ٣٢
📖 ಅನುವಾದ
ಆಯತ್ 32
ಅವರ ಜನಾಂಗದವರು ಹೇಳಿದರು : " ಓ ನೂಹ್ ನೀನು ನಮ್ಮೊಂದಿಗೆ ವಾಗ್ವಾದವನ್ನು ಮಾಡಿರುವೆ ಮತ್ತು ತುಂಬಾ ವಾಗ್ವಾದ ಮಾಡಿರುವೆ. ಇನ್ನು ನಮಗೆ ಹೆದರಿಸುತ್ತಿರುವ ಯಾತನೆಯನ್ನು ನಮ್ಮಲ್ಲಿಗೆ ತಾ, ನೀನು ಸತ್ಯವಂತರಲ್ಲಾಗಿದ್ದರೆ,
قَالَ إِنَّمَا يَأْتِيكُم بِهِ اللَّهُ إِن شَاءَ وَمَا أَنتُم بِمُعْجِزِينَ ٣٣
📖 ಅನುವಾದ
ಆಯತ್ 33
ನೂಹ್ರವರು ಉತ್ತರಿಸಿದರು : ಅಲ್ಲಾಹನಿಚ್ಛಿಸಿದರೆ ಅದನ್ನು ನಿಮ್ಮ ಮೇಲೆ ಎರಗಿಸುವನು. ಮತ್ತು ನೀವು ಅವನನ್ನು ಸೋಲಿಸಲಾರಿರಿ.
وَلَا يَنفَعُكُمْ نُصْحِي إِنْ أَرَدتُّ أَنْ أَنصَحَ لَكُمْ إِن كَانَ اللَّهُ يُرِيدُ أَن يُغْوِيَكُمْ ۚ هُوَ رَبُّكُمْ وَإِلَيْهِ تُرْجَعُونَ ٣٤
📖 ಅನುವಾದ
ಆಯತ್ 34
ಅಲ್ಲಾಹನು ನಿಮ್ಮ ಸತ್ಯ ನಿಷೇಧದಿಂದಾಗಿ ದಾರಿ ತಪ್ಪಿಸಲಿಚ್ಛಿಸಿರುವಾಗ ನಾನು ನಿಮ್ಮ ಹಿತಚಿಂತನೆ ಮಾಡಿದರು ನಿಮಗೆ ನನ್ನ ಹಿತೋಪದೇಶವು ಒಂದಿಷ್ಟೂ ಫಲ ನೀಡದು, ಅವನೇ ನಿಮ್ಮ ಪ್ರಭು ಆಗಿದ್ದಾನೆ ಮತ್ತು ಅವನೆಡೆಗೆ ಮರಳಿಸಲಾಗುವಿರಿ.
أَمْ يَقُولُونَ افْتَرَاهُ ۖ قُلْ إِنِ افْتَرَيْتُهُ فَعَلَيَّ إِجْرَامِي وَأَنَا بَرِيءٌ مِّمَّا تُجْرِمُونَ ٣٥
📖 ಅನುವಾದ
ಆಯತ್ 35
ಇದನ್ನು ಸ್ವಯಂ ಮುಹಮ್ಮದ್ರವರೇ ರಚಿಸಿದ್ದಾರೆಂದು ಅವರು ಆರೋಪಿಸುತ್ತಿದ್ದಾರೆಯೇ ? ಹೇಳಿರಿ ನಾನದನ್ನು ರಚಿಸಿದ್ದಾದರೆ ನನ್ನ ಅಪರಾಧವು ನನ್ನ ಮೇಲಿರುತ್ತದೆ, ಮತ್ತು ನೀವು ಎಸಗುತ್ತಿರುವ ಅಪರಾಧಗಳ ವಿಚಾರದಲ್ಲಿ ನಾನು ಹೊಣೆ ಮುಕ್ತನಾಗಿದ್ದೇನೆ.
وَأُوحِيَ إِلَىٰ نُوحٍ أَنَّهُ لَن يُؤْمِنَ مِن قَوْمِكَ إِلَّا مَن قَدْ آمَنَ فَلَا تَبْتَئِسْ بِمَا كَانُوا يَفْعَلُونَ ٣٦
📖 ಅನುವಾದ
ಆಯತ್ 36
ಮತ್ತು ನೂಹ್ರೆಡೆಗೆ ದಿವ್ಯವಾಣಿ ಮಾಡಲಾಯಿತು; ನಿಮ್ಮ ಜನಾಂಗದಿAದ ಈಗಾಗಲೇ ವಿಶ್ವಾಸ ಸ್ವೀಕರಿಸಿದವರ ಹೊರತು ಇನ್ನಾರೂ ಎಂದಿಗೂ ವಿಶ್ವಾಸವಿರಿಸುವುದಿಲ್ಲ. ಆದ್ದರಿಂದ ನೀವು ಅವರ ಕರ್ಮಗಳ ಕುರಿತು ದುಃಖಿಸಬೇಡಿ.
وَاصْنَعِ الْفُلْكَ بِأَعْيُنِنَا وَوَحْيِنَا وَلَا تُخَاطِبْنِي فِي الَّذِينَ ظَلَمُوا ۚ إِنَّهُم مُّغْرَقُونَ ٣٧
📖 ಅನುವಾದ
ಆಯತ್ 37
ಮತ್ತು ನಮ್ಮ ಕಣ್ಣೆದುರು ನಮ್ಮ ಮಾರ್ಗದರ್ಶನದ ಪ್ರಕಾರ ನೀವು ಹಡಗೊಂದನ್ನು ನಿರ್ಮಿಸಿರಿ. ಅಕ್ರಮವೆಸಗಿದವರ ಪರವಾಗಿ ನನ್ನೊಂದಿಗೆ ಮಾತನಾಡಬೇಡಿರಿ ಖಂಡಿತವಾಗಿಯೂ ಅವರು ಮುಳುಗಿಸಲ್ಪಡುವರು.
وَيَصْنَعُ الْفُلْكَ وَكُلَّمَا مَرَّ عَلَيْهِ مَلَأٌ مِّن قَوْمِهِ سَخِرُوا مِنْهُ ۚ قَالَ إِن تَسْخَرُوا مِنَّا فَإِنَّا نَسْخَرُ مِنكُمْ كَمَا تَسْخَرُونَ ٣٨
📖 ಅನುವಾದ
ಆಯತ್ 38
ಮತ್ತು ನೂಹ್ರವರು ಹಡಗನ್ನು ನಿರ್ಮಿಸತೊಡಗಿದರು. ಅವರ ಮುಂದಿನಿAದ ಅವರ ಜನಾಂಗದ ಪ್ರಮುಖರು ಹಾದು ಹೋಗುವಾಗಲೆಲ್ಲ ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ನೂಹ್ರವರು ಹೇಳುತ್ತಿದ್ದರು: ನೀವು ನಮ್ಮ ಅಪಹಾಸ್ಯ ಮಾಡುತ್ತಿದ್ದರೆ ನಾವು ಸಹ, ನೀವು ಅಪಹಾಸ್ಯ ಮಾಡುತ್ತಿದ್ದಂತೆ ನಿಮ್ಮ ಅಪಹಾಸ್ಯ ಮಾಡಲಿದ್ದೇವೆ.
فَسَوْفَ تَعْلَمُونَ مَن يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُّقِيمٌ ٣٩
📖 ಅನುವಾದ
ಆಯತ್ 39
ಅಪಮಾನಕರ ಶಿಕ್ಷೆ ಯಾರಿಗಿದೆ ಎಂದು ಮತ್ತು ಯಾರ ಮೇಲೆ ಶಾಶ್ವತವಾದ ಯಾತನೆಯು ಎರಗಲಿದೆ ಎಂದೂ ಸಧ್ಯವೇ ನಿಮಗೆ ತಿಳಿದುಬರಲಿದೆ.
حَتَّىٰ إِذَا جَاءَ أَمْرُنَا وَفَارَ التَّنُّورُ قُلْنَا احْمِلْ فِيهَا مِن كُلٍّ زَوْجَيْنِ اثْنَيْنِ وَأَهْلَكَ إِلَّا مَن سَبَقَ عَلَيْهِ الْقَوْلُ وَمَنْ آمَنَ ۚ وَمَا آمَنَ مَعَهُ إِلَّا قَلِيلٌ ٤٠
📖 ಅನುವಾದ
ಆಯತ್ 40
ಕೊನೆಗೆ ನಮ್ಮ ಆಜ್ಞೆಯು ಬಂದಿತು ತಂದೂರಿ ಒಲೆಯಿಂದ ನೀರು ಉಕ್ಕಿದಾಗ ನಾವೆಂದೆವು ಹಡಗಿನಲ್ಲಿ ನೀವು ಪ್ರತಿಯೊಂದು ಜೀವಿಗಳಿಂದ ಎರಡು ವರ್ಗಗಳನ್ನು ಹತ್ತಿಸಿಕೊಳ್ಳಿ. ಆದರೆ ಯಾರ ವಿರುದ್ಧ ಮೊದಲೇ ತೀರ್ಮಾನವಾಗಿದೆಯೋ ಅವರ ಹೊರತು, ನಿಮ್ಮ ಕುಟುಂಬದವರನ್ನೂ ಮತ್ತು ಸರ್ವ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿ ಅವರ ಜೊತೆ ವಿಶ್ವಾಸವಿರಿಸಿದವರು ಅತ್ಯಲ್ಪ ಮಂದಿಯೇ ಇದ್ದರು.
۞ وَقَالَ ارْكَبُوا فِيهَا بِسْمِ اللَّهِ مَجْرَاهَا وَمُرْسَاهَا ۚ إِنَّ رَبِّي لَغَفُورٌ رَّحِيمٌ ٤١
📖 ಅನುವಾದ
ಆಯತ್ 41
ನೂಹ್ರವರು ಹೇಳಿದರು : ನೀವೆಲ್ಲರೂ ಆ ಹಡಗಿನಲ್ಲಿ ಕುಳಿತುಕೊಳ್ಳಿರಿ. ಅದರ ಚಲನೆ ಮತ್ತು ನಿಲುಗಡೆ ಅಲ್ಲಾಹನ ನಾಮದಿಂದಲೇ ಆಗಿದೆ. ವಾಸ್ತವದಲ್ಲಿ ನನ್ನ ಪ್ರಭು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
وَهِيَ تَجْرِي بِهِمْ فِي مَوْجٍ كَالْجِبَالِ وَنَادَىٰ نُوحٌ ابْنَهُ وَكَانَ فِي مَعْزِلٍ يَا بُنَيَّ ارْكَب مَّعَنَا وَلَا تَكُن مَّعَ الْكَافِرِينَ ٤٢
📖 ಅನುವಾದ
ಆಯತ್ 42
ಆ ಹಡಗು ಅವರನ್ನು ಹೊತ್ತುಕೊಂಡು ಬೆಟ್ಟಗಳಂತಿರುವ ಅಲೆಗಳಲ್ಲಿ ಸಂಚರಿಸತೊಡಗಿತು. ನೂಹ್ರವರು ಒಂದು ತೀರದಲ್ಲಿದ್ದ ತನ್ನ ಮಗನನ್ನು ಕೂಗಿ ಕರೆದರು. ಓ ನನ್ನ ಪ್ರಿಯ ಮಗನೇ, ನೀನು ನಮ್ಮೊಂದಿಗೆ ಹತ್ತಿಬಿಡು ಹಾಗೂ ಸತ್ಯನಿಷೇಧಿಗಳೊಂದಿಗೆ ಸೇರದಿರು.
قَالَ سَآوِي إِلَىٰ جَبَلٍ يَعْصِمُنِي مِنَ الْمَاءِ ۚ قَالَ لَا عَاصِمَ الْيَوْمَ مِنْ أَمْرِ اللَّهِ إِلَّا مَن رَّحِمَ ۚ وَحَالَ بَيْنَهُمَا الْمَوْجُ فَكَانَ مِنَ الْمُغْرَقِينَ ٤٣
📖 ಅನುವಾದ
ಆಯತ್ 43
ಅವನು ಉತ್ತರಿಸಿದನು ನಾನು ಸದ್ಯದಲ್ಲೆ ಒಂದು ಪರ್ವತದ ಮೇಲೆ ಆಶ್ರಯ ಪಡೆಯುವೆನು. ಅದು ನನ್ನನ್ನು ನೀರಿನಿಂದ ರಕ್ಷಿಸುವುದು. ನೂಹ್ರವರು ಹೇಳಿದರು: ಇಂದು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವನಾರೂ ಇಲ್ಲ. ಅವನು ದಯೆ ತೋರಿದವರ ಹೊರತು. ಅಷ್ಟರಲ್ಲೇ ಅವರಿಬ್ಬರ ನಡುವೆ ಅಲೆಯೊಂದು ಅಡ್ಡವಾಯಿತು. ಅವನು ಮುಳುಗುವವರಲ್ಲಾದನು.
وَقِيلَ يَا أَرْضُ ابْلَعِي مَاءَكِ وَيَا سَمَاءُ أَقْلِعِي وَغِيضَ الْمَاءُ وَقُضِيَ الْأَمْرُ وَاسْتَوَتْ عَلَى الْجُودِيِّ ۖ وَقِيلَ بُعْدًا لِّلْقَوْمِ الظَّالِمِينَ ٤٤
📖 ಅನುವಾದ
ಆಯತ್ 44
ಹೇಳಲಾಯಿತು : ಓ ಭೂಮಿಯೇ ನೀನು ನೀರನ್ನು ಹೀರಿಕೊ, ಓ ಆಕಾಶವೇ ನೀನು ಮಳೆಯನ್ನು ನಿಲ್ಲಿಸು. ನೀರು ಬತ್ತಿತು ಹಾಗೂ ಕಾರ್ಯವನ್ನು ಪೂರ್ಣ ಮಾಡಲಾಯಿತು. ಮತ್ತು ಹಡಗು 'ಜೂದಿ' ಬೆಟ್ಟದ ಮೇಲೆ ತಂಗಿತು. ನಂತರ ಅಕ್ರಮಿಗಳಾದ ಜನರಿಗೆ(ಅಲ್ಲಾಹನ ಕಾರುಣ್ಯದಿಂದ) ವಿದೂರತೆಯಿರಲಿ ಎಂದು ಹೇಳಲಾಯಿತು.
وَنَادَىٰ نُوحٌ رَّبَّهُ فَقَالَ رَبِّ إِنَّ ابْنِي مِنْ أَهْلِي وَإِنَّ وَعْدَكَ الْحَقُّ وَأَنتَ أَحْكَمُ الْحَاكِمِينَ ٤٥
📖 ಅನುವಾದ
ಆಯತ್ 45
ಮತ್ತು ನೂಹ್ರವರು ತನ್ನ ಪ್ರಭುವನ್ನು ಕರೆದು ಪ್ರಾರ್ಥಿಸಿದರು ನನ್ನ ಪ್ರಭುವೇ ನನ್ನ ಮಗನು ನನ್ನ ಕುಟುಂಬದವರಲ್ಲಾಗಿರುವನು ಮತ್ತು ನಿಶ್ಚಯವಾಗಿಯೂ ನಿನ್ನ ವಾಗ್ದಾನವು ಸತ್ಯವಾಗಿದೆ. ನೀನಂತೂ ಸರ್ವ ನ್ಯಾಯಾಧಿಪತಿಗಳಿಗಿಂತ ಉತ್ತಮ ನ್ಯಾಯಾಧಿಪತಿ ಆಗಿರುವೆ.
قَالَ يَا نُوحُ إِنَّهُ لَيْسَ مِنْ أَهْلِكَ ۖ إِنَّهُ عَمَلٌ غَيْرُ صَالِحٍ ۖ فَلَا تَسْأَلْنِ مَا لَيْسَ لَكَ بِهِ عِلْمٌ ۖ إِنِّي أَعِظُكَ أَن تَكُونَ مِنَ الْجَاهِلِينَ ٤٦
📖 ಅನುವಾದ
ಆಯತ್ 46
ಅಲ್ಲಾಹನು ಉತ್ತರಿಸಿದನು : ಓ ನೂಹ್ ನಿಶ್ಚಯವಾಗಿಯೂ ಅವನು ನಿಮ್ಮ ಕುಟುಂಬದವನಲ್ಲ. ಏಕೆಂದರೆ ಅವನ ಕೃತ್ಯವು ಅತ್ಯಂತ ಅಯೋಗ್ಯವಾಗಿದೆ. ಆದ್ದರಿಂದ ನಿಮಗೆ ಅರಿವಿಲ್ಲದಂತಹ ವಿಷಯದಲ್ಲಿ ನೀವು ನನ್ನಲ್ಲಿ ಬೇಡಬಾರದು. ನೀವು ಅವಿವೇಕಿಗಳಾಗಬಾರದು ಎಂದು ನಾನು ನಿಮಗೆ ಉಪದೇಶ ಮಾಡುತ್ತಿದ್ದೇನೆ.
قَالَ رَبِّ إِنِّي أَعُوذُ بِكَ أَنْ أَسْأَلَكَ مَا لَيْسَ لِي بِهِ عِلْمٌ ۖ وَإِلَّا تَغْفِرْ لِي وَتَرْحَمْنِي أَكُن مِّنَ الْخَاسِرِينَ ٤٧
📖 ಅನುವಾದ
ಆಯತ್ 47
ನೂಹ್ರವರು ಹೇಳಿದರು ನನ್ನ ಪ್ರಭುವೇ ನನಗೆ ಅರಿವಿಲ್ಲದಂತಹ ವಿಷಯದಲ್ಲಿ ನಿನ್ನಲ್ಲಿ ಬೇಡುವುದರಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ ಮತ್ತು ನೀನು ನನಗೆ ಕ್ಷಮಿಸದಿದ್ದರೆ ಹಾಗೂ ನನ್ನ ಮೇಲೆ ಕರುಣೆ ತೋರದಿದ್ದರೆ ನಾನು ನಷ್ಟ ಹೊಂದಿದವರಲ್ಲಾಗುವೆನು.
قِيلَ يَا نُوحُ اهْبِطْ بِسَلَامٍ مِّنَّا وَبَرَكَاتٍ عَلَيْكَ وَعَلَىٰ أُمَمٍ مِّمَّن مَّعَكَ ۚ وَأُمَمٌ سَنُمَتِّعُهُمْ ثُمَّ يَمَسُّهُم مِّنَّا عَذَابٌ أَلِيمٌ ٤٨
📖 ಅನುವಾದ
ಆಯತ್ 48
ಹೇಳಲಾಯಿತು ಓ ನೂಹ್ ನಿಮ್ಮ ಮೇಲೆ ಮತ್ತು ನಿಮ್ಮೊಂದಿಗೆ ಇರುವ ಸಮುದಾಯಗಳ ಮೇಲೆ ನನ್ನ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಇಳಿದು ಬಿಡಿ. ಮತ್ತು ಕೆಲವು ಸಮುದಾಯಗಳಿಗೆ ನಾವು ಸುಖಭೋಗಗಳನ್ನು ನೀಡುವೆವು. ಅನಂತರ(ಅವರ ಸತ್ಯ ನಿಷೇಧದ ಹಾಗೂ ಪಾಪಗಳ ನಿಮಿತ್ತ) ನಮ್ಮ ಕಡೆಯಿಂದ ಅವರಿಗೆ ವೇದನಾಜನಕ ಯಾತನೆಯು ತಟ್ಟುವುದು.
تِلْكَ مِنْ أَنبَاءِ الْغَيْبِ نُوحِيهَا إِلَيْكَ ۖ مَا كُنتَ تَعْلَمُهَا أَنتَ وَلَا قَوْمُكَ مِن قَبْلِ هَٰذَا ۖ فَاصْبِرْ ۖ إِنَّ الْعَاقِبَةَ لِلْمُتَّقِينَ ٤٩
📖 ಅನುವಾದ
ಆಯತ್ 49
ಓ ಮುಹಮ್ಮದರೇ ಇವು ನಿಮಗೆ ದಿವ್ಯ ವಾಣಿಯ ಮೂಲಕ ತಿಳಿಸಿಕೊಡುತ್ತಿರುವ ಅಗೋಚರ ಸುದ್ದಿಗಳಾಗಿವೆ ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ತಿಳಿದಿರಲಿಲ್ಲ. ಆದ್ದರಿಂದ ನೀವು ಸಹನೆ ವಹಿಸಿರಿ. ಏಕೆಂದರೆ ಉತ್ತಮ ಪರಿಣಾಮವು ಭಯ-ಭಕ್ತಿ ಉಳ್ಳವರಿಗಾಗಿದೆ.
وَإِلَىٰ عَادٍ أَخَاهُمْ هُودًا ۚ قَالَ يَا قَوْمِ اعْبُدُوا اللَّهَ مَا لَكُم مِّنْ إِلَٰهٍ غَيْرُهُ ۖ إِنْ أَنتُمْ إِلَّا مُفْتَرُونَ ٥٠
📖 ಅನುವಾದ
ಆಯತ್ 50
ಆದ್ ಜನಾಂಗದವರೆಡೆಗೆ ನಾವು ಅವರ ಸಹೋದರ ಹೂದ್ರವರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ ಅವನ ಹೊರತು ಇನ್ಯಾವ ಆರಾಧ್ಯನೂ ನಿಮಗಿಲ್ಲ. ನೀವು (ಉಪದೇವರುಗಳನ್ನು ಸೇರಿಸಿ) ಕೇವಲ ಸುಳ್ಳು ಸೃಷ್ಟಿಸುತ್ತಿರುವಿರಿ.
يَا قَوْمِ لَا أَسْأَلُكُمْ عَلَيْهِ أَجْرًا ۖ إِنْ أَجْرِيَ إِلَّا عَلَى الَّذِي فَطَرَنِي ۚ أَفَلَا تَعْقِلُونَ ٥١
📖 ಅನುವಾದ
ಆಯತ್ 51
ಓ ನನ್ನ ಜನಾಂಗದವರೇ ನಾನು ನಿಮ್ಮಲ್ಲಿ ಇದಕ್ಕಾಗಿ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲವಂತೂ ನನ್ನನ್ನು ಸೃಷ್ಟಿಸಿದವನ ಹೊಣೆಯಲ್ಲಿದೆ. ಹಾಗಿದ್ದು ನೀವು ಬುದ್ಧಿ ಪ್ರಯೋಗಿಸುವುದಿಲ್ಲವೇ ?.
وَيَا قَوْمِ اسْتَغْفِرُوا رَبَّكُمْ ثُمَّ تُوبُوا إِلَيْهِ يُرْسِلِ السَّمَاءَ عَلَيْكُم مِّدْرَارًا وَيَزِدْكُمْ قُوَّةً إِلَىٰ قُوَّتِكُمْ وَلَا تَتَوَلَّوْا مُجْرِمِينَ ٥٢
📖 ಅನುವಾದ
ಆಯತ್ 52
ಓ ನನ್ನ ಜನಾಂಗದವರೇ ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು ಮತ್ತು ನಿಮ್ಮ ಶಕ್ತಿಯೊಂದಿಗೆ ಇನ್ನಷ್ಟು ಶಕ್ತಿಯನ್ನು ಹೆಚ್ಚಿಸುವನು ಮತ್ತು ನೀವು ಅಪರಾಧವೆಸಗುತ್ತಾ ವಿಮುಖರಾಗಬೇಡಿರಿ.
قَالُوا يَا هُودُ مَا جِئْتَنَا بِبَيِّنَةٍ وَمَا نَحْنُ بِتَارِكِي آلِهَتِنَا عَن قَوْلِكَ وَمَا نَحْنُ لَكَ بِمُؤْمِنِينَ ٥٣
📖 ಅನುವಾದ
ಆಯತ್ 53
ಅವರು ಹೇಳಿದರು ಓ ಹೂದ್! ನೀವು ನಮ್ಮ ಬಳಿಗೆ ಯಾವುದೇ ಸುಸ್ಪಷ್ಟ ದೃಷ್ಟಾಂತವನ್ನು ತಂದಿರುವುದಿಲ್ಲ, ಮತ್ತು ಕೇವಲ ನಿಮ್ಮ ಮಾತಿಗೆ ನಾವು ನಮ್ಮ ಆರಾಧ್ಯ ದೇವರುಗಳನ್ನು ಬಿಡುವವರಲ್ಲ, ಹಾಗೂ ನಾವು ನಿಮ್ಮ ಮೇಲೆ ವಿಶ್ವಾಸವಿರಿಸುವವರೂ ಅಲ್ಲ.
إِن نَّقُولُ إِلَّا اعْتَرَاكَ بَعْضُ آلِهَتِنَا بِسُوءٍ ۗ قَالَ إِنِّي أُشْهِدُ اللَّهَ وَاشْهَدُوا أَنِّي بَرِيءٌ مِّمَّا تُشْرِكُونَ ٥٤
📖 ಅನುವಾದ
ಆಯತ್ 54
ಆದರೆ ನಾವಂತೂ ಹೇಳುವುದಿಷ್ಟೇ; ನಮ್ಮ ದೇವರುಗಳ ಪೈಕಿ ಯಾರದೋ ಶಾಪ ನಿಮ್ಮ ಮೇಲೆ ಬಿದ್ದಿದೆ, ಹೂದ್ರವರು ಉತ್ತರಿಸಿದರು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಹ ಸಾಕ್ಷಿಗಳಾಗಿರಿ; ಅಲ್ಲಾಹನ ಹೊರತು ನೀವು ನಿಶ್ಚಯಿಸುತ್ತಿರುವ ಎಲ್ಲಾ ಸಹಭಾಗಿ ದೇವರುಗಳಿಂದ ನಾನು ಸಂಬAಧ ಮುಕ್ತನಾಗಿದ್ದೇನೆ.
مِن دُونِهِ ۖ فَكِيدُونِي جَمِيعًا ثُمَّ لَا تُنظِرُونِ ٥٥
📖 ಅನುವಾದ
ಆಯತ್ 55
ಸರಿ ನೀವೆಲ್ಲರೂ ಸೇರಿ ನನ್ನ ವಿರುದ್ಧ ತಂತ್ರಗಳನ್ನು ಹೂಡಿರಿ ಮತ್ತು ನನಗೆ ಒಂದಿಷ್ಟು ಕಾಲಾವಕಾಶವನ್ನೂ ನೀಡಬೇಡಿರಿ.
إِنِّي تَوَكَّلْتُ عَلَى اللَّهِ رَبِّي وَرَبِّكُم ۚ مَّا مِن دَابَّةٍ إِلَّا هُوَ آخِذٌ بِنَاصِيَتِهَا ۚ إِنَّ رَبِّي عَلَىٰ صِرَاطٍ مُّسْتَقِيمٍ ٥٦
📖 ಅನುವಾದ
ಆಯತ್ 56
ನಾನು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆದ ಅಲ್ಲಾಹನ ಮೇಲೆ ಭರವಸೆ ಇಟ್ಟಿದ್ದೇನೆ. ಪ್ರತಿಯೊಂದು ಜೀವಿಯ ಮುಂದಲೆ ಅವನ ಕೈಯಲ್ಲಿದೆ. ನಿಶ್ಚಯವಾಗಿಯೂ ನನ್ನ ಪ್ರಭು ಋಜುವಾದ ಮಾರ್ಗದಲ್ಲಿದ್ದಾನೆ.
فَإِن تَوَلَّوْا فَقَدْ أَبْلَغْتُكُم مَّا أُرْسِلْتُ بِهِ إِلَيْكُمْ ۚ وَيَسْتَخْلِفُ رَبِّي قَوْمًا غَيْرَكُمْ وَلَا تَضُرُّونَهُ شَيْئًا ۚ إِنَّ رَبِّي عَلَىٰ كُلِّ شَيْءٍ حَفِيظٌ ٥٧
📖 ಅನುವಾದ
ಆಯತ್ 57
ಇನ್ನು ನೀವು ವಿಮುಖರಾಗುವುದಾದರೆ ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿಸಲ್ಪಟ್ಟಿರುವೆನೋ ಅದನ್ನು ನಿಮಗೆ ತಲುಪಿಸಿಕೊಟ್ಟಿರುವೆನು ಮತ್ತು ನನ್ನ ಪ್ರಭು ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು. ಮತ್ತು ನೀವು ಅವನಿಗೆ ಯಾವ ಹಾನಿಯನ್ನೂ ಉಂಟು ಮಾಡಲಾರಿರಿ. ಖಂಡಿತವಾಗಿಯೂ ನನ್ನ ಪ್ರಭುವು ಎಲ್ಲಾ ವಸ್ತುಗಳ ಮೇಲೆ ಸಂರಕ್ಷಕನಾಗಿರುತ್ತಾನೆ.
وَلَمَّا جَاءَ أَمْرُنَا نَجَّيْنَا هُودًا وَالَّذِينَ آمَنُوا مَعَهُ بِرَحْمَةٍ مِّنَّا وَنَجَّيْنَاهُم مِّنْ عَذَابٍ غَلِيظٍ ٥٨
📖 ಅನುವಾದ
ಆಯತ್ 58
ಮತ್ತು ನಮ್ಮ ಆಜ್ಞೆಯು (ಯಾತನೆ) ಬಂದಾಗ ನಾವು ಹೂದ್ರನ್ನೂ ಅವರ ವಿಶ್ವಾಸಿ ಸಂಗಡಿಗರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ನಾವು ಅವರೆಲ್ಲರನ್ನು ಅತ್ತುö್ಯಗ್ರ ಯಾತನೆಯಿಂದ ಪಾರು ಗೊಳಿಸಿದೆವು.
وَتِلْكَ عَادٌ ۖ جَحَدُوا بِآيَاتِ رَبِّهِمْ وَعَصَوْا رُسُلَهُ وَاتَّبَعُوا أَمْرَ كُلِّ جَبَّارٍ عَنِيدٍ ٥٩
📖 ಅನುವಾದ
ಆಯತ್ 59
ಇದುವೇ ಆದ್ ಜನಾಂಗ. ಇವರು ತಮ್ಮ ಪ್ರಭುವಿನ ದೃಷ್ಟಾಂತಗಳನ್ನು ನಿರಾಕರಿಸಿದರು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸಿದರು ಹಾಗೂ ಹಠಮಾರಿಯಾದ ಪ್ರತಿಯೊಬ್ಬ ವಿರೋಧಿಯ ಆಜ್ಞೆಗಳನ್ನು ಅನುಸರಿಸಿದರು.
وَأُتْبِعُوا فِي هَٰذِهِ الدُّنْيَا لَعْنَةً وَيَوْمَ الْقِيَامَةِ ۗ أَلَا إِنَّ عَادًا كَفَرُوا رَبَّهُمْ ۗ أَلَا بُعْدًا لِّعَادٍ قَوْمِ هُودٍ ٦٠
📖 ಅನುವಾದ
ಆಯತ್ 60
ಕೊನೆಗೆ ಅವರನ್ನು ಇಹಲೋಕದಲ್ಲೂ ಪುನರುತ್ಥಾನದ ದಿನದಂದೂ ಶಾಪವು ಬೆನ್ನಟ್ಟುವಂತಾಯಿತು. ನೋಡಿರಿ ಆದ್ ಜನಾಂಗದವರು ತಮ್ಮ ಪ್ರಭುವನ್ನು ನಿರಾಕರಿಸಿದರು. ಎಚ್ಚರ! ಹೂದ್ರ ಜನಾಂಗವಾದ ಆದ್ಗೆ (ಕಾರುಣ್ಯದಿಂದ) ವಿದೂರತೆ ಇರಲಿ.
۞ وَإِلَىٰ ثَمُودَ أَخَاهُمْ صَالِحًا ۚ قَالَ يَا قَوْمِ اعْبُدُوا اللَّهَ مَا لَكُم مِّنْ إِلَٰهٍ غَيْرُهُ ۖ هُوَ أَنشَأَكُم مِّنَ الْأَرْضِ وَاسْتَعْمَرَكُمْ فِيهَا فَاسْتَغْفِرُوهُ ثُمَّ تُوبُوا إِلَيْهِ ۚ إِنَّ رَبِّي قَرِيبٌ مُّجِيبٌ ٦١
📖 ಅನುವಾದ
ಆಯತ್ 61
ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸ್ವಾಲಿಹ್ರವರನ್ನು ಕಳುಹಿಸಿದೆವು. ಅವರು ಹೇಳಿದರು. ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ಆರಾಧ್ಯ ದೇವನಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅವನೇ ಅದರಲ್ಲಿ ನಿಮ್ಮನ್ನು ನೆಲಗೊಳಿಸಿದನು ಆದ್ದರಿಂದ ನೀವು ಅವನಲ್ಲಿ ಕ್ಷಮೆಯಾಚಿಸಿರಿ. ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಸ್ಸಂಶಯವಾಗಿಯೂ ನನ್ನ ಪ್ರಭುವು ಸಾಮಿಪ್ಯಸ್ಥನೂ ಕರೆಗೆ ಓಗೊಡುವವನೂ ಆಗಿದ್ದಾನೆ.
قَالُوا يَا صَالِحُ قَدْ كُنتَ فِينَا مَرْجُوًّا قَبْلَ هَٰذَا ۖ أَتَنْهَانَا أَن نَّعْبُدَ مَا يَعْبُدُ آبَاؤُنَا وَإِنَّنَا لَفِي شَكٍّ مِّمَّا تَدْعُونَا إِلَيْهِ مُرِيبٍ ٦٢
📖 ಅನುವಾದ
ಆಯತ್ 62
ಅವರು ಹೇಳಿದರು: ಓ ಸ್ವಾಲಿಹ್ ನಾವು ಇದಕ್ಕೆ ಮೊದಲು ನಮ್ಮಲ್ಲಿ ನೀನು ಒಬ್ಬ ಆಶಾಪೂರ್ಣ ವ್ಯಕ್ತಿಯಾಗಿದ್ದೀರಿ. ನೀವೀಗ ನಮ್ಮನ್ನು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದ ಆರಾಧ್ಯರನ್ನು ಆರಾಧಿಸುವುದರಿಂದ ತಡೆಯುತ್ತಿರುವಿರಾ ? ಯಾವುದರ ಕಡೆಗೆ (ಏಕದೇವೋಪಾಸನೆ) ನೀವು ನಮ್ಮನ್ನು ಕರೆಯುತ್ತಿರುವಿರೋ ನಾವು ಅದರ ಕುರಿತು ಗಂಭೀರ ಸಂದೇಹದಲ್ಲಿದ್ದೇವೆ.
قَالَ يَا قَوْمِ أَرَأَيْتُمْ إِن كُنتُ عَلَىٰ بَيِّنَةٍ مِّن رَّبِّي وَآتَانِي مِنْهُ رَحْمَةً فَمَن يَنصُرُنِي مِنَ اللَّهِ إِنْ عَصَيْتُهُ ۖ فَمَا تَزِيدُونَنِي غَيْرَ تَخْسِيرٍ ٦٣
📖 ಅನುವಾದ
ಆಯತ್ 63
ಸ್ವಾಲಿಹ್ ಉತ್ತರಿಸಿದರು; ಓ ನನ್ನ ಜನಾಂಗದವರೇ, ನೀವು ಯೋಚಿಸಿದ್ದೀರಾ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸದೃಢ ಪ್ರಮಾಣದಲ್ಲಿದ್ದು ಹಾಗೂ ಅವನು ನನಗೆ ತನ್ನ ಕಡೆಯ ಕಾರುಣ್ಯವನ್ನು ನೀಡಿದ್ದಾನೆ, ಆ ಬಳಿಕ ನಾನು ಅಲ್ಲಾಹನನ್ನು ಧಿಕ್ಕರಿಸಿದರೆ ನನಗೆ ಅವನ ಹೊರತು ಸಹಾಯ ಮಾಡುವವನಾರಿದ್ದಾನೆ ? ನೀವು ನನ್ನ £ಷ್ಟ್ಟವಲ್ಲದೆ ಇನ್ನೇನನ್ನು ಹೆಚ್ಚಿಸುತ್ತಿಲ್ಲ.
وَيَا قَوْمِ هَٰذِهِ نَاقَةُ اللَّهِ لَكُمْ آيَةً فَذَرُوهَا تَأْكُلْ فِي أَرْضِ اللَّهِ وَلَا تَمَسُّوهَا بِسُوءٍ فَيَأْخُذَكُمْ عَذَابٌ قَرِيبٌ ٦٤
📖 ಅನುವಾದ
ಆಯತ್ 64
ಓ ನನ್ನ ಜನಾಂಗದವರೇ ಇದೋ ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತವಾಗಿದೆ. ಇನ್ನು ನೀವು ಅದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ಮೇಯಲು ಬಿಡಿರಿ, ಮತ್ತು ಅದಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಬೇಡಿರಿ. ಹಾಗೇನಾದರೂ ಆದರೆ ಅತಿ ಶೀಘ್ರ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
فَعَقَرُوهَا فَقَالَ تَمَتَّعُوا فِي دَارِكُمْ ثَلَاثَةَ أَيَّامٍ ۖ ذَٰلِكَ وَعْدٌ غَيْرُ مَكْذُوبٍ ٦٥
📖 ಅನುವಾದ
ಆಯತ್ 65
ಹಾಗಿದ್ದೂ ಅವರು ಆ ಒಂಟೆಯ ಕಾಲಿನ ಸ್ನಾಯುಗಳನ್ನು ಕತ್ತರಿಸಿಬಿಟ್ಟರು ಆಗ ಸ್ವಾಲಿಹ್ ಹೇಳಿದರು; ಇನ್ನು ನೀವು ನಿಮ್ಮ ಮನೆಗಳಲ್ಲಿ ಕೇವಲ ಮೂರು ದಿನಗಳವರೆಗೆ ಸುಖಭೋಗಗಳನ್ನು ಸವಿಯಿರಿ. ಇದು ಸುಳ್ಳಾಗದಂತಹ ವಾಗ್ದಾನವಾಗಿದೆ.
فَلَمَّا جَاءَ أَمْرُنَا نَجَّيْنَا صَالِحًا وَالَّذِينَ آمَنُوا مَعَهُ بِرَحْمَةٍ مِّنَّا وَمِنْ خِزْيِ يَوْمِئِذٍ ۗ إِنَّ رَبَّكَ هُوَ الْقَوِيُّ الْعَزِيزُ ٦٦
📖 ಅನುವಾದ
ಆಯತ್ 66
ಕೊನೆಗೆ ನಮ್ಮ ಯಾತನೆಯು ಬಂದಾಗ ನಾವು ಸ್ವಾಲಿಹ್ರವರನ್ನೂ ಅವರ ಮೇಲೆ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಜವಾಗಿಯೂ ನಿಮ್ಮ ಪ್ರಭು ಅತ್ಯಂತ ಬಲಿಷ್ಠನೂ, ಪ್ರಚಂಡನೂ ಆಗಿದ್ದಾನೆ,
وَأَخَذَ الَّذِينَ ظَلَمُوا الصَّيْحَةُ فَأَصْبَحُوا فِي دِيَارِهِمْ جَاثِمِينَ ٦٧
📖 ಅನುವಾದ
ಆಯತ್ 67
ಮತ್ತು ಅಕ್ರಮಿಗಳನ್ನು ಘೋರ ಆರ್ಭಟವೊಂದು ಹಿಡಿದು ಬಿಟ್ಟಿತ್ತು. ಅನಂತರ ಅವರು ತಮ್ಮ ಮನೆಗಳಲ್ಲಿ ಆಧೋಮುಖಿಗಳಾಗಿ ಬಿದ್ದಿದ್ದರು.
كَأَن لَّمْ يَغْنَوْا فِيهَا ۗ أَلَا إِنَّ ثَمُودَ كَفَرُوا رَبَّهُمْ ۗ أَلَا بُعْدًا لِّثَمُودَ ٦٨
📖 ಅನುವಾದ
ಆಯತ್ 68
ಅವರು ಅಲ್ಲಿ ಎಂದೂ ವಾಸಿಸಿಯೇ ಇಲ್ಲವೆಂಬAತೆ( ಅಳಿದು ಹೋದರು) ಜಾಗ್ರತೆ! ಸಮೂದ್ ಜನಾಂಗದವರು ತಮ್ಮ ಪ್ರಭುವನ್ನು ನಿಷೇಧಿಸಿದ್ದರು. ಅರಿತುಕೊಳ್ಳಿರಿ! ಸಮೂದ್ರÀವರ ಮೇಲೆ ಶಾಪವಿರಲಿ.
وَلَقَدْ جَاءَتْ رُسُلُنَا إِبْرَاهِيمَ بِالْبُشْرَىٰ قَالُوا سَلَامًا ۖ قَالَ سَلَامٌ ۖ فَمَا لَبِثَ أَن جَاءَ بِعِجْلٍ حَنِيذٍ ٦٩
📖 ಅನುವಾದ
ಆಯತ್ 69
ನಮ್ಮ ಮಲಕಗಳು ಇಬ್ರಾಹೀಮ್ರವರ ಬಳಿಗೆ ಒಬ್ಬ ಪುತ್ರನ ಶುಭವಾರ್ತೆಯೊಂದಿಗೆ ಬಂದರು ಮತ್ತು 'ಸಲಾಂ' ಹೇಳಿದರು. ಅವರು ಸಹ 'ಸಲಾಂ' ಎಂದು ಉತ್ತರಿಸಿದರು. ಮತ್ತು ತಡಮಾಡದೆ ಹುರಿದ ಕರುವೊಂದನ್ನು ತಂದರು.
فَلَمَّا رَأَىٰ أَيْدِيَهُمْ لَا تَصِلُ إِلَيْهِ نَكِرَهُمْ وَأَوْجَسَ مِنْهُمْ خِيفَةً ۚ قَالُوا لَا تَخَفْ إِنَّا أُرْسِلْنَا إِلَىٰ قَوْمِ لُوطٍ ٧٠
📖 ಅನುವಾದ
ಆಯತ್ 70
ಆದರೆ ಅವರ ಕೈಗಳು ಆಹಾರವನ್ನು ಮುಟ್ಟದಿರುವುದನ್ನು ಕಂಡಾಗ ಅವರ ಬಗ್ಗೆ ಅಪರಿಚಿತತೆಯು ಭಾಸವಾಗಿ ಒಳಗೊಳಗೆ ಅವರ ಕುರಿತು ಭಯಪಡಲಾರಂಭಿಸಿದರು. ಅವರೆಂದರು; ಭಯಪಡಬೇಡಿರಿ ನಾವು ಲೂತರ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.
وَامْرَأَتُهُ قَائِمَةٌ فَضَحِكَتْ فَبَشَّرْنَاهَا بِإِسْحَاقَ وَمِن وَرَاءِ إِسْحَاقَ يَعْقُوبَ ٧١
📖 ಅನುವಾದ
ಆಯತ್ 71
ಸಮೀಪದಲ್ಲೇ ನಿಂತಿದ್ದ ಅವರ ಪತ್ನಿಯು ಇದನ್ನು ಕೇಳಿ ನಕ್ಕುಬಿಟ್ಟರು. ಆಗ ನಾವು ಅವರಿಗೆ ಇಸ್ಹಾಕರ(ಪುತ್ರನ) ಹಾಗೂ ಇಸ್ಹಾಕರ ನಂತರ ಯಾಕೂಬರ ಮೊಮ್ಮಗನ ಶುಭವಾರ್ತೆಯನ್ನು ನೀಡಿದೆವು.
قَالَتْ يَا وَيْلَتَىٰ أَأَلِدُ وَأَنَا عَجُوزٌ وَهَٰذَا بَعْلِي شَيْخًا ۖ إِنَّ هَٰذَا لَشَيْءٌ عَجِيبٌ ٧٢
📖 ಅನುವಾದ
ಆಯತ್ 72
ಅವರು ಹೇಳಿದರು ಅಯ್ಯೋ ನನ್ನ ಪಾಡೇ ನನಗೆ ಮಗು ಹುಟ್ಟುವುದಾದರೂ ಹೇಗೆ? ನಾನಂತೂ ಹಣ್ಣು ಮುದುಕಿ ಮತ್ತು ಈ ನನ್ನ ಪತಿಯೂ ಸಹ ವಯೋವೃದ್ಧರಾಗಿದ್ದಾರೆ! ನಿಜವಾಗಿಯೂ ಇದೊಂದು ಅದ್ಭುತ ಸಂಗತಿಯಾಗಿದೆ.
قَالُوا أَتَعْجَبِينَ مِنْ أَمْرِ اللَّهِ ۖ رَحْمَتُ اللَّهِ وَبَرَكَاتُهُ عَلَيْكُمْ أَهْلَ الْبَيْتِ ۚ إِنَّهُ حَمِيدٌ مَّجِيدٌ ٧٣
📖 ಅನುವಾದ
ಆಯತ್ 73
ಮಲಕ್ಗಳು ಹೇಳಿದರು; ಅಲ್ಲಾಹನ ವಿಧಿಯ ಬಗ್ಗೆ ನೀವು ಆಶ್ಚರ್ಯ ಪಡುತ್ತಿರುವಿರಾ ? ಮನೆಯವರೇ ನಿಮ್ಮ ಮೇಲೆ ಅಲ್ಲಾಹನ ಕೃಪೆಯು ಅವನ ಸಮೃದ್ಧಿಯೂ ಉಂಟಾಗಲಿ. ನಿಸ್ಸಂಶಯವಾಗಿಯೂ ಅಲ್ಲಾಹನು ಸ್ತುತ್ಯಾರ್ಹನು ಮಹಿಮಾವಂತನೂ ಆಗಿರುವನು.
فَلَمَّا ذَهَبَ عَنْ إِبْرَاهِيمَ الرَّوْعُ وَجَاءَتْهُ الْبُشْرَىٰ يُجَادِلُنَا فِي قَوْمِ لُوطٍ ٧٤
📖 ಅನುವಾದ
ಆಯತ್ 74
ಇಬ್ರಾಹೀಮರಿಂದ ಭಯವು ದೂರವಾದಾಗ ಮತ್ತು ಅವರಿಗೆ ಶುಭವಾರ್ತೆಯು ಸಹ ತಲುಪಿದಾಗ ಅವರು ನಮ್ಮೊಂದಿಗೆ ಲೂತರÀ ಜನಾಂಗದ ಬಗ್ಗೆ ವಾಗ್ವಾದ ಮಾಡತೊಡಗಿದರು.
إِنَّ إِبْرَاهِيمَ لَحَلِيمٌ أَوَّاهٌ مُّنِيبٌ ٧٥
📖 ಅನುವಾದ
ಆಯತ್ 75
ನಿಜವಾಗಿಯೂ ಇಬ್ರಾಹೀಮ್ ಅತ್ಯಂತ ಸಹನಶೀಲರೂ ಸಹಾನುಭೂತಿಯುಳ್ಳವರು ಮತ್ತು ಅಲ್ಲಾಹನೆಡೆಗೆ ದೈನ್ಯರಾಗುವವರು ಆಗಿದ್ದರು.
يَا إِبْرَاهِيمُ أَعْرِضْ عَنْ هَٰذَا ۖ إِنَّهُ قَدْ جَاءَ أَمْرُ رَبِّكَ ۖ وَإِنَّهُمْ آتِيهِمْ عَذَابٌ غَيْرُ مَرْدُودٍ ٧٦
📖 ಅನುವಾದ
ಆಯತ್ 76
ಓ ಇಬ್ರಾಹೀಮ್ ನೀವು ನಿಮ್ಮ ಈ ವಾಗ್ವಾದ ನಿಲ್ಲಿಸಿರಿ. ತಮ್ಮ ಪ್ರಭುವಿನ ಆದೇಶವು ಬಂದಾಯಿತು. ನಿಶ್ಚಯವಾಗಿಯೂ ಅವರ ಮೇಲೆ ತಡೆಯಲಾಗದಂತಹ ಯಾತನೆಯೊಂದು ಬರಲಿದೆ.
وَلَمَّا جَاءَتْ رُسُلُنَا لُوطًا سِيءَ بِهِمْ وَضَاقَ بِهِمْ ذَرْعًا وَقَالَ هَٰذَا يَوْمٌ عَصِيبٌ ٧٧
📖 ಅನುವಾದ
ಆಯತ್ 77
ನಮ್ಮ ದೂತರು ಲೂತ್ರವರ ಬಳಿಗೆ ಬಂದಾಗ ಅವರು ಅವರ ನಿಮಿತ್ತ ಮಹಾ ಸಂಕಟಕ್ಕೊಳಗಾದರು ಮತ್ತು ಅವರ ಮನಸ್ಸು ಸಂಕುಚಿತಗೊAಡಿತು ಮತ್ತು ಇಂದಿನ ದಿನ ಮಹಾ ಕಠಿಣ ದಿನವಾಗಿದೆ ಎಂದರು.
وَجَاءَهُ قَوْمُهُ يُهْرَعُونَ إِلَيْهِ وَمِن قَبْلُ كَانُوا يَعْمَلُونَ السَّيِّئَاتِ ۚ قَالَ يَا قَوْمِ هَٰؤُلَاءِ بَنَاتِي هُنَّ أَطْهَرُ لَكُمْ ۖ فَاتَّقُوا اللَّهَ وَلَا تُخْزُونِ فِي ضَيْفِي ۖ أَلَيْسَ مِنكُمْ رَجُلٌ رَّشِيدٌ ٧٨
📖 ಅನುವಾದ
ಆಯತ್ 78
ಲೂತರ ಬಳಿ ಅವರ ಜನಾಂಗದವರು ಧಾವಿಸುತ್ತಾ ಬಂದರು ಅವರು ಮೊದಲೇ ನೀಚ ಕೃತ್ಯದಲ್ಲಿ ಮುಳುಗಿದವರಾಗಿದ್ದರು. ಲೂತ್ರು ಹೇಳಿದರು, ಓ ನನ್ನ ಜನಾಂಗದವರೇ ಇವರು ನನ್ನ ಹೆಣ್ಣುಮಕ್ಕಳು, ಇವರು ನಿಮಗೆ ಅತಿ ಪರಿಶುದ್ಧರಾಗಿದ್ದಾರೆ, ನೀವು ಅಲ್ಲಾಹನನ್ನು ಭಯಪಡಿರಿ, ಮತ್ತು ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನಿಸಬೇಡಿರಿ. ನಿಮ್ಮಲ್ಲಿ ಸಜ್ಜನ ವ್ಯಕ್ತಿ ಯಾರೂ ಇಲ್ಲವೇ ?
قَالُوا لَقَدْ عَلِمْتَ مَا لَنَا فِي بَنَاتِكَ مِنْ حَقٍّ وَإِنَّكَ لَتَعْلَمُ مَا نُرِيدُ ٧٩
📖 ಅನುವಾದ
ಆಯತ್ 79
ಅವರು ಉತ್ತರಿಸಿದರು; ನಿಮ್ಮ ಹೆಣ್ಣು ಮಕ್ಕಳಲ್ಲಿ ನಮಗೆ ಯಾವ ಆಸಕ್ತಿ ಇಲ್ಲವೆಂಬುದನ್ನು ನೀವು ಚೆನ್ನಾಗಿ ಅರಿತಿರುವಿರಿ ಮತ್ತು ನಾವು ಬಯಸುವುದೇನೆಂಬುವುದನ್ನೂ ನಿಮಗೆ ಚೆನ್ನಾಗಿ ತಿಳಿದಿದೆ.
قَالَ لَوْ أَنَّ لِي بِكُمْ قُوَّةً أَوْ آوِي إِلَىٰ رُكْنٍ شَدِيدٍ ٨٠
📖 ಅನುವಾದ
ಆಯತ್ 80
ಲೂತ್ರು ಹೇಳಿದರು ನಿಮ್ಮ ವಿರುದ್ಧ ನನಗೆ ಶಕ್ತಿ ಇರುತ್ತಿದ್ದರೆ ಅಥವ ನಾನು ಯಾವುದಾದರೊಂದು ಬಲಿಷ್ಠ ಆಸರೆಯನ್ನು ಹೊಂದಿರುತ್ತಿದ್ದರೆ! (ಬಡಿದು ಓಡಿಸುತ್ತಿದ್ದೆ)
قَالُوا يَا لُوطُ إِنَّا رُسُلُ رَبِّكَ لَن يَصِلُوا إِلَيْكَ ۖ فَأَسْرِ بِأَهْلِكَ بِقِطْعٍ مِّنَ اللَّيْلِ وَلَا يَلْتَفِتْ مِنكُمْ أَحَدٌ إِلَّا امْرَأَتَكَ ۖ إِنَّهُ مُصِيبُهَا مَا أَصَابَهُمْ ۚ إِنَّ مَوْعِدَهُمُ الصُّبْحُ ۚ أَلَيْسَ الصُّبْحُ بِقَرِيبٍ ٨١
📖 ಅನುವಾದ
ಆಯತ್ 81
ಆಗ ದೇವಚರರು ಹೇಳಿದರು ಓ ಲೂತ್ ನಾವು ನಿಮ್ಮ ಪ್ರಭುವಿನ ದೂತರು. ಅವರು ನಿಮ್ಮಲ್ಲಿಗೆ ಎಂದು ತಲುಪಲಾರರು ಇನ್ನು ನೀವು ರಾತ್ರಿಯು ಒಂದಿಷ್ಟು ಉಳಿದಿರುವಾಗ ನಿಮ್ಮ ಕುಟುಂಬದವರನ್ನು ಕರೆದುಕೊಂಡು ಹೊರಟುಬಿಡಿ. ಆದರೆ ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಯಾರು ತಿರುಗಿಯೂ ನೋಡದಿರಲಿ. ಏಕೆಂದರೆ ಅವರೆಲ್ಲರಿಗೂ ಬಾಧಿಸಲಿರುವಂತಹದ್ದು ಅವಳಿಗೂ ಬಾಧಿಸುವುದು, ನಿಶ್ಚಯವಾಗಿಯೂ ಅವರ ವಿನಾಶಕ್ಕಾಗಿ ನಿಶ್ಚಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಸಮೀಪವಿಲ್ಲವೇ ?
فَلَمَّا جَاءَ أَمْرُنَا جَعَلْنَا عَالِيَهَا سَافِلَهَا وَأَمْطَرْنَا عَلَيْهَا حِجَارَةً مِّن سِجِّيلٍ مَّنضُودٍ ٨٢
📖 ಅನುವಾದ
ಆಯತ್ 82
ನಂತರ ನಮ್ಮ ಆಜ್ಞೆಯು ಬಂದಾಗ ನಾವು ಈ ನಾಡನ್ನು ಬುಡಮೇಲು ಮಾಡಿಬಿಟ್ಟೆವು. ಮತ್ತು ಅವರ ಮೇಲೆ ಸುಡುಗಲ್ಲುಗಳನ್ನು ಎಡೆಬಿಡದೆ ಮಳೆಗರೆದವು.
مُّسَوَّمَةً عِندَ رَبِّكَ ۖ وَمَا هِيَ مِنَ الظَّالِمِينَ بِبَعِيدٍ ٨٣
📖 ಅನುವಾದ
ಆಯತ್ 83
ಅವು ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲಾಗದ ಕಲ್ಲುಗಳಾಗಿದ್ದವು ಮತ್ತು ಆ ನಾಡು ಈ ಅಕ್ರಮಿಗಳಿಂದ ದೂರವೇನೂ ಇಲ್ಲ.
۞ وَإِلَىٰ مَدْيَنَ أَخَاهُمْ شُعَيْبًا ۚ قَالَ يَا قَوْمِ اعْبُدُوا اللَّهَ مَا لَكُم مِّنْ إِلَٰهٍ غَيْرُهُ ۖ وَلَا تَنقُصُوا الْمِكْيَالَ وَالْمِيزَانَ ۚ إِنِّي أَرَاكُم بِخَيْرٍ وَإِنِّي أَخَافُ عَلَيْكُمْ عَذَابَ يَوْمٍ مُّحِيطٍ ٨٤
📖 ಅನುವಾದ
ಆಯತ್ 84
ನಾವು ಮದ್ಯನ್ರವರ ಕಡೆಗೆ ಅವರ ಸಹೋದರ ಶುಐಬ್ರನ್ನು ಕಳುಹಿಸಿದೆವು. ಅವರು ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ. ನೀವು ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡದಿರಿ. ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರುವವರಾಗಿ ಕಾಣುತ್ತಿದ್ದೇನೆ, ಹಾಗೂ ನಾನು ನಿಮ್ಮ ಮೇಲೆ ಆವರಿಸುವಂತಹ ಒಂದು ಯಾತನೆಯ ದಿನದ ಬಗ್ಗೆ ಭಯಪಡುತ್ತೇನೆ.
وَيَا قَوْمِ أَوْفُوا الْمِكْيَالَ وَالْمِيزَانَ بِالْقِسْطِ ۖ وَلَا تَبْخَسُوا النَّاسَ أَشْيَاءَهُمْ وَلَا تَعْثَوْا فِي الْأَرْضِ مُفْسِدِينَ ٨٥
📖 ಅನುವಾದ
ಆಯತ್ 85
ಮತ್ತು ಓ ನನ್ನ ಜನಾಂಗದವರೇ ನೀವು ನ್ಯಾಯೋಚಿತವಾಗಿ ಅಳತೆ ಮತ್ತು ತೂಕವನ್ನು ಪೂರ್ತಿ ಮಾಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸದಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡದಿರಿ.
بَقِيَّتُ اللَّهِ خَيْرٌ لَّكُمْ إِن كُنتُم مُّؤْمِنِينَ ۚ وَمَا أَنَا عَلَيْكُم بِحَفِيظٍ ٨٦
📖 ಅನುವಾದ
ಆಯತ್ 86
ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನು ನಿಮಗೆ ನೀಡಿದ ಉಳಿತಾಯವೇ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ, ಮತ್ತು ನಾನು ನಿಮ್ಮ ಮೇಲೆ ಸಂರಕ್ಷಕನಲ್ಲ. (ಕಾವಲುಗಾರನಲ್ಲ)
قَالُوا يَا شُعَيْبُ أَصَلَاتُكَ تَأْمُرُكَ أَن نَّتْرُكَ مَا يَعْبُدُ آبَاؤُنَا أَوْ أَن نَّفْعَلَ فِي أَمْوَالِنَا مَا نَشَاءُ ۖ إِنَّكَ لَأَنتَ الْحَلِيمُ الرَّشِيدُ ٨٧
📖 ಅನುವಾದ
ಆಯತ್ 87
ಅವರು ಉತ್ತರಿಸಿದರು; ಓ ಶುಐಬ್ ನಾವು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನಮ್ಮ ಸಂಪತ್ತುಗಳಲ್ಲಿ ನಮ್ಮ ಇಷ್ಟದ ಪ್ರಕಾರ ಬಳಸಬಾರದೆಂದು ನಿನ್ನ ನಮಾಜ್ ನಿನಗೆ ಆದೇಶಿಸುತ್ತದೆಯೇ ? ನೀನಂತೂ ಸಹನಶೀಲನೂ ಸನ್ಮಾರ್ಗಿಯೂ ಆಗಿಬಿಟ್ಟಿರುವೆ!
قَالَ يَا قَوْمِ أَرَأَيْتُمْ إِن كُنتُ عَلَىٰ بَيِّنَةٍ مِّن رَّبِّي وَرَزَقَنِي مِنْهُ رِزْقًا حَسَنًا ۚ وَمَا أُرِيدُ أَنْ أُخَالِفَكُمْ إِلَىٰ مَا أَنْهَاكُمْ عَنْهُ ۚ إِنْ أُرِيدُ إِلَّا الْإِصْلَاحَ مَا اسْتَطَعْتُ ۚ وَمَا تَوْفِيقِي إِلَّا بِاللَّهِ ۚ عَلَيْهِ تَوَكَّلْتُ وَإِلَيْهِ أُنِيبُ ٨٨
📖 ಅನುವಾದ
ಆಯತ್ 88
ಅವರಿಗೆ ಹೇಳಿದರು; ಓ ನನ್ನ ಜನಾಂಗದವರೇ ಯೋಚಿಸಿ ನೋಡಿರಿ ! ನಾನು ನನ್ನ ಪ್ರಭುವಿನ ಕಡೆಯ ಸುಸ್ಪಷ್ಟ ಪ್ರಮಾಣವನ್ನು ಹೊಂದಿದ್ದು ಹಾಗೂ ಅವನು ತನ್ನ ವತಿಯಿಂದ ನನಗೆ ಉತ್ತಮವಾದ ಜೀವನಾಧಾರವನ್ನು ಕರುಣಿಸಿರುತ್ತಾನೆ ಎಂದಾದರೆ, ನಿಮ್ಮನ್ನು ಒಂದು ಸಂಗತಿಯಿAದ ತಡೆದು ಸ್ವತಃ ನಾನೇ ಅದರಡೆಗೆ ವಾಲಿಬಿಡುವುದನ್ನು ನಾನು ಇಚ್ಚಿಸುವುದಿಲ್ಲ. ನನಗೆ ಸಾಧ್ಯವಾದಷ್ಟು ಸುಧಾರಣೆ ಮಾಡುವುದು ನನ್ನ ಉದ್ದೇಶವಾಗಿದೆ. ಮತ್ತು ಅಲ್ಲಾಹನ ಸಹಾಯದ ಹೊರತು ನನಗೆ ಯಾವ ಕಾರ್ಯದ ಸಾಮರ್ಥ್ಯವು ಇಲ್ಲ. ಅವನ ಮೇಲೆಯೇ ನನ್ನ ಭರವಸೆ ಇರುವುದು ಮತ್ತು ಅವನೆಡೆಗೇ ಪಶ್ಚಾತ್ತಾಪದಿಂದ ಮರಳುವೆನು.
وَيَا قَوْمِ لَا يَجْرِمَنَّكُمْ شِقَاقِي أَن يُصِيبَكُم مِّثْلُ مَا أَصَابَ قَوْمَ نُوحٍ أَوْ قَوْمَ هُودٍ أَوْ قَوْمَ صَالِحٍ ۚ وَمَا قَوْمُ لُوطٍ مِّنكُم بِبَعِيدٍ ٨٩
📖 ಅನುವಾದ
ಆಯತ್ 89
ಮತ್ತು ಓ ನನ್ನ ಜನಾಂಗದವರೇ ನನ್ನೊಂದಿಗೆ ಇರುವ ನಿಮ್ಮ ವಿರೋಧವೂ ನೂಹ್ರ ಜನಾಂಗ, ಹೂದರ ಜನಾಂಗ, ಮತ್ತು ಸ್ವಾಲಿಹರ ಜನಾಂಗಕ್ಕೆ ಎರಗಿದಂತಹ ಶಿಕ್ಷೆಗಳು ನಿಮ್ಮ ಮೇಲೂ ಎರಗುವಂತಾಗಲು ಕಾರಣವಾಗದಿರಲಿ. ಹಾಗು ಲೂತರ ಜನಾಂಗವು ನಿಮ್ಮಿಂದ ಬಹಳ ದೂರವಿಲ್ಲ.
وَاسْتَغْفِرُوا رَبَّكُمْ ثُمَّ تُوبُوا إِلَيْهِ ۚ إِنَّ رَبِّي رَحِيمٌ وَدُودٌ ٩٠
📖 ಅನುವಾದ
ಆಯತ್ 90
ನೀವು ನಿಮ್ಮ ಪ್ರಭುವಿನಲ್ಲಿ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಶ್ಚಯವಾಗಿಯೂ ನನ್ನ ಪ್ರಭುವು ಕರುಣಾನಿಧಿಯೂ, ಅತ್ಯಂತ ಒಲುಮೆಯವನೂ ಆಗಿದ್ದಾನೆ.
قَالُوا يَا شُعَيْبُ مَا نَفْقَهُ كَثِيرًا مِّمَّا تَقُولُ وَإِنَّا لَنَرَاكَ فِينَا ضَعِيفًا ۖ وَلَوْلَا رَهْطُكَ لَرَجَمْنَاكَ ۖ وَمَا أَنتَ عَلَيْنَا بِعَزِيزٍ ٩١
📖 ಅನುವಾದ
ಆಯತ್ 91
ಅವರು ಹೇಳಿದರು; ಶುಐಬ್ ನಿನ್ನ ಹೆಚ್ಚಿನ ಮಾತುಗಳು ನಮಗೆ ಅರ್ಥವೇ ಆಗುವುದಿಲ್ಲ. ಮತ್ತು ನಾವು ನಿಮ್ಮನ್ನು ನಮ್ಮ ಪೈಕಿ ದುರ್ಬಲನಾಗಿ ಕಾಣುತ್ತಿದ್ದೇವೆ, ನಿನ್ನ ವಂಶದವರ ಕಾಳಜಿ ಇಲ್ಲದಿರುತ್ತಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುತ್ತಿದ್ದೆವು ಮತ್ತು ನೀನು ನಮಗಿಂತ ಮಾನ್ಯನೇನೂ ಅಲ್ಲ.
قَالَ يَا قَوْمِ أَرَهْطِي أَعَزُّ عَلَيْكُم مِّنَ اللَّهِ وَاتَّخَذْتُمُوهُ وَرَاءَكُمْ ظِهْرِيًّا ۖ إِنَّ رَبِّي بِمَا تَعْمَلُونَ مُحِيطٌ ٩٢
📖 ಅನುವಾದ
ಆಯತ್ 92
ಶುಐಬರು ಉತ್ತರಿಸಿದರು ಓ ನನ್ನ ಜನಾಂಗದವರೇ ನನ್ನ ವಂಶದವರು ನಿಮಗೆ ಅಲ್ಲಾಹನಿಗಿಂತಲೂ ಹೆಚ್ಚು ಗೌರವಾರ್ಹರಾಗಿದ್ದಾರೆಯೇ? ನೀವು ಅಲ್ಲಾಹನನ್ನು ಹಿಂದೆ ತಳ್ಳಿಬಿಟ್ಟಿರಿ, ನಿಜವಾಗಿಯೂ ನನ್ನ ಪ್ರಭು ನೀವು ಮಾಡುತ್ತಿರುವುದನ್ನು ಆವರಿಸಿದ್ದಾನೆ.
وَيَا قَوْمِ اعْمَلُوا عَلَىٰ مَكَانَتِكُمْ إِنِّي عَامِلٌ ۖ سَوْفَ تَعْلَمُونَ مَن يَأْتِيهِ عَذَابٌ يُخْزِيهِ وَمَنْ هُوَ كَاذِبٌ ۖ وَارْتَقِبُوا إِنِّي مَعَكُمْ رَقِيبٌ ٩٣
📖 ಅನುವಾದ
ಆಯತ್ 93
ಮತ್ತು ನನ್ನ ಜನಾಂಗದವರೇ, ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ, ನಾನು ಸಹ ಕಾರ್ಯವೆಸಗುತ್ತಿದೇನೆ, ಯಾರಿಗೆ ಅಪಮಾನಕರ ಯಾತನೆಯು ಬರಲಿದೆಯೆಂದು ಮತ್ತು ಸುಳ್ಳನಾರೆಂದು ಶೀಘ್ರವೇ ನಿಮಗೆ ಗೊತ್ತಾಗಲಿದೆ. ನೀವು ನಿರೀಕ್ಷಿಸಿರಿ. ನಾನು ಸಹ ನಿಮ್ಮ ಜೊತೆ ನಿರೀಕ್ಷಿಸುವವನಾಗಿದ್ದೇನೆ.
وَلَمَّا جَاءَ أَمْرُنَا نَجَّيْنَا شُعَيْبًا وَالَّذِينَ آمَنُوا مَعَهُ بِرَحْمَةٍ مِّنَّا وَأَخَذَتِ الَّذِينَ ظَلَمُوا الصَّيْحَةُ فَأَصْبَحُوا فِي دِيَارِهِمْ جَاثِمِينَ ٩٤
📖 ಅನುವಾದ
ಆಯತ್ 94
ಕೊನೆಗೆ ನಮ್ಮ ಆಜ್ಞೆಯು ಬಂದಾಗ ನಾವು ಶುಐಬರನ್ನೂ ಅವರೊಂದಿಗೆ ಸತ್ಯ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಅಕ್ರಮವೆಸಗಿದವರಿಗೆ ಘೋರ ಆರ್ಭಟವೊಂದು ಹಿಡಿದುಬಿಟ್ಟಿತು ಮತ್ತು ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
كَأَن لَّمْ يَغْنَوْا فِيهَا ۗ أَلَا بُعْدًا لِّمَدْيَنَ كَمَا بَعِدَتْ ثَمُودُ ٩٥
📖 ಅನುವಾದ
ಆಯತ್ 95
ಅವರು ಆ ಮನೆಗಳಲ್ಲಿ ವಾಸಿಸಿಯೇ ಇಲ್ಲವೆಂಬAತೆ(ಅಳಿದು ಹೋದರು) ತಿಳಿದುಕೊಳ್ಳಿರಿ! ಸಮೂದ್ ಶಪಿಸಲ್ಪಪಟ್ಟಂತೆ ಮದ್ಯನ್ನರೂ ಶಪಿಸಲ್ಪಟ್ಟರು.
وَلَقَدْ أَرْسَلْنَا مُوسَىٰ بِآيَاتِنَا وَسُلْطَانٍ مُّبِينٍ ٩٦
📖 ಅನುವಾದ
ಆಯತ್ 96
ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುವ್ಯಕ್ತ ಪುರಾವೆಯೊಂದಿಗೆ ಫಿರ್ಔನ್ ಮತ್ತು ಅವರ ಮುಖಂಡರೆಡೆಗೆ ಕಳುಹಿಸಿದ್ದೆವು,
إِلَىٰ فِرْعَوْنَ وَمَلَئِهِ فَاتَّبَعُوا أَمْرَ فِرْعَوْنَ ۖ وَمَا أَمْرُ فِرْعَوْنَ بِرَشِيدٍ ٩٧
📖 ಅನುವಾದ
ಆಯತ್ 97
ಆದರೆ ಅವರು ಫಿರ್ಔನನ ಆದೇಶವನ್ನು ಅನುಸರಿಸಿದರು ಮತ್ತು ಫಿರ್ಔನನ ಆದೇಶವು ಋಜುವಾಗಿರಲಿಲ್ಲ.
يَقْدُمُ قَوْمَهُ يَوْمَ الْقِيَامَةِ فَأَوْرَدَهُمُ النَّارَ ۖ وَبِئْسَ الْوِرْدُ الْمَوْرُودُ ٩٨
📖 ಅನುವಾದ
ಆಯತ್ 98
ಪುನರುತ್ಥಾನÀ ದಿನದಂದು ಅವನು ತನ್ನ ಜನಾಂಗದ ಮುಂದೆ ಮುಂದೆ ನಡೆದು ಅವರನ್ನು ನರಕದ ಕಡೆಗೆ ಕೊಂಡೊಯ್ಯುವನು. ಅವರನ್ನು ತಲುಪಿಸಲಾಗುವ ತಾಣವು ಅತಿ ನಿಕೃಷ್ಟವಾಗಿದೆ.
وَأُتْبِعُوا فِي هَٰذِهِ لَعْنَةً وَيَوْمَ الْقِيَامَةِ ۚ بِئْسَ الرِّفْدُ الْمَرْفُودُ ٩٩
📖 ಅನುವಾದ
ಆಯತ್ 99
ಇಹಲೋಕದಲ್ಲಿ ಮತ್ತು ಪುನರುತ್ಥಾನÀ ದಿನದಂದು ಅವರನ್ನು ಶಾಪವು ಬೆನ್ನಟ್ಟುವಂತಾಯಿತು ಅವರಿಗೆ ನೀಡಲಾಗುವ ಪ್ರತಿಫಲವು ಅತ್ಯಂತ ಕೆಟ್ಟದ್ದಾಗಿದೆ.
ذَٰلِكَ مِنْ أَنبَاءِ الْقُرَىٰ نَقُصُّهُ عَلَيْكَ ۖ مِنْهَا قَائِمٌ وَحَصِيدٌ ١٠٠
📖 ಅನುವಾದ
ಆಯತ್ 100
ನಾವು ನಿಮಗೆ ವಿವರಿಸಿ ಕೊಡುತ್ತಿರುವ ಇವು ಕೆಲವು ನಾಡುಗಳ ಸುದ್ದಿಗಳಾಗಿವೆ ಇವುಗಳಲ್ಲಿ ಕೆಲವೊಂದು ನೆಲೆನಿಂತಿವೆ ಮತ್ತು ಕೆಲವು ನಾಶಗೊಂಡಿವೆ.
وَمَا ظَلَمْنَاهُمْ وَلَٰكِن ظَلَمُوا أَنفُسَهُمْ ۖ فَمَا أَغْنَتْ عَنْهُمْ آلِهَتُهُمُ الَّتِي يَدْعُونَ مِن دُونِ اللَّهِ مِن شَيْءٍ لَّمَّا جَاءَ أَمْرُ رَبِّكَ ۖ وَمَا زَادُوهُمْ غَيْرَ تَتْبِيبٍ ١٠١
📖 ಅನುವಾದ
ಆಯತ್ 101
ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು. ಮತ್ತು ನಿಮ್ಮ ಪ್ರಭುವಿನ ಆಜ್ಞೆಯು ಬಂದಾಗ ಅವರು ಅಲ್ಲಾಹನ ಹೊರತು ಕರೆದು ಬೇಡುತ್ತಿದ್ದಂತಹ ಅವರ ಆರಾಧ್ಯರು ಅವರಿಗೆ ಯಾವ ಪ್ರಯೋಜನವನ್ನು ನೀಡಲಿಲ್ಲ ಮತ್ತು ಅವರಿಗೆ ನಷ್ಟದ ಹೊರತು ಇನ್ನೇನನ್ನು ಹೆಚ್ಚಿಸಲಿಲ್ಲ.
وَكَذَٰلِكَ أَخْذُ رَبِّكَ إِذَا أَخَذَ الْقُرَىٰ وَهِيَ ظَالِمَةٌ ۚ إِنَّ أَخْذَهُ أَلِيمٌ شَدِيدٌ ١٠٢
📖 ಅನುವಾದ
ಆಯತ್ 102
ನಿಮ್ಮ ಪ್ರಭು ಅಕ್ರಮಿ ನಾಡುಗಳನ್ನು ಹಿಡಿದಾಗ ಅವನ ಹಿಡಿತವೂ ಹೀಗೆಯೇ ಇರುತ್ತದೆ ನಿಸ್ಸಂಶಯವಾಗಿಯೂ ಅವನ ಹಿಡಿತವೂ ವೇದನಾಜನಕವೂ ಅತ್ಯುಗ್ರವೂ ಆಗಿರುತ್ತದೆ.
إِنَّ فِي ذَٰلِكَ لَآيَةً لِّمَنْ خَافَ عَذَابَ الْآخِرَةِ ۚ ذَٰلِكَ يَوْمٌ مَّجْمُوعٌ لَّهُ النَّاسُ وَذَٰلِكَ يَوْمٌ مَّشْهُودٌ ١٠٣
📖 ಅನುವಾದ
ಆಯತ್ 103
ನಿಜವಾಗಿಯೂ ಪರಲೋಕದ ಶಿಕ್ಷೆಯ ಕುರಿತು ಭಯಪಡುವವರಿಗೆ ಇದರಲ್ಲಿ ದೃಷ್ಟಾಂತವಿದೆ. ಅದು ಸಕಲ ಜನರು ಒಟ್ಟುಗೂಡಿಸಲ್ಪಡುವ ಒಂದು ದಿನವಾಗಿದೆ. ಮತ್ತು ಅದು ಸರ್ವರು ಹಾಜರುಗೊಳಿಸಲ್ಪಡುವ ದಿನವಾಗಿದೆ.
وَمَا نُؤَخِّرُهُ إِلَّا لِأَجَلٍ مَّعْدُودٍ ١٠٤
📖 ಅನುವಾದ
ಆಯತ್ 104
ಒಂದು ನಿರ್ದಿಷ್ಟ ಕಾಲಾವಧಿಯ ಹೊರತು ನಾವದನ್ನು ಮುಂದೂಡುತ್ತಿಲ್ಲ.
يَوْمَ يَأْتِ لَا تَكَلَّمُ نَفْسٌ إِلَّا بِإِذْنِهِ ۚ فَمِنْهُمْ شَقِيٌّ وَسَعِيدٌ ١٠٥
📖 ಅನುವಾದ
ಆಯತ್ 105
ಅದು ಬರುವ ದಿನದಂದು ಯಾವ ವ್ಯಕ್ತಿಯು ಅಲ್ಲಾಹನ ಅನುಮತಿ ಇಲ್ಲದೆ ಮಾತನಾಡಲಾರ ಅಂದು ಅವರ ಪೈಕಿ ಕೆಲವರು ದುರ್ದೈವಿಗಳು ಮತ್ತು ಕೆಲವರು ಭಾಗ್ಯವಂತರು ಇರುವರು.
فَأَمَّا الَّذِينَ شَقُوا فَفِي النَّارِ لَهُمْ فِيهَا زَفِيرٌ وَشَهِيقٌ ١٠٦
📖 ಅನುವಾದ
ಆಯತ್ 106
ದುರ್ದೈವಿಗಳು ನರಕಕ್ಕೆ ಹೋಗುವರು. ಅಲ್ಲವರು ಕಿರುಚುವರು ಮತ್ತು ಚೀರುವರು.
خَالِدِينَ فِيهَا مَا دَامَتِ السَّمَاوَاتُ وَالْأَرْضُ إِلَّا مَا شَاءَ رَبُّكَ ۚ إِنَّ رَبَّكَ فَعَّالٌ لِّمَا يُرِيدُ ١٠٧
📖 ಅನುವಾದ
ಆಯತ್ 107
ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭುವು ಇಚ್ಛಿಸುವುದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪ್ರಭುವು ತಾನಿಚ್ಛಿಸಿದ್ದನ್ನು ಮಾಡುವವನಾಗಿರುತ್ತಾನೆ.
۞ وَأَمَّا الَّذِينَ سُعِدُوا فَفِي الْجَنَّةِ خَالِدِينَ فِيهَا مَا دَامَتِ السَّمَاوَاتُ وَالْأَرْضُ إِلَّا مَا شَاءَ رَبُّكَ ۖ عَطَاءً غَيْرَ مَجْذُوذٍ ١٠٨
📖 ಅನುವಾದ
ಆಯತ್ 108
ಅದೃಷ್ಟವಂತರು ಸ್ವರ್ಗಕ್ಕೆ ಹೋಗುವರು. ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭು ಇಚ್ಛಿರುವುದರ ಹೊರತು ಇದು ಕೊನೆಯಾಗದ ಅನಂತ ಪುರಸ್ಕಾರವಾಗಿದೆ.
فَلَا تَكُ فِي مِرْيَةٍ مِّمَّا يَعْبُدُ هَٰؤُلَاءِ ۚ مَا يَعْبُدُونَ إِلَّا كَمَا يَعْبُدُ آبَاؤُهُم مِّن قَبْلُ ۚ وَإِنَّا لَمُوَفُّوهُمْ نَصِيبَهُمْ غَيْرَ مَنقُوصٍ ١٠٩
📖 ಅನುವಾದ
ಆಯತ್ 109
ಆದ್ದರಿಂದ ನೀವು ಅವರು ಆರಾಧಿಸುತ್ತಿರುವವುಗಳ ಬಗ್ಗೆ ಸಂದೇಹಕ್ಕೆ ಒಳಗಾಗಬೇಡಿರಿ, ಮುಂಚೆ ಇವರ ಪೂರ್ವಿಕರು ಆರಾಧಿಸಿಕೊಂಡು ಬಂದAತೆ ಇವರು ಆರಾಧಿಸುತ್ತಿದ್ದಾರೆ. ಮತ್ತು ನಾವು ಅವರಿಗೆ ಅವರ ಪಾಲನ್ನು ಕಡಿತಗೊಳಿಸದೇ ಪರಿಪೂರ್ಣವಾಗಿ ನೀಡುವೆವು.
وَلَقَدْ آتَيْنَا مُوسَى الْكِتَابَ فَاخْتُلِفَ فِيهِ ۚ وَلَوْلَا كَلِمَةٌ سَبَقَتْ مِن رَّبِّكَ لَقُضِيَ بَيْنَهُمْ ۚ وَإِنَّهُمْ لَفِي شَكٍّ مِّنْهُ مُرِيبٍ ١١٠
📖 ಅನುವಾದ
ಆಯತ್ 110
ನಿಶ್ಚಯವಾಗಿಯೂ ನಾವು ಮೂಸರವರಿಗೆ ಗ್ರಂಥವನ್ನು ನೀಡಿದೆವು. ಆನಂತರ ಅದರಲ್ಲಿ ಭಿನ್ನತೆಯನ್ನುಂಟು ಮಾಡಲಾಯಿತು ಮತ್ತು ನಿಮ್ಮ ಪ್ರಭುವಿನ ಕಡೆಯಿಂದ ವಚನವು ಮೊದಲೇ ನಿರ್ಧರಿಸಲಾಗದಿರುತ್ತಿದ್ದರೆ ಖಂಡಿತವಾಗಿಯೂ ಅವರ ನಡುವೆ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು, ಅವರಿಗೆ ಇದರ ಕುರಿತು ಗಂಭೀರ ಸಂಶಯವಿದೆ.
وَإِنَّ كُلًّا لَّمَّا لَيُوَفِّيَنَّهُمْ رَبُّكَ أَعْمَالَهُمْ ۚ إِنَّهُ بِمَا يَعْمَلُونَ خَبِيرٌ ١١١
📖 ಅನುವಾದ
ಆಯತ್ 111
ನಿಶ್ಚಯವಾಗಿಯೂ ಅವರ ಪೈಕಿ ಪ್ರತಿಯೊಬ್ಬರಿಗೂ ನಿಮ್ಮ ಪ್ರಭುವು ಅವರ ಕರ್ಮಗಳ ಪರಿಪೂರ್ಣ ಪ್ರತಿಫಲವನ್ನು ಕೊಟ್ಟೇತೀರುವನು ನಿಸ್ಸಂಶಯವಾಗಿಯೂ ಅವನು ಅವರು ಮಾಡುತ್ತಿರುವುದನ್ನೆಲ್ಲಾ ಸೂಕ್ಷ್ಮವಾಗಿ ಬಲ್ಲವನಾಗಿದ್ದಾನೆ.
فَاسْتَقِمْ كَمَا أُمِرْتَ وَمَن تَابَ مَعَكَ وَلَا تَطْغَوْا ۚ إِنَّهُ بِمَا تَعْمَلُونَ بَصِيرٌ ١١٢
📖 ಅನುವಾದ
ಆಯತ್ 112
ಆದ್ದರಿಂದ ನಿಮಗೆ ಆಜ್ಞಾಪಿಸಿದಂತೆಯೇ ನೀವು ಮತ್ತು ನಿಮ್ಮ ಜೊತೆ ಪಶ್ಚಾತ್ತಾಪ ಹೊಂದಿದವರು ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲಿರಿ. ಮತ್ತು ಹದ್ದು ಮೀರದಿರಿ, ನಿಶ್ಚಯವಾಗಿ ಅಲ್ಲಾಹನು ನೀವು ಮಾಡುವುದನ್ನೆಲ್ಲಾ ನೋಡುವವನಾಗಿದ್ದಾನೆ.
وَلَا تَرْكَنُوا إِلَى الَّذِينَ ظَلَمُوا فَتَمَسَّكُمُ النَّارُ وَمَا لَكُم مِّن دُونِ اللَّهِ مِنْ أَوْلِيَاءَ ثُمَّ لَا تُنصَرُونَ ١١٣
📖 ಅನುವಾದ
ಆಯತ್ 113
ನೀವು ಅಕ್ರಮಿಗಳ ಕಡೆಗೆ ವಾಲಬೇಡಿರಿ, ಅನ್ಯಥಾ ನರಕಾಗ್ನಿಯು ನಿಮಗೂ ತಟ್ಟಿ ಬಿಡುವುದು ಮತ್ತು ಅಲ್ಲಾಹನ ಹೊರತು ನಿಮಗೆ ರಕ್ಷಕ ಮಿತ್ರರಾರು ಇರಲಾರರು. ಮತ್ತು ನಿಮಗೆ ಎಲ್ಲಿಂದಲೂ ಸಹಾಯ ದೊರಕದು.
وَأَقِمِ الصَّلَاةَ طَرَفَيِ النَّهَارِ وَزُلَفًا مِّنَ اللَّيْلِ ۚ إِنَّ الْحَسَنَاتِ يُذْهِبْنَ السَّيِّئَاتِ ۚ ذَٰلِكَ ذِكْرَىٰ لِلذَّاكِرِينَ ١١٤
📖 ಅನುವಾದ
ಆಯತ್ 114
ಹಗಲಿನ ಎರಡು ಕೊನೆಗÀಳಿಗೆ ಮತ್ತು ರಾತ್ರಿಯು ಸ್ವಲ್ಪ ಸಮಯ ಕಳೆದ ಬಳಿಕ ನಮಾಜ್ ಸಂಸ್ಥಾಪಿಸಿರಿ, ನಿಶ್ಚಯವಾಗಿಯೂ ಒಳಿತುಗಳು ಕೆಡುಕುಗಳನ್ನು ಹೋಗಲಾಡಿಸುತ್ತವೆ, ಸ್ಮರಿಸಿಕೊಳ್ಳುವವರಿಗೆ ಇದು ಉಪದೇಶವಾಗಿದೆ.
وَاصْبِرْ فَإِنَّ اللَّهَ لَا يُضِيعُ أَجْرَ الْمُحْسِنِينَ ١١٥
📖 ಅನುವಾದ
ಆಯತ್ 115
ನೀವು ಸಹನೆ ವಹಿಸುತ್ತಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
فَلَوْلَا كَانَ مِنَ الْقُرُونِ مِن قَبْلِكُمْ أُولُو بَقِيَّةٍ يَنْهَوْنَ عَنِ الْفَسَادِ فِي الْأَرْضِ إِلَّا قَلِيلًا مِّمَّنْ أَنجَيْنَا مِنْهُمْ ۗ وَاتَّبَعَ الَّذِينَ ظَلَمُوا مَا أُتْرِفُوا فِيهِ وَكَانُوا مُجْرِمِينَ ١١٦
📖 ಅನುವಾದ
ಆಯತ್ 116
ಭೂಮಿಯಲ್ಲಿ ಕ್ಷೆÆÃಭೆಯಿಂದ ತಡೆಯುವ ಒಂದು ಜನ ವಿಭಾಗವು ನಿಮಗಿಂತ ಮುಂಚಿನ ತಲೆಮಾರುಗಳ ಪೈಕಿ ಏಕೆ ಉಂಟಾಗಲಿಲ್ಲ ? ಆದರೆ ಅವರ ಪೈಕಿ ನಾವು ರಕ್ಷಿಸಿದ ಅಲ್ಪ ಜನರ ಹೊರತು ಅಕ್ರಮಿಗಳಂತೂ ನಿಮಗೆ ನೀಡಲಾದ ಸುಖಾಡಂಬರುಗಳ ಹಿಂದೆಯೇ ಬಿದ್ದರು ಮತ್ತು ಅವರು ಅಪರಾಧಿಗಳಾಗಿದ್ದರು.
وَمَا كَانَ رَبُّكَ لِيُهْلِكَ الْقُرَىٰ بِظُلْمٍ وَأَهْلُهَا مُصْلِحُونَ ١١٧
📖 ಅನುವಾದ
ಆಯತ್ 117
ನಾಡಿನ ನಿವಾಸಿಗಳು ಸುಧಾರಕರಾಗಿರುವಾಗ ನಿಮ್ಮ ಪ್ರಭು ಆ ನಾಡನ್ನು ಅನ್ಯಾಯವಾಗಿ ನಾಶಪಡಿಸುವವನಲ್ಲ.
وَلَوْ شَاءَ رَبُّكَ لَجَعَلَ النَّاسَ أُمَّةً وَاحِدَةً ۖ وَلَا يَزَالُونَ مُخْتَلِفِينَ ١١٨
📖 ಅನುವಾದ
ಆಯತ್ 118
ನಿಮ್ಮ ಪ್ರಭುವು ಇಚ್ಛಿಸಿರುತ್ತಿದ್ದರೆ ಜನರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು ಆದರೆ ಅವರು ಭಿನ್ನತೆಯನ್ನುಂಟು ಮಾಡುವವರಾಗಿಯೇ ಮುಂದುವರಿಯುವರು.
إِلَّا مَن رَّحِمَ رَبُّكَ ۚ وَلِذَٰلِكَ خَلَقَهُمْ ۗ وَتَمَّتْ كَلِمَةُ رَبِّكَ لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ ١١٩
📖 ಅನುವಾದ
ಆಯತ್ 119
ನಿಮ್ಮ ಪ್ರಭುವು ದಯೆ ತೋರಿದವರ ಹೊರತು, ಇದಕ್ಕೋಸ್ಕರವೇ ಅವನು ಅವರನ್ನು ಸೃಷ್ಟಿಸಿರುವನು ನಾನು ಯಕ್ಷ ಮತ್ತು ಮನುಷ್ಯರಿಂದ ನರಕವನ್ನು ತುಂಬಿಯೇ ತೀರುವೆನು ಎಂಬ ನಿಮ್ಮ ಪ್ರಭುವಿನ ಮಾತು ಪೂರ್ಣಗೊಂಡಿದೆ.
وَكُلًّا نَّقُصُّ عَلَيْكَ مِنْ أَنبَاءِ الرُّسُلِ مَا نُثَبِّتُ بِهِ فُؤَادَكَ ۚ وَجَاءَكَ فِي هَٰذِهِ الْحَقُّ وَمَوْعِظَةٌ وَذِكْرَىٰ لِلْمُؤْمِنِينَ ١٢٠
📖 ಅನುವಾದ
ಆಯತ್ 120
ಮತ್ತು ನಾವು ಸಂದೇಶವಾಹಕರ ಸುದ್ದಿಗಳಿಂದ ನಿಮ್ಮ ಹೃದಯಕ್ಕೆ ಬಲ ಪಡಿಸುವಂತಹ ಪ್ರತಿಯೊಂದು ಸುದ್ದಿಯನ್ನು ವಿವರಿಸಿಕೊಡುತ್ತಿದ್ದೇವೆ, ನಿಮ್ಮ ಬಳಿ ಈ ಅಧ್ಯಾಯದಲ್ಲಿ ಸತ್ಯವು ಬಂದಿರುತ್ತದೆ ಮತ್ತು ಇದು ಸತ್ಯ ವಿಶ್ವಾಸಿಗಳಿಗೆ ಸದುದ್ದೇಶವು ಮತ್ತು ಸ್ಮರಣೆಯು ಆಗಿರುತ್ತದೆ.
وَقُل لِّلَّذِينَ لَا يُؤْمِنُونَ اعْمَلُوا عَلَىٰ مَكَانَتِكُمْ إِنَّا عَامِلُونَ ١٢١
📖 ಅನುವಾದ
ಆಯತ್ 121
ಸತ್ಯ ವಿಶ್ವಾಸವನ್ನು ನಿರಾಕರಿಸಿದವರೊಡನೆ ಹೇಳಿರಿ : ನೀವು ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ. ನಾವು ಸಹ ಕಾರ್ಯವೆಸಗುತ್ತಿದ್ದೇವೆ.
وَانتَظِرُوا إِنَّا مُنتَظِرُونَ ١٢٢
📖 ಅನುವಾದ
ಆಯತ್ 122
ಮತ್ತು ನೀವು (ಅಲ್ಲಾಹನ ಆದೇಶವನ್ನು) ನಿರೀಕ್ಷಿಸಿರಿ ಮತ್ತು ನಾವೂ ನಿರೀಕ್ಷಿಸುವೆವು.
وَلِلَّهِ غَيْبُ السَّمَاوَاتِ وَالْأَرْضِ وَإِلَيْهِ يُرْجَعُ الْأَمْرُ كُلُّهُ فَاعْبُدْهُ وَتَوَكَّلْ عَلَيْهِ ۚ وَمَا رَبُّكَ بِغَافِلٍ عَمَّا تَعْمَلُونَ ١٢٣
📖 ಅನುವಾದ
ಆಯತ್ 123
ಆಕಾಶಗಳ ಹಾಗೂ ಭೂಮಿಯ ಅಗೋಚರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ ಸಕಲ ಕಾರ್ಯಗಳು ಅವನೆಡೆಗೇ ಮರಳಿಸಲ್ಪಡುತ್ತವೆ, ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಹಾಗೂ ಅವನ ಮೇಲೆಯೇ ಭರವಸೆಯನ್ನಿಡಿರಿ ಮತ್ತು ನೀವು ಮಾಡುತ್ತಿರುವುದರ ಕುರಿತು ನಿಮ್ಮ ಪ್ರಭು ಅಲಕ್ಷನಲ್ಲ.
ಓದಿ ಸೂರಾ ಹೂದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

