ಅತ್-ತೌಬಾ · 41/129
ಅನುವಾದ ಉಚ್ಚಾರಣೆ — ಸೂರಾ ಅತ್-ತೌಬಾ
انفِرُوا خِفَافًا وَثِقَالًا وَجَاهِدُوا بِأَمْوَالِكُمْ وَأَنفُسِكُمْ فِي سَبِيلِ اللَّهِ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ ۝٤١
Infiroo khifaafanw wa siqaalanw wa jaahidoo bi amwaalikum wa anfusikum fee sabeelil laah; zaalikum khairul lakum in kuntum ta`lamoon
📖 ಕನ್ನಡ ಅರ್ಥ
ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು ಮನ ಧನಗಳಿಂದ ಸತ್ಯಕ್ಕಾಗಿ ಹೋರಾಡಿರಿ. ಇದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಅರಿಯುವವರಾಗಿದ್ದರೆ.

🎧 ಆಲಿಸಿ


📜 ಆಯತ್ 39-43 — ಸೂರಾ ಅತ್-ತೌಬಾ

39إِلَّا تَنفِرُوا يُعَذِّبْكُمْ عَذَابًا أَلِيمًا وَيَسْتَبْدِلْ قَوْمًا غَيْرَكُمْ وَلَا تَضُرُّوهُ شَيْئًا ۗ وَاللَّهُ عَلَىٰ كُلِّ شَيْءٍ قَدِيرٌ
ನೀವು (ಅತ್ಯಾಚಾರದ ವಿರುದ್ಧ) ಹೋರಾಡದಿದ್ದರೆ ಅಲ್ಲಾಹನು ನಿಮಗೆ ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಹೊರತಾದ ಬೇರೆ ಜನಾಂಗವನ್ನು ನಿಮ್ಮ ಬದಲಿಗೆ ತರುವನು (ಅವರು ಆಜ್ಞಾನುಸರಣಿಗಳಾಗಿರುವರು). ನೀವು ಅಲ್ಲಾಹನಿಗೆ ಯಾವುದೇ ನಷ್ಟವನ್ನುಂಟು ಮಾಡಲಾರಿರಿ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
40إِلَّا تَنصُرُوهُ فَقَدْ نَصَرَهُ اللَّهُ إِذْ أَخْرَجَهُ الَّذِينَ كَفَرُوا ثَانِيَ اثْنَيْنِ إِذْ هُمَا فِي الْغَارِ إِذْ يَقُولُ لِصَاحِبِهِ لَا تَحْزَنْ إِنَّ اللَّهَ مَعَنَا ۖ فَأَنزَلَ اللَّهُ سَكِينَتَهُ عَلَيْهِ وَأَيَّدَهُ بِجُنُودٍ لَّمْ تَرَوْهَا وَجَعَلَ كَلِمَةَ الَّذِينَ كَفَرُوا السُّفْلَىٰ ۗ وَكَلِمَةُ اللَّهِ هِيَ الْعُلْيَا ۗ وَاللَّهُ عَزِيزٌ حَكِيمٌ
ನೀವು ಪೈಗಂಬರರಿಗೆ ಸಹಾಯ ಮಾಡದಿದ್ದರೆ ತಿಳಿದುಕೊಳ್ಳಿರಿ: ಅಲ್ಲಾಹನು ಅವರಿಗೆ ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಗಡಿಪಾರು ಮಾಡಿದ ಸಂದರ್ಭದಲ್ಲಿ ಸಹಾಯ ಮಾಡಿದ್ದನು, ಅವರು (ವಲಸೆ ಹೋಗುವ) ಆ ಇಬ್ಬರಲ್ಲಿ ಒಬ್ಬರಾಗಿದ್ದರು ಅವರಿಬ್ಬರೂ (ಮುಹಮ್ಮದ್ ಮತ್ತು ಅಬೂಬಕ್ಕರ್) ಗುಹೆಯಲ್ಲಿದ್ದ ಸಂದರ್ಭದಲ್ಲಿ ಅವರು ತನ್ನ ಸಂಗಡಿಗರೊAದಿಗೆ (ಅಬೂಬಕ್ಕರ್‌ರವರಿಗೆ) 'ವ್ಯಥೆಪಡಬೇಡ, ಖಂಡಿತ ಅಲ್ಲಾಹನು ನಮ್ಮ ಜೊತೆಗಿದ್ದಾನೆ' ಎಂದು ಹೇಳಿದರು. ಹೀಗೆ ಅಲ್ಲಾಹನು ಅವರ ಮೇಲೆ ತನ್ನ ಕಡೆಯಿಂದ ಶಾಂತಿಯನ್ನು ಇಳಿಸಿದನು. ನೀವು ಕಾಣದಂತಹ (ಮಲಕ್‌ಗಳ) ಸೈನ್ಯಗಳೊಂದಿಗೆ ಅವರ ಸಹಾಯ ಮಾಡಿದನು. ಸತ್ಯನಿಷೇಧಿಗಳ ಮಾತನ್ನು ನಿಂದ್ಯಗೊಳಿಸಿದನು ಮತ್ತು ಅಲ್ಲಾಹನ ವಚನವೇ ಅತ್ಯುನ್ನತವೂ, ಪ್ರಬಲವೂ ಅಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
41انفِرُوا خِفَافًا وَثِقَالًا وَجَاهِدُوا بِأَمْوَالِكُمْ وَأَنفُسِكُمْ فِي سَبِيلِ اللَّهِ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು ಮನ ಧನಗಳಿಂದ ಸತ್ಯಕ್ಕಾಗಿ ಹೋರಾಡಿರಿ. ಇದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಅರಿಯುವವರಾಗಿದ್ದರೆ.
42لَوْ كَانَ عَرَضًا قَرِيبًا وَسَفَرًا قَاصِدًا لَّاتَّبَعُوكَ وَلَٰكِن بَعُدَتْ عَلَيْهِمُ الشُّقَّةُ ۚ وَسَيَحْلِفُونَ بِاللَّهِ لَوِ اسْتَطَعْنَا لَخَرَجْنَا مَعَكُمْ يُهْلِكُونَ أَنفُسَهُمْ وَاللَّهُ يَعْلَمُ إِنَّهُمْ لَكَاذِبُونَ
ಇನ್ನು ಶೀಘ್ರವೇ ಲಾಭ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿದ್ದರೆ. ಖಂಡಿತವಾಗಿಯೂ ಕಪಟಿಗಳು ನಿಮ್ಮನ್ನು ಅನುಸರಿಸುತ್ತಿದ್ದರು. ಆದರೆ ಅವರ ಮೇಲೆ ಸುದೀರ್ಘತೆಯು ಪ್ರಯಾಸಕರವಾಗಿ ಬಿಟ್ಟಿತು. ಅವರು 'ನಮ್ಮಲ್ಲಿ ಸಾಮರ್ಥ್ಯವಿರುತ್ತಿದ್ದರೆ ನಾವು ಖಂಡಿತವಾಗಿಯು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ನೆಪ ಹೂಡುತ್ತಾ (ದುರ್ಬಲರೊಂದಿಗೆ)ಹೇಳುತ್ತಾರೆ. ಅವರು ಸ್ವತಃ ತಮ್ಮನ್ನು ನಾಶಕ್ಕೀಡು ಮಾಡುತ್ತಿದ್ದಾರೆ. ಖಂಡಿತವಾಗಿಯು ಅವರು ಸುಳ್ಳರೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
43عَفَا اللَّهُ عَنكَ لِمَ أَذِنتَ لَهُمْ حَتَّىٰ يَتَبَيَّنَ لَكَ الَّذِينَ صَدَقُوا وَتَعْلَمَ الْكَاذِبِينَ
ಓ ಪೈಗಂಬರರೇ ಅಲ್ಲಾಹನು ನಿಮ್ಮನ್ನು ಮನ್ನಿಸಲಿ. ನಿಮ್ಮ ಮುಂದೆ ಸತ್ಯಸಂಧರು ಯಾರೆಂದು ಪ್ರಕಟವಾಗುವುದಕ್ಕೆ ಮೊದಲೇ ಮತ್ತು ನೀವು ಸುಳ್ಳರನ್ನು ಗುರುತಿಸಿಕೊಳ್ಳುವ ಮೊದಲೇ ಅವರಿಗೇಕೆ (ಕಪಟಿಗಳಿಗೆ)ಅನುಮತಿ ನೀಡಿದಿರಿ?
ಅತ್-ತೌಬಾಕುರಾನ್ ಸೂಚಿ
129ಆಯತ್
MedinanRevelation
41ಆಯತ್

ಅನುವಾದ — ಅತ್-ತೌಬಾ 41

ಸೂರಾ ಅತ್-ತೌಬಾ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ…

ಸೂರಾ ಆಯತ್ 41/129 — ಸೂರಾ ಅತ್-ತೌಬಾ التوبة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೌಬಾ ಆಲಿಸಿ, ಸೂರಾ ಅತ್-ತೌಬಾ ಅನುವಾದ, ಸೂರಾ ಅತ್-ತೌಬಾ mp3, ಸೂರಾ ಅತ್-ತೌಬಾ pdf. ಆಯತ್ 39–43. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers