ಸೂರಾ ಅತ್-ತೌಬಾ ಅರೇಬಿಕ್ ಮತ್ತು ಕನ್ನಡ

ಸೂರಾ ಅತ್-ತೌಬಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (129 ಆಯತ್ — مدنية). ಅತ್-ತೌಬಾ ಆಲಿಸಿ, ಅತ್-ತೌಬಾ ಅನುವಾದ, ಅತ್-ತೌಬಾ mp3, ಅತ್-ತೌಬಾ pdf.

ಸೂರಾ ಅತ್-ತೌಬಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
بَرَاءَةٌ مِّنَ اللَّهِ وَرَسُولِهِ إِلَى الَّذِينَ عَاهَدتُّم مِّنَ الْمُشْرِكِينَ ۝١
📖 ಅನುವಾದ ಆಯತ್ 1
(ಓ ಸತ್ಯವಿಶ್ವಾಸಿಗಳೇ) ನೀವು ಒಪ್ಪಂದ ಮಾಡಿಕೊಂಡಿರುವ ಬಹುದೇವ ವಿಶ್ವಾಸಿಗಳಿಗೆ (ಅವರ ಒಪ್ಪಂದ ಉಲ್ಲಂಘನೆಯ ಕಾರಣ) ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಒಪ್ಪಂದ ರದ್ದತಿಯ ಘೋಷಣೆಯಾಗಿದೆ.
فَسِيحُوا فِي الْأَرْضِ أَرْبَعَةَ أَشْهُرٍ وَاعْلَمُوا أَنَّكُمْ غَيْرُ مُعْجِزِي اللَّهِ ۙ وَأَنَّ اللَّهَ مُخْزِي الْكَافِرِينَ ۝٢
📖 ಅನುವಾದ ಆಯತ್ 2
ಆದ್ದರಿಂದ (ಓ ಬಹುದೇವ ಆರಾಧಕರೇ) ನೀವು ಭೂಮಿಯಲ್ಲಿ ನಾಲ್ಕು ತಿಂಗಳ ಕಾಲ ಸಂಚರಿಸಿರಿ. ನೀವು ಅಲ್ಲಾಹನನ್ನು ಸೋಲಿಸುವವರಲ್ಲವೆಂದು ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ಅಪಮಾನಿಸಲಿರುವನೆಂದು ತಿಳಿದುಕೊಳ್ಳಿರಿ.
وَأَذَانٌ مِّنَ اللَّهِ وَرَسُولِهِ إِلَى النَّاسِ يَوْمَ الْحَجِّ الْأَكْبَرِ أَنَّ اللَّهَ بَرِيءٌ مِّنَ الْمُشْرِكِينَ ۙ وَرَسُولُهُ ۚ فَإِن تُبْتُمْ فَهُوَ خَيْرٌ لَّكُمْ ۖ وَإِن تَوَلَّيْتُمْ فَاعْلَمُوا أَنَّكُمْ غَيْرُ مُعْجِزِي اللَّهِ ۗ وَبَشِّرِ الَّذِينَ كَفَرُوا بِعَذَابٍ أَلِيمٍ ۝٣
📖 ಅನುವಾದ ಆಯತ್ 3
ಅಲ್ಲಾಹ್ ಮತ್ತು ಅವನ ಸಂದೇಶವಾಹಕರು (ಒಪ್ಪಂದ ಉಲ್ಲಂಘನೆ ಮಾಡಿರುವ) ಬಹುದೇವರಾಧಕರಿಂದ ಹೊಣೆ ಮುಕ್ತರಾಗಿದ್ದಾರೆ ಎಂದು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಜನರಿಗೆ ಮಹಾಹಜ್ಜ್ನ ದಿನ ಸ್ಪಷ್ಟವಾಗಿ ಸಾರಲಾಗುತ್ತಿರುವ ಘೋಷಣೆಯಿದು. ಇನ್ನು ನೀವು ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಅತ್ಯತ್ತಮವಾಗಿದೆ. ಮತ್ತು ನೀವು ವಿಮುಖರಾಗುವುದಾದರೆ ಅಲ್ಲಾಹನನ್ನು ಪರಾಭವ ಗೊಳಿಸಲು ನಿಮಗೆ ಸಾಧ್ಯವಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ಓ ಪೈಗಂಬರರೇ ಸತ್ಯನಿಷೇಧಿಗಳಿಗೆ ವೇದನಾಜನಕವಾದ ಶಿಕ್ಷೆಯ ಶುಭವಾರ್ತೆಯನ್ನು ತಿಳಿಸಿರಿ.
إِلَّا الَّذِينَ عَاهَدتُّم مِّنَ الْمُشْرِكِينَ ثُمَّ لَمْ يَنقُصُوكُمْ شَيْئًا وَلَمْ يُظَاهِرُوا عَلَيْكُمْ أَحَدًا فَأَتِمُّوا إِلَيْهِمْ عَهْدَهُمْ إِلَىٰ مُدَّتِهِمْ ۚ إِنَّ اللَّهَ يُحِبُّ الْمُتَّقِينَ ۝٤
📖 ಅನುವಾದ ಆಯತ್ 4
ಆದರೆ ಬಹುದೇವರಾಧಕರ ಪೈಕಿ ಯಾರೊಂದಿಗೆ ನಿಮ್ಮ ಒಪ್ಪಂದವಾಗಿರುವವರ ಹೊರತು ಮತ್ತು ಅವರು ನಿಮ್ಮೊಂದಿಗೆ ತಮ್ಮ ಒಪ್ಪಂದದಲ್ಲಿ ಯಾವುದೇ ಲೋಪವನ್ನಾಗಲೀ, ನಿಮ್ಮ ವಿರುದ್ಧ ಯಾರಿಗೂ ಸಹಾಯವನ್ನಾಗಲೀ ಮಾಡುವುದಿಲ್ಲವಾದರೆ ನೀವು ಅವರ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಿರಿ. ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಮೆಚ್ಚುತ್ತಾನೆ.
فَإِذَا انسَلَخَ الْأَشْهُرُ الْحُرُمُ فَاقْتُلُوا الْمُشْرِكِينَ حَيْثُ وَجَدتُّمُوهُمْ وَخُذُوهُمْ وَاحْصُرُوهُمْ وَاقْعُدُوا لَهُمْ كُلَّ مَرْصَدٍ ۚ فَإِن تَابُوا وَأَقَامُوا الصَّلَاةَ وَآتَوُا الزَّكَاةَ فَخَلُّوا سَبِيلَهُمْ ۚ إِنَّ اللَّهَ غَفُورٌ رَّحِيمٌ ۝٥
📖 ಅನುವಾದ ಆಯತ್ 5
ಅನಂತರ ನಿಷಿದ್ಧ ತಿಂಗಳುಗಳು ಮುಗಿದ ಕೂಡಲೇ (ಒಪ್ಪಂದ ಉಲ್ಲಂಘಿಸಿದ ಖುರೈಶ್) ಬಹುದೇವಾರಾದಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ, ಅವರಿಗೆ ಮುತ್ತಿಗೆ ಹಾಕಿರಿ ಮತ್ತು ಅವರನ್ನು ಹಿಡಿಯಲ್ಲಿಕ್ಕಾಗಿ ಪ್ರತಿಯೊಂದು ಹೊಂಚಿನ ಸ್ಥಳದಲ್ಲಿ ಹೊಂಚುಹಾಕಿರಿ. ಇನ್ನು ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ಪಾವತಿಸಿದರೆ ನೀವವರ ದಾರಿಯನ್ನು ಬಿಟ್ಟುಬಿಡಿರಿ. ಖಂಡಿತವಾಗಿಯು ಅಲ್ಲಾಹನು ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
وَإِنْ أَحَدٌ مِّنَ الْمُشْرِكِينَ اسْتَجَارَكَ فَأَجِرْهُ حَتَّىٰ يَسْمَعَ كَلَامَ اللَّهِ ثُمَّ أَبْلِغْهُ مَأْمَنَهُ ۚ ذَٰلِكَ بِأَنَّهُمْ قَوْمٌ لَّا يَعْلَمُونَ ۝٦
📖 ಅನುವಾದ ಆಯತ್ 6
ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮಲ್ಲಿ ಅಭಯ ಕೇಳಿದರೆ ಅವನಿಗೆ ಅಭಯ ಕೊಡಿರಿ. ಅವನು ಅಲ್ಲಾಹನ ವಚನಗಳನ್ನು ಕೇಳಿಕೊಳ್ಳಲಿ ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿಬಿಡಿರಿ. ಇದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.
كَيْفَ يَكُونُ لِلْمُشْرِكِينَ عَهْدٌ عِندَ اللَّهِ وَعِندَ رَسُولِهِ إِلَّا الَّذِينَ عَاهَدتُّمْ عِندَ الْمَسْجِدِ الْحَرَامِ ۖ فَمَا اسْتَقَامُوا لَكُمْ فَاسْتَقِيمُوا لَهُمْ ۚ إِنَّ اللَّهَ يُحِبُّ الْمُتَّقِينَ ۝٧
📖 ಅನುವಾದ ಆಯತ್ 7
ಮಸ್ಜಿದುಲ್ ಹರಾಮ್‌ನ ಬಳಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಬಳಿ (ಕರಾರು ಉಲ್ಲಂಘನೆ ಮಾಡಿದ) ಬಹುದೇವಾರಾಧಕರಿಗೆ ಕರಾರು ನೆಲೆನಿಲ್ಲುವುದಾದರೂ ಹೇಗೆ? ಅವರು ನಿಮ್ಮೊಂದಿಗೆ ಕರಾರನ್ನು ಪಾಲಿಸುವ ತನಕ ನೀವು ಅವರೊಂದಿಗೆ ಕರಾರನ್ನು ಪಾಲಿಸಿರಿ. ಖಂಡಿತವಾಗಿಯು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.
كَيْفَ وَإِن يَظْهَرُوا عَلَيْكُمْ لَا يَرْقُبُوا فِيكُمْ إِلًّا وَلَا ذِمَّةً ۚ يُرْضُونَكُم بِأَفْوَاهِهِمْ وَتَأْبَىٰ قُلُوبُهُمْ وَأَكْثَرُهُمْ فَاسِقُونَ ۝٨
📖 ಅನುವಾದ ಆಯತ್ 8
ಅವರೊಂದಿಗೆ (ಯಹೂದರೊಂದಿಗೆ) ಕರಾರು ಮಾಡುವುದಾದರು ಹೇಗೆ? ಅವರು ನಿಮ್ಮ ಮೇಲೆ ಜಯಸಾಧಿಸುವುದಾದರೆ ಕುಟುಂಬ ಸಂಬAಧವನ್ನಾಗಲಿ ಕರಾರು ಒಪ್ಪಂದಗಳನ್ನಾಗಲಿ ಅವರು ಲೆಕ್ಕಿಸಲಾರರು. ಅವರು ಬಾಯಿ ಮಾತಿನಿಂದಲೇ ನಿಮ್ಮನ್ನು ಒಲಿಸಲು ಯತ್ನಿಸುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರ ಪೈಕಿ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
اشْتَرَوْا بِآيَاتِ اللَّهِ ثَمَنًا قَلِيلًا فَصَدُّوا عَن سَبِيلِهِ ۚ إِنَّهُمْ سَاءَ مَا كَانُوا يَعْمَلُونَ ۝٩
📖 ಅನುವಾದ ಆಯತ್ 9
ಅವರು ಅಲ್ಲಾಹನ ಸೂಕ್ತಿಗಳನ್ನು ತುಚ್ಛ ಬೆಲೆಗೆ ಮಾರಿದರು, ಹಾಗೂ ಅವನ ಮಾರ್ಗದಿಂದ ಜನರನ್ನು ತಡೆದರು. ಅವರು ಮಾಡುತ್ತಿರುವುದು ಅತ್ಯಂತ ನಿಕೃಷ್ಟವಾಗಿದೆ.
لَا يَرْقُبُونَ فِي مُؤْمِنٍ إِلًّا وَلَا ذِمَّةً ۚ وَأُولَٰئِكَ هُمُ الْمُعْتَدُونَ ۝١٠
📖 ಅನುವಾದ ಆಯತ್ 10
ಯಾವೊಬ್ಬ ವಿಶ್ವಾಸಿಯ ವಿಚಾರದಲ್ಲಿ ಅವರು ಕುಟುಂಬ ಸಂಬAಧವನ್ನಾಗಲಿ, ಕರಾರನ್ನಾಗಲಿ ಪರಿಗಣಿಸಲಾರರು ಅವರೇ ಅಕ್ರಮಿಗಳಾಗಿರುವರು.
فَإِن تَابُوا وَأَقَامُوا الصَّلَاةَ وَآتَوُا الزَّكَاةَ فَإِخْوَانُكُمْ فِي الدِّينِ ۗ وَنُفَصِّلُ الْآيَاتِ لِقَوْمٍ يَعْلَمُونَ ۝١١
📖 ಅನುವಾದ ಆಯತ್ 11
ಅವರೇನಾದರೂ ಪಶ್ಚಾತ್ತಾಪ ಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ನಾವು ಅರಿತುಕೊಳ್ಳುವ ಜನರಿಗೆ ನಮ್ಮ ದೃಷ್ಟಾಂತಗಳನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತೇವೆ.
وَإِن نَّكَثُوا أَيْمَانَهُم مِّن بَعْدِ عَهْدِهِمْ وَطَعَنُوا فِي دِينِكُمْ فَقَاتِلُوا أَئِمَّةَ الْكُفْرِ ۙ إِنَّهُمْ لَا أَيْمَانَ لَهُمْ لَعَلَّهُمْ يَنتَهُونَ ۝١٢
📖 ಅನುವಾದ ಆಯತ್ 12
ಇನ್ನು ಅವರು ಒಪ್ಪಂದದ ನಂತರವೂ ತಮ್ಮ ಶಪಥಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ ನೀವು ಸತ್ಯನಿಷೇಧಿ ಮುಖಂಡರೊAದಿಗೆ ಯುದ್ಧ ಹೂಡಿರಿ. ಅವರ ಶಪಥಗಳಿಗೆ ಯಾವ ಬೆಲೆಯಿಲ್ಲ. ಅವರು ತಮ್ಮ ಕುತಂತ್ರಗಳಿAದ ಹಿಂದೆ ಸರಿಯಬಹುದು.
أَلَا تُقَاتِلُونَ قَوْمًا نَّكَثُوا أَيْمَانَهُمْ وَهَمُّوا بِإِخْرَاجِ الرَّسُولِ وَهُم بَدَءُوكُمْ أَوَّلَ مَرَّةٍ ۚ أَتَخْشَوْنَهُمْ ۚ فَاللَّهُ أَحَقُّ أَن تَخْشَوْهُ إِن كُنتُم مُّؤْمِنِينَ ۝١٣
📖 ಅನುವಾದ ಆಯತ್ 13
ಓ ಸತ್ಯನಿಷೇಧಿಗಳೇ ತಮ್ಮ ಶಪಥಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಗಡಿಪಾರು ಮಾಡಲುದ್ದೇಶಿಸಿದ ಒಂದು ಜನತೆಯೊಂದಿಗೆ ನೀವು ಯುದ್ಧ ಮಾಡಲಾರಿರೇ? ಅವರೇ ಮೊತ್ತಮೊದಲಿಗೆ ನಿಮ್ಮೊಂದಿಗೆ ಯುದ್ಧವನ್ನು ಆರಂಭಿಸಿದವರು. ನೀವು ಅವರನ್ನು ಭಯಪಡುತ್ತಿದ್ದೀರಾ? ನೀವು ಭಯವನ್ನಿರಿಸಿಕೊಳ್ಳಲು ಅಲ್ಲಾಹನೇ ಹೆಚ್ಚು ಅರ್ಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
قَاتِلُوهُمْ يُعَذِّبْهُمُ اللَّهُ بِأَيْدِيكُمْ وَيُخْزِهِمْ وَيَنصُرْكُمْ عَلَيْهِمْ وَيَشْفِ صُدُورَ قَوْمٍ مُّؤْمِنِينَ ۝١٤
📖 ಅನುವಾದ ಆಯತ್ 14
ನೀವು ಅವರೊಂದಿಗೆ ಯುದ್ಧ ಮಾಡಿರಿ. ಅಲ್ಲಾಹನು ನಿಮ್ಮ ಕೈಯಿಂದ ಅವರನ್ನು ಶಿಕ್ಷಿಸುವನು, ಅವರನ್ನು ನಿಂದ್ಯರನ್ನಾಗಿಸುವನು, ಅವರ ವಿರುದ್ಧ ನಿಮಗೆ ಸಹಾಯ ಮಾಡುವನು ಮತ್ತು ಅವನು ವಿಶ್ವಾಸಿಗಳ ಹೃದಯಗಳನ್ನು ತಣಿಸಿಬಿಡುವನು.
وَيُذْهِبْ غَيْظَ قُلُوبِهِمْ ۗ وَيَتُوبُ اللَّهُ عَلَىٰ مَن يَشَاءُ ۗ وَاللَّهُ عَلِيمٌ حَكِيمٌ ۝١٥
📖 ಅನುವಾದ ಆಯತ್ 15
ಅವನು ಅವರ ಹೃದಯಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಮತ್ತು ಅವನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನು ಆಗಿದ್ದಾನೆ.
أَمْ حَسِبْتُمْ أَن تُتْرَكُوا وَلَمَّا يَعْلَمِ اللَّهُ الَّذِينَ جَاهَدُوا مِنكُمْ وَلَمْ يَتَّخِذُوا مِن دُونِ اللَّهِ وَلَا رَسُولِهِ وَلَا الْمُؤْمِنِينَ وَلِيجَةً ۚ وَاللَّهُ خَبِيرٌ بِمَا تَعْمَلُونَ ۝١٦
📖 ಅನುವಾದ ಆಯತ್ 16
ನಿಮ್ಮ ಪೈಕಿ ಯುದ್ಧ ಮಾಡಿದವರನ್ನೂ, ಅಲ್ಲಾಹ್ ಮತ್ತು ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳ ಹೊರತು ಇನ್ನಾರನ್ನೂ ಆಪ್ತಮಿತ್ರರನ್ನಾಗಿ ಮಾಡದವರನ್ನೂ ಅಲ್ಲಾಹನು ಅರಿಯದೆ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ತಿಳಿದುಕೊಂಡಿರುವಿರಾ? ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷö್ಮವಾಗಿ ಅರಿಯುವವನಾಗಿದ್ದಾನೆ.
مَا كَانَ لِلْمُشْرِكِينَ أَن يَعْمُرُوا مَسَاجِدَ اللَّهِ شَاهِدِينَ عَلَىٰ أَنفُسِهِم بِالْكُفْرِ ۚ أُولَٰئِكَ حَبِطَتْ أَعْمَالُهُمْ وَفِي النَّارِ هُمْ خَالِدُونَ ۝١٧
📖 ಅನುವಾದ ಆಯತ್ 17
ಸತ್ಯನಿಷೇಧಕ್ಕೆ ಸ್ವಯಂ ತಾವೇ ಸಾಕ್ಷಿಗಳಾಗಿರುವ ಬಹುದೇವಾರಾಧಕರಿಗೆ ಅಲ್ಲಾಹನ ಮಸೀದಿಗಳ ಪರಿಪಾಲನೆಯು ಭೂಷಣವಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿರುವರು.
إِنَّمَا يَعْمُرُ مَسَاجِدَ اللَّهِ مَنْ آمَنَ بِاللَّهِ وَالْيَوْمِ الْآخِرِ وَأَقَامَ الصَّلَاةَ وَآتَى الزَّكَاةَ وَلَمْ يَخْشَ إِلَّا اللَّهَ ۖ فَعَسَىٰ أُولَٰئِكَ أَن يَكُونُوا مِنَ الْمُهْتَدِينَ ۝١٨
📖 ಅನುವಾದ ಆಯತ್ 18
ಯಾರು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುತ್ತಾರೋ, ನಮಾಝನ್ನು ಸಂಸ್ಥಾಪಿಸುತ್ತಾರೋ, ಝಕಾತ್ ನೀಡುತ್ತಾರೋ ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಭಯಪಡುವುದಿಲ್ಲವೋ ಅಂತಹವರೇ ಅಲ್ಲಾಹನ ಮಸೀದಿಗಳ ಪರಿಪಾಲನೆಯ ಹಕ್ಕುದಾರರಾಗಿರುವರು. ಖಂಡಿತವಾಗಿಯೂ ಅವರೇ ಸನ್ಮಾರ್ಗ ಪ್ರಾಪ್ತರು.
۞ أَجَعَلْتُمْ سِقَايَةَ الْحَاجِّ وَعِمَارَةَ الْمَسْجِدِ الْحَرَامِ كَمَنْ آمَنَ بِاللَّهِ وَالْيَوْمِ الْآخِرِ وَجَاهَدَ فِي سَبِيلِ اللَّهِ ۚ لَا يَسْتَوُونَ عِندَ اللَّهِ ۗ وَاللَّهُ لَا يَهْدِي الْقَوْمَ الظَّالِمِينَ ۝١٩
📖 ಅನುವಾದ ಆಯತ್ 19
ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದನ್ನೂ, ಮಸ್ಜಿದುಲ್ ಹರಾಮ್‌ನ ಸೇವೆ ಮಾಡುವುದನ್ನು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಟ್ಟ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರುವ ಒಬ್ಬನಿಗೆ ನೀವು ಸಮಾನಗೊಳಿಸುವಿರಾ? ಅವರು ಅಲ್ಲಾಹನ ಬಳಿ ಸಮಾನರಾಗುವುದಿಲ್ಲ. ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗ ಕರುಣಿಸುವುದಿಲ್ಲ.
الَّذِينَ آمَنُوا وَهَاجَرُوا وَجَاهَدُوا فِي سَبِيلِ اللَّهِ بِأَمْوَالِهِمْ وَأَنفُسِهِمْ أَعْظَمُ دَرَجَةً عِندَ اللَّهِ ۚ وَأُولَٰئِكَ هُمُ الْفَائِزُونَ ۝٢٠
📖 ಅನುವಾದ ಆಯತ್ 20
ಸತ್ಯವಿಶ್ವಾಸವಿಟ್ಟು ವಲಸೆ ಹೋದವರು ಮತ್ತು ಅಲ್ಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತಿನಿAದಲೂ ಶರೀರಗಳಿಂದಲೂ ಯುದ್ಧ ಮಾಡಿರುವವರು ಅಲ್ಲಾಹನ ಬಳಿ ಅತ್ಯುನ್ನತ ಪದವಿಯುಳ್ಳವರಾಗಿದ್ದಾರೆ. ಮತ್ತು ಅವರೇ ಯಶಸ್ಸು ಪಡೆಯುವವರಾಗಿದ್ದಾರೆ.
يُبَشِّرُهُمْ رَبُّهُم بِرَحْمَةٍ مِّنْهُ وَرِضْوَانٍ وَجَنَّاتٍ لَّهُمْ فِيهَا نَعِيمٌ مُّقِيمٌ ۝٢١
📖 ಅನುವಾದ ಆಯತ್ 21
ಅವರಿಗೆ ಅವರ ಪ್ರಭೂ ತನ್ನ ಕಾರುಣ್ಯ, ಸಂತೃಪ್ತಿ ಮತ್ತು ಸ್ವರ್ಗೋದ್ಯಾನಗಳ ಶುಭವಾರ್ತೆಯನ್ನು ತಿಳಿಸುವನು. ಅವರಿಗೆ ಅಲ್ಲಿ ಶಾಶ್ವತ ಅನುಗ್ರಹವಿದೆ.
خَالِدِينَ فِيهَا أَبَدًا ۚ إِنَّ اللَّهَ عِندَهُ أَجْرٌ عَظِيمٌ ۝٢٢
📖 ಅನುವಾದ ಆಯತ್ 22
ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಖಂಡಿತವಾಗಿಯು ಅಲ್ಲಾಹನ ಬಳಿ ಮಹಾಪ್ರತಿಫಲವಿದೆ.
يَا أَيُّهَا الَّذِينَ آمَنُوا لَا تَتَّخِذُوا آبَاءَكُمْ وَإِخْوَانَكُمْ أَوْلِيَاءَ إِنِ اسْتَحَبُّوا الْكُفْرَ عَلَى الْإِيمَانِ ۚ وَمَن يَتَوَلَّهُم مِّنكُمْ فَأُولَٰئِكَ هُمُ الظَّالِمُونَ ۝٢٣
📖 ಅನುವಾದ ಆಯತ್ 23
ಓ ಸತ್ಯವಿಶ್ವಾಸಿಗಳೇ, ನಿಮ್ಮ ತಂದೆ ತಾತಂದಿರನ್ನೂ, ನಿಮ್ಮ ಸಹೋದರರನ್ನೂ ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಇಷ್ಟಪಟ್ಟರೆ ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರು ಅವರನ್ನು ಮಿತ್ರರನ್ನಾಗಿ ಮಾಡಿಕೊಂಡರೆ ಅವರೇ ಅಕ್ರಮಿಗಳಾಗಿದ್ದಾರೆ.
قُلْ إِن كَانَ آبَاؤُكُمْ وَأَبْنَاؤُكُمْ وَإِخْوَانُكُمْ وَأَزْوَاجُكُمْ وَعَشِيرَتُكُمْ وَأَمْوَالٌ اقْتَرَفْتُمُوهَا وَتِجَارَةٌ تَخْشَوْنَ كَسَادَهَا وَمَسَاكِنُ تَرْضَوْنَهَا أَحَبَّ إِلَيْكُم مِّنَ اللَّهِ وَرَسُولِهِ وَجِهَادٍ فِي سَبِيلِهِ فَتَرَبَّصُوا حَتَّىٰ يَأْتِيَ اللَّهُ بِأَمْرِهِ ۗ وَاللَّهُ لَا يَهْدِي الْقَوْمَ الْفَاسِقِينَ ۝٢٤
📖 ಅನುವಾದ ಆಯತ್ 24
ಹೇಳಿರಿ: ನಿಮ್ಮ ತಂದೆ ತಾತಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಕುಟುಂಬದವರು, ನೀವು ಸಂಪಾದಿಸಿರುವ ಸಂಪತ್ತುಗಳು, ನಷ್ಟವುಂಟಾಗಬಹುದೆAದು ಭಯಪಡುವ ವ್ಯಾಪಾರ ಮತ್ತು ನೀವು ತೃಪ್ತಿ ಪಡುವ ವಸತಿಗಳು; ನಿಮಗೆ ಅಲ್ಲಾಹನಿಗಿಂತಲೂ, ಅವನ ಸಂದೇಶವಾಹಕರಿಗಿAತಲೂ, ಅವನ ಮಾರ್ಗದಲ್ಲಿ ಹೋರಾಡುವುದಕ್ಕಿಂತಲೂ ಹೆಚ್ಚು ಪ್ರಿಯವಾಗಿದ್ದರೆ ಅಲ್ಲಾಹನು ತನ್ನ ಶಿಕ್ಷೆಯನ್ನು ಜಾರಿಗೆ ತರುವವರೆಗೆ ನೀವು ಕಾಯುತ್ತಿರಿ. ಧಿಕ್ಕಾರಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗವನ್ನು ಕರುಣಿಸುವುದಿಲ್ಲ.
لَقَدْ نَصَرَكُمُ اللَّهُ فِي مَوَاطِنَ كَثِيرَةٍ ۙ وَيَوْمَ حُنَيْنٍ ۙ إِذْ أَعْجَبَتْكُمْ كَثْرَتُكُمْ فَلَمْ تُغْنِ عَنكُمْ شَيْئًا وَضَاقَتْ عَلَيْكُمُ الْأَرْضُ بِمَا رَحُبَتْ ثُمَّ وَلَّيْتُم مُّدْبِرِينَ ۝٢٥
📖 ಅನುವಾದ ಆಯತ್ 25
ಖಂಡಿತವಾಗಿಯು ಅಲ್ಲಾಹನು ಅನೇಕ ರಣರಂಗಗಳಲ್ಲಿ ನಿಮಗೆ ಸಹಾಯವನ್ನು ಮಾಡಿದ್ದಾನೆ. ಮತ್ತು ಹುನೈನ್ ಕಾಳಗದ ದಿನ ನಿಮಗೆ ನಿಮ್ಮ ಅಧಿಕ ಸಂಖ್ಯೆಯು ಅಭಿಮಾನ ಪಡುವಂತೆ ಮಾಡಿತು. ಆದರೆ ಅದು ನಿಮಗೆ ಯಾವುದೇ ಪ್ರಯೋಜನವನ್ನೂ ನೀಡಲಿಲ್ಲ. ಮಾತ್ರವಲ್ಲ ಭೂಮಿಯು ವಿಶಾಲವಾಗಿದ್ದರೂ ನಿಮ್ಮ ಪಾಲಿಗೆ ಇಕ್ಕಟ್ಟಾಗಿ ಪರಿಣಮಿಸಿತು. ನಂತರ ನೀವು ಬೆನ್ನು ತಿರುಗಿಸಿ ಓಡಿದಿರಿ.
ثُمَّ أَنزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَنزَلَ جُنُودًا لَّمْ تَرَوْهَا وَعَذَّبَ الَّذِينَ كَفَرُوا ۚ وَذَٰلِكَ جَزَاءُ الْكَافِرِينَ ۝٢٦
📖 ಅನುವಾದ ಆಯತ್ 26
ನಂತರ ಅಲ್ಲಾಹನು ತನ್ನ ಕಡೆಯಿಂದ ತನ್ನ ಸಂದೇಶವಾಹಕರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಮನಃಶಾಂತಿಯನ್ನು ಇಳಿಸಿದನು ಮತ್ತು ನೀವು ನೋಡಲು ಸಾಧ್ಯವಿಲ್ಲದಂತಹ ಕೆಲವು ಸೈನ್ಯಗಳನ್ನೂ ಇಳಿಸಿದನು ಮತ್ತು ಅವನು ಸತ್ಯನಿಷೇಧಿಗಳನ್ನು ಪರಿಪೂರ್ಣವಾಗಿ ಶಿಕ್ಷಿಸಿದನು. ಆ ಸತ್ಯನಿಷೇಧಿಗಳಿಗಿರುವ ಪ್ರತಿಕಾರವು ಇದೇ ಆಗಿದೆ.
ثُمَّ يَتُوبُ اللَّهُ مِن بَعْدِ ذَٰلِكَ عَلَىٰ مَن يَشَاءُ ۗ وَاللَّهُ غَفُورٌ رَّحِيمٌ ۝٢٧
📖 ಅನುವಾದ ಆಯತ್ 27
ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.
يَا أَيُّهَا الَّذِينَ آمَنُوا إِنَّمَا الْمُشْرِكُونَ نَجَسٌ فَلَا يَقْرَبُوا الْمَسْجِدَ الْحَرَامَ بَعْدَ عَامِهِمْ هَٰذَا ۚ وَإِنْ خِفْتُمْ عَيْلَةً فَسَوْفَ يُغْنِيكُمُ اللَّهُ مِن فَضْلِهِ إِن شَاءَ ۚ إِنَّ اللَّهَ عَلِيمٌ حَكِيمٌ ۝٢٨
📖 ಅನುವಾದ ಆಯತ್ 28
ಓ ಸತ್ಯವಿಶ್ವಾಸಿಗಳೇ, ನಿಸ್ಸಂಶಯವಾಗಿಯು ಬಹುದೇವವಿಶ್ವಾಸಿಗಳು ಮಲಿನರಾಗಿದ್ದಾರೆ. ಆದ್ದರಿಂದ ಅವರು ಈ ವರ್ಷದ ಬಳಿಕ ಮಸ್ಜಿದುಲ್ ಹರಾಮ್‌ನ ಸಮೀಪಕ್ಕು ಬರದಿರಲಿ. ನಿಮಗೆ ದಾರಿದ್ರö್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನಗೊಳಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
قَاتِلُوا الَّذِينَ لَا يُؤْمِنُونَ بِاللَّهِ وَلَا بِالْيَوْمِ الْآخِرِ وَلَا يُحَرِّمُونَ مَا حَرَّمَ اللَّهُ وَرَسُولُهُ وَلَا يَدِينُونَ دِينَ الْحَقِّ مِنَ الَّذِينَ أُوتُوا الْكِتَابَ حَتَّىٰ يُعْطُوا الْجِزْيَةَ عَن يَدٍ وَهُمْ صَاغِرُونَ ۝٢٩
📖 ಅನುವಾದ ಆಯತ್ 29
ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.
وَقَالَتِ الْيَهُودُ عُزَيْرٌ ابْنُ اللَّهِ وَقَالَتِ النَّصَارَى الْمَسِيحُ ابْنُ اللَّهِ ۖ ذَٰلِكَ قَوْلُهُم بِأَفْوَاهِهِمْ ۖ يُضَاهِئُونَ قَوْلَ الَّذِينَ كَفَرُوا مِن قَبْلُ ۚ قَاتَلَهُمُ اللَّهُ ۚ أَنَّىٰ يُؤْفَكُونَ ۝٣٠
📖 ಅನುವಾದ ಆಯತ್ 30
ಉಝೈರ್ ಅಲ್ಲಾಹನ ಪುತ್ರನೆಂದು ಯಹೂದರು ಹೇಳುತ್ತಾರೆ. ಮತ್ತು ಕ್ರೆöÊಸ್ತರು: ಮಸೀಹ ಅಲ್ಲಾಹನ ಪುತ್ರನೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು ಮಾತ್ರ. ಹಿಂದಿನ ಸತ್ಯನಿಷೇಧಿಗಳ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹನು ಅವರನ್ನು ನಾಶಗೊಳಿಸಲಿ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ.
اتَّخَذُوا أَحْبَارَهُمْ وَرُهْبَانَهُمْ أَرْبَابًا مِّن دُونِ اللَّهِ وَالْمَسِيحَ ابْنَ مَرْيَمَ وَمَا أُمِرُوا إِلَّا لِيَعْبُدُوا إِلَٰهًا وَاحِدًا ۖ لَّا إِلَٰهَ إِلَّا هُوَ ۚ سُبْحَانَهُ عَمَّا يُشْرِكُونَ ۝٣١
📖 ಅನುವಾದ ಆಯತ್ 31
ಅವರು (ಕ್ರೆöÊಸ್ತರು) ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ, ಸನ್ಯಾಸಿಗಳನ್ನೂ ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಮರ್ಯಮರ ಪುತ್ರನಾದ ಮಸೀಹರನ್ನು ಸಹ, ವಸ್ತುತಃ ಅವರಿಗೆ ಕೇವಲ ಏಕೈಕ ಆರಾಧ್ಯನ ಆರಾಧನೆಯ ಆದೇಶ ನೀಡಲಾಗಿತ್ತು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅವನು ಪರಿಶುದ್ಧನಾಗಿದ್ದಾನೆ.
يُرِيدُونَ أَن يُطْفِئُوا نُورَ اللَّهِ بِأَفْوَاهِهِمْ وَيَأْبَى اللَّهُ إِلَّا أَن يُتِمَّ نُورَهُ وَلَوْ كَرِهَ الْكَافِرُونَ ۝٣٢
📖 ಅನುವಾದ ಆಯತ್ 32
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸಲು ಬಯಸುತ್ತಾರೆ ಮತ್ತು ಅಲ್ಲಾಹು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸಿಯೇ ಇರುವರು; ಸತ್ಯನಿಷೇಧಿಗಳು ಇಷ್ಟಪಡದಿದ್ದರೂ ಸರಿಯೇ.
هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ وَلَوْ كَرِهَ الْمُشْرِكُونَ ۝٣٣
📖 ಅನುವಾದ ಆಯತ್ 33
ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದ್ದಾನೆ, ಅದನ್ನು ಇತರೆಲ್ಲಾ ಧರ್ಮಗಳ ಮೇಲೆ ವಿಜಯಸಾಧಿಸಲೆಂದಾಗಿದೆ. ಬಹುದೇವವಿಶ್ವಾಸಿಗಳು ಇಷ್ಟಪಡದಿದ್ದರೂ ಸರಿಯೇ.
۞ يَا أَيُّهَا الَّذِينَ آمَنُوا إِنَّ كَثِيرًا مِّنَ الْأَحْبَارِ وَالرُّهْبَانِ لَيَأْكُلُونَ أَمْوَالَ النَّاسِ بِالْبَاطِلِ وَيَصُدُّونَ عَن سَبِيلِ اللَّهِ ۗ وَالَّذِينَ يَكْنِزُونَ الذَّهَبَ وَالْفِضَّةَ وَلَا يُنفِقُونَهَا فِي سَبِيلِ اللَّهِ فَبَشِّرْهُم بِعَذَابٍ أَلِيمٍ ۝٣٤
📖 ಅನುವಾದ ಆಯತ್ 34
ಓ ಸತ್ಯವಿಶ್ವಾಸಿಗಳೇ, ಹೆಚ್ಚಿನ ವಿದ್ವಾಂಸರು, ಪುರೋಹಿತರು ಜನರ ಸಂಪತ್ತನ್ನು ಅನ್ಯಾಯವಾಗಿ ತಿನ್ನುವವರಾಗಿದ್ದಾರೆ. ಹಾಗೂ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಬೆಳ್ಳಿಗಳ ಭಂಡಾರವನ್ನು ಸಂಗ್ರಹಿಸುತ್ತಾರೋ ಮತ್ತು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ವೇದನಾಜಕವಾದ ಶಿಕ್ಷೆಯ ಶುಭವಾರ್ತೆಯನ್ನು ತಿಳಿಸಿರಿ.
يَوْمَ يُحْمَىٰ عَلَيْهَا فِي نَارِ جَهَنَّمَ فَتُكْوَىٰ بِهَا جِبَاهُهُمْ وَجُنُوبُهُمْ وَظُهُورُهُمْ ۖ هَٰذَا مَا كَنَزْتُمْ لِأَنفُسِكُمْ فَذُوقُوا مَا كُنتُمْ تَكْنِزُونَ ۝٣٥
📖 ಅನುವಾದ ಆಯತ್ 35
ಬೆಳ್ಳಿಬಂಗಾರವನ್ನು ನರಕಾಗ್ನಿಯಲ್ಲಿ ಕಾಯಿಸಲಾಗುವ ಮತ್ತು ಅದನ್ನು ಅವರ ಹಣೆಗಳ, ಪಾರ್ಶ್ವಗಳ ಮತ್ತು ಬೆನ್ನುಗಳ ಮೇಲೆ ಬರೆಯೆಳೆಯಲಾಗುವ ದಿನ (ಹೇಳಲಾಗುವುದು): ಇದು ನೀವು ತಮಗೋಸ್ಕರ ಸಂಗ್ರಹಿಸುತ್ತಿದ್ದ ಸಂಪತ್ತಾಗಿದೆ. ಇನ್ನು ನೀವು ಸಂಗ್ರಹಿಸುತ್ತಿದ್ದ ಸಂಪತ್ತಿನ ರುಚಿಯನ್ನು ಸವಿಯಿರಿ.
إِنَّ عِدَّةَ الشُّهُورِ عِندَ اللَّهِ اثْنَا عَشَرَ شَهْرًا فِي كِتَابِ اللَّهِ يَوْمَ خَلَقَ السَّمَاوَاتِ وَالْأَرْضَ مِنْهَا أَرْبَعَةٌ حُرُمٌ ۚ ذَٰلِكَ الدِّينُ الْقَيِّمُ ۚ فَلَا تَظْلِمُوا فِيهِنَّ أَنفُسَكُمْ ۚ وَقَاتِلُوا الْمُشْرِكِينَ كَافَّةً كَمَا يُقَاتِلُونَكُمْ كَافَّةً ۚ وَاعْلَمُوا أَنَّ اللَّهَ مَعَ الْمُتَّقِينَ ۝٣٦
📖 ಅನುವಾದ ಆಯತ್ 36
ಆಕಾಶಗಳನ್ನೂ, ಭೂಮಿಗಳನ್ನೂ ಸೃಷ್ಟಿಸಿದ ದಿನದಿಂದಲೇ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆಯು ಅವನ ದಾಖಲೆಯಲ್ಲಿ ಹನ್ನೆರಡಾಗಿವೆ; ಅವುಗಳ ಪೈಕಿ ನಾಲ್ಕು ಆದರಣೀಯವುಗಳು ಇದುವೇ ಸರಿಯಾದ ಧರ್ಮವಾಗಿದೆ. ನೀವು ಈ ತಿಂಗಳುಗಳಲ್ಲಿ ಸ್ವತಃ ನಿಮ್ಮ ಮೇಲೆಯೇ ಅಕ್ರಮವೆಸಗಬಾರದು ಮತ್ತು ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಿದಂತೆ ನೀವು ಒಟ್ಟಾಗಿ ಯುದ್ಧ ಮಾಡಿರಿ ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರ ಜೊತೆಗಿದ್ದಾನೆಂಬುದನ್ನು ಅರಿತುಕೊಳ್ಳಿರಿ.
إِنَّمَا النَّسِيءُ زِيَادَةٌ فِي الْكُفْرِ ۖ يُضَلُّ بِهِ الَّذِينَ كَفَرُوا يُحِلُّونَهُ عَامًا وَيُحَرِّمُونَهُ عَامًا لِّيُوَاطِئُوا عِدَّةَ مَا حَرَّمَ اللَّهُ فَيُحِلُّوا مَا حَرَّمَ اللَّهُ ۚ زُيِّنَ لَهُمْ سُوءُ أَعْمَالِهِمْ ۗ وَاللَّهُ لَا يَهْدِي الْقَوْمَ الْكَافِرِينَ ۝٣٧
📖 ಅನುವಾದ ಆಯತ್ 37
ಆದರಣೀಯ ತಿಂಗಳುಗಳನ್ನು ಹಿಂದೆ ಮುಂದೆ ಮಾಡುವುದು ಸತ್ಯನಿಷೇಧದಲ್ಲಿ ಹೆಚ್ಚಳವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಪಥ ಭ್ರಷ್ಟತೆಗೊಳಿಸಲೆಂದಾಗಿದೆ. ಮತ್ತು ಒಂದು ವರ್ಷ ಒಂದು ಆದರಣಿಯ ತಿಂಗಳನ್ನು ಧರ್ಮಸಮ್ಮತಗೊಳಿಸುತ್ತಾರೆ. ಮತ್ತೊಂದು ವರ್ಷ ಅದನ್ನು ನಿಷಿದ್ಧಗೊಳಿಸುತ್ತಾರೆ. ಅಲ್ಲಾಹನು ಪವಿತ್ರಗೊಳಿಸಿದ ಮಾಸವನ್ನು ಗಣನೆಯಲ್ಲಿ ಸರಿಹೊಂದಿಸಿ ಅನಂತರ ಅವರು ಅಲ್ಲಾಹನು ನಿಷಿದ್ಧಗೊಳಿಸಿದುದನ್ನು ಧರ್ಮ ಸಮ್ಮತಗೊಳಿಸಲೆಂದಾಗಿದೆ. ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಲಾಗಿದೆ. ಮತ್ತು ಸತ್ಯನಿಷೇಧಿ ಜನತೆಯನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.
يَا أَيُّهَا الَّذِينَ آمَنُوا مَا لَكُمْ إِذَا قِيلَ لَكُمُ انفِرُوا فِي سَبِيلِ اللَّهِ اثَّاقَلْتُمْ إِلَى الْأَرْضِ ۚ أَرَضِيتُم بِالْحَيَاةِ الدُّنْيَا مِنَ الْآخِرَةِ ۚ فَمَا مَتَاعُ الْحَيَاةِ الدُّنْيَا فِي الْآخِرَةِ إِلَّا قَلِيلٌ ۝٣٨
📖 ಅನುವಾದ ಆಯತ್ 38
ಓ ಸತ್ಯವಿಶ್ವಾಸಿಗಳೇ, ನಿಮಗೇನಾಗಿ ಬಿಟ್ಟಿದೆ? ‘ಅಲ್ಲಾಹನ ಮಾರ್ಗದಲ್ಲಿ (ಅನ್ಯಾಯ ವಿರುದ್ಧ) ಹೋರಡಿರಿ' ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ಪರಲೋಕದ ಬದಲಿಗೆ ಐಹಿಕ ಜೀವನವನ್ನು ನೆಚ್ಚಿಕೊಂಡಿದ್ದೀರಾ? ತಿಳಿಯಿರಿ! ಐಹಿಕ ಜೀವನವು ಪರಲೋಕದ ಮುಂದೆ ಅತಿತುಚ್ಛವಾಗಿದೆ.
إِلَّا تَنفِرُوا يُعَذِّبْكُمْ عَذَابًا أَلِيمًا وَيَسْتَبْدِلْ قَوْمًا غَيْرَكُمْ وَلَا تَضُرُّوهُ شَيْئًا ۗ وَاللَّهُ عَلَىٰ كُلِّ شَيْءٍ قَدِيرٌ ۝٣٩
📖 ಅನುವಾದ ಆಯತ್ 39
ನೀವು (ಅತ್ಯಾಚಾರದ ವಿರುದ್ಧ) ಹೋರಾಡದಿದ್ದರೆ ಅಲ್ಲಾಹನು ನಿಮಗೆ ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಹೊರತಾದ ಬೇರೆ ಜನಾಂಗವನ್ನು ನಿಮ್ಮ ಬದಲಿಗೆ ತರುವನು (ಅವರು ಆಜ್ಞಾನುಸರಣಿಗಳಾಗಿರುವರು). ನೀವು ಅಲ್ಲಾಹನಿಗೆ ಯಾವುದೇ ನಷ್ಟವನ್ನುಂಟು ಮಾಡಲಾರಿರಿ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
إِلَّا تَنصُرُوهُ فَقَدْ نَصَرَهُ اللَّهُ إِذْ أَخْرَجَهُ الَّذِينَ كَفَرُوا ثَانِيَ اثْنَيْنِ إِذْ هُمَا فِي الْغَارِ إِذْ يَقُولُ لِصَاحِبِهِ لَا تَحْزَنْ إِنَّ اللَّهَ مَعَنَا ۖ فَأَنزَلَ اللَّهُ سَكِينَتَهُ عَلَيْهِ وَأَيَّدَهُ بِجُنُودٍ لَّمْ تَرَوْهَا وَجَعَلَ كَلِمَةَ الَّذِينَ كَفَرُوا السُّفْلَىٰ ۗ وَكَلِمَةُ اللَّهِ هِيَ الْعُلْيَا ۗ وَاللَّهُ عَزِيزٌ حَكِيمٌ ۝٤٠
📖 ಅನುವಾದ ಆಯತ್ 40
ನೀವು ಪೈಗಂಬರರಿಗೆ ಸಹಾಯ ಮಾಡದಿದ್ದರೆ ತಿಳಿದುಕೊಳ್ಳಿರಿ: ಅಲ್ಲಾಹನು ಅವರಿಗೆ ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಗಡಿಪಾರು ಮಾಡಿದ ಸಂದರ್ಭದಲ್ಲಿ ಸಹಾಯ ಮಾಡಿದ್ದನು, ಅವರು (ವಲಸೆ ಹೋಗುವ) ಆ ಇಬ್ಬರಲ್ಲಿ ಒಬ್ಬರಾಗಿದ್ದರು ಅವರಿಬ್ಬರೂ (ಮುಹಮ್ಮದ್ ಮತ್ತು ಅಬೂಬಕ್ಕರ್) ಗುಹೆಯಲ್ಲಿದ್ದ ಸಂದರ್ಭದಲ್ಲಿ ಅವರು ತನ್ನ ಸಂಗಡಿಗರೊAದಿಗೆ (ಅಬೂಬಕ್ಕರ್‌ರವರಿಗೆ) 'ವ್ಯಥೆಪಡಬೇಡ, ಖಂಡಿತ ಅಲ್ಲಾಹನು ನಮ್ಮ ಜೊತೆಗಿದ್ದಾನೆ' ಎಂದು ಹೇಳಿದರು. ಹೀಗೆ ಅಲ್ಲಾಹನು ಅವರ ಮೇಲೆ ತನ್ನ ಕಡೆಯಿಂದ ಶಾಂತಿಯನ್ನು ಇಳಿಸಿದನು. ನೀವು ಕಾಣದಂತಹ (ಮಲಕ್‌ಗಳ) ಸೈನ್ಯಗಳೊಂದಿಗೆ ಅವರ ಸಹಾಯ ಮಾಡಿದನು. ಸತ್ಯನಿಷೇಧಿಗಳ ಮಾತನ್ನು ನಿಂದ್ಯಗೊಳಿಸಿದನು ಮತ್ತು ಅಲ್ಲಾಹನ ವಚನವೇ ಅತ್ಯುನ್ನತವೂ, ಪ್ರಬಲವೂ ಅಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
انفِرُوا خِفَافًا وَثِقَالًا وَجَاهِدُوا بِأَمْوَالِكُمْ وَأَنفُسِكُمْ فِي سَبِيلِ اللَّهِ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ ۝٤١
📖 ಅನುವಾದ ಆಯತ್ 41
ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು ಮನ ಧನಗಳಿಂದ ಸತ್ಯಕ್ಕಾಗಿ ಹೋರಾಡಿರಿ. ಇದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಅರಿಯುವವರಾಗಿದ್ದರೆ.
لَوْ كَانَ عَرَضًا قَرِيبًا وَسَفَرًا قَاصِدًا لَّاتَّبَعُوكَ وَلَٰكِن بَعُدَتْ عَلَيْهِمُ الشُّقَّةُ ۚ وَسَيَحْلِفُونَ بِاللَّهِ لَوِ اسْتَطَعْنَا لَخَرَجْنَا مَعَكُمْ يُهْلِكُونَ أَنفُسَهُمْ وَاللَّهُ يَعْلَمُ إِنَّهُمْ لَكَاذِبُونَ ۝٤٢
📖 ಅನುವಾದ ಆಯತ್ 42
ಇನ್ನು ಶೀಘ್ರವೇ ಲಾಭ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿದ್ದರೆ. ಖಂಡಿತವಾಗಿಯೂ ಕಪಟಿಗಳು ನಿಮ್ಮನ್ನು ಅನುಸರಿಸುತ್ತಿದ್ದರು. ಆದರೆ ಅವರ ಮೇಲೆ ಸುದೀರ್ಘತೆಯು ಪ್ರಯಾಸಕರವಾಗಿ ಬಿಟ್ಟಿತು. ಅವರು 'ನಮ್ಮಲ್ಲಿ ಸಾಮರ್ಥ್ಯವಿರುತ್ತಿದ್ದರೆ ನಾವು ಖಂಡಿತವಾಗಿಯು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ನೆಪ ಹೂಡುತ್ತಾ (ದುರ್ಬಲರೊಂದಿಗೆ)ಹೇಳುತ್ತಾರೆ. ಅವರು ಸ್ವತಃ ತಮ್ಮನ್ನು ನಾಶಕ್ಕೀಡು ಮಾಡುತ್ತಿದ್ದಾರೆ. ಖಂಡಿತವಾಗಿಯು ಅವರು ಸುಳ್ಳರೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
عَفَا اللَّهُ عَنكَ لِمَ أَذِنتَ لَهُمْ حَتَّىٰ يَتَبَيَّنَ لَكَ الَّذِينَ صَدَقُوا وَتَعْلَمَ الْكَاذِبِينَ ۝٤٣
📖 ಅನುವಾದ ಆಯತ್ 43
ಓ ಪೈಗಂಬರರೇ ಅಲ್ಲಾಹನು ನಿಮ್ಮನ್ನು ಮನ್ನಿಸಲಿ. ನಿಮ್ಮ ಮುಂದೆ ಸತ್ಯಸಂಧರು ಯಾರೆಂದು ಪ್ರಕಟವಾಗುವುದಕ್ಕೆ ಮೊದಲೇ ಮತ್ತು ನೀವು ಸುಳ್ಳರನ್ನು ಗುರುತಿಸಿಕೊಳ್ಳುವ ಮೊದಲೇ ಅವರಿಗೇಕೆ (ಕಪಟಿಗಳಿಗೆ)ಅನುಮತಿ ನೀಡಿದಿರಿ?
لَا يَسْتَأْذِنُكَ الَّذِينَ يُؤْمِنُونَ بِاللَّهِ وَالْيَوْمِ الْآخِرِ أَن يُجَاهِدُوا بِأَمْوَالِهِمْ وَأَنفُسِهِمْ ۗ وَاللَّهُ عَلِيمٌ بِالْمُتَّقِينَ ۝٤٤
📖 ಅನುವಾದ ಆಯತ್ 44
ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರು ತಮ್ಮ ತನು, ಮನ, ಧನಗಳಿಂದ ಹೋರಾಟ ಮಾಡದಿರಲು ನಿಮ್ಮೊಂದಿಗೆ ಅನುಮತಿಯನ್ನು ಕೇಳಲಾರರು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಚೆನ್ನಾಗಿ ಅರಿತಿದ್ದಾನೆ.
إِنَّمَا يَسْتَأْذِنُكَ الَّذِينَ لَا يُؤْمِنُونَ بِاللَّهِ وَالْيَوْمِ الْآخِرِ وَارْتَابَتْ قُلُوبُهُمْ فَهُمْ فِي رَيْبِهِمْ يَتَرَدَّدُونَ ۝٤٥
📖 ಅನುವಾದ ಆಯತ್ 45
ನಿಮ್ಮೊಂದಿಗೆ ಅನುಮತಿಯನ್ನು ಕೇಳುವವರು ಅಲ್ಲಾಹನಲ್ಲಾಗಲೀ, ಅಂತ್ಯದಿನದಲ್ಲಾಗಲೀ ವಿಶ್ವಾಸವಿಡದವರು ಮಾತ್ರರಾಗಿರುವರು. ಅವರ ಹೃದಯಗಳು ಸಂಶಯಗ್ರಸ್ತವಾಗಿವೆ ಮತ್ತು ಅವರು ತಮ್ಮ ಸಂದೇಹದಲ್ಲೇ ಅಲೆದಾಡುತ್ತಿದ್ದಾರೆ.
۞ وَلَوْ أَرَادُوا الْخُرُوجَ لَأَعَدُّوا لَهُ عُدَّةً وَلَٰكِن كَرِهَ اللَّهُ انبِعَاثَهُمْ فَثَبَّطَهُمْ وَقِيلَ اقْعُدُوا مَعَ الْقَاعِدِينَ ۝٤٦
📖 ಅನುವಾದ ಆಯತ್ 46
ಇನ್ನು ಅವರ ಉದ್ದೇಶವು ಸಮರಕ್ಕಾಗಿ ಹೊರಡುವುದಾಗಿದ್ದರೆ ಅವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಾಹನಿಗೆ ಅವರು ಹೊರಡುವುದು ಇಷ್ಟವಿರಲಿಲ್ಲ. ಆದ್ದರಿಂದ ಅವನು ಅವರನ್ನು (ಅವರ ಕಾಪಟ್ಯದ ನಿಮಿತ್ತ) ಸೋಮಾರಿಗಳನ್ನಾಗಿಸಿ ತಡೆದುಬಿಟ್ಟನು ಮತ್ತು ಹೇಳಲಾಯಿತು: ನೀವು ಕುಳಿತುಬಿಟ್ಟವರೊಂದಿಗೆ (ದುರ್ಬಲರೊಂದಿಗೆ) ಕುಳಿತು ಬಿಡಿರಿ.
لَوْ خَرَجُوا فِيكُم مَّا زَادُوكُمْ إِلَّا خَبَالًا وَلَأَوْضَعُوا خِلَالَكُمْ يَبْغُونَكُمُ الْفِتْنَةَ وَفِيكُمْ سَمَّاعُونَ لَهُمْ ۗ وَاللَّهُ عَلِيمٌ بِالظَّالِمِينَ ۝٤٧
📖 ಅನುವಾದ ಆಯತ್ 47
ಇನ್ನು ಅವರು ನಿಮ್ಮೊಂದಿಗೆ ಹೊರಡುತ್ತಿದ್ದರೂ ನಿಮಗೆ ಕೇಡನ್ನಲ್ಲದೇ ಇನ್ನೇನನ್ನೂ ಹೆಚ್ಚಿಸುತ್ತಿರಲಿಲ್ಲ. ನಿಮ್ಮ ನಡುವೆ ಕ್ಷೆÆÃಭೆ ಹರಡಲು ಅವರು ಓಡಾಡುತ್ತಿರುತ್ತಾರೆ. ಅವರಿಗೆ ಕಿವಿಗೊಡುವವರು ನಿಮ್ಮಲ್ಲಿದ್ದಾರೆ. ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
لَقَدِ ابْتَغَوُا الْفِتْنَةَ مِن قَبْلُ وَقَلَّبُوا لَكَ الْأُمُورَ حَتَّىٰ جَاءَ الْحَقُّ وَظَهَرَ أَمْرُ اللَّهِ وَهُمْ كَارِهُونَ ۝٤٨
📖 ಅನುವಾದ ಆಯತ್ 48
ಅವರು ಇದಕ್ಕೆ ಮೊದಲೂ ಕ್ಷೆÆÃಭೆ ಹರಡಲು ಬಯಸಿದ್ದರು ಮತ್ತು ನಿಮಗೋಸ್ಕರ ಸಂಗತಿಗಳನ್ನು ಬುಡಮೇಲುಗೊಳಿಸುತ್ತಲೂ ಇದ್ದರು ಕೊನೆಗೂ ಸತ್ಯವು ಬಂದುಬಿಟ್ಟಿತು; ಅವರು ಇಷ್ಟಪಡದಿದ್ದರೂ ಅಲ್ಲಾಹನ ತೀರ್ಮಾನ ಜಯಗಳಿಸಿತು.
وَمِنْهُم مَّن يَقُولُ ائْذَن لِّي وَلَا تَفْتِنِّي ۚ أَلَا فِي الْفِتْنَةِ سَقَطُوا ۗ وَإِنَّ جَهَنَّمَ لَمُحِيطَةٌ بِالْكَافِرِينَ ۝٤٩
📖 ಅನುವಾದ ಆಯತ್ 49
'ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಆಪತ್ತಿಗೊಳಪಡಿಸದಿರಿ' ಎಂದು ಹೇಳುವವರು ಅವರ ಪೈಕಿ ಇದ್ದಾರೆ ತಿಳಿದುಕೊಳ್ಳಿರಿ. ಅವರು ಆಪತ್ತಿನಲ್ಲಿ ಬಿದ್ದುಬಿಟ್ಟಿದ್ದಾರೆ ಮತ್ತು ಖಂಡಿತವಾಗಿಯು ನರಕಾಗ್ನಿಯು ಸತ್ಯನಿಷೇಧಿಗಳನ್ನು ಮುತ್ತಿಕೊಂಡಿದೆ.
إِن تُصِبْكَ حَسَنَةٌ تَسُؤْهُمْ ۖ وَإِن تُصِبْكَ مُصِيبَةٌ يَقُولُوا قَدْ أَخَذْنَا أَمْرَنَا مِن قَبْلُ وَيَتَوَلَّوا وَّهُمْ فَرِحُونَ ۝٥٠
📖 ಅನುವಾದ ಆಯತ್ 50
ತಮಗೇನಾದರೂ ಒಳಿತು ಲಭಿಸಿದರೆ ಅದವರಿಗೆ ದುಃಖವನ್ನುಂಟು ಮಾಡುತ್ತದೆ. ಮತ್ತು ನಿಮಗೇನಾದರೂ ವಿಪತ್ತು ಬಾಧಿಸಿದರೆ 'ನಾವು ನಮ್ಮ ವಿಚಾರದಲ್ಲಿ ಮೊದಲೇ ಜಾಗರೂಕತೆ ವಹಿಸಿದ್ದೆವು ಎಂದು ಅವರು ಹೇಳುತ್ತಾರೆ. ತರುವಾಯ ದುರಭಿಮಾನದೊಂದಿಗೆ ಮರಳುತ್ತಾರೆ.
قُل لَّن يُصِيبَنَا إِلَّا مَا كَتَبَ اللَّهُ لَنَا هُوَ مَوْلَانَا ۚ وَعَلَى اللَّهِ فَلْيَتَوَكَّلِ الْمُؤْمِنُونَ ۝٥١
📖 ಅನುವಾದ ಆಯತ್ 51
ಹೇಳಿರಿ: ‘ಅಲ್ಲಾಹ ನಮಗೆ ವಿಧಿಸಿರುವುದಲ್ಲದೆ ಬೇರೇನೂ ನಮ್ಮನ್ನು ಬಾಧಿಸಲಾರದು. ಅವನು ನಮ್ಮ ಒಡೆಯನಾಗಿರುವನು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆಯೇ ಭರವಸೆಯನ್ನಿಡಲಿ.
قُلْ هَلْ تَرَبَّصُونَ بِنَا إِلَّا إِحْدَى الْحُسْنَيَيْنِ ۖ وَنَحْنُ نَتَرَبَّصُ بِكُمْ أَن يُصِيبَكُمُ اللَّهُ بِعَذَابٍ مِّنْ عِندِهِ أَوْ بِأَيْدِينَا ۖ فَتَرَبَّصُوا إِنَّا مَعَكُم مُّتَرَبِّصُونَ ۝٥٢
📖 ಅನುವಾದ ಆಯತ್ 52
ಹೇಳಿರಿ: ಎರಡು ಒಳಿತು (ಹುತಾತ್ಮತೆ ಅಥವಾ ವಿಜಯ) ಗಳಲ್ಲಿ ನೀವು ನಮ್ಮ ಬಗ್ಗೆ ಯಾವುದಾದರೊಂದನ್ನು ನಿರೀಕ್ಷಿಸುತ್ತಿದ್ದೀರಿ. ಆದರೆ ನಿಮ್ಮ ಕುರಿತು ಅಲ್ಲಾಹನು ನಿಮಗೆ ತನ್ನ ಕಡೆಯಿಂದ ನೇರವಾಗಿ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆಕೊಡಬೇಕೆಂದು ನಿರೀಕ್ಷಿಸುತ್ತಿದ್ದೇವೆ. ನೀವು ನಿರೀಕ್ಷಿಸುತ್ತಿರಿ ಮತ್ತು ನಾವೂ ನಿರೀಕ್ಷಿಸುವವರಾಗಿದ್ದೇವೆ.
قُلْ أَنفِقُوا طَوْعًا أَوْ كَرْهًا لَّن يُتَقَبَّلَ مِنكُمْ ۖ إِنَّكُمْ كُنتُمْ قَوْمًا فَاسِقِينَ ۝٥٣
📖 ಅನುವಾದ ಆಯತ್ 53
ಹೇಳಿರಿ: ನೀವು ಸಂತೃಪ್ತಿಯಿAದ ವ್ಯಯಿಸಿರಿ ಅಥವಾ ಅತೃಪ್ತಿಯಿಂದ ವ್ಯಯಿಸಿರಿ. ನಿಮ್ಮಿಂದ ಖಂಡಿತ ಸ್ವೀಕರಿಸಲಾಗದು. ಖಂಡಿತವಾಗಿಯು ನೀವು ಧಿಕ್ಕಾರಿಗಳಾದ ಜನರಾಗಿದ್ದೀರಿ.
وَمَا مَنَعَهُمْ أَن تُقْبَلَ مِنْهُمْ نَفَقَاتُهُمْ إِلَّا أَنَّهُمْ كَفَرُوا بِاللَّهِ وَبِرَسُولِهِ وَلَا يَأْتُونَ الصَّلَاةَ إِلَّا وَهُمْ كُسَالَىٰ وَلَا يُنفِقُونَ إِلَّا وَهُمْ كَارِهُونَ ۝٥٤
📖 ಅನುವಾದ ಆಯತ್ 54
ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುತ್ತಾರೆ ಮತ್ತು ಆಲಸ್ಯದಿಂದಲೇ ನಮಾಝ್‌ಗೆ ಬರುತ್ತಾರೆ ಹಾಗೂ ಅತೃಪ್ತಿಯಿಂದ ಖರ್ಚು ಮಾಡುತ್ತಾರೆ ಎಂಬುದೇ ಅವರ ದಾನಗಳು ಸ್ವೀಕೃತವಾಗದಿರುವುದಕ್ಕೆ ಕಾರಣವಾಗಿದೆ.
فَلَا تُعْجِبْكَ أَمْوَالُهُمْ وَلَا أَوْلَادُهُمْ ۚ إِنَّمَا يُرِيدُ اللَّهُ لِيُعَذِّبَهُم بِهَا فِي الْحَيَاةِ الدُّنْيَا وَتَزْهَقَ أَنفُسُهُمْ وَهُمْ كَافِرُونَ ۝٥٥
📖 ಅನುವಾದ ಆಯತ್ 55
ಅವರ ಸಂಪತ್ತುಗಳು ಮತ್ತು ಸಂತಾನಗಳು ನಿಮ್ಮನು ಚಕಿತಗೊಳಿಸದಿರಲಿ. ಅದರ ಮೂಲಕ ಅಲ್ಲಾಹನು ಇಹಲೋಕ ಜೀವನದಲ್ಲೇ ಅವರನ್ನು ಶಿಕ್ಷಿಸಲೆಂದು ಮತ್ತು ಅವರ ಸತ್ಯನಿಷೇಧದ ಸ್ಥಿತಿಯಲ್ಲಿ ಅವರು ಪ್ರಾಣ ಹರಣ ಮಾಡಬೇಕೆಂದು ಇಚ್ಛಿಸುತ್ತಾನೆ.
وَيَحْلِفُونَ بِاللَّهِ إِنَّهُمْ لَمِنكُمْ وَمَا هُم مِّنكُمْ وَلَٰكِنَّهُمْ قَوْمٌ يَفْرَقُونَ ۝٥٦
📖 ಅನುವಾದ ಆಯತ್ 56
ನಾವು ನಿಮ್ಮವರೇ ಆಗಿದ್ದೇವೆಂದು ಅವರು ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತಾರೆ. ವಸ್ತುತಃ ಅವರು ನಿಮ್ಮವರಲ್ಲ. ಆದರೆ ಅವರು ರಣಹೇಡಿ ಜನರಾಗಿದ್ದಾರೆ.
لَوْ يَجِدُونَ مَلْجَأً أَوْ مَغَارَاتٍ أَوْ مُدَّخَلًا لَّوَلَّوْا إِلَيْهِ وَهُمْ يَجْمَحُونَ ۝٥٧
📖 ಅನುವಾದ ಆಯತ್ 57
ಇನ್ನು ಅವರು ಯಾವುದಾದರೂ ಅಭಯಸ್ಥಾನವನ್ನು ಅಥವಾ ಗುಹೆಯನ್ನು ಅಥವಾ ದ್ವಾರವನ್ನು ಕಂಡರೆ ಅದರೆಡೆಗೆ ಧಾವಂತದಿAದ ಹಗ್ಗ ಕಳಚಿ ಓಡುತ್ತಾರೆ.
وَمِنْهُم مَّن يَلْمِزُكَ فِي الصَّدَقَاتِ فَإِنْ أُعْطُوا مِنْهَا رَضُوا وَإِن لَّمْ يُعْطَوْا مِنْهَا إِذَا هُمْ يَسْخَطُونَ ۝٥٨
📖 ಅನುವಾದ ಆಯತ್ 58
ಕಪಟಿಗಳಲ್ಲಿ ದಾನ ಧರ್ಮಗಳ ವಿತರಣೆಯ ವಿಷಯದಲ್ಲಿ ನಿಮ್ಮನ್ನು (ತಾರತಮ್ಯ ಮಾಡುತ್ತಾರೆಂದು) ದೋಷಿಸುವವರು ಕೆಲವರಿದ್ದಾರೆ. ಆದ್ದರಿಂದ ಅವರಿಷ್ಟದಂತೆ ಅವರಿಗೇನಾದರೂ ಲಭಿಸಿದರೆ ಅವರು ಸಂತೃಪ್ತರಾಗಿರುವರು ಮತ್ತು ಅದರಿಂದ ಅವರಿಗೆ ಸಿಗದಿದ್ದರೆ ಕೂಡಲೇ ಅವರು ಕುಪಿತರಾಗುತ್ತಾರೆ.
وَلَوْ أَنَّهُمْ رَضُوا مَا آتَاهُمُ اللَّهُ وَرَسُولُهُ وَقَالُوا حَسْبُنَا اللَّهُ سَيُؤْتِينَا اللَّهُ مِن فَضْلِهِ وَرَسُولُهُ إِنَّا إِلَى اللَّهِ رَاغِبُونَ ۝٥٩
📖 ಅನುವಾದ ಆಯತ್ 59
ಇನ್ನು ಅವರು ಅಲ್ಲಾಹನ ಮತ್ತು ಅವನ ಸಂದೇಶವಾಹಕರು ನೀಡಿರುವುದರಲ್ಲಿ ತೃಪ್ತಿಪಟ್ಟು ಮತ್ತು ನಮಗೆ ಅಲ್ಲಾಹನು ಸಾಕು, ಅಲ್ಲಾಹನು ತನ್ನ ಅನುಗ್ರಹದಿಂದ ನೀಡುವನು ಮತ್ತು ಅವನ ಸಂದೇಶವಾಹಕರು ಸಹ. ನಾವು ಅಲ್ಲಾಹನೆಡೆಗೆ ನಿರೀಕ್ಷೆಯನ್ನಿರಿಸಿಕೊಂಡಿದ್ದೇವೆAದು ಹೇಳಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
۞ إِنَّمَا الصَّدَقَاتُ لِلْفُقَرَاءِ وَالْمَسَاكِينِ وَالْعَامِلِينَ عَلَيْهَا وَالْمُؤَلَّفَةِ قُلُوبُهُمْ وَفِي الرِّقَابِ وَالْغَارِمِينَ وَفِي سَبِيلِ اللَّهِ وَابْنِ السَّبِيلِ ۖ فَرِيضَةً مِّنَ اللَّهِ ۗ وَاللَّهُ عَلِيمٌ حَكِيمٌ ۝٦٠
📖 ಅನುವಾದ ಆಯತ್ 60
ವಾಸ್ತವದಲ್ಲಿ ಕಡ್ಡಾಯ ದಾನಧರ್ಮಗಳು ಬಡವರಿಗೆ, ನಿರ್ಗತಿಕರಿಗೆ ಅದಕ್ಕಾಗಿ ಕಾರ್ಯನಿರ್ವಹಿಸುವವರಿಗೆ, ಮನವೊಲಿಸಲು ಬೇಕಾದವರಿಗೆ, ದಾಸ್ಯ ವಿಮೋಚನೆಗೆ, ಸಾಲದಲ್ಲಿ ಮುಳುಗಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿಗೆ ಮತ್ತು ಪ್ರಯಾಣಿರಿಗೆ ಮಾತ್ರವಾಗಿದೆ. ಇದು ಅಲ್ಲಾಹನ ವತಿಯಿಂದ ಕಡ್ಡಾಯಗೊಳಿಸಲಾದ ನಿರ್ಣಯವಾಗಿದೆ ಮತ್ತು ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನೂ ಆಗಿದ್ದಾನೆ.
وَمِنْهُمُ الَّذِينَ يُؤْذُونَ النَّبِيَّ وَيَقُولُونَ هُوَ أُذُنٌ ۚ قُلْ أُذُنُ خَيْرٍ لَّكُمْ يُؤْمِنُ بِاللَّهِ وَيُؤْمِنُ لِلْمُؤْمِنِينَ وَرَحْمَةٌ لِّلَّذِينَ آمَنُوا مِنكُمْ ۚ وَالَّذِينَ يُؤْذُونَ رَسُولَ اللَّهِ لَهُمْ عَذَابٌ أَلِيمٌ ۝٦١
📖 ಅನುವಾದ ಆಯತ್ 61
ಕಪಟಿಗಳಲ್ಲಿ ಕೆಲವರು ಪೈಗಂಬರರಿಗೆ ಕಿರುಕುಳ ಕೊಡುವವರೂ ಇದ್ದಾರೆ. ಪೈಗಂಬರರು ಸತ್ಯವಿರಲಿ ಸುಳ್ಳಾಗಿರಲಿ ಎಲ್ಲವನ್ನು ಆಲಿಸುತ್ತಾರೆ ಎಂದು ಅವರು (ಕಪಟಿಗಳು) ಹೇಳುತ್ತಾರೆ. ಹೇಳಿರಿ: ಅವರು ನಿಮ್ಮ ಒಳಿತಿಗೋಸ್ಕರವೇ ಆಲಿಸುತ್ತಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ. ಮತ್ತು ವಿಶ್ವಾಸಿಗಳ ಮಾತನ್ನು ದೃಢವಾಗಿ ನಂಬುತ್ತಾರೆ. ನಿಮ್ಮ ಪೈಕಿ ಸತ್ಯವಿಶ್ವಾಸ ಹೊಂದಿದವರಿಗೆ ಅವರು ಕಾರುಣ್ಯವಾಗಿದ್ದಾರೆ. ಅಲ್ಲಾಹನ ಸಂದೇಶವಾಹಕರಿಗೆ ಯಾರು ಕಿರುಕುಳ ಕೊಡುತ್ತಾರೋ ಅವರಿಗೆ ವೇದನಾಜನಕ ಶಿಕ್ಷೆಯಿದೆ.
يَحْلِفُونَ بِاللَّهِ لَكُمْ لِيُرْضُوكُمْ وَاللَّهُ وَرَسُولُهُ أَحَقُّ أَن يُرْضُوهُ إِن كَانُوا مُؤْمِنِينَ ۝٦٢
📖 ಅನುವಾದ ಆಯತ್ 62
(ಈ ಕಪಟಿಗಳು) ನಿಮ್ಮನ್ನು ತೃಪ್ತಿಪಡಿಸುವುದಕ್ಕಾಗಿ ನಿಮ್ಮ ಮುಂದೆ ಅವರು ಅಲ್ಲಾಹನ ಆಣೆ ಹಾಕುತ್ತಾರೆ. ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಾಗಿದ್ದರೆ ತೃಪ್ತಿಪಡಿಸಲು ಹೆಚ್ಚು ಅರ್ಹನು ಅಲ್ಲಾಹ್ ಮತ್ತು ಅವನ ಸಂದೇಶವಾಹಕರಾಗಿದ್ದಾರೆ.
أَلَمْ يَعْلَمُوا أَنَّهُ مَن يُحَادِدِ اللَّهَ وَرَسُولَهُ فَأَنَّ لَهُ نَارَ جَهَنَّمَ خَالِدًا فِيهَا ۚ ذَٰلِكَ الْخِزْيُ الْعَظِيمُ ۝٦٣
📖 ಅನುವಾದ ಆಯತ್ 63
ಯಾರು ಅಲ್ಲಾಹನನ್ನು ಹಾಗೂ ಅವನ ಸಂದೇಶವಾಹಕರ ಎದುರು ಘರ್ಷಣೆಗೆ ಇಳಿಯುತ್ತಾರೋ ಖಂಡಿತವಾಗಿಯೂ ಅವರಿಗೆ ನರಕಾಗ್ನಿಯಿದೆ ಮತ್ತು ಅವರದರಲ್ಲಿ ಶಾಶ್ವತವಾಗಿ ವಾಸಿಸುವವರೆಂದು ಅವರು ಅರಿತಿಲ್ಲವೇ? ಅದು ಅತಿ ದೊಡ್ಡ ಅಪಮಾನವಾಗಿದೆ.
يَحْذَرُ الْمُنَافِقُونَ أَن تُنَزَّلَ عَلَيْهِمْ سُورَةٌ تُنَبِّئُهُم بِمَا فِي قُلُوبِهِمْ ۚ قُلِ اسْتَهْزِئُوا إِنَّ اللَّهَ مُخْرِجٌ مَّا تَحْذَرُونَ ۝٦٤
📖 ಅನುವಾದ ಆಯತ್ 64
ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿಸಿಕೊಡುವಂತಹ ಯಾವುದಾದರೂ ಅಧ್ಯಾಯ ಅವರ(ಪೈಗಂಬರರ) ಮೇಲೆ ಅವತೀರ್ಣಗೊಳ್ಳಬಹುದೆಂದು ಕಪಟವಿಶ್ವಾಸಿಗಳು ಭಯಪಡುತ್ತಿರುತ್ತಾರೆ. ಹೇಳಿರಿ: ‘ನೀವು ಅಪಹಾಸ್ಯ ಮಾಡುತ್ತಿರಿ. ನೀವು ಭಯಪಡುತ್ತಿರುವುದನ್ನು ಖಂಡಿತವಾಗಿಯು ಅಲ್ಲಾಹನು ಬಹಿರಂಗಗೊಳಿಸುವವನಿದ್ದಾನೆ'.
وَلَئِن سَأَلْتَهُمْ لَيَقُولُنَّ إِنَّمَا كُنَّا نَخُوضُ وَنَلْعَبُ ۚ قُلْ أَبِاللَّهِ وَآيَاتِهِ وَرَسُولِهِ كُنتُمْ تَسْتَهْزِئُونَ ۝٦٥
📖 ಅನುವಾದ ಆಯತ್ 65
ನೀವು ಅವರೊಂದಿಗೆ ವಿಚಾರಿಸಿದರೆ ಅವರು: ‘ನಾವು ಹೀಗೆಯೇ ಪರಸ್ಪರ ವಿನೋದ ಮಾತುಗಳನ್ನು ಆಡುತ್ತಿದ್ದೆವು'. ಎಂದು ಹೇಳುತ್ತಾರೆ. ಹೇಳಿರಿ: ಅಲ್ಲಾಹನು ಅವನ ದೃಷ್ಟಾಂತಗಳು ಮತ್ತು ಅವನ ಸಂದೇಶವಾಹಕರು ನಿಮ್ಮ ವಿನೋದದ ವಸ್ತುಗಳಾಗಿಬಿಟ್ಟವೇ?
لَا تَعْتَذِرُوا قَدْ كَفَرْتُم بَعْدَ إِيمَانِكُمْ ۚ إِن نَّعْفُ عَن طَائِفَةٍ مِّنكُمْ نُعَذِّبْ طَائِفَةً بِأَنَّهُمْ كَانُوا مُجْرِمِينَ ۝٦٦
📖 ಅನುವಾದ ಆಯತ್ 66
ನೀವು ನೆಪಗಳನ್ನೊಡ್ಡಬೇಡಿರಿ. ಖಂಡಿತವಾಗಿಯು ನೀವು ನಿಮ್ಮ ವಿಶ್ವಾಸದ ಬಳಿಕ ಅವಿಶ್ವಾಸಿಗಳಾಗಿಬಿಟ್ಟಿರುವಿರಿ. ನಾವು ನಿಮ್ಮಲ್ಲಿ ಒಂದು ಪಂಗಡಕ್ಕೆ ಕ್ಷಮೆ ನೀಡಿದರೂ ಇನ್ನೊಂದು ಪಂಗಡಕ್ಕೆ ಅವರ ಅಪರಾಧಗಳ ನಿಮಿತ್ತ ಶಿಕ್ಷಿಸುವೆವು.
الْمُنَافِقُونَ وَالْمُنَافِقَاتُ بَعْضُهُم مِّن بَعْضٍ ۚ يَأْمُرُونَ بِالْمُنكَرِ وَيَنْهَوْنَ عَنِ الْمَعْرُوفِ وَيَقْبِضُونَ أَيْدِيَهُمْ ۚ نَسُوا اللَّهَ فَنَسِيَهُمْ ۗ إِنَّ الْمُنَافِقِينَ هُمُ الْفَاسِقُونَ ۝٦٧
📖 ಅನುವಾದ ಆಯತ್ 67
ಕಪಟವಿಶ್ವಾಸಿಗಳು ಮತ್ತು ಕಪಟ ವಿಶ್ವಾಸಿನಿಯರು ಪರಸ್ಪರ ಒಂದೇ ಆಗಿದ್ದಾರೆ. ಅವರು ಕೆಡುಕುಗಳನ್ನು ಆದೇಶಿಸುತ್ತಾರೆ ಮತ್ತು ಒಳಿತಿನ ವಿಚಾರಗಳಿಂದ ತಡೆಯುತ್ತಾರೆ ಹಾಗೂ ತಮ್ಮ ಮುಷ್ಠಿಗಳನ್ನು ಬಿಗಿದಿಡುತ್ತಾರೆ. ಅವರು ಅಲ್ಲಾಹನನ್ನು ಮರೆತು ಬಿಟ್ಟರು. ಅಲ್ಲಾಹನು ಅವರನ್ನು ಮರೆತು ಬಿಟ್ಟನು. ನಿಸ್ಸಂಶಯವಾಗಿಯು ಕಪಟವಿಶ್ವಾಸಿಗಳೇ ಧಿಕ್ಕಾರಿಗಳಾಗಿದ್ದಾರೆ.
وَعَدَ اللَّهُ الْمُنَافِقِينَ وَالْمُنَافِقَاتِ وَالْكُفَّارَ نَارَ جَهَنَّمَ خَالِدِينَ فِيهَا ۚ هِيَ حَسْبُهُمْ ۚ وَلَعَنَهُمُ اللَّهُ ۖ وَلَهُمْ عَذَابٌ مُّقِيمٌ ۝٦٨
📖 ಅನುವಾದ ಆಯತ್ 68
ಅಲ್ಲಾಹನು ಕಪಟವಿಶ್ವಾಸಿಗಳಿಗೂ, ಕಪಟ ವಿಶ್ವಾಸಿನಿಯರಿಗೂ ಹಾಗೂ ಸತ್ಯನಿಷೇಧಿಗಳಿಗೂ ನರಕಾಗ್ನಿಯ ವಾಗ್ದಾನವನ್ನು ಮಾಡಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೇ ಶಾಶ್ವತ ಶಿಕ್ಷೆಯಿರುವುದು.
كَالَّذِينَ مِن قَبْلِكُمْ كَانُوا أَشَدَّ مِنكُمْ قُوَّةً وَأَكْثَرَ أَمْوَالًا وَأَوْلَادًا فَاسْتَمْتَعُوا بِخَلَاقِهِمْ فَاسْتَمْتَعْتُم بِخَلَاقِكُمْ كَمَا اسْتَمْتَعَ الَّذِينَ مِن قَبْلِكُم بِخَلَاقِهِمْ وَخُضْتُمْ كَالَّذِي خَاضُوا ۚ أُولَٰئِكَ حَبِطَتْ أَعْمَالُهُمْ فِي الدُّنْيَا وَالْآخِرَةِ ۖ وَأُولَٰئِكَ هُمُ الْخَاسِرُونَ ۝٦٩
📖 ಅನುವಾದ ಆಯತ್ 69
ನಿಮಗಿಂತ ಮೊದಲು ಇದ್ದಂತಹ ಜನರ ಹಾಗೆ ನೀವೂ ಸಹ, ಅವರು ನಿಮಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಹೆಚ್ಚು ಸಂಪತ್ತನ್ನೂ, ಸಂತಾನವನ್ನೂ ಹೊಂದಿದವರಾಗಿದ್ದರು. ನಂತರ ಅವರು ತಮ್ಮ ಪಾಲಿನ ಸುಖವನ್ನು ಅನುಭವಿಸಿದರು. ಬಳಿಕ ನೀವು ಸಹ ನಿಮ್ಮ ಪೂರ್ವಿಕರು ತಮ್ಮ ಪಾಲಿನ ಸುಖವನ್ನು ಅನುಭವಿಸಿದಂತೆಯೇ ಅನುಭವಿಸಿರಿ ಮತ್ತು ಅವರು ಪರಿಹಾಸ್ಯದಲ್ಲಿ ಮಗ್ನರಾಗಿರುವಂತೆ ನೀವು ಮಗ್ನರಾಗಿರಿ. ಅವರ ಕರ್ಮಗಳು ಇಹ ಪರಲೋಕದಲ್ಲಿ ನಿಷ್ಫಲವಾಗಿಬಿಟ್ಟವು. ಅವರೇ ನಷ್ಟಕ್ಕೀಡಾಗು ವವರಾಗಿದ್ದಾರೆ.
أَلَمْ يَأْتِهِمْ نَبَأُ الَّذِينَ مِن قَبْلِهِمْ قَوْمِ نُوحٍ وَعَادٍ وَثَمُودَ وَقَوْمِ إِبْرَاهِيمَ وَأَصْحَابِ مَدْيَنَ وَالْمُؤْتَفِكَاتِ ۚ أَتَتْهُمْ رُسُلُهُم بِالْبَيِّنَاتِ ۖ فَمَا كَانَ اللَّهُ لِيَظْلِمَهُمْ وَلَٰكِن كَانُوا أَنفُسَهُمْ يَظْلِمُونَ ۝٧٠
📖 ಅನುವಾದ ಆಯತ್ 70
ತಮಗಿಂತ ಮೊದಲಿನ ಜನಾಂಗಗಳಾದ; ನೂಹರ ಜನಾಂಗ, ಆದ್, ಸಮೂದ್ ಜನಾಂಗಗಳ, ಇಬ್ರಾಹೀಮ್‌ರ ಜನಾಂಗ, ಮದ್‌ಯನ್ ವಾಸಿಗಳ ಮತ್ತು ಬುಡಮೇಲುಗೊಳಿಸಲಾದ ನಾಡಿನವರ ವೃತ್ತಾಂತವು ಅವರಿಗೆ ತಲುಪಿಲ್ಲವೇ? ಅವರ ಬಳಿಗೆ ಅವರ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸುವವನಾಗಿರಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವನ್ನೆಸಗಿದರು.
وَالْمُؤْمِنُونَ وَالْمُؤْمِنَاتُ بَعْضُهُمْ أَوْلِيَاءُ بَعْضٍ ۚ يَأْمُرُونَ بِالْمَعْرُوفِ وَيَنْهَوْنَ عَنِ الْمُنكَرِ وَيُقِيمُونَ الصَّلَاةَ وَيُؤْتُونَ الزَّكَاةَ وَيُطِيعُونَ اللَّهَ وَرَسُولَهُ ۚ أُولَٰئِكَ سَيَرْحَمُهُمُ اللَّهُ ۗ إِنَّ اللَّهَ عَزِيزٌ حَكِيمٌ ۝٧١
📖 ಅನುವಾದ ಆಯತ್ 71
ಸತ್ಯವಿಶ್ವಾಸಿ ಪುರುಷರು ಮತ್ತು ಸ್ತಿçÃಯರು ಪರಸ್ಪರ ಮಿತ್ರರಾಗಿದ್ದಾರೆ. ಅವರು ಒಳಿತುಗಳ ಆದೇಶವನ್ನು ನೀಡುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝನ್ನು ಸಂಸ್ಥಾಪಿಸುತ್ತಾರೆ, ಝಕಾತನ್ನು ಪಾವತಿಸುತ್ತಾರೆ ಮತ್ತು ಅಲ್ಲಾಹನನ್ನು ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸುತ್ತಾರೆ. ಅಲ್ಲಾಹನು ಶೀಘ್ರವೇ ಅವರ ಮೇಲೆ ಕರುಣೆ ತೋರುವನು. ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَعَدَ اللَّهُ الْمُؤْمِنِينَ وَالْمُؤْمِنَاتِ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا وَمَسَاكِنَ طَيِّبَةً فِي جَنَّاتِ عَدْنٍ ۚ وَرِضْوَانٌ مِّنَ اللَّهِ أَكْبَرُ ۚ ذَٰلِكَ هُوَ الْفَوْزُ الْعَظِيمُ ۝٧٢
📖 ಅನುವಾದ ಆಯತ್ 72
ಅಲ್ಲಾಹನು ಸತ್ಯವಿಶ್ವಾಸಿ ಹಾಗೂ ಸತ್ಯವಿಶ್ವಾಸಿನಿಯರಿಗಾಗಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳ ವಾಗ್ದಾನವನ್ನು ಮಾಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು ಮತ್ತು ಆ ಶಾಶ್ವತವಾಗಿರುವ ಸ್ವರ್ಗೋದ್ಯಾನಗಳಲ್ಲಿ ಪರಿಶುದ್ಧವಾದ ಭವನಗಳ ವಾಗ್ದಾನವನ್ನು ಮಾಡಲಾಗಿದೆ. ಇನ್ನು ಮಹತ್ತರವಾದ ಅಲ್ಲಾಹನ ಸಂಪ್ರೀತಿ ಪ್ರಾಪ್ತವಾಗುವುದು. ಅಲ್ಲಾಹನ ಸಂತೃಪ್ತಿಯೇ ಅತಿ ದೊಡ್ಡದಾಗಿದೆ. ಇದುವೇ ಮಹಾ ವಿಜಯವಾಗಿದೆ.
يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ ۝٧٣
📖 ಅನುವಾದ ಆಯತ್ 73
ಓ ಪೈಗಂಬರರೇ, ಸತ್ಯನಿಷೇಧಿ ಹಾಗೂ ಕಪಟವಿಶ್ವಾಸಿಗಳೊಂದಿಗೂ ಸತ್ಯಕ್ಕಾಗಿ ಯುದ್ಧ ಮಾಡಿರಿ ಮತ್ತು ಅವರೊಂದಿಗೆ ಕಟುವಾಗಿ ವರ್ತಿಸಿರಿ (ಮೃದುತ್ವ ತೋರದಿರಿ). ಅವರ ವಾಸಸ್ಥಳವು ನರಕವಾಗಿದೆ. ಅದು ಅತ್ಯಂತ ನಿಕೃಷ್ಟ ಸ್ಥಳವಾಗಿದೆ.
يَحْلِفُونَ بِاللَّهِ مَا قَالُوا وَلَقَدْ قَالُوا كَلِمَةَ الْكُفْرِ وَكَفَرُوا بَعْدَ إِسْلَامِهِمْ وَهَمُّوا بِمَا لَمْ يَنَالُوا ۚ وَمَا نَقَمُوا إِلَّا أَنْ أَغْنَاهُمُ اللَّهُ وَرَسُولُهُ مِن فَضْلِهِ ۚ فَإِن يَتُوبُوا يَكُ خَيْرًا لَّهُمْ ۖ وَإِن يَتَوَلَّوْا يُعَذِّبْهُمُ اللَّهُ عَذَابًا أَلِيمًا فِي الدُّنْيَا وَالْآخِرَةِ ۚ وَمَا لَهُمْ فِي الْأَرْضِ مِن وَلِيٍّ وَلَا نَصِيرٍ ۝٧٤
📖 ಅನುವಾದ ಆಯತ್ 74
(ಕಪಟವಿಶ್ವಾಸಿಗಳು) ನಾವು ಏನು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ವಸ್ತುತಃ ಸತ್ಯನಿಷೇಧದ ಮಾತನ್ನು ಅವರು ಆಡಿದ್ದಾರೆ. ಮತ್ತು ತಮ್ಮ ಇಸ್ಲಾಮ್ ಸ್ವೀಕಾರದ ನಂತರ ಅವರು ಸತ್ಯನಿಷೇಧಿಗಳಾಗಿ ಬಿಟ್ಟರು. ಮತ್ತು ಅವರು ತಮಗೆ ಮಾಡಲು ಸಾಧ್ಯವಾಗದ ಸಂಗತಿಯನ್ನೂ (ಪೈಗಂಬರವರನ್ನು ವಧಿಸಲು) ನಿರ್ಧರಿಸಿದ್ದರು. ಅಲ್ಲಾಹನು ತನ್ನ ಅನುಗ್ರಹದಿಂದ ಮತ್ತು ಅವನ ಸಂದೇಶವಾಹಕರು ಅವರಿಗೆ (ಮದೀನಾ ವಾಸಿಗಳಿಗೆ) ಸಂಪತ್ತÀನ್ನು ನೀಡಿದರು ಎಂಬ ವಿಚಾರವೇ ಅವರ ಪ್ರತೀಕಾರಕ್ಕೆ ಕಾರಣವಾಗಿದೆ. ಇನ್ನು ಅವರು ಪಶ್ಚಾತ್ತಾಪ ಪಡುವುದಾದರೆ ಅದು ಅವರ ಪಾಲಿಗೆ ಅತ್ಯುತ್ತಮವಾಗಿದೆ. ಮತ್ತು ಅವರೇನಾದರೂ ವಿಮುಖರಾಗುವುದಾದರೆ ಅಲ್ಲಾಹನು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕವಾದ ಶಿಕ್ಷೆಯನ್ನು ನೀಡುವನು ಮತ್ತು ಇಡೀ ಭೂಮಿಯಲ್ಲಿ ಅವರಿಗೆ ಯಾವೊಬ್ಬ ಬೆಂಬಲಿಗನಾಗಲೀ, ಸಹಾಯಕನಾಗಲೀ ಇರಲಾರನು.
۞ وَمِنْهُم مَّنْ عَاهَدَ اللَّهَ لَئِنْ آتَانَا مِن فَضْلِهِ لَنَصَّدَّقَنَّ وَلَنَكُونَنَّ مِنَ الصَّالِحِينَ ۝٧٥
📖 ಅನುವಾದ ಆಯತ್ 75
ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ಏನಾದರೂ ನೀಡುವುದಾದರೆ ಖಂಡಿತವಾಗಿಯು ನಾವು ದಾನ ಧರ್ಮ ಮಾಡುವೆವು ಮತ್ತು ಸಜ್ಜನರ ಪೈಕಿ ಸೇರುವೆವು ಎಂದು ಅಲ್ಲಾಹನೊಂದಿಗೆ ಕರಾರು ಮಾಡಿದವರು ಅವರ ಪೈಕಿ ಇದ್ದಾರೆ.
فَلَمَّا آتَاهُم مِّن فَضْلِهِ بَخِلُوا بِهِ وَتَوَلَّوا وَّهُم مُّعْرِضُونَ ۝٧٦
📖 ಅನುವಾದ ಆಯತ್ 76
ಆದರೆ ಅಲ್ಲಾಹನು ತನ್ನ ಅನುಗ್ರಹವನ್ನು ಅವರಿಗೆ ನೀಡಿದಾಗ ಅವರದರಲ್ಲಿ ಜಿಪುಣತೆಯನ್ನು ತೋರಿದರು ಮತ್ತು ನೆಪಗಳನ್ನೊಡ್ಡುತ್ತಾ ವಿಮುಖರಾಗಿ ಬಿಟ್ಟರು.
فَأَعْقَبَهُمْ نِفَاقًا فِي قُلُوبِهِمْ إِلَىٰ يَوْمِ يَلْقَوْنَهُ بِمَا أَخْلَفُوا اللَّهَ مَا وَعَدُوهُ وَبِمَا كَانُوا يَكْذِبُونَ ۝٧٧
📖 ಅನುವಾದ ಆಯತ್ 77
ಅವರು ಅಲ್ಲಾಹನೊಂದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸಿದುದಕ್ಕಾಗಿ ಮತ್ತು ಸುಳ್ಳು ಹೇಳಿದುದಕ್ಕಾಗಿ ಅವರು ಅಲ್ಲಾಹನನ್ನು ಭೇಟಿಯಾಗುವ ದಿನದವರೆಗೆ ಶಿಕ್ಷಾರ್ಹವಾಗಿ ಅವರ ಹೃದಯಗಳಲ್ಲಿ ಕಾಪಟ್ಯವನ್ನು ಹಾಕಿಬಿಟ್ಟನು.
أَلَمْ يَعْلَمُوا أَنَّ اللَّهَ يَعْلَمُ سِرَّهُمْ وَنَجْوَاهُمْ وَأَنَّ اللَّهَ عَلَّامُ الْغُيُوبِ ۝٧٨
📖 ಅನುವಾದ ಆಯತ್ 78
ನಿಶ್ಚಯವಾಗಿಯು ಅಲ್ಲಾಹನು ಅವರ ರಹಸ್ಯಗಳನ್ನು ಮತ್ತು ಗೂಢಾಲೋಚನೆಗಳನ್ನು ಅರಿಯುವವನೆಂದೂ ಮತ್ತು ಖಂಡಿತವಾಗಿ ಅಲ್ಲಾಹನು ಅಗೋಚರ ವಿಷಯಗಳನ್ನು ಅರಿಯುವವನೆಂದೂ ಅವರಿಗೆ ತಿಳಿದಿಲ್ಲವೇ?
الَّذِينَ يَلْمِزُونَ الْمُطَّوِّعِينَ مِنَ الْمُؤْمِنِينَ فِي الصَّدَقَاتِ وَالَّذِينَ لَا يَجِدُونَ إِلَّا جُهْدَهُمْ فَيَسْخَرُونَ مِنْهُمْ ۙ سَخِرَ اللَّهُ مِنْهُمْ وَلَهُمْ عَذَابٌ أَلِيمٌ ۝٧٩
📖 ಅನುವಾದ ಆಯತ್ 79
ವಿಶ್ವಾಸಿಗಳ ಪೈಕಿ ಸ್ವ-ಇಚ್ಛೆಯಿಂದ ದಾನಧರ್ಮ ಮಾಡುವವರನ್ನು ಮತ್ತು ತಮ್ಮ ಪರಿಶ್ರಮ ಫಲದ ಹೊರತು ಬೇರೇನೂ ಪಡೆಯದಂತಹವರನ್ನು ಕಪಟಿಗಳು ದೋಷಿಸುತ್ತಾರೆ. ಇವರು ಅವರ ಅಪಹಾಸ್ಯ ಮಾಡುತ್ತಾರೆ. ಹಾಗೆಯೇ ಅಲ್ಲಾಹನು ಸಹ ಅವರನ್ನು ಅಪಹಾಸ್ಯ ಮಾಡುತ್ತಾನೆ. ಅವರಿಗೆ ವೇದನಾಜನಕವಾದ ಶಿಕ್ಷೆಯಿದೆ.
اسْتَغْفِرْ لَهُمْ أَوْ لَا تَسْتَغْفِرْ لَهُمْ إِن تَسْتَغْفِرْ لَهُمْ سَبْعِينَ مَرَّةً فَلَن يَغْفِرَ اللَّهُ لَهُمْ ۚ ذَٰلِكَ بِأَنَّهُمْ كَفَرُوا بِاللَّهِ وَرَسُولِهِ ۗ وَاللَّهُ لَا يَهْدِي الْقَوْمَ الْفَاسِقِينَ ۝٨٠
📖 ಅನುವಾದ ಆಯತ್ 80
ಓ ಪೈಗಂಬರರೇ ನೀವು ಅವರಿಗೋಸ್ಕರ ಪಾಪವಿಮೋಚನೆಯನ್ನು ಬೇಡಿದರೂ ಅಥವಾ ಬೇಡದಿದ್ದರೂ, ಮತ್ತು ಅವರಿಗೋಸ್ಕರ ಎಪ್ಪತ್ತು ಬಾರಿ ಪಾಪವಿಮೋಚನೆಯನ್ನು ಬೇಡಿದರೂ ಖಂಡಿತ 'ಅಲ್ಲಾಹನು ಅವರನ್ನು ಕ್ಷಮಿಸುವುದಿಲ್ಲ. ಇದೇಕೆಂದರೆ ಅವರು ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ನಿರಾಕರಿಸಿದ್ದಾರೆ. ಇಂತಹ ಧಿಕ್ಕಾರಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗನ್ನು ನೀಡುವುದಿಲ್ಲ.
فَرِحَ الْمُخَلَّفُونَ بِمَقْعَدِهِمْ خِلَافَ رَسُولِ اللَّهِ وَكَرِهُوا أَن يُجَاهِدُوا بِأَمْوَالِهِمْ وَأَنفُسِهِمْ فِي سَبِيلِ اللَّهِ وَقَالُوا لَا تَنفِرُوا فِي الْحَرِّ ۗ قُلْ نَارُ جَهَنَّمَ أَشَدُّ حَرًّا ۚ لَّوْ كَانُوا يَفْقَهُونَ ۝٨١
📖 ಅನುವಾದ ಆಯತ್ 81
ಯುದ್ದಕ್ಕೆ ಹೊರಡದೆ ಹಿಂದುಳಿದು ಬಿಟ್ಟವರು ಅಲ್ಲಾಹನ ಮತ್ತು ಸಂದೇಶವಾಹಕರ ಆದೇಶದ ವಿರುದ್ಧ ತಮ್ಮ ಮನೆಗಳಲ್ಲಿ ಕುಳಿತುಕೊಳ್ಳುವುದರಲ್ಲಿ ಸಂತೃಪ್ತರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ತನು, ಮನ, ಧನಗಳಿಂದ ಯುದ್ಧ ಮಾಡುವುದನ್ನು ಅನಿಷ್ಟಪಟ್ಟರು ಮತ್ತು ಅವರು ಹೇಳಿದರು: 'ನೀವು ಈ ಉರಿಬಿಸಿಲಿನಲ್ಲಿ ಹೊರಡಬೇಡಿರಿ'. ಹೇಳಿರಿ: 'ನರಕಾಗ್ನಿಯು ಕಠಿಣ ಉರಿಯನ್ನು ಹೊಂದಿದೆ. ಅವರದನ್ನು ಗ್ರಹಿಸುವವರಾಗಿದ್ದರೆ!
فَلْيَضْحَكُوا قَلِيلًا وَلْيَبْكُوا كَثِيرًا جَزَاءً بِمَا كَانُوا يَكْسِبُونَ ۝٨٢
📖 ಅನುವಾದ ಆಯತ್ 82
ಆದ್ದರಿಂದ ಅವರು ಮಾಡುತ್ತಿದ್ದುದರ ಫಲವಾಗಿ ಅವರು ಸ್ವಲ್ಪವೇ ನಗಲಿ ಮತ್ತು ಹೆಚ್ಚು ಅಳಲಿ.
فَإِن رَّجَعَكَ اللَّهُ إِلَىٰ طَائِفَةٍ مِّنْهُمْ فَاسْتَأْذَنُوكَ لِلْخُرُوجِ فَقُل لَّن تَخْرُجُوا مَعِيَ أَبَدًا وَلَن تُقَاتِلُوا مَعِيَ عَدُوًّا ۖ إِنَّكُمْ رَضِيتُم بِالْقُعُودِ أَوَّلَ مَرَّةٍ فَاقْعُدُوا مَعَ الْخَالِفِينَ ۝٨٣
📖 ಅನುವಾದ ಆಯತ್ 83
ಇನ್ನು ಅಲ್ಲಾಹು ನಿಮ್ಮನ್ನು ಅವರ ಪೈಕಿ ಒಂದು ಗುಂಪಿನೆಡೆಗೆ ಮರಳಿಸಿದರೆ ಬಳಿಕ ಅವರು ನಿಮ್ಮೊಂದಿಗೆ ಯುದ್ದರಂಗಕ್ಕೆ ಹೊರಡಲು ಅನುಮತಿ ಕೇಳಿದರೆ ನೀವು ಹೇಳಿ ಬಿಡಿರಿ: 'ನೀವು ನನ್ನೊಂದಿಗೆ ಎಂದಿಗೂ ಹೊರಡಲಾರಿರಿ ಮತ್ತು ನೀವು ನನ್ನ ಜೊತೆ ಒಬ್ಬ ಶತ್ರುವಿನೊಂದಿಗೂ ಯುದ್ಧ ಮಾಡಲಾರಿರಿ. ನೀವು ಮೊದಲ ಬಾರಿಯೇ ಹಿಂದುಳಿದು ಬಿಡುವುದನ್ನು ಇಷ್ಟಪಟ್ಟಿದ್ದಿರಿ. ಆದ್ದರಿಂದ ನೀವು ಹಿಂದುಳಿದು ಬಿಟ್ಟವರೊಂದಿಗೇ ಕುಳಿತುಕೊಂಡಿರಿ.
وَلَا تُصَلِّ عَلَىٰ أَحَدٍ مِّنْهُم مَّاتَ أَبَدًا وَلَا تَقُمْ عَلَىٰ قَبْرِهِ ۖ إِنَّهُمْ كَفَرُوا بِاللَّهِ وَرَسُولِهِ وَمَاتُوا وَهُمْ فَاسِقُونَ ۝٨٤
📖 ಅನುವಾದ ಆಯತ್ 84
ಅವರ ಪೈಕಿ ಯಾರಾದರೂ ಮೃತಪಟ್ಟರೆ ನೀವು ಅವನ ಜನಾಝಾ ನಮಾಝ್ ಮಾಡಬೇಡಿರಿ. ಅವನ ಗೋರಿಯ ಬಳಿ ನಿಲ್ಲಲೂ ಬೇಡಿರಿ. ಅವರು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಧಿಕ್ಕಾರಿಗಳಾಗಿಯೇ ಮೃತಪಟ್ಟರು.
وَلَا تُعْجِبْكَ أَمْوَالُهُمْ وَأَوْلَادُهُمْ ۚ إِنَّمَا يُرِيدُ اللَّهُ أَن يُعَذِّبَهُم بِهَا فِي الدُّنْيَا وَتَزْهَقَ أَنفُسُهُمْ وَهُمْ كَافِرُونَ ۝٨٥
📖 ಅನುವಾದ ಆಯತ್ 85
ನಿಮಗೆ ಅವರ ಸಂಪತ್ತುಗಳು ಮತ್ತು ಸಂತಾನಗಳು ಚಕಿತಗೊಳಿಸದಿರಲಿ. ನಿಶ್ಚಯವಾಗಿಯು ಅಲ್ಲಾಹನು ಅವರನ್ನು ಅವುಗಳ ಮೂಲಕ ಐಹಿಕ ಶಿಕ್ಷೆಯನ್ನು ನೀಡಲು ಮತ್ತು ಸತ್ಯನಿಷೇಧಿಗಳಿಗಿರುವಂತೆಯೇ ಅವರ ಪ್ರಾಣಹರಣ ಮಾಡಲು ಇಚ್ಛಿಸುತ್ತಾನೆ.
وَإِذَا أُنزِلَتْ سُورَةٌ أَنْ آمِنُوا بِاللَّهِ وَجَاهِدُوا مَعَ رَسُولِهِ اسْتَأْذَنَكَ أُولُو الطَّوْلِ مِنْهُمْ وَقَالُوا ذَرْنَا نَكُن مَّعَ الْقَاعِدِينَ ۝٨٦
📖 ಅನುವಾದ ಆಯತ್ 86
ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ಸಂದೇಶವಾಹಕರೊAದಿಗೆ ಸೇರಿ ಯುದ್ಧ ಮಾಡಿರೆನ್ನುತ್ತಾ ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದರೆ ಅವರ ಪೈಕಿ ಐಶ್ವರ್ಯವಂತರ ವರ್ಗವು ನಿಮ್ಮ ಬಳಿಗೆ ಬಂದು ಹೀಗೆ ಅನುಮತಿಯನ್ನು ಕೇಳುತ್ತಾರೆ; ನಮ್ಮನ್ನು ಬಿಟ್ಟು ಬಿಡಿರಿ. ಯುದ್ಧಕ್ಕೆ ಹೊರಡದೆ ಕುಳಿತುಬಿಟ್ಟವರಲ್ಲೇ ನಾವು ಕುಳಿತುಬಿಡುವೆವು.
رَضُوا بِأَن يَكُونُوا مَعَ الْخَوَالِفِ وَطُبِعَ عَلَىٰ قُلُوبِهِمْ فَهُمْ لَا يَفْقَهُونَ ۝٨٧
📖 ಅನುವಾದ ಆಯತ್ 87
ಮನೆಯೊಳಗೆ ಕುಳಿತಿರುವ ಸ್ತಿçÃಯರ ಜೊತೆ ಕುಳಿತುಕೊಳ್ಳುವುದರಲ್ಲಿ ಅವರು ಸಂತೃಪ್ತರಾಗಿದ್ದಾರೆ ಮತ್ತು ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ. ಆದ್ದರಿಂದ ಅವರು ಗ್ರಹಿಸುವುದಿಲ್ಲ.
لَٰكِنِ الرَّسُولُ وَالَّذِينَ آمَنُوا مَعَهُ جَاهَدُوا بِأَمْوَالِهِمْ وَأَنفُسِهِمْ ۚ وَأُولَٰئِكَ لَهُمُ الْخَيْرَاتُ ۖ وَأُولَٰئِكَ هُمُ الْمُفْلِحُونَ ۝٨٨
📖 ಅನುವಾದ ಆಯತ್ 88
ಆದರೆ ಸಂದೇಶವಾಹಕರು ಮತ್ತು ಅವರ ಜೊತೆ ವಿಶ್ವಾಸವಿಟ್ಟವರು ತಮ್ಮ ತನು, ಮನ, ಧನಗಳಿಂದ ಯುದ್ಧ ಮಾಡುತ್ತಾರೆ. ಅವರಿಗೇ ಸರ್ವ ಒಳಿತುಗಳಿವೆ. ಅವರೇ ಯಶಸ್ಸು ಪಡೆಯುವವರಾಗಿದ್ದಾರೆ.
أَعَدَّ اللَّهُ لَهُمْ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ ذَٰلِكَ الْفَوْزُ الْعَظِيمُ ۝٨٩
📖 ಅನುವಾದ ಆಯತ್ 89
ಅಲ್ಲಾಹನು ಅವರಿಗೆ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅದರಲ್ಲವರು ಶಾಶ್ವತವಾಗಿ ವಾಸಿಸುವರು. ಇದುವೇ ಮಹಾವಿಜಯವಾಗಿದೆ.
وَجَاءَ الْمُعَذِّرُونَ مِنَ الْأَعْرَابِ لِيُؤْذَنَ لَهُمْ وَقَعَدَ الَّذِينَ كَذَبُوا اللَّهَ وَرَسُولَهُ ۚ سَيُصِيبُ الَّذِينَ كَفَرُوا مِنْهُمْ عَذَابٌ أَلِيمٌ ۝٩٠
📖 ಅನುವಾದ ಆಯತ್ 90
ಗ್ರಾಮೀಣ ವಾಸಿಗಳ ಪೈಕಿ ನೆಪಗಳನ್ನೊಡ್ಡುವ ಜನರು ಅನುಮತಿ ಪಡೆಯಲಿಕ್ಕಾಗಿ ಹಾಜರಾದರು ಮತ್ತು ಅಲ್ಲಾಹನೊಂದಿಗೂ ಹಾಗೂ ಅವನ ಸಂದೇಶವಾಹಕನೊAದಿಗೂ ಸುಳ್ಳು ಹೇಳಿದವರು ಕುಳಿತು ಬಿಟ್ಟರು. ಇನ್ನು ಅವರ ಪೈಕಿ ಸತ್ಯವನ್ನು ನಿಷೇಧಿಸುವರಿಗೆ ವೇದನಾಜನಕವಾದ ಶಿಕ್ಷೆಯು ಬಾಧಿಸಲಿರುವುದು.
لَّيْسَ عَلَى الضُّعَفَاءِ وَلَا عَلَى الْمَرْضَىٰ وَلَا عَلَى الَّذِينَ لَا يَجِدُونَ مَا يُنفِقُونَ حَرَجٌ إِذَا نَصَحُوا لِلَّهِ وَرَسُولِهِ ۚ مَا عَلَى الْمُحْسِنِينَ مِن سَبِيلٍ ۚ وَاللَّهُ غَفُورٌ رَّحِيمٌ ۝٩١
📖 ಅನುವಾದ ಆಯತ್ 91
ದುರ್ಬಲರು, ರೋಗಿಗಳು, ಖರ್ಚು ಮಾಡುವುದಕ್ಕಾಗಿ ಏನೂ ಇಲ್ಲದವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ಪ್ರಾಮಾಣಿಕರಾಗಿದ್ದರೆ. ಅಂತಹ ಸಜ್ಜನರ ಮೇಲೆ ಆಕ್ಷೇಪಿಸಲು ಯಾವುದೇ ಮಾರ್ಗವಿಲ್ಲ. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
وَلَا عَلَى الَّذِينَ إِذَا مَا أَتَوْكَ لِتَحْمِلَهُمْ قُلْتَ لَا أَجِدُ مَا أَحْمِلُكُمْ عَلَيْهِ تَوَلَّوا وَّأَعْيُنُهُمْ تَفِيضُ مِنَ الدَّمْعِ حَزَنًا أَلَّا يَجِدُوا مَا يُنفِقُونَ ۝٩٢
📖 ಅನುವಾದ ಆಯತ್ 92
ಯುದ್ಧಕ್ಕೆ ಹೊರಡಲು ತಮಗೆ ಸವಾರಿ ಒದಗಿಸಿಕೊಡಬೆಕೆಂದು ನಿಮ್ಮ ಬಳಿ ಬೇಡುತ್ತಾ ಬಂದವರೂ ಆಕ್ಷೇಪಾರ್ಹರಲ್ಲ. ಆಗ ನೀವು ಉತ್ತರಿಸಿದಿರಿ: ನಿಮಗೆ ಸವಾರು ಮಾಡಲು ನನ್ನ ಬಳಿ ಯಾವುದೇ ಸವಾರಿಯಿಲ್ಲ. ಆಗ ಅವರು ತಮಗೆ ಖರ್ಚು ಮಾಡಲು ಏನೂ ಇಲ್ಲವಲ್ಲ ಎಂದು ದುಃಖದಿಂದ ಕಣ್ಣೀರು ಸುರಿಸುತ್ತಾ ಮರಳಿದರು.
۞ إِنَّمَا السَّبِيلُ عَلَى الَّذِينَ يَسْتَأْذِنُونَكَ وَهُمْ أَغْنِيَاءُ ۚ رَضُوا بِأَن يَكُونُوا مَعَ الْخَوَالِفِ وَطَبَعَ اللَّهُ عَلَىٰ قُلُوبِهِمْ فَهُمْ لَا يَعْلَمُونَ ۝٩٣
📖 ಅನುವಾದ ಆಯತ್ 93
ನಿಸ್ಸಂದೇಹವಾಗಿಯೂ ಆಕ್ಷೇಪಾರ್ಹರು ಸ್ಥಿತಿವಂತರಾಗಿದ್ದೂ ಸಹ ಯುದ್ಧಕ್ಕೆ ಹೊರಡದಿರಲು ನಿಮ್ಮೊಂದಿಗೆ ಅನುಮತಿಯನ್ನು ಕೇಳುವವರಾಗಿದ್ದಾರೆ. ಅವರು ಮನೆಯೊಳಗೆ ಕುಳಿತಿರುವ ಸ್ತಿçÃಯರ ಜೊತೆ ಕುಳಿತುಕೊಳ್ಳುವುದರಲ್ಲಿ ಸಂತೃಪ್ತರಾಗಿದ್ದಾರೆ. ಮತ್ತು ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ. ಆದ್ದರಿಂದ ಅವರು ಅರಿತುಕೊಳ್ಳುವುದಿಲ್ಲ.
يَعْتَذِرُونَ إِلَيْكُمْ إِذَا رَجَعْتُمْ إِلَيْهِمْ ۚ قُل لَّا تَعْتَذِرُوا لَن نُّؤْمِنَ لَكُمْ قَدْ نَبَّأَنَا اللَّهُ مِنْ أَخْبَارِكُمْ ۚ وَسَيَرَى اللَّهُ عَمَلَكُمْ وَرَسُولُهُ ثُمَّ تُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُم بِمَا كُنتُمْ تَعْمَلُونَ ۝٩٤
📖 ಅನುವಾದ ಆಯತ್ 94
(ಓ ಪೈಗಂಬರರೇ) ನೀವು ಅವರ ಬಳಿಗೆ ಮರಳಿ ಹೋದಾಗ ಅವರು ನಿಮ್ಮ ಮುಂದೆ ನೆಪಗಳನ್ನೊಡ್ಡುತ್ತಾರೆ. ಹೇಳಿರಿ: ನೀವು ನೆಪವನ್ನು ಹೇಳಬೇಡಿರಿ. ನಾವು ನಿಮ್ಮನ್ನು ನಂಬುವುದಿಲ್ಲ ಏಕೆಂದರೆ ಅಲ್ಲಾಹನು ನಮಗೆ ನಿಮ್ಮ ವಿಷಯವನ್ನು ತಿಳಿಸಿದ್ದಾನೆ ಮತ್ತು ಮುಂದೆಯೂ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ನಿಮ್ಮ ಕರ್ಮಗಳನ್ನು ನೋಡಲಿರುವರು. ನಂತರ ನೀವು ರಹಸ್ಯ ಮತ್ತು ಬಹಿರಂಗವನ್ನು ಬಲ್ಲವನೆಡೆಗೆ (ಅಲ್ಲಾಹನೆಡೆಗೆ) ಮರಳಿಸಲಾಗುವಿರಿ. ಆಗ ಅವನು ನೀವೇನನ್ನು ಮಾಡುತ್ತಿದ್ದೀರೆಂದು ನಿಮಗೆ ತಿಳಿಸಿಕೊಡುವನು.
سَيَحْلِفُونَ بِاللَّهِ لَكُمْ إِذَا انقَلَبْتُمْ إِلَيْهِمْ لِتُعْرِضُوا عَنْهُمْ ۖ فَأَعْرِضُوا عَنْهُمْ ۖ إِنَّهُمْ رِجْسٌ ۖ وَمَأْوَاهُمْ جَهَنَّمُ جَزَاءً بِمَا كَانُوا يَكْسِبُونَ ۝٩٥
📖 ಅನುವಾದ ಆಯತ್ 95
ನೀವು ಅವರ ಬಳಿಗೆ ಮರಳಿದಾಗ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಲೆಂದು ಅವರು ಅಲ್ಲಾಹನ ಆಣೆ ಹಾಕುವರು ಆದುದರಿಂದ ನೀವು ಅವರನ್ನು ಅವರಪಾಡಿಗೆ ಬಿಟ್ಟು ಬಿಡಿರಿ ಅವರು ಖಂಡಿತವಾಗಿಯೂ ಅಶುದ್ಧರಾಗಿದ್ದಾರೆ ಮತ್ತು ಅವರ ವಾಸಸ್ಥಳವು ನರಕವಾಗಿದೆ. ಇದು ಅವರು ಸಂಪಾದಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ.
يَحْلِفُونَ لَكُمْ لِتَرْضَوْا عَنْهُمْ ۖ فَإِن تَرْضَوْا عَنْهُمْ فَإِنَّ اللَّهَ لَا يَرْضَىٰ عَنِ الْقَوْمِ الْفَاسِقِينَ ۝٩٦
📖 ಅನುವಾದ ಆಯತ್ 96
ನೀವು ಅವರ ಬಗ್ಗೆ ಸಂತೃಪ್ತರಾಗುವುದಕ್ಕಾಗಿ ಅವರು ನಿಮ್ಮ ಮುಂದೆ ಆಣೆ ಹಾಕುತ್ತಾರೆ. ನೀವು ಅವರ ಬಗ್ಗೆ ಸಂತೃಪ್ತರಾದರೂ ಅಲ್ಲಾಹನಂತು ಅಂತಹ ಧಿಕ್ಕಾರಿಗಳಾದ ಜನರ ಬಗ್ಗೆ ಸಂತೃಪ್ತನಾಗುವುದಿಲ್ಲ.
الْأَعْرَابُ أَشَدُّ كُفْرًا وَنِفَاقًا وَأَجْدَرُ أَلَّا يَعْلَمُوا حُدُودَ مَا أَنزَلَ اللَّهُ عَلَىٰ رَسُولِهِ ۗ وَاللَّهُ عَلِيمٌ حَكِيمٌ ۝٩٧
📖 ಅನುವಾದ ಆಯತ್ 97
ಗ್ರಾಮೀಣ ನಿವಾಸಿಗಳು ಸತ್ಯನಿಷೇಧ ಮತ್ತು ಕಾಪಟ್ಯದಲ್ಲಿ ಅತ್ಯಂತ ಕಠಿಣರಾಗಿದ್ದಾರೆ. ಅಲ್ಲಾಹನು ತನ್ನ ಸಂದೇಶವಾಹಕರ ಮೇಲೆ ಅವತೀರ್ಣಗೊಳಿಸಿದ (ಮೇರೆ) ನಿಯಮಗಳನ್ನು ಅವರು ಅರಿಯದಿರುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَمِنَ الْأَعْرَابِ مَن يَتَّخِذُ مَا يُنفِقُ مَغْرَمًا وَيَتَرَبَّصُ بِكُمُ الدَّوَائِرَ ۚ عَلَيْهِمْ دَائِرَةُ السَّوْءِ ۗ وَاللَّهُ سَمِيعٌ عَلِيمٌ ۝٩٨
📖 ಅನುವಾದ ಆಯತ್ 98
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು ಎರಗಲೆಂದು ನಿರೀಕ್ಷಿಸುವ ಕೂಟವೂ ಗ್ರಾಮೀಣವಾಸಿಗಳಲ್ಲಿದೆ. ವಿಪತ್ತುಗಳಂತೂ ಅವರ ಮೇಲೆಯೇ ಎರಗಲಿವೆ ಮತ್ತು ಅಲ್ಲಾಹನು ಸರ್ವವನ್ನು ಆಲಿಸುವವನು, ಅರಿಯುವವನೂ ಆಗಿದ್ದಾನೆ.
وَمِنَ الْأَعْرَابِ مَن يُؤْمِنُ بِاللَّهِ وَالْيَوْمِ الْآخِرِ وَيَتَّخِذُ مَا يُنفِقُ قُرُبَاتٍ عِندَ اللَّهِ وَصَلَوَاتِ الرَّسُولِ ۚ أَلَا إِنَّهَا قُرْبَةٌ لَّهُمْ ۚ سَيُدْخِلُهُمُ اللَّهُ فِي رَحْمَتِهِ ۗ إِنَّ اللَّهَ غَفُورٌ رَّحِيمٌ ۝٩٩
📖 ಅನುವಾದ ಆಯತ್ 99
ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಕೂಟವೊಂದು ಗ್ರಾಮೀಣವಾಸಿಗಳಲ್ಲಿದೆ. ಮತ್ತು ಅವÀರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಅಲ್ಲಾಹನ ಸಾಮೀಪ್ಯ ಸಾಧನವನ್ನಾಗಿಯೂ, ಮತ್ತು ಸಂದೇಶವಾಹಕರ ಕಡೆಯಿಂದ ಕೃಪಾಶೀರ್ವಾದ ಪಡೆಯುವ ಸಾಧನ ವನ್ನಾಗಿಯೂ ಮಾಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ: ನಿಸ್ಸಂಶಯವಾಗಿಯೂ ಇದು ಅವರಿಗೆ ಸಾಮೀಪ್ಯಕ್ಕಿರುವ ಸಾಧನವಾಗಿದೆ. ಸಧ್ಯದಲ್ಲೇ ಅಲ್ಲಾಹನು ಅವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
وَالسَّابِقُونَ الْأَوَّلُونَ مِنَ الْمُهَاجِرِينَ وَالْأَنصَارِ وَالَّذِينَ اتَّبَعُوهُم بِإِحْسَانٍ رَّضِيَ اللَّهُ عَنْهُمْ وَرَضُوا عَنْهُ وَأَعَدَّ لَهُمْ جَنَّاتٍ تَجْرِي تَحْتَهَا الْأَنْهَارُ خَالِدِينَ فِيهَا أَبَدًا ۚ ذَٰلِكَ الْفَوْزُ الْعَظِيمُ ۝١٠٠
📖 ಅನುವಾದ ಆಯತ್ 100
ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯವಿಶ್ವಾಸದಲ್ಲಿ) ಮೂಂಚೂಣಿ ಯಲ್ಲಿರುವ ಮತ್ತು ಅವರನ್ನು ನಿಷ್ಕಳಂಕದೊAದಿಗೆ ಅನುಸರಿಸಿದವರ ಬಗ್ಗೆ ಅಲ್ಲಾಹನು ಸಂತುಷ್ಟನಾಗಿರುವನು ಮತ್ತು ಅವರೆಲ್ಲರೂ ಅವನ ಬಗ್ಗೆ ಸಂತೃಪ್ತರಾಗಿರುವರು ಮತ್ತು ಅಲ್ಲಾಹನು ಅವರಿಗೋಸ್ಕರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ತೋಟಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಇದು ಮಹಾ ಯಶಸ್ಸಾಗಿದೆ.
وَمِمَّنْ حَوْلَكُم مِّنَ الْأَعْرَابِ مُنَافِقُونَ ۖ وَمِنْ أَهْلِ الْمَدِينَةِ ۖ مَرَدُوا عَلَى النِّفَاقِ لَا تَعْلَمُهُمْ ۖ نَحْنُ نَعْلَمُهُمْ ۚ سَنُعَذِّبُهُم مَّرَّتَيْنِ ثُمَّ يُرَدُّونَ إِلَىٰ عَذَابٍ عَظِيمٍ ۝١٠١
📖 ಅನುವಾದ ಆಯತ್ 101
ಮತ್ತು ನಿಮ್ಮ ಸುತ್ತಮುತ್ತಲಲ್ಲಿರುವ ಗ್ರಾಮೀಣ ವಾಸಿಗಳಲ್ಲಿಯೂ ಮತ್ತು ಮದೀನಾದ ವಾಸಿಗಳಲ್ಲಿಯೂ ಕಪಟವಿಶ್ವಾಸಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಬೇರೂರಿಬಿಟ್ಟಿದ್ದಾರೆ. ತಾವು ಅವರನ್ನು ಅರಿತಿಲ್ಲ. ಅವರನ್ನು ನಾವು ಅರಿತಿದ್ದೇವೆ. ನಾವು ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರು ಮಹಾ ಭೀಕರ ಶಿಕ್ಷೆಯೆಡೆಗೆ ಮರಳಿಸಲಾಗುವರು.
وَآخَرُونَ اعْتَرَفُوا بِذُنُوبِهِمْ خَلَطُوا عَمَلًا صَالِحًا وَآخَرَ سَيِّئًا عَسَى اللَّهُ أَن يَتُوبَ عَلَيْهِمْ ۚ إِنَّ اللَّهَ غَفُورٌ رَّحِيمٌ ۝١٠٢
📖 ಅನುವಾದ ಆಯತ್ 102
ಮತ್ತು ತಮ್ಮ ತಪ್ಪನ್ನು ಒಪ್ಪಿಕೊಂಡವರೂ ಕೆಲವರಿದ್ದಾರೆ. ಅವರು ಸತ್ಕರ್ಮವನ್ನು ದುಷ್ಕರ್ಮದೊಂದಿಗೆ ಬೆರೆಸಿದ್ದರು. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಸ್ಸಂದೇಹವಾಗಿಯೂ ಅಲ್ಲಾಹನು ಅತ್ಯಂತ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
خُذْ مِنْ أَمْوَالِهِمْ صَدَقَةً تُطَهِّرُهُمْ وَتُزَكِّيهِم بِهَا وَصَلِّ عَلَيْهِمْ ۖ إِنَّ صَلَاتَكَ سَكَنٌ لَّهُمْ ۗ وَاللَّهُ سَمِيعٌ عَلِيمٌ ۝١٠٣
📖 ಅನುವಾದ ಆಯತ್ 103
ತಾವು ಅವರ ಸೊತ್ತಿನಿಂದ ದಾನವನ್ನು ತೆಗೆÀದುಕೊಳ್ಳಿರಿ. ಅದರ ಮೂಲಕ ತಾವು ಅವರನ್ನು ಶುದ್ಧಿಕರಿಸಿರಿ ಹಾಗೂ ಸಂಸ್ಕರಿಸಿರಿ ಮತ್ತು ಅವರಿಗೋಸ್ಕರ ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯೂ ತಮ್ಮ ಪ್ರಾರ್ಥನೆಯು ಅವರಿಗೆ ಶಾಂತಿದಾಯಕವಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಆಲಿಸುವವನೂ ಮತ್ತು ಅರಿಯುವವನೂ ಆಗಿದ್ದಾನೆ.
أَلَمْ يَعْلَمُوا أَنَّ اللَّهَ هُوَ يَقْبَلُ التَّوْبَةَ عَنْ عِبَادِهِ وَيَأْخُذُ الصَّدَقَاتِ وَأَنَّ اللَّهَ هُوَ التَّوَّابُ الرَّحِيمُ ۝١٠٤
📖 ಅನುವಾದ ಆಯತ್ 104
ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನೆಂದೂ, ಅವನೇ ದಾನಗಳನ್ನು ಸ್ವೀಕರಿಸುವವನೆಂದೂ ಅವರಿಗೆ ತಿಳಿದಿಲ್ಲವೇ ಮತ್ತು ನಿಸ್ಸಂಶಯವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ, ಕಾರುಣಾನಿಧಿಯೂ ಆಗಿದ್ದಾನೆ.
وَقُلِ اعْمَلُوا فَسَيَرَى اللَّهُ عَمَلَكُمْ وَرَسُولُهُ وَالْمُؤْمِنُونَ ۖ وَسَتُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُم بِمَا كُنتُمْ تَعْمَلُونَ ۝١٠٥
📖 ಅನುವಾದ ಆಯತ್ 105
ತಾವು ಹೇಳಿರಿ: ನೀವು ಕಾರ್ಯವೆಸÀಗಿರಿ ನಿಮ್ಮ ಕರ್ಮಗಳನ್ನು ಸ್ವತಃ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನೋಡಲಿರುವರು ಮತ್ತು ಖಂಡಿತವಾಗಿಯೂ ನೀವು ಸಕಲ ರಹಸ್ಯ ಹಾಗೂ ಬಹಿರಂಗ ವಿಷಯಗಳನ್ನು ಬಲ್ಲವನೆಡೆಗೆ ಮರಳಿಸಲಾಗುವಿರಿ. ಹಾಗೆಯೇ ಅವನು ನಿಮ್ಮ ಸಕಲ ಕೃತ್ಯಗಳನ್ನು ತಿಳಿಸಲಿದ್ದಾನೆ.
وَآخَرُونَ مُرْجَوْنَ لِأَمْرِ اللَّهِ إِمَّا يُعَذِّبُهُمْ وَإِمَّا يَتُوبُ عَلَيْهِمْ ۗ وَاللَّهُ عَلِيمٌ حَكِيمٌ ۝١٠٦
📖 ಅನುವಾದ ಆಯತ್ 106
ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
وَالَّذِينَ اتَّخَذُوا مَسْجِدًا ضِرَارًا وَكُفْرًا وَتَفْرِيقًا بَيْنَ الْمُؤْمِنِينَ وَإِرْصَادًا لِّمَنْ حَارَبَ اللَّهَ وَرَسُولَهُ مِن قَبْلُ ۚ وَلَيَحْلِفُنَّ إِنْ أَرَدْنَا إِلَّا الْحُسْنَىٰ ۖ وَاللَّهُ يَشْهَدُ إِنَّهُمْ لَكَاذِبُونَ ۝١٠٧
📖 ಅನುವಾದ ಆಯತ್ 107
ಮತ್ತು (ಸತ್ಯವಿಶ್ವಾಸಿಗಳಿಗೆ) ಕೇಡು ಬಗೆಯುವ ಉದ್ದೇಶದಿಂದಲೂ, ಸತ್ಯನಿಷೇಧವನ್ನು ಬಲಪಡಿಸುವ ಉದ್ದೇಶದಿಂದಲೂ, ಸತ್ಯವಿಶ್ವಾಸಿಗಳ ನಡುವೆ ಭಿನ್ನತೆಯನ್ನುಂಟು ಮಾಡುವ ಉದ್ದೇಶದಿಂದಲೂ ಮತ್ತು ಅಲ್ಲಾಹನ ಹಾಗೂ ಅವನ ಸಂದೇಶವಾಹಕರಿಗೆ ವಿರೋಧಿಯಾಗಿ ಈ ಮೊದಲಿನಿಂದಲೇ ಹೋರಾಡುತ್ತಾ ಬಂದಿರುವ ವ್ಯಕ್ತಿಯೊಬ್ಬನಿಗೆ ಹೊಂಚು ತಾಣವನ್ನಾಗಿಡುವ ಉದ್ದೇಶದಿಂದಲೂ ಮಸೀದಿಯೊಂದನ್ನು ನಿರ್ಮಿಸಿದವರು ಸಹ ಆ ಕಪಟ ವಿಶ್ವಾಸಿಗಳ ಪೈಕಿಯಲ್ಲಿದ್ದಾರೆ. ಮತ್ತು ಅವರು ಒಳಿತಿನ ಹೊರತು ಇನ್ನಾವುದೇ ಉದ್ದೇಶ ನಮಗಿರಲಿಲ್ಲ ಎಂದು ಆಣೆಯಿಟ್ಟು ಹೇಳುವರು. ಅವರು ಸಂಪೂರ್ಣ ಸುಳ್ಳುಗಾರರಾಗಿದ್ದಾರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
لَا تَقُمْ فِيهِ أَبَدًا ۚ لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ۝١٠٨
📖 ಅನುವಾದ ಆಯತ್ 108
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.
أَفَمَنْ أَسَّسَ بُنْيَانَهُ عَلَىٰ تَقْوَىٰ مِنَ اللَّهِ وَرِضْوَانٍ خَيْرٌ أَم مَّنْ أَسَّسَ بُنْيَانَهُ عَلَىٰ شَفَا جُرُفٍ هَارٍ فَانْهَارَ بِهِ فِي نَارِ جَهَنَّمَ ۗ وَاللَّهُ لَا يَهْدِي الْقَوْمَ الظَّالِمِينَ ۝١٠٩
📖 ಅನುವಾದ ಆಯತ್ 109
ಅನಂತರ ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯಭಕ್ತಿ ಮತ್ತು ಅವನ ಸಂತೃಪ್ತಿಯ ಮೇಲೆ ನಿರ್ಮಿಸುವವನು ಉತ್ತಮನೋ ಅಥವಾ ಕಟ್ಟಡವನ್ನು ಯಾವುದಾದರೂ ಕುಸಿದುಬೀಳಲಿಕ್ಕಿರುವ ಅಸ್ಥಿರ ಅಂಚಿನಲ್ಲಿ ನಿರ್ಮಿಸಿ ಕೊನೆಗೆ ಅದರೊಂದಿಗೆ ನರಕಾಗ್ನಿಯಲ್ಲಿ ಬೀಳುವವನೋ? ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗವನ್ನು ತೋರಲಾರನು.
لَا يَزَالُ بُنْيَانُهُمُ الَّذِي بَنَوْا رِيبَةً فِي قُلُوبِهِمْ إِلَّا أَن تَقَطَّعَ قُلُوبُهُمْ ۗ وَاللَّهُ عَلِيمٌ حَكِيمٌ ۝١١٠
📖 ಅನುವಾದ ಆಯತ್ 110
ಅವರ ಹೃದಯಗಳು ನುಚ್ಚು ನೂರಾಗುವವರೆಗೂ ಅವರು ನಿರ್ಮಿಸಿದಂತಹ ಈ ಕಟ್ಟಡವು (ಮಸೀದಿ) ಅವರ ಹೃದಯಗಳಲ್ಲಿ ಸದಾ ಸಂಶಯ ಮೂಲವಾಗಿ ಉಳಿಯುವುದು. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
۞ إِنَّ اللَّهَ اشْتَرَىٰ مِنَ الْمُؤْمِنِينَ أَنفُسَهُمْ وَأَمْوَالَهُم بِأَنَّ لَهُمُ الْجَنَّةَ ۚ يُقَاتِلُونَ فِي سَبِيلِ اللَّهِ فَيَقْتُلُونَ وَيُقْتَلُونَ ۖ وَعْدًا عَلَيْهِ حَقًّا فِي التَّوْرَاةِ وَالْإِنجِيلِ وَالْقُرْآنِ ۚ وَمَنْ أَوْفَىٰ بِعَهْدِهِ مِنَ اللَّهِ ۚ فَاسْتَبْشِرُوا بِبَيْعِكُمُ الَّذِي بَايَعْتُم بِهِ ۚ وَذَٰلِكَ هُوَ الْفَوْزُ الْعَظِيمُ ۝١١١
📖 ಅನುವಾದ ಆಯತ್ 111
ನಿಸ್ಸಂಶಯವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ ಜೀವಗಳನ್ನೂ, ಅವರ ಸಂಪತ್ತುಗಳನ್ನೂ ಅವರಿಗೆ ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಅದರಲ್ಲಿ ಅವರು ಕೊಲ್ಲುತ್ತಾರೆ ಮತ್ತು ಕೊಲ್ಲಲ್ಪಡುತ್ತಾರೆ. ಈ ಬಗ್ಗೆ ತೌರಾತ್‌ನಲ್ಲೂ, ಇಂಜೀಲ್‌ನಲ್ಲೂ ಮತ್ತು ಕುರ್‌ಆನ್‌ನಲ್ಲೂ ಸತ್ಯವಾದ ವಾಗ್ದಾನ ನೀಡಲಾಗಿದೆ ಮತ್ತು ಅಲ್ಲಾಹನಿಗಿಂತ ಹೆಚ್ಚು ತನ್ನ ವಾಗ್ದಾನವನ್ನು ಈಡೇರಿಸುವವನು ಇನ್ನಾರಿದ್ದಾನೆ? ಆದ್ದರಿಂದ ನೀವು ಆತನೊಂದಿಗೆ ಮಾಡಿದ ಈ ವ್ಯವಹಾರದ ವಿಚಾರವಾಗಿ ಸಂತೋಷಪಡಿರಿ ಮತ್ತು ಇದು ಮಹಾ ಯಶಸ್ಸಾಗಿದೆ.
التَّائِبُونَ الْعَابِدُونَ الْحَامِدُونَ السَّائِحُونَ الرَّاكِعُونَ السَّاجِدُونَ الْآمِرُونَ بِالْمَعْرُوفِ وَالنَّاهُونَ عَنِ الْمُنكَرِ وَالْحَافِظُونَ لِحُدُودِ اللَّهِ ۗ وَبَشِّرِ الْمُؤْمِنِينَ ۝١١٢
📖 ಅನುವಾದ ಆಯತ್ 112
ಅವರು ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುವವರು, ಆರಾಧನೆ ಮಾಡುವವರು, ಸ್ತುತಿಸುವವರು, ಉಪವಾಸವನ್ನಾಚರಿಸುವವರು, ತಲೆಬಾಗಿಸುವವರು ಸಾಷ್ಟಾಂಗ ಮಾಡುವವರು, ಒಳಿತುಗಳ ಶಿಕ್ಷಣ ನೀಡುವವರು, ಕೆಡಕು ವಿಚಾರಗಳಿಂದ ತಡೆಯುವವರು ಮತ್ತು ಅಲ್ಲಾಹನ ಮೇರೆಗಳ ಎಚ್ಚರ ವಹಿಸುವವರಾಗಿದ್ದಾರೆ. ಮತ್ತು ಇಂತಹ ಸತ್ಯವಿಶ್ವಾಸಿಗಳಿಗೆ ತಾವು ಶುಭವಾರ್ತೆಯನ್ನು ನೀಡಿರಿ.
مَا كَانَ لِلنَّبِيِّ وَالَّذِينَ آمَنُوا أَن يَسْتَغْفِرُوا لِلْمُشْرِكِينَ وَلَوْ كَانُوا أُولِي قُرْبَىٰ مِن بَعْدِ مَا تَبَيَّنَ لَهُمْ أَنَّهُمْ أَصْحَابُ الْجَحِيمِ ۝١١٣
📖 ಅನುವಾದ ಆಯತ್ 113
ಬಹುದೇವಾರಾಧಕರು ನರಕಕ್ಕೆ ಅರ್ಹರೆಂಬ ವಿಷಯ ಸ್ಪಷ್ಟವಾದ ಬಳಿಕ ಅವರು ಆಪ್ತಬಂಧುಗಳೇ ಆಗಿದ್ದರು. ಅವರ ಕ್ಷಮೆಗಾಗಿ ಪ್ರಾರ್ಥಿಸುವುದು ಪೈಗಂಬರರಿಗೂ, ಸತ್ಯವಿಶ್ವಾಸಿಗಳಿಗೂ ಯುಕ್ತವಲ್ಲ.
وَمَا كَانَ اسْتِغْفَارُ إِبْرَاهِيمَ لِأَبِيهِ إِلَّا عَن مَّوْعِدَةٍ وَعَدَهَا إِيَّاهُ فَلَمَّا تَبَيَّنَ لَهُ أَنَّهُ عَدُوٌّ لِّلَّهِ تَبَرَّأَ مِنْهُ ۚ إِنَّ إِبْرَاهِيمَ لَأَوَّاهٌ حَلِيمٌ ۝١١٤
📖 ಅನುವಾದ ಆಯತ್ 114
ಮತ್ತು ಇಬ್ರಾಹೀಮ್‌ರವರು ತನ್ನ ತಂದೆಗಾಗಿ ಕ್ಷಮೆ ಯಾಚಿಸಿದ್ದು ಕೇವಲ ಅವರು ಅವನೊಂದಿಗೆ ಮಾಡಿದ ವಾಗ್ದಾನದಿಂದಾಗಿತ್ತು. ಅನಂತರ ಅವರಿಗೆ ಅವರ ತಂದೆಯು ಅಲ್ಲಾಹನ ಶತ್ರುವೆಂದು ಸ್ಪಷ್ಟವಾದಾಗ ಅವರು ಆತನಿಂದ ಸಂಪೂರ್ಣವಾಗಿ ಬೇಸರದಿಂದ ಸರಿದುಬಿಟ್ಟರು. ಖಂಡಿತವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯಿಯೂ, ಸಹನಾಶೀಲರೂ ಆಗಿದ್ದರು.
وَمَا كَانَ اللَّهُ لِيُضِلَّ قَوْمًا بَعْدَ إِذْ هَدَاهُمْ حَتَّىٰ يُبَيِّنَ لَهُم مَّا يَتَّقُونَ ۚ إِنَّ اللَّهَ بِكُلِّ شَيْءٍ عَلِيمٌ ۝١١٥
📖 ಅನುವಾದ ಆಯತ್ 115
ಮತ್ತು ಅಲ್ಲಾಹನು ಯಾವುದೇ ಜನತೆಗೆ ಮಾರ್ಗದರ್ಶನ ನೀಡಿದ ನಂತರ, ಅವರು ತಮ್ಮನ್ನು ಸಂರಕ್ಷಿಸಿಕೊಳ್ಳಲು ವಹಿಸಬೇಕಾದ ಜಾಗರೂಕತೆಗಳನ್ನು ಅವರಿಗೆ ಸ್ಪಷ್ಟಗೊಳಿಸುವ ತನಕ ಅವರನ್ನು ಪಥಭ್ರಷ್ಟಗೊಳಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಅರಿಯುತ್ತಾನೆ.
إِنَّ اللَّهَ لَهُ مُلْكُ السَّمَاوَاتِ وَالْأَرْضِ ۖ يُحْيِي وَيُمِيتُ ۚ وَمَا لَكُم مِّن دُونِ اللَّهِ مِن وَلِيٍّ وَلَا نَصِيرٍ ۝١١٦
📖 ಅನುವಾದ ಆಯತ್ 116
ನಿಸ್ಸಂಶಯವಾಗಿಯೂ ಆಕಾಶ ಮತ್ತು ಭೂಮಿಯ ಅಧಿಪತ್ಯವೂ ಅಲ್ಲಾಹನದೇ ಆಗಿದೆ. ಅವನೇ ಜೀವನೀಡುತ್ತಾನೆ ಮತ್ತು ಮರಣಗೊಳಿಸುತ್ತಾನೆ ಮತ್ತು ನಿಮಗೆ ಅಲ್ಲಾಹನ ಹೊರತು ಯಾವ ಮಿತ್ರನಾಗಲೀ, ಸಹಾಯಕನಾಗಲೀ ಇಲ್ಲ.
لَّقَد تَّابَ اللَّهُ عَلَى النَّبِيِّ وَالْمُهَاجِرِينَ وَالْأَنصَارِ الَّذِينَ اتَّبَعُوهُ فِي سَاعَةِ الْعُسْرَةِ مِن بَعْدِ مَا كَادَ يَزِيغُ قُلُوبُ فَرِيقٍ مِّنْهُمْ ثُمَّ تَابَ عَلَيْهِمْ ۚ إِنَّهُ بِهِمْ رَءُوفٌ رَّحِيمٌ ۝١١٧
📖 ಅನುವಾದ ಆಯತ್ 117
ಅಲ್ಲಾಹನು ಪೈಗಂಬರರನ್ನು ಮತ್ತು ಕಷ್ಟಕಾಲದಲ್ಲಿ ಪೈಗಂಬರರನ್ನು ಅನುಸರಿಸಿದ ಮುಹಾಜಿರ್ ಹಾಗೂ ಅನ್ಸಾರರನ್ನು ಕ್ಷಮಿಸಿಬಿಟ್ಟನು. (ಸಹಿಸಲು ಅಸಾಧ್ಯವಾದ ಶ್ರಮದ ನಿಮಿತ್ತ) ಅವರ ಪೈಕಿಯ ಒಂದು ಗುಂಪಿನವರ ಹೃದಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಚಲನೆ ಸಂಭವಿಸಿದ ಬಳಿಕ ಅಲ್ಲ್ಲಾಹನು ಅವರನ್ನು ಕ್ಷಮಿಸಿಬಿಟ್ಟನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅವರೆಲ್ಲರ ಮೇಲೆ ಮಹಾ ಕೃಪೆಯುಳ್ಳವನೂ, ಕರುಣಾನಿಧಿಯೂ ಆಗಿದ್ದಾನೆ.
وَعَلَى الثَّلَاثَةِ الَّذِينَ خُلِّفُوا حَتَّىٰ إِذَا ضَاقَتْ عَلَيْهِمُ الْأَرْضُ بِمَا رَحُبَتْ وَضَاقَتْ عَلَيْهِمْ أَنفُسُهُمْ وَظَنُّوا أَن لَّا مَلْجَأَ مِنَ اللَّهِ إِلَّا إِلَيْهِ ثُمَّ تَابَ عَلَيْهِمْ لِيَتُوبُوا ۚ إِنَّ اللَّهَ هُوَ التَّوَّابُ الرَّحِيمُ ۝١١٨
📖 ಅನುವಾದ ಆಯತ್ 118
ಮತ್ತು ವಿಷಯವನ್ನು ಮುಂದೂಡಲಾಗಿದ್ದ ಆ ಮೂವರು ವ್ಯಕ್ತಿಗಳನ್ನು ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರು ಅವರ ಪಾಲಿಗೆ ಇಕ್ಕಟ್ಟಾಗಿ ಮಾರ್ಪಟ್ಟಿತು. ಅವರ ಜೀವಗಳೇ ಅವರ ಮೇಲೆ ಹೊರೆಯಾಗಿ ಸಂಕುಚಿತವಾಗಿ ಬಿಟ್ಟವು. ಮತ್ತು ಅವರು ಅಲ್ಲಾಹನ ಹೊರತು ಎಲ್ಲೂ ರಕ್ಷಣೆ ಸಿಗಲಾರದೆಂದು ತಿಳಿದುಕೊಂಡರು. ಅನಂತರ ಅವನು ಅವರ ಸ್ಥಿತಿಯೆಡೆಗೆ ಪಶ್ಚಾತ್ತಾಪ ಪಟ್ಟುಕೊಳ್ಳಲೆಂದು ಗಮನಹರಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
يَا أَيُّهَا الَّذِينَ آمَنُوا اتَّقُوا اللَّهَ وَكُونُوا مَعَ الصَّادِقِينَ ۝١١٩
📖 ಅನುವಾದ ಆಯತ್ 119
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ.
مَا كَانَ لِأَهْلِ الْمَدِينَةِ وَمَنْ حَوْلَهُم مِّنَ الْأَعْرَابِ أَن يَتَخَلَّفُوا عَن رَّسُولِ اللَّهِ وَلَا يَرْغَبُوا بِأَنفُسِهِمْ عَن نَّفْسِهِ ۚ ذَٰلِكَ بِأَنَّهُمْ لَا يُصِيبُهُمْ ظَمَأٌ وَلَا نَصَبٌ وَلَا مَخْمَصَةٌ فِي سَبِيلِ اللَّهِ وَلَا يَطَئُونَ مَوْطِئًا يَغِيظُ الْكُفَّارَ وَلَا يَنَالُونَ مِنْ عَدُوٍّ نَّيْلًا إِلَّا كُتِبَ لَهُم بِهِ عَمَلٌ صَالِحٌ ۚ إِنَّ اللَّهَ لَا يُضِيعُ أَجْرَ الْمُحْسِنِينَ ۝١٢٠
📖 ಅನುವಾದ ಆಯತ್ 120
ಮದೀನ ನಿವಾಸಿಗಳಿಗಾಗಲೀ, ಅವರ ಸುತ್ತುಮುತ್ತಲಲ್ಲಿರುವ ಗ್ರಾಮೀಣವಾಸಿಗಳಾಗಲಿ ಅಲ್ಲಾಹನ ಸಂದೇಶವಾಕರನ್ನುಬಿಟ್ಟು ಹಿಂದುಳಿದು ಬಿಡುವುದು ಮತ್ತು ತಮ್ಮ ಪ್ರಾಣವನ್ನು ಅವರ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿ ತಿಳಿದುಕೊಳ್ಳುವುದು ಶೋಭಿಸುವುದಿಲ್ಲ. ಏಕೆಂದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗುಂಟಾಗುವ ದಾಹ, ದಣಿವು, ಹಸಿವು ಮತ್ತು ಸತ್ಯನಿಷೇಧಿಗಳನ್ನು ಕೆರಳಿಸುವಂತಹ ಯಾವುದೇ ಹೆಜ್ಜೆಯನ್ನು ಮುಂದಿಡುವುದು ಮತ್ತು ಶತ್ರುಗಳ ಯಾವುದೇ ಸುದ್ದಿಯನ್ನು ಪಡೆದುಕೊಳ್ಳುವುದು, ಇವುಗಳೆಲ್ಲದರ ಮೇಲೆ ಅವರ ಹೆಸರಲ್ಲಿ (ಒಂದೊAದು)ಪುಣ್ಯ ಕರ್ಮವನ್ನು ಬರೆದಿಡಲಾಗುವುದು. ಖಂಡಿತವಾಗಿಯೂ ಅಲ್ಲಾಹನು ಏಕನಿಷ್ಠರ ಪ್ರತಿಫಲವನ್ನು ವ್ಯರ್ಥ ಗೊಳಿಸುವುದಿಲ್ಲ.
وَلَا يُنفِقُونَ نَفَقَةً صَغِيرَةً وَلَا كَبِيرَةً وَلَا يَقْطَعُونَ وَادِيًا إِلَّا كُتِبَ لَهُمْ لِيَجْزِيَهُمُ اللَّهُ أَحْسَنَ مَا كَانُوا يَعْمَلُونَ ۝١٢١
📖 ಅನುವಾದ ಆಯತ್ 121
ಮತ್ತು ಅವರು ಮಾಡಿದಂತಹ ಹೆಚ್ಚು ಕಡಿಮೆ ಅಥವಾ ಯಾವುದೇ ಖರ್ಚಾಗಲೀ ಮತ್ತು ಅವರು ಯಾವುದೇ ಕಣಿವೆಯನ್ನು ದಾಟಿ ಹೋಗಲಿ; ಅವೆಲ್ಲವೂ ಅವರ ಹೆಸರಲ್ಲಿ ಬರೆಯಲ್ಪಟ್ಟಿದೆ ಇದೇಕೆಂದರೆ ಅಲ್ಲಾಹನು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲೆಂದಾಗಿದೆ.
۞ وَمَا كَانَ الْمُؤْمِنُونَ لِيَنفِرُوا كَافَّةً ۚ فَلَوْلَا نَفَرَ مِن كُلِّ فِرْقَةٍ مِّنْهُمْ طَائِفَةٌ لِّيَتَفَقَّهُوا فِي الدِّينِ وَلِيُنذِرُوا قَوْمَهُمْ إِذَا رَجَعُوا إِلَيْهِمْ لَعَلَّهُمْ يَحْذَرُونَ ۝١٢٢
📖 ಅನುವಾದ ಆಯತ್ 122
ಮತ್ತು ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಹೊರಡುವುದು ಯೋಗ್ಯವಲ್ಲ. ಆದರೆ ಪ್ರತಿಯೊಂದು ತಂಡದಿAದ ಒಂದು ಗುಂಪು ಧರ್ಮಜ್ಞಾನವನ್ನು ಪಡೆದು ತಮ್ಮ ಜನರೆಡೆಗೆ ಮರಳಿ ಅವರನ್ನು ಕೆಡುಕಿನಿಂದ ರಕ್ಷಿಸಿಕೊಳ್ಳಲು ಎಚ್ಚರಿಸಲಿಕ್ಕೆ ಹೊರಡುವುದಿಲ್ಲವೇಕೆ? ಹೀಗೆ ಅವರು ಭಯಪಟ್ಟುಕೊಳ್ಳಬಹುದೆಂಬುದಾಗಿದೆ.
يَا أَيُّهَا الَّذِينَ آمَنُوا قَاتِلُوا الَّذِينَ يَلُونَكُم مِّنَ الْكُفَّارِ وَلْيَجِدُوا فِيكُمْ غِلْظَةً ۚ وَاعْلَمُوا أَنَّ اللَّهَ مَعَ الْمُتَّقِينَ ۝١٢٣
📖 ಅನುವಾದ ಆಯತ್ 123
ಓ ಸತ್ಯವಿಶ್ವಾಸಿಗಳೇ, ನಿಮ್ಮ ಸುತ್ತಮುತ್ತಲಲ್ಲಿರುವ ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ದಾರ್ಢ್ಯವನ್ನು ಕಾಣಬೇಕು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರೊಂದಿಗಿದ್ದಾನೆAಬ ವಿಶ್ವಾಸ ನಿಮಗಿರಲಿ.
وَإِذَا مَا أُنزِلَتْ سُورَةٌ فَمِنْهُم مَّن يَقُولُ أَيُّكُمْ زَادَتْهُ هَٰذِهِ إِيمَانًا ۚ فَأَمَّا الَّذِينَ آمَنُوا فَزَادَتْهُمْ إِيمَانًا وَهُمْ يَسْتَبْشِرُونَ ۝١٢٤
📖 ಅನುವಾದ ಆಯತ್ 124
ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಕೆಲವು ಕಪಟಿಗಳು ಹೇಳುವರು; ಈ ಅಧ್ಯಾಯವು ನಿಮ್ಮಲ್ಲಿನ ಯಾರ ವಿಶ್ವಾಸವನ್ನು ಅಧಿಕಗೊಳಿಸಿದೆ ? ಆದರೆ ಸತ್ಯವಿಶ್ವಾಸಿಗಳಿಗಂತು ಪ್ರಸ್ತುತ ಅಧ್ಯಾಯವು ಅವರ ವಿಶ್ವಾಸವನ್ನು ಅಧಿಕಗೊಳಿಸಿಬಿಟ್ಟಿದೆ ಮತ್ತು ಅವರು ಹರ್ಷಪಟ್ಟುಕೊಳ್ಳುತ್ತಾರೆ.
وَأَمَّا الَّذِينَ فِي قُلُوبِهِم مَّرَضٌ فَزَادَتْهُمْ رِجْسًا إِلَىٰ رِجْسِهِمْ وَمَاتُوا وَهُمْ كَافِرُونَ ۝١٢٥
📖 ಅನುವಾದ ಆಯತ್ 125
ಆದರೆ ಹೃದಯಗಳಲ್ಲಿ ರೋಗವಿರುವವರಿಗೆ ಈ ಅಧ್ಯಾಯವು ಅವರ ಮಾಲಿನ್ಯತೆಯ ಜೊತೆಗೆ ಇನ್ನಷ್ಟು ಮಾಲಿನ್ಯತೆಯನ್ನು ಹೆಚ್ಚಿಸಿಬಿಟ್ಟಿತು ಮತ್ತು ಅವರು ಸತ್ಯನಿಷೇಧದ ಸ್ಥಿತಿಯಲ್ಲೇ ಮರಣಹೊಂದಿದರು.
أَوَلَا يَرَوْنَ أَنَّهُمْ يُفْتَنُونَ فِي كُلِّ عَامٍ مَّرَّةً أَوْ مَرَّتَيْنِ ثُمَّ لَا يَتُوبُونَ وَلَا هُمْ يَذَّكَّرُونَ ۝١٢٦
📖 ಅನುವಾದ ಆಯತ್ 126
ಮತ್ತು ಅವರು ಪ್ರತಿಯೊಂದು ವರ್ಷವೂ ಒಂದೆರಡು ಬಾರಿ ಒಂದಲ್ಲ ಒಂದು ವಿಪತ್ತಿನಲ್ಲಿ ಸಿಲುಕಿಸಿಬಿಡುತ್ತಿದ್ದಾರೆಂಬುದು ಅವರಿಗೆ ಕಾಣುವುದಿಲ್ಲವೇ? ಹಾಗಿದ್ದೂ ಅವರು ಪಶ್ಚಾತ್ತಾಪಪಟ್ಟು ಮರಳುವುದಾಗಲಿ ಮತ್ತು ಉಪದೇಶವನ್ನು ಸ್ವೀಕರಿಸುದಾಗಲಿ ಮಾಡುವುದಿಲ್ಲ.
وَإِذَا مَا أُنزِلَتْ سُورَةٌ نَّظَرَ بَعْضُهُمْ إِلَىٰ بَعْضٍ هَلْ يَرَاكُم مِّنْ أَحَدٍ ثُمَّ انصَرَفُوا ۚ صَرَفَ اللَّهُ قُلُوبَهُم بِأَنَّهُمْ قَوْمٌ لَّا يَفْقَهُونَ ۝١٢٧
📖 ಅನುವಾದ ಆಯತ್ 127
ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಅವರು (ಕಪಟಿಗಳು) ಪರಸ್ಪರರನ್ನು ನೋಡಿ (ಹೇಳುವರು) 'ನಿಮ್ಮನ್ನು ಯಾರೂ ನೋಡುತ್ತಿಲ್ಲವಲ್ಲ?' ಎಂದು. ಅನಂತರ ಅವರು ಹೊರಟು ಬಿಡುವರು. ಅಲ್ಲಾಹನು ಅವರ ಹೃದಯವನ್ನು ತಿರುಗಿಸಿಬಿಟ್ಟಿರುವನು, ಏಕೆಂದರೆ ಅವರು ತಿಳುವಳಿಕೆಯಿಲ್ಲದವರಾಗಿದ್ದಾರೆ.
لَقَدْ جَاءَكُمْ رَسُولٌ مِّنْ أَنفُسِكُمْ عَزِيزٌ عَلَيْهِ مَا عَنِتُّمْ حَرِيصٌ عَلَيْكُم بِالْمُؤْمِنِينَ رَءُوفٌ رَّحِيمٌ ۝١٢٨
📖 ಅನುವಾದ ಆಯತ್ 128
ನಿಮ್ಮ ಬಳಿ ನಿಮ್ಮಿಂದಲೇ ಆದ ಓರ್ವ ಸಂದೇಶವಾಹಕರು ಆಗಮಿಸಿದ್ದಾರೆ. ನೀವು ಕಷ್ಟಪಡುವುದು ಅವರಿಂದ ಸಹಿಸಲಾಗುವುದಿಲ್ಲ. ಅವರು ನಿಮ್ಮ ಒಳಿತನ್ನು ಹಂಬಲಿಸುವವರು ಸತ್ಯವಿಶ್ವಾಸಿಗಳೊಂದಿಗೆ ಅತ್ಯಂತ ದಯೆಯುಳ್ಳವರು, ಕರುಣಾಮಯಿಯೂ ಆಗಿರುವರು.
فَإِن تَوَلَّوْا فَقُلْ حَسْبِيَ اللَّهُ لَا إِلَٰهَ إِلَّا هُوَ ۖ عَلَيْهِ تَوَكَّلْتُ ۖ وَهُوَ رَبُّ الْعَرْشِ الْعَظِيمِ ۝١٢٩
📖 ಅನುವಾದ ಆಯತ್ 129
ಅನಂತರ ಅವರು ವಿಮುಖರಾಗುವುದಾದರೆ ತಾವು ಹೇಳಿಬಿಡಿರಿ; ನನಗೆ ಅಲ್ಲಾಹನೇ ಸಾಕು, ಅವನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ, ನಾನು ಅವನ ಮೇಲೆಯೇ ಭರವಸೆಯಿಟ್ಟಿದ್ದೇನೆ. ಅವನು ಮಹಾ ಅರ್ಶ್ನ (ಸಿಂಹಾಸನದ) ಒಡೆಯನಾಗಿದ್ದಾನೆ.
← 8 ಅತ್-ತೌಬಾ (9/114) 10 →
ಓದಿ ಸೂರಾ ಅತ್-ತೌಬಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

9التوبة At-Tawbah 📚 129 ಆಯತ್ مدنية

ಆಯತ್‌ವಾರು – ಸೂರಾ ಅತ್-ತೌಬಾ — 129 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers