ಸೂರಾ ಅಲ್-ಅನ್ಫಾಲ್
PDF —
Built right in your browser — download starts automatically
ಸೂರಾ ಅಲ್-ಅನ್ಫಾಲ್ pdf — ಡೌನ್ಲೋಡ್ (ಕನ್ನಡ)
ಸೂರಾ ಅಲ್-ಅನ್ಫಾಲ್ pdf ಕನ್ನಡ — ಡೌನ್ಲೋಡ್ ಸೂರಾ ಅಲ್-ಅನ್ಫಾಲ್ ಅನುವಾದ. ಅಲ್-ಅನ್ಫಾಲ್ (Medinan) 75 ಆಯತ್.
Related
- ಅಲ್-ಅನ್ಫಾಲ್ ಅನುವಾದಕನ್ನಡ
- ಅಲ್-ಅನ್ಫಾಲ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಅನ್ಫಾಲ್

ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦ
ಖಂಡಿತವಾಗಿಯೂ ಅಲ್ಲಾಹನ ಹೆಸರೆತ್ತಿದಾಗ ವಿಶ್ವಾಸಿಗಳ ಹೃದಯಗಳಲ್ಲಿ ಭಕ್ತಿ ಉಕ್ಕುತ್ತದೆ ಹಾಗೂ ಅವರ ಮುಂದೆ ಅವನ ವಚನಗಳನ್ನು ಓದಲಾದಾಗ ಅವರ ವಿಶ್ವಾಸವು ಬಲಿಷ್ಠವಾಗುತ್ತದೆ ಮತ್ತು ಅವರು ತಮ್ಮ ಒಡೆಯನಲ್ಲಿ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ
ﭧﭨﭩﭪﭫﭬﭭﭮﭯﭰﭱﭲﭳﭴﭵﭶﭷﭸ
ಅವರು ನಮಾಝನ್ನು ಪಾಲಿಸುತ್ತಾರೆ ಮತ್ತು ಅವರಿಗೆ ನಾವು ನೀಡಿರುವ ಸಂಪತ್ತಿನಿಂದ (ಸತ್ಕಾರ್ಯಕ್ಕೆ) ಖರ್ಚು ಮಾಡುತ್ತಾರೆ
ﭹﭺﭻﭼﭽﭾﭿ
ಅವರೇ ನೈಜ ವಿಶ್ವಾಸಿಗಳು. ಅವರಿಗಾಗಿ ಅವರ ಒಡೆಯನ ಬಳಿ ಉನ್ನತ ಸ್ಥಾನಗಳಿವೆ, ಕ್ಷಮೆ ಇದೆ ಮತ್ತು ಧಾರಾಳ ಸಂಪತ್ತಿದೆ
ﮀﮁﮂﮃﮄﮅﮆﮇﮈﮉﮊﮋﮌ
(ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರ ತಂದಿದ್ದಾಗ ವಿಶ್ವಾಸಿಗಳ ಒಂದು ಪಂಗಡವು ಆ ಕುರಿತು ಅತೃಪ್ತವಾಗಿತ್ತು
ﮍﮎﮏﮐﮑﮒﮓﮔﮕﮖﮗﮘ
ಸತ್ಯವು ಬಹಳ ಸ್ಪಷ್ಟವಾಗಿ ಪ್ರಕಟವಾದ ಬಳಿಕವೂ ಅವರು ಆ ಕುರಿತು ನಿಮ್ಮೊಡನೆ ವಾದಕ್ಕಿಳಿಯುತ್ತಿದ್ದರು – ಅವರು ಕಣ್ಣಾರೆ ಕಾಣುತ್ತಿರುವಂತಹ ಮರಣದೆಡೆಗೆ ಅವರನ್ನು ಅಟ್ಟಲಾಗುತ್ತಿದೆಯೇ ಎಂಬಂತೆ
ﮙﮚﮛﮜﮝﮞﮟﮠﮡﮢﮣﮤﮥ
ಎರಡು ಗುಂಪುಗಳ ಪೈಕಿ ಒಂದು ನಿಮ್ಮ ವಶವಾಗುವುದೆಂದು ಅಲ್ಲಾಹನು ನಿಮಗೆ ವಾಗ್ದಾನ ಮಾಡಿದಾಗ, ಆಯುಧವಿಲ್ಲದ ಗುಂಪು ನಿಮ್ಮದಾಗಬೇಕೆಂದು ನೀವು (ದೂತರ ಕೆಲವು ಸಮಕಾಲೀನರು) ಅಪೇಕ್ಷಿಸಿದ್ದಿರಿ. ಆದರೆ ಅಲ್ಲಾಹನು ಮಾತ್ರ ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವೆಂದು ಸಾಬೀತುಪಡಿಸಲು ಹಾಗೂ ಧಿಕ್ಕಾರಿಗಳ ಮೂಲವನ್ನೇ ಮುರಿಯಲು ತೀರ್ಮಾನಿಸಿದ್ದನು
ﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚﯛﯜﯝﯞ
ಸತ್ಯವನ್ನು ಸತ್ಯವೆಂದು ಹಾಗೂ ಮಿಥ್ಯವನ್ನು ಮಿಥ್ಯವೆಂದು ಸಾಬೀತು ಪಡಿಸಲಿಕ್ಕಾಗಿ – ಅದು ಅಪರಾಧಿಗಳಿಗೆ ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ
ﯟﯠﯡﯢﯣﯤﯥﯦ
(ನೆನಪಿಸಿಕೊಳ್ಳಿರಿ;) ನೀವು ನಿಮ್ಮ ಒಡೆಯನೊಡನೆ ನೆರವನ್ನು ಬೇಡಿದಾಗ, ಬೆನ್ನು ಬೆನ್ನಿಗೇ ಬರುವ ಸಾವಿರ ಮಲಕ್ಗಳ ಮೂಲಕ ನಿಮಗೆ ನೆರವಾಗುವೆನೆಂದು ಅವನು ನಿಮಗೆ ಉತ್ತರಿಸಿದನು
ﭑﭒﭓﭔﭕﭖﭗﭘﭙﭚﭛﭜ
ಅದು, ನಿಮ್ಮ ಮನಸ್ಸುಗಳು ಸಂತೃಪ್ತವಾಗಲೆಂದು ಅಲ್ಲಾಹನು ಕಳುಹಿಸಿದ್ದ ಶುಭವಾರ್ತೆಯಾಗಿತ್ತು. ನಿಜವಾಗಿ, ನೆರವು ಅಲ್ಲಾಹನ ಹೊರತು ಬೇರೆ ಯಾರಿಂದಲೂ ಸಿಗುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ
ﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱ
ಅವನು (ಯುದ್ಧದ ನಡುವೆ) ನಿಮಗೆ ಮಂಪರು ಬರಿಸಿದಾಗ, ಅದು ಅವನ ಕಡೆಯಿಂದ ಕಳಿಸಲಾದ ನೆಮ್ಮದಿಯಾಗಿತ್ತು. ಇನ್ನು ನಿಮ್ಮನ್ನು ಶುಚೀಕರಿಸಲಿಕ್ಕಾಗಿ, ನಿಮ್ಮಿಂದ ಶೈತಾನನ ಮಾಲಿನ್ಯವನ್ನು ನಿವಾರಿಸಲಿಕ್ಕಾಗಿ, ನಿಮ್ಮ ಮನಸ್ಸುಗಳನ್ನು ಸ್ಥಿರಗೊಳಿಸಲಿಕ್ಕಾಗಿ ಹಾಗೂ ನಿಮ್ಮ ಹೆಜ್ಜೆಗಳನ್ನು ಭದ್ರಗೊಳಿಸುವುದಕ್ಕಾಗಿ ಅವನು ನಿಮ್ಮ ಮೇಲೆ ಆಕಾಶದಿಂದ ನೀರನ್ನು ಸುರಿಸಿದನು
ﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈ
ಮುಂದೆ, ನಿಮ್ಮ ಒಡೆಯನು ಮಲಕ್ಗಳಿಗೆ – ‘‘ವಿಶ್ವಾಸಿಗಳನ್ನು ನೀವು ಸ್ಥಿರವಾಗಿಡಿರಿ, ನಾನು ಧಿಕ್ಕಾರಿಗಳ ಮನದಲ್ಲಿ ಆತಂಕವನ್ನು ಬಿತ್ತಲಿದ್ದೇನೆ, ನೀವು ಅವರ ಕೊರಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಬೆರಳ ತುದಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳುಹಿಸಿದನು
ﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡ
ಇದೇಕೆಂದರೆ, ಅವರು (ಧಿಕ್ಕಾರಿಗಳು) ಅಲ್ಲಾಹ್ ಮತ್ತವನ ದೂತರ ವಿರೋಧಿಗಳಾಗಿದ್ದರು. ಅಲ್ಲಾಹ್ ಮತ್ತು ಅವನ ದೂತರ ವಿರೋಧಿಗಳಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ವಿಧಿಸುತ್ತಾನೆ
ﮢﮣﮤﮥﮦﮧﮨﮩﮪﮫﮬﮭﮮﮯﮰ
ನೀವು ಇದನ್ನು ಸವಿಯಿರಿ. ಧಿಕ್ಕಾರಿಗಳಿಗೆ ನರಕಾಗ್ನಿಯ ಶಿಕ್ಷೆಯೇ ಗತಿ (ಎಂದು ಅವರೊಡನೆ ಹೇಳಲಾಗುವುದು)
ﮱﯓﯔﯕﯖﯗﯘ
ವಿಶ್ವಾಸಿಗಳೇ, ಯುದ್ಧರಂಗದಲ್ಲಿ ನಿಮಗೆ ಧಿಕ್ಕಾರಿಗಳು ಎದುರಾದಾಗ ಅವರಿಗೆ ಬೆನ್ನು ತೋರಿಸಬೇಡಿ
ﯙﯚﯛﯜﯝﯞﯟﯠﯡﯢﯣﯤ
ಯುದ್ಧ ತಂತ್ರಕ್ಕಾಗಿ ಅಥವಾ ತನ್ನ ಪಡೆಯನ್ನು ಸೇರಿಕೊಳ್ಳುವುದಕ್ಕಾಗಿಯಲ್ಲದೆ (ಬೇರಾವುದೇ ಕಾರಣಕ್ಕಾಗಿ) ಅಂದು ಬೆನ್ನು ತೋರಿದವನು ಅಲ್ಲಾಹನ ಕೋಪವನ್ನು ಸೆಳೆದುಕೊಂಡನು ಮತ್ತು ನರಕವೇ ಅವನ ನೆಲೆಯಾಗಿರುವುದು – ಅದು ತುಂಬಾ ಕೆಟ್ಟ ನೆಲೆ
ﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺ
(ದೂತರೇ,) ಅವರನ್ನು (ಯುದ್ಧದಲ್ಲಿ ಶತ್ರುಗಳನ್ನು) ಕೊಂದದ್ದು ನೀವಲ್ಲ. ನಿಜವಾಗಿ ಅಲ್ಲಾಹನೇ ಅವರನ್ನು ಕೊಂದಿರುವನು. ನೀವು ಅದನ್ನು (ಹಿಡಿಮಣ್ಣನ್ನು) ಎಸೆದಾಗ, ನಿಜವಾಗಿ ಅದನ್ನು ಎಸೆದವರು ನೀವಲ್ಲ – ಅಲ್ಲಾಹನೇ ಅದನ್ನು ಎಸೆದಿದ್ದನು. ಅವನು ತನ್ನ ಕಡೆಯಿಂದ, ವಿಶ್ವಾಸಿಗಳನ್ನು ಶ್ರೇಷ್ಠ ಪರೀಕ್ಷೆಗೆ ಒಳಪಡಿಸ ಬಯಸಿದ್ದನು. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨ
ಇದಲ್ಲದೆ, ಅಲ್ಲಾಹನು ಧಿಕ್ಕಾರಿಗಳ ಸಂಚುಗಳನ್ನು ಖಂಡಿತ ವಿಫಲಗೊಳಿಸುವನು
ﭩﭪﭫﭬﭭﭮﭯ
ನೀವು ಬಯಸುವುದು ತೀರ್ಪನ್ನಾದರೆ, ಇದೋ ಬಂದು ಬಿಟ್ಟಿತು ನಿಮ್ಮ ಬಳಿಗೆ (ಸತ್ಯದ) ವಿಜಯ. (ಧಿಕ್ಕಾರಿಗಳೇ,) ನೀವಿನ್ನು ದೂರ ನಿಂತರೆ ಅದು ನಿಮ್ಮ ಪಾಲಿಗೇ ಉತ್ತಮ. ಒಂದು ವೇಳೆ ನೀವು (ಹಳೆಯನೀತಿಯನ್ನೇ) ಪುನರಾವರ್ತಿಸಿದರೆ, ನಾವೂ ಪುನರಾವರ್ತಿಸುವೆವು. (ಆಗ) ನಿಮ್ಮ ಪಡೆಯು ಎಷ್ಟು ದೊಡ್ಡದಿದ್ದರೂ, ನಿಮಗೇನೂ ಪ್ರಯೋಜನವಾಗದು. ಅಲ್ಲಾಹನಂತು ಖಂಡಿತ ವಿಶ್ವಾಸಿಗಳ ಜೊತೆಗಿದ್ದಾನೆ
ﭰﭱﭲﭳﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊ
ವಿಶ್ವಾಸಿಗಳೇ, ಅಲ್ಲಾಹನ ಮತ್ತು ಅವನ ದೂತರ ಆಜ್ಞಾಪಾಲನೆ ಮಾಡಿರಿ. (ಅವರ ಆದೇಶಗಳನ್ನು) ಕೇಳುತ್ತಾ ನೀವು ಅವುಗಳನ್ನು ಕಡೆಗಣಿಸಬೇಡಿ
ﮋﮌﮍﮎﮏﮐﮑﮒﮓﮔﮕﮖ
‘‘ನಾವು ಕೇಳಿದೆವು’’ ಎನ್ನುತ್ತಾ ನಿಜವಾಗಿ ಕೇಳದಿರುವ ಜನರಂತೆ ನೀವಾಗಬೇಡಿ
ﮗﮘﮙﮚﮛﮜﮝﮞﮟ
(ಈ ರೀತಿ) ಕಿವುಡರೂ ಮೂಗರೂ ಆಗಿರುವವರು ಮತ್ತು ಆಲೋಚಿಸದವರೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಜೀವಿಗಳಾಗಿದ್ದಾರೆ
ﮠﮡﮢﮣﮤﮥﮦﮧﮨﮩﮪﮫ
ಅವರಲ್ಲಿ ಒಳಿತೇನಾದರೂ ಉಂಟೆಂದು ಅಲ್ಲಾಹನಿಗೆ ತಿಳಿದಿದ್ದರೆ, ಅವನು ಖಂಡಿತ ಅವರಿಗೆ ಕೇಳಿಸುತ್ತಿದ್ದನು. ಇನ್ನು ಒಂದು ವೇಳೆ ಅವನು ಅವರಿಗೆ ಕೇಳಿಸಿದರೂ ಅವರಂತು (ಸತ್ಯವನ್ನು) ಕಡೆಗಣಿಸುವವರೇ ಆಗಿದ್ದಾರೆ
ﮬﮭﮮﮯﮰﮱﯓﯔﯕﯖﯗﯘﯙ
ವಿಶ್ವಾಸಿಗಳೇ, ಅಲ್ಲಾಹ್ ಮತ್ತವನ ದೂತರು, ನಿಮಗೆ ಬದುಕನ್ನು ಒದಗಿಸಲು ನಿಮ್ಮನ್ನು ಕರೆದಾಗ ಅವರ ಕರೆಯನ್ನು ಸ್ವೀಕರಿಸಿರಿ. – ಅಲ್ಲಾಹನು ಮಾನವ ಮತ್ತವನ ಮನಸ್ಸಿನ ನಡುವೆ ಇರುತ್ತಾನೆ ಮತ್ತು ಕೊನೆಗೆ ನಿಮ್ಮನ್ನೆಲ್ಲಾ ಅವನ ಬಳಿಯೇ ಸೇರಿಸಲಾಗುವುದು ಎಂಬುದು ನಿಮಗೆ ತಿಳಿದಿರಲಿ
ﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯ
ಆ ಪರೀಕ್ಷೆಯ ಕುರಿತು ಎಚ್ಚರ ವಹಿಸಿರಿ – ಅದರ ಬಾಧೆಯು ಕೇವಲ ನಿಮ್ಮಲ್ಲಿನ ಅಕ್ರಮಿಗಳಿಗೆ ಮಾತ್ರ ಸೀಮಿತವಾಗಿ ಉಳಿಯದು. ತಿಳಿದಿರಲಿ, ಅಲ್ಲಾಹನು ಬಹಳ ಉಗ್ರವಾಗಿ ಶಿಕ್ಷಿಸುವವನಾಗಿದ್ದಾನೆ
ﯰﯱﯲﯳﯴﯵﯶﯷﯸﯹﯺﯻﯼﯽﯾ
ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದು, ಭೂಮಿಯಲ್ಲಿ ಮರ್ದಿತರಾಗಿದ್ದಾಗ ಹಾಗೂ ಜನರು ನಿಮ್ಮನ್ನು ನಿರ್ನಾಮಗೊಳಿಸುವರೆಂದು ಅಂಜುತ್ತಿದ್ದಾಗ, ನೀವು ಕೃತಜ್ಞರಾಗಿರಬೇಕೆಂದು, ಅವನು (ಅಲ್ಲಾಹನು) ನಿಮಗೊಂದು ನೆಲೆಯನ್ನೊದಗಿಸಿದನು ಹಾಗೂ ತನ್ನ ನೆರವಿನ ಮೂಲಕ ನಿಮಗೆ ಶಕ್ತಿಯನ್ನು ನೀಡಿದನು ಮತ್ತು ನಿಮಗೆ ಶುದ್ಧ ಆಹಾರವನ್ನು ಪೂರೈಸಿದನು
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤ
ವಿಶ್ವಾಸಿಗಳೇ, ಅಲ್ಲಾಹನಿಗೆ ಮತ್ತು ಅವನ ದೂತರಿಗೆ ವಿಶ್ವಾಸ ದ್ರೋಹವೆಸಗಬೇಡಿ. ಹಾಗೆಯೇ ನೀವು, ತಿಳಿದೂ ತಿಳಿದೂ ನಿಮ್ಮಲ್ಲಿ ನಂಬಿಕೆ ಇಡಲಾದ ವಿಷಯಗಳಲ್ಲಿ ವಂಚಿಸಬೇಡಿ
ﭥﭦﭧﭨﭩﭪﭫﭬﭭﭮﭯﭰ
ನಿಮಗೆ ತಿಳಿದಿರಲಿ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ನಿಜವಾಗಿ ಪರೀಕ್ಷೆಗಳಾಗಿವೆ. ಮಹಾ ಪ್ರತಿಫಲವು ಅಲ್ಲಾಹನ ಬಳಿಯಲ್ಲೇ ಇದೆ
ﭱﭲﭳﭴﭵﭶﭷﭸﭹﭺﭻ
ವಿಶ್ವಾಸಿಗಳೇ, ನೀವು ಅಲ್ಲಾಹನ ಭಯವುಳ್ಳವರಾಗಿದ್ದರೆ, ಅವನು ನಿಮಗೆ (ಒಳಿತು-ಕೆಡುಕನ್ನು ಪ್ರತ್ಯೇಕಿಸಿ ತಿಳಿಸುವ) ಒರೆಗಲ್ಲನ್ನು ನೀಡುವನು ಹಾಗೂ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸಿ ನಿಮ್ಮನ್ನು ಕ್ಷಮಿಸಿಬಿಡುವನು. ಅಲ್ಲಾಹನಂತು ಅಪಾರ ಅನುಗ್ರಹಿಯಾಗಿದ್ದಾನೆ
ﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏ
ಧಿಕ್ಕಾರಿಗಳು ನಿಮ್ಮನ್ನು ಬಂಧಿಸಲು ಅಥವಾ ನಿಮ್ಮನ್ನು ಕೊಲ್ಲಲು ಅಥವಾ ನಿಮ್ಮನ್ನು (ಮಕ್ಕಃದಿಂದ) ಹೊರಹಾಕಲು ಗುಪ್ತ ಸಂಚುಗಳನ್ನು ಹೂಡುತ್ತಿದ್ದಾಗ – ಅವರೂ ಸಂಚುಹೂಡುತ್ತಿದ್ದರು ಮತ್ತು ಅಲ್ಲಾಹನೂ ಸಂಚು ಹೂಡುತ್ತಿದ್ದನು. ಅಲ್ಲಾಹನೇ ಅತ್ಯುತ್ತಮ ಸಂಚು ಹೂಡುವವನಾಗಿದ್ದಾನೆ
ﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢ
ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು – ನಾವು ಕೇಳಿದೆವು, ನಾವು ಬಯಸಿದರೆ ಇಂತಹದನ್ನು ನಾವೂ ಹೇಳಬಲ್ಲೆವು. ಇವೆಲ್ಲಾ ಗತಕಾಲದ ಕತೆಗಳು ಮಾತ್ರ ಎನ್ನುತ್ತಾರೆ
ﮣﮤﮥﮦﮧﮨﮩﮪﮫﮬﮭﮮﮯﮰﮱﯓﯔﯕ
ಮತ್ತು ಅವರು, ಓ ಅಲ್ಲಾಹ್, ನಿಜಕ್ಕೂ ಇದೆಲ್ಲಾ ನಿನ್ನ ಕಡೆಯಿಂದಿರುವ ಸತ್ಯವೆಂದಾದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸಿಬಿಡು ಅಥವಾ ನಮಗೊಂದು ಯಾತನಾಮಯ ಶಿಕ್ಷೆಯನ್ನು ತಂದುಕೊಡು – ಎನ್ನುತ್ತಾರೆ
ﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩ
(ದೂತರೇ,) ನೀವು ಅವರ ನಡುವೆ ಇರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು – ಮತ್ತು ಅವರು ಕ್ಷಮೆಯಾಚಿಸುತ್ತಿರುವಾಗ ಅಲ್ಲಾಹನು ಅವರನ್ನು ಶಿಕ್ಷಿಸಲಾರನು
ﯪﯫﯬﯭﯮﯯﯰﯱﯲﯳﯴﯵﯶﯷ
ಅವರನ್ನು ಅಲ್ಲಾಹನು ಶಿಕ್ಷಿಸಬಾರದು ಎಂದೇನೂ ಇಲ್ಲ. ಅವರು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳೇನೂ ಅಲ್ಲ. ಆದರೂ ಅವರು ಜನರನ್ನು ಅದರಿಂದ ತಡೆಯುತ್ತಾರೆ. ನಿಜವಾಗಿ, ಧರ್ಮನಿಷ್ಠರು ಮಾತ್ರ ಅದರ ಅಧಿಕಾರಿಗಳಾಗಬಲ್ಲರು – ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧ
ದೇವಭವನ (ಕಅ್ಬ:)ದ ಬಳಿ ಅವರ ಆರಾಧನೆಯು ಕೇವಲ ಶಿಳ್ಳು ಮತ್ತು ಚಪ್ಪಾಳೆಗೆ ಸೀಮಿತವಾಗಿತ್ತು. ನೀವು ಸತ್ಯಧಿಕ್ಕಾರಿಗಳಾಗಿದ್ದುದಕ್ಕೆ ಶಿಕ್ಷೆಯನ್ನು ಇದೀಗ ಅನುಭವಿಸಿರಿ
ﭨﭩﭪﭫﭬﭭﭮﭯﭰﭱﭲﭳﭴﭵﭶ
ಧಿಕ್ಕಾರಿಗಳು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯಲಿಕ್ಕಾಗಿ ತಮ್ಮ ಸಂಪತ್ತನ್ನು ಖಂಡಿತ ಖರ್ಚು ಮಾಡುತ್ತಿದ್ದಾರೆ. ಮುಂದೆಯೂ ಮಾಡುವರು – ಕೊನೆಗೆ ಇದೆಲ್ಲಾ ಅವರ ಪಾಲಿಗೆ ಖೇದದ ವಿಷಯವಾಗುವುದು ಹಾಗೂ ಅವರು ಸಂಪೂರ್ಣ ಸೋಲಿಸಲ್ಪಡುವರು ಮತ್ತು ಧಿಕ್ಕಾರಿಗಳನ್ನೆಲ್ಲಾ ನರಕದಲ್ಲಿ ಒಟ್ಟುಸೇರಿಸಲಾಗುವುದು
ﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎ
ಅಲ್ಲಾಹನು ಅಶುದ್ಧವನ್ನು ಶುದ್ಧದಿಂದ ಪ್ರತ್ಯೇಕಿಸುವಂತಾಗಲಿಕ್ಕಾಗಿ ಮತ್ತು ಅಶುದ್ಧರನ್ನು ಒಬ್ಬರ ಮೇಲೊಬ್ಬರಂತೆ ಎಸೆದು ಅವರನ್ನೆಲ್ಲಾ ಒಂದು ರಾಶಿಯಾಗಿಸಿ ನರಕಕ್ಕೆ ಕಳಿಸಲಿಕ್ಕಾಗಿ. ಅವರೇ ನಿಜಕ್ಕೂ ನಷ್ಟ ಅನುಭವಿಸುವವರು
ﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢ
ಧಿಕ್ಕಾರಿಗಳೊಡನೆ, ಅವರು (ದುರ್ಮಾರ್ಗದಿಂದ) ಹಿಂಜರಿದರೆ, ಹಿಂದೆ ನಡೆದುದೆಲ್ಲವನ್ನೂ ಅವರ ಪಾಲಿಗೆ ಕ್ಷಮಿಸಲಾಗುವುದೆಂದು ಹೇಳಿರಿ. ಇನ್ನು, ಅವರು (ಹಿಂದಿನ ತಪ್ಪನ್ನೇ) ಪುನರಾವರ್ತಿಸಿದರೆ, ಗತಕಾಲದವರಿಗೆ ಒದಗಿದ ಗತಿಯು (ಅವರ ಮುಂದಿದೆ)
ﮣﮤﮥﮦﮧﮨﮩﮪﮫﮬﮭﮮﮯﮰﮱﯓﯔ
ಮರ್ದನವು ಇಲ್ಲವಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಹೋರಾಡಿರಿ. ಇನ್ನು ಅವರು (ಮರ್ದನದಿಂದ) ದೂರ ಉಳಿದರೆ, ಅಲ್ಲಾಹನಂತು ಅವರು ಮಾಡುತ್ತಿರುವುದನ್ನೆಲ್ಲಾ ನೋಡುತ್ತಿದ್ದಾನೆ
ﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦ
ಒಂದು ವೇಳೆ ಅವರು ಮುಖ ತಿರುಗಿಸಿಕೊಂಡರೆ, ನಿಮಗೆ ತಿಳಿದಿರಲಿ – ಅಲ್ಲಾಹನೇ ನಿಮ್ಮ ಪೋಷಕನು. ಅವನು ಅತ್ಯುತ್ತಮ ಪೋಷಕನು ಮತ್ತು ಅತ್ಯುತ್ತಮ ಸಹಾಯಕನು
ﯧﯨﯩﯪﯫﯬﯭﯮﯯﯰﯱﯲ
ನಿಮಗೆ ತಿಳಿದಿರಲಿ, ನಿಮ್ಮ ಯುದ್ಧ ಸಂಪತ್ತಿನಲ್ಲಿ ಐದನೇ ಒಂದು ಭಾಗವು ಅಲ್ಲಾಹನಿಗೆ, (ಅವನ) ದೂತರಿಗೆ, (ನಿಮ್ಮ) ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ. ನೀವು ಅಲ್ಲಾಹನಲ್ಲಿ ನಂಬಿಕೆ ಉಳ್ಳವರಾಗಿದ್ದರೆ ಮತ್ತು (ಸತ್ಯ-ಮಿಥ್ಯಗಳ) ಪ್ರತ್ಯೇಕತೆಯ ದಿನ ಹಾಗೂ ಎರಡು ಪಡೆಗಳು ಎದುರುಗೊಂಡ (ಬದ್ರ್ಯುದ್ಧದ) ದಿನ ನಾವು ನಮ್ಮ ದಾಸನಿಗೆ ನೀಡಿದ್ದರಲ್ಲಿ (ದಿವ್ಯ ಸಹಾಯದಲ್ಲಿ) ನಂಬಿಕೆ ಉಳ್ಳವರಾಗಿದ್ದರೆ (ಈ ನಿಯಮವನ್ನು ಪಾಲಿಸಿರಿ). ಅಲ್ಲಾಹನು ಎಲ್ಲವನ್ನೂ ಮಾಡಬಲ್ಲನು
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳﭴ
(ವಿಶ್ವಾಸಿಗಳೇ,) ಅಂದು ನೀವು (ಬದ್ರ್ ಮೈದಾನದ) ಒಂದು ಕೊನೆಯಲ್ಲಿದ್ದರೆ, ಅವರು (ಶತ್ರು ಪಡೆ) ಇನ್ನೊಂದು ಕೊನೆಯಲ್ಲಿದ್ದರು ಮತ್ತು ವ್ಯಾಪಾರ ತಂಡವು ನಿಮಗಿಂತ ತಗ್ಗು ಪ್ರದೇಶದಲ್ಲಿತ್ತು. ಒಂದು ವೇಳೆ ನೀವು (ಮುಖಾಮುಖಿಗೆ) ಕಾಲ ನಿಶ್ಚಯಿಸಲು ಹೊರಟಿದ್ದರೆ ನಿಶ್ಚಿತ ಕಾಲದ ಕುರಿತು ಭಿನ್ನತೆ ತಾಳುತ್ತಿದ್ದಿರಿ. ಆದರೆ ನಾಶವಾಗುವವನು ಸ್ಪಷ್ಟ ಪುರಾವೆಯೊಂದಿಗೆ ನಾಶವಾಗಬೇಕು ಮತ್ತು ಬದುಕಿ ಉಳಿಯುವವನು ಸ್ಪಷ್ಟ ಪುರಾವೆಯೊಂದಿಗೆ ಬದುಕಿ ಉಳಿಯಬೇಕೆಂಬ ತನ್ನ ನಿರ್ಧಾರವನ್ನು ಅಲ್ಲಾಹನು ಸಾಧಿಸಿ ತೋರಿಸ ಬಯಸಿದ್ದನು. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲವನ್ನೂ ಕೇಳುವವನು ಮತ್ತು ಅರಿಯುವವನಾಗಿದ್ದಾನೆ
ﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚ
(ದೂತರೇ,) ಅಲ್ಲಾಹನು ನಿಮಗೆ ನಿಮ್ಮ ಕನಸಿನಲ್ಲಿ ಅವರನ್ನು (ಶತ್ರು ಪಡೆಯನ್ನು) ಕಡಿಮೆಯಾಗಿ ಕಾಣಿಸಿದ್ದನು – ಒಂದು ವೇಳೆ ಅವನು ನಿಮಗೆ, ಅವರನ್ನು ಬಹಳವಾಗಿ ಕಾಣಿಸಿದ್ದರೆ ನೀವೆಲ್ಲಾ ಹಿಂಜರಿಯುತ್ತಿದ್ದಿರಿ ಮತ್ತು ಆ (ಯುದ್ಧದ) ವಿಷಯದಲ್ಲಿ ಭಿನ್ನಮತ ತಾಳುತ್ತಿದ್ದಿರಿ. ಆದರೆ ಅಲ್ಲಾಹನು ರಕ್ಷಿಸಿದನು. ಖಂಡಿತವಾಗಿಯೂ ಅವನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ
ﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯﮰﮱ
ಮುಂದೆ, ನೀವು ಪರಸ್ಪರ ಎದುರಾದಾಗಲೂ, ಅವನು ನಿಮ್ಮ ಕಣ್ಣುಗಳಿಗೆ ಅವರನ್ನು ಕಡಿಮೆಯಾಗಿ ಕಾಣಿಸಿದನು ಮತ್ತು ಅವರ ಕಣ್ಣುಗಳಿಗೆ ನಿಮ್ಮನ್ನು ಕಡಿಮೆಯಾಗಿ ಕಾಣಿಸಿದನು. ಏಕೆಂದರೆ ಅಲ್ಲಾಹನ ತೀರ್ಮಾನವು ಅನುಷ್ಠಾನವಾಗಲೇಬೇಕು. ಕೊನೆಗೆ ಎಲ್ಲ ವಿಷಯಗಳೂ ಅಲ್ಲಾಹನೆಡೆಗೇ ಮರಳುತ್ತವೆ
ﯓﯔﯕﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧ
ವಿಶ್ವಾಸಿಗಳೇ, ನೀವು ಯಾವುದೇ ಪಡೆಯನ್ನು ಎದುರಿಸಿದಾಗ, ಸ್ಥಿರವಾಗಿರಿ ಮತ್ತು ನೀವು ವಿಜಯಿಗಳಾಗಲು, ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ
ﯨﯩﯪﯫﯬﯭﯮﯯﯰﯱﯲﯳﯴ
ಹಾಗೆಯೇ, ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ಪರಸ್ಪರ ಜಗಳಗಳಲ್ಲಿ ನಿರತರಾಗಬೇಡಿ. ಅನ್ಯಥಾ, ನಿಮ್ಮ ಧೈರ್ಯ ಕುಂದುವುದು ಮತ್ತು ನಿಮ್ಮ ಶಕ್ತಿಯು ನಷ್ಟವಾಗುವುದು. ನೀವು ಸಹನಶೀಲರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಸಹನ ಶೀಲರ ಜೊತೆಗಿರುತ್ತಾನೆ
ﭑﭒﭓﭔﭕﭖﭗﭘﭙﭚﭛﭜﭝﭞﭟﭠ
ನೀವು, ಜನರಿಗೆ ತೋರಿಸುವುದಕ್ಕಾಗಿ ಆಡಂಬರದಿಂದ ತಮ್ಮ ಮನೆಯಿಂದ ಹೊರಟವರು ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವವರಂತಾಗಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಆವರಿಸಿಕೊಂಡಿದ್ದಾನೆ
ﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳ
ಶೈತಾನನು ಅವರ ಕರ್ಮಗಳನ್ನು ಅವರಿಗೆ ಚಂದಗಾಣಿಸಿರುವನು ಮತ್ತು ‘‘ಇಂದು ಮಾನವರ ಪೈಕಿ ಯಾರೂ ನಿಮ್ಮನ್ನು ಸೋಲಿಸಲಾರರು ಹಾಗೂ ಖಂಡಿತವಾಗಿಯೂ ನಾನು ನಿಮ್ಮ ಜೊತೆಗಿರುವೆನು’’ ಎಂದು ಹೇಳಿರುವನು. ಮುಂದೆ, ಎರಡು ಪಡೆಗಳು ಎದುರುಗೊಂಡಾಗ ಅವನು ತಿರುಗಿನಿಂತನು ಮತ್ತು ‘‘ನಾನು ನಿಮ್ಮಿಂದ ಸಂಪೂರ್ಣ ಮುಕ್ತನು. ನೀವು ಕಾಣದನ್ನು ನಾನು ಕಾಣುತ್ತಿದ್ದೇನೆ. ನಾನಂತು ಖಂಡಿತ ಅಲ್ಲಾಹನಿಗೆ ಅಂಜುತ್ತೇನೆ. ಅಲ್ಲಾಹನು ತುಂಬಾ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ’’ ಎಂದನು
ﭴﭵﭶﭷﭸﭹﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚ
ಕಪಟಿಗಳು ಹಾಗೂ ಮನಗಳಲ್ಲಿ ರೋಗ ಉಳ್ಳವರು (ಧರ್ಮ ನಿಷ್ಠರ ಕುರಿತು) ‘‘ಅವರನ್ನು ಅವರ ಧರ್ಮವು ಮರುಳು ಗೊಳಿಸಿಬಿಟ್ಟಿದೆ’’ ಎನ್ನುತ್ತಾರೆ. ಅಲ್ಲಾಹನಲ್ಲಿ ಭರವಸೆ ಇಟ್ಟವನು ತಿಳಿದಿರಲಿ – ಖಂಡಿತವಾಗಿಯೂ ಅಲ್ಲಾಹನು ತುಂಬಾ ಪ್ರಚಂಡನೂ ಯುಕ್ತಿವಂತನೂ ಆಗಿರುತ್ತಾನೆ
ﮛﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮ
‘ಮಲಕ್’ಗಳು ಧಿಕ್ಕಾರಿಗಳ ಪ್ರಾಣತೆಗೆಯುವುದನ್ನು ನೀವು ನೋಡಿದ್ದರೆ (ಚೆನ್ನಾಗಿರುತ್ತಿತ್ತು.) ಅವರು (ಮಲಕ್ಗಳು) ‘‘ಸವಿಯಿರಿ, ಭುಗಿಲೇಳುವ ನರಕಾಗ್ನಿಯ ಹಿಂಸೆಯನ್ನು’’ ಎನ್ನುತ್ತಾ ಅವರ ಮುಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಿರುತ್ತಾರೆ
ﮯﮰﮱﯓﯔﯕﯖﯗﯘﯙﯚﯛﯜﯝ
‘‘ನಿಮ್ಮ ಕೈಗಳು ಸಂಪಾದಿಸಿ ಕಳಿಸಿರುವುದು ಇದನ್ನೇ. ಅಲ್ಲಾಹನಂತು ಖಂಡಿತ ತನ್ನ ದಾಸರ ಮೇಲೆ ಅನ್ಯಾಯ ಎಸಗುವವನಲ್ಲ’’ (ಎಂದು ಅವರೊಡನೆ ಹೇಳಲಾಗುವುದು)
ﯞﯟﯠﯡﯢﯣﯤﯥﯦﯧ
ಅವರ ಸ್ಥಿತಿಯು ಫಿರ್ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ಅಲ್ಲಾಹನ ಸೂಚನೆಗಳನ್ನು ಧಿಕ್ಕರಿಸಿದ್ದರು ಮತ್ತು ಅವರ ಪಾಪಗಳ ಕಾರಣ ಅಲ್ಲಾಹನು ಅವರನ್ನು ಹಿಡಿದನು. ಖಂಡಿತವಾಗಿಯೂ ಅಲ್ಲಾಹನು ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಬಹಳ ಕಠಿಣವಾಗಿ ಹಿಡಿಯುವವನಾಗಿದ್ದಾನೆ
ﯨﯩﯪﯫﯬﯭﯮﯯﯰﯱﯲﯳﯴﯵﯶﯷﯸﯹﯺﯻ
ಇದೇಕೆಂದರೆ, ಒಂದು ಜನಾಂಗವು ತಾನೇ ತನ್ನ ಅಂತರಂಗವನ್ನು ಬದಲಿಸುವ ತನಕ ಅಲ್ಲಾಹನು ಆ ಜನಾಂಗಕ್ಕೆ ತಾನು ನೀಡಿರುವ ಅನುಗ್ರಹವನ್ನು ಬದಲಿಸುವುದಿಲ್ಲ. ಅಲ್ಲಾಹನು ಎಲ್ಲವನ್ನೂ ಕೇಳುವವನೂ ಅರಿತಿರುವವನೂ ಆಗಿದ್ದಾನೆ
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣ
ಅವರ ಸ್ಥಿತಿಯು ಫಿರ್ಔನನ ಜನರು ಹಾಗೂ ಅವರ ಹಿಂದಿನವರಂತಿದೆ. ಅವರು ತಮ್ಮ ಒಡೆಯನ ಸೂಚನೆಗಳನ್ನು ಧಿಕ್ಕರಿಸಿದರು. ಕೊನೆಗೆ ಅವರ ಪಾಪಗಳ ಕಾರಣ ನಾವು ಅವರನ್ನು ನಾಶಗೊಳಿಸಿದೆವು ಮತ್ತು ಫಿರ್ಔನನ ಜನರನ್ನು ಮುಳುಗಿಸಿ ಬಿಟ್ಟೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು
ﭤﭥﭦﭧﭨﭩﭪﭫﭬﭭﭮﭯﭰﭱﭲﭳﭴﭵﭶﭷ
ಖಂಡಿತವಾಗಿಯೂ, ಧಿಕ್ಕಾರಿಗಳೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನೀಚ ಜೀವಿಗಳಾಗಿದ್ದಾರೆ. ಅವರು (ಸತ್ಯವನ್ನು) ನಂಬುವುದಿಲ್ಲ
ﭸﭹﭺﭻﭼﭽﭾﭿﮀﮁﮂ
ನೀವು ಅವರಿಂದ ಕರಾರನ್ನು ಪಡೆದಿರುವಿರಿ. ಆದರೆ ಪ್ರತಿಬಾರಿಯೂ ಅವರು ತಮ್ಮ ಕರಾರನ್ನು ಮುರಿದು ಹಾಕುತ್ತಾರೆ. ಅವರು (ಅಲ್ಲಾಹನಿಗೆ) ಅಂಜುವುದಿಲ್ಲ
ﮃﮄﮅﮆﮇﮈﮉﮊﮋﮌﮍﮎﮏ
ಅವರು ಯುದ್ಧದಲ್ಲಿ ನಿಮ್ಮ ವಶಕ್ಕೆ ಸಿಕ್ಕಿದರೆ, ಅವರ ಮೂಲಕ, ಅವರ ಹಿಂದಿರುವ ಇತರರಿಗೆ ಪಾಠವಾಗುವಂತೆ ಅವರ ಜೊತೆ ವ್ಯವಹರಿಸಿರಿ – ಅವರು ಪಾಠಕಲಿಯಬಹುದು
ﮐﮑﮒﮓﮔﮕﮖﮗﮘﮙﮚ
ಯಾವುದಾದರೂ ಜನಾಂಗದಿಂದ ನಿಮಗೆ ಮೋಸದ ಭಯವಿದ್ದರೆ, ಸಮಾನ ಪ್ರತಿಕ್ರಮವಾಗಿ (ಅವರ ಸಂಧಾನವನ್ನು) ಅವರೆಡೆಗೆ ಎಸೆದು ಬಿಡಿರಿ. ಖಂಡಿತವಾಗಿಯೂ ಅಲ್ಲಾಹನು ವಂಚಕರನ್ನು ಮೆಚ್ಚುವುದಿಲ್ಲ
ﮛﮜﮝﮞﮟﮠﮡﮢﮣﮤﮥﮦﮧﮨﮩﮪ
ತಾವು ಗೆದ್ದುಬಿಟ್ಟೆವೆಂದು ಧಿಕ್ಕಾರಿಗಳು ಭಾವಿಸದಿರಲಿ. ಖಂಡಿತವಾಗಿಯೂ (ಸತ್ಯ ಧರ್ಮವನ್ನು) ಅವರೆಂದೂ ಸೋಲಿಸಲಾರರು
ﮫﮬﮭﮮﮯﮰﮱﯓﯔﯕ
ನೀವು ಅವರನ್ನು ಎದುರಿಸಲು, ನಿಮಗೆ ಸಾಧ್ಯವಿರುವಷ್ಟು ಶಕ್ತಿಯೊಂದಿಗೆ ಹಾಗೂ ಪಳಗಿದ ಕುದುರೆಗಳೊಂದಿಗೆ ಸದಾ ಸನ್ನದ್ಧರಾಗಿರಿ. ಈ ಮೂಲಕ ನೀವು ಅಲ್ಲಾಹನ ಶತ್ರುಗಳನ್ನು, ನಿಮ್ಮ ಶತ್ರುಗಳನ್ನು ಮತ್ತು ಅವರಲ್ಲದೆ – ನಿಮಗೆ ತಿಳಿದಿಲ್ಲದ ಹಾಗೂ ಅಲ್ಲಾಹನಿಗೆ ತಿಳಿದಿರುವ ಇತರರನ್ನು (ಇತರ ಶತ್ರುಗಳನ್ನು) – ಹೆದರಿಸಬಹುದು. ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು ಮತ್ತು ನಿಮಗೆ ಕಿಂಚಿತ್ತೂ ಅನ್ಯಾಯವಾಗದು
ﯖﯗﯘﯙﯚﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱﯲﯳﯴﯵﯶﯷﯸ
(ದೂತರೇ,) ಒಂದು ವೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ
ﯹﯺﯻﯼﯽﯾﯿﰀﰁﰂﰃﰄﰅﰆﰇ
ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೂ ನಿಮಗೆ (ನಿಮ್ಮ ನೆರವಿಗೆ)ಖಂಡಿತವಾಗಿಯೂ ಅಲ್ಲಾಹನೇ ಸಾಕು. ನಿಮಗೆ, ತನ್ನ ನೆರವಿನ ಮೂಲಕ ಹಾಗೂ ವಿಶ್ವಾಸಿಗಳ ಮೂಲಕ ಸದಾ ಬಲ ಒದಗಿಸುತ್ತಾ ಬಂದಿರುವವನು ಅವನೇ
ﭑﭒﭓﭔﭕﭖﭗﭘﭙﭚﭛﭜﭝﭞ
ಮತ್ತು ಅವರ (ವಿಶ್ವಾಸಿಗಳ) ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಿದವನೂ ಅವನೇ. ನೀವು ಭೂಮಿಯಲ್ಲಿನ ಸಂಪೂರ್ಣ ಸಂಪತ್ತನ್ನು ವ್ಯಯಿಸಿದ್ದರೂ ಅವರ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿಯನ್ನು ಬೆಳೆಸಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ನಿಜಕ್ಕೂ ಅಲ್ಲಾಹನೇ ಅವರ ನಡುವೆ ಪ್ರೀತಿಯನ್ನು ಬೆಳೆಸಿದನು. ಖಂಡಿತವಾಗಿಯೂ ಅವನು ಅತ್ಯಂತ ಪ್ರಬಲನೂ ಯುಕ್ತಿವಂತನೂ ಆಗಿರುವನು
ﭟﭠﭡﭢﭣﭤﭥﭦﭧﭨﭩﭪﭫﭬﭭﭮﭯﭰﭱﭲﭳﭴﭵ
ದೂತರೇ, ನಿಮಗೆ ಮತ್ತು ನಿಮ್ಮ ಅನುಯಾಯಿಗಳಾಗಿರುವ ವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು
ﭶﭷﭸﭹﭺﭻﭼﭽﭾ
ದೂತರೇ, ವಿಶ್ವಾಸಿಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ನೂರು ಜನರಿದ್ದರೆ, ಅವರು ಸಾವಿರ ಧಿಕ್ಕಾರಿಗಳನ್ನು ಸೋಲಿಸುವರು – ಏಕೆಂದರೆ ಅವರು (ಧಿಕ್ಕಾರಿಗಳು) ತಿಳುವಳಿಕೆ ಇಲ್ಲದವರಾಗಿದ್ದಾರೆ
ﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛ
ಇದೀಗ ಅಲ್ಲಾಹನು ನಿಮ್ಮ ಹೊಣೆಯನ್ನು ಹಗುರಗೊಳಿಸುತ್ತಾನೆ – ನಿಮ್ಮಲ್ಲಿ ದೌರ್ಬಲ್ಯವಿರುವುದನ್ನು ಅವನು ಬಲ್ಲನು. ನಿಮ್ಮಲ್ಲಿ ನೂರು ಜನ ಸಹನಶೀಲರಿದ್ದರೆ, ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ಸಾವಿರ ಜನರಿದ್ದರೆ ಅವರು ಅಲ್ಲಾಹನ ಸಮ್ಮತಿಯಿಂದ ಎರಡು ಸಾವಿರ ಮಂದಿಯನ್ನು ಸೋಲಿಸುವರು. ಅಲ್ಲಾಹನು ಸಹನ ಶೀಲರ ಜೊತೆಗಿದ್ದಾನೆ
ﮜﮝﮞﮟﮠﮡﮢﮣﮤﮥﮦﮧﮨﮩﮪﮫﮬﮭﮮﮯﮰﮱﯓﯔﯕﯖﯗﯘﯙﯚ
ಭೂಮಿಯಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸುವ ತನಕ, ತನ್ನ ಬಳಿಯಲ್ಲಿ ಕೈದಿಗಳನ್ನು ಇಟ್ಟುಕೊಳ್ಳುವುದು ಒಬ್ಬ ದೂತನಿಗೆ ಭೂಷಣವಲ್ಲ. ನೀವು (ಜನರು) ಇಹಲೋಕದ ಲಾಭವನ್ನು ಬಯಸುತ್ತೀರಿ. ಅಲ್ಲಾಹನು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹನು ಬಹಳ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ
ﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮﯯﯰﯱ
ಅಲ್ಲಾಹನ ಕಡೆಯಿಂದ ಮೊದಲೇ ಲಿಖಿತ ತೀರ್ಮಾನವೊಂದು ಇಲ್ಲದಿರುತ್ತಿದ್ದರೆ, ನೀವು (ಕೈದಿಗಳನ್ನು) ಇಟ್ಟುಕೊಂಡಿದ್ದಕ್ಕಾಗಿ ಒಂದು ಭಾರೀ ಶಿಕ್ಷೆಯು ನಿಮ್ಮನ್ನು ಆವರಿಸುತ್ತಿತ್ತು
ﯲﯳﯴﯵﯶﯷﯸﯹﯺﯻﯼ
ಇದೀಗ ಯುದ್ಧ ಸಂಪಾದನೆಯಾಗಿ ನಿಮಗೆ ದೊರೆತಿರುವುದಲ್ಲಿ ಸಮ್ಮತ ಹಾಗೂ ಶುದ್ಧವಾಗಿರುವುದನ್ನು ತಿನ್ನಿರಿ. ಜೊತೆಗೆ ಅಲ್ಲಾಹನಿಗೆ ಅಂಜುತ್ತಲಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ
ﯽﯾﯿﰀﰁﰂﰃﰄﰅﰆﰇﰈﰉﰊ
ದೂತರೇ, ನಿಮ್ಮ ಕೈಯಲ್ಲಿ ಕೈದಿಗಳಾಗಿರುವವರೊಡನೆ, ಹೇಳಿರಿ; ‘‘ನಿಮ್ಮ ಮನಸ್ಸುಗಳಲ್ಲಿ ಒಳಿತೇನಾದರೂ ಇರುವುದನ್ನು ಅಲ್ಲಾಹನು ಗುರುತಿಸಿದರೆ, ನಿಮ್ಮಿಂದ ಏನನ್ನು ಪಡೆಯಲಾಗಿದೆಯೋ ಅದಕ್ಕಿಂತ ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮತ್ತು ಅವನು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ
ﭑﭒﭓﭔﭕﭖﭗﭘﭙﭚﭛﭜﭝﭞﭟﭠﭡﭢﭣﭤﭥﭦﭧﭨﭩﭪ
ಇನ್ನು ಅವರು ನಿಮ್ಮನ್ನು ವಂಚಿಸುವ ಸಂಕಲ್ಪ ಮಾಡಿದ್ದರೆ, (ನಿಮಗೆ ತಿಳಿದಿರಲಿ;) ಈ ಹಿಂದೆ ಅವರು ಅಲ್ಲಾಹನನ್ನು ವಂಚಿಸಿರುವರು. ಕೊನೆಗೆ, ಅವನು ಅವರನ್ನು ನಿಮ್ಮ ವಶಕ್ಕೆ ಕೊಟ್ಟನು. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ
ﭫﭬﭭﭮﭯﭰﭱﭲﭳﭴﭵﭶﭷﭸﭹ
ಖಂಡಿತವಾಗಿಯೂ, ವಿಶ್ವಾಸಿಗಳು, ವಲಸಿಗರು ಮತ್ತು ತಮ್ಮ ಸಂಪತ್ತುಗಳೊಂದಿಗೆ ಹಾಗೂ ತಮ್ಮ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು, ಆಶ್ರಯ ಒದಗಿಸಿದವರು ಮತ್ತು ನೆರವಾದವರು – ಅವರೇ ಪರಸ್ಪರ ಆಪ್ತಮಿತ್ರರು. ಇನ್ನು, ವಿಶ್ವಾಸಿಗಳಾಗಿದ್ದರೂ ವಲಸೆ ಹೋಗದವರು – ವಲಸೆ ಹೋಗುವ ತನಕ ಅವರ ಜೊತೆ ನಿಮಗೆ ಯಾವ ನಂಟೂ ಇಲ್ಲ. ಇನ್ನು ಅವರು ಧರ್ಮದ ವಿಷಯದಲ್ಲಿ ನಿಮ್ಮ ನೆರವು ಬಯಸಿದರೆ, ನೆರವು ನೀಡುವುದು ನಿಮ್ಮ ಕರ್ತವ್ಯವಾಗಿದೆ – ಆದರೆ, ಯಾವ ಜನಾಂಗದ ಹಾಗೂ ನಿಮ್ಮ ನಡುವೆ ಕರಾರು ಇದೆಯೋ ಅವರ ವಿರುದ್ಧವಲ್ಲ. ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ನೋಡುತ್ತಿದ್ದಾನೆ
ﭺﭻﭼﭽﭾﭿﮀﮁﮂﮃﮄﮅﮆﮇﮈﮉﮊﮋﮌﮍﮎﮏﮐﮑﮒﮓﮔﮕﮖﮗﮘﮙﮚﮛﮜﮝﮞﮟﮠﮡﮢﮣﮤﮥﮦﮧﮨﮩﮪ
ಧಿಕ್ಕಾರಿಗಳು ಪರಸ್ಪರರ ಪೋಷಕರಾಗಿರುತ್ತಾರೆ. ನೀವು ಹಾಗೆ ಮಾಡದಿದ್ದರೆ ಭೂಮಿಯಲ್ಲಿ ವ್ಯಾಪಕ ಗೊಂದಲ ಹಾಗೂ ಭಾರೀ ಅಶಾಂತಿ ಉಂಟಾಗುವುದು
ﮫﮬﮭﮮﮯﮰﮱﯓﯔﯕﯖﯗﯘﯙﯚ
ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರು ಹಾಗೂ ಹೋರಾಡಿದವರು ಮತ್ತು ಆಶ್ರಯ ನೀಡಿದವರು ಹಾಗೂ ನೆರವಾದವರು – ಅವರೇ ನೈಜ ವಿಶ್ವಾಸಿಗಳು. ಅವರಿಗೆ ಕ್ಷಮೆ ಇದೆ ಹಾಗೂ ಗೌರವಾನ್ವಿತ ಆಹಾರ ಸಿಗಲಿದೆ
ﯛﯜﯝﯞﯟﯠﯡﯢﯣﯤﯥﯦﯧﯨﯩﯪﯫﯬﯭﯮ
ಆ ಬಳಿಕ ವಿಶ್ವಾಸಿಗಳಾದವರು, ವಲಸೆ ಹೋದವರು ಮತ್ತು ನಿಮ್ಮ ಜೊತೆ ಸೇರಿ ಹೋರಾಡಿದವರು – ಅವರೇ ನಿಮ್ಮವರು. ಆದರೆ ಅಲ್ಲಾಹನ ಗ್ರಂಥದ ಪ್ರಕಾರ, ರಕ್ತ ಸಂಬಂಧಿಗಳು ಪರಸ್ಪರ ಹೆಚ್ಚಿನ ಹಕ್ಕುದಾರರಾಗಿರುತ್ತಾರೆ. ಅಲ್ಲಾಹನಂತು ಖಂಡಿತವಾಗಿಯೂ ಎಲ್ಲ ವಿಷಯಗಳನ್ನೂ ಬಲ್ಲವನಾಗಿದ್ದಾನೆ
ﯯﯰﯱﯲﯳﯴﯵﯶﯷﯸﯹﯺﯻﯼﯽﯾﯿﰀﰁﰂﰃﰄﰅﰆﰇ
(ಬಹು ದೇವಾರಾಧಕರೇ,) ನಾಲ್ಕು ತಿಂಗಳ ಕಾಲ ನೀವು ಭೂಮಿಯಲ್ಲಿ ಧಾರಾಳ ತಿರುಗಾಡಿರಿ. ಆದರೆ ನಿಮಗೆ ತಿಳಿದಿರಲಿ – ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ನಿಜವಾಗಿ ಅಲ್ಲಾಹನೇ ಧಿಕ್ಕಾರಿಗಳನ್ನು ಅಪಮಾನಿತರಾಗಿಸಲಿದ್ದಾನೆ
ಪವಿತ್ರ ಕುರಾನ್
Tuesday, August 18, 2026
Don't forget us in your sincere prayers







