ಸೂರಾ ಅಲ್-ಅನ್ಆಮ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಅನ್ಆಮ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (165 ಆಯತ್ — مكية). ಅಲ್-ಅನ್ಆಮ್ ಆಲಿಸಿ, ಅಲ್-ಅನ್ಆಮ್ ಅನುವಾದ, ಅಲ್-ಅನ್ಆಮ್ mp3, ಅಲ್-ಅನ್ಆಮ್ pdf.

ಸೂರಾ ಅಲ್-ಅನ್ಆಮ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
الْحَمْدُ لِلَّهِ الَّذِي خَلَقَ السَّمَاوَاتِ وَالْأَرْضَ وَجَعَلَ الظُّلُمَاتِ وَالنُّورَ ۖ ثُمَّ الَّذِينَ كَفَرُوا بِرَبِّهِمْ يَعْدِلُونَ ۝١
📖 ಅನುವಾದ ಆಯತ್ 1
ಆಕಾಶಗಳನ್ನು, ಭೂಮಿಯನ್ನು ಸೃಷ್ಟಿಸಿದ ಹಾಗೂ ಅಂಧಕಾರಗಳನ್ನು ಮತ್ತು ಪ್ರಕಾಶವನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿಗಳು ಹಾಗಿದ್ದೂ ಸತ್ಯನಿಷೇಧಿಗಳು ಇತರರನ್ನು ತಮ್ಮ ಪರಿಪಾಲಕ ಪ್ರಭುವಿಗೆ ಸಮಾನರೆಂದು ನಿರ್ಣಯಿಸುತ್ತಾರೆ.
هُوَ الَّذِي خَلَقَكُم مِّن طِينٍ ثُمَّ قَضَىٰ أَجَلًا ۖ وَأَجَلٌ مُّسَمًّى عِندَهُ ۖ ثُمَّ أَنتُمْ تَمْتَرُونَ ۝٢
📖 ಅನುವಾದ ಆಯತ್ 2
ಅವನು ನಿಮ್ಮನ್ನು (ಮೊದಲಬಾರಿ) ಮಣ್ಣಿನಿಂದ ಸೃಷ್ಟಿಸಿದನು. ನಂತರ (ಮರಣದ) ಒಂದು ಅವಧಿಯನ್ನು ನಿಶ್ಚಯಿಸಿದನು ಮತ್ತು ಅವನ ಬಳಿ (ಪುನಃ ಜೀವಂತಗೊಳಿಸುವ) ನಿಶ್ಚಿತಾವಧಿಯಿದೆ. ಹಾಗಿದ್ದೂ ನೀವು ಸಂದೇಹಪಡುತ್ತಿರುವಿರಾ.
وَهُوَ اللَّهُ فِي السَّمَاوَاتِ وَفِي الْأَرْضِ ۖ يَعْلَمُ سِرَّكُمْ وَجَهْرَكُمْ وَيَعْلَمُ مَا تَكْسِبُونَ ۝٣
📖 ಅನುವಾದ ಆಯತ್ 3
ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ನೈಜ ಆರಾಧ್ಯನು ಅಲ್ಲಾಹನಾಗಿದ್ದಾನೆ. ನಿಮ್ಮ ರಹಸ್ಯ ಸ್ಥಿತಿಗತಿಗಳನ್ನೂ, ಬಹಿರಂಗ ಸ್ಥಿತಿಗಳನ್ನೂ ಅವನು ಅರಿಯುತ್ತಾನೆ ಮತ್ತು ನೀವು ಮಾಡುತ್ತಿರುವ ಕರ್ಮಗಳನ್ನು ಅವನು ಅರಿಯುತ್ತಾನೆ.
وَمَا تَأْتِيهِم مِّنْ آيَةٍ مِّنْ آيَاتِ رَبِّهِمْ إِلَّا كَانُوا عَنْهَا مُعْرِضِينَ ۝٤
📖 ಅನುವಾದ ಆಯತ್ 4
ಮತ್ತು ಅವರ ಪ್ರಭುವಿನ ದೃಷ್ಟಾಂತಗಳಿAದ ಯಾವುದೇ ದೃಷ್ಟಾಂತ ಅವರ ಬಳಿಗೆ ಬಂದರೂ ಅವರದನ್ನು ಕಡೆಗಣಿಸದೇ ಇರಲಿಲ್ಲ.
فَقَدْ كَذَّبُوا بِالْحَقِّ لَمَّا جَاءَهُمْ ۖ فَسَوْفَ يَأْتِيهِمْ أَنبَاءُ مَا كَانُوا بِهِ يَسْتَهْزِئُونَ ۝٥
📖 ಅನುವಾದ ಆಯತ್ 5
ಸತ್ಯ (ಕುರ್‌ಆನ್) ಅವರ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿಬಿಟ್ಟರು. ಅದ್ದರಿಂದ ಸದ್ಯದಲ್ಲೇ ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದರ ಸುದ್ದಿಗಳು ಅವರಿಗೆ ತಲುಪಲಿವೆ.
أَلَمْ يَرَوْا كَمْ أَهْلَكْنَا مِن قَبْلِهِم مِّن قَرْنٍ مَّكَّنَّاهُمْ فِي الْأَرْضِ مَا لَمْ نُمَكِّن لَّكُمْ وَأَرْسَلْنَا السَّمَاءَ عَلَيْهِم مِّدْرَارًا وَجَعَلْنَا الْأَنْهَارَ تَجْرِي مِن تَحْتِهِمْ فَأَهْلَكْنَاهُم بِذُنُوبِهِمْ وَأَنشَأْنَا مِن بَعْدِهِمْ قَرْنًا آخَرِينَ ۝٦
📖 ಅನುವಾದ ಆಯತ್ 6
ಅವರಿಗಿಂತ ಮೊದಲು ನಾವು ಅದೆಷ್ಟೋ ತಲೆಮಾರುಗಳನ್ನು ನಾಶಗೊಳಿಸಿದ್ದೇವೆಂಬುದನ್ನು ಅವರು ನೋಡಲಿಲ್ಲವೇ? ನಾವು ಅವರಿಗೆ ನಿಮಗೆ ನೀಡಿರದಂತಹ ಶಕ್ತಿ ಸಾಮರ್ಥ್ಯವನ್ನು ನೀಡಿದ್ದೆವು. ನಾವು ಅವರ ಮೇಲೆ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು ಮತ್ತು ಅವರ ತಳಭಾಗದಿಂದ ಕಾಲುವೆಗಳನ್ನು ಹರಿಸಿದೆವು. ನಂತರ ನಾವು ಅವರನ್ನು ಅವರ ಪಾಪಗಳ ನಿಮಿತ್ತ ನಾಶಗೊಳಿಸಿ ಬಿಟ್ಟೆವು ಮತ್ತು ಅವರ ನಂತರ ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.
وَلَوْ نَزَّلْنَا عَلَيْكَ كِتَابًا فِي قِرْطَاسٍ فَلَمَسُوهُ بِأَيْدِيهِمْ لَقَالَ الَّذِينَ كَفَرُوا إِنْ هَٰذَا إِلَّا سِحْرٌ مُّبِينٌ ۝٧
📖 ಅನುವಾದ ಆಯತ್ 7
(ಓ ಪೈಗಂಗರರೇ) ನಾವು ನಿಮ್ಮ ಮೇಲೆ ಕಾಗದದಲ್ಲಿ ಬರೆದಿರುವ ಯಾವುದದರೂ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ ನಂತರ ಅವರು ಅದನ್ನು ಸ್ವತಃ ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ ‘ಇದು ಸ್ಪಷ್ಟವಾದ ಜಾದುವಲ್ಲದೆ ಇನ್ನೇನೂ ಅಲ್ಲ' ಎಂದೇ ಸತ್ಯನಿಷೇಧಿಗಳು ಹೇಳುವರು.
وَقَالُوا لَوْلَا أُنزِلَ عَلَيْهِ مَلَكٌ ۖ وَلَوْ أَنزَلْنَا مَلَكًا لَّقُضِيَ الْأَمْرُ ثُمَّ لَا يُنظَرُونَ ۝٨
📖 ಅನುವಾದ ಆಯತ್ 8
ಅವರೊಂದಿಗೆ (ಪೈಗಂಬರರೊAದಿಗೆ) ಓರ್ವ ದೇವಚರನನ್ನು ಏಕೆ ಇಳಿಸಲಾಗಿಲ್ಲ ಎಂದು ಅವರು ಹೇಳುತ್ತಾರೆ ಮತ್ತು ನಾವು ದೇವಚರರನ್ನು ಇಳಿಸುತ್ತಿದ್ದರೆ ಅವರ ಕಥೆಯೇ ಮುಗಿಸಲಾಗುತ್ತಿತ್ತು. ನಂತರ ಅವರಿಗೆ ಸ್ವಲ್ಪವೂ ಕಾಲಾವಧಿಯನ್ನು ನೀಡಲಾಗುತ್ತಿರಲಿಲ್ಲ.
وَلَوْ جَعَلْنَاهُ مَلَكًا لَّجَعَلْنَاهُ رَجُلًا وَلَلَبَسْنَا عَلَيْهِم مَّا يَلْبِسُونَ ۝٩
📖 ಅನುವಾದ ಆಯತ್ 9
ಇನ್ನು ನಾವು ದೇವಚರರÀನ್ನು ಇಳಿಸುತ್ತಿದ್ದರೂ ಮನುಷ್ಯನನ್ನಾಗಿಯೇ ರೂಪಿಸುತ್ತಿದ್ದೆವು ಮತ್ತು ಈಗವರು ಸಿಲುಕಿರುವಂತಹ ಗೊಂದಲದಲ್ಲಿ ಆಗಲೂ ನಾವು ಅವರನ್ನು ಸಿಲುಕಿಸುತ್ತಿದ್ದೆವು.
وَلَقَدِ اسْتُهْزِئَ بِرُسُلٍ مِّن قَبْلِكَ فَحَاقَ بِالَّذِينَ سَخِرُوا مِنْهُم مَّا كَانُوا بِهِ يَسْتَهْزِئُونَ ۝١٠
📖 ಅನುವಾದ ಆಯತ್ 10
ಓ ಪೈಗಂಬರರೇ ವಾಸ್ತವದಲ್ಲಿ ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿದ್ದರು. ನಂತರ ಅವರನ್ನು ಗೇಲಿ ಮಾಡುತ್ತಿದ್ದವರಿಗೆ ಅವರು ಅಪಹಾಸ್ಯ ಮಾಡುತ್ತಿದ್ದಂತಹ ಶಿಕ್ಷೆಯು ಆವರಿಸಿಬಿಟ್ಟಿತು.
قُلْ سِيرُوا فِي الْأَرْضِ ثُمَّ انظُرُوا كَيْفَ كَانَ عَاقِبَةُ الْمُكَذِّبِينَ ۝١١
📖 ಅನುವಾದ ಆಯತ್ 11
ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿರಿ. ಅನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.
قُل لِّمَن مَّا فِي السَّمَاوَاتِ وَالْأَرْضِ ۖ قُل لِّلَّهِ ۚ كَتَبَ عَلَىٰ نَفْسِهِ الرَّحْمَةَ ۚ لَيَجْمَعَنَّكُمْ إِلَىٰ يَوْمِ الْقِيَامَةِ لَا رَيْبَ فِيهِ ۚ الَّذِينَ خَسِرُوا أَنفُسَهُمْ فَهُمْ لَا يُؤْمِنُونَ ۝١٢
📖 ಅನುವಾದ ಆಯತ್ 12
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಯಾರದ್ದೆಂದು ಕೇಳಿರಿ. ನೀವು ಹೇಳಿರಿ: ಎಲ್ಲವೂ ಅಲ್ಲಾಹನದ್ದಾಗಿದೆ. ಅವನು ಸ್ವತಃ ತನ್ನ (ಸೃಷ್ಟಿಗಳ) ಮೇಲೆ ಕಾರುಣ್ಯ ತೋರುವುದನ್ನು ಕಡ್ಡಾಯವಾಗಿಸಿದ್ದಾನೆ. ಪುನರುತ್ಥಾನದ ದಿನ ಅವನು ನಿಮ್ಮನ್ನು ಖಂಡಿತವಾಗಿಯು ಒಟ್ಟುಗೂಡಿಸುವನು. ಇದರಲ್ಲಿ ಯಾವುದೇ ಸಂದೇಹವಿಲ್ಲ. ಯಾರು ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದ್ದಾರೋ ಅವರು ಸತ್ಯವಿಶ್ವಾಸವಿಡಲಾರರು.
۞ وَلَهُ مَا سَكَنَ فِي اللَّيْلِ وَالنَّهَارِ ۚ وَهُوَ السَّمِيعُ الْعَلِيمُ ۝١٣
📖 ಅನುವಾದ ಆಯತ್ 13
ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.
قُلْ أَغَيْرَ اللَّهِ أَتَّخِذُ وَلِيًّا فَاطِرِ السَّمَاوَاتِ وَالْأَرْضِ وَهُوَ يُطْعِمُ وَلَا يُطْعَمُ ۗ قُلْ إِنِّي أُمِرْتُ أَنْ أَكُونَ أَوَّلَ مَنْ أَسْلَمَ ۖ وَلَا تَكُونَنَّ مِنَ الْمُشْرِكِينَ ۝١٤
📖 ಅನುವಾದ ಆಯತ್ 14
ರಾತ್ರಿಯಲ್ಲೂ, ಹಗಲಿನಲ್ಲೂ ಇರುವುದೆಲ್ಲವೂ ಅವನದ್ದು. ಅವನು ಚೆನ್ನಾಗಿ ಅಲಿಸುವವನು, ಮಹಾ ಜ್ಞಾನಿಯು ಆಗಿದ್ದಾನೆ.
قُلْ إِنِّي أَخَافُ إِنْ عَصَيْتُ رَبِّي عَذَابَ يَوْمٍ عَظِيمٍ ۝١٥
📖 ಅನುವಾದ ಆಯತ್ 15
ಹೇಳಿರಿ: ನಾನು ನನ್ನ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರೆ ಒಂದು ಭಯಾನಕ ದಿನದ ಶಿಕ್ಷೆಯಿಂದ ಭಯಪಡುತ್ತೇನೆ.
مَّن يُصْرَفْ عَنْهُ يَوْمَئِذٍ فَقَدْ رَحِمَهُ ۚ وَذَٰلِكَ الْفَوْزُ الْمُبِينُ ۝١٦
📖 ಅನುವಾದ ಆಯತ್ 16
ಆ ದಿನ ಯಾರನ್ನು ಆ ಶಿಕ್ಷೆಯಿಂದ ಪಾರುಗೊಳಿಸಲಾಗುವುದೋ ಅಲ್ಲಾಹನು ಅವನ ಮೇಲೆ ಮಹಾ ಕರುಣೆಯನ್ನು ತೋರಿಸಿದನು. ಮತ್ತು ಇದು ಸ್ಪಷ್ಟ ಯಶಸ್ಸಾಗಿದೆ.
وَإِن يَمْسَسْكَ اللَّهُ بِضُرٍّ فَلَا كَاشِفَ لَهُ إِلَّا هُوَ ۖ وَإِن يَمْسَسْكَ بِخَيْرٍ فَهُوَ عَلَىٰ كُلِّ شَيْءٍ قَدِيرٌ ۝١٧
📖 ಅನುವಾದ ಆಯತ್ 17
ಪೈಗಂಬರರೇ ನಿಮಗೆ ಅಲ್ಲಾಹನು ಯಾವುದಾದರೂ ಹಾನಿಯನ್ನುಂಟು ಮಾಡಿದರೆ ಅದನ್ನು ನೀಗಿಸಲು ಅವನ ಹೊರತು ಬೇರಾರೂ ಇಲ್ಲ ಮತ್ತು ಅಲ್ಲಾಹನು ನಿಮಗೆ ಯಾವುದಾದರೂ ಒಳಿತನ್ನುಂಟು ಮಾಡುವುದಾದರೆ ಅವನು ಸಕಲ ಕಾರ್ಯಗಳ ಮೇಲೂ ಸಂಪೂರ್ಣ ಸಾಮರ್ಥ್ಯವುಳ್ಳವನಾಗಿದ್ದಾನೆ.
وَهُوَ الْقَاهِرُ فَوْقَ عِبَادِهِ ۚ وَهُوَ الْحَكِيمُ الْخَبِيرُ ۝١٨
📖 ಅನುವಾದ ಆಯತ್ 18
ಮತ್ತು ಅವನು ತನ್ನ ದಾಸರ ಮೇಲೆ ಪ್ರಾಬಲ್ಯವುಳ್ಳವನೂ, ಉನ್ನತನೂ ಆಗಿದ್ದಾನೆ ಮತ್ತು ಅವನು ಯುಕ್ತಿವಂತನೂ, ಸಂಪೂರ್ಣ ಅರಿವುಳ್ಳವನೂ ಆಗಿದ್ದಾನೆ.
قُلْ أَيُّ شَيْءٍ أَكْبَرُ شَهَادَةً ۖ قُلِ اللَّهُ ۖ شَهِيدٌ بَيْنِي وَبَيْنَكُمْ ۚ وَأُوحِيَ إِلَيَّ هَٰذَا الْقُرْآنُ لِأُنذِرَكُم بِهِ وَمَن بَلَغَ ۚ أَئِنَّكُمْ لَتَشْهَدُونَ أَنَّ مَعَ اللَّهِ آلِهَةً أُخْرَىٰ ۚ قُل لَّا أَشْهَدُ ۚ قُلْ إِنَّمَا هُوَ إِلَٰهٌ وَاحِدٌ وَإِنَّنِي بَرِيءٌ مِّمَّا تُشْرِكُونَ ۝١٩
📖 ಅನುವಾದ ಆಯತ್ 19
ಹೇಳಿರಿ: (ಓ ಪೈಗಂಬರರೇ) ಯಾರ ಸಾಕ್ಷö್ಯವು ಎಲ್ಲಕ್ಕಿಂತ ದೊಡ್ಡ ಸಾಕ್ಷö್ಯವಾಗಿದೆ? ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ. ಈ ಕುರ್‌ಆನನ್ನು ನನಗೆ ದಿವ್ಯ ಸಂದೇಶವಾಗಿ ನೀಡಲ್ಪಟ್ಟಿರುವುದು ಇದರ ಮೂಲಕ ನಿಮಗೂ, ಈ ಕುರ್‌ಆನ್ ತಲುಪುವ ಸರ್ವರಿಗೂ ನಾನು ಮುನ್ನೆಚ್ಚರಿಕೆ ನೀಡಲೆಂದಾಗಿದೆ. ನಿಜವಾಗಿಯು ಅಲ್ಲಾಹನೊಂದಿಗೆ ಇತರೆ ಆರಾಧ್ಯರೂ ಇರುವರೆಂದು ನೀವು ಸಾಕ್ಷö್ಯ ವಹಿಸುತ್ತೀರಾ? ಹೇಳಿರಿ: ನಾನು ಸಾಕ್ಷö್ಯ ವಹಿಸುವುದಿಲ್ಲ. ನೀವು ಹೇಳಿರಿ: ಅವನು ಕೇವಲ ಏಕೈಕ ಆರಾಧ್ಯನಾಗಿದ್ದಾನೆ. ಮತ್ತು ನಾನು ನೀವು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಸಂಬAಧಮುಕ್ತನಾಗಿದ್ದೇನೆ.
الَّذِينَ آتَيْنَاهُمُ الْكِتَابَ يَعْرِفُونَهُ كَمَا يَعْرِفُونَ أَبْنَاءَهُمُ ۘ الَّذِينَ خَسِرُوا أَنفُسَهُمْ فَهُمْ لَا يُؤْمِنُونَ ۝٢٠
📖 ಅನುವಾದ ಆಯತ್ 20
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ (ಯಹೂದಿಯರು) ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆ ಸಂದೇಶವಾಹಕ (ಮುಹಮ್ಮದ್(ಸ) ರವರನ್ನು ಗುರುತಿಸುತ್ತಾರೆ. ಆದರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರು ಸತ್ಯವಿಶ್ವಾಸವಿಡುವುದಿಲ್ಲ.
وَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ كَذَّبَ بِآيَاتِهِ ۗ إِنَّهُ لَا يُفْلِحُ الظَّالِمُونَ ۝٢١
📖 ಅನುವಾದ ಆಯತ್ 21
ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಇಂತಹ ಅಕ್ರಮಿಗಳು ಯಶಸ್ವಿಯಾಗಲಾರರು.
وَيَوْمَ نَحْشُرُهُمْ جَمِيعًا ثُمَّ نَقُولُ لِلَّذِينَ أَشْرَكُوا أَيْنَ شُرَكَاؤُكُمُ الَّذِينَ كُنتُمْ تَزْعُمُونَ ۝٢٢
📖 ಅನುವಾದ ಆಯತ್ 22
ನಾವು ಇವರೆಲ್ಲರನ್ನು ಒಟ್ಟುಗೂಡಿಸುವ ದಿನ ಬಹುದೇವಾರಾಧಕರೊಂದಿಗೆ ಕೇಳುವೆವು: ನೀವು ಆರಾಧ್ಯರೆಂದು ವಾದಿಸುತ್ತಿದ್ದ ನಿಮ್ಮ ಸಹಭಾಗಿಗಳು ಎಲ್ಲಿದ್ದಾರೆ?
ثُمَّ لَمْ تَكُن فِتْنَتُهُمْ إِلَّا أَن قَالُوا وَاللَّهِ رَبِّنَا مَا كُنَّا مُشْرِكِينَ ۝٢٣
📖 ಅನುವಾದ ಆಯತ್ 23
ಅನಂತರ ಅವರಿಗೆ “ನಮ್ಮ ಪ್ರಭುವಾದ ಅಲ್ಲಾಹನಾಣೆ! ನಾವು ಬಹುದೇವಾರಾಧಕರಾಗಿರಲಿಲ್ಲ” ಎಂದು ಹೇಳುವುದರ ವಿನಃ ಇನ್ನೇನೂ ನೆಪವಿರಲಾರದು.
انظُرْ كَيْفَ كَذَبُوا عَلَىٰ أَنفُسِهِمْ ۚ وَضَلَّ عَنْهُم مَّا كَانُوا يَفْتَرُونَ ۝٢٤
📖 ಅನುವಾದ ಆಯತ್ 24
ಆಗ ಅವರು ಸ್ವತಃ ತಮ್ಮ ಮೇಲೆಯೇ ಹೇಗೆ ಸುಳ್ಳು ಹೇಳಿದ್ದಾರೆಂಬುದನ್ನು ನೋಡಿರಿ? ಮತ್ತು ಅವರು ಸುಳ್ಳು ಸುಳ್ಳಾಗಿ ಹೇಳುತ್ತಿದ್ದ ಮಿಥ್ಯರಾಧ್ಯರು ಮಾಯವಾಗಿಬಿಟ್ಟವು .
وَمِنْهُم مَّن يَسْتَمِعُ إِلَيْكَ ۖ وَجَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِي آذَانِهِمْ وَقْرًا ۚ وَإِن يَرَوْا كُلَّ آيَةٍ لَّا يُؤْمِنُوا بِهَا ۚ حَتَّىٰ إِذَا جَاءُوكَ يُجَادِلُونَكَ يَقُولُ الَّذِينَ كَفَرُوا إِنْ هَٰذَا إِلَّا أَسَاطِيرُ الْأَوَّلِينَ ۝٢٥
📖 ಅನುವಾದ ಆಯತ್ 25
ಮತ್ತು ಅವರಲ್ಲಿ ಕೆಲವರು ಮೇಲ್ನೋಟಕ್ಕೆ ನಿಮ್ಮ ಮಾತನ್ನು ಕಿವಿಗೊಟ್ಟು ಕೇಳುತ್ತಾರೆ. ಮತ್ತು ನಾವು (ಅಲ್ಲಾಹ್) ಅವರದನ್ನು ಗ್ರಹಿಸದಂತೆ ಅವರ ಹೃದಯಗಳ ಮೇಲೆ ಪರದೆಯನ್ನು ಹಾಕಿದ್ದೇವೆ ಮತ್ತು ಅವರ ಕಿವಿಗಳಲ್ಲಿ ತಡೆÀಯನ್ನಿಟ್ಟಿದ್ದೇವೆ. ಮತ್ತು ಅವರು ಸಕಲ ದೃಷ್ಟಾಂತಗಳನ್ನು ಕಂಡರೂ ಅವುಗಳ ಮೇಲೆ ವಿಶ್ವಾಸವಿಡುವುದಿಲ್ಲ. ಇನ್ನು ಅವರು ನಿಮ್ಮ ಬಳಿಗೆ ಬಂದರೆ ತರ್ಕ ಮಾಡುತ್ತಾರೆ. ಇವು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಇನ್ನೇನೂ ಅಲ್ಲ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
وَهُمْ يَنْهَوْنَ عَنْهُ وَيَنْأَوْنَ عَنْهُ ۖ وَإِن يُهْلِكُونَ إِلَّا أَنفُسَهُمْ وَمَا يَشْعُرُونَ ۝٢٦
📖 ಅನುವಾದ ಆಯತ್ 26
ಅವರು ಇದರಿಂದ (ಕುರ್‌ಆನಿನಿಂದ) ಜನರನ್ನು ತಡೆಯುತ್ತಾರೆ ಮತ್ತು ಸ್ವÀತಃ ಅವರೂ ಇದರಿಂದ ದೂರವಿರುತ್ತಾರೆ ಮತ್ತು ಅವರು ಸ್ವತಃ ತಮ್ಮನ್ನೇ ನಾಶ ಮಾಡುತ್ತಿದ್ದಾರೆ. ಹಾಗೂ ಒಂದಿಷ್ಟೂ ಭೋಧವನ್ನು ಹೊಂದಿರುವುದಿಲ್ಲ.
وَلَوْ تَرَىٰ إِذْ وُقِفُوا عَلَى النَّارِ فَقَالُوا يَا لَيْتَنَا نُرَدُّ وَلَا نُكَذِّبَ بِآيَاتِ رَبِّنَا وَنَكُونَ مِنَ الْمُؤْمِنِينَ ۝٢٧
📖 ಅನುವಾದ ಆಯತ್ 27
ಅವರನ್ನು ನರಕದ ಬಳಿ ನಿಲ್ಲಿಸಲಾಗುವಾಗ ಅವರ ಅವಸ್ಥೆಯನ್ನು ನೋಡಲು ನಿಮಗೆ ಸಾಧ್ಯವಾಗುತ್ತಿದ್ದರೆ ಆಗ ಅವರು ಹೇಳುವರು: ಅಕಟ ನಮ್ಮನ್ನು ಪುನಃ (ಭೂಲೋಕಕ್ಕೆ) ಕಳುಹಿಸಲಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಮತ್ತು ಹಾಗೇನಾದರೂ ಆದರೆ ನಾವು ನಮ್ಮ ಪ್ರಭುವಿನ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿರಲಿಲ್ಲ. ಮತ್ತು ಸತ್ಯವಿಶ್ವಾಸಿಗಳೊಂದಿಗೆ ಸೇರಿದವರಾಗುತ್ತಿದ್ದೇವು.
بَلْ بَدَا لَهُم مَّا كَانُوا يُخْفُونَ مِن قَبْلُ ۖ وَلَوْ رُدُّوا لَعَادُوا لِمَا نُهُوا عَنْهُ وَإِنَّهُمْ لَكَاذِبُونَ ۝٢٨
📖 ಅನುವಾದ ಆಯತ್ 28
ವಾಸ್ತವದಲ್ಲಿ ಅವರು ಈ ಮೊದಲು ಯಾವುದನ್ನು ಮರೆಮಾಚುತ್ತಿದ್ದರೋ ಅದು ಅವರ ಮುಂದೆ ಬಹಿರಂಗಗೊAಡಿದೆ ಮತ್ತು ಅವರನ್ನು ಪುನಃ ಕಳುಹಿಸಲಾದರೂ ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅದೇ ಕೃತ್ಯವನ್ನು ಅವರು ಮಾಡುವರು. ಖಂಡಿತವಾಗಿಯು ಅವರು ಸುಳ್ಳುಗಾರರಾಗಿದ್ದಾರೆ.
وَقَالُوا إِنْ هِيَ إِلَّا حَيَاتُنَا الدُّنْيَا وَمَا نَحْنُ بِمَبْعُوثِينَ ۝٢٩
📖 ಅನುವಾದ ಆಯತ್ 29
ಮತ್ತು ಅವರು ಹೇಳುತ್ತಾರೆ: 'ನಮ್ಮ ಜೀವನವೆಂದರೆ ಕೇವಲ ಈ ಇಹಲೋಕ ಜೀವನವಲ್ಲದೆ ಇನ್ನೇನೂ ಇಲ್ಲ ಮತ್ತು ನಾವು (ಮರಣದ ನಂತರ) ಪುನರ್ಜೀವಗೊಳಿಸಲ್ಪಡುವವರಲ್ಲ.
وَلَوْ تَرَىٰ إِذْ وُقِفُوا عَلَىٰ رَبِّهِمْ ۚ قَالَ أَلَيْسَ هَٰذَا بِالْحَقِّ ۚ قَالُوا بَلَىٰ وَرَبِّنَا ۚ قَالَ فَذُوقُوا الْعَذَابَ بِمَا كُنتُمْ تَكْفُرُونَ ۝٣٠
📖 ಅನುವಾದ ಆಯತ್ 30
ಮತ್ತು ಅವರು ತಮ್ಮ ಪ್ರಭುವಿನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! ಅಲ್ಲಾಹನು ಕೇಳುವನು: ಈ ಸಂಗತಿಯು ವಾಸ್ತವಿಕತೆಯಲ್ಲವೇ? ಅವರು ಹೇಳುವರು: ನಿಸ್ಸಂಶಯವಾಗಿಯೂ, ನಮ್ಮ ಪ್ರಭುವಿನ ಮೇಲಾಣೆ. ಅಲ್ಲಾಹನು ಹೇಳುವನು: ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಈ ಶಿಕ್ಷೆಯನ್ನು ಸವಿಯಿರಿ.
قَدْ خَسِرَ الَّذِينَ كَذَّبُوا بِلِقَاءِ اللَّهِ ۖ حَتَّىٰ إِذَا جَاءَتْهُمُ السَّاعَةُ بَغْتَةً قَالُوا يَا حَسْرَتَنَا عَلَىٰ مَا فَرَّطْنَا فِيهَا وَهُمْ يَحْمِلُونَ أَوْزَارَهُمْ عَلَىٰ ظُهُورِهِمْ ۚ أَلَا سَاءَ مَا يَزِرُونَ ۝٣١
📖 ಅನುವಾದ ಆಯತ್ 31
ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು!
وَمَا الْحَيَاةُ الدُّنْيَا إِلَّا لَعِبٌ وَلَهْوٌ ۖ وَلَلدَّارُ الْآخِرَةُ خَيْرٌ لِّلَّذِينَ يَتَّقُونَ ۗ أَفَلَا تَعْقِلُونَ ۝٣٢
📖 ಅನುವಾದ ಆಯತ್ 32
ಐಹಿಕ ಜೀವನವು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಉತ್ತಮವಾಗಿದೆ. ನೀವು ಚಿಂತಿಸುವುದಿಲ್ಲವೇ?
قَدْ نَعْلَمُ إِنَّهُ لَيَحْزُنُكَ الَّذِي يَقُولُونَ ۖ فَإِنَّهُمْ لَا يُكَذِّبُونَكَ وَلَٰكِنَّ الظَّالِمِينَ بِآيَاتِ اللَّهِ يَجْحَدُونَ ۝٣٣
📖 ಅನುವಾದ ಆಯತ್ 33
ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ.
وَلَقَدْ كُذِّبَتْ رُسُلٌ مِّن قَبْلِكَ فَصَبَرُوا عَلَىٰ مَا كُذِّبُوا وَأُوذُوا حَتَّىٰ أَتَاهُمْ نَصْرُنَا ۚ وَلَا مُبَدِّلَ لِكَلِمَاتِ اللَّهِ ۚ وَلَقَدْ جَاءَكَ مِن نَّبَإِ الْمُرْسَلِينَ ۝٣٤
📖 ಅನುವಾದ ಆಯತ್ 34
ಖಂಡಿತವಾಗಿಯು ನಿಮಗಿಂತ ಮುಂಚೆ ಅದೆಷ್ಟೋ ಸಂದೇಶವಾಹಕರು ಧಿಕ್ಕರಿಸಲ್ಪಟ್ಟಿದ್ದಾರೆ. ಆದರೆ ಅವರು ತಮ್ಮನ್ನು ನಿರಾಕರಿಸಿದ್ದನ್ನು ಹಿಂಸಿಸಲಾಗಿದ್ದನ್ನು ಸಹಿಸಿಕೊಂಡರು. ಕೊನೆಗೆ ನಮ್ಮ ಸಹಾಯವು ಅವರಿಗೆ ತಲುಪಿತು. ಅಲ್ಲಾಹನ ನಿರ್ಣಯಗಳನ್ನು ಬದಲಾಯಿಸುವವನಾರಿಲ್ಲ. ಮತ್ತು ನಿಮ್ಮ ಬಳಿಗೆ ಕೆಲವು ಸಂದೇಶವಾಹಕರ ವೃತ್ತಾಂತಗಳು ತಲುಪಿರುತ್ತವೆ.
وَإِن كَانَ كَبُرَ عَلَيْكَ إِعْرَاضُهُمْ فَإِنِ اسْتَطَعْتَ أَن تَبْتَغِيَ نَفَقًا فِي الْأَرْضِ أَوْ سُلَّمًا فِي السَّمَاءِ فَتَأْتِيَهُم بِآيَةٍ ۚ وَلَوْ شَاءَ اللَّهُ لَجَمَعَهُمْ عَلَى الْهُدَىٰ ۚ فَلَا تَكُونَنَّ مِنَ الْجَاهِلِينَ ۝٣٥
📖 ಅನುವಾದ ಆಯತ್ 35
ಮತ್ತು ಅವರ ವಿಮುಖತೆಯು ನಿಮಗೆ ಅಸಹನೀಯವಾಗಿ ತೋರುವುದಾದರೆ ನಿಮಗೆ ಸಾಧ್ಯವಿದ್ದರೆ ಭೂಮಿಯಲ್ಲಿ ಒಂದು ಸುರಂಗವನ್ನು ತೋಡಿರಿ ಅಥವಾ ಆಕಾಶದಲ್ಲಿ ಒಂದು ಏಣಿಯನ್ನು ಹುಡುಕಿ ಅನಂತರ ಅವರಿಗೆ ದೃಷ್ಟಾಂತವೊAದನ್ನು (ಕುರುಹನ್ನು) ತಂದು ಕೊಡಲಿಕ್ಕಾಗುವುದಾದರೆ ಹಾಗೆ ಮಾಡಿರಿ.ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದುದರಿಂದ ನೀವು ಅವಿವೇಕಿಗಳ ಪೈಕಿ ಸೇರದಿರಿ.
۞ إِنَّمَا يَسْتَجِيبُ الَّذِينَ يَسْمَعُونَ ۘ وَالْمَوْتَىٰ يَبْعَثُهُمُ اللَّهُ ثُمَّ إِلَيْهِ يُرْجَعُونَ ۝٣٦
📖 ಅನುವಾದ ಆಯತ್ 36
ಮನಃ ಪೂರ್ವಕವಾಗಿ ಆಲಿಸುವವರು ಮಾತ್ರ ಓಗೊಡುತ್ತಾರೆ ಮತ್ತು ಮೃತರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವನು. ನಂತರ ಎಲ್ಲರೂ ಅವನೆಡೆಗೇ ಮರಳಿಸಲಾಗುವರು.
وَقَالُوا لَوْلَا نُزِّلَ عَلَيْهِ آيَةٌ مِّن رَّبِّهِ ۚ قُلْ إِنَّ اللَّهَ قَادِرٌ عَلَىٰ أَن يُنَزِّلَ آيَةً وَلَٰكِنَّ أَكْثَرَهُمْ لَا يَعْلَمُونَ ۝٣٧
📖 ಅನುವಾದ ಆಯತ್ 37
ಇವರ ಮೇಲೆ ಇವರ ಪ್ರಭುವಿನ ವತಿಯಿಂದ ಯಾವುದಾದರೂ ದೃಷ್ಟಾಂತವೇಕೆ ಇಳಿಸಲಾಗುವುದಿಲ್ಲ ಎಂದು ಅವರು ಕೇಳುತ್ತಾರೆ. ನೀವು ಹೇಳಿರಿ: ನಿಸ್ಸಂಶಯವಾಗಿಯು ದೃಷ್ಟಾಂತವನ್ನು (ಕುರುಹು) ಇಳಿಸಲು ಅಲ್ಲಾಹನು ಸರ್ವ ಸಮರ್ಥನಿದ್ದಾನೆ. ಆದರೆ ಅವರ ಪೈಕಿ ಹೆಚ್ಚಿನವರು ಅರಿತುಕೊಳ್ಳುವುದಿಲ್ಲ.
وَمَا مِن دَابَّةٍ فِي الْأَرْضِ وَلَا طَائِرٍ يَطِيرُ بِجَنَاحَيْهِ إِلَّا أُمَمٌ أَمْثَالُكُم ۚ مَّا فَرَّطْنَا فِي الْكِتَابِ مِن شَيْءٍ ۚ ثُمَّ إِلَىٰ رَبِّهِمْ يُحْشَرُونَ ۝٣٨
📖 ಅನುವಾದ ಆಯತ್ 38
ಭೂಮಿಯಲ್ಲಿ ಚಲಿಸುತ್ತಿರುವ ಜೀವಿಗಳು, ಎರಡು ರೆಕ್ಕೆಗಳಿಂದ ಹಾರಾಡುತ್ತಿರುವ ಹಕ್ಕಿಗಳು ನಿಮ್ಮಂತಹ ವರ್ಗಗಳಾಗಿವೆ. ಗ್ರಂಥದಲ್ಲಿ ನಾವು ಯಾವುದನ್ನೂ ದಾಖಲಿಸದೇ ಬಿಟ್ಟಿಲ್ಲ. ನಂತರ ಅವರೆಲ್ಲರೂ ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲಾಗುವರು.
وَالَّذِينَ كَذَّبُوا بِآيَاتِنَا صُمٌّ وَبُكْمٌ فِي الظُّلُمَاتِ ۗ مَن يَشَإِ اللَّهُ يُضْلِلْهُ وَمَن يَشَأْ يَجْعَلْهُ عَلَىٰ صِرَاطٍ مُّسْتَقِيمٍ ۝٣٩
📖 ಅನುವಾದ ಆಯತ್ 39
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವರೋ ಅವರು ಕಿವುಡರೂ, ಮೂಕರೂ ಮತ್ತು ಅಂಧಕಾರಗಳಲ್ಲಿ ಅಲೆದಾಡುತ್ತಿದ್ದಾರೆ. ಅಲ್ಲಾಹನು ತಾನು ಇಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ.
قُلْ أَرَأَيْتَكُمْ إِنْ أَتَاكُمْ عَذَابُ اللَّهِ أَوْ أَتَتْكُمُ السَّاعَةُ أَغَيْرَ اللَّهِ تَدْعُونَ إِن كُنتُمْ صَادِقِينَ ۝٤٠
📖 ಅನುವಾದ ಆಯತ್ 40
ಹೇಳಿರಿ: ಒಂದಿಷ್ಟು ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಕೊನೆ ಘಳಿಗೆ (ಪ್ರಳಯ) ನಿಮ್ಮ ಮೇಲೆ ಬಂದೆರಗಿದರೆ ಅಲ್ಲಾಹನ ಹೊರತು ಇತರರನ್ನೇ ನೀವು ಕರೆದು ಪ್ರಾರ್ಥಿಸುವಿರಾ? ನೀವು ಸತ್ಯಸಂಧರಾಗಿದ್ದರೆ ಹೇಳಿರಿ.
بَلْ إِيَّاهُ تَدْعُونَ فَيَكْشِفُ مَا تَدْعُونَ إِلَيْهِ إِن شَاءَ وَتَنسَوْنَ مَا تُشْرِكُونَ ۝٤١
📖 ಅನುವಾದ ಆಯತ್ 41
ಇಲ್ಲ, ನೀವು ಅವನನ್ನು ಮಾತ್ರ ಕರೆದು ಪ್ರಾರ್ಥಿಸುವಿರಿ. ನಂತರ ನೀವು ಯಾವುದಕ್ಕಾಗಿ ಪ್ರಾರ್ಥಿಸುವಿರೋ ಅವನಿಚ್ಛಿಸಿದರೆ ಅದನ್ನು ನೀಗಿಸಬಹುದು ಮತ್ತು ಆಗ ನೀವು ಅಲ್ಲಾಹನ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದವರನ್ನೆಲ್ಲಾ ಮರೆತುಬಿಡುವಿರಿ.
وَلَقَدْ أَرْسَلْنَا إِلَىٰ أُمَمٍ مِّن قَبْلِكَ فَأَخَذْنَاهُم بِالْبَأْسَاءِ وَالضَّرَّاءِ لَعَلَّهُمْ يَتَضَرَّعُونَ ۝٤٢
📖 ಅನುವಾದ ಆಯತ್ 42
ನಿಮಗಿಂತ ಮುಂಚೆ ಗತಸಮುದಾಯಗಳೆಡೆಗೂ ನಾವು ಸಂದೇಶವಾಹಕರನ್ನು ನಿಯೋಗಿಸಿದ್ದೇವೆ. ಅವರು ದೈನ್ಯತೆಯನ್ನು ತೋರಲೆಂದು ನಾವು (ಅವರ ಪಾಪಗಳ ನಿಮಿತ್ತ) ಅವರನ್ನು ಸಂಕಷ್ಟ ಮತ್ತು ರೋಗರುಜಿನಗಳಿಗೆ ಸಿಲುಕಿಸಿದೆವು.
فَلَوْلَا إِذْ جَاءَهُم بَأْسُنَا تَضَرَّعُوا وَلَٰكِن قَسَتْ قُلُوبُهُمْ وَزَيَّنَ لَهُمُ الشَّيْطَانُ مَا كَانُوا يَعْمَلُونَ ۝٤٣
📖 ಅನುವಾದ ಆಯತ್ 43
ಹಾಗೆಯೇ ಅವರಿಗೆ ನಮ್ಮ ಶಿಕ್ಷೆಯು ಬಂದಾಗ ಅವರೇಕೆ ದೈನ್ಯತೆ ತೋರಿಸಲಿಲ್ಲ? ಆದರೆ ಅವರ ಹೃದಯಗಳು ಕಠೋರಗೊಂಡವು ಮತ್ತು ಶೈತಾನನು ಅವರ ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಿದನು.
فَلَمَّا نَسُوا مَا ذُكِّرُوا بِهِ فَتَحْنَا عَلَيْهِمْ أَبْوَابَ كُلِّ شَيْءٍ حَتَّىٰ إِذَا فَرِحُوا بِمَا أُوتُوا أَخَذْنَاهُم بَغْتَةً فَإِذَا هُم مُّبْلِسُونَ ۝٤٤
📖 ಅನುವಾದ ಆಯತ್ 44
ಅನಂತರ ಅವರು ತಮಗೆ ಉಪದೇಶ ನೀಡಲಾಗುತ್ತಿದ್ದಂತಹ ವಿಚಾರಗಳನ್ನು ಮರೆತು ಬಿಟ್ಟಾಗ ನಾವು ಅವರಿಗೆ ಸರ್ವ ಶ್ರೇಯಸ್ಸಿನ ದ್ವಾರಗಳನ್ನು ತೆರೆದು ಕೊಟ್ಟೆವು. ಅವರು ತಮಗೆ ನೀಡಲಾದುದರಲ್ಲಿ ಆನಂದ ತುಂದಿಲರಾಗಿ ಮೆರೆಯುತ್ತಿರುವಾಗ ಹಠಾತ್ತನೆ ನಾವು ಅವರನ್ನು ಹಿಡಿದು ಬಿಟ್ಟವು. ನಂತರ ಅವರು ನಿರಾಶರಾದರು.
فَقُطِعَ دَابِرُ الْقَوْمِ الَّذِينَ ظَلَمُوا ۚ وَالْحَمْدُ لِلَّهِ رَبِّ الْعَالَمِينَ ۝٤٥
📖 ಅನುವಾದ ಆಯತ್ 45
ಅಕ್ರಮಿಗಳಾದ ಆ ಜನತೆಯ ಬುಡವನ್ನೇ ಕತ್ತರಿಸಿ ಬಿಡಲಾಯಿತು. ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
قُلْ أَرَأَيْتُمْ إِنْ أَخَذَ اللَّهُ سَمْعَكُمْ وَأَبْصَارَكُمْ وَخَتَمَ عَلَىٰ قُلُوبِكُم مَّنْ إِلَٰهٌ غَيْرُ اللَّهِ يَأْتِيكُم بِهِ ۗ انظُرْ كَيْفَ نُصَرِّفُ الْآيَاتِ ثُمَّ هُمْ يَصْدِفُونَ ۝٤٦
📖 ಅನುವಾದ ಆಯತ್ 46
ಹೇಳಿರಿ: ನೀವೊಮ್ಮೆ ಆಲೋಚಿಸಿರಿ, ಅಲ್ಲಾಹನು ನಿಮ್ಮ ಕಿವಿಯನ್ನು, ಕಣ್ಣನ್ನು ಕಸಿದುಕೊಂಡು ನಿಮ್ಮ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಟ್ಟರೆ ಅಲ್ಲಾಹನ ಹೊರತು ಇನ್ನಾವ ಆರಾಧ್ಯನು ನಿಮಗದನ್ನು ಮರಳಿ ಕೊಡುತ್ತಾನೆ? ನಾವು ಅವರಿಗೆ ಹೇಗೆಲ್ಲಾ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆಂಬುದನ್ನು ನೋಡಿರಿ. ಅದಾಗ್ಯೂ ಅವರು ವಿಮುಖರಾಗುತ್ತಾರೆ.
قُلْ أَرَأَيْتَكُمْ إِنْ أَتَاكُمْ عَذَابُ اللَّهِ بَغْتَةً أَوْ جَهْرَةً هَلْ يُهْلَكُ إِلَّا الْقَوْمُ الظَّالِمُونَ ۝٤٧
📖 ಅನುವಾದ ಆಯತ್ 47
ಹೇಳಿರಿ: ನೀವು ಒಮ್ಮೆ ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮಗೆ ಹಠಾತ್ತನೆ ಅಥವಾ ಪ್ರತ್ಯಕ್ಷ(ಸೂಚಿತವಾಗಿ) ಬಂದು ಬಿಟ್ಟರೆ ಅಕ್ರಮಿಗಳಾದ ಜನತೆಯ ಹೊರತು ಇನ್ನಾರಾದರೂ ನಾಶಗೊಳಿಸಲ್ಪಡುತ್ತಾರೆಯೇ?
وَمَا نُرْسِلُ الْمُرْسَلِينَ إِلَّا مُبَشِّرِينَ وَمُنذِرِينَ ۖ فَمَنْ آمَنَ وَأَصْلَحَ فَلَا خَوْفٌ عَلَيْهِمْ وَلَا هُمْ يَحْزَنُونَ ۝٤٨
📖 ಅನುವಾದ ಆಯತ್ 48
(ಸಜ್ಜನರಿಗೆ) ಶುಭವಾರ್ತೆ ನೀಡಲೆಂದೂ, (ದುರ್ಜನರಿಗೆ) ಮುನ್ನೆಚ್ಚರಿಕೆ ನೀಡಲೆಂದೂ ಮಾತ್ರ ನಾವು ಸಂದೇಶವಾಹಕರನ್ನು ನಿಯೋಗಿಸುತ್ತೇವೆ. ಅನಂತರ ಯಾರು ವಿಶ್ವಾಸವಿಡುತ್ತಾರೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾರೋ ಅವರ ಮೇಲೆ ಯಾವುದೇ ಭಯವಿರುವುದಿಲ್ಲ ಮತ್ತು ಅವರು ದುಃಖಿತರೂ ಆಗಲಾರರು.
وَالَّذِينَ كَذَّبُوا بِآيَاتِنَا يَمَسُّهُمُ الْعَذَابُ بِمَا كَانُوا يَفْسُقُونَ ۝٤٩
📖 ಅನುವಾದ ಆಯತ್ 49
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಾರೋ ಅವರ ಧಿಕ್ಕಾರದ ನಿಮಿತ್ತ ಅವರು ಶಿಕ್ಷೆಗೆ ಗುರಿಯಾಗುವರು.
قُل لَّا أَقُولُ لَكُمْ عِندِي خَزَائِنُ اللَّهِ وَلَا أَعْلَمُ الْغَيْبَ وَلَا أَقُولُ لَكُمْ إِنِّي مَلَكٌ ۖ إِنْ أَتَّبِعُ إِلَّا مَا يُوحَىٰ إِلَيَّ ۚ قُلْ هَلْ يَسْتَوِي الْأَعْمَىٰ وَالْبَصِيرُ ۚ أَفَلَا تَتَفَكَّرُونَ ۝٥٠
📖 ಅನುವಾದ ಆಯತ್ 50
ಹೇಳಿರಿ: ನಾನು ನಿಮಗೆ ಅಲ್ಲಾಹನ ಭಂಡಾರಗಳು ನನ್ನ ಬಳಿಯಿವೆಯೆಂದು ದಾವೆ ಮಾಡುವುದಿಲ್ಲ ಮತ್ತು ಅಗೋಚರ ಜ್ಞಾನವನ್ನು ನಾನು ಅರಿಯುವುದೂ ಇಲ್ಲ ಮತ್ತು ನಾನು ಒಬ್ಬ ದೇವಚರನಾಗಿದ್ದೇನೆಂದು ನಿಮ್ಮೊಂದಿಗೆ ಹೇಳುವುದಿಲ್ಲ. ನಾನಂತೂ ನನ್ನ ಬಳಿಗೆ ದಿವ್ಯ ಸಂದೇಶ ನೀಡಲಾಗುವುದನ್ನೇ ಅನುಸರಿಸುತ್ತೇನೆ. ಹೇಳಿರಿ: ಕುರುಡನು, ದೃಷ್ಟಿಯುಳ್ಳವನು ಸಮಾನರೇ? ಹಾಗೆಯೇ ನೀವು ಚಿಂತಿಸುವುದಿಲ್ಲವೇ?
وَأَنذِرْ بِهِ الَّذِينَ يَخَافُونَ أَن يُحْشَرُوا إِلَىٰ رَبِّهِمْ ۙ لَيْسَ لَهُم مِّن دُونِهِ وَلِيٌّ وَلَا شَفِيعٌ لَّعَلَّهُمْ يَتَّقُونَ ۝٥١
📖 ಅನುವಾದ ಆಯತ್ 51
ಅಲ್ಲಾಹನ ಹೊರತು ಅವರಿಗೆ ಯಾವೊಬ್ಬ ಸಹಾಯಕನಾಗಲೀ, ಯಾವೊಬ್ಬ ಶಿಫಾರಸ್ಸುಗಾರನಾಗಲೀ ಇರದಂತಹ ಸ್ಥಿತಿಯಲ್ಲಿ ಅವರನ್ನು ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲ್ಪಡುವೆವೆಂದು ಭಯಪಡುವವರಿಗೆ ನೀವು ಇದರ ಮೂಲಕ (ಕುರ್‌ಆನ್) ಮುನ್ನೆಚ್ಚರಿಕೆ ನೀಡಿರಿ. ಅವರು ಭಯಪಡಬಹುದು.
وَلَا تَطْرُدِ الَّذِينَ يَدْعُونَ رَبَّهُم بِالْغَدَاةِ وَالْعَشِيِّ يُرِيدُونَ وَجْهَهُ ۖ مَا عَلَيْكَ مِنْ حِسَابِهِم مِّن شَيْءٍ وَمَا مِنْ حِسَابِكَ عَلَيْهِم مِّن شَيْءٍ فَتَطْرُدَهُمْ فَتَكُونَ مِنَ الظَّالِمِينَ ۝٥٢
📖 ಅನುವಾದ ಆಯತ್ 52
ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಮುಂಜಾನೆಯಲ್ಲೂ, ಮುಸ್ಸಂಜೆಯಲ್ಲೂ, ಅವನನ್ನು ಕರೆದು ಪ್ರಾರ್ಥಿಸುವವರನ್ನು ನೀವು ದೂರಕ್ಕಟ್ಟಬೇಡಿರಿ. ಅವರ ವಿಚಾರಣೆಯ ಹೊಣೆ ನಿಮ್ಮ ಮೇಲಿಲ್ಲ. ನಿಮ್ಮ ವಿಚಾರಣೆಯ ಹೊಣೆ ಅವರ ಮೇಲಿಲ್ಲ. ಆದುದರಿಂದ ನೀವು ಅವರನ್ನು ದೂರಗಟ್ಟಿದರೆ ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.
وَكَذَٰلِكَ فَتَنَّا بَعْضَهُم بِبَعْضٍ لِّيَقُولُوا أَهَٰؤُلَاءِ مَنَّ اللَّهُ عَلَيْهِم مِّن بَيْنِنَا ۗ أَلَيْسَ اللَّهُ بِأَعْلَمَ بِالشَّاكِرِينَ ۝٥٣
📖 ಅನುವಾದ ಆಯತ್ 53
ಹೀಗೆ ನಾವು ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷೆಗೊಳಪಡಿಸಿದೆವು. ಇದು ನಮ್ಮೆಲ್ಲರ ನಡುವೆ ಅಲ್ಲಾಹನು ಅನುಗ್ರಹಿಸಿದ್ದು ಇವರ ಮೇಲೆಯೇ? ಎಂದು ಸರದಾರರು ಹೇಳಲೆಂದಾಗಿದೆ. ಕೃತಜ್ಞತೆ ತೋರುವವರನ್ನು ಅಲ್ಲಾಹನು ಬಹಳ ಚೆನ್ನಾಗಿ ಅರಿಯುವನಲ್ಲವೇ?
وَإِذَا جَاءَكَ الَّذِينَ يُؤْمِنُونَ بِآيَاتِنَا فَقُلْ سَلَامٌ عَلَيْكُمْ ۖ كَتَبَ رَبُّكُمْ عَلَىٰ نَفْسِهِ الرَّحْمَةَ ۖ أَنَّهُ مَنْ عَمِلَ مِنكُمْ سُوءًا بِجَهَالَةٍ ثُمَّ تَابَ مِن بَعْدِهِ وَأَصْلَحَ فَأَنَّهُ غَفُورٌ رَّحِيمٌ ۝٥٤
📖 ಅನುವಾದ ಆಯತ್ 54
ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: ನಿಮ್ಮ ಮೇಲೆ ಶಾಂತಿಯಿರಲಿ. ನಿಮ್ಮ ಪ್ರಭು ಕರುಣೆತೋರುವುದನ್ನು ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ಅಂದರೆ ನಿಮ್ಮ ಪೈಕಿ ಯಾರಾದರೂ ಅಜ್ಞಾನದಿಂದ ದುಷ್ಕೃತ್ಯವನ್ನು ಮಾಡಿದರೆ, ತರುವಾಯ ಅವನು ಅದರ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅತ್ಯಧಿಕ ಕ್ಷಮಿಸುವವನು, ಕರುಣಾನಿಧಿÀಯು ಆಗಿದ್ದಾನೆ.
وَكَذَٰلِكَ نُفَصِّلُ الْآيَاتِ وَلِتَسْتَبِينَ سَبِيلُ الْمُجْرِمِينَ ۝٥٥
📖 ಅನುವಾದ ಆಯತ್ 55
ಹೀಗೆ ಅಪರಾಧಿಗಳ ಮಾರ್ಗವು (ವರ್ತನೆ) ಬಹಿರಂಗವಾಗಲೆAದು ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
قُلْ إِنِّي نُهِيتُ أَنْ أَعْبُدَ الَّذِينَ تَدْعُونَ مِن دُونِ اللَّهِ ۚ قُل لَّا أَتَّبِعُ أَهْوَاءَكُمْ ۙ قَدْ ضَلَلْتُ إِذًا وَمَا أَنَا مِنَ الْمُهْتَدِينَ ۝٥٦
📖 ಅನುವಾದ ಆಯತ್ 56
ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವವರನ್ನು ಆರಾಧಿಸುವುದನ್ನು ನನಗೆ ನಿಷೇಧಿಸಲಾಗಿದೆ. ಹೇಳಿರಿ: ನಾನು ನಿಮ್ಮ ಸ್ವೇಚ್ಛೆಗಳನ್ನು ಅನುಸರಿಸುವುದಿಲ್ಲ. ಹಾಗೆ ಮಾಡಿದರೆ ನಾನು ಮಾರ್ಗ ಭ್ರಷ್ಟನಾಗುವೆನು ಮತ್ತು ಸನ್ಮಾರ್ಗ ಪ್ರಾಪ್ತರಲ್ಲಿ ಸೇರಿದವನಾಗಲಾರನು.
قُلْ إِنِّي عَلَىٰ بَيِّنَةٍ مِّن رَّبِّي وَكَذَّبْتُم بِهِ ۚ مَا عِندِي مَا تَسْتَعْجِلُونَ بِهِ ۚ إِنِ الْحُكْمُ إِلَّا لِلَّهِ ۖ يَقُصُّ الْحَقَّ ۖ وَهُوَ خَيْرُ الْفَاصِلِينَ ۝٥٧
📖 ಅನುವಾದ ಆಯತ್ 57
ಹೇಳಿರಿ: ಖಂಡಿತವಾಗಿಯು ನಾನು ನನ್ನ ಪ್ರಭುವಿನ ಕಡೆಯ ಸ್ಪಷ್ಟ ಆಧಾರದ ಮೇಲಿರುವೆನು. ನೀವದನ್ನು ನಿರಾಕರಿಸುವಿರಿ. ನೀವು ಯಾವುದಕ್ಕಾಗಿ (ಯಾತನೆಗಾಗಿ) ಆತುರಪಡುತ್ತೀರೋ ಅದು ನನ್ನ ಬಳಿಯಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಮಾತ್ರವಿದೆ. ಅವನು ಸತ್ಯವನ್ನು ವಿವರಿಸಿ ಕೊಡುತ್ತಾನೆ. ಮತ್ತು ಅವನು ತೀರ್ಪು ನೀಡವವರಲ್ಲಿ ಅತ್ಯುತ್ತಮನಾಗಿದ್ದಾನೆ.
قُل لَّوْ أَنَّ عِندِي مَا تَسْتَعْجِلُونَ بِهِ لَقُضِيَ الْأَمْرُ بَيْنِي وَبَيْنَكُمْ ۗ وَاللَّهُ أَعْلَمُ بِالظَّالِمِينَ ۝٥٨
📖 ಅನುವಾದ ಆಯತ್ 58
ಹೇಳಿರಿ: ನೀವು ಆತುರಪಡುತ್ತಿರುವ ಆ ಯಾತನೆಯು ನನ್ನ ಬಳಿಯಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ಈಗಾಗಲೇ ತೀರ್ಪು ಆಗಿಬಿಡುತ್ತಿತ್ತು ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
۞ وَعِندَهُ مَفَاتِحُ الْغَيْبِ لَا يَعْلَمُهَا إِلَّا هُوَ ۚ وَيَعْلَمُ مَا فِي الْبَرِّ وَالْبَحْرِ ۚ وَمَا تَسْقُطُ مِن وَرَقَةٍ إِلَّا يَعْلَمُهَا وَلَا حَبَّةٍ فِي ظُلُمَاتِ الْأَرْضِ وَلَا رَطْبٍ وَلَا يَابِسٍ إِلَّا فِي كِتَابٍ مُّبِينٍ ۝٥٩
📖 ಅನುವಾದ ಆಯತ್ 59
ಮತ್ತು ಅಗೋಚರದ ಕೀಲಿ ಕೈಗಳು ಅಲ್ಲಾಹನ ಬಳಿ ಮಾತ್ರವಿದೆ. ಅಲ್ಲಾಹನ ಹೊರತು ಇನ್ನಾರೂ ಅವುಗಳನ್ನು ಅರಿಯಲಾರರು. ನೆಲ, ಜಲದಲ್ಲಿರುವ ಸಕಲ ವಸ್ತುಗಳನ್ನು ಅವನು ಅರಿಯುತ್ತಾನೆ. ಅವನು ಅರಿಯದೆ ಒಂದು ಎಲೆಯು ಉದುರದು ಮತ್ತು ಭೂಮಿಯ ಅಂಧಕಾರಗಳಲ್ಲಿ ಹುದುಗಿರುವ ಒಂದು ಧಾನ್ಯವಾಗಿರಿಲಿ, ಹಸಿಯೋ ಒಣವೋ ಆಗಿರುವ ವಸ್ತುವಾಗಿರಲಿ ಅವನ ಬಳಿ ಇರುವ ಸ್ಪಷ್ಟವಾದ ಒಂದು ಗ್ರಂಥದಲ್ಲಿ ಉಲ್ಲೇಖವಿದೆ.
وَهُوَ الَّذِي يَتَوَفَّاكُم بِاللَّيْلِ وَيَعْلَمُ مَا جَرَحْتُم بِالنَّهَارِ ثُمَّ يَبْعَثُكُمْ فِيهِ لِيُقْضَىٰ أَجَلٌ مُّسَمًّى ۖ ثُمَّ إِلَيْهِ مَرْجِعُكُمْ ثُمَّ يُنَبِّئُكُم بِمَا كُنتُمْ تَعْمَلُونَ ۝٦٠
📖 ಅನುವಾದ ಆಯತ್ 60
ಮತ್ತು ಅವನೇ ರಾತ್ರಿಯಲ್ಲಿ ನಿಮ್ಮ ಆತ್ಮಗಳನ್ನು ವಶಪಡಿಸಿಕೊಳ್ಳುತ್ತಾನೆ. ಮತ್ತು ಹಗಲಿನಲ್ಲಿ ನೀವು ಮಾಡಿದ್ದನ್ನೆಲ್ಲ ಅವನು ಅರಿಯುತ್ತಾನೆ. ನಂತರ ಅವನು ನೀವು (ಆಯಸ್ಸಿನ) ನಿಶ್ಚಿತಾವಧಿ ಪೂರ್ತಿಗೊಳಿಸಲೆಂದು ನಿಮ್ಮನ್ನು ಮರುದಿನ ಹಗಲಿನಲ್ಲಿ ಎಚ್ಚರಗೊಳಿಸುತ್ತಾನೆ. ನಂತರ ಅವನೆಡೆಗೇ ನಿಮ್ಮ ಮರಳುವಿಕೆಯಿದೆ. ಅನಂತರ ಅವನು ನೀವು ಮಾಡುತ್ತಿದ್ದುದೆಲ್ಲವನ್ನು ನಿಮಗೆ ತಿಳಿಸಿ ಕೊಡುವನು.
وَهُوَ الْقَاهِرُ فَوْقَ عِبَادِهِ ۖ وَيُرْسِلُ عَلَيْكُمْ حَفَظَةً حَتَّىٰ إِذَا جَاءَ أَحَدَكُمُ الْمَوْتُ تَوَفَّتْهُ رُسُلُنَا وَهُمْ لَا يُفَرِّطُونَ ۝٦١
📖 ಅನುವಾದ ಆಯತ್ 61
ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿದ್ದಾನೆ. ನಿಮ್ಮ ಮೇಲೆ ಅವನು ದೂತರನ್ನು ಕಾವಲುಗಾರರನ್ನಾಗಿ ಕಳುಹಿಸುತ್ತಾನೆ. ನಿಮ್ಮೊಲ್ಲಬ್ಬನಿಗೆ ಮರಣಾಸನ್ನವಾದಾಗ ನಮ್ಮಿಂದ ನಿಯೋಗಿಸಲಾದ ದೂತರು ಅವನ ಅತ್ಮವನ್ನು ವಶಪಡಿಸಿಕೊಳ್ಳುವರು ಮತ್ತು ಅವರು ಸ್ವಲ್ಪವೂ ಕರ್ತವ್ಯಲೋಪ ಮಾಡಲಾರರು.
ثُمَّ رُدُّوا إِلَى اللَّهِ مَوْلَاهُمُ الْحَقِّ ۚ أَلَا لَهُ الْحُكْمُ وَهُوَ أَسْرَعُ الْحَاسِبِينَ ۝٦٢
📖 ಅನುವಾದ ಆಯತ್ 62
ನಂತರ ಅವರೆಲ್ಲರು ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಕೇಳಿರಿ: ಆಜ್ಞಾಧಿಕಾರವು ಅಲ್ಲಾಹನದ್ದಾಗಿದೆ ಮತ್ತು ಅವನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.
قُلْ مَن يُنَجِّيكُم مِّن ظُلُمَاتِ الْبَرِّ وَالْبَحْرِ تَدْعُونَهُ تَضَرُّعًا وَخُفْيَةً لَّئِنْ أَنجَانَا مِنْ هَٰذِهِ لَنَكُونَنَّ مِنَ الشَّاكِرِينَ ۝٦٣
📖 ಅನುವಾದ ಆಯತ್ 63
ಹೇಳಿರಿ: ನಿಮ್ಮನ್ನು ನೆಲ, ಜಲಗಳ ಅಂಧÀಕಾರಗಳಿAದ ರಕ್ಷಿಸುವವನು ಯಾರು? 'ನೀನು ನಮ್ಮನ್ನು (ಈ ಕಷ್ಟಕಾಲದಲ್ಲಿ) ರಕ್ಷಿಸಿದರೆ ಖಂಡಿತ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರುವೆವು' ಎಂದು ದೈನ್ಯತೆಯಿಂದ, ರಹಸ್ಯವಾಗಿ ಅವನನ್ನು ನೀವು ಕರೆದು ಬೇಡುತ್ತೀರಿ.
قُلِ اللَّهُ يُنَجِّيكُم مِّنْهَا وَمِن كُلِّ كَرْبٍ ثُمَّ أَنتُمْ تُشْرِكُونَ ۝٦٤
📖 ಅನುವಾದ ಆಯತ್ 64
ಹೇಳಿರಿ: ಅಲ್ಲಾಹನೇ ನಿಮ್ಮನ್ನು ಅವುಗಳಿಂದ ಮತ್ತು ಇತರೆಲ್ಲಾ ವಿಪತ್ತುಗಳಿಂದ ರಕ್ಷಿಸುತ್ತಾನೆ. ಆದರೂ ನೀವು ಸಹಭಾಗಿಗಳನ್ನು ಕಲ್ಪಿಸುತ್ತೀರಿ.
قُلْ هُوَ الْقَادِرُ عَلَىٰ أَن يَبْعَثَ عَلَيْكُمْ عَذَابًا مِّن فَوْقِكُمْ أَوْ مِن تَحْتِ أَرْجُلِكُمْ أَوْ يَلْبِسَكُمْ شِيَعًا وَيُذِيقَ بَعْضَكُم بَأْسَ بَعْضٍ ۗ انظُرْ كَيْفَ نُصَرِّفُ الْآيَاتِ لَعَلَّهُمْ يَفْقَهُونَ ۝٦٥
📖 ಅನುವಾದ ಆಯತ್ 65
ಹೇಳಿರಿ: ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಪಾದಗಳ ತಳಭಾಗದಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಲು ಅಥವಾ ನಿಮ್ಮನ್ನು ಹಲವು ಗುಂಪುಗಳನ್ನಾಗಿ ಮಾಡಿ ಮತ್ತು ನಿಮ್ಮಲ್ಲಿ ಕೆಲವರ ದೌರ್ಜನ್ಯವನ್ನು ಇನ್ನೂ ಕೆಲವರು ಅನುಭವಿಸುವಂತೆ ಮಾಡಲೂ ಅವನು ಸಾಮರ್ಥ್ಯವುಳ್ಳವನಾಗಿದ್ದಾನೆ. ನಾವು ದೃಷ್ಟಾಂತಗಳನ್ನು ವಿವಿಧ ರೂಪಗಳಲ್ಲಿ ಹೇಗೆ ವಿವರಿಸಿ ಕೊಡುತ್ತಿದ್ದೇವೆಂಬುದನ್ನು ನೋಡಿರಿ. ಪ್ರಾಯಶಃ ಅವರು ಗ್ರಹಿಸಿಕೊಳ್ಳಬಹುದು.
وَكَذَّبَ بِهِ قَوْمُكَ وَهُوَ الْحَقُّ ۚ قُل لَّسْتُ عَلَيْكُم بِوَكِيلٍ ۝٦٦
📖 ಅನುವಾದ ಆಯತ್ 66
ಮತ್ತು ಪೈಗಂಬರರೇ ಇದು (ಕುರ್‌ಆನ್) ಸತ್ಯವಾಗಿದ್ದರೂ ನಿಮ್ಮ ಸಮುದಾಯವು ಅದನ್ನು ಸುಳ್ಳಾಗಿಸುತ್ತಿದೆ. ಹೇಳಿರಿ: ನಾನು ನಿಮ್ಮ ಜವಾಬ್ದಾರಿ ಹೊತ್ತವನಲ್ಲ.
لِّكُلِّ نَبَإٍ مُّسْتَقَرٌّ ۚ وَسَوْفَ تَعْلَمُونَ ۝٦٧
📖 ಅನುವಾದ ಆಯತ್ 67
ಪ್ರತಿಯೊಂದು ಬರುವ ಘಟನೆಗೆ ಒಂದು ನಿಶ್ಚಿತ ಸಮಯವಿದೆ. ಸದ್ಯದಲ್ಲೇ ನೀವು ಮನಗಾಣುವಿರಿ.
وَإِذَا رَأَيْتَ الَّذِينَ يَخُوضُونَ فِي آيَاتِنَا فَأَعْرِضْ عَنْهُمْ حَتَّىٰ يَخُوضُوا فِي حَدِيثٍ غَيْرِهِ ۚ وَإِمَّا يُنسِيَنَّكَ الشَّيْطَانُ فَلَا تَقْعُدْ بَعْدَ الذِّكْرَىٰ مَعَ الْقَوْمِ الظَّالِمِينَ ۝٦٨
📖 ಅನುವಾದ ಆಯತ್ 68
ಮತ್ತು ನಮ್ಮ ದೃಷ್ಟಾಂತಗಳನ್ನು ಅಪಹಾಸ್ಯ ಮಾಡುವವರನ್ನು ನೀವು ಕಂಡರೆ ಅವರು ಬೇರಾವುದಾದರೂ ವಿಚಾರದಲ್ಲಿ ತೊಡಗುವ ತನಕ ಅವರಿಂದ ದೂರವಿರಿ. ಒಂದುವೇಳೆ ಶೈತಾನನು ತಮ್ಮನ್ನು ಮರೆಯುವಂತೆ ಮಾಡಿದರೆ ಜ್ಞಾಪಕವಾದ ಬಳಿಕ ಅಕ್ರಮಿ ಜನರೊಂದಿಗೆ ಕುಳಿತುಕೊಳ್ಳಬೇಡಿರಿ.
وَمَا عَلَى الَّذِينَ يَتَّقُونَ مِنْ حِسَابِهِم مِّن شَيْءٍ وَلَٰكِن ذِكْرَىٰ لَعَلَّهُمْ يَتَّقُونَ ۝٦٩
📖 ಅನುವಾದ ಆಯತ್ 69
ಭಯಭಕ್ತಿ ಪಾಲಿಸುವವರಿಗೆ ಅವರ (ಅಕ್ರಮಿಗಳ) ವಿಚಾರಣೆಯ ಹೊಣೆಯಿಲ್ಲ. ಆದರೆ ಅವರ ಮೇಲೆ ಸದುಪದೇಶದ ಹೊಣೆಯಿರುತ್ತದೆ. ಪ್ರಾಯಶಃ ಅವರು ಭಯಭಕ್ತಿಯುಳ್ಳವರಾಗಬಹುದು.
وَذَرِ الَّذِينَ اتَّخَذُوا دِينَهُمْ لَعِبًا وَلَهْوًا وَغَرَّتْهُمُ الْحَيَاةُ الدُّنْيَا ۚ وَذَكِّرْ بِهِ أَن تُبْسَلَ نَفْسٌ بِمَا كَسَبَتْ لَيْسَ لَهَا مِن دُونِ اللَّهِ وَلِيٌّ وَلَا شَفِيعٌ وَإِن تَعْدِلْ كُلَّ عَدْلٍ لَّا يُؤْخَذْ مِنْهَا ۗ أُولَٰئِكَ الَّذِينَ أُبْسِلُوا بِمَا كَسَبُوا ۖ لَهُمْ شَرَابٌ مِّنْ حَمِيمٍ وَعَذَابٌ أَلِيمٌ بِمَا كَانُوا يَكْفُرُونَ ۝٧٠
📖 ಅನುವಾದ ಆಯತ್ 70
ಮತ್ತು ತಮ್ಮ ಧರ್ಮವನ್ನು ಆಟ ಮತ್ತು ವಿನೋದವನ್ನಾಗಿ ಮಾಡಿರುವವರನ್ನು ಹಾಗೂ ಐಹಿಕ ಜೀವನಕ್ಕೆ ಮೋಸ ಹೋದವರನ್ನು ನೀವು ಬಿಟ್ಟುಬಿಡಿರಿ. ಯಾವೊಬ್ಬ ವ್ಯಕ್ತಿಯು ತಾನು ಮಾಡಿ ಬಿಟ್ಟಿರುವುದರ ಫಲವಾಗಿ ನಾಶ ಕೋಪಕ್ಕೆ ತಳ್ಳಲ್ಪಡದಿರಲೆಂದು ನೀವು ಈ ಕುರ್‌ಆನಿನ ಮೂಲಕ ಸದುಪದೇಶ ಮಾಡುತ್ತಿರಿ. ಆಗ ಅವನಿಗೆ ಅಲ್ಲಾಹನ ಹೊರತು ಯಾವೊಬ್ಬ ಸಹಾಯಕನಾಗಲೀ, ಶಿಫಾರಸ್ಸುಗಾರನಾಗಲೀ ಇರಲಾರನು ಮತ್ತು ಅಂದು ಅವನು ಸಕಲ ವಿಧದ ಪ್ರಾಯಶ್ಚಿತ್ತವನ್ನು ನೀಡಿದರೂ ಅವನಿಂದ ಅದನ್ನು ಸ್ವೀಕರಿಸಲಾಗದು. ಸ್ವತಃ ತಾವು ಮಾಡಿಟ್ಟಿರುವುದರ ಫಲವಾಗಿ ನಾಶಕೋಪಕ್ಕೆ ತಳ್ಳಲ್ಪಡುವವರು ಇವರೇ ಆಗಿದ್ದಾರೆ. ಅವರಿಗೆ ನರಕದಲ್ಲಿ ಕುಡಿಯಲು ಕುದಿಯುವ ನೀರು ಇರುವುದು ಮತ್ತು ವೇದನಾಜನಕ ಶಿಕ್ಷೆಯಿರುವುದು. ಇದು ಅವರ ಸತ್ಯನಿಷೇಧದ ನಿಮಿತ್ತವಾಗಿದೆ.
قُلْ أَنَدْعُو مِن دُونِ اللَّهِ مَا لَا يَنفَعُنَا وَلَا يَضُرُّنَا وَنُرَدُّ عَلَىٰ أَعْقَابِنَا بَعْدَ إِذْ هَدَانَا اللَّهُ كَالَّذِي اسْتَهْوَتْهُ الشَّيَاطِينُ فِي الْأَرْضِ حَيْرَانَ لَهُ أَصْحَابٌ يَدْعُونَهُ إِلَى الْهُدَى ائْتِنَا ۗ قُلْ إِنَّ هُدَى اللَّهِ هُوَ الْهُدَىٰ ۖ وَأُمِرْنَا لِنُسْلِمَ لِرَبِّ الْعَالَمِينَ ۝٧١
📖 ಅನುವಾದ ಆಯತ್ 71
ಹೇಳಿರಿ: ಅಲ್ಲಾಹನ ಹೊರತು ನಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನಾವು ಆರಾಧಿಸಬೇಕೇ? ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ನಂತರ ನಾವು ಹಿಂದಕ್ಕೆ ಮರಳಬೇಕೇ? ಒಬ್ಬ ವ್ಯಕ್ತಿಯು ಮರುಭೂಮಿಯಲ್ಲಿ ಶೈತಾನನಿಂದ ದಾರಿ ತಪ್ಪಿಸಲ್ಪಟ್ಟು ಅವನನ್ನು 'ನಮ್ಮ ಬಳಿಗೆ ಬಾ' ಎಂದು ಅವನ ಗೆಳೆಯರು ಕರೆಯುತ್ತಿದ್ದರೂ ನೇರದಾರಿಗೆ ಬರದೆ ದಿಗ್ಭಾçಂತನಾಗಿ ಅಲೆದಾಡುವಂತೆ ನಾವಾಗಬೇಕೇ?. ಹೇಳಿರಿ: ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ. ಮತ್ತು ನಾವು ಜಗದೊಡೆಯನಿಗೆ ಸಂಪೂರ್ಣ ವಿಧೇಯರಾಗಬೇಕೆಂದು ನಮ್ಮೊಂದಿಗೆ ಆಜ್ಞಾಪಿಸಲಾಗಿದೆ.
وَأَنْ أَقِيمُوا الصَّلَاةَ وَاتَّقُوهُ ۚ وَهُوَ الَّذِي إِلَيْهِ تُحْشَرُونَ ۝٧٢
📖 ಅನುವಾದ ಆಯತ್ 72
ಹಾಗೂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಅವನನ್ನು ಭಯಪಡಿರಿ. (ಎಂದು ಆಜ್ಞಾಪಿಸಲಾಗಿದೆ) ನಿಮ್ಮೆಲ್ಲರನ್ನೂ ಅವನೆಡೆಗೇ (ಅಲ್ಲಾಹನೆಡೆಗೆ) ಒಟ್ಟುಗೂಡಿಸಲಾಗುವುದು.
وَهُوَ الَّذِي خَلَقَ السَّمَاوَاتِ وَالْأَرْضَ بِالْحَقِّ ۖ وَيَوْمَ يَقُولُ كُن فَيَكُونُ ۚ قَوْلُهُ الْحَقُّ ۚ وَلَهُ الْمُلْكُ يَوْمَ يُنفَخُ فِي الصُّورِ ۚ عَالِمُ الْغَيْبِ وَالشَّهَادَةِ ۚ وَهُوَ الْحَكِيمُ الْخَبِيرُ ۝٧٣
📖 ಅನುವಾದ ಆಯತ್ 73
ಮತ್ತು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯವಾಗಿ ಸೃಷ್ಟಿಸಿದವನು ಅವನೇ ಹಾಗೂ ಅವನು ಉಂಟಾಗು ಎಂದು ಹೇಳುವ ದಿನ ಅದು (ಪ್ರಳಯ) ಉಂಟಾಗಲಿದೆ. ಅವನ ಮಾತು ಪರಮ ಸತ್ಯ. ಕಹಳೆಯನ್ನು ಊದಲ್ಪಡುವ ದಿನ ಅಧಿಪತ್ಯವು ಅವನಿಗೆ ಮಾತ್ರವಿರುವುದು. ಗೋಚರ, ಅಗೋಚರಗಳ ಜ್ಞಾನಿಯವನು. ಮತ್ತು ಅವನು ಯುಕ್ತಿವಂತನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ.
۞ وَإِذْ قَالَ إِبْرَاهِيمُ لِأَبِيهِ آزَرَ أَتَتَّخِذُ أَصْنَامًا آلِهَةً ۖ إِنِّي أَرَاكَ وَقَوْمَكَ فِي ضَلَالٍ مُّبِينٍ ۝٧٤
📖 ಅನುವಾದ ಆಯತ್ 74
ಮತ್ತು ಇಬ್ರಾಹೀಮ್ ತಮ್ಮ ತಂದೆ ಅಝರ್‌ನೊಂದಿಗೆ ನೀವು ವಿಗ್ರಹಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಾ? ನಿಸ್ಸಂದೇಹವಾಗಿಯು ನಾನು ನಿಮ್ಮನ್ನೂ, ನಿಮ್ಮ ಸಮುದಾಯವನ್ನೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವುದಾಗಿ ಕಾಣುತ್ತಿದ್ದೇನೆಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
وَكَذَٰلِكَ نُرِي إِبْرَاهِيمَ مَلَكُوتَ السَّمَاوَاتِ وَالْأَرْضِ وَلِيَكُونَ مِنَ الْمُوقِنِينَ ۝٧٥
📖 ಅನುವಾದ ಆಯತ್ 75
ಹೀಗೆ ಇಬ್ರಾಹೀಮರಿಗೆ ದೃಢವಿಶ್ವಾಸವಾಗಲೆಂದು ನಾವು ಆಕಾಶಗಳ ಮತ್ತು ಭೂಮಿಯ ಅಧಿಪತ್ಯವನ್ನು ತೋರಿಸಿಕೊಟ್ಟೆವು.
فَلَمَّا جَنَّ عَلَيْهِ اللَّيْلُ رَأَىٰ كَوْكَبًا ۖ قَالَ هَٰذَا رَبِّي ۖ فَلَمَّا أَفَلَ قَالَ لَا أُحِبُّ الْآفِلِينَ ۝٧٦
📖 ಅನುವಾದ ಆಯತ್ 76
ತರುವಾಯ ರಾತ್ರಿಯ ಅಂಧಕಾರವು ಅವರನ್ನು ಆವರಿಸಿದಾಗ ಅವರು ಒಂದು ನಕ್ಷತ್ರವನ್ನು ಕಂಡು ( ವಾಸ್ತವಿಕತೆಯನ್ನು ತಿಳಿಸಲು) ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ ಅಸ್ತಮಿಸುವವರನ್ನು ನಾನು ಪ್ರೀತಿಸುವುದಿಲ್ಲ ಎಂದರು.
فَلَمَّا رَأَى الْقَمَرَ بَازِغًا قَالَ هَٰذَا رَبِّي ۖ فَلَمَّا أَفَلَ قَالَ لَئِن لَّمْ يَهْدِنِي رَبِّي لَأَكُونَنَّ مِنَ الْقَوْمِ الضَّالِّينَ ۝٧٧
📖 ಅನುವಾದ ಆಯತ್ 77
ಅನಂತರ ಹೊಳೆಯುತ್ತಿರುವ ಚಂದ್ರನನ್ನು ಕಂಡಾಗ ಹೇಳಿದರು: ಇದು ನನ್ನ ಪ್ರಭು, ಆದರೆ ಅದು ಅಸ್ತಮಿಸಿದಾಗ (ತಮ್ಮ ಜನರಿಗೆ) ನನ್ನ ಪ್ರಭು ನನಗೆ ಸನ್ಮಾರ್ಗವನ್ನು ತೋರಿಸಿ ಕೊಡದಿದ್ದರೆ ಖಂಡಿತವಾಗಿಯು ನಾನು ಪಥಭ್ರಷ್ಟ ಜನರಲ್ಲಿ ಸೇರಿಬಿಡುವೆನು ಎಂದರು.
فَلَمَّا رَأَى الشَّمْسَ بَازِغَةً قَالَ هَٰذَا رَبِّي هَٰذَا أَكْبَرُ ۖ فَلَمَّا أَفَلَتْ قَالَ يَا قَوْمِ إِنِّي بَرِيءٌ مِّمَّا تُشْرِكُونَ ۝٧٨
📖 ಅನುವಾದ ಆಯತ್ 78
ನಂತರ ಹೊಳೆಯುತ್ತಿರುವ ಸೂರ್ಯನನ್ನು ಕಂಡಾಗ ಅವರು (ತಮ್ಮ ಜನಾಂಗದವರಿಗೆ) ಹೇಳಿದರು: ಇದು ನನ್ನ ಪ್ರಭು, ಇದು ಅತ್ಯಂತ ದೊಡ್ಡದಿದೆ, ಅನಂತರ ಅದು ಕೂಡ ಅಸ್ತಮಿಸಿದಾಗ ನನ್ನ ಸಮುದಾಯವೆ, ನಿಸ್ಸಂದೇಹವಾಗಿಯೂ ನೀವು ಮಾಡುತ್ತಿರುವ ಬಹುದೇವಾರಾಧನೆಯಿಂದ ನಾನು ಸಂಬAಧ ಮುಕ್ತನಾಗಿದ್ದೇನೆಂದು ಹೇಳಿದರು.
إِنِّي وَجَّهْتُ وَجْهِيَ لِلَّذِي فَطَرَ السَّمَاوَاتِ وَالْأَرْضَ حَنِيفًا ۖ وَمَا أَنَا مِنَ الْمُشْرِكِينَ ۝٧٩
📖 ಅನುವಾದ ಆಯತ್ 79
ನಾನು ಮಿಥ್ಯವನ್ನು ತೊರೆದು ಸತ್ಯದಲ್ಲಿ ನೆಲೆ ನಿಂತು ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿರುವವನ ಕಡೆಗೆ ನನ್ನ ಮುಖವನ್ನು ತಿರುಗಿಸಿದ್ದೇನೆ ಮತ್ತು ನಾನು ಬಹುದೇವ ವಿಶ್ವಾಸಿಗಳಲ್ಲಿ ಸೇರಿದವನಲ್ಲ.
وَحَاجَّهُ قَوْمُهُ ۚ قَالَ أَتُحَاجُّونِّي فِي اللَّهِ وَقَدْ هَدَانِ ۚ وَلَا أَخَافُ مَا تُشْرِكُونَ بِهِ إِلَّا أَن يَشَاءَ رَبِّي شَيْئًا ۗ وَسِعَ رَبِّي كُلَّ شَيْءٍ عِلْمًا ۗ أَفَلَا تَتَذَكَّرُونَ ۝٨٠
📖 ಅನುವಾದ ಆಯತ್ 80
ಅವರ ಜನತೆಯು ಅವರೊಂದಿಗೆ ತರ್ಕಿಸತೊಡಗಿತು. ಅವರು ಹೇಳಿದರು: ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತಿರುವಿರಾ? ವಸ್ತುತಃ ಅವನು ನನಗೆ ಸನ್ಮಾರ್ಗವನ್ನು ತೋರಿಸಿ ಕೊಟ್ಟಿದ್ದಾನೆ ಮತ್ತು ನೀವು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಭಯಪಡುವುದಿಲ್ಲ. ಆದರೆ ನನ್ನ ಪ್ರಭು ಏನನ್ನಾದರೂ (ಹಾನಿಯನ್ನು) ಇಚ್ಛಿಸಿದರೆ ಹೊರತು. ನನ್ನ ಪ್ರಭುವು ತನ್ನ ಜ್ಞಾನದಿಂದ ಎಲ್ಲಾ ವಸ್ತುಗಳನ್ನು ಆವರಿಸಿದ್ದಾನೆ. ಹಾಗಿದ್ದೂ ನೀವು ಚಿಂತಿಸುವುದಿಲ್ಲವೇ?.
وَكَيْفَ أَخَافُ مَا أَشْرَكْتُمْ وَلَا تَخَافُونَ أَنَّكُمْ أَشْرَكْتُم بِاللَّهِ مَا لَمْ يُنَزِّلْ بِهِ عَلَيْكُمْ سُلْطَانًا ۚ فَأَيُّ الْفَرِيقَيْنِ أَحَقُّ بِالْأَمْنِ ۖ إِن كُنتُمْ تَعْلَمُونَ ۝٨١
📖 ಅನುವಾದ ಆಯತ್ 81
ಮತ್ತು ನೀವು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವ ವಸ್ತುಗಳನ್ನು ನಾನು ಹೇಗೆ ಭಯಪಡಲಿ ? ವಸ್ತುತಃ ನೀವು ಅಲ್ಲಾಹನು ನಿಮ್ಮ ಮೇಲೆ ಯಾವುದೇ ಪುರಾವೆಯನ್ನು ಇಳಿಸದ ವಸ್ತುಗಳನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದರ ಬಗ್ಗೆ ಭಯಪಡುವುದಿಲ್ಲ. ಹಾಗಾದರೆ ಉಭಯ ಪಕ್ಷಗಳಲ್ಲಿ ಸುರಕ್ಷತೆಗೆ ಹೆಚ್ಚು ಅರ್ಹರು ಯಾರು ? ನೀವು ಅರಿಯುವವರಾಗಿದ್ದರೆ!
الَّذِينَ آمَنُوا وَلَمْ يَلْبِسُوا إِيمَانَهُم بِظُلْمٍ أُولَٰئِكَ لَهُمُ الْأَمْنُ وَهُم مُّهْتَدُونَ ۝٨٢
📖 ಅನುವಾದ ಆಯತ್ 82
ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.
وَتِلْكَ حُجَّتُنَا آتَيْنَاهَا إِبْرَاهِيمَ عَلَىٰ قَوْمِهِ ۚ نَرْفَعُ دَرَجَاتٍ مَّن نَّشَاءُ ۗ إِنَّ رَبَّكَ حَكِيمٌ عَلِيمٌ ۝٨٣
📖 ಅನುವಾದ ಆಯತ್ 83
ಇದು ನಾವು ಇಬ್ರಾಹೀಮರಿಗೆ ಅವರ ಜನತೆಗೆ ವಿರುದ್ಧವಾಗಿ ನೀಡಿದ (ಏಕದೇವತ್ವದ) ನಮ್ಮ ಪುರಾವೆಯಾಗಿದೆ. ನಾವು ಇಚ್ಛಿಸುವವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಯುಕ್ತಿವಂತನೂ, ಸರ್ವಜ್ಞಾನಿಯೂ ಆಗಿದ್ದಾನೆ.
وَوَهَبْنَا لَهُ إِسْحَاقَ وَيَعْقُوبَ ۚ كُلًّا هَدَيْنَا ۚ وَنُوحًا هَدَيْنَا مِن قَبْلُ ۖ وَمِن ذُرِّيَّتِهِ دَاوُودَ وَسُلَيْمَانَ وَأَيُّوبَ وَيُوسُفَ وَمُوسَىٰ وَهَارُونَ ۚ وَكَذَٰلِكَ نَجْزِي الْمُحْسِنِينَ ۝٨٤
📖 ಅನುವಾದ ಆಯತ್ 84
ಮತ್ತು ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಾಕೂಬ್(ಪುತ್ರ)ರನ್ನು ನೀಡಿದೆವು. ಪ್ರತಿಯೊಬ್ಬರನ್ನು ಸನ್ಮಾರ್ಗಕ್ಕೆ ಸೇರಿಸಿದೆವು ಮತ್ತು ಅದಕ್ಕೆ ಮೊದಲು ನೂಹ್‌ರನ್ನು ನಾವು ಸನ್ಮಾರ್ಗಕ್ಕೆ ಸೇರಿಸಿದ್ದೆವು ಮತ್ತು ಅವರ ಸಂತತಿಗಳ ಪೈಕಿ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸೂಫ್, ಮೂಸಾ ಮತ್ತು ಹಾರೂನ್‌ರನ್ನು (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಹೀಗೆ ಸತ್ಕರ್ಮಿಗಳಿಗೆ ನಾವು ಪ್ರತಿಫಲವನ್ನು ನೀಡುತ್ತೇವೆ.
وَزَكَرِيَّا وَيَحْيَىٰ وَعِيسَىٰ وَإِلْيَاسَ ۖ كُلٌّ مِّنَ الصَّالِحِينَ ۝٨٥
📖 ಅನುವಾದ ಆಯತ್ 85
ಮತ್ತು ಝಕರಿಯ್ಯ, ಯಹ್ಯಾ, ಈಸಾ, ಇಲ್ಯಾಸ್‌ರನ್ನೂ (ಸನ್ಮಾರ್ಗಕ್ಕೆ ಸೇರಿಸದೆವು) ಅವರೆಲ್ಲರೂ ಸಜ್ಜನರಲ್ಲಾಗಿದ್ದರು.
وَإِسْمَاعِيلَ وَالْيَسَعَ وَيُونُسَ وَلُوطًا ۚ وَكُلًّا فَضَّلْنَا عَلَى الْعَالَمِينَ ۝٨٦
📖 ಅನುವಾದ ಆಯತ್ 86
ಮತ್ತು ಇಸ್ಮಾಯೀಲ್, ಇಸ್‌ಹಾಕ್, ಯೂನುಸ್, ಲೂತ್‌ರನ್ನೂ ಸಹ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರೆಲ್ಲರಿಗೂ ನಾವು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದೆವು.
وَمِنْ آبَائِهِمْ وَذُرِّيَّاتِهِمْ وَإِخْوَانِهِمْ ۖ وَاجْتَبَيْنَاهُمْ وَهَدَيْنَاهُمْ إِلَىٰ صِرَاطٍ مُّسْتَقِيمٍ ۝٨٧
📖 ಅನುವಾದ ಆಯತ್ 87
ಮತ್ತು ಅವರ ಕೆಲವು ಪೂರ್ವಿಕರನ್ನೂ, ಕೆಲವು ಸಂತತಿಗಳನ್ನೂ ಹಾಗೂ ಕೆಲವು ಸಹೋದರರನ್ನೂ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರನ್ನು ನಾವು ಆರಿಸಿಕೊಂಡೆವು ಮತ್ತು ಸತ್ಯಮಾರ್ಗದೆಡೆಗೆ ಮಾರ್ಗದರ್ಶನ ನೀಡಿದೆವು.
ذَٰلِكَ هُدَى اللَّهِ يَهْدِي بِهِ مَن يَشَاءُ مِنْ عِبَادِهِ ۚ وَلَوْ أَشْرَكُوا لَحَبِطَ عَنْهُم مَّا كَانُوا يَعْمَلُونَ ۝٨٨
📖 ಅನುವಾದ ಆಯತ್ 88
ಇದು ಅಲ್ಲಾಹನ ಮಾರ್ಗದರ್ಶನವಾಗಿದೆ. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಸತ್ಯ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. ಇನ್ನು ಅವರು (ಆ ಪೈಗಂಬರರು) ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸಿರುತ್ತಿದ್ದರೆ ಅವರ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.
أُولَٰئِكَ الَّذِينَ آتَيْنَاهُمُ الْكِتَابَ وَالْحُكْمَ وَالنُّبُوَّةَ ۚ فَإِن يَكْفُرْ بِهَا هَٰؤُلَاءِ فَقَدْ وَكَّلْنَا بِهَا قَوْمًا لَّيْسُوا بِهَا بِكَافِرِينَ ۝٨٩
📖 ಅನುವಾದ ಆಯತ್ 89
ನಾವು (ಅಲ್ಲಾಹ್) ಗ್ರಂಥ, ಸುಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದು ಇವರೇ ಆಗಿದ್ದಾರೆ. ಇನ್ನು ಇವರು (ಬಹುದೇವಾರಾಧಕರು) ಪ್ರವಾದಿತ್ವವನ್ನು ನಿಷೇಧಿಸಿದರೆ ನಾವು ಅದಕ್ಕಾಗಿ ಅವುಗಳನ್ನು ನಿಷೇಧಿಸದಂತಹ ಒಂದು ಜನತೆಯನ್ನು ನಿಶ್ಚಯಿಸಿದ್ದೇವೆ.
أُولَٰئِكَ الَّذِينَ هَدَى اللَّهُ ۖ فَبِهُدَاهُمُ اقْتَدِهْ ۗ قُل لَّا أَسْأَلُكُمْ عَلَيْهِ أَجْرًا ۖ إِنْ هُوَ إِلَّا ذِكْرَىٰ لِلْعَالَمِينَ ۝٩٠
📖 ಅನುವಾದ ಆಯತ್ 90
ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ. ಮತ್ತು ಹೇಳಿರಿ: ಈ ಸಂದೇಶ ತಲುಪಿಸುವುದಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ. ಇದು ಸರ್ವಲೋಕದವರೆಗೆ ಒಂದು ಉಪದೇಶವಾಗಿದೆ.
وَمَا قَدَرُوا اللَّهَ حَقَّ قَدْرِهِ إِذْ قَالُوا مَا أَنزَلَ اللَّهُ عَلَىٰ بَشَرٍ مِّن شَيْءٍ ۗ قُلْ مَنْ أَنزَلَ الْكِتَابَ الَّذِي جَاءَ بِهِ مُوسَىٰ نُورًا وَهُدًى لِّلنَّاسِ ۖ تَجْعَلُونَهُ قَرَاطِيسَ تُبْدُونَهَا وَتُخْفُونَ كَثِيرًا ۖ وَعُلِّمْتُم مَّا لَمْ تَعْلَمُوا أَنتُمْ وَلَا آبَاؤُكُمْ ۖ قُلِ اللَّهُ ۖ ثُمَّ ذَرْهُمْ فِي خَوْضِهِمْ يَلْعَبُونَ ۝٩١
📖 ಅನುವಾದ ಆಯತ್ 91
ಅಲ್ಲಾಹನು ಯಾವೊಬ್ಬ ಮನುಷ್ಯನಿಗೂ ಏನನ್ನು ಅವತೀರ್ಣಗೊಳಿಸಿಲ್ಲ ಎಂದು ಅವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರು ಅಲ್ಲಾಹನ ಮಹತ್ವವನ್ನು ಗ್ರಹಿಸುವಂತೆ ಗ್ರಹಿಸಲಿಲ್ಲ. ಹೇಳಿರಿ: ಹಾಗಾದರೆ ಜನರಿಗೆ ಪ್ರಕಾಶ ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ಅದನ್ನು ನೀವು ವಿಭಿನ್ನ ಹಾಳೆಗಳಲ್ಲಿಟ್ಟು ಬಿಟ್ಟರಿ. ಅವುಗಳಲ್ಲಿ ಕೆಲವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನ ವಿಷಯಗಳನ್ನು ಬಚ್ಚಿಡುತ್ತೀರಿ. ಅದರ ಮೂಲಕ ನೀವಾಗಲೀ, ನಿಮ್ಮ ಪೂರ್ವಿಕರಾಗಲೀ ಅರಿತಿರದಂತಹ ವಿಚಾರಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಡಲಾಗಿದೆ. ಹೇಳಿರಿ: ಅಲ್ಲಾಹನೇ ಅದನ್ನು ಅವತೀರ್ಣಗೊ ಳಿಸಿರುವನು. ನಂತರ ಅವರನ್ನು ಅವರ ವ್ಯರ್ಥಮಾತುಗಳಲ್ಲಿ ಆಟವಾಡುತ್ತಿರಲು ಬಿಟ್ಟು ಬಿಡಿರಿ.
وَهَٰذَا كِتَابٌ أَنزَلْنَاهُ مُبَارَكٌ مُّصَدِّقُ الَّذِي بَيْنَ يَدَيْهِ وَلِتُنذِرَ أُمَّ الْقُرَىٰ وَمَنْ حَوْلَهَا ۚ وَالَّذِينَ يُؤْمِنُونَ بِالْآخِرَةِ يُؤْمِنُونَ بِهِ ۖ وَهُمْ عَلَىٰ صَلَاتِهِمْ يُحَافِظُونَ ۝٩٢
📖 ಅನುವಾದ ಆಯತ್ 92
ಮತ್ತು ಇದು ನಾವು ಅವತೀರ್ಣಗೊಳಿಸಿರುವ ಸಮೃದ್ಧಪೂರ್ಣ (ಮತ್ತೊಂದು) ಗ್ರಂಥವಾಗಿದೆ. ಹಾಗೂ ತನಗಿಂತ ಮುಂಚಿನ ಗ್ರಂಥಗಳನ್ನು ಸತ್ಯವೆಂದು ದೃಢೀಕರಿಸುತ್ತದೆ. ಇದು ನೀವು ಮಕ್ಕಾನಿವಾಸಿಗಳಿಗೆ ಮತ್ತು ಅದರ ಸುತ್ತ ಮುತ್ತಲಿನಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಮತ್ತು ಪರಲೋಕದಲ್ಲಿ ವಿಶ್ವಾಸ ವಿಡುವವರು ಇದರಲ್ಲಿ ವಿಶ್ವಾಸ ಇಡುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
وَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ قَالَ أُوحِيَ إِلَيَّ وَلَمْ يُوحَ إِلَيْهِ شَيْءٌ وَمَن قَالَ سَأُنزِلُ مِثْلَ مَا أَنزَلَ اللَّهُ ۗ وَلَوْ تَرَىٰ إِذِ الظَّالِمُونَ فِي غَمَرَاتِ الْمَوْتِ وَالْمَلَائِكَةُ بَاسِطُو أَيْدِيهِمْ أَخْرِجُوا أَنفُسَكُمُ ۖ الْيَوْمَ تُجْزَوْنَ عَذَابَ الْهُونِ بِمَا كُنتُمْ تَقُولُونَ عَلَى اللَّهِ غَيْرَ الْحَقِّ وَكُنتُمْ عَنْ آيَاتِهِ تَسْتَكْبِرُونَ ۝٩٣
📖 ಅನುವಾದ ಆಯತ್ 93
ಮತ್ತು ಅಲ್ಲಾಹನ ಮೇಲೆ ಸುಳ್ಳು ಹೆಣೆದವನಿಗಿಂತ ಅಥವಾ ಅವನಿಗೆ ಯಾವ ದಿವ್ಯ ಸಂದೇಶÀ ನೀಡದಿದ್ದರೂ ತನಗೆ ದಿವ್ಯಸಂದೇಶ ನೀಡಲ್ಪಟ್ಟಿದೆಂದು ಹೇಳಿದವನಿಗಿಂತ ಮತ್ತು ಅಲ್ಲಾಹನು ಅವತೀರ್ಣಗೊಳಿಸಿದಂತಿರುವುದನ್ನು ತಾನೂ ಅವತೀರ್ಣಗೊಳಿಸುವೆನೆಂದು ಹೇಳಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅಂತಹ ಅಕ್ರಮಿಗಳು ಪ್ರಾಣಸಂಕಟದಲ್ಲಿರುವ ಸಂದರ್ಭದಲ್ಲಿ ಮತ್ತು ಮಲಕ್‌ಗಳು ತಮ್ಮ ಕೈಗಳನ್ನು ಚಾಚಿ “ನೀವು ನಿಮ್ಮ ಪ್ರಾಣಗಳನ್ನು ಹೊರತೆಗೆಯಿರಿ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದುದರ ನಿಮಿತ್ತ ಮತ್ತು ಅಲ್ಲಾಹನ ದೃಷ್ಟಾಂತಗಳೊAದಿಗೆ ಅಹಂಕಾರ ತೋರಿಸುತ್ತಿದ್ದುದರ ನಿಮಿತ್ತ ಇಂದು ನಿಮಗೆ ನಿಂದ್ಯತೆಯ ಯಾತನೆಯನ್ನು ನೀಡಲಾಗುವುದೆಂದು (ಮಲಕ್‌ಗಳು) ಹೇಳುತ್ತಿರುವ ಸಂಧರ್ಭವನ್ನು ನೀವು ಕಂಡಿದ್ದರೆ (ಅದೂ ಭಯಾನಕ ದೃಶ್ಯವಾಗಿತ್ತು)
وَلَقَدْ جِئْتُمُونَا فُرَادَىٰ كَمَا خَلَقْنَاكُمْ أَوَّلَ مَرَّةٍ وَتَرَكْتُم مَّا خَوَّلْنَاكُمْ وَرَاءَ ظُهُورِكُمْ ۖ وَمَا نَرَىٰ مَعَكُمْ شُفَعَاءَكُمُ الَّذِينَ زَعَمْتُمْ أَنَّهُمْ فِيكُمْ شُرَكَاءُ ۚ لَقَد تَّقَطَّعَ بَيْنَكُمْ وَضَلَّ عَنكُم مَّا كُنتُمْ تَزْعُمُونَ ۝٩٤
📖 ಅನುವಾದ ಆಯತ್ 94
(ಅಲ್ಲಾಹನು ಹೇಳುವನು) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿರುವಂತೇ ನೀವು ನಮ್ಮ ಬಳಿಗೆ ಒಬ್ಬಂಟಿಯಾಗಿ ಬಂದಿರುವಿರಿ; ನಿಮಗೆ ನಾವು ನೀಡಿರುವುದನ್ನೆಲ್ಲಾ ನೀವು ನಿಮ್ಮ ಬೆನ್ನ ಹಿಂದೆಯೇ ಬಿಟ್ಟು ಬಂದಿರುವಿರಿ ಮತ್ತು ನೀವು ನಿಮ್ಮ ವಿಚಾರದಲ್ಲಿ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸ್ಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ವಾಸ್ತವದಲ್ಲಿ ನಿಮ್ಮ ನಡುವಿನ ಸಂಬAಧಗಳು ಮುರಿದು ಹೋಗಿವೆ ಮತ್ತು ನೀವು ವಾದಿಸುತ್ತಿದ್ದವುಗಳೆಲ್ಲವೂ ನಿಮ್ಮಿಂದ ಕಣ್ಮರೆಯಾಗಿ ಬಿಟ್ಟಿವೆ.
۞ إِنَّ اللَّهَ فَالِقُ الْحَبِّ وَالنَّوَىٰ ۖ يُخْرِجُ الْحَيَّ مِنَ الْمَيِّتِ وَمُخْرِجُ الْمَيِّتِ مِنَ الْحَيِّ ۚ ذَٰلِكُمُ اللَّهُ ۖ فَأَنَّىٰ تُؤْفَكُونَ ۝٩٥
📖 ಅನುವಾದ ಆಯತ್ 95
ನಿಸ್ಸಂಶಯವಾಗಿಯು ಅಲ್ಲಾಹನೇ ಧಾನ್ಯ ಮತ್ತು ಬೀಜವನ್ನು ಮೊಳಕೆಯೊ ಡೆಸುವವನಾಗಿದ್ದಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ನಿರ್ಜೀವಿಯನ್ನು ಜೀವಿಯಿಂದ ಹೊರತರುವವನಾಗಿದ್ದಾನೆ. ಅವನೇ ಅಲ್ಲಾಹನಾಗಿದ್ದಾನೆ. ಹಾಗಿದ್ದೂ ನೀವು ಎಲ್ಲಿ ಅಲೆದಾಡುತ್ತಿರುವಿರಿ?
فَالِقُ الْإِصْبَاحِ وَجَعَلَ اللَّيْلَ سَكَنًا وَالشَّمْسَ وَالْقَمَرَ حُسْبَانًا ۚ ذَٰلِكَ تَقْدِيرُ الْعَزِيزِ الْعَلِيمِ ۝٩٦
📖 ಅನುವಾದ ಆಯತ್ 96
ಅವನು ಪ್ರಭಾತವನ್ನು ಹೊರತರುವವನಾಗಿದ್ದಾನೆ. ರಾತ್ರಿಯನ್ನು ಅವನು ವಿಶ್ರಾಂತಿಗಾಗಿ ಮಾಡಿದನು ಮತ್ತು ಸೂರ್ಯ, ಚಂದ್ರರನ್ನು ಕಾಲಗಣನೆಗಾಗಿ ನಿಶ್ಚಯಿಸಿರುವನು. ಇದು ಪ್ರತಾಪಶಾಲಿಯು, ಮಹಾಜ್ಞಾನಿಯು ಆದವನ ವ್ಯವಸ್ಥೆಯಾಗಿದೆ.
وَهُوَ الَّذِي جَعَلَ لَكُمُ النُّجُومَ لِتَهْتَدُوا بِهَا فِي ظُلُمَاتِ الْبَرِّ وَالْبَحْرِ ۗ قَدْ فَصَّلْنَا الْآيَاتِ لِقَوْمٍ يَعْلَمُونَ ۝٩٧
📖 ಅನುವಾದ ಆಯತ್ 97
ಅವನೇ ನಿಮಗೆ ನಕ್ಷತ್ರಗಳನ್ನು ನೀವು ಅವುಗಳ ಮೂಲಕ ನೆಲ, ಜಲದ ಅಂಧಕಾರಗಳಲ್ಲಿ, ದಾರಿಯನ್ನು ಕಂಡುಕೊಳ್ಳಲೆAದು ಉಂಟು ಮಾಡಿದನು. ನಿಸ್ಸಂಶಯವಾಗಿಯು ಅರಿವುಳ್ಳಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
وَهُوَ الَّذِي أَنشَأَكُم مِّن نَّفْسٍ وَاحِدَةٍ فَمُسْتَقَرٌّ وَمُسْتَوْدَعٌ ۗ قَدْ فَصَّلْنَا الْآيَاتِ لِقَوْمٍ يَفْقَهُونَ ۝٩٨
📖 ಅನುವಾದ ಆಯತ್ 98
ಮತ್ತು ಅವನು ನಿಮ್ಮನ್ನು ಒಂದೇ ಜೀವÀದಿಂದ ಸೃಷ್ಟಿಸಿದವನಾಗಿದ್ದಾನೆ. ನಂತರ ಒಂದು ವಾಸಸ್ಥಳವು, ಇನ್ನೊಂದು ಒಪ್ಪಿಸಲ್ಪಡದ ಸ್ಥಳವಿದೆ. ನಿಸ್ಸಂಶಯವಾಗಿಯು ಗ್ರಹಿಸುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿ ಕೊಟ್ಟಿದ್ದೇವೆ.
وَهُوَ الَّذِي أَنزَلَ مِنَ السَّمَاءِ مَاءً فَأَخْرَجْنَا بِهِ نَبَاتَ كُلِّ شَيْءٍ فَأَخْرَجْنَا مِنْهُ خَضِرًا نُّخْرِجُ مِنْهُ حَبًّا مُّتَرَاكِبًا وَمِنَ النَّخْلِ مِن طَلْعِهَا قِنْوَانٌ دَانِيَةٌ وَجَنَّاتٍ مِّنْ أَعْنَابٍ وَالزَّيْتُونَ وَالرُّمَّانَ مُشْتَبِهًا وَغَيْرَ مُتَشَابِهٍ ۗ انظُرُوا إِلَىٰ ثَمَرِهِ إِذَا أَثْمَرَ وَيَنْعِهِ ۚ إِنَّ فِي ذَٰلِكُمْ لَآيَاتٍ لِّقَوْمٍ يُؤْمِنُونَ ۝٩٩
📖 ಅನುವಾದ ಆಯತ್ 99
ಅವನೇ (ಅಲ್ಲಾಹನೇ) ಆಕಾಶದಿಂದ ನೀರನ್ನು ಸುರಿಸಿದವನು. ನಂತರ ನಾವು ಆ ನೀರಿನಿಂದ ಸಕಲ ವಿಧದ ವನಸ್ಪತಿ ಮೊಳಕೆಗಳನ್ನು ಹೊರತರುತ್ತೇವೆ. ಆ ಬಳಿಕ ಅದರಿಂದ ಹಸಿರಾದ ಸಸ್ಯಗಳನ್ನು ಹೊರತರುತ್ತೇವೆ. ಮತ್ತು ಅದರಿಂದ ಹುಲುಸಾಗಿ ತುಂಬಿ ತುಳುಕುವ ಧಾನ್ಯಗಳನ್ನು ಹೊರತರುತ್ತೇವೆ, ಮತ್ತು ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗಿ ನಿಲ್ಲುವ ಗೊನೆಗಳು ಹೊರಬರುತ್ತವೆ. ದ್ರಾಕ್ಷೆ ತೋಟಗಳನ್ನು ಝೈತೂನ್ (ಆಲಿವ್) ಅನ್ನು, ದಾಳಿಂಬೆಗಳನ್ನು ಸಾದೃಶ್ಯವಿರುವ ಮತ್ತು ಪರಸ್ಪರ ಸಾದೃಶ್ಯವಿರದಂತವುಗಳನ್ನು ಉಂಟು ಮಾಡುತ್ತೇವೆ. ಅವು ಫಲಭರಿತವಾಗುವಾಗ ಮತ್ತು ಪಕ್ವವಾಗುವಾಗ ಅವುಗಳ ಕಡೆಗೆ ನೋಡಿರಿ. ಅವುಗಳಲ್ಲಿ ಸತ್ಯವಿಶ್ವಾಸಗಳಿಗೆ ದೃಷ್ಟಾಂತಗಳಿವೆ.
وَجَعَلُوا لِلَّهِ شُرَكَاءَ الْجِنَّ وَخَلَقَهُمْ ۖ وَخَرَقُوا لَهُ بَنِينَ وَبَنَاتٍ بِغَيْرِ عِلْمٍ ۚ سُبْحَانَهُ وَتَعَالَىٰ عَمَّا يَصِفُونَ ۝١٠٠
📖 ಅನುವಾದ ಆಯತ್ 100
ಮತ್ತು ಜನರು ಯಕ್ಷಗಳನ್ನು ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸಿ ಕೊಂಡಿದ್ದಾರೆ. ವಸ್ತುತಃ ಅವರನ್ನು ಅಲ್ಲಾಹನೇ ಸೃಷ್ಟಿಸಿದ್ದಾನೆ ಮತ್ತು ಅವರು ಅಲ್ಲಾಹನಿಗೆ ಯಾವುದೇ ಆಧಾರವಿಲ್ಲದೆ ಪುತ್ರರು ಮತ್ತು ಪುತ್ರಿಯರಿದ್ದಾರೆಂದು ಆರೋಪಿಸಿದ್ದಾರೆ ಹಾಗೂ ಅವನು ಅವರು ಹೇಳುತ್ತಿರುವ ಮಾತುಗಳಿಂದ ಅದೆಷ್ಟೋ ಪಾವನನೂ ಉನ್ನತನೂ ಆಗಿದ್ದಾನೆ.
بَدِيعُ السَّمَاوَاتِ وَالْأَرْضِ ۖ أَنَّىٰ يَكُونُ لَهُ وَلَدٌ وَلَمْ تَكُن لَّهُ صَاحِبَةٌ ۖ وَخَلَقَ كُلَّ شَيْءٍ ۖ وَهُوَ بِكُلِّ شَيْءٍ عَلِيمٌ ۝١٠١
📖 ಅನುವಾದ ಆಯತ್ 101
ಅವನು (ಪೂರ್ವ ಮಾದರಿಯಿಲ್ಲದೆ) ಆಕಾಶಗಳ ಮತ್ತು ಭೂಮಿಯ ಕರ್ತನಾಗಿದ್ದಾನೆ. ಅವನಿಗೆ ಸಂಗಾತಿಯೇ ಇಲ್ಲದಿರುವಾಗ ಅವನಿಗೆ ಸಂತಾನವುAಟಾಗುವುದಾದರು ಹೇಗೆ? ಅವನು ಸಕಲ ವಸ್ತುಗಳನ್ನು ಸೃಷ್ಟಿಸಿದ್ದಾನೆ. ಅವನು ಎಲ್ಲಾ ವಿಷಯಗಳ ಕುರಿತು ಅರಿವುಳ್ಳವನಾಗಿದ್ದಾನೆ.
ذَٰلِكُمُ اللَّهُ رَبُّكُمْ ۖ لَا إِلَٰهَ إِلَّا هُوَ ۖ خَالِقُ كُلِّ شَيْءٍ فَاعْبُدُوهُ ۚ وَهُوَ عَلَىٰ كُلِّ شَيْءٍ وَكِيلٌ ۝١٠٢
📖 ಅನುವಾದ ಆಯತ್ 102
ಅವನೇ ನಿಮ್ಮ ಪ್ರಭುವಾದ ಅಲ್ಲಾಹನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವನು ಸಕಲ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಅದ್ದರಿಂದ ಅವನನ್ನೇ ಆರಾಧಿಸಿರಿ. ಅವನು ಸಕಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ.
لَّا تُدْرِكُهُ الْأَبْصَارُ وَهُوَ يُدْرِكُ الْأَبْصَارَ ۖ وَهُوَ اللَّطِيفُ الْخَبِيرُ ۝١٠٣
📖 ಅನುವಾದ ಆಯತ್ 103
ದೃಷ್ಟಿಗಳು ಅವನನ್ನು ಗ್ರಹಿಸಲಾರವು ಮತ್ತು ಅವನು ಸಕಲ ದೃಷ್ಟಿಗಳನ್ನು ಗ್ರಹಿಸಿಕೊಳ್ಳುತ್ತಾನೆ. ಅವನು ಸೂಕ್ಷö್ಮ ದೃಷ್ಟಿಯುಳ್ಳವನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ.
قَدْ جَاءَكُم بَصَائِرُ مِن رَّبِّكُمْ ۖ فَمَنْ أَبْصَرَ فَلِنَفْسِهِ ۖ وَمَنْ عَمِيَ فَعَلَيْهَا ۚ وَمَا أَنَا عَلَيْكُم بِحَفِيظٍ ۝١٠٤
📖 ಅನುವಾದ ಆಯತ್ 104
ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಕಣ್ಣು ತೆರೆಸುವಂತಹ ಪ್ರಕಾಶಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಪ್ರಯೋಜನ ಅವನಿಗೇ ಸಿಗುವುದು ಮತ್ತು ಯಾರು ಕುರುಡನಾಗುತ್ತಾನೋ ಅದರ ನಷ್ಟ ಅವನಿಗೇ ಅಗುವುದು. ನಾನು ನಿಮ್ಮ ಕಾವಲುಗಾರನಲ್ಲ.
وَكَذَٰلِكَ نُصَرِّفُ الْآيَاتِ وَلِيَقُولُوا دَرَسْتَ وَلِنُبَيِّنَهُ لِقَوْمٍ يَعْلَمُونَ ۝١٠٥
📖 ಅನುವಾದ ಆಯತ್ 105
ಇದೇ ಪ್ರಕಾರ ನಾವು ನಾನಾ ವಿಧದಲ್ಲಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆ. ಇದೇಕೆಂದರೆ ನೀವು ಯಾರಿಂದಲೋ ಕಲಿತು ಬಂದಿರುವಿರೆAದು ಬಹುದೇವಾರಾದಕರು ಹೇಳಲೆಂದು, ಮತ್ತು ಅರಿವು ಹೊಂದಿರುವ ಜನರಿಗೆ ನಾವಿದನ್ನು ವಿವರಿಸಿಕೊಡಲೆಂದಾಗಿದೆ.
اتَّبِعْ مَا أُوحِيَ إِلَيْكَ مِن رَّبِّكَ ۖ لَا إِلَٰهَ إِلَّا هُوَ ۖ وَأَعْرِضْ عَنِ الْمُشْرِكِينَ ۝١٠٦
📖 ಅನುವಾದ ಆಯತ್ 106
ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ದಿವ್ಯ ಸಂದೇಶ ನೀಡಲಾಗಿರುವುದನ್ನು ಅನುಸರಿಸಿರಿ. ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ ಮತ್ತು ಬಹುದೇವಾರಾಧಕರಿಂದ ನೀವು ವಿಮುಖರಾಗಿರಿ.
وَلَوْ شَاءَ اللَّهُ مَا أَشْرَكُوا ۗ وَمَا جَعَلْنَاكَ عَلَيْهِمْ حَفِيظًا ۖ وَمَا أَنتَ عَلَيْهِم بِوَكِيلٍ ۝١٠٧
📖 ಅನುವಾದ ಆಯತ್ 107
ಅಲ್ಲಾಹನು ಬಲವಂತವಾಗಿ ತಡೆಯಲು ಬಯಸಿದ್ದರೆ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸುತ್ತಿರಲಿಲ್ಲ ಮತ್ತು ನಾವು ನಿಮ್ಮನ್ನು ಅವರ ಕಾವಲುಗಾರನನ್ನಾಗಿ ಮಾಡಿಲ್ಲ ಮತ್ತು ನೀವು ಅವರ ಹೊಣೆ ಹೊತ್ತವರೂ ಅಲ್ಲ.
وَلَا تَسُبُّوا الَّذِينَ يَدْعُونَ مِن دُونِ اللَّهِ فَيَسُبُّوا اللَّهَ عَدْوًا بِغَيْرِ عِلْمٍ ۗ كَذَٰلِكَ زَيَّنَّا لِكُلِّ أُمَّةٍ عَمَلَهُمْ ثُمَّ إِلَىٰ رَبِّهِم مَّرْجِعُهُمْ فَيُنَبِّئُهُم بِمَا كَانُوا يَعْمَلُونَ ۝١٠٨
📖 ಅನುವಾದ ಆಯತ್ 108
ಮತ್ತು ಅಲ್ಲಾಹನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ತೆಗಳಬೇಡಿರಿ. ಬಳಿಕ ಅವರು ಅಜ್ಞಾನವಿಲ್ಲದೆ ವೈರತ್ವದಿಂದ ಅಲ್ಲಾಹನನ್ನು ತೆಗಳುವರು. ಇದೇ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಪ್ರವೃತ್ತಿಗಳನ್ನು ಅಕರ್ಷಕಗೊಳಿಸಿದ್ದೇವೆ. ನಂತರ ಅವರ ಮರಳುವಿಕೆಯು ಅವರ ಪ್ರಭುವಿನೆಡೆಗೇ ಆಗಿದೆ. ಆಗ ಅವನು ಅವರು ಮಾಡುತ್ತಿರುವುದರ ಕುರಿತು ಅವರಿಗೆ ತಿಳಿಸಿಕೊಡುವನು.
وَأَقْسَمُوا بِاللَّهِ جَهْدَ أَيْمَانِهِمْ لَئِن جَاءَتْهُمْ آيَةٌ لَّيُؤْمِنُنَّ بِهَا ۚ قُلْ إِنَّمَا الْآيَاتُ عِندَ اللَّهِ ۖ وَمَا يُشْعِرُكُمْ أَنَّهَا إِذَا جَاءَتْ لَا يُؤْمِنُونَ ۝١٠٩
📖 ಅನುವಾದ ಆಯತ್ 109
ಅಂದರೆ “ತಮ್ಮ ಬಳಿಯೇನಾದರೂ ದೃಷ್ಟಾಂತವು ಬಂದರೆ ನಾವು ಅದರಲ್ಲಿ ವಿಶ್ವಾಸವಿಡುವೆವೆಂದು ಅವರು ತಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ಬಲವಾಗಿ ಅಲ್ಲಾಹನ ಆಣೆ ಹಾಕುತ್ತಾರೆ. ದೃಷ್ಟಾಂತಗಳೆಲ್ಲವೂ ಅಲ್ಲಾಹನ ವಶದಲ್ಲಿವೆ. (ಸತ್ಯವಿಶ್ವಾಸಿಗಳೇ) ನಿಮಗೇನು ಗೊತ್ತು? ದೃಷ್ಟಾಂತಗಳು ಬಂದರೂ ಅವರು ವಿಶ್ವಾಸವಿಡಲಾರರು.
وَنُقَلِّبُ أَفْئِدَتَهُمْ وَأَبْصَارَهُمْ كَمَا لَمْ يُؤْمِنُوا بِهِ أَوَّلَ مَرَّةٍ وَنَذَرُهُمْ فِي طُغْيَانِهِمْ يَعْمَهُونَ ۝١١٠
📖 ಅನುವಾದ ಆಯತ್ 110
ಅವರು ಮೊದಲ ಬಾರಿ ಇದರ ಮೇಲೆ ವಿಶ್ವಾಸವಿಡದಂತೆ ಈಗಲೂ ನಾವು ಸಹ ಅವರ ಹೃದಯಗಳನ್ನೂ, ಕಣ್ಣುಗಳನ್ನೂ ತಿರುಗಿಸಿ ಬಿಡುವೆವು. ಅವರು ತಮ್ಮ ಧಿಕ್ಕಾರದಲ್ಲಿ ಅಲೆದಾಡುವಂತೆ ನಾವು ಅವರನ್ನು ಬಿಟ್ಟು ಬಿಡುವೆವು.
۞ وَلَوْ أَنَّنَا نَزَّلْنَا إِلَيْهِمُ الْمَلَائِكَةَ وَكَلَّمَهُمُ الْمَوْتَىٰ وَحَشَرْنَا عَلَيْهِمْ كُلَّ شَيْءٍ قُبُلًا مَّا كَانُوا لِيُؤْمِنُوا إِلَّا أَن يَشَاءَ اللَّهُ وَلَٰكِنَّ أَكْثَرَهُمْ يَجْهَلُونَ ۝١١١
📖 ಅನುವಾದ ಆಯತ್ 111
ನಾವು ಅವರೆಡೆಗೆ ದೂತರನ್ನು ಕಳುಹಿಸಿದರೂ, ಮೃತಪಟ್ಟವರು ಅವರೊಂದಿಗೆ ಮಾತನಾಡಿದರೂ ಸರ್ವ ವಸ್ತುಗಳನ್ನೂ ನಾವು ಅವರ ಕಣ್ಮುಂದೆ ತಂದು ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡಲಾರರು. ಆದರೆ ಅಲ್ಲಾಹನು ಇಚ್ಛಿಸಿದರೆ ಬೇರೆ ವಿಚಾರ. ಆದರೆ ಅವರ ಪೈಕಿ ಹೆಚ್ಚಿನವರು ಅಜ್ಞಾನಿಗಳಾಗಿದ್ದಾರೆ.
وَكَذَٰلِكَ جَعَلْنَا لِكُلِّ نَبِيٍّ عَدُوًّا شَيَاطِينَ الْإِنسِ وَالْجِنِّ يُوحِي بَعْضُهُمْ إِلَىٰ بَعْضٍ زُخْرُفَ الْقَوْلِ غُرُورًا ۚ وَلَوْ شَاءَ رَبُّكَ مَا فَعَلُوهُ ۖ فَذَرْهُمْ وَمَا يَفْتَرُونَ ۝١١٢
📖 ಅನುವಾದ ಆಯತ್ 112
ಮತ್ತು ಇದೇ ರೀತಿ ನಾವು ಪ್ರತಿಯೊಬ್ಬ ಪೈಗಂಬರರಿಗೆ ಮನುಷ್ಯರ ಮತ್ತು ಯಕ್ಷಗಳ ಪೈಕಿ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರನ್ನು ವಂಚಿಸಲೆAದು ಅವರಲ್ಲಿ ಕೆಲವರು ಇನ್ನು ಕೆಲವರಿಗೆ ಆಕರ್ಷಕ ಮಾತುಗಳ ದುರ್ಬೋಧನೆಯನ್ನು ಮಾಡುತ್ತಿದ್ದಾರೆ. ಮತ್ತು ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನೂ, ಅವರು ಹೆಣೆಯುತ್ತಿರುವುದನ್ನೂ ನೀವು ಬಿಟ್ಟು ಬಿಡಿರಿ.
وَلِتَصْغَىٰ إِلَيْهِ أَفْئِدَةُ الَّذِينَ لَا يُؤْمِنُونَ بِالْآخِرَةِ وَلِيَرْضَوْهُ وَلِيَقْتَرِفُوا مَا هُم مُّقْتَرِفُونَ ۝١١٣
📖 ಅನುವಾದ ಆಯತ್ 113
ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ಅದರೆಡೆಗೆ ವಾಲಿಬಿಡಲೆಂದೂ, ಮತ್ತು ಅದರಿಂದ ತೃಪ್ತರಾಗಲೆಂದೂ, ಮತ್ತು ಅವರು ಮಾಡುತ್ತಿದ್ದ ಕಾರ್ಯಗಳನ್ನೆಲ್ಲ ಮಾಡಿಕೊಂಡಿರಲೆAದಾಗಿದೆ.
أَفَغَيْرَ اللَّهِ أَبْتَغِي حَكَمًا وَهُوَ الَّذِي أَنزَلَ إِلَيْكُمُ الْكِتَابَ مُفَصَّلًا ۚ وَالَّذِينَ آتَيْنَاهُمُ الْكِتَابَ يَعْلَمُونَ أَنَّهُ مُنَزَّلٌ مِّن رَّبِّكَ بِالْحَقِّ ۖ فَلَا تَكُونَنَّ مِنَ الْمُمْتَرِينَ ۝١١٤
📖 ಅನುವಾದ ಆಯತ್ 114
ಏನು ನಾನು ಅಲ್ಲಾಹನ ಹೊರತು ಇತರರನ್ನು ತೀರ್ಪುಗಾರರನ್ನಾಗಿ ಅರಸಬೇಕೆ? ವಸ್ತುತಃ ಅವನು ಒಂದು ವಿವರ ಪೂರ್ಣ ಗ್ರಂಥವನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದಾನೆ. ಮತ್ತು ಗ್ರಂಥ ನೀಡಲಾದವರು ಇದು ನಿಮ್ಮ ಪ್ರಭುವಿನ ಕಡೆಯಿಂದ ಸತ್ಯದೊಂದಿಗೆ ಅವತೀರ್ಣಗೊಳಿಸಲಾಗಿದೆ ಎಂದು ಅರಿತು ಕೊಂಡಿದ್ದಾರೆ. ಆದ್ದರಿಂದ ನೀವು ಸಂದೇಹಪಡುವವರಲ್ಲಿ ಸೇರಬೇಡಿರಿ.
وَتَمَّتْ كَلِمَتُ رَبِّكَ صِدْقًا وَعَدْلًا ۚ لَّا مُبَدِّلَ لِكَلِمَاتِهِ ۚ وَهُوَ السَّمِيعُ الْعَلِيمُ ۝١١٥
📖 ಅನುವಾದ ಆಯತ್ 115
ನಿಮ್ಮ ಪ್ರಭುವಿನ ವಚನ ಸತ್ಯ ಹಾಗೂ ನ್ಯಾಯದ ಮಟ್ಟಿಗೆ ಪರಿಪೂರ್ಣವಾದುದಾಗಿದೆ. ಅವನ ವಚನಗಳನ್ನು ಬದಲಾಯಿಸುವವನಾರೂ ಇಲ್ಲ. ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿದ್ದಾನೆ.
وَإِن تُطِعْ أَكْثَرَ مَن فِي الْأَرْضِ يُضِلُّوكَ عَن سَبِيلِ اللَّهِ ۚ إِن يَتَّبِعُونَ إِلَّا الظَّنَّ وَإِنْ هُمْ إِلَّا يَخْرُصُونَ ۝١١٦
📖 ಅನುವಾದ ಆಯತ್ 116
ಮತ್ತು ಭೂಮಿಯಲ್ಲಿರುವ ಹೆಚ್ಚಿನವರನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಭ್ರಷ್ಟಗೊಳಿಸಿಬಿಡುವರು. ಅವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅವರು ಅನುಮಾನದ ಮಾತುಗಳನ್ನಾಡುತ್ತಾರೆ.
إِنَّ رَبَّكَ هُوَ أَعْلَمُ مَن يَضِلُّ عَن سَبِيلِهِ ۖ وَهُوَ أَعْلَمُ بِالْمُهْتَدِينَ ۝١١٧
📖 ಅನುವಾದ ಆಯತ್ 117
ಖಂಡಿತವಾಗಿಯು ನಿಮ್ಮ ಪ್ರಭುವು ತನ್ನ ಮಾರ್ಗದಿಂದ ವ್ಯತಿಚಲಿಸುವವನು ಯಾರೆಂದು ಚೆನ್ನಾಗಿ ಅರಿತಿರುವನು ಮತ್ತು ಸನ್ಮಾರ್ಗದಲ್ಲಿ ಚಲಿಸುವವರನ್ನು ಅವನು ಚೆನ್ನಾಗಿ ಅರಿತಿದ್ದಾನೆ.
فَكُلُوا مِمَّا ذُكِرَ اسْمُ اللَّهِ عَلَيْهِ إِن كُنتُم بِآيَاتِهِ مُؤْمِنِينَ ۝١١٨
📖 ಅನುವಾದ ಆಯತ್ 118
ನೀವು ಅವನ ನಿಯಮಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ, ಅಲ್ಲಾಹನ ನಾಮವನ್ನು ಉಚ್ಛರಿಸಿದ ಪ್ರಾಣಿಯನ್ನು ತಿನ್ನಿರಿ.
وَمَا لَكُمْ أَلَّا تَأْكُلُوا مِمَّا ذُكِرَ اسْمُ اللَّهِ عَلَيْهِ وَقَدْ فَصَّلَ لَكُم مَّا حَرَّمَ عَلَيْكُمْ إِلَّا مَا اضْطُرِرْتُمْ إِلَيْهِ ۗ وَإِنَّ كَثِيرًا لَّيُضِلُّونَ بِأَهْوَائِهِم بِغَيْرِ عِلْمٍ ۗ إِنَّ رَبَّكَ هُوَ أَعْلَمُ بِالْمُعْتَدِينَ ۝١١٩
📖 ಅನುವಾದ ಆಯತ್ 119
ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿ ಕೊಯ್ಯಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನೀವು ಅನಿವಾರ್ಯಕ್ಕೊಳಗಾಗುವುದರ ಹೊರತು ಅಲ್ಲಾಹನು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿರುವುದನ್ನು ನಿಮಗೆ ವಿವರಿಸಿಕೊಟ್ಟಿದ್ದಾನೆ. ಮತ್ತು ಹೆಚ್ಚಿನವರು ತಮ್ಮ ಇಷ್ಟಾನುಸಾರ ಯಾವುದೇ ಆಧಾರವಿಲ್ಲದೆ ಜನರನ್ನು ದಾರಿಗೆಡಿಸುತ್ತಿದ್ದಾರೆ. ನಿಮ್ಮ ಪ್ರಭು ಹದ್ದು ಮೀರುವವರನ್ನು ಚೆನ್ನಾಗಿ ಅರಿಯುತ್ತಾನೆ.
وَذَرُوا ظَاهِرَ الْإِثْمِ وَبَاطِنَهُ ۚ إِنَّ الَّذِينَ يَكْسِبُونَ الْإِثْمَ سَيُجْزَوْنَ بِمَا كَانُوا يَقْتَرِفُونَ ۝١٢٠
📖 ಅನುವಾದ ಆಯತ್ 120
ಮತ್ತು ನೀವು ಪ್ರತ್ಯಕ್ಷ ಹಾಗೂ ಪರೋಕ್ಷವಾದ ಪಾಪಗಳನ್ನೂ ಬಿಟ್ಟು ಬಿಡಿರಿ. ನಿಸ್ಸಂಶಯವಾಗಿಯು ಪಾಪ ಮಾಡುತ್ತಿರುವವರು ತಮ್ಮ ಪಾಪಕ್ಕೆ ತಕ್ಕ ಪ್ರತಿಫಲವನ್ನು ಸದ್ಯದಲ್ಲೇ ಪಡೆಯಲಿರುವರು.
وَلَا تَأْكُلُوا مِمَّا لَمْ يُذْكَرِ اسْمُ اللَّهِ عَلَيْهِ وَإِنَّهُ لَفِسْقٌ ۗ وَإِنَّ الشَّيَاطِينَ لَيُوحُونَ إِلَىٰ أَوْلِيَائِهِمْ لِيُجَادِلُوكُمْ ۖ وَإِنْ أَطَعْتُمُوهُمْ إِنَّكُمْ لَمُشْرِكُونَ ۝١٢١
📖 ಅನುವಾದ ಆಯತ್ 121
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ನಾಮವನ್ನು ಉಚ್ಛರಿಸದೇ ಕೊಯ್ಯಲಾದ ಪ್ರಾಣಿಗಳನ್ನು ನೀವು ತಿನ್ನ ಬೇಡಿರಿ. ಇದು ಧಿಕ್ಕಾರವಾಗಿದೆ, ಖಂಡಿತವಾಗಿಯು ನಿಮ್ಮೊಂದಿಗೆ ತರ್ಕಿಸುವುದಕ್ಕಾಗಿ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ನೀಡುತ್ತಿರುವರು ಮತ್ತು ನೀವೇನಾದರೂ ಅವರನ್ನು ಅನುಸರಿಸಿದರೆ ಖಂಡಿತವಾಗಿಯು ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನು ನಿಶ್ಚಯಿಸಿದವರಾಗುವಿರಿ.
أَوَمَن كَانَ مَيْتًا فَأَحْيَيْنَاهُ وَجَعَلْنَا لَهُ نُورًا يَمْشِي بِهِ فِي النَّاسِ كَمَن مَّثَلُهُ فِي الظُّلُمَاتِ لَيْسَ بِخَارِجٍ مِّنْهَا ۚ كَذَٰلِكَ زُيِّنَ لِلْكَافِرِينَ مَا كَانُوا يَعْمَلُونَ ۝١٢٢
📖 ಅನುವಾದ ಆಯತ್ 122
(ಸತ್ಯವಿಶ್ವಾಸದಿಂದ ವಂಚಿತನಾಗಿದ್ದ) ಮೃತ ವ್ಯಕ್ತಿಯೊಬ್ಬನನ್ನು ನಾವು (ಸತ್ಯವಿಶ್ವಾಸವನ್ನು ನೀಡಿ) ಜೀವಂತಗೊಳಿಸಿ ಮತ್ತು ಅವನಿಗೆ ಒಂದು ಪ್ರಕಾಶವನ್ನು ನೀಡಿದೆವು. ಅವನು (ಪ್ರಕಾಶವನ್ನು ತಲುಪಿಸಲು) ಜನರ ನಡುವೆ ಓಡಾಡಿಕೊಂಡಿದ್ದಾನೆ. ಅಂತಹ ವ್ಯಕ್ತಿಯು, ಅಂಧಕಾರಗಳಿAದ ಹೊರಬರಲು ಸಾಧ್ಯವಾಗದಂತಹ ವ್ಯಕ್ತಿಯಂತಾಗುವನೇ? ಹೀಗೆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳನ್ನು ಮನಮೋಹಕಗೊಳಿಸಲಾಗಿದೆ.
وَكَذَٰلِكَ جَعَلْنَا فِي كُلِّ قَرْيَةٍ أَكَابِرَ مُجْرِمِيهَا لِيَمْكُرُوا فِيهَا ۖ وَمَا يَمْكُرُونَ إِلَّا بِأَنفُسِهِمْ وَمَا يَشْعُرُونَ ۝١٢٣
📖 ಅನುವಾದ ಆಯತ್ 123
ಇದೇ ಪ್ರಕಾರ ನಾವು ಪ್ರತಿಯೊಂದು ನಾಡಿನಲ್ಲೂ, ಅಪರಾಧಿಗಳನ್ನೇ ಅಲ್ಲಿನ ನಾಯಕರನ್ನಾಗಿ ಮಾಡುತ್ತೇವೆ. ಇದೇಕೆಂದರೆ ಅವರು ಅಲ್ಲಿ ಕುತಂತ್ರಗಳನ್ನು ಹೂಡಲೆಂದಾಗಿದೆ ಮತ್ತು ಅವರು ಸ್ವತಃ ತಮ್ಮ ವಿರುದ್ಧವೆ ಕುತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ಅವರಿಗೆ ಪ್ರಜ್ಞೆಯಿಲ್ಲ.
وَإِذَا جَاءَتْهُمْ آيَةٌ قَالُوا لَن نُّؤْمِنَ حَتَّىٰ نُؤْتَىٰ مِثْلَ مَا أُوتِيَ رُسُلُ اللَّهِ ۘ اللَّهُ أَعْلَمُ حَيْثُ يَجْعَلُ رِسَالَتَهُ ۗ سَيُصِيبُ الَّذِينَ أَجْرَمُوا صَغَارٌ عِندَ اللَّهِ وَعَذَابٌ شَدِيدٌ بِمَا كَانُوا يَمْكُرُونَ ۝١٢٤
📖 ಅನುವಾದ ಆಯತ್ 124
ಮತ್ತು ಅವರ (ಮಕ್ಕಾಃದ ಖುರೈಷರ) ಬಳಿ ಯಾವ ದೃಷ್ಟಾಂತವು ಬಂದರೂ ಅಲ್ಲಾಹನ ಸಂದೇಶವಾಹಕರಿಗೆ ನೀಡಲಾಗಿರುವ ದಿವ್ಯ ಬೋಧನೆ ನಮಗೂ ನೀಡುವವರೆಗೆ ನಾವು ವಿಶ್ವಾಸವಿಡಲಾರೆವು. ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಒಪ್ಪಿಸಬೇಕೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿದ್ದಾನೆ. ಸದ್ಯದಲ್ಲೇ ಅಪರಾಧವೆಸಗಿದವರು ತಮ್ಮ ದುಷ್ಕೃತ್ಯಗಳ ಫಲವಾಗಿ ಅಲ್ಲಾಹನ ಬಳಿ ನಿಂದ್ಯತೆಯನ್ನು, ಕಠಿಣವಾದ ಶಿಕ್ಷೆಯನ್ನು ಅನುಭವಿಸುವರು.
فَمَن يُرِدِ اللَّهُ أَن يَهْدِيَهُ يَشْرَحْ صَدْرَهُ لِلْإِسْلَامِ ۖ وَمَن يُرِدْ أَن يُضِلَّهُ يَجْعَلْ صَدْرَهُ ضَيِّقًا حَرَجًا كَأَنَّمَا يَصَّعَّدُ فِي السَّمَاءِ ۚ كَذَٰلِكَ يَجْعَلُ اللَّهُ الرِّجْسَ عَلَى الَّذِينَ لَا يُؤْمِنُونَ ۝١٢٥
📖 ಅನುವಾದ ಆಯತ್ 125
ಆದರೆ ಯಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಅಲ್ಲಾಹನು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ವಿಶಾಲಗೊಳಿಸುವನು. ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸಲು ಇಚ್ಛಿಸುತ್ತಾನೋ ಅವನ ಹೃದಯವನ್ನು ಇಕ್ಕಟ್ಟುಗೊಳಿಸುತ್ತಾನೆ. ಒಬ್ಬನನ್ನು ಬಲವಂತವಾಗಿ ಆಕಾಶದಲ್ಲಿ ಏರಿ ಹೋಗಲು ವಿವಷಗೊಳಿಸಲಾಗಿರುವಂತೆ. ಇದೇ ರೀತಿ ಅಲ್ಲಾಹನು ವಿಶ್ವಾಸವಿಡದವರ ಮೇಲೆ ಅಶುದ್ಧತೆಯನ್ನು ಹೇರಿ ಬಿಡುತ್ತಾನೆ.
وَهَٰذَا صِرَاطُ رَبِّكَ مُسْتَقِيمًا ۗ قَدْ فَصَّلْنَا الْآيَاتِ لِقَوْمٍ يَذَّكَّرُونَ ۝١٢٦
📖 ಅನುವಾದ ಆಯತ್ 126
ಇದು ನಿಮ್ಮ ಪ್ರಭುವಿನ ನೇರ ಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
۞ لَهُمْ دَارُ السَّلَامِ عِندَ رَبِّهِمْ ۖ وَهُوَ وَلِيُّهُم بِمَا كَانُوا يَعْمَلُونَ ۝١٢٧
📖 ಅನುವಾದ ಆಯತ್ 127
ಅವರಿಗೆ ಅವರ ಪ್ರಭುವಿನ ಬಳಿ ಶಾಂತಿ ಧಾಮವಿದೆ. ಅವರು ಮಾಡುತ್ತಿದ್ದ ಸತ್ಕರ್ಮಗಳ ನಿಮಿತ್ತ ಅವನು ಅವರ ಮಿತ್ರನಾಗಿದ್ದಾನೆ.
وَيَوْمَ يَحْشُرُهُمْ جَمِيعًا يَا مَعْشَرَ الْجِنِّ قَدِ اسْتَكْثَرْتُم مِّنَ الْإِنسِ ۖ وَقَالَ أَوْلِيَاؤُهُم مِّنَ الْإِنسِ رَبَّنَا اسْتَمْتَعَ بَعْضُنَا بِبَعْضٍ وَبَلَغْنَا أَجَلَنَا الَّذِي أَجَّلْتَ لَنَا ۚ قَالَ النَّارُ مَثْوَاكُمْ خَالِدِينَ فِيهَا إِلَّا مَا شَاءَ اللَّهُ ۗ إِنَّ رَبَّكَ حَكِيمٌ عَلِيمٌ ۝١٢٨
📖 ಅನುವಾದ ಆಯತ್ 128
ಮತ್ತು ಅವರೆಲ್ಲರನ್ನು ಅಲ್ಲಾಹನು ಒಟ್ಟುಗೂಡಿಸುವ ದಿನ (ಹೇಳುವನು): ಓ ದುಷ್ಟ ಯಕ್ಷ ಸಮೂಹವೇ, ಮನುಷ್ಯರ ಪೈಕಿ ಅನೇಕ ಜನರನ್ನು ನೀವು ಪಥಭ್ರಷ್ಟಗೊಳಿಸಿ ನಿಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಿರುವಿರಿ. ಮನುಷ್ಯರ ಪೈಕಿ ಅವರ ಮಿತ್ರರಾಗಿದ್ದವರು ಹೇಳುವರು: ನಮ್ಮ ಪ್ರಭು, ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನವನ್ನು ಪಡೆದಿದ್ದಾರೆ. ನೀನು ನಮಗೆ ನಿಶ್ಚಯಿಸಿದ ಅವಧಿಯನ್ನು ನಾವು ತಲುಪಿದ್ದೇವೆ. ಆಗ ಅವನು ಹೇಳುವನು: ನಿಮ್ಮೆಲ್ಲರ ವಾಸಸ್ಥಳವು ನರಕವಾಗಿದೆ; ಅದರಲ್ಲಿ ನೀವು ಶಾಶ್ವತವಾಗಿರುವಿರಿ. ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು ನಿಸ್ಸಂಶಯವಾಗಿಯು ನಿಮ್ಮ ಪ್ರಭು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿದ್ದಾನೆ.
وَكَذَٰلِكَ نُوَلِّي بَعْضَ الظَّالِمِينَ بَعْضًا بِمَا كَانُوا يَكْسِبُونَ ۝١٢٩
📖 ಅನುವಾದ ಆಯತ್ 129
ಇದೇ ರೀತಿ ದುಷ್ಕರ್ಮಿಗಳ ಕರ್ಮಗಳ ನಿಮಿತ್ತ ನಾವು ಅವರ ಪೈಕಿ ಕೆಲವರನ್ನು ಕೆಲವರ ಆಪ್ತರನ್ನಾಗಿ ಮಾಡುವೆವು.
يَا مَعْشَرَ الْجِنِّ وَالْإِنسِ أَلَمْ يَأْتِكُمْ رُسُلٌ مِّنكُمْ يَقُصُّونَ عَلَيْكُمْ آيَاتِي وَيُنذِرُونَكُمْ لِقَاءَ يَوْمِكُمْ هَٰذَا ۚ قَالُوا شَهِدْنَا عَلَىٰ أَنفُسِنَا ۖ وَغَرَّتْهُمُ الْحَيَاةُ الدُّنْيَا وَشَهِدُوا عَلَىٰ أَنفُسِهِمْ أَنَّهُمْ كَانُوا كَافِرِينَ ۝١٣٠
📖 ಅನುವಾದ ಆಯತ್ 130
ಓ ಯಕ್ಷ ಮತ್ತು ಮನುಷ್ಯ ಸಮೂಹವೇ, ನಿಮಗೆ ನನ್ನ ನಿಯಮ ಶಾಸನಗಳನ್ನು ವಿವರಿಸಿ ಕೊಡುವ ಮತ್ತು ನಿಮ್ಮ ಈ ದಿನದ ಬೇಟೆಯ ಎಚ್ಚರಿಕೆ ನೀಡುವಂತಹ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರಲಿಲ್ಲವೇ? ಅವರು ಹೇಳುವರು: ನಾವು ನಮ್ಮ ವಿರುದ್ಧವೇ ಸಾಕ್ಷಿಯಾಗಿದ್ದೇವೆ ಮತ್ತು ಐಹಿಕ ಜೀವನವು ಅವರನ್ನು ಮರಳುಗೊಳಿಸಿತು. ಅವರು ತಾವು ಸತ್ಯನಿಷೇಧಿ ಗಳಾಗಿದ್ದೇವೆಂದು ಸ್ವತಃ ತಮ್ಮ ವಿರುದ್ಧವೇ ಸಾಕ್ಷö್ಯವಹಿಸುವರು.
ذَٰلِكَ أَن لَّمْ يَكُن رَّبُّكَ مُهْلِكَ الْقُرَىٰ بِظُلْمٍ وَأَهْلُهَا غَافِلُونَ ۝١٣١
📖 ಅನುವಾದ ಆಯತ್ 131
ಇದು (ಸಂದೇಶವಾಹಕರನ್ನು ನಿಯೋಗಿಸುವುದು) ನಿಮ್ಮ ಪ್ರಭುವು ಯಾವುದೇ ನಾಡನ್ನು ಅದರ ನಿವಾಸಿಗಳು ಅಜ್ಞರಾಗಿರುವ ಸ್ಥಿತಿಯಲ್ಲಿ ಅವರ ಸತ್ಯನಿಷೇಧದ ನಿಮಿತ್ತ ನಾಶ ಮಾಡುವವನಲ್ಲ ಎಂಬುದರಿAದಾಗಿದೆ.
وَلِكُلٍّ دَرَجَاتٌ مِّمَّا عَمِلُوا ۚ وَمَا رَبُّكَ بِغَافِلٍ عَمَّا يَعْمَلُونَ ۝١٣٢
📖 ಅನುವಾದ ಆಯತ್ 132
ಪ್ರತಿಯೊಬ್ಬರಿಗೂ ತಮ್ಮ ಕರ್ಮಗಳ ಪ್ರತಿಫಲವಾಗಿ ಪದವಿಗಳಿವೆ ಮತ್ತು ನಿಮ್ಮ ಪ್ರಭು ಅವರ ಕರ್ಮಗಳ ಕುರಿತು ಅಲಕ್ಷö್ಯನಲ್ಲ.
وَرَبُّكَ الْغَنِيُّ ذُو الرَّحْمَةِ ۚ إِن يَشَأْ يُذْهِبْكُمْ وَيَسْتَخْلِفْ مِن بَعْدِكُم مَّا يَشَاءُ كَمَا أَنشَأَكُم مِّن ذُرِّيَّةِ قَوْمٍ آخَرِينَ ۝١٣٣
📖 ಅನುವಾದ ಆಯತ್ 133
ನಿಮ್ಮ ಪ್ರಭು ನಿರಪೇಕ್ಷನು, ಕರುಣೆಯುಳ್ಳವನು ಆಗಿದ್ದಾನೆ. ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಬೇರೆ ಜನತೆಯ ಸಂತಾನಗಳಿAದ ನಿಮ್ಮನ್ನು ಉಂಟುಮಾಡಿದAತೆ ನಿಮ್ಮ ನಂತರ ತಾನಿಚ್ಛಿಸುವವರನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು.
إِنَّ مَا تُوعَدُونَ لَآتٍ ۖ وَمَا أَنتُم بِمُعْجِزِينَ ۝١٣٤
📖 ಅನುವಾದ ಆಯತ್ 134
ನಿಮಗೆ ಎಚ್ಚರಿಗೆ ನೀಡಲಾಗುತ್ತಿರುವುದು ನಿಸ್ಸಂದೇಹವಾಗಿಯು (ಪ್ರಳಯವು) ಬರಲಿದೆ ಮತ್ತು ಅಲ್ಲಾಹನನ್ನು ಮಣಿಸಲು ನಿಮಗೆ ಸಾಧ್ಯವಿಲ್ಲ.
قُلْ يَا قَوْمِ اعْمَلُوا عَلَىٰ مَكَانَتِكُمْ إِنِّي عَامِلٌ ۖ فَسَوْفَ تَعْلَمُونَ مَن تَكُونُ لَهُ عَاقِبَةُ الدَّارِ ۗ إِنَّهُ لَا يُفْلِحُ الظَّالِمُونَ ۝١٣٥
📖 ಅನುವಾದ ಆಯತ್ 135
ಹೇಳಿರಿ: ನನ್ನ ಜನತೆಯೇ, ನೀವು ನಿಮ್ಮ ಕ್ರಮಕ್ಕನುಗುಣವಾಗಿ ಕರ್ಮವೆಸಗಿರಿ. ನಾನೂ ಕರ್ಮವೆಸಗುತ್ತಿರುವೆನು. ನೀವು ಸಧ್ಯದಲ್ಲೇ ತಿಳಿಯುವಿರಿ. ಪರಲೋಕ ನಿಲಯವು (ಸ್ವರ್ಗ) ಯಾರ ಪಾಲಿಗಿದೆ. ಖಂಡಿತವಾಗಿಯು ಅಕ್ರಮಿಗಳು ಯಶಸ್ಸು ಪಡೆಯಲಾರರು.
وَجَعَلُوا لِلَّهِ مِمَّا ذَرَأَ مِنَ الْحَرْثِ وَالْأَنْعَامِ نَصِيبًا فَقَالُوا هَٰذَا لِلَّهِ بِزَعْمِهِمْ وَهَٰذَا لِشُرَكَائِنَا ۖ فَمَا كَانَ لِشُرَكَائِهِمْ فَلَا يَصِلُ إِلَى اللَّهِ ۖ وَمَا كَانَ لِلَّهِ فَهُوَ يَصِلُ إِلَىٰ شُرَكَائِهِمْ ۗ سَاءَ مَا يَحْكُمُونَ ۝١٣٦
📖 ಅನುವಾದ ಆಯತ್ 136
ಅಲ್ಲಾಹನು ಸೃಷ್ಟಿಸಿದ ಕೃಷಿಯಿಂದ ಮತ್ತು ಜಾನುವಾರುಗಳಿಂದ ಅವನಿಗಾಗಿ ಒಂದು ಪಾಲನ್ನು ನಿಶ್ಚಯಿಸಿದ್ದಾರೆ ಮತ್ತು ತಮ್ಮ ಭ್ರಮೆಯಿಂದ ಇದು ಅಲ್ಲಾಹನದ್ದು ಮತ್ತು ಇನ್ನೊಂದು ಪಾಲನ್ನು ಇದು ತಮ್ಮ ಆರಾಧ್ಯರದ್ದು ಎಂದು ಹೇಳುತ್ತಾರೆ. ನಂತರ ಅವರ ಸಹಭಾಗಿಗಳಿರುವಂತಹದ್ದು ಅಲ್ಲಾಹನಿಗೆ ತಲುಪುವುದಿಲ್ಲ. ಹಾಗೂ ಅಲ್ಲಾಹನಿಗಿರುವುದು ಅವರ ಆರಾಧ್ಯರಿಗೆ ತಲುಪುತ್ತದೆ ಎಂದು ವಾದಿಸುತ್ತಾರೆ. ಅವರು ಮಾಡುತ್ತಿರುವ ತೀರ್ಪು ಅದೆಷ್ಟು ಕೆಟ್ಟದ್ದಾಗಿದೆ!
وَكَذَٰلِكَ زَيَّنَ لِكَثِيرٍ مِّنَ الْمُشْرِكِينَ قَتْلَ أَوْلَادِهِمْ شُرَكَاؤُهُمْ لِيُرْدُوهُمْ وَلِيَلْبِسُوا عَلَيْهِمْ دِينَهُمْ ۖ وَلَوْ شَاءَ اللَّهُ مَا فَعَلُوهُ ۖ فَذَرْهُمْ وَمَا يَفْتَرُونَ ۝١٣٧
📖 ಅನುವಾದ ಆಯತ್ 137
ಮತ್ತು ಅದೇ ರೀತಿ ಅನೇಕ ಬಹುದೇವವಿಶ್ವಾಸಿಗಳ ಮನಸ್ಸಿನಲ್ಲಿ ಅವರ ದೇವತೆಗಳು ಅವರ ಮಕ್ಕಳನ್ನು ಕೊಲ್ಲುವುದನ್ನು (ಅವರ ದೃಷ್ಟಿಯಲ್ಲಿ) ಸುಂದರವಾಗಿಸಿದ್ದಾರೆ. ಇದು ಅವರ ಸಂತಾನವನ್ನು ನಾಶಗೊಳಿಸಲೆಂದು, ಅವರ ಧರ್ಮವನ್ನು ಅವರಿಗೆ ಗೊಂದಲಕ್ಕೀಡು ಮಾಡಲೆಂದಾಗಿದೆ ಮತ್ತು ಅವರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರು ಅಂತಹ ಕೃತ್ಯವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ನೀವು ಅವರನ್ನೂ, ಅವರು ಹೆಣೆಯುತ್ತಿರುವ ವಿಚಾರಗಳನ್ನೂ ಬಿಟ್ಟು ಬಿಡಿರಿ.
وَقَالُوا هَٰذِهِ أَنْعَامٌ وَحَرْثٌ حِجْرٌ لَّا يَطْعَمُهَا إِلَّا مَن نَّشَاءُ بِزَعْمِهِمْ وَأَنْعَامٌ حُرِّمَتْ ظُهُورُهَا وَأَنْعَامٌ لَّا يَذْكُرُونَ اسْمَ اللَّهِ عَلَيْهَا افْتِرَاءً عَلَيْهِ ۚ سَيَجْزِيهِم بِمَا كَانُوا يَفْتَرُونَ ۝١٣٨
📖 ಅನುವಾದ ಆಯತ್ 138
ಇವು ನಿಷೇಧಿಸಲಾದ ಜಾನುವಾರುಗಳು ಮತ್ತು ಕೃಷಿಗಳು ಇವುಗಳನ್ನು ನಾವು ಇಚ್ಛಿಸುವವರ ಹೊರತು ಇನ್ನಾರೂ ತಿನ್ನುವಂತಿಲ್ಲ ಎಂದು ಅವರು ತಮ್ಮ ಸ್ವೇಚ್ಛೆಯಂತೆ ಹೇಳುತ್ತಾರೆ. ಮತ್ತು ಕೆಲವು ಜಾನುವಾರುಗಳ ಮೇಲೆ ಸವಾರಿ ಮಾಡುವುದನ್ನು ನಿಷಿದ್ಧಗೊಳಿಸಲಾಗಿದೆ ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿದ ಕೆಲವು ಜಾನುವಾರುಗಳೂ ಇವೆ. ಇವೆಲ್ಲವೂ ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿರುವುದಾಗಿದೆ. ಶೀಘ್ರವೇ ಅಲ್ಲಾಹನು ಅವರು ಮಾಡಿರುವುದಕ್ಕೆ ತಕ್ಕ ಪ್ರತಿಫಲವನ್ನು ಅವರಿಗೆ ನೀಡಲಿರುವನು.
وَقَالُوا مَا فِي بُطُونِ هَٰذِهِ الْأَنْعَامِ خَالِصَةٌ لِّذُكُورِنَا وَمُحَرَّمٌ عَلَىٰ أَزْوَاجِنَا ۖ وَإِن يَكُن مَّيْتَةً فَهُمْ فِيهِ شُرَكَاءُ ۚ سَيَجْزِيهِمْ وَصْفَهُمْ ۚ إِنَّهُ حَكِيمٌ عَلِيمٌ ۝١٣٩
📖 ಅನುವಾದ ಆಯತ್ 139
ಮತ್ತು ಅವರು ಹೇಳುತ್ತಾರೆ: ಈ ಜಾನುವಾರುಗಳ ಗರ್ಭಾಶಯಗಳಲ್ಲಿರುವುದು ನಮ್ಮ ಪೈಕಿ ಪುರುಷರಿಗೆ ಮಾತ್ರವಿರುವುದು ಮತ್ತು ಅವು ನಮ್ಮ ಸ್ತಿçÃಯರಿಗೆ ನಿಷಿದ್ಧವಾಗಿದೆ. ಅದು ಸತ್ತದ್ದಾಗಿದ್ದರೆ ಅದರಲ್ಲಿ ಅವರೆಲ್ಲರೂ ಪಾಲುದಾರರಾಗುವರು. ಅವರ ಈ ಮಿಥ್ಯವಾದದ ಶಿಕ್ಷೆಯನ್ನು ಅವನು ಸದ್ಯದಲ್ಲೇ ಅವರಿಗೆ ನೀಡುವನು. ನಿಸ್ಸಂಶಯವಾಗಿಯು ಅವನು ಯುಕ್ತಿಪೂರ್ಣನೂ, ಮಹಾ ಜ್ಞಾನಿಯೂ ಆಗಿದ್ದಾನೆ.
قَدْ خَسِرَ الَّذِينَ قَتَلُوا أَوْلَادَهُمْ سَفَهًا بِغَيْرِ عِلْمٍ وَحَرَّمُوا مَا رَزَقَهُمُ اللَّهُ افْتِرَاءً عَلَى اللَّهِ ۚ قَدْ ضَلُّوا وَمَا كَانُوا مُهْتَدِينَ ۝١٤٠
📖 ಅನುವಾದ ಆಯತ್ 140
ವಾಸ್ತವದಲ್ಲಿ ತಮ್ಮ ಮಕ್ಕಳನ್ನು ಯಾವುದೇ ಜ್ಞಾನವಿಲ್ಲದೆ ಮೂರ್ಖತನದಿಂದ ಕೊಂದವರು ಮತ್ತು ಅಲ್ಲಾಹನು ಅವರಿಗೆ ನೀಡಿದ್ದನ್ನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿ ನಿಷಿದ್ಧಗೊಳಿಸಿದವರು ಖಂಡಿತವಾಗಿಯು ನಷ್ಟದಲ್ಲಿ ಬಿದ್ದು ಬಿಟ್ಟರು ಮತ್ತು ಅವರು ಮಾರ್ಗ ಭ್ರಷ್ಟರಾದರು. ಅವರು ಸನ್ಮಾರ್ಗ ಹೊಂದಿದವರಾಗಲಿಲ್ಲ.
۞ وَهُوَ الَّذِي أَنشَأَ جَنَّاتٍ مَّعْرُوشَاتٍ وَغَيْرَ مَعْرُوشَاتٍ وَالنَّخْلَ وَالزَّرْعَ مُخْتَلِفًا أُكُلُهُ وَالزَّيْتُونَ وَالرُّمَّانَ مُتَشَابِهًا وَغَيْرَ مُتَشَابِهٍ ۚ كُلُوا مِن ثَمَرِهِ إِذَا أَثْمَرَ وَآتُوا حَقَّهُ يَوْمَ حَصَادِهِ ۖ وَلَا تُسْرِفُوا ۚ إِنَّهُ لَا يُحِبُّ الْمُسْرِفِينَ ۝١٤١
📖 ಅನುವಾದ ಆಯತ್ 141
ಚಪ್ಪರಗಳಲ್ಲಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು ಮತ್ತು ಖರ್ಜೂರದ ಮರಗಳನ್ನೂ, ವೈವಿದ್ಯಮಯ ಫಲಗಳಿರುವ ಹೊಲಗಳನ್ನೂ, ಒಂದಕ್ಕೊAದು ಸಾದೃಶ್ಯವಿರುವಂತಹ ಸಾದೃಶ್ಯವಿಲ್ಲದಂತಹ ಓಲಿವ್ ಮತ್ತು ದಾಳಿಂಬೆಗಳನ್ನು ಉಂಟು ಮಾಡಿದವನು ಅವನೇ, ಫಲ ಬಿಡುವಾಗ ಅವುಗಳ ಫಲಗಳನ್ನು ತಿನ್ನಿರಿ ಮತ್ತು ಅವುಗಳ ಫಸಲುಗಳನ್ನು ಕೊಯ್ಯುವ ದಿನ ಅವುಗಳ ಹಕ್ಕನ್ನು(ಕಡ್ಡಾಯ ದಾನ) ನೀಡಿರಿ ಮತ್ತು ನೀವು ದುರ್ವ್ಯಯ ಮಾಡಬೇಡಿರಿ. ಖಂಡಿತವಾಗಿಯು ಅಲ್ಲಾಹನು ದುರ್ವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ.
وَمِنَ الْأَنْعَامِ حَمُولَةً وَفَرْشًا ۚ كُلُوا مِمَّا رَزَقَكُمُ اللَّهُ وَلَا تَتَّبِعُوا خُطُوَاتِ الشَّيْطَانِ ۚ إِنَّهُ لَكُمْ عَدُوٌّ مُّبِينٌ ۝١٤٢
📖 ಅನುವಾದ ಆಯತ್ 142
ಮತ್ತು ಜಾನುವಾರುಗಳ ಪೈಕಿ ಭಾರ ಹೊರುವವುಗಳನ್ನೂ, ಗಿಡ್ಡ ಕಾಲುಗಳಿರುವವುಗಳನ್ನೂ (ಸೃಷ್ಟಿಸಿದ್ದಾನೆ) ಅಲ್ಲಾಹನು ನಿಮಗೆ ನೀಡಿರುವುದನ್ನು ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ. ನಿಸ್ಸಂದೇಹವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
ثَمَانِيَةَ أَزْوَاجٍ ۖ مِّنَ الضَّأْنِ اثْنَيْنِ وَمِنَ الْمَعْزِ اثْنَيْنِ ۗ قُلْ آلذَّكَرَيْنِ حَرَّمَ أَمِ الْأُنثَيَيْنِ أَمَّا اشْتَمَلَتْ عَلَيْهِ أَرْحَامُ الْأُنثَيَيْنِ ۖ نَبِّئُونِي بِعِلْمٍ إِن كُنتُمْ صَادِقِينَ ۝١٤٣
📖 ಅನುವಾದ ಆಯತ್ 143
ಜಾನುವಾರುಗಳ ಪೈಕಿ ಎಂಟು ಜೋಡಿಗಳನ್ನು (ಸೃಷ್ಟಿಸಿದ್ದಾನೆ). ಕುರಿಗಳಿಂದ ಎರಡು ಮತ್ತು ಆಡುಗಳಿಂದ ಎರಡು, ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡುಗಳನ್ನೋ ಅಥವಾ ಆ ಎರಡರ ಹೆಣ್ಣುಗಳನ್ನೋ ಅಥವಾ ಆ ಎರಡು ಹೆಣ್ಣು ತಮ್ಮ ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ನನಗೆ ಆಧಾರದೊಂದಿಗೆ ಹೇಳಿರಿ;
وَمِنَ الْإِبِلِ اثْنَيْنِ وَمِنَ الْبَقَرِ اثْنَيْنِ ۗ قُلْ آلذَّكَرَيْنِ حَرَّمَ أَمِ الْأُنثَيَيْنِ أَمَّا اشْتَمَلَتْ عَلَيْهِ أَرْحَامُ الْأُنثَيَيْنِ ۖ أَمْ كُنتُمْ شُهَدَاءَ إِذْ وَصَّاكُمُ اللَّهُ بِهَٰذَا ۚ فَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا لِّيُضِلَّ النَّاسَ بِغَيْرِ عِلْمٍ ۗ إِنَّ اللَّهَ لَا يَهْدِي الْقَوْمَ الظَّالِمِينَ ۝١٤٤
📖 ಅನುವಾದ ಆಯತ್ 144
ಒಂಟೆಯಿAದ ಎರಡು ವರ್ಗ ಮತ್ತು ಹಸುವಿನಿಂದ ಎರಡು ವರ್ಗವನ್ನು (ಸೃಷ್ಟಿಸಿದ್ದಾನೆ). ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳು ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೇ? ಅಲ್ಲಾಹನು ನಿಮಗಿದನ್ನು ಆದೇಶಿಸುವಾಗ ನೀವಲ್ಲಿ ಹಾಜರಿದ್ದಿರಾ? ಹೀಗಿರುವಾಗ ಯಾವುದೇ ಜ್ಞಾನವಿಲ್ಲದೆ ಜನರನ್ನು ದಾರಿಗೆಡಿಸಲು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯು ಅಲ್ಲಾಹನು ಅಕ್ರಮಿಗಳಾದ ಜನರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ.
قُل لَّا أَجِدُ فِي مَا أُوحِيَ إِلَيَّ مُحَرَّمًا عَلَىٰ طَاعِمٍ يَطْعَمُهُ إِلَّا أَن يَكُونَ مَيْتَةً أَوْ دَمًا مَّسْفُوحًا أَوْ لَحْمَ خِنزِيرٍ فَإِنَّهُ رِجْسٌ أَوْ فِسْقًا أُهِلَّ لِغَيْرِ اللَّهِ بِهِ ۚ فَمَنِ اضْطُرَّ غَيْرَ بَاغٍ وَلَا عَادٍ فَإِنَّ رَبَّكَ غَفُورٌ رَّحِيمٌ ۝١٤٥
📖 ಅನುವಾದ ಆಯತ್ 145
ಹೇಳಿರಿ: ನನ್ನ ಬಳಿ ಬಂದಿರುವ ದಿವ್ಯ ಸಂದೇಶದಲ್ಲಿ ತಿನ್ನುವವನಿಗೆ ತಿನ್ನಲು ನಿಷಿದ್ಧವಾಗಿರುವುದನ್ನು ನಾನು ಕಾಣುತ್ತಿಲ್ಲ. ಆದರೆ ಅದು ಶವ ಅಥವ ಹರಿಯುವ ರಕ್ತ ಅಥವಾ ಹಂದಿ ಮಾಂಸವಾಗಿರುವುದರ ಹೊರತು. ಏಕೆಂದರೆ ಅದು ಅಶುದ್ಧವಾದುದಾಗಿದೆ ಅಥವಾ ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಿಡಲಾದುದ್ದು. ಇನ್ನು ಯಾರಾದರೂ (ಅದನ್ನು ತಿನ್ನಲು) ನಿರ್ಬಂಧಿತನಾದರೆ ಅವನು ಆಜ್ಞೋಲ್ಲಂಘನೇ ಮಾಡುವವನು, ಮಿತಿಮೀರುವವನು ಆಗಿರದಿದ್ದರೆ ಖಂಡಿತವಾಗಿಯು ನಿಮ್ಮ ಪ್ರಭು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.
وَعَلَى الَّذِينَ هَادُوا حَرَّمْنَا كُلَّ ذِي ظُفُرٍ ۖ وَمِنَ الْبَقَرِ وَالْغَنَمِ حَرَّمْنَا عَلَيْهِمْ شُحُومَهُمَا إِلَّا مَا حَمَلَتْ ظُهُورُهُمَا أَوِ الْحَوَايَا أَوْ مَا اخْتَلَطَ بِعَظْمٍ ۚ ذَٰلِكَ جَزَيْنَاهُم بِبَغْيِهِمْ ۖ وَإِنَّا لَصَادِقُونَ ۝١٤٦
📖 ಅನುವಾದ ಆಯತ್ 146
ಮತ್ತು ನಾವು ಯಹೂದರ ಮೇಲೆ ಉಗುರುಳ್ಳ ಎಲ್ಲಾ ಪ್ರಾಣಿಗಳನ್ನು ನಿಷಿದ್ಧಗೊಳಿಸಿದ್ದೆವು. ಹಸು, ಆಡು ಮುಂತಾದವುಗಳ ಕೊಬ್ಬುಗಳನ್ನು ನಾವು ಅವರ ಮೇಲೆ ನಿಷಿದ್ಧಗೊಳಿಸಿದ್ದೆವು. ಆದರೆ ಅವುಗಳ ಬೆನ್ನಿನ ಮೇಲಿರುವ ಅಥವಾ ಕರುಳಿನಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊAಡಿರುವುದರ ಹೊರತು. ಅವರ ದುಷ್ಟತನದ ನಿಮಿತ್ತ ನಾವು ಅವರಿಗೆ ಈ ಶಿಕ್ಷೆಯನ್ನು ನೀಡಿದೆವು. ಮತ್ತು ಖಂಡಿತವಾಗಿಯು ನಾವು ಸತ್ಯವಂತರಾಗಿದ್ದೇವೆ.
فَإِن كَذَّبُوكَ فَقُل رَّبُّكُمْ ذُو رَحْمَةٍ وَاسِعَةٍ وَلَا يُرَدُّ بَأْسُهُ عَنِ الْقَوْمِ الْمُجْرِمِينَ ۝١٤٧
📖 ಅನುವಾದ ಆಯತ್ 147
ಇನ್ನು ಅವರು ನಿಮ್ಮನ್ನು ನಿರಾಕರಿಸುವುದಾದರೆ ಹೇಳಿರಿ: ನಿಮ್ಮ ಪ್ರಭು ವಿಶಾಲವಾದ ಕರುಣೆಯುಳ್ಳವನಾಗಿದ್ದಾನೆ ಮತ್ತು ಅವನ ಶಿಕ್ಷೆಯನ್ನು ಅಕ್ರಮಿಗಳಾದ ಜನರಿಂದ ಸರಿಸಲಾಗದು.
سَيَقُولُ الَّذِينَ أَشْرَكُوا لَوْ شَاءَ اللَّهُ مَا أَشْرَكْنَا وَلَا آبَاؤُنَا وَلَا حَرَّمْنَا مِن شَيْءٍ ۚ كَذَٰلِكَ كَذَّبَ الَّذِينَ مِن قَبْلِهِمْ حَتَّىٰ ذَاقُوا بَأْسَنَا ۗ قُلْ هَلْ عِندَكُم مِّنْ عِلْمٍ فَتُخْرِجُوهُ لَنَا ۖ إِن تَتَّبِعُونَ إِلَّا الظَّنَّ وَإِنْ أَنتُمْ إِلَّا تَخْرُصُونَ ۝١٤٨
📖 ಅನುವಾದ ಆಯತ್ 148
ಬಹುದೇವಾರಾಧಕರು ಹೇಳುವರು: ಅಲ್ಲಾಹನು ಇಚ್ಛಿಸುತ್ತಿದ್ದರೆ ನಾವಾಗಲೀ, ನಮ್ಮ ಪೂರ್ವಿಕರಾಗಲೀ ದೇವಸಹಭಾಗಿತ್ವ ಮಾಡುತ್ತಿರಲಿಲ್ಲ ಮತ್ತು ನಾವು ಯಾವ ವಸ್ತುವನ್ನು ನಿಷಿದ್ಧವೆಂದು ಹೇಳುತ್ತಿರಲಿಲ್ಲ. ಇದೇ ರೀತಿ ಇವರ ಮುಂಚಿನವರು ನಿರಾಕಸಿದ್ದರು ಹಾಗೆಯೇ ನಮ್ಮ ಶಿಕ್ಷೆಯನ್ನು ಅವರು ಆಸ್ಪಾದಿಸಿಕೊಂಡರು. ಹೇಳಿರಿ: ನಿಮ್ಮ ಬಳಿ ಯಾವುದಾದರೂ ಪುರಾವೆಯಿದೆಯೇ? ಹಾಗಿದ್ದರೆ ಅದನ್ನು ನಮ್ಮೆದುರಿಗೆ ಪ್ರಕಟಗೊಳಿಸಿರಿ. ನೀವು ಊಹಾಪೋಹಗಳನ್ನು ಮಾತ್ರ ಅನುಸರಿಸುತ್ತಿರುವಿರಿ ಮತ್ತು ಸುಳ್ಳು ಹೇಳುತ್ತಿರುವಿರಿ.
قُلْ فَلِلَّهِ الْحُجَّةُ الْبَالِغَةُ ۖ فَلَوْ شَاءَ لَهَدَاكُمْ أَجْمَعِينَ ۝١٤٩
📖 ಅನುವಾದ ಆಯತ್ 149
ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು (ಇದು ಅವನ ಯುಕ್ತಿಗೆ ವಿರುದ್ಧವಾಗಿದೆ).
قُلْ هَلُمَّ شُهَدَاءَكُمُ الَّذِينَ يَشْهَدُونَ أَنَّ اللَّهَ حَرَّمَ هَٰذَا ۖ فَإِن شَهِدُوا فَلَا تَشْهَدْ مَعَهُمْ ۚ وَلَا تَتَّبِعْ أَهْوَاءَ الَّذِينَ كَذَّبُوا بِآيَاتِنَا وَالَّذِينَ لَا يُؤْمِنُونَ بِالْآخِرَةِ وَهُم بِرَبِّهِمْ يَعْدِلُونَ ۝١٥٠
📖 ಅನುವಾದ ಆಯತ್ 150
ಹೇಳಿರಿ: ಅಲ್ಲಾಹನು ಇವೆಲ್ಲವನ್ನು ನಿಷಿದ್ಧಗೊಳಿಸಿದ್ದಾನೆ ಎಂಬುದಕ್ಕೆ ಸಾಕ್ಷö್ಯವಹಿಸುವ ನಿಮ್ಮ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ನೀವು ಅವರೊಂದಿಗೆ ಸಾಕ್ಷö್ಯವನ್ನು ನೀಡಬೇಡಿರಿ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವ ಪರಲೋಕದಲ್ಲಿ ವಿಶ್ವಾಸವಿಡದವರ ಮತ್ತು ನಿಮ್ಮ ಪ್ರಭುವಿನೊಂದಿಗೆ ಇತರರನ್ನು ಸಮಾನರನ್ನಾಗಿ ನಿಶ್ಚಯಿಸುವವರ ಸ್ವೇಚ್ಛೆಗಳನ್ನು ಅನುಸರಿಸಬೇಡಿರಿ.
۞ قُلْ تَعَالَوْا أَتْلُ مَا حَرَّمَ رَبُّكُمْ عَلَيْكُمْ ۖ أَلَّا تُشْرِكُوا بِهِ شَيْئًا ۖ وَبِالْوَالِدَيْنِ إِحْسَانًا ۖ وَلَا تَقْتُلُوا أَوْلَادَكُم مِّنْ إِمْلَاقٍ ۖ نَّحْنُ نَرْزُقُكُمْ وَإِيَّاهُمْ ۖ وَلَا تَقْرَبُوا الْفَوَاحِشَ مَا ظَهَرَ مِنْهَا وَمَا بَطَنَ ۖ وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۚ ذَٰلِكُمْ وَصَّاكُم بِهِ لَعَلَّكُمْ تَعْقِلُونَ ۝١٥١
📖 ಅನುವಾದ ಆಯತ್ 151
ಹೇಳಿರಿ ಬನ್ನಿರಿ ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ನಾನು ನಿಮಗೆ ಓದಿ ತಿಳಿಸುತ್ತೇನೆ. ನೀವು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಬಾರದು, ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು. ದಾರಿದ್ರö್ಯದಿಂದಾಗಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು. ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿದ್ದೇವೆ ಮತ್ತು ಪ್ರತ್ಯಕ್ಷವಾದ, ಪರೋಕ್ಷವಾದ ನಿರ್ಲಜ್ಜೆಯ ಕೃತ್ಯಗಳ ಬಳಿ ಸುಳಿಯಬೇಡಿರಿ. ಅಲ್ಲಾಹನು ಕೊಲ್ಲುವುದನ್ನು ನಿಷಿದ್ಧಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯಲ್ಲದೇ ಕೊಲ್ಲಬೇಡಿರಿ. ಅವನು ನಿಮಗೆ ನೀವು ಅರಿತುಕೊಳ್ಳಲೆಂದು ಈ ಆದೇಶವನ್ನು ನೀಡಿದ್ದಾನೆ.
وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۖ وَأَوْفُوا الْكَيْلَ وَالْمِيزَانَ بِالْقِسْطِ ۖ لَا نُكَلِّفُ نَفْسًا إِلَّا وُسْعَهَا ۖ وَإِذَا قُلْتُمْ فَاعْدِلُوا وَلَوْ كَانَ ذَا قُرْبَىٰ ۖ وَبِعَهْدِ اللَّهِ أَوْفُوا ۚ ذَٰلِكُمْ وَصَّاكُم بِهِ لَعَلَّكُمْ تَذَكَّرُونَ ۝١٥٢
📖 ಅನುವಾದ ಆಯತ್ 152
ಮತ್ತು ಅನಾಥನು ಪ್ರಬುದ್ಧನಾಗುವ ತನಕ ಅತ್ಯುತ್ತಮವಾದ ಮಾರ್ಗದಿಂದಲೇ ಹೊರತು ಅವನ ಸಂಪತ್ತಿನ ಹತ್ತಿರ ಸುಳಿಯ ಬೇಡಿರಿ. ನೀವು ಅಳತೆ ಮತ್ತು ತೂಕವನ್ನು ನ್ಯಾಯಪೂರ್ವಕವಾಗಿ ಪೂರ್ತಿ ನೀಡಿರಿ. ನಾವು ಯಾವೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿ ಹೊಣೆಯನ್ನು ಹೊರಿಸುವುದಿಲ್ಲ. ನೀವು ಮಾತನಾಡುವಾಗ ನ್ಯಾಯ ಪಾಲಿಸಿರಿ. ಅವನು ನಿಕಟ ಬಂಧುವಾಗಿದ್ದರು ಸರಿಯೇ. ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಕರಾರನ್ನು ಈಡೇರಿಸಿರಿ. ನೀವು ಸ್ಮರಿಸಿಕೊಳ್ಳಲೆಂದು ಅಲ್ಲಾಹನು ನಿಮಗೆ ಈ ಆದೇಶವನ್ನು ನೀಡಿದ್ದಾನೆ.
وَأَنَّ هَٰذَا صِرَاطِي مُسْتَقِيمًا فَاتَّبِعُوهُ ۖ وَلَا تَتَّبِعُوا السُّبُلَ فَتَفَرَّقَ بِكُمْ عَن سَبِيلِهِ ۚ ذَٰلِكُمْ وَصَّاكُم بِهِ لَعَلَّكُمْ تَتَّقُونَ ۝١٥٣
📖 ಅನುವಾದ ಆಯತ್ 153
ಮತ್ತು ಖಂಡಿತವಾಗಿಯೂ ಇದೇ ಧರ್ಮ ನನ್ನ ಋಜುವಾದ ಮಾರ್ಗ, ಆದ್ದರಿಂದ ನೀವು ಅದನ್ನು ಅನುಸರಿಸಿರಿ. ಇತರ ಮಾರ್ಗಗಳನ್ನು ಅನುಸರಿಸಬೇಡಿರಿ. ಅವು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಬೇರ್ಪಡಿಸಿ ಬಿಡುತ್ತವೆ. ನೀವು ಭಯಭಕ್ತಿ ಪಾಲಿಸಲೆಂದು ಅವನು ನಿಮಗೆ ಈ ಆದೇಶವನ್ನು ನೀಡಿರುತ್ತಾನೆ.
ثُمَّ آتَيْنَا مُوسَى الْكِتَابَ تَمَامًا عَلَى الَّذِي أَحْسَنَ وَتَفْصِيلًا لِّكُلِّ شَيْءٍ وَهُدًى وَرَحْمَةً لَّعَلَّهُم بِلِقَاءِ رَبِّهِمْ يُؤْمِنُونَ ۝١٥٤
📖 ಅನುವಾದ ಆಯತ್ 154
ಅನಂತರ ನಾವು ಮೂಸಾರವರಿಗೆ ಇಂತಹ ಗ್ರಂಥವನ್ನು ದಯಪಾಲಿಸಿದೆವು ಅದು ಸನ್ಮಾರ್ಗದಲ್ಲಿ ನಡೆಯುವವರಿಗೆ ಸಂಪೂರ್ಣವಾಗಿತ್ತು ಹಾಗೂ ಅದರಲ್ಲಿ ಅವಶ್ಯವಿರುವ ಪ್ರತಿಯೊಂದರ ವಿವರಣೆಯಿತ್ತು. ಹಾಗೂ ಆ ಗ್ರಂಥವು ಅನುಗ್ರಹವೂ, ಕಾರುಣ್ಯವೂ ಆಗಿತ್ತು. ಏಕೆಂದರೆ ಅವರು ತಮ್ಮ ಪ್ರಭುವನ್ನು ಭೇಟಿಯಾಗುವುದನ್ನು ದೃಢವಾಗಿ ನಂಬಲೆAದಾಗಿದೆ.
وَهَٰذَا كِتَابٌ أَنزَلْنَاهُ مُبَارَكٌ فَاتَّبِعُوهُ وَاتَّقُوا لَعَلَّكُمْ تُرْحَمُونَ ۝١٥٥
📖 ಅನುವಾದ ಆಯತ್ 155
ಈಗ ನಾವು ನಿಮಗಾಗಿ ಅನುಗ್ರಹಪೂರ್ಣ ಗ್ರಂಥ (ಕುರ್‌ಆನ್‌ನÀನ್ನು) ಅವತೀರ್ಣಗೊಳಿಸಿದೆವು. ಆದ್ದರಿಂದ ನೀವು ಇದನ್ನು ಅನುಸರಿಸಿರಿ ಮತ್ತು ಭಯಭಕ್ತಿಯನ್ನು ಪಾಲಿಸಿರಿ. ನಿಮಗೆ ಕಾರುಣ್ಯವು ಲಭಿಸಬಹುದು.
أَن تَقُولُوا إِنَّمَا أُنزِلَ الْكِتَابُ عَلَىٰ طَائِفَتَيْنِ مِن قَبْلِنَا وَإِن كُنَّا عَن دِرَاسَتِهِمْ لَغَافِلِينَ ۝١٥٦
📖 ಅನುವಾದ ಆಯತ್ 156
ನಮಗಿಂತ ಮೊದಲಿದ್ದಂತಹ ಎರಡು ಸಮುದಾಯಗಳಿಗೆ ಮಾತ್ರ (ಯಹೂದಿಯರು ಮತ್ತು ಕ್ರೆöÊಸ್ತರು) ಗ್ರಂಥ ಅವತೀರ್ಣಗೊಳಿಸಲಾಗಿತ್ತು ಮತ್ತು ಅದನ್ನು ಕಲಿಯುವ ಅರಿವು ನಮಗಿರಲಿಲ್ಲ ಎಂದು ನೀವು ಹೇಳಬಾರದೆಂದು (ಕುರ್‌ಆನ್‌ನ್ನು ಅವರ್ತೀಣಗೊಳಿಸಲಾಗಿದೆ.)
أَوْ تَقُولُوا لَوْ أَنَّا أُنزِلَ عَلَيْنَا الْكِتَابُ لَكُنَّا أَهْدَىٰ مِنْهُمْ ۚ فَقَدْ جَاءَكُم بَيِّنَةٌ مِّن رَّبِّكُمْ وَهُدًى وَرَحْمَةٌ ۚ فَمَنْ أَظْلَمُ مِمَّن كَذَّبَ بِآيَاتِ اللَّهِ وَصَدَفَ عَنْهَا ۗ سَنَجْزِي الَّذِينَ يَصْدِفُونَ عَنْ آيَاتِنَا سُوءَ الْعَذَابِ بِمَا كَانُوا يَصْدِفُونَ ۝١٥٧
📖 ಅನುವಾದ ಆಯತ್ 157
ನಮ್ಮ ಮೇಲೆ ಗ್ರಂಥವು ಅವತೀರ್ಣಗೊಳಿಸಿರುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗಿಗಳಾಗಿರುತ್ತಿದ್ದೆವು ಎಂದು ನೀವು ನೆಪ ಹೂಡದಿರಲು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಬಳಿಯಿಂದ ಒಂದು ಸ್ಪಷ್ಟ ಗ್ರಂಥವು, ಮಾರ್ಗದರ್ಶನವು ಮತ್ತು ಕಾರಣ್ಯವು ಬಂದಿದೆ. ಅದಾಗ್ಯೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ನಾವು ಸದ್ಯದಲ್ಲೇ ನಮ್ಮ ದೃಷ್ಟಾಂತಗಳಿAದ ವಿಮುಖರಾಗುವವರಿಗೆ ಅವರ ವಿಮುಖತೆಯ ನಿಮಿತ್ತ ಕಠಿಣ ಶಿಕ್ಷೆಯನ್ನು ನೀಡಲಿರುವೆವು.
هَلْ يَنظُرُونَ إِلَّا أَن تَأْتِيَهُمُ الْمَلَائِكَةُ أَوْ يَأْتِيَ رَبُّكَ أَوْ يَأْتِيَ بَعْضُ آيَاتِ رَبِّكَ ۗ يَوْمَ يَأْتِي بَعْضُ آيَاتِ رَبِّكَ لَا يَنفَعُ نَفْسًا إِيمَانُهَا لَمْ تَكُنْ آمَنَتْ مِن قَبْلُ أَوْ كَسَبَتْ فِي إِيمَانِهَا خَيْرًا ۗ قُلِ انتَظِرُوا إِنَّا مُنتَظِرُونَ ۝١٥٨
📖 ಅನುವಾದ ಆಯತ್ 158
ಅವರು ತಮ್ಮ ಬಳಿಗೆ ದೂತರು ಬರುವುದನ್ನು ಅಥವಾ ತಮ್ಮ ಪ್ರಭು ಅವರ ಬಳಿಗೆ ಬರುವುದನ್ನು ಅಥವಾ ತಮ್ಮ ಪ್ರಭುವಿನ ಯಾವುದಾದರೂ (ದೊಡ್ಡ) ದೃಷ್ಟಾಂತವು ಬರುವುದನ್ನೇ ಕಾಯುತ್ತಿದ್ದಾರೆಯೇ? ತಮ್ಮ ಪ್ರಭುವಿನ ಯಾವುದಾದರೂ ಒಂದು ದೃಷ್ಟಾಂತವು ಬರುವ ದಿನದಂದು ಮೊದಲಿಂದಲೇ ವಿಶ್ವಾಸವಿದ್ದವನ ಅಥವ ತನ್ನ ವಿಶ್ವಾಸದೊಂದಿಗೆ ಯಾವ ಒಳಿತನ್ನು ಮಾಡಿಲ್ಲದವನ ವಿಶ್ವಾಸವು ಅವನಿಗೆ ಯಾವ ಪ್ರಯೋಜನಕ್ಕೂ ಬಾರದು. ಹೇಳಿರಿ: ನೀವು ಕಾಯುತ್ತಿರಿ. ನಾವೂ ಕಾಯುತ್ತಿದ್ದೇವೆ.
إِنَّ الَّذِينَ فَرَّقُوا دِينَهُمْ وَكَانُوا شِيَعًا لَّسْتَ مِنْهُمْ فِي شَيْءٍ ۚ إِنَّمَا أَمْرُهُمْ إِلَى اللَّهِ ثُمَّ يُنَبِّئُهُم بِمَا كَانُوا يَفْعَلُونَ ۝١٥٩
📖 ಅನುವಾದ ಆಯತ್ 159
(ಓ ಪೈಗಂಬರರೇ) ನಿಸ್ಸಂಶಯವಾಗಿಯು ತಮ್ಮ ಧರ್ಮವನ್ನು ವಿಭಜಿಸಿ ವಿವಿಧ ಪಂಗಡಗಳಾಗಿ ಬೇರ್ಪಟ್ಟವರೊಡನೆ ನಿಮಗೆ ಯಾವುದೇ ಸಂಬAಧವಿಲ್ಲ. ಅವರ ಪ್ರಕರಣ ಅಲ್ಲಾಹನ ಬಳಿಯಲ್ಲಿದೆ. ಅನಂತರ ಅವನು ಅವರಿಗೆ ಅವರ ಕೃತ್ಯಗಳನ್ನು ತಿಳಿಸಿಕೊಡಲಿದ್ದಾನೆ.
مَن جَاءَ بِالْحَسَنَةِ فَلَهُ عَشْرُ أَمْثَالِهَا ۖ وَمَن جَاءَ بِالسَّيِّئَةِ فَلَا يُجْزَىٰ إِلَّا مِثْلَهَا وَهُمْ لَا يُظْلَمُونَ ۝١٦٠
📖 ಅನುವಾದ ಆಯತ್ 160
ಯಾರು ಒಳಿತು ಮಾಡುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಕೆಡುಕನ್ನು ಮಾಡುತ್ತಾನೋ ಅವನಿಗೆ ಅದರಷ್ಟೇ ಶಿಕ್ಷೆಯು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾರದು.
قُلْ إِنَّنِي هَدَانِي رَبِّي إِلَىٰ صِرَاطٍ مُّسْتَقِيمٍ دِينًا قِيَمًا مِّلَّةَ إِبْرَاهِيمَ حَنِيفًا ۚ وَمَا كَانَ مِنَ الْمُشْرِكِينَ ۝١٦١
📖 ಅನುವಾದ ಆಯತ್ 161
ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ. ಅಲ್ಲಾಹನಿಗೆ ಏಕನಿಷ್ಠನಾದ ಇಬ್ರಾಹೀಮರ ಧರ್ಮವಾಗಿದೆ ಮತ್ತು ಅವರು ದೇವಸಹಭಾಗಿತ್ವ ನಿಶ್ಚಯಿಸುವವರಲ್ಲಿ ಸೇರಿರಲಿಲ್ಲ.
قُلْ إِنَّ صَلَاتِي وَنُسُكِي وَمَحْيَايَ وَمَمَاتِي لِلَّهِ رَبِّ الْعَالَمِينَ ۝١٦٢
📖 ಅನುವಾದ ಆಯತ್ 162
ಹೇಳಿರಿ: ಖಂಡಿತವಾಗಿಯು ನನ್ನ ನಮಾಝ್, ನನ್ನ ಸಕಲ ಆರಾಧನೆಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗಾಗಿದೆ.
لَا شَرِيكَ لَهُ ۖ وَبِذَٰلِكَ أُمِرْتُ وَأَنَا أَوَّلُ الْمُسْلِمِينَ ۝١٦٣
📖 ಅನುವಾದ ಆಯತ್ 163
ಅವನಿಗೆ ಯಾರೂ ಸಹಭಾಗಿಗಳಿಲ್ಲ ಮತ್ತು ನನಗೆ ಇದನ್ನೇ ಆಜ್ಞಾಪಿಸಲಾಗಿದೆ ಮತ್ತು ವಿಧೇಯರಾಗುವವರ ಪೈಕಿ ನಾನು ಮೊದಲಿಗನಾಗಿರುವೆನು.
قُلْ أَغَيْرَ اللَّهِ أَبْغِي رَبًّا وَهُوَ رَبُّ كُلِّ شَيْءٍ ۚ وَلَا تَكْسِبُ كُلُّ نَفْسٍ إِلَّا عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۚ ثُمَّ إِلَىٰ رَبِّكُم مَّرْجِعُكُمْ فَيُنَبِّئُكُم بِمَا كُنتُمْ فِيهِ تَخْتَلِفُونَ ۝١٦٤
📖 ಅನುವಾದ ಆಯತ್ 164
ಹೇಳಿರಿ: ಅಲ್ಲಾಹನೇ, ಸರ್ವ ವಸ್ತುಗಳ ಒಡೆಯನಾಗಿರುವಾಗ ಅವನ ಹೊರತು ಇತರರನ್ನು ನಾನು ಪ್ರಭುವನ್ನಾಗಿ ಅರಸುವುದೇ? ಪ್ರತಿಯೊಬ್ಬನೂ ತಾನು ಮಾಡಿರುವುದಕ್ಕೆ ತಾನೇ ಹೊಣೆಗಾರನಾಗಿದ್ದಾನೆ. ಮತ್ತು ಯಾವೊಬ್ಬ ಭಾರ ಹೊರುವವನು ಇನ್ನೊಬ್ಬನ ಭಾರವನ್ನು ಹೊರಲಾರನು. ಅನಂತರ ನಿಮೆಲ್ಲರಿಗೂ ನಿಮ್ಮ ಪ್ರಭುವಿನೆಡೆಗೆ ಮರಳಲಿಕ್ಕಿದೆ. ತರುವಾಯ ಅವನು ನೀವು ಭಿನ್ನಾಭಿಪ್ರಾಯ ಹೊಂದಿದ್ದ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು.
وَهُوَ الَّذِي جَعَلَكُمْ خَلَائِفَ الْأَرْضِ وَرَفَعَ بَعْضَكُمْ فَوْقَ بَعْضٍ دَرَجَاتٍ لِّيَبْلُوَكُمْ فِي مَا آتَاكُمْ ۗ إِنَّ رَبَّكَ سَرِيعُ الْعِقَابِ وَإِنَّهُ لَغَفُورٌ رَّحِيمٌ ۝١٦٥
📖 ಅನುವಾದ ಆಯತ್ 165
ಮತ್ತು ಅವನೇ ನಿಮ್ಮನ್ನು ಭೂಮಿಯಲ್ಲಿ (ಪೂರ್ವಿಕರ) ಉತ್ತರಾಧಿಕಾರಿಗಳನ್ನಾಗಿ ಮಾಡಿದವನು ಮತ್ತು ಅವನು ನಿಮಗೆ ಅನುಗ್ರಹ (ಅರ್ಹತೆಗಳನ್ನು) ನೀಡುವುದರಲ್ಲಿ ಪರೀಕ್ಷಿಸಲೆಂದು ನಿಮ್ಮಲ್ಲಿ ಕೆಲವರಿಗೆ ಬೇರೆ ಕೆಲವರಿಗಿಂತ ಉನ್ನತ ಪದವಿಗಳನ್ನು ನೀಡಿದನು. ಖಂಡಿತವಾಗಿಯು ನಿಮ್ಮ ಪ್ರಭು ಶೀಘ್ರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಖಂಡಿತವಾಗಿಯು ಅವನು ಅತ್ಯಧಿಕವಾಗಿ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
← 5 ಅಲ್-ಅನ್ಆಮ್ (6/114) 7 →
ಓದಿ ಸೂರಾ ಅಲ್-ಅನ್ಆಮ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

6الأنعام Al-An'am 📚 165 ಆಯತ್ مكية

ಆಯತ್‌ವಾರು – ಸೂರಾ ಅಲ್-ಅನ್ಆಮ್ — 165 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers