ಸೂರಾ ಅಲ್-ಇಸ್ರಾ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಇಸ್ರಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್ನ ಅರ್ಥ. (111 ಆಯತ್ — مكية). ಅಲ್-ಇಸ್ರಾ ಆಲಿಸಿ, ಅಲ್-ಇಸ್ರಾ ಅನುವಾದ, ಅಲ್-ಇಸ್ರಾ mp3, ಅಲ್-ಇಸ್ರಾ pdf.ಸೂರಾ ಅಲ್-ಇಸ್ರಾ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
سُبْحَانَ الَّذِي أَسْرَىٰ بِعَبْدِهِ لَيْلًا مِّنَ الْمَسْجِدِ الْحَرَامِ إِلَى الْمَسْجِدِ الْأَقْصَى الَّذِي بَارَكْنَا حَوْلَهُ لِنُرِيَهُ مِنْ آيَاتِنَا ۚ إِنَّهُ هُوَ السَّمِيعُ الْبَصِيرُ ١
📖 ಅನುವಾದ
ಆಯತ್ 1
ನಾವು ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದು ತನ್ನ ದಾಸನನ್ನು (ಮುಹಮ್ಮದ್) ರಾತ್ರೋ ರಾತ್ರಿ ಮಸ್ಜಿದುಲ್ ಹರಾಮ್ನಿಂದ ನಾವು ಅದರ ಪರಿಸರವನ್ನು ಸಮೃದ್ಧಗೊಳಿಸಿರುವಂತಹ ಮಸ್ಜಿದುಲ್ ಅಕ್ಸಾದೆಡೆಗೆ ಕರೆದುಕೊಂಡು ಹೋದವನು (ಅಲ್ಲಾಹ್), ಪರಮ ಪಾವನನು ನಿಶ್ಚಯವಾಗಿಯೂ ಅಲ್ಲಾಹನು ಚೆನ್ನಾಗಿ ಆಲಿಸುವವನು, ಚೆನ್ನಾಗಿ ಹೇಳುವವನು ಆಗಿದ್ದಾನೆ.
وَآتَيْنَا مُوسَى الْكِتَابَ وَجَعَلْنَاهُ هُدًى لِّبَنِي إِسْرَائِيلَ أَلَّا تَتَّخِذُوا مِن دُونِي وَكِيلًا ٢
📖 ಅನುವಾದ
ಆಯತ್ 2
ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು ಮತ್ತು ನನ್ನ ಹೊರತು ಯಾರನ್ನೂ ಕಾರ್ಯಸಾಧಕನನ್ನಾಗಿ ಮಾಡಬಾರದೆಂಬ ಆಜ್ಞೆಯೊಂದಿಗೆ ನಾವು ಅದನ್ನು ಇಸ್ರಾಯೀಲ್ ಸಂತತಿಗಳೆಡೆಗೆ ಮಾರ್ಗದರ್ಶನವನ್ನಾಗಿ ಮಾಡಿದೆವು.
ذُرِّيَّةَ مَنْ حَمَلْنَا مَعَ نُوحٍ ۚ إِنَّهُ كَانَ عَبْدًا شَكُورًا ٣
📖 ಅನುವಾದ
ಆಯತ್ 3
(ಓ ಜನರೇ) ನೀವು ನೂಹ್ರವರ ಜೊತೆ ಹಡಗಿನಲ್ಲಿ ನಾವು ಸವಾರಿಗೊಳಿಸಿದವರ ಸಂತತಿಗಳಾಗಿದ್ದೀರಿ. ನಿಜಕ್ಕೂ ಅವರು ಓರ್ವ ಕೃತಜ್ಞ ದಾಸರಾಗಿದ್ದರು.
وَقَضَيْنَا إِلَىٰ بَنِي إِسْرَائِيلَ فِي الْكِتَابِ لَتُفْسِدُنَّ فِي الْأَرْضِ مَرَّتَيْنِ وَلَتَعْلُنَّ عُلُوًّا كَبِيرًا ٤
📖 ಅನುವಾದ
ಆಯತ್ 4
ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್)ಗ್ರಂಥದಲ್ಲಿ. ನೀವು ಭೂಮಿಯಲ್ಲಿ ಎರಡು ಬಾರಿ ಕ್ಷೆÆÃಭೆ ಹರಡಲಿದ್ದೀರಿ ಮತ್ತು ಮಹಾ ಅತಿಕ್ರಮಗಳನ್ನು ಎಸಗುವಿರಿ ಎಂದು ವಿಧಿಸಿದ್ದೇವು. (ಎಚ್ಚರಿಸಿದ್ದೆವು)
فَإِذَا جَاءَ وَعْدُ أُولَاهُمَا بَعَثْنَا عَلَيْكُمْ عِبَادًا لَّنَا أُولِي بَأْسٍ شَدِيدٍ فَجَاسُوا خِلَالَ الدِّيَارِ ۚ وَكَانَ وَعْدًا مَّفْعُولًا ٥
📖 ಅನುವಾದ
ಆಯತ್ 5
ಅವೆರಡು ವಾಗ್ದಾನಗಳ ಪೈಕಿ ಮೊದಲನೆಯದು ಬರುತ್ತಲೇ ನಾವು ನಿಮ್ಮ ವಿರುದ್ಧ ಮಹಾ ರಣಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮ ಮನೆಗಳೊಳಗೆ ನುಗ್ಗಿದರು ಮತ್ತು ಅಲ್ಲಾಹನ ಈ ವಾಗ್ದಾನವು ಪೂರ್ತಿಯಾಗಲೇ ಬೇಕಿತ್ತು.
ثُمَّ رَدَدْنَا لَكُمُ الْكَرَّةَ عَلَيْهِمْ وَأَمْدَدْنَاكُم بِأَمْوَالٍ وَبَنِينَ وَجَعَلْنَاكُمْ أَكْثَرَ نَفِيرًا ٦
📖 ಅನುವಾದ
ಆಯತ್ 6
ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯದ ಸರದಿಯನ್ನು ಮರುಕಳಿಸಿಕೊಟ್ಟೆವು ಮತ್ತು ಸಂಪತ್ತು, ಸಂತಾನಗಳ ಮೂಲಕ ನಿಮಗೆ ಸಹಾಯವನ್ನು ನೀಡಿದೆವು ಹಾಗೂ ನಾವು ನಿಮ್ಮನ್ನು ಸಂಖ್ಯಾ ಬಲವುಳ್ಳವರನ್ನಾಗಿ ಮಾಡಿದೆವು.
إِنْ أَحْسَنتُمْ أَحْسَنتُمْ لِأَنفُسِكُمْ ۖ وَإِنْ أَسَأْتُمْ فَلَهَا ۚ فَإِذَا جَاءَ وَعْدُ الْآخِرَةِ لِيَسُوءُوا وُجُوهَكُمْ وَلِيَدْخُلُوا الْمَسْجِدَ كَمَا دَخَلُوهُ أَوَّلَ مَرَّةٍ وَلِيُتَبِّرُوا مَا عَلَوْا تَتْبِيرًا ٧
📖 ಅನುವಾದ
ಆಯತ್ 7
ನೀವು ಒಳಿತು ಮಾಡುವುದಾದರೆ ಸ್ವತಃ ನಿಮಗಾಗಿಯೇ ಒಳಿತು ಮಾಡುವಿರಿ ಮತ್ತು ನೀವು ಕೆಡುಕು ಮಾಡುವುದಾದರೆ ಸ್ವತಃ ಅದು ನಿಮಗಾಗಿಯೇ ಇರುವುದು. ಅನಂತರ ಮತ್ತೊಂದು ವಾಗ್ದಾನದ ಸಮಯ ಬಂದಾಗ ನಿಮ್ಮ ಮುಖಗಳನ್ನು ವಿರೂಪಗೊಳಿಸಲೆಂದೂ, ಮೊದಲ ಬಾರಿಯಂತೆಯೇ ಪುನಃ ಆ ಮಸೀದಿಗೆ ನುಗ್ಗಲೆಂದೂ ಹಾಗೂ ಅವರು ನಿಯಂತ್ರಣ ಸಾಧಿಸಿದೆಲ್ಲವನ್ನು, ಮೂಲೋತ್ಪಾಟನೆ ಮಾಡಲೆಂದೂ (ನಾವು ಬೇರೆ ದಾಸರನ್ನು) ಕಳುಹಿಸಿದೆವು.
عَسَىٰ رَبُّكُمْ أَن يَرْحَمَكُمْ ۚ وَإِنْ عُدتُّمْ عُدْنَا ۘ وَجَعَلْنَا جَهَنَّمَ لِلْكَافِرِينَ حَصِيرًا ٨
📖 ಅನುವಾದ
ಆಯತ್ 8
ನಿಮ್ಮ ಪ್ರಭುವು ನಿಮ್ಮ ಮೇಲೆ ಕೃಪೆ ತೋರಲೂಬಹುದು. ಅದರೆ ಇನ್ನು ಮುಂದೆಯೂ ನೀವು ಅದೇ ಕೃತ್ಯವನ್ನು ಮಾಡಿದರೆ ನಾವು ಸಹ ಪುನಃ ಹಾಗೆಯೇ ಮಾಡುವೆವು ಹಾಗೂ ನಾವು ನರಕವನ್ನು ಸತ್ಯನಿಷೇಧಿಗಳಿಗೆ ಸೆರೆಮನೆಯನ್ನಾಗಿ ಮಾಡಿರುವೆವು.
إِنَّ هَٰذَا الْقُرْآنَ يَهْدِي لِلَّتِي هِيَ أَقْوَمُ وَيُبَشِّرُ الْمُؤْمِنِينَ الَّذِينَ يَعْمَلُونَ الصَّالِحَاتِ أَنَّ لَهُمْ أَجْرًا كَبِيرًا ٩
📖 ಅನುವಾದ
ಆಯತ್ 9
ನಿಶ್ಚಯವಾಗಿಯು ಈ ಕುರ್ಆನ್ ಅತ್ಯಂತ ಋಜುವಾದ ಮಾರ್ಗಕ್ಕೆ ಮುನ್ನಡೆಸುತ್ತದೆ ಮತ್ತು ಸತ್ಕರ್ಮಗಳನ್ನೆಸಗುವ ಸತ್ಯವಿಶ್ವಾಸಿಗಳಿಗೆ ದೊಡ್ಡ ಪ್ರತಿಫಲವಿದೆ ಎಂಬ ಸುವಾರ್ತೆ ನೀಡುತ್ತದೆ.
وَأَنَّ الَّذِينَ لَا يُؤْمِنُونَ بِالْآخِرَةِ أَعْتَدْنَا لَهُمْ عَذَابًا أَلِيمًا ١٠
📖 ಅನುವಾದ
ಆಯತ್ 10
ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವನ್ನಿಡದವರಿಗೆ ನಾವು ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿದ್ದೇವೆ.
وَيَدْعُ الْإِنسَانُ بِالشَّرِّ دُعَاءَهُ بِالْخَيْرِ ۖ وَكَانَ الْإِنسَانُ عَجُولًا ١١
📖 ಅನುವಾದ
ಆಯತ್ 11
ಮಾನವನು ತನ್ನ ಒಳಿತಿಗೆ ಪ್ರಾರ್ಥಿಸುವಂತೆಯೇ ಕೆಡುಕಿಗೂ ಪ್ರಾರ್ಥಿಸತೊಡಗುತ್ತಾನೆ ಮತ್ತು ಮಾನವನು ಮಹಾ ದುಡುಕು ಸ್ವಭಾವದವನಾಗಿದ್ದಾನೆ.
وَجَعَلْنَا اللَّيْلَ وَالنَّهَارَ آيَتَيْنِ ۖ فَمَحَوْنَا آيَةَ اللَّيْلِ وَجَعَلْنَا آيَةَ النَّهَارِ مُبْصِرَةً لِّتَبْتَغُوا فَضْلًا مِّن رَّبِّكُمْ وَلِتَعْلَمُوا عَدَدَ السِّنِينَ وَالْحِسَابَ ۚ وَكُلَّ شَيْءٍ فَصَّلْنَاهُ تَفْصِيلًا ١٢
📖 ಅನುವಾದ
ಆಯತ್ 12
ರಾತ್ರಿ ಮತ್ತು ಹಗಲನ್ನು ನಾವು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು. ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಿರೆಂದು ವರ್ಷಗಳ ಗಣನೆಯನ್ನು, ಲೆಕ್ಕಾಚಾರವನ್ನು ತಿಳಿದುಕೊಳ್ಳೆಂದೂ ನಾವು ರಾತ್ರಿಯ ದೃಷ್ಟಾಂತವನ್ನು ಪ್ರಕಾಶರಹಿತವನ್ನಾಗಿಯೂ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಯÀವನ್ನಾಗಿಯೂ ಮಾಡಿದೆವು ಮತ್ತು ಪ್ರತಿಯೊಂದನ್ನು ನಾವು ಬಹಳ ಸ್ಪಷ್ಟವಾಗಿ ವಿವರಿಸಿ ಕೊಟ್ಟಿದ್ದೇವೆ.
وَكُلَّ إِنسَانٍ أَلْزَمْنَاهُ طَائِرَهُ فِي عُنُقِهِ ۖ وَنُخْرِجُ لَهُ يَوْمَ الْقِيَامَةِ كِتَابًا يَلْقَاهُ مَنشُورًا ١٣
📖 ಅನುವಾದ
ಆಯತ್ 13
ನಾವು ಪ್ರತಿಯೊಬ್ಬ ಮನುಷ್ಯನ ಕರ್ಮಗಳನ್ನು ಅವನ ಕೊರಳಿಗೆ ಕಟ್ಟಿಬಿಟ್ಟದ್ದೇವೆ ಮತ್ತು ಪ್ರಳಯ ದಿನದಂದು ನಾವು ಅವನಿಗಾಗಿ ಒಂದು ಗ್ರಂಥವನ್ನು ಹೊರ ತರುವೆವು. ಅವನು ಅದನ್ನು ತನ್ನ ಮುಂದೆ ತೆರೆದಿಟ್ಟಿರುವುದಾಗಿಯೇ ಕಾಣುವನು.
اقْرَأْ كِتَابَكَ كَفَىٰ بِنَفْسِكَ الْيَوْمَ عَلَيْكَ حَسِيبًا ١٤
📖 ಅನುವಾದ
ಆಯತ್ 14
ಸ್ವತಃ ನೀನೇ ನಿನ್ನ ಕರ್ಮಗ್ರಂಥವನ್ನು ಓದು. ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು.
مَّنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَن ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا ١٥
📖 ಅನುವಾದ
ಆಯತ್ 15
ಯಾರು ಸನ್ಮಾರ್ಗ ಸ್ವೀಕರಿಸುತ್ತಾನೋ ಅವನು ಸ್ವತಃ ತನ್ನ ಒಳಿತಿಗೆಂದೇ ಸನ್ಮಾರ್ಗ ಸ್ವೀಕರಿಸುತ್ತಾನೆ ಹಾಗೂ ಯಾರು ಪಥ ಭ್ರಷ್ಟನಾಗುತ್ತನೋ ಪಥ ಭ್ರಷ್ಟತೆಯ ಭಾರವು ಅವನ ಮೇಲೆಯೇ ಇರುವುದು ಮತ್ತು ಭಾರ ಹೊತ್ತ ಯಾವೊಬ್ಬನೂ ಬೇರೊಬ್ಬ ವ್ಯಕ್ತಿಯ ಭಾರವನ್ನು ಹೊರುವುದಿಲ್ಲ ಮತ್ತು ಒಬ್ಬ ಸಂದೇಶವಾಹಕನನ್ನು ಕಳುಹಿಸುವ ಮೊದಲೇ (ಯಾವುದೇ ಜನಾಂಗವನ್ನು) ನಾವು ಶಿಕ್ಷಿಸುವುದಿಲ್ಲ.
وَإِذَا أَرَدْنَا أَن نُّهْلِكَ قَرْيَةً أَمَرْنَا مُتْرَفِيهَا فَفَسَقُوا فِيهَا فَحَقَّ عَلَيْهَا الْقَوْلُ فَدَمَّرْنَاهَا تَدْمِيرًا ١٦
📖 ಅನುವಾದ
ಆಯತ್ 16
ನಾವು ಯಾವುದಾದರೂ ನಾಡನ್ನು ನಾಶಗೊಳಿಸಲಿಚ್ಛಿಸಿದಾಗ ಅಲ್ಲಿನ ಸುಖ ಲೋಲುಪರಿಗೆ ಆದೇಶ ನೀಡುತ್ತೇವೆ ಮತ್ತು ಅವರು ಆ ನಾಡಲ್ಲಿ (ಆದೇಶಗಳನ್ನು) ಧಿಕ್ಕಾರವನ್ನೆಸಗತೊಡಗುತ್ತಾರೆ. ಆಗ ಅವರ ಮೇಲೆ (ಯಾತನೆಯ) ಮಾತು ನಿಜವಾಗಿ ಬಿಡುತ್ತದೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತೇವೆ.
وَكَمْ أَهْلَكْنَا مِنَ الْقُرُونِ مِن بَعْدِ نُوحٍ ۗ وَكَفَىٰ بِرَبِّكَ بِذُنُوبِ عِبَادِهِ خَبِيرًا بَصِيرًا ١٧
📖 ಅನುವಾದ
ಆಯತ್ 17
ನೂಹರ ನಂತರ ನಾವು ಅದೇಷ್ಟೋ ತಲೆಮಾರುಗಳನ್ನು ನಾಶಗೊಳಿಸಿರುವೆವು ಮತ್ತು ತನ್ನ ದಾಸರ ಪಾಪಗಳನ್ನು ಸೂಕ್ಷö್ಮವಾಗಿ ತಿಳಿಯಲಿಕ್ಕು, ವೀಕ್ಷಿಸಲಿಕ್ಕು ನಿನ್ನ ಪ್ರಭುವೇ ಸಾಕು.
مَّن كَانَ يُرِيدُ الْعَاجِلَةَ عَجَّلْنَا لَهُ فِيهَا مَا نَشَاءُ لِمَن نُّرِيدُ ثُمَّ جَعَلْنَا لَهُ جَهَنَّمَ يَصْلَاهَا مَذْمُومًا مَّدْحُورًا ١٨
📖 ಅನುವಾದ
ಆಯತ್ 18
ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ ನಾವು ಅವನಿಗೆ ನರಕವನ್ನು ನಿಶ್ಚಯಿಸುತ್ತೇವೆ. ಅಲ್ಲಿ ಅವನು ಅಪಮಾನಿತನೂ, ತಿರಸ್ಕರಿಸಲ್ಪಟ್ಟವನೂ ಆಗಿ ಪ್ರವೇಶಿಸುವನು.
وَمَنْ أَرَادَ الْآخِرَةَ وَسَعَىٰ لَهَا سَعْيَهَا وَهُوَ مُؤْمِنٌ فَأُولَٰئِكَ كَانَ سَعْيُهُم مَّشْكُورًا ١٩
📖 ಅನುವಾದ
ಆಯತ್ 19
ಮತ್ತು ಯಾರಾದರು ಪರಲೋಕವನ್ನು ಅಪೇಕ್ಷಿಸಿ ಹಾಗೂ ಸತ್ಯ ವಿಶ್ವಾಸಿಯಾಗಿದ್ದುಕೊಂಡು ಅದಕ್ಕಾಗಿ ಶ್ರಮ ವಹಿಸಬೇಕಾದಂತೆ ಶ್ರಮ ವಹಿಸಿದರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು.
كُلًّا نُّمِدُّ هَٰؤُلَاءِ وَهَٰؤُلَاءِ مِنْ عَطَاءِ رَبِّكَ ۚ وَمَا كَانَ عَطَاءُ رَبِّكَ مَحْظُورًا ٢٠
📖 ಅನುವಾದ
ಆಯತ್ 20
(ಓ ಪೈಗಂಬರರೇ) ನಾವು ಪ್ರತಿಯೊಬ್ಬರಿಗೂ (ಲೌಕಿಕ ಕೊಡುಗೆಗಳಿಂದ) ನೀಡುವೆವು ಅವರಿಗೂ (ಪರಲೋಕ ಬಯಸುವವರಿಗೆ), ಇವರಿಗೂ (ಇಹಲೋಕ ಬಹಯಸುವವರಿಗೆ) ಮತ್ತು ನಿಮ್ಮ ಪ್ರಭುವಿನ ಕೊಡುಗೆಯೂ (ಯಾರಿಂದರಲೂ) ತಡೆದಿರಿಸಲಾಗದು.
انظُرْ كَيْفَ فَضَّلْنَا بَعْضَهُمْ عَلَىٰ بَعْضٍ ۚ وَلَلْآخِرَةُ أَكْبَرُ دَرَجَاتٍ وَأَكْبَرُ تَفْضِيلًا ٢١
📖 ಅನುವಾದ
ಆಯತ್ 21
ನಾವು ಅವರ ಪೈಕಿ ಕೆಲವರನ್ನು ಇನ್ನು ಕೆಲವರ ಮೇಲೆ ಹೇಗೆ ಶ್ರೇಷ್ಠತೆ ನೀಡಿದ್ದೇವೆಂಬುದನ್ನು ನೋಡಿರಿ. ಪರಲೋಕವಂತು ಸ್ಥಾನಮಾನಗಳಲ್ಲಿ ಹೆಚ್ಚು ಹಿರಿದಾದುದ್ದು ಮತ್ತು ಶ್ರೇಷ್ಠತೆಯಲ್ಲೂ ಅತ್ಯಂತ ಹಿರಿದಾದ್ದುದಾಗಿದೆ.
لَّا تَجْعَلْ مَعَ اللَّهِ إِلَٰهًا آخَرَ فَتَقْعُدَ مَذْمُومًا مَّخْذُولًا ٢٢
📖 ಅನುವಾದ
ಆಯತ್ 22
ನೀವು ಅಲ್ಲಾಹನೊಂದಿಗೆ ಬೇರಾವ ಆರಾಧ್ಯನನ್ನು ನಿಶ್ಚಯಿಸದಿರಿ. ಅನ್ಯಥಾ ನೀವು ನಿಂದ್ಯರಾಗಿಯೂ, ನಿಸ್ಸಹಾಯಕರಾಗಿಯೂ ಕುಳಿತು ಬಿಡುವಿರಿ.
۞ وَقَضَىٰ رَبُّكَ أَلَّا تَعْبُدُوا إِلَّا إِيَّاهُ وَبِالْوَالِدَيْنِ إِحْسَانًا ۚ إِمَّا يَبْلُغَنَّ عِندَكَ الْكِبَرَ أَحَدُهُمَا أَوْ كِلَاهُمَا فَلَا تَقُل لَّهُمَا أُفٍّ وَلَا تَنْهَرْهُمَا وَقُل لَّهُمَا قَوْلًا كَرِيمًا ٢٣
📖 ಅನುವಾದ
ಆಯತ್ 23
ನೀವು ಅವನ ಹೊರತು ಇನ್ನಾರನ್ನೂ ಆರಾಧಿಸಕೂಡದು ಮತ್ತು ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಿಮ್ಮ ಪ್ರಭೂ ತೀರ್ಮಾನಿಸಿದ್ದಾನೆ. ನಿಮ್ಮ ಜೀವನದಲ್ಲಿ ಅವರಿಬ್ಬರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧಾಪ್ಯವನ್ನು ತಲುಪಿದರೆ ನೀವು ಅವರಿಗೆ ಛೇ ಎಂದು ಹೇಳಬೇಡಿ ಮತ್ತು ಅವರಿಗೆ ಗದರಿಸಬೇಡಿರಿ, ಮಾತ್ರವಲ್ಲ ನೀವು ಅವರೊಂದಿಗೆ ಗೌರವಪೂರ್ವಕವಾಗಿ ಮಾತನ್ನಾಡಿರಿ.
وَاخْفِضْ لَهُمَا جَنَاحَ الذُّلِّ مِنَ الرَّحْمَةِ وَقُل رَّبِّ ارْحَمْهُمَا كَمَا رَبَّيَانِي صَغِيرًا ٢٤
📖 ಅನುವಾದ
ಆಯತ್ 24
ಮತ್ತು ಕರುಣೆಯಿಂದ ಅವರ ಮುಂದೆ ನಯವಿನಯದ ಭುಜವನ್ನು ತಗ್ಗಿಸಿರಿ ಹಾಗೂ ಓ ನನ್ನ ಪ್ರಭುವೇ, ಅವರು ನನ್ನ ಬಾಲ್ಯದಲ್ಲಿ ಪಾಲನೆ-ಪೋಷಣೆ ಮಾಡಿದಂತೆಯೇ ಅವರ ಮೇಲೆ ಕರುಣೆ ತೋರು ಎಂದು ಪ್ರಾರ್ಥಿಸಿರಿ.
رَّبُّكُمْ أَعْلَمُ بِمَا فِي نُفُوسِكُمْ ۚ إِن تَكُونُوا صَالِحِينَ فَإِنَّهُ كَانَ لِلْأَوَّابِينَ غَفُورًا ٢٥
📖 ಅನುವಾದ
ಆಯತ್ 25
ನಿಮ್ಮ ಪ್ರಭುವು ನಿಮ್ಮ ಅಂತರAಗದಲ್ಲಿರುವುದನ್ನು ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿದ್ದರೆ ಖಂಡಿತವಾಗಿಯೂ ಅವನು ಪಶ್ಚಾತ್ತಾಪ ಹೊಂದಿ ಮರಳಿ ಬರುವವರಿಗೆ ಕ್ಷಮಾಶೀಲನಾಗಿರುತ್ತಾನೆ.
وَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تُبَذِّرْ تَبْذِيرًا ٢٦
📖 ಅನುವಾದ
ಆಯತ್ 26
ನೀವು ಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಯಾತ್ರಿಕರಿಗೆ ಅವರ ಹಕ್ಕನ್ನು ಕೊಡಿ ಮತ್ತು ದುಂದುವೆಚ್ಚ ಮಾಡಬೇಡಿರಿ.
إِنَّ الْمُبَذِّرِينَ كَانُوا إِخْوَانَ الشَّيَاطِينِ ۖ وَكَانَ الشَّيْطَانُ لِرَبِّهِ كَفُورًا ٢٧
📖 ಅನುವಾದ
ಆಯತ್ 27
ದುಂದುವೆಚ್ಚ ಮಾಡುವವರು ಶೈತಾನನ ಸಹೋದರರಾಗಿದ್ದಾರೆ ಮತ್ತು ಶೈತಾನನು ತನ್ನ ಪ್ರಭುವಿನ ಕೃತಘ್ನನಾಗಿದ್ದಾನೆ.
وَإِمَّا تُعْرِضَنَّ عَنْهُمُ ابْتِغَاءَ رَحْمَةٍ مِّن رَّبِّكَ تَرْجُوهَا فَقُل لَّهُمْ قَوْلًا مَّيْسُورًا ٢٨
📖 ಅನುವಾದ
ಆಯತ್ 28
ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ) ವಿಮುಖನಾಗಬೇಕಾಗಿ ಬಂದರೂ ನೀವು ಅವರೊಂದಿಗೆ ಮೃದುತ್ವದೊಂದಿಗೆ ಮಾತನಾಡಿರಿ.
وَلَا تَجْعَلْ يَدَكَ مَغْلُولَةً إِلَىٰ عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُومًا مَّحْسُورًا ٢٩
📖 ಅನುವಾದ
ಆಯತ್ 29
ನೀವು ನಿಮ್ಮ ಕೈಯನ್ನು (ಜಿಪುಣತನದಿಂದ) ನಿಮ್ಮ ಕೊರಳಿಗೆಸಟೆದುಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಬೇಡಿ. ಅನ್ಯಥಾ ನೀವು ನಿಂದಿಸಲ್ಪಟ್ಟವರಾಗಿಯೂ, ನಿಸ್ಸಹಾಯಕರಗಿಯೂ ಕುಳಿತಿರಬೇಕಾದಿತು.
إِنَّ رَبَّكَ يَبْسُطُ الرِّزْقَ لِمَن يَشَاءُ وَيَقْدِرُ ۚ إِنَّهُ كَانَ بِعِبَادِهِ خَبِيرًا بَصِيرًا ٣٠
📖 ಅನುವಾದ
ಆಯತ್ 30
ನಿಶ್ಚಯವಾಗಿಯು ನಿಮ್ಮ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತರಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ನಿಜವಾಗಿಯು ಅವನು ತನ್ನ ದಾಸರ ವಿಚಾರದಲ್ಲಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
وَلَا تَقْتُلُوا أَوْلَادَكُمْ خَشْيَةَ إِمْلَاقٍ ۖ نَّحْنُ نَرْزُقُهُمْ وَإِيَّاكُمْ ۚ إِنَّ قَتْلَهُمْ كَانَ خِطْئًا كَبِيرًا ٣١
📖 ಅನುವಾದ
ಆಯತ್ 31
ನೀವು ನಿಮ್ಮ ಮಕ್ಕಳನ್ನು ದಾರಿದ್ರö್ಯದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುತ್ತೇವೆ ಮತ್ತು ನಿಮಗೂ ಸಹ ನಿಸ್ಸಂಶಯವಾಗಿಯು ಅವರನ್ನು ಕೊಲ್ಲುವುದು ಮಹಾಅಪರಾಧವಾಗಿದೆ.
وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا ٣٢
📖 ಅನುವಾದ
ಆಯತ್ 32
ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.
وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۗ وَمَن قُتِلَ مَظْلُومًا فَقَدْ جَعَلْنَا لِوَلِيِّهِ سُلْطَانًا فَلَا يُسْرِف فِّي الْقَتْلِ ۖ إِنَّهُ كَانَ مَنصُورًا ٣٣
📖 ಅನುವಾದ
ಆಯತ್ 33
ನೀವು ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಎಂದಿಗೂ ಅನ್ಯಾಯವಾಗಿ ವಧಿಸಬೇಡಿರಿ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿ ವಧಿಸಲ್ಪಟ್ಟರೆ ನಾವು ಅವನ ವಾರೀಸುದಾರರಿಗೆ ಪ್ರತಿಕಾರದ ಅಧಿಕಾರ ಕೊಟ್ಟಿದ್ದೇವೆ. ಅದರೆ ಅವನು ಕೊಲ್ಲುವುದರಲ್ಲಿ ಅತಿಕ್ರಮವನ್ನು ತೋರದಿರಲಿ. ನಿಸ್ಸಂಶಯವಾಗಿಯೂ (ಪ್ರತೀಕಾರದ ಮೂಲಕ) ಅವನು ಸಹಾಯ ನೀಡಲ್ಪಟ್ಟಿದ್ದಾನೆ.
وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا ٣٤
📖 ಅನುವಾದ
ಆಯತ್ 34
ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.
وَأَوْفُوا الْكَيْلَ إِذَا كِلْتُمْ وَزِنُوا بِالْقِسْطَاسِ الْمُسْتَقِيمِ ۚ ذَٰلِكَ خَيْرٌ وَأَحْسَنُ تَأْوِيلًا ٣٥
📖 ಅನುವಾದ
ಆಯತ್ 35
ನೀವು ಅಳೆದು ಕೊಡುವಾಗ ಪರಿಪೂರ್ಣವಾಗಿ ಅಳೆಯಿರಿ ಮತ್ತು ಸಮತೋಲನವುಳ್ಳ ತಕ್ಕಡಿಯಿಂದ ತೂಕ ಮಾಡಿರಿ ಇದುವೇ ಉತ್ತಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.
وَلَا تَقْفُ مَا لَيْسَ لَكَ بِهِ عِلْمٌ ۚ إِنَّ السَّمْعَ وَالْبَصَرَ وَالْفُؤَادَ كُلُّ أُولَٰئِكَ كَانَ عَنْهُ مَسْئُولًا ٣٦
📖 ಅನುವಾದ
ಆಯತ್ 36
ನಿಮಗೆ ಅರಿವಿಲ್ಲದಂತಹ ವಿಚಾರವನ್ನು ಹಿಂಬಾಲಿಸದಿರಿ. ಏಕೆಂದರೆ ಕಿವಿ, ಕಣ್ಣು ಹಾಗೂ ಹೃದಯ ಪ್ರತಿಯೊಂದರ ಬಗ್ಗೆ ಪ್ರಶ್ನಿಸಲಾಗುವುದು.
وَلَا تَمْشِ فِي الْأَرْضِ مَرَحًا ۖ إِنَّكَ لَن تَخْرِقَ الْأَرْضَ وَلَن تَبْلُغَ الْجِبَالَ طُولًا ٣٧
📖 ಅನುವಾದ
ಆಯತ್ 37
ನೀವು ಭೂಮಿಯಲ್ಲಿ ದರ್ಪದಿಂದ ನಡೆಯದಿರಿ. ನೀವು ಭೂಮಿಯನ್ನು ಸೀಳಲಾರಿರಿ. ಮತ್ತು ಎತ್ತರದಲ್ಲಿ ಪರ್ವತಗಳನ್ನೂ ತಲುಪಲಾರಿರಿ.
كُلُّ ذَٰلِكَ كَانَ سَيِّئُهُ عِندَ رَبِّكَ مَكْرُوهًا ٣٨
📖 ಅನುವಾದ
ಆಯತ್ 38
ಈ ಎಲ್ಲಾ ಕೆಡುಕುಗಳು ನಿಮ್ಮ ಪ್ರಭುವಿನ ಬಳಿ ಅತ್ಯಂತ ಅಪ್ರಿಯವಾಗಿವೆ.
ذَٰلِكَ مِمَّا أَوْحَىٰ إِلَيْكَ رَبُّكَ مِنَ الْحِكْمَةِ ۗ وَلَا تَجْعَلْ مَعَ اللَّهِ إِلَٰهًا آخَرَ فَتُلْقَىٰ فِي جَهَنَّمَ مَلُومًا مَّدْحُورًا ٣٩
📖 ಅನುವಾದ
ಆಯತ್ 39
(ಓ ಪೈಗಂಬರರೇ) ಇದು ನಿಮ್ಮ ಪ್ರಭುವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸುಜ್ಞಾನದಲ್ಲೊಂದಾಗಿದೆ. ನೀವು ಅಲ್ಲಾಹನೊಂದಿಗೆ ಇತರ ಯಾರನ್ನು ಆರಾಧ್ಯರನ್ನಾಗಿ ನಿಶ್ಚಯಿಸದಿರಿ. ಅನ್ಯಥಾ ನೀವು ನರಕದೊಳಗೆ ನಿಂದಿಸಲ್ಪಟ್ಟವರಾಗಿ ಮತ್ತು ತಿರಸ್ಕರಿಸಲ್ಪಟ್ಟವರಾಗಿ ಎಸೆಯಲ್ಪಡುವಿರಿ.
أَفَأَصْفَاكُمْ رَبُّكُم بِالْبَنِينَ وَاتَّخَذَ مِنَ الْمَلَائِكَةِ إِنَاثًا ۚ إِنَّكُمْ لَتَقُولُونَ قَوْلًا عَظِيمًا ٤٠
📖 ಅನುವಾದ
ಆಯತ್ 40
(ಓ ಸತ್ಯನಿಷೇಧಿಗಳೇ) ಏನು ನಿಮ್ಮ ಪ್ರಭು ನಿಮ್ಮನ್ನು ಪುತ್ರರಿಗೋಸ್ಕರ ಆರಿಸಿಕೊಂಡಿರುವನೇ ಮತ್ತು ಸ್ವತಃ ತನಗಾಗಿ ದೇವಚರರನ್ನು ಪುತ್ರಿಯರನ್ನಾಗಿ ಮಾಡಿಕೊಂಡಿರುವನೇ? ನಿಸ್ಸಂಶಯವಾಗಿಯೂ ನೀವು ಘೋರವಾದ ಮಾತನ್ನು ಆಡುತ್ತಿರುವಿರಿ!.
وَلَقَدْ صَرَّفْنَا فِي هَٰذَا الْقُرْآنِ لِيَذَّكَّرُوا وَمَا يَزِيدُهُمْ إِلَّا نُفُورًا ٤١
📖 ಅನುವಾದ
ಆಯತ್ 41
ನಾವು (ಖಂಡಿತವಾಗಿಯೂ) ಈ ಕುರ್ಆನಿನಲ್ಲಿ ಅವರು ವಿವೇಚಿಸಿಕೊಳ್ಳಲೆಂದು ವಿವಿಧ ಶೈಲಿಯಲ್ಲಿ ವಿವರಿಸಿಕೊಟ್ಟಿದ್ದೇವೆ. ಆದರೆ ಇದು ಅವರ ಬೇಸರವನ್ನೆ ಹೆಚ್ಚಿಸುತ್ತದೆ.
قُل لَّوْ كَانَ مَعَهُ آلِهَةٌ كَمَا يَقُولُونَ إِذًا لَّابْتَغَوْا إِلَىٰ ذِي الْعَرْشِ سَبِيلًا ٤٢
📖 ಅನುವಾದ
ಆಯತ್ 42
ಹೇಳಿರಿ: ಅವರು ಹೇಳುತ್ತಿರುವಂತೆ ಅಲ್ಲಾಹನೊಂದಿಗೆ ಇತರ ಆರಾಧ್ಯರಿರುತ್ತಿದ್ದರೆ ಖಂಡಿತ ಅವರು ಸಿಂಹಾಸನದ ಒಡೆಯನೆಡೆಗೆ ಮಾರ್ಗವನ್ನು ಹುಡುಕಿಕೊಳ್ಳುತ್ತಿದ್ದರು.
سُبْحَانَهُ وَتَعَالَىٰ عَمَّا يَقُولُونَ عُلُوًّا كَبِيرًا ٤٣
📖 ಅನುವಾದ
ಆಯತ್ 43
ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ, ಮಹಾನನು ಆಗಿದ್ದಾನೆ.
تُسَبِّحُ لَهُ السَّمَاوَاتُ السَّبْعُ وَالْأَرْضُ وَمَن فِيهِنَّ ۚ وَإِن مِّن شَيْءٍ إِلَّا يُسَبِّحُ بِحَمْدِهِ وَلَٰكِن لَّا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا ٤٤
📖 ಅನುವಾದ
ಆಯತ್ 44
ಎಳು ಆಕಾಶಗಳು ಮತ್ತು ಭೂಮಿಯೂ ಹಾಗೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿವೆ. ಮತ್ತು ಅವನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡದ ಯಾವ ವಸ್ತುವೂ ಇಲ್ಲ. ಅದರೆ ಅವುಗಳ ಕೀರ್ತನೆಯನ್ನು ನೀವು ಗ್ರಹಿಸಿಕೊಳ್ಳಲಾರಿರಿ. ವಾಸ್ತವದಲ್ಲಿ ಅವನು ಸಹನಾಶೀಲನು ಕ್ಷಮಾಶೀಲನು ಆಗಿದ್ದಾನೆ.
وَإِذَا قَرَأْتَ الْقُرْآنَ جَعَلْنَا بَيْنَكَ وَبَيْنَ الَّذِينَ لَا يُؤْمِنُونَ بِالْآخِرَةِ حِجَابًا مَّسْتُورًا ٤٥
📖 ಅನುವಾದ
ಆಯತ್ 45
(ಓ ಪೈಗಂಬರರೇ) ನೀವು ಕುರ್ಆನನ್ನು ಪಠಿಸಿದಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಮಧ್ಯೆ ನಾವು ಅದೃಶ್ಯವಾಗಿರುವ ತೆರೆಯೊಂದನ್ನು ಹಾಕಿಬಿಡುತ್ತೇವೆ.
وَجَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِي آذَانِهِمْ وَقْرًا ۚ وَإِذَا ذَكَرْتَ رَبَّكَ فِي الْقُرْآنِ وَحْدَهُ وَلَّوْا عَلَىٰ أَدْبَارِهِمْ نُفُورًا ٤٦
📖 ಅನುವಾದ
ಆಯತ್ 46
ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.
نَّحْنُ أَعْلَمُ بِمَا يَسْتَمِعُونَ بِهِ إِذْ يَسْتَمِعُونَ إِلَيْكَ وَإِذْ هُمْ نَجْوَىٰ إِذْ يَقُولُ الظَّالِمُونَ إِن تَتَّبِعُونَ إِلَّا رَجُلًا مَّسْحُورًا ٤٧
📖 ಅನುವಾದ
ಆಯತ್ 47
ಅವರು ನಿಮ್ಮೆಡೆಗೆ ಕಿವಿಗೊಟ್ಟು ಆಲಿಸುತ್ತಿರುವಾಗ ಅವರು ಯಾವ ಉದ್ದೇಶದಿಂದ ಆಲಿಸುತ್ತಿದ್ದಾರೆಂಬುದನ್ನೂ, (ನಾವು ಚೆನ್ನಾಗಿ ತಿಳಿದಿದ್ದೇವೆ) ಅವರು ಪರಸ್ಪರ ರಹಸ್ಯವಾಗಿ ಮಾತುಕತೆಯಲ್ಲಿರುವುದೂ (ಅದೂ ನಮಗೆ ಚೆನ್ನಾಗಿ ಗೊತ್ತು, ಅವರು ತಮ್ಮ ಬುಡಕಟ್ಟಿನ ಮುಸ್ಲಿಮರಿಗೆ) ನೀವು ಅನುಸರಿಸುತ್ತಿರುವ ವ್ಯಕ್ತಿಯು ಮಾಟಬಾಧಿತನಾಗಿದ್ದಾನೆ ಎಂದು ಈ ಅಕ್ರಮಿಗಳು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ.
انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا ٤٨
📖 ಅನುವಾದ
ಆಯತ್ 48
ಅವರು ನಿಮಗೆ ಹೇಗೆ ಉಪಮೆಗಳನ್ನು ಕೊಡುತ್ತಿದ್ದಾರೆಂಬುದನ್ನು ನೋಡಿರಿ. ಹೀಗೆ ಅವರು ಮಾರ್ಗ ಭ್ರಷ್ಟರಾದರು. ಇನ್ನು ಮಾರ್ಗ ಪಡೆಯುವುದು ಅವರ ಸಾಮರ್ಥ್ಯದಲ್ಲಿಲ್ಲ.
وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا ٤٩
📖 ಅನುವಾದ
ಆಯತ್ 49
ಅವರು ಹೇಳುತ್ತಾರೆ(ಸತ್ಯನಿಷೇಧಿಗಳು): ನಾವು ಎಲುಬುಗಳಾಗಿ ಚೂರು ಚೂರಾದ (ಮಣ್ಣಾದ) ಬಳಿಕವೂ ಹೊಸ ಸೃಷ್ಠಿಯಾಗಿ ಎಬ್ಬಿಸಲ್ಪಡುತ್ತೇವೆಯೇ?
۞ قُلْ كُونُوا حِجَارَةً أَوْ حَدِيدًا ٥٠
📖 ಅನುವಾದ
ಆಯತ್ 50
ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ.
أَوْ خَلْقًا مِّمَّا يَكْبُرُ فِي صُدُورِكُمْ ۚ فَسَيَقُولُونَ مَن يُعِيدُنَا ۖ قُلِ الَّذِي فَطَرَكُمْ أَوَّلَ مَرَّةٍ ۚ فَسَيُنْغِضُونَ إِلَيْكَ رُءُوسَهُمْ وَيَقُولُونَ مَتَىٰ هُوَ ۖ قُلْ عَسَىٰ أَن يَكُونَ قَرِيبًا ٥١
📖 ಅನುವಾದ
ಆಯತ್ 51
ಅಥವಾ ನಿಮ್ಮ ಹೃದಯಗಳಲ್ಲಿ ಅತ್ಯಂತ ಕಠಿಣವೆಂದು ತೋರುವ ಯಾವುದೇ ಸೃಷ್ಟಿಯಾಗಿರಿ. ನಂತರ ಅವರು ತಕ್ಷಣ ಕೇಳುವರು: ನಮ್ಮನ್ನು ಮರಳಿಸುವವರಾರು? ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನೆಂದು ಉತ್ತರಿಸಿರಿ. ಆಗ ಅವರು ತಮ್ಮ ತಲೆಗಳನ್ನು ತೂಗುತ್ತಾ ಹೇಳುವರು. ಸರಿ ಅದು ಯಾವಾಗ ಸಂಭವಿಸುವುದು? ಆಗ ನೀವು ಹೇಳಿರಿ: ಅದು ಸಮೀಪವೇ ಇರಬಹುದು.
يَوْمَ يَدْعُوكُمْ فَتَسْتَجِيبُونَ بِحَمْدِهِ وَتَظُنُّونَ إِن لَّبِثْتُمْ إِلَّا قَلِيلًا ٥٢
📖 ಅನುವಾದ
ಆಯತ್ 52
ಅವನು ನಿಮ್ಮನ್ನು ಕರೆಯುವ ದಿನದಂದು ನೀವು ಅವನ ಸ್ತುತಿಯೊಂದಿಗೆ ಓ ಗೊಡುವಿರಿ ಮತ್ತು ಇಹದಲ್ಲಿ ಅಲ್ಪಕಾಲ ಮಾತ್ರ ವಾಸಿಸಿದ್ದೀರಿ ಎಂದು ನೀವು ಭಾವಿಸಿಕೊಳ್ಳುವಿರಿ.
وَقُل لِّعِبَادِي يَقُولُوا الَّتِي هِيَ أَحْسَنُ ۚ إِنَّ الشَّيْطَانَ يَنزَغُ بَيْنَهُمْ ۚ إِنَّ الشَّيْطَانَ كَانَ لِلْإِنسَانِ عَدُوًّا مُّبِينًا ٥٣
📖 ಅನುವಾದ
ಆಯತ್ 53
(ಓ ಪೈಗಂಬರರೇ) ನೀವು ನನ್ನ ದಾಸರಿಗೆ: ಅವರು ಅತ್ಯುತ್ತಮ ಮಾತನ್ನಾಡಲು ಹೇಳಿರಿ. ವಾಸ್ತವದಲ್ಲಿ ಶೈತಾನನು ಅವರ ನಡುವೆ ಒಡಕು ಹಾಕುತ್ತಾನೆ. ನಿಸ್ಸಂಶಯವಾಗಿಯೂ ಶೈತಾನನು ಮನುಷ್ಯನಿಗೆ ಸ್ಪಷ್ಟ ಶತ್ರುವಾಗಿದ್ದಾನೆ.
رَّبُّكُمْ أَعْلَمُ بِكُمْ ۖ إِن يَشَأْ يَرْحَمْكُمْ أَوْ إِن يَشَأْ يُعَذِّبْكُمْ ۚ وَمَا أَرْسَلْنَاكَ عَلَيْهِمْ وَكِيلًا ٥٤
📖 ಅನುವಾದ
ಆಯತ್ 54
. ನಿಮ್ಮ ಪ್ರಭುವು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಇಚ್ಛಿಸಿದರೆ ನಿಮ್ಮ ಮೇಲೆ ಕರುಣೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. ನಾವು ನಿಮ್ಮನ್ನು ಅವರ ಮೇಲೆ ಮೇಲ್ನೋಟಗಾರರನ್ನಾಗಿ ಮಾಡಿ ಕಳುಹಿಸಿರುವುದಿಲ್ಲ.
وَرَبُّكَ أَعْلَمُ بِمَن فِي السَّمَاوَاتِ وَالْأَرْضِ ۗ وَلَقَدْ فَضَّلْنَا بَعْضَ النَّبِيِّينَ عَلَىٰ بَعْضٍ ۖ وَآتَيْنَا دَاوُودَ زَبُورًا ٥٥
📖 ಅನುವಾದ
ಆಯತ್ 55
ಮತ್ತು ನಿಮ್ಮ ಪ್ರಭುವು ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲವನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. ನಿಶ್ಚಯವಾಗಿಯೂ ನಾವು ಕೆಲವು ಪೈಗಂಬರರನ್ನು ಇನ್ನು ಕೆಲವರ ಮೇಲೆ ಶ್ರೇಷ್ಟತೆಯನ್ನು ನೀಡಿದ್ದೇವೆ. ಮತ್ತು ನಾವು ದಾವೂದರವರಿಗೆ ಝಬೂರನ್ನು ದಯಪಾಲಿಸಿರುತ್ತೇವೆ.
قُلِ ادْعُوا الَّذِينَ زَعَمْتُم مِّن دُونِهِ فَلَا يَمْلِكُونَ كَشْفَ الضُّرِّ عَنكُمْ وَلَا تَحْوِيلًا ٥٦
📖 ಅನುವಾದ
ಆಯತ್ 56
ಹೇಳಿರಿ: ನೀವು ಅಲ್ಲಾಹನ ಹೊರತು ಯಾರನ್ನು ಆರಾಧ್ಯರೆಂದು ಭಾವಿಸುತ್ತಿರುವಿರೋ ಅವರನ್ನು ಕರೆದುಬೇಡಿಕೊಳ್ಳಿರಿ. ಆದರೆ ಅವರು ನಿಮ್ಮಿಂದ ಯಾವುದೇ ಸಂಕಷ್ಟವನ್ನು ನೀಗಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ.
أُولَٰئِكَ الَّذِينَ يَدْعُونَ يَبْتَغُونَ إِلَىٰ رَبِّهِمُ الْوَسِيلَةَ أَيُّهُمْ أَقْرَبُ وَيَرْجُونَ رَحْمَتَهُ وَيَخَافُونَ عَذَابَهُ ۚ إِنَّ عَذَابَ رَبِّكَ كَانَ مَحْذُورًا ٥٧
📖 ಅನುವಾದ
ಆಯತ್ 57
ಇವರು ಯಾರನ್ನು ಕರೆದು ಬೇಡುತ್ತಿದ್ದಾರೋ ಸ್ವತಃ ಅವರೇ ತಮ್ಮ ಪ್ರಭುವಿನ ಸಾಮಿಪ್ಯ ಪಡೆಯುವ ಸಾಧನವನ್ನು ಅರಸುತ್ತಾರೆ ತಮ್ಮಲ್ಲಿ ಯಾರು ಅತ್ಯಂತ ನಿಕಟನಾಗುವನೆಂದು. ಸ್ವತಃ ಅವರೇ ಅವನ ಕಾರುಣ್ಯವನ್ನು ಆಶಿಸುತ್ತಿದ್ದಾರೆ ಹಾಗೂ ಅವರು ಯಾತನೆಯನ್ನು ಭಯಪಡುತ್ತಿದ್ದಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಯಾತನೆಯು ಭಯಪಡಬೇಕಾದುದ್ದೆ ಆಗಿದೆ.
وَإِن مِّن قَرْيَةٍ إِلَّا نَحْنُ مُهْلِكُوهَا قَبْلَ يَوْمِ الْقِيَامَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِي الْكِتَابِ مَسْطُورًا ٥٨
📖 ಅನುವಾದ
ಆಯತ್ 58
ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.
وَمَا مَنَعَنَا أَن نُّرْسِلَ بِالْآيَاتِ إِلَّا أَن كَذَّبَ بِهَا الْأَوَّلُونَ ۚ وَآتَيْنَا ثَمُودَ النَّاقَةَ مُبْصِرَةً فَظَلَمُوا بِهَا ۚ وَمَا نُرْسِلُ بِالْآيَاتِ إِلَّا تَخْوِيفًا ٥٩
📖 ಅನುವಾದ
ಆಯತ್ 59
ದೃಷ್ಟಾಂತಗಳನ್ನು ಕಳುಹಿಸುವುದರಿಂದ ನಮ್ಮನ್ನು ತಡೆದಿರುವುದು ಕೇವಲ ಅವುಗಳನ್ನು ಪೂರ್ವಜರು ಸುಳ್ಳಾಗಿಸಿಬಿಟ್ಟಿದ್ದರೆಂಬ ಸಂಗತಿಯಾಗಿದೆ ನಾವು ಸಮೂದ್ ಜನಾಂಗಕ್ಕೆ ಸ್ಪಷ್ಟ ದೃಷ್ಟಾಂತವಾಗಿ ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು ಮತ್ತು ನಾವು ಭಯ ಹುಟ್ಟಿಸಲೆಂದೇ ದೃಷ್ಟಾಂತಗಳನ್ನು ಕಳುಹಿಸುತ್ತೇವೆ.
وَإِذْ قُلْنَا لَكَ إِنَّ رَبَّكَ أَحَاطَ بِالنَّاسِ ۚ وَمَا جَعَلْنَا الرُّؤْيَا الَّتِي أَرَيْنَاكَ إِلَّا فِتْنَةً لِّلنَّاسِ وَالشَّجَرَةَ الْمَلْعُونَةَ فِي الْقُرْآنِ ۚ وَنُخَوِّفُهُمْ فَمَا يَزِيدُهُمْ إِلَّا طُغْيَانًا كَبِيرًا ٦٠
📖 ಅನುವಾದ
ಆಯತ್ 60
(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.
وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ قَالَ أَأَسْجُدُ لِمَنْ خَلَقْتَ طِينًا ٦١
📖 ಅನುವಾದ
ಆಯತ್ 61
ನಾವು ಮಲಕ್ಗಳಿಗೆ: ನೀವು ಆದಮನಿಗೆ ಸಾಷ್ಟಾಂಗವೆರಗಿರಿ ಎಂದು ಆದೇಶ ನೀಡಿದ ಸಂದರ್ಭ ಆಗ ಇಬ್ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ಹೇಳಿದನು: ನೀನು ಮಣ್ಣಿನಿಂದ ಸೃಷ್ಟಿಸಿದವನಿಗೆ ನಾವು ಸಾಷ್ಟಾಂಗವೆರಗಬೇಕೇ?
قَالَ أَرَأَيْتَكَ هَٰذَا الَّذِي كَرَّمْتَ عَلَيَّ لَئِنْ أَخَّرْتَنِ إِلَىٰ يَوْمِ الْقِيَامَةِ لَأَحْتَنِكَنَّ ذُرِّيَّتَهُ إِلَّا قَلِيلًا ٦٢
📖 ಅನುವಾದ
ಆಯತ್ 62
ಮತ್ತು ಹೇಳಿದನು ನೋಡು, ನೀನು ನನ್ನ ಮೇಲೆ ಶ್ರೇಷ್ಟತೆಯನ್ನು ನೀಡಿದ ವ್ಯಕ್ತಿ ಇವನಾಗಿದ್ದಾನೆ. ಆದರೆ ನೀನೇನಾದರೂ ನನಗೆ ಪ್ರಳಯ ದಿನದವರೆಗೆ ಕಾಲಾವಕಾಶ ನೀಡಿದರೆ ನಾನು ಕೆಲವರ ಹೊರತು ಇಡೀ ಅವನ ಸಂತತಿಯನ್ನು ಬೇರು ಸಹಿತ ಕಿತ್ತೆಸೆಯುವೆನು.
قَالَ اذْهَبْ فَمَن تَبِعَكَ مِنْهُمْ فَإِنَّ جَهَنَّمَ جَزَاؤُكُمْ جَزَاءً مَّوْفُورًا ٦٣
📖 ಅನುವಾದ
ಆಯತ್ 63
ಅಲ್ಲಾಹನು ಹೇಳಿದನು: ತೊಲಗು ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾನೋ ನರಕವು ನಿಮ್ಮೆಲ್ಲರ ಪ್ರತಿಫಲವಾಗಿರುವುದು. ಅದು ಪರಿಪೂರ್ಣ ಪ್ರತಿಫಲವಾಗಿದೆ.
وَاسْتَفْزِزْ مَنِ اسْتَطَعْتَ مِنْهُم بِصَوْتِكَ وَأَجْلِبْ عَلَيْهِم بِخَيْلِكَ وَرَجِلِكَ وَشَارِكْهُمْ فِي الْأَمْوَالِ وَالْأَوْلَادِ وَعِدْهُمْ ۚ وَمَا يَعِدُهُمُ الشَّيْطَانُ إِلَّا غُرُورًا ٦٤
📖 ಅನುವಾದ
ಆಯತ್ 64
ಅವರಲ್ಲಿ ನಿನಗೆ ಸಾಧ್ಯವಿರುವವರನ್ನೆಲ್ಲಾ ನಿನ್ನ ಸ್ವರದಿಂದ ದಾರಿಗೆಡಿಸು. ಅವರ ಮೇಲೆ ನಿನ್ನ ಸವಾರರನ್ನು ಹಾಗೂ ಕಾಲಾಳುಗಳನ್ನು ಎರಗಿಸು ಮತ್ತು ಅವರ ಸಂಪತ್ತು ಹಾಗೂ ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು ಮತ್ತು ಅವರಿಗೆ ವಾಗ್ದಾನಗಳನ್ನು ನೀಡು, ಶೈತಾನನು ಅವರಿಗೆ ವಂಚನೆಯ ಹೊರತು ಬೇರಾವ ವಾಗ್ದಾನವನ್ನು ಮಾಡಲಾರ.
إِنَّ عِبَادِي لَيْسَ لَكَ عَلَيْهِمْ سُلْطَانٌ ۚ وَكَفَىٰ بِرَبِّكَ وَكِيلًا ٦٥
📖 ಅನುವಾದ
ಆಯತ್ 65
ನಿಶ್ಚಯವಾಗಿಯು ನನ್ನ ನಿಷ್ಠಾವಂತ ದಾಸರ ಮೇಲೆ ನಿನ್ನ ಯಾವುದೇ ಅಧಿಕಾರವಿರದು. ಕಾರ್ಯಸಾಧಕನಾಗಿ ನಿನ್ನ ಪ್ರಭುವೇ ಸಾಕು.
رَّبُّكُمُ الَّذِي يُزْجِي لَكُمُ الْفُلْكَ فِي الْبَحْرِ لِتَبْتَغُوا مِن فَضْلِهِ ۚ إِنَّهُ كَانَ بِكُمْ رَحِيمًا ٦٦
📖 ಅನುವಾದ
ಆಯತ್ 66
ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ.
وَإِذَا مَسَّكُمُ الضُّرُّ فِي الْبَحْرِ ضَلَّ مَن تَدْعُونَ إِلَّا إِيَّاهُ ۖ فَلَمَّا نَجَّاكُمْ إِلَى الْبَرِّ أَعْرَضْتُمْ ۚ وَكَانَ الْإِنسَانُ كَفُورًا ٦٧
📖 ಅನುವಾದ
ಆಯತ್ 67
ಮತ್ತು ಸಮುದ್ರದಲ್ಲಿ ಯಾವುದಾದರೂ ಸಂಕಷ್ಟವು ಬಾಧಿಸಿದ ಕೂಡಲೇ ನೀವು ಕರೆದು ಬೇಡುತ್ತಿರುವವರೆಲ್ಲ ಮಾಯವಾಗಿ ಬಿಡುತ್ತಾರೆ. ಕೇವಲ ಆ ಅಲ್ಲಾಹನ ಹೊರತು. ಅನಂತರ ಅವನು ನಿಮ್ಮನ್ನು ದಡ ತಲುಪಿಸಿದಾಗ ನೀವು ವಿಮುಖರಾಗಿ ಬಿಡುತ್ತೀರಿ ಮತ್ತು ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
أَفَأَمِنتُمْ أَن يَخْسِفَ بِكُمْ جَانِبَ الْبَرِّ أَوْ يُرْسِلَ عَلَيْكُمْ حَاصِبًا ثُمَّ لَا تَجِدُوا لَكُمْ وَكِيلًا ٦٨
📖 ಅನುವಾದ
ಆಯತ್ 68
ಅವನು ನಿಮ್ಮನ್ನು ದಡಕ್ಕೆ ಕೊಂಡಯ್ದು ಹೂತು ಬಿಡುವುದರಿಂದ, ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಚಂಡ ಮಾರುತವನ್ನು ಕಳುಹಿಸಿ ಬಿಡುವುದರಿಂದ ನಿರ್ಭಯರಾಗಿ ಬಿಟ್ಟಿರಾ? ಆಗ ನೀವು ಯಾರನ್ನೂ ಕಾರ್ಯ ಸಾಧಕನನ್ನಾಗಿ ಪಡೆಯಲಾರಿರಿ.
أَمْ أَمِنتُمْ أَن يُعِيدَكُمْ فِيهِ تَارَةً أُخْرَىٰ فَيُرْسِلَ عَلَيْكُمْ قَاصِفًا مِّنَ الرِّيحِ فَيُغْرِقَكُم بِمَا كَفَرْتُمْ ۙ ثُمَّ لَا تَجِدُوا لَكُمْ عَلَيْنَا بِهِ تَبِيعًا ٦٩
📖 ಅನುವಾದ
ಆಯತ್ 69
ಅಥವಾ ಪುನಃ ನಿಮ್ಮನ್ನು ಸಮುದ್ರ ಯಾತ್ರೆಗೆ ಮರಳಿಸಿ ನಿಮ್ಮ ಮೇಲೆ ಭೀಕರವಾಗಿರುವ ಬಿರುಗಾಳಿಯೊಂದನ್ನು ಕಳುಹಿಸುವುದರಿಂದ ಮತ್ತು ನಿಮ್ಮ ಸತ್ಯನಿಷೇಧದ ನಿಮಿತ್ತ ನಿಮ್ಮನ್ನು ಮುಳುಗಿಸುವುದರಿಂದ ನಿರ್ಭಯರಾಗಿಬಿಟ್ಟಿರಾ? ಆಗ ನೀವು ನಿಮಗೋಸ್ಕರ ನಮ್ಮ ವಿರುದ್ಧ ವಾದಿಸುವ ಯಾವೊಬ್ಬ ಸಹಾಯಕನನ್ನೂ ಪಡೆಯಲಾರಿರಿ.
۞ وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُم مِّنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِّمَّنْ خَلَقْنَا تَفْضِيلًا ٧٠
📖 ಅನುವಾದ
ಆಯತ್ 70
ನಿಶ್ಚಯವಾಗಿಯೂ ನಾವು ಆದಮನ ಸಂತತಿಗೆ ಗೌರವವನ್ನು ನೀಡಿದ್ದೇವೆ ಮತ್ತು ಅವರಿಗೆ ನಾವು ನೆಲದಲ್ಲೂ, ಸಮುದ್ರದಲ್ಲೂ ಸಾರಿಗೆಗಳನ್ನು ನೀಡಿರುತ್ತೇವೆ ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ನೀಡಿರುವೆವು ಹಾಗೂ ನಾವು ನಮ್ಮ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ.
يَوْمَ نَدْعُو كُلَّ أُنَاسٍ بِإِمَامِهِمْ ۖ فَمَنْ أُوتِيَ كِتَابَهُ بِيَمِينِهِ فَأُولَٰئِكَ يَقْرَءُونَ كِتَابَهُمْ وَلَا يُظْلَمُونَ فَتِيلًا ٧١
📖 ಅನುವಾದ
ಆಯತ್ 71
ಅಂದು ನಾವು ಪ್ರತಿಯೊಂದು ಜನಕೂಟವನ್ನು ಅವರವರ ನಾಯಕರೊಂದಿಗೆ ಕರೆಯುವೆವು. ಅನಂತರ ಯಾರ ಕರ್ಮಪತ್ರವು ಬಲಗೈಯಲ್ಲಿ ನೀಡಲಾಗುತ್ತದೆಯೋ ಅವರು ತಮ್ಮ ಕರ್ಮಪತ್ರವನ್ನು ಆಸಕ್ತಿಯಿಂದ ಓದುವರು ಮತ್ತು ಅವರು ಕೂದಲೆಳೆಯಷ್ಟೂ ಅನ್ಯಾಯಕ್ಕೊಳಗಾಗಲಾರರು.
وَمَن كَانَ فِي هَٰذِهِ أَعْمَىٰ فَهُوَ فِي الْآخِرَةِ أَعْمَىٰ وَأَضَلُّ سَبِيلًا ٧٢
📖 ಅನುವಾದ
ಆಯತ್ 72
ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.
وَإِن كَادُوا لَيَفْتِنُونَكَ عَنِ الَّذِي أَوْحَيْنَا إِلَيْكَ لِتَفْتَرِيَ عَلَيْنَا غَيْرَهُ ۖ وَإِذًا لَّاتَّخَذُوكَ خَلِيلًا ٧٣
📖 ಅನುವಾದ
ಆಯತ್ 73
(ಏಕೆಂದರೆ) ನೀವು ನಮ್ಮ ಹೆಸರಲ್ಲಿ ಇದರ ಹೊರತು ಬೇರೊಂದನ್ನು ರಚಿಸಿ ತರಲೆಂದು. ನಾವು ನಿಮ್ಮೆಡೆಗೆ ಮಾಡಿರುವ ದಿವ್ಯವಾಣಿಯಿಂದ (ಈ ಸತ್ಯನಿಷೇಧಿಗಳು) ಅವರು ನಿಮ್ಮನ್ನು ಸರಿಸಿ ಬಿಡಲಿಚ್ಛಿಸುತ್ತಾರೆ. ಓ ಸಂದೇಶವಾಹಕರೇ ಆಗಂತು ಅವರು ನಿಮ್ಮನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.
وَلَوْلَا أَن ثَبَّتْنَاكَ لَقَدْ كِدتَّ تَرْكَنُ إِلَيْهِمْ شَيْئًا قَلِيلًا ٧٤
📖 ಅನುವಾದ
ಆಯತ್ 74
ನಾವೇನಾದರೂ ನಿಮ್ಮನ್ನು ಸ್ಥಿರಗೊಳಿಸದಿರುತ್ತಿದ್ದರೆ ನೀವು ಅವರೆಡೆಗೆ ಸ್ವಲ್ಪವಾದರೂ ವಾಲಿಬಿಡುವ ಸಾಧ್ಯತೆಯಿತ್ತು.
إِذًا لَّأَذَقْنَاكَ ضِعْفَ الْحَيَاةِ وَضِعْفَ الْمَمَاتِ ثُمَّ لَا تَجِدُ لَكَ عَلَيْنَا نَصِيرًا ٧٥
📖 ಅನುವಾದ
ಆಯತ್ 75
ಹಾಗೇನದರೂ ನೀವು ಮಾಡಿರುತ್ತಿದ್ದರೆ ನಾವು ನಿಮಗೆ ಇಹಲೋಕ ಜೀವನದ ಇಮ್ಮಡಿ ಶಿಕ್ಷೆಯನ್ನು ಹಾಗೂ ಮರಣದ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ಅನಂತರ ನೀವು ನಿಮಗಾಗಿ ನಮ್ಮ ವಿರುದ್ಧ ಯಾರನ್ನು ಸಹಾಯಕನನ್ನಾಗಿ ಪಡೆಯುತ್ತಿರಲಿಲ್ಲ.
وَإِن كَادُوا لَيَسْتَفِزُّونَكَ مِنَ الْأَرْضِ لِيُخْرِجُوكَ مِنْهَا ۖ وَإِذًا لَّا يَلْبَثُونَ خِلَافَكَ إِلَّا قَلِيلًا ٧٦
📖 ಅನುವಾದ
ಆಯತ್ 76
ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು.
سُنَّةَ مَن قَدْ أَرْسَلْنَا قَبْلَكَ مِن رُّسُلِنَا ۖ وَلَا تَجِدُ لِسُنَّتِنَا تَحْوِيلًا ٧٧
📖 ಅನುವಾದ
ಆಯತ್ 77
ನಿಮಗಿಂತ ಮುಂಚೆ ನಾವು ಕಳುಹಿಸಿದ ಸಂದೇಶವಾಹಕರೊAದಿಗಿನ ಕ್ರಮವು ಇದೇ ಪ್ರಕಾರವಿತ್ತು ಮತ್ತು ನೀವು ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
أَقِمِ الصَّلَاةَ لِدُلُوكِ الشَّمْسِ إِلَىٰ غَسَقِ اللَّيْلِ وَقُرْآنَ الْفَجْرِ ۖ إِنَّ قُرْآنَ الْفَجْرِ كَانَ مَشْهُودًا ٧٨
📖 ಅನುವಾದ
ಆಯತ್ 78
ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್ಅನ್ ಪಾರಾಯಣವು ಪ್ರಮಾಣಿಕವಾಗಿದೆ.
وَمِنَ اللَّيْلِ فَتَهَجَّدْ بِهِ نَافِلَةً لَّكَ عَسَىٰ أَن يَبْعَثَكَ رَبُّكَ مَقَامًا مَّحْمُودًا ٧٩
📖 ಅನುವಾದ
ಆಯತ್ 79
ಮತ್ತು ರಾತ್ರಿಯ ಒಂದAಶದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಐಚ್ಛಿಕ ಕಾರ್ಯವಾಗಿದೆ. ಸಧ್ಯವೇ ನಿಮ್ಮ ಪ್ರಭುವು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸಲೂಬಹುದು.
وَقُل رَّبِّ أَدْخِلْنِي مُدْخَلَ صِدْقٍ وَأَخْرِجْنِي مُخْرَجَ صِدْقٍ وَاجْعَل لِّي مِن لَّدُنكَ سُلْطَانًا نَّصِيرًا ٨٠
📖 ಅನುವಾದ
ಆಯತ್ 80
ಮತ್ತು ಪಾರ್ಥಿಸುತ್ತಿರಿ: ನನ್ನ ಪ್ರಭುವೇ, ನೀನು ಎಲ್ಲೇ ನನ್ನನ್ನು ಕೊಂಡೊಯ್ದರೂ ಉತ್ತಮವಾದ ಸ್ಥಿತಿಯಲ್ಲಿ ಕೊಂಡೊಯ್ಯು ಮತ್ತು ನೀನು ಎಲ್ಲಿಂದ ಹೊರತಂದರೂ ಉತ್ತಮವಾಗಿರುವ ಸ್ಥಿತಿಯಲ್ಲಿ ಹೊರತೆಗೆ ಮತ್ತು ನನಗಾಗಿ ನಿನ್ನ ವತಿಯಿಂದ ಸಹಾಯದಾಯಕ ಅಧಿಕಾರ ಒದಗಿಸು.
وَقُلْ جَاءَ الْحَقُّ وَزَهَقَ الْبَاطِلُ ۚ إِنَّ الْبَاطِلَ كَانَ زَهُوقًا ٨١
📖 ಅನುವಾದ
ಆಯತ್ 81
ಹೇಳಿರಿ: ಸತ್ಯ ಬಂದಿತು ಮತ್ತು ಮಿಥ್ಯವು ಅಳಿದು ಹೋಯಿತು. ನಿಶ್ಚಯವಾಗಿಯೂ ಮಿಥ್ಯವು ಅಳಿದು ಹೋಗುವಂತಹದ್ದಾಗಿದೆ.
وَنُنَزِّلُ مِنَ الْقُرْآنِ مَا هُوَ شِفَاءٌ وَرَحْمَةٌ لِّلْمُؤْمِنِينَ ۙ وَلَا يَزِيدُ الظَّالِمِينَ إِلَّا خَسَارًا ٨٢
📖 ಅನುವಾದ
ಆಯತ್ 82
ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು ಅಕ್ರಮಿಗಳಿಗೆ ನಷ್ಟದ ಹೊರತು ಇನ್ನೇನೂ ಹೆಚ್ಚಿಸುವುದಿಲ್ಲ.
وَإِذَا أَنْعَمْنَا عَلَى الْإِنسَانِ أَعْرَضَ وَنَأَىٰ بِجَانِبِهِ ۖ وَإِذَا مَسَّهُ الشَّرُّ كَانَ يَئُوسًا ٨٣
📖 ಅನುವಾದ
ಆಯತ್ 83
ನಾವು ಮನುಷ್ಯನಿಗೆ ಅನುಗ್ರಹಿಸಿದಾಗ ಅವನು ಮುಖ ತಿರುಗಿಸಿ ದೂರ ಸರಿದು ಬಿಡುತ್ತಾನೆ ಮತ್ತು ಅವನಿಗೆ ಸಂಕಷ್ಟವೇನಾದರೂ ಬಾಧಿಸಿದರೆ ಅವನು ಹತಾಶನಾಗಿ ಬಿಡುತ್ತಾನೆ.
قُلْ كُلٌّ يَعْمَلُ عَلَىٰ شَاكِلَتِهِ فَرَبُّكُمْ أَعْلَمُ بِمَنْ هُوَ أَهْدَىٰ سَبِيلًا ٨٤
📖 ಅನುವಾದ
ಆಯತ್ 84
ಹೇಳಿರಿ: ಪ್ರತಿಯೊಬ್ಬನು ತನ್ನ ಪದ್ಧತಿಗನುಗುಣವಾಗಿ ಕರ್ಮವೆಸಗುತ್ತಾನೆ. ಅತ್ಯಂತ ಸನ್ಮಾರ್ಗದಲ್ಲಿರುವವರನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
وَيَسْأَلُونَكَ عَنِ الرُّوحِ ۖ قُلِ الرُّوحُ مِنْ أَمْرِ رَبِّي وَمَا أُوتِيتُم مِّنَ الْعِلْمِ إِلَّا قَلِيلًا ٨٥
📖 ಅನುವಾದ
ಆಯತ್ 85
ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ.
وَلَئِن شِئْنَا لَنَذْهَبَنَّ بِالَّذِي أَوْحَيْنَا إِلَيْكَ ثُمَّ لَا تَجِدُ لَكَ بِهِ عَلَيْنَا وَكِيلًا ٨٦
📖 ಅನುವಾದ
ಆಯತ್ 86
ನಾವು ಇಚ್ಛಿಸಿರುತ್ತಿದ್ದರೆ ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸಂದೇಶವನ್ನು ಕಸಿದುಕೊಳ್ಳುತ್ತಿದ್ದೆವು. ಅನಂತರ ಅದಕ್ಕಾಗಿ ನಮ್ಮ ವಿರುದ್ಧ ನೀವು ಯಾವ ಬೆಂಬಲಿಗನನ್ನು ಪಡೆಯಲಾರಿರಿ.
إِلَّا رَحْمَةً مِّن رَّبِّكَ ۚ إِنَّ فَضْلَهُ كَانَ عَلَيْكَ كَبِيرًا ٨٧
📖 ಅನುವಾದ
ಆಯತ್ 87
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.
قُل لَّئِنِ اجْتَمَعَتِ الْإِنسُ وَالْجِنُّ عَلَىٰ أَن يَأْتُوا بِمِثْلِ هَٰذَا الْقُرْآنِ لَا يَأْتُونَ بِمِثْلِهِ وَلَوْ كَانَ بَعْضُهُمْ لِبَعْضٍ ظَهِيرًا ٨٨
📖 ಅನುವಾದ
ಆಯತ್ 88
ಹೇಳಿರಿ: ಸಕಲ ಮನುಷ್ಯರು ಮತ್ತು ಯಕ್ಷಗಳು ಒಟ್ಟು ಸೇರಿ ಈ ಕುರ್ಆನ್ನಂತಹದ್ದನ್ನು ತರಲು ಬಯಸಿದರೂ ಅವರು ಅದರಂತಹದ್ದನ್ನು ತರಲಾರರು. ಅವರು ಪರಸ್ಪರ ಸಹಾಯಕರಾದರೂ ಸರಿಯೇ.
وَلَقَدْ صَرَّفْنَا لِلنَّاسِ فِي هَٰذَا الْقُرْآنِ مِن كُلِّ مَثَلٍ فَأَبَىٰ أَكْثَرُ النَّاسِ إِلَّا كُفُورًا ٨٩
📖 ಅನುವಾದ
ಆಯತ್ 89
ನಾವು ಈ ಕುರ್ಆನಿನಲ್ಲಿ ಜನರಿಗಾಗಿ ವಿವಿಧ ರೀತಿಯ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ. ಆದರೆ ಅಧಿಕ ಜನರು ನಿಷೇಧವನ್ನು ಕೈಗೊಂಡರು.
وَقَالُوا لَن نُّؤْمِنَ لَكَ حَتَّىٰ تَفْجُرَ لَنَا مِنَ الْأَرْضِ يَنبُوعًا ٩٠
📖 ಅನುವಾದ
ಆಯತ್ 90
ಅವರು ಹೇಳಿದರು: ನೀವು ನಮಗೆ ಭೂಮಿಯಿಂದ ಒಂದು ಚಿಲುಮೆಯನ್ನು ಹರಿಸುವ ತನಕ ನಾವೆಂದೂ ನಿಮ್ಮನ್ನು ನಂಬಲಾರೆವು.
أَوْ تَكُونَ لَكَ جَنَّةٌ مِّن نَّخِيلٍ وَعِنَبٍ فَتُفَجِّرَ الْأَنْهَارَ خِلَالَهَا تَفْجِيرًا ٩١
📖 ಅನುವಾದ
ಆಯತ್ 91
ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು ತುಂಬಿದ ಕಾಲುವೆಗಳನ್ನು ಹರಿಸಿ ತೋರಿಸಬೇಕು.
أَوْ تُسْقِطَ السَّمَاءَ كَمَا زَعَمْتَ عَلَيْنَا كِسَفًا أَوْ تَأْتِيَ بِاللَّهِ وَالْمَلَائِكَةِ قَبِيلًا ٩٢
📖 ಅನುವಾದ
ಆಯತ್ 92
ಅಥವಾ ನೀವು ಭಾವಿಸಿದಂತೆಯೇ ನಮ್ಮ ಮೇಲೆ ಆಕಾಶವನ್ನು ತುಂಡು ತುಂಡಾಗಿಸಿ ಬೀಳಿಸಬೇಕು. ಇಲ್ಲವೇ ನೀವು ಅಲ್ಲಾಹನನ್ನು ಮತ್ತು ಮಲಕ್ಗಳÀನ್ನು ನಮ್ಮ ಮುಖಾಮುಖಿ ತರಬೇಕು.
أَوْ يَكُونَ لَكَ بَيْتٌ مِّن زُخْرُفٍ أَوْ تَرْقَىٰ فِي السَّمَاءِ وَلَن نُّؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَّقْرَؤُهُ ۗ قُلْ سُبْحَانَ رَبِّي هَلْ كُنتُ إِلَّا بَشَرًا رَّسُولًا ٩٣
📖 ಅನುವಾದ
ಆಯತ್ 93
ಅಥವಾ ನಿಮಗಾಗಿ ಚಿನ್ನದ ಮನೆಯೊಂದು ಉಂಟಾಗಲಿ. ಇಲ್ಲವೇ ನೀವು ಆಕಾಶಕ್ಕೆ ಏರಿ ಹೋಗಬೇಕು ಮತ್ತು ನೀವು ನಮ್ಮ ಮೇಲೆ ನಾವು ಓದುವಂತಹ ಒಂದು ಗ್ರಂಥವನ್ನು ಇಳಿಸಿ ತರುವವರೆಗೂ ನಾವು ನಿಮ್ಮ ಏರುವಿಕೆಯನ್ನು ಖಂಡಿತ ನಂಬಲಾರೆವು. ನೀವು ಹೇಳಿರಿ: ನನ್ನ ಪ್ರಭು ಅದೆಷ್ಟು ಪರಮ ಪಾವನನು! ನಾನು ಸಂದೇಶವಾಹಕನಾದ ಕೇವಲ ಒಬ್ಬ ಮನುಷ್ಯ ಮಾತ್ರ ಆಗಿದ್ದಾನೆ.
وَمَا مَنَعَ النَّاسَ أَن يُؤْمِنُوا إِذْ جَاءَهُمُ الْهُدَىٰ إِلَّا أَن قَالُوا أَبَعَثَ اللَّهُ بَشَرًا رَّسُولًا ٩٤
📖 ಅನುವಾದ
ಆಯತ್ 94
ಜನರ ಬಳಿ ಸನ್ಮಾರ್ಗವು ತಲುಪಿದಾಗ ಅದರ ಮೇಲೆ ವಿಶ್ವಾಸವಿರಿಸದಂತೆ ತಡೆಯುತ್ತಿದ್ದುದು “ಅಲ್ಲಾಹನು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದ್ದಾನೆ? ಎಂಬ ಅವರ ಮಾತು ಮಾತ್ರವಾಗಿತ್ತು.
قُل لَّوْ كَانَ فِي الْأَرْضِ مَلَائِكَةٌ يَمْشُونَ مُطْمَئِنِّينَ لَنَزَّلْنَا عَلَيْهِم مِّنَ السَّمَاءِ مَلَكًا رَّسُولًا ٩٥
📖 ಅನುವಾದ
ಆಯತ್ 95
ಹೇಳಿರಿ: ಭೂಮಿಯ ಮೇಲೆ ಮಲಕ್ಗಳು ನೆಮ್ಮದಿಯಿಂದ ನೆಡೆದಾಡುತ್ತಿರುತ್ತಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಒಬ್ಬ ಮಲಕ್ನನ್ನೇ ಅವರ ಬಳಿ ಸಂದೇಶವಾಹಕನನ್ನಾಗಿ ಕಳುಹಿಸುತ್ತಿದ್ದೆವು,
قُلْ كَفَىٰ بِاللَّهِ شَهِيدًا بَيْنِي وَبَيْنَكُمْ ۚ إِنَّهُ كَانَ بِعِبَادِهِ خَبِيرًا بَصِيرًا ٩٦
📖 ಅನುವಾದ
ಆಯತ್ 96
ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿವಾಗಿಯೂ ಅವನು ತನ್ನ ದಾಸರ ಬಗ್ಗೆ ಚೆನ್ನಾಗಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿರುವನು.
وَمَن يَهْدِ اللَّهُ فَهُوَ الْمُهْتَدِ ۖ وَمَن يُضْلِلْ فَلَن تَجِدَ لَهُمْ أَوْلِيَاءَ مِن دُونِهِ ۖ وَنَحْشُرُهُمْ يَوْمَ الْقِيَامَةِ عَلَىٰ وُجُوهِهِمْ عُمْيًا وَبُكْمًا وَصُمًّا ۖ مَّأْوَاهُمْ جَهَنَّمُ ۖ كُلَّمَا خَبَتْ زِدْنَاهُمْ سَعِيرًا ٩٧
📖 ಅನುವಾದ
ಆಯತ್ 97
ಯಾರಿಗೆ ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುತ್ತನೋ ಅವನೇ ಸನ್ಮಾರ್ಗ ಪಡೆಯುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸುತ್ತಾನೋ ಇಂತಹವರಿಗೆ ಖಂಡಿತವಾಗಿಯೂ ನೀವು ಅಲ್ಲಾಹನ ಹೊರತು ಅವನ ಸಹಾಯಕ ಮಿತ್ರನಾಗಿ ಇನ್ನಾರನ್ನು ಪಡೆಯಲಾರಿರಿ. ಅಂತಹವರನ್ನು ನಾವು ಪ್ರಳಯ ದಿನದಂದು ಕುರುಡರು, ಮೂಗರು, ಕಿವುಡರನ್ನಾಗಿ ಮಾಡಿ ಅಧೋಮುಕಿಗಳನ್ನಾಗಿ ಒಟ್ಟು ಸೇರಿಸುವೆವು. ಅವರ ನೆಲೆಯು ನರಕವಾಗಿರುವುದು. ಅದರ ಅಗ್ನಿಯು ಮಂದವಾದಾಗಲೆಲ್ಲಾ ನಾವು ಅವರ ಮೇಲೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.
ذَٰلِكَ جَزَاؤُهُم بِأَنَّهُمْ كَفَرُوا بِآيَاتِنَا وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا ٩٨
📖 ಅನುವಾದ
ಆಯತ್ 98
ಇದು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದಕ್ಕಾಗಿ ಮತ್ತು ನಾವು ಎಲುಬುಗಳಾಗಿ, ಚೂರು ಚೂರಾದ ಬಳಿಕವೂ ಹೊಸ ಸೃಷ್ಟಿಯಲ್ಲಿ ಎಬ್ಬಿಸಲ್ಪಡುತ್ತೇವೆಯೇ? ಎಂದು ಅವರು ಹೇಳುತ್ತಿದ್ದುದರ ಪ್ರತಿಫಲವಾಗಿದೆ.
۞ أَوَلَمْ يَرَوْا أَنَّ اللَّهَ الَّذِي خَلَقَ السَّمَاوَاتِ وَالْأَرْضَ قَادِرٌ عَلَىٰ أَن يَخْلُقَ مِثْلَهُمْ وَجَعَلَ لَهُمْ أَجَلًا لَّا رَيْبَ فِيهِ فَأَبَى الظَّالِمُونَ إِلَّا كُفُورًا ٩٩
📖 ಅನುವಾದ
ಆಯತ್ 99
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಅವರಂತಿರುವವರನ್ನು ಸೃಷ್ಟಿಸಲು ಶಕ್ತನಾಗಿದ್ದಾನೆಂದು ಅವರು ನೋಡುವುದಿಲ್ಲವೇ? ಮತ್ತು ಅವನು ಅವರಿಗೆ ಒಂದು ಕಾಲಾವಧಿಯನ್ನು ನಿಶ್ಚಯಿಸಿದನು: ಅದರಲ್ಲಿ ಸಂಶಯವಿಲ್ಲ. ಆದರೆ ಅಕ್ರಮಿಗಳು ನಿಷೇಧವನ್ನು ತಾಳದೇ ಇರುವುದಿಲ್ಲ.
قُل لَّوْ أَنتُمْ تَمْلِكُونَ خَزَائِنَ رَحْمَةِ رَبِّي إِذًا لَّأَمْسَكْتُمْ خَشْيَةَ الْإِنفَاقِ ۚ وَكَانَ الْإِنسَانُ قَتُورًا ١٠٠
📖 ಅನುವಾದ
ಆಯತ್ 100
ಓ ಪೈಗಂಬರರೇ ಹೇಳಿರಿ: ನೀವು ನನ್ನ ಪ್ರಭುವಿನ ಕಾರುಣ್ಯದ ಭಂಡಾರಗಳ ಒಡೆಯರಾಗಿರುತ್ತಿದ್ದರೂ ಅದು ಖರ್ಚಾಗಿಬಿಡುವ ಭಯದಿಂದ ನೀವದನ್ನು ತಡೆದಿರಿಸಿಕೊಳ್ಳುತ್ತಿದ್ದಿರಿ ಮತ್ತು ಮನುಷ್ಯನು ಬಲು ಜಿಪುಣನೇ ಆಗಿದ್ದಾನೆ.
وَلَقَدْ آتَيْنَا مُوسَىٰ تِسْعَ آيَاتٍ بَيِّنَاتٍ ۖ فَاسْأَلْ بَنِي إِسْرَائِيلَ إِذْ جَاءَهُمْ فَقَالَ لَهُ فِرْعَوْنُ إِنِّي لَأَظُنُّكَ يَا مُوسَىٰ مَسْحُورًا ١٠١
📖 ಅನುವಾದ
ಆಯತ್ 101
(ಓ ಪೈಗಂಬರರೇ) ನಾವು ಮೂಸಾರವರಿಗೆ ಸುಸ್ಪಷ್ಟವಾದ ಒಂಬತ್ತು ದೃಷ್ಟಾಂತಗಳನ್ನು ದಯಪಾಲಿಸಿದೆವು. ಇನ್ನು ನೀವು ಇಸ್ರಾಯೀಲ್ ಸಂತತಿಗಳೊAದಿಗೆ ಕೇಳಿರಿ: ಅವರು (ಮೂಸಾರವರು) ಅವರೆಡೆಗೆ ಬಂದಾಗ ಫಿರ್ಔನ್ ಹೇಳಿದನು: ಓ ಮೂಸಾ, ಖಂಡಿತವಾಗಿಯು ನೀನೊಬ್ಬ ಮಾಟಬಾಧಿತನೆಂದು ನಾನು ಭಾವಿಸುತ್ತೇನೆ.
قَالَ لَقَدْ عَلِمْتَ مَا أَنزَلَ هَٰؤُلَاءِ إِلَّا رَبُّ السَّمَاوَاتِ وَالْأَرْضِ بَصَائِرَ وَإِنِّي لَأَظُنُّكَ يَا فِرْعَوْنُ مَثْبُورًا ١٠٢
📖 ಅನುವಾದ
ಆಯತ್ 102
ಮೂಸಾ ಉತ್ತರಿಸಿದರು: ಈ ದೃಷ್ಟಾಂತಗಳನ್ನು(ಸತ್ಯವನ್ನು) ನಿನಗೆ ಮನವರಿಕೆ ಮಾಡಿಕೊಡಲು ಆಕಾಶಗಳ ಮತ್ತು ಭೂಮಿಯ ಪ್ರಭುವೇ ಇಳಿಸಿಕೊಟ್ಟಿರುವನೆಂದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್ಔನ್ ನಿಶ್ಚಯವಾಗಿಯೂ ನೀನು ನಾಶಕ್ಕೊಳಗಾಗಿರುವೆ ಎಂದು ನಾನು ಭಾವಿಸುತ್ತೇನೆ.
فَأَرَادَ أَن يَسْتَفِزَّهُم مِّنَ الْأَرْضِ فَأَغْرَقْنَاهُ وَمَن مَّعَهُ جَمِيعًا ١٠٣
📖 ಅನುವಾದ
ಆಯತ್ 103
ಕೊನೆಗೆ ಫಿರ್ಔನ್ ಅವರನ್ನು ಭೂಮುಖದಿಂದಲೇ ಕಿತ್ತೆಸೆಯಲಿಕ್ಕಾಗಿ ನಿರ್ಧರಿಸಿದನು. ಆದರೆ ನಾವು ಅವನನ್ನು ಮತ್ತು ಅವನ ಜೊತೆಯಿದ್ದವರನ್ನು ಮುಳಿಗಿಸಿಬಿಟ್ಟೆವು.
وَقُلْنَا مِن بَعْدِهِ لِبَنِي إِسْرَائِيلَ اسْكُنُوا الْأَرْضَ فَإِذَا جَاءَ وَعْدُ الْآخِرَةِ جِئْنَا بِكُمْ لَفِيفًا ١٠٤
📖 ಅನುವಾದ
ಆಯತ್ 104
ಅವನ ನಾಶದ ನಂತರ ನಾವು ಇಸ್ರಾಯೀಲ್ ಸಂತತಿಗಳಿಗೆ ಹೇಳಿದೆವು: ನೀವು ಈ ಭೂಪ್ರದೇಶದಲ್ಲಿ (ಫಲಸ್ತೀನ್) ವಾಸಿಸಿರಿ. ಇನ್ನು ಪರಲೋಕದ ವಾಗ್ದಾನವು ಬಂದುಬಿಟ್ಟರೆ ನಾವು ನಿಮ್ಮನ್ನು ಒಟ್ಟುಗೂಡಿಸಿ ತರುವೆವು.
وَبِالْحَقِّ أَنزَلْنَاهُ وَبِالْحَقِّ نَزَلَ ۗ وَمَا أَرْسَلْنَاكَ إِلَّا مُبَشِّرًا وَنَذِيرًا ١٠٥
📖 ಅನುವಾದ
ಆಯತ್ 105
ನಾವು ಈ ಕುರ್ಆನನ್ನು ಸತ್ಯದೊಂದಿಗೆ ಇಳಿಸಿರುತ್ತೇವೆ. ಮತ್ತು ಅದು ಸತ್ಯದೊಂದಿಗೇ ಇಳಿಯಿತು ಮತ್ತು (ಓ ಪೈಗಂಬರರೇ) ನಾವು ನಿಮ್ಮನ್ನು ಕೇವಲ ಸುವಾರ್ತೆ ನೀಡುವವನಾಗಿ, ಮುನ್ನೆಚ್ಚರಿಕೆ ಕೊಡುವವನಾಗಿ ಕಳುಹಿಸಿರುತ್ತೇವೆ.
وَقُرْآنًا فَرَقْنَاهُ لِتَقْرَأَهُ عَلَى النَّاسِ عَلَىٰ مُكْثٍ وَنَزَّلْنَاهُ تَنزِيلًا ١٠٦
📖 ಅನುವಾದ
ಆಯತ್ 106
ನಾವು ಕುರ್ಆನನ್ನು ನೀವು ಜನರಿಗೆ ಸಂದರ್ಭಕ್ಕೆ ತಕ್ಕಂತೆ ಓದಿ ಕೊಡಲೆಂದು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿರುತ್ತೇವೆ. ಮತ್ತು ನಾವು ಸಹ ಅದನ್ನು ಹಂತ ಹಂತವಾಗಿ ಇಳಿಸಿರುತ್ತೇವೆ.
قُلْ آمِنُوا بِهِ أَوْ لَا تُؤْمِنُوا ۚ إِنَّ الَّذِينَ أُوتُوا الْعِلْمَ مِن قَبْلِهِ إِذَا يُتْلَىٰ عَلَيْهِمْ يَخِرُّونَ لِلْأَذْقَانِ سُجَّدًا ١٠٧
📖 ಅನುವಾದ
ಆಯತ್ 107
ಹೇಳಿರಿ: (ಓ ಸತ್ಯನಿಷೇಧಿಗಳೇ) ನೀವು ಇದರಲ್ಲಿ ವಿಶ್ವಾಸವಿಡಿರಿ: ಇಲ್ಲವೇ ವಿಶ್ವಾಸವಿಡದಿರಿ. ಖಂಡಿತವಾಗಿಯು ಇದಕ್ಕೆ ಮೊದಲು ಜ್ಞಾನ ನೀಡಲಾದವರ ಬಳಿ ಇದನ್ನು ಓದಿ ಹೇಳಲಾದಾಗ ಅವರು ಅಡ್ಡಬಿದ್ದು ಸಾಷ್ಟಾಂಗವೆರಗಿ ಬಿಡುತ್ತಾರೆ.
وَيَقُولُونَ سُبْحَانَ رَبِّنَا إِن كَانَ وَعْدُ رَبِّنَا لَمَفْعُولًا ١٠٨
📖 ಅನುವಾದ
ಆಯತ್ 108
ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭುವು ಅದೆಷ್ಟೋ ಪರಮ ಪಾವನನು ನಿಸ್ಸಂದೇಹವಾಗಿಯು ನಮ್ಮ ಪ್ರಭುವಿನ ವಾಗ್ದಾನವು ನಡೆದೇ ತೀರುವುದು.
وَيَخِرُّونَ لِلْأَذْقَانِ يَبْكُونَ وَيَزِيدُهُمْ خُشُوعًا ۩ ١٠٩
📖 ಅನುವಾದ
ಆಯತ್ 109
ಅವರು ರೋಧಿಸುತ್ತಾ ಮುಖವನ್ನು ನೆಲಕ್ಕಿಟ್ಟು ಅಡ್ಡಬೀಳುತ್ತಾರೆ. ಮತ್ತು ಈ ಕುರ್ಆನ್ ಅವರ ಭಯ, ಭಕ್ತಿಯನ್ನು ಹೆಚ್ಚಿಸುತ್ತದೆ.
قُلِ ادْعُوا اللَّهَ أَوِ ادْعُوا الرَّحْمَٰنَ ۖ أَيًّا مَّا تَدْعُوا فَلَهُ الْأَسْمَاءُ الْحُسْنَىٰ ۚ وَلَا تَجْهَرْ بِصَلَاتِكَ وَلَا تُخَافِتْ بِهَا وَابْتَغِ بَيْنَ ذَٰلِكَ سَبِيلًا ١١٠
📖 ಅನುವಾದ
ಆಯತ್ 110
ಹೇಳಿರಿ: ನೀವು ಅಲ್ಲಾಹನನ್ನು ಅಲ್ಲಾಹನೆಂದು ಕರೆಯಿರಿ ಇಲ್ಲವೇ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ನಾಮದಿಂದ ಕರೆದರು ಅವನಿಗೇ ಅತ್ಯುತ್ತಮ ನಾಮಗಳಿವೆ. ಮತ್ತು ನೀವು ನಿಮ್ಮ ನಮಾಝನ್ನು ಉಚ್ಛಸ್ವರದಲ್ಲಾಗಲಿ ಅಥವಾ ಮೆಲು ಧ್ವನಿಯಲ್ಲಾಗಲಿ ನಿರ್ವಹಿಸದಿರಿ. ಬದಲಿಗೆ ಅವುಗಳ ಮಧ್ಯಮ ಮಾರ್ಗವನ್ನು ಅರಸಿರಿ.
وَقُلِ الْحَمْدُ لِلَّهِ الَّذِي لَمْ يَتَّخِذْ وَلَدًا وَلَمْ يَكُن لَّهُ شَرِيكٌ فِي الْمُلْكِ وَلَمْ يَكُن لَّهُ وَلِيٌّ مِّنَ الذُّلِّ ۖ وَكَبِّرْهُ تَكْبِيرًا ١١١
📖 ಅನುವಾದ
ಆಯತ್ 111
ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮಿಸಲು. ಅವನು ಯಾರನ್ನು ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅವನ ಅಧಿಪತ್ಯದಲ್ಲಿ ಯಾರೂ ಸಹಭಾಗಿ ಇಲ್ಲ ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ಆದ್ದರಿಂದ ನೀವು ಸಂಪೂರ್ಣವಾಗಿ ಅವನ ಹಿರಿಮೆಯನ್ನು ಕೊಂಡಾಡಿರಿ.
ಓದಿ ಸೂರಾ ಅಲ್-ಇಸ್ರಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers

