ಸೂರಾ ಅನ್-ನಹ್ಲ್ ಅರೇಬಿಕ್ ಮತ್ತು ಕನ್ನಡ

ಸೂರಾ ಅನ್-ನಹ್ಲ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (128 ಆಯತ್ — مكية). ಅನ್-ನಹ್ಲ್ ಆಲಿಸಿ, ಅನ್-ನಹ್ಲ್ ಅನುವಾದ, ಅನ್-ನಹ್ಲ್ mp3, ಅನ್-ನಹ್ಲ್ pdf.

ಸೂರಾ ಅನ್-ನಹ್ಲ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
أَتَىٰ أَمْرُ اللَّهِ فَلَا تَسْتَعْجِلُوهُ ۚ سُبْحَانَهُ وَتَعَالَىٰ عَمَّا يُشْرِكُونَ ۝١
📖 ಅನುವಾದ ಆಯತ್ 1
ಅಲ್ಲಾಹನ ಆದೇಶವು ಬಂದುಬಿಟ್ಟಿದೆ. ಆದ್ದರಿಂದ ನೀವು ಅದರ ಬಗ್ಗೆ ಆತುರ ಪಡಬೇಡಿರಿ. ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅವನು ಪರಮ ಪಾವನನು, ಮಹೋನ್ನತನು ಆಗಿರುವನು.
يُنَزِّلُ الْمَلَائِكَةَ بِالرُّوحِ مِنْ أَمْرِهِ عَلَىٰ مَن يَشَاءُ مِنْ عِبَادِهِ أَنْ أَنذِرُوا أَنَّهُ لَا إِلَٰهَ إِلَّا أَنَا فَاتَّقُونِ ۝٢
📖 ಅನುವಾದ ಆಯತ್ 2
ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಮೇಲೆ ತನ್ನ ಅಪ್ಪಣೆಯಿಂದ ದಿವ್ಯ ಸಂದೇಶದೊAದಿಗೆ ಮಲಕ್‌ಗಳನ್ನು ಇಳಿಸುತ್ತಾನೆ: ನನ್ನ ಹೊರತು ಯಾರೂ ಆರಾಧ್ಯನಿಲ್ಲ. ಆದ್ದರಿಂದ ನೀವು ನನ್ನನ್ನು ಭಯಪಟ್ಟುಕೊಳ್ಳಿರಿ ಎಂಬ ಮುನ್ನೆಚ್ಚರಿಕೆಯನ್ನು ನೀವು ಜನರಿಗೆ ನೀಡಿರಿ.
خَلَقَ السَّمَاوَاتِ وَالْأَرْضَ بِالْحَقِّ ۚ تَعَالَىٰ عَمَّا يُشْرِكُونَ ۝٣
📖 ಅನುವಾದ ಆಯತ್ 3
ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯಪೂರ್ಣವಾಗಿ ಸೃಷ್ಟಿಸಿದನು. ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅವನು ಮಹೋನ್ನತನಾಗಿದ್ದಾನೆ.
خَلَقَ الْإِنسَانَ مِن نُّطْفَةٍ فَإِذَا هُوَ خَصِيمٌ مُّبِينٌ ۝٤
📖 ಅನುವಾದ ಆಯತ್ 4
ಅವನು ಮನುಷ್ಯನನ್ನು ವೀರ್ಯಾಣುವಿನಿಂದ ಸೃಷ್ಟಿಸಿದನು. ಆದರೆ ಅವನು (ಶರಣಾಗುವ ಬದಲು) ಜಗಳಗಂಟನಾಗಿದ್ದಾನೆ.
وَالْأَنْعَامَ خَلَقَهَا ۗ لَكُمْ فِيهَا دِفْءٌ وَمَنَافِعُ وَمِنْهَا تَأْكُلُونَ ۝٥
📖 ಅನುವಾದ ಆಯತ್ 5
ಅವನೇ ಜಾನುವಾರುಗಳನ್ನು ಸೃಷ್ಟಿಸಿದನು. ನಿಮಗೆ ಅವುಗಳಲ್ಲಿ ಬೆಚ್ಚಗಿನ ಉಡುಪುಗಳು ಇವೆ ಮತ್ತು ಅನೇಕ ಪ್ರಯೋಜನಗಳಿವೆ ಮತ್ತು ಅವುಗಳಿಂದ ಕೆಲವನ್ನು ನೀವು ತಿನ್ನುತ್ತೀರಿ.
وَلَكُمْ فِيهَا جَمَالٌ حِينَ تُرِيحُونَ وَحِينَ تَسْرَحُونَ ۝٦
📖 ಅನುವಾದ ಆಯತ್ 6
ನೀವು ಸಾಯಂಕಾಲ ಅವುಗಳನ್ನು (ಮೇಯುವಲ್ಲಿಂದ) ತರುವಾಗಲೂ ಮತ್ತು ಮುಂಜಾನೆ ನೀವು ಮೇಯಲು ಬಿಡುವಾಗಲೂ ನಿಮಗೆ ಅವುಗಳಲ್ಲಿ ಒಂದು ಸೊಬಗಿದೆ.
وَتَحْمِلُ أَثْقَالَكُمْ إِلَىٰ بَلَدٍ لَّمْ تَكُونُوا بَالِغِيهِ إِلَّا بِشِقِّ الْأَنفُسِ ۚ إِنَّ رَبَّكُمْ لَرَءُوفٌ رَّحِيمٌ ۝٧
📖 ಅನುವಾದ ಆಯತ್ 7
ಮತ್ತು ಅವು ನಿಮ್ಮ ಭಾರವನ್ನು ನಿಮಗೆ ಅರ್ಧಜೀವವಾಗದೆ ತಲುಪಿಸಲು ಸಾಧ್ಯವಾಗದಂತಹ ಪಟ್ಟಣಗಳಿಗೆ ಹೊತ್ತುಕೊಂಡು ಹೋಗುತ್ತವೆ. ನಿಶ್ಚಯವಾಗಿಯು ನಿಮ್ಮ ಪ್ರಭು ವತ್ಸಲನು, ಕರುಣಾನಿಧಿಯು ಆಗಿದ್ದಾನೆ.
وَالْخَيْلَ وَالْبِغَالَ وَالْحَمِيرَ لِتَرْكَبُوهَا وَزِينَةً ۚ وَيَخْلُقُ مَا لَا تَعْلَمُونَ ۝٨
📖 ಅನುವಾದ ಆಯತ್ 8
ಅವನು ಕುದುರೆಗಳನ್ನು, ಹೆಸರಗತ್ತೆಗಳನ್ನು ಮತ್ತು ಕತ್ತೆಗಳನ್ನು ನಿಮ್ಮ ಸವಾರಿಗಾಗಿ ಹಾಗೂ ಅಲಂಕಾರಕ್ಕಾಗಿ ಸೃಷ್ಟಿಸಿರುತ್ತಾನೆ ಮತ್ತು ಅವನು ನಿಮಗೆ ಅರಿವೇ ಇಲ್ಲಂದತಹ ಎಷ್ಟೋ ವಸ್ತುಗಳನ್ನು ಸೃಷ್ಟಿಸುತ್ತಾನೆ.
وَعَلَى اللَّهِ قَصْدُ السَّبِيلِ وَمِنْهَا جَائِرٌ ۚ وَلَوْ شَاءَ لَهَدَاكُمْ أَجْمَعِينَ ۝٩
📖 ಅನುವಾದ ಆಯತ್ 9
ಕೆಲವು ಅಡ್ಡಮಾರ್ಗಗಳಿರುವಾಗ ಅಲ್ಲಾಹನ ಮೇಲೆಯೇ ಸನ್ಮಾರ್ಗವನ್ನು ತೋರಿಸಿ ಕೊಡುವ ಹೊಣೆಯಿದೆ ಮತ್ತು ಅವನು ಇಚ್ಛಿಸಿರುತ್ತಿದ್ದರೆ ನಿಮ್ಮೆಲ್ಲರನ್ನು (ಬಲವಂತವಾಗಿ) ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದನು (ಆದರೆ ಇದು ಅವನ ಯುಕ್ತಿಗೆ ವಿರುದ್ಧವಾಗಿದೆ.)
هُوَ الَّذِي أَنزَلَ مِنَ السَّمَاءِ مَاءً ۖ لَّكُم مِّنْهُ شَرَابٌ وَمِنْهُ شَجَرٌ فِيهِ تُسِيمُونَ ۝١٠
📖 ಅನುವಾದ ಆಯತ್ 10
ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ನೀವು ಕುಡಿಯುತ್ತೀರಿ ಮತ್ತು ಅದರಿಂದಲೇ ಬೆಳೆದ ಮರಗಳನ್ನು ನಿಮ್ಮ ಜಾನುವಾರುಗಳಿಗೆ ಮೇಯಿಸುತ್ತೀರಿ.
يُنبِتُ لَكُم بِهِ الزَّرْعَ وَالزَّيْتُونَ وَالنَّخِيلَ وَالْأَعْنَابَ وَمِن كُلِّ الثَّمَرَاتِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ ۝١١
📖 ಅನುವಾದ ಆಯತ್ 11
ಅದರಿಂದಲೇ ಅವನು ನಿಮಗೆ ಕೃಷಿಯನ್ನು, ಝೈತೂನನ್ನು (ಆಲೀವ್), ಖರ್ಜೂರವನ್ನು, ದ್ರಾಕ್ಷೆಗಳನ್ನು ಮತ್ತು ನಾನಾ ವಿಧದ ಹಣ್ಣು ಹಂಪಲುಗಳನ್ನು ಬೆಳೆಸುತ್ತಾನೆ. ನಿಸ್ಸಂಶಯವಾಗಿಯು ಇದರಲ್ಲಿ ಚಿಂತಿಸುವ ಜನರಿಗೆ ನಿದರ್ಶನವಿದೆ.
وَسَخَّرَ لَكُمُ اللَّيْلَ وَالنَّهَارَ وَالشَّمْسَ وَالْقَمَرَ ۖ وَالنُّجُومُ مُسَخَّرَاتٌ بِأَمْرِهِ ۗ إِنَّ فِي ذَٰلِكَ لَآيَاتٍ لِّقَوْمٍ يَعْقِلُونَ ۝١٢
📖 ಅನುವಾದ ಆಯತ್ 12
ಅವನೇ ನಿಮಗೆ ರಾತ್ರಿಯನ್ನು, ಹಗಲನ್ನು, ಸೂರ್ಯನನ್ನು ಮತ್ತು ಚಂದ್ರನನ್ನು ಅಧೀನಗೊಳಿಸಿದನು ಮತ್ತು ನಕ್ಷತ್ರಗಳು ಸಹ ಅವನ ಆಜ್ಞೆಯನುಸಾರ ಅಧೀನದಲ್ಲಿವೆ. ಇದರಲ್ಲಿ ಬುದ್ಧಿವಂತ ಜನರಿಗೆ ಅನೇಕ ನಿದರ್ಶನಗಳಿವೆ.
وَمَا ذَرَأَ لَكُمْ فِي الْأَرْضِ مُخْتَلِفًا أَلْوَانُهُ ۗ إِنَّ فِي ذَٰلِكَ لَآيَةً لِّقَوْمٍ يَذَّكَّرُونَ ۝١٣
📖 ಅನುವಾದ ಆಯತ್ 13
ಅವನೇ ನಿಮಗಾಗಿ ಭೂಮಿಯಲ್ಲಿ ಅನೇಕ ವಸ್ತುಗಳನ್ನು ವಿವಿಧ ಬಣ್ಣಗಳಲ್ಲಿ ಸೃಷ್ಟಿಸಿದನು. ನಿಸ್ಸಂಶಯವಾಗಿಯೂ ಇದರಲ್ಲಿ ಉಪದೇಶ ಸ್ವೀಕರಿಸುವವರಿಗೆ ದೃಷ್ಟಾಂತವಿದೆ.
وَهُوَ الَّذِي سَخَّرَ الْبَحْرَ لِتَأْكُلُوا مِنْهُ لَحْمًا طَرِيًّا وَتَسْتَخْرِجُوا مِنْهُ حِلْيَةً تَلْبَسُونَهَا وَتَرَى الْفُلْكَ مَوَاخِرَ فِيهِ وَلِتَبْتَغُوا مِن فَضْلِهِ وَلَعَلَّكُمْ تَشْكُرُونَ ۝١٤
📖 ಅನುವಾದ ಆಯತ್ 14
ಅವನೇ ಸಮುದ್ರವನ್ನು ನಿಮಗೆ ಅಧೀನಗೊಳಿಸಿದನು. ನೀವು ಅದರಿಂದ ತಾಜಾ ಮಾಂಸವನ್ನು ಸೇವಿಸಲಿಕ್ಕಾಗಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು ಅದರಿಂದ ಹೊರ ತೆಗೆಯಲಿಕ್ಕಾಗಿದೆ ಮತ್ತು ಅದರಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಚಲಿಸುತ್ತಿರುವುದನ್ನು ನೀವು ಕಾಣುತ್ತೀರಿ. ಇದೆಲ್ಲಾ ನೀವು ಅವನ ಅನುಗ್ರಹವನ್ನು ಅರಸಲೆಂದಾಗಿದೆ ಮತ್ತು ಪ್ರಾಯಶಃ ನೀವು ಕೃತಜ್ಞತೆಯನ್ನು ತೋರಬಹುದು.
وَأَلْقَىٰ فِي الْأَرْضِ رَوَاسِيَ أَن تَمِيدَ بِكُمْ وَأَنْهَارًا وَسُبُلًا لَّعَلَّكُمْ تَهْتَدُونَ ۝١٥
📖 ಅನುವಾದ ಆಯತ್ 15
ಮತ್ತು ಅವನು ಭೂಮಿಯಲ್ಲಿ ಭದ್ರವಾದ ಪರ್ವತಗಳನ್ನು ಅದು ನಿಮ್ಮೊಂದಿಗೆ ಅಲುಗಾಡದಂತೆ ನಾಟಿಬಿಟ್ಟನು. ಮತ್ತು ನದಿಗಳನ್ನು, ಮಾರ್ಗಗಳನ್ನು ಮಾಡಿದನು. ಇದು ನೀವು ಮಾರ್ಗ ಪಡೆಯಲೆಂದಾಗಿದೆ.
وَعَلَامَاتٍ ۚ وَبِالنَّجْمِ هُمْ يَهْتَدُونَ ۝١٦
📖 ಅನುವಾದ ಆಯತ್ 16
ಇನ್ನೂ ಅನೇಕ ಗುರುತುಗಳನ್ನು ಅವನು ನಿಶ್ಚಯಿಸಿದ್ದಾನೆ ಮತ್ತು ನಕ್ಷತ್ರದಿಂದಲೂ ಜನರು ದಾರಿ ಪಡೆಯುತ್ತಾರೆ.
أَفَمَن يَخْلُقُ كَمَن لَّا يَخْلُقُ ۗ أَفَلَا تَذَكَّرُونَ ۝١٧
📖 ಅನುವಾದ ಆಯತ್ 17
ಹೀಗಿರುವಾಗ ಸೃಷ್ಟಿಸುವಾತ(ಅಲ್ಲಾಹ್) ಏನನ್ನು ಸೃಷ್ಟಿಸಲಾಗದವನಂತೆ ಆಗಿರುವನೇ? ನೀವು ಒಂದಿಷ್ಟು ಚಿಂತಿಸುವುದಿಲ್ಲವೇ
وَإِن تَعُدُّوا نِعْمَةَ اللَّهِ لَا تُحْصُوهَا ۗ إِنَّ اللَّهَ لَغَفُورٌ رَّحِيمٌ ۝١٨
📖 ಅನುವಾದ ಆಯತ್ 18
ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸಲು ಬಯಸಿದರು ನಿಮಗೆ ಅದನ್ನು ಎಣಿಸಲು ಸಾಧ್ಯವಿಲ್ಲ. ನಿಶ್ಚಯವಾಗಿಯು ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು.
وَاللَّهُ يَعْلَمُ مَا تُسِرُّونَ وَمَا تُعْلِنُونَ ۝١٩
📖 ಅನುವಾದ ಆಯತ್ 19
ನೀವು ರಹಸ್ಯವಾಗಿರಿಸುವುದನ್ನು ಮತ್ತು ಬಹಿರಂಗಗೊಳಿಸುವುದನ್ನು ಅಲ್ಲಾಹನು ಅರಿಯುತ್ತಾನೆ.
وَالَّذِينَ يَدْعُونَ مِن دُونِ اللَّهِ لَا يَخْلُقُونَ شَيْئًا وَهُمْ يُخْلَقُونَ ۝٢٠
📖 ಅನುವಾದ ಆಯತ್ 20
ಅಲ್ಲಾಹನ ಹೊರತು ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಏನನ್ನೂ ಸೃಷ್ಟಿಸಲಾರರು. ಅಲ್ಲದೇ, ಸ್ವತಃ ಅವರೇ ಸೃಷ್ಟಿಸಲ್ಪಟ್ಟವರು.
أَمْوَاتٌ غَيْرُ أَحْيَاءٍ ۖ وَمَا يَشْعُرُونَ أَيَّانَ يُبْعَثُونَ ۝٢١
📖 ಅನುವಾದ ಆಯತ್ 21
ಅವರು ಮೃತರು, ಜೀವಂತರಲ್ಲ ಮತ್ತು ತಮ್ಮನ್ನು ಯಾವಾಗ ಎಬ್ಬಿಸಲಾಗವುದೆಂದೂ ಅವರು ತಿಳಿಯಲಾರರು.
إِلَٰهُكُمْ إِلَٰهٌ وَاحِدٌ ۚ فَالَّذِينَ لَا يُؤْمِنُونَ بِالْآخِرَةِ قُلُوبُهُم مُّنكِرَةٌ وَهُم مُّسْتَكْبِرُونَ ۝٢٢
📖 ಅನುವಾದ ಆಯತ್ 22
ನಿಮ್ಮ ಆರಾಧ್ಯನು ಏಕೈಕ ಆರಾಧ್ಯನಾಗಿದ್ದಾನೆ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಹೃದಯಗಳು ನಿಷೇಧಿಗಳಾಗಿವೆ ಮತ್ತು ಸ್ವತಃ ಅವರು ಅಹಂಕಾರದಲ್ಲಿ ತುಂಬಿ ಹೋಗಿದ್ದಾರೆ.
لَا جَرَمَ أَنَّ اللَّهَ يَعْلَمُ مَا يُسِرُّونَ وَمَا يُعْلِنُونَ ۚ إِنَّهُ لَا يُحِبُّ الْمُسْتَكْبِرِينَ ۝٢٣
📖 ಅನುವಾದ ಆಯತ್ 23
ನಿಸ್ಸಂದೇಹವಾಗಿಯು ಅಲ್ಲಾಹನು ಅವರು ರಹಸ್ಯಗೊಳಿಸುವ ಮತ್ತು ಬಹಿರಂಗಗೊಳಿಸುವ ಸಕಲವನ್ನೂ ಅರಿಯುತ್ತಾನೆ. ಖಂಡಿತವಾಗಿಯು ಅವನು ಅಹಂಕಾರ ತೋರುವವರನ್ನು ಮೆಚ್ಚುವುದಿಲ್ಲ.
وَإِذَا قِيلَ لَهُم مَّاذَا أَنزَلَ رَبُّكُمْ ۙ قَالُوا أَسَاطِيرُ الْأَوَّلِينَ ۝٢٤
📖 ಅನುವಾದ ಆಯತ್ 24
ನಿಮ್ಮ ಪ್ರಭುವು ಅವತೀರ್ಣಗೊಳಿಸಿರುವುದೇನೆಂದು ಅವರೊಡನೆ ಕೇಳಲಾದರೆ, ಅವೆಲ್ಲವು ಹಿಂದಿನವರ ಕಟ್ಟು ಕಥೆಗಳಾಗಿವೆಯೆಂದು ಅವರು ಉತ್ತರಿಸುತ್ತಾರೆ.
لِيَحْمِلُوا أَوْزَارَهُمْ كَامِلَةً يَوْمَ الْقِيَامَةِ ۙ وَمِنْ أَوْزَارِ الَّذِينَ يُضِلُّونَهُم بِغَيْرِ عِلْمٍ ۗ أَلَا سَاءَ مَا يَزِرُونَ ۝٢٥
📖 ಅನುವಾದ ಆಯತ್ 25
(ಇದರ ಪರಿಣಾಮವಾಗಿ) ಅವರು ಪುನರುತ್ಥಾನದ ದಿನದಂದು ತಮ್ಮ ಸಂಪೂರ್ಣ ಪಾಪ ಭಾರಗಳ ಜೊತೆಗೇ ಅಜ್ಞಾನದಿಂದ ದಾರಿಗೆಡಿಸಿದವರು ಪಾಪ ಭಾರಗಳ ಪಾಲನ್ನು ಕೂಡ ವಹಿಸಿಕೊಳ್ಳುವರು. ತಿಳಿದುಕೊಳ್ಳಿರಿ! ಅವರು ಹೊರುತ್ತಿರುವ ಭಾರವು ಅದೆಷ್ಟು ಕೆಟ್ಟದು.
قَدْ مَكَرَ الَّذِينَ مِن قَبْلِهِمْ فَأَتَى اللَّهُ بُنْيَانَهُم مِّنَ الْقَوَاعِدِ فَخَرَّ عَلَيْهِمُ السَّقْفُ مِن فَوْقِهِمْ وَأَتَاهُمُ الْعَذَابُ مِنْ حَيْثُ لَا يَشْعُرُونَ ۝٢٦
📖 ಅನುವಾದ ಆಯತ್ 26
ಇವರಿಗಿಂತ ಮುಂಚಿನವರು ಸಹ ಕುತಂತ್ರ ಹೂಡಿದ್ದರು. ಕೊನೆಗೆ ಅಲ್ಲಾಹನು ಅವರ ಕಟ್ಟಡಗಳನ್ನು ಬುಡ ಸಮೇತ ಕಿತ್ತು ಹಾಕಿದನು ಮತ್ತು ಅವರ ಮೇಲ್ಛಾವಣಿಗಳು ಕುಸಿದು ಬಿದ್ದವು ಹಾಗೂ ಅವರು ಊಹಿಸಿರದಂತಹ ಕಡೆಯಿಂದ ಅವರ ಮೇಲೆ ಯಾತನೆಯು ಬಂದುಬಿಟ್ಟಿತು.
ثُمَّ يَوْمَ الْقِيَامَةِ يُخْزِيهِمْ وَيَقُولُ أَيْنَ شُرَكَائِيَ الَّذِينَ كُنتُمْ تُشَاقُّونَ فِيهِمْ ۚ قَالَ الَّذِينَ أُوتُوا الْعِلْمَ إِنَّ الْخِزْيَ الْيَوْمَ وَالسُّوءَ عَلَى الْكَافِرِينَ ۝٢٧
📖 ಅನುವಾದ ಆಯತ್ 27
ಅನಂತರ ಪ್ರಳಯ ದಿನಂದAದು ಅಲ್ಲಾಹನು ಅವರನ್ನು ಅಪಮಾನಗೊಳಿಸುವನು. ಮತ್ತು ಹೇಳುವನು: ನೀವು ಯಾರ ವಿಚಾರವಾಗಿ (ಸತ್ಯವಿಶ್ವಾಸಿಗಳೊಡನೆ) ಜಗಳವಾಡುತ್ತಿದ್ದಿರೋ ಆ ನನ್ನ ಸಹಭಾಗಿಗಳು ಎಲ್ಲಿದ್ದಾರೆ? ಜ್ಞಾನ ನೀಡಲ್ಪಟ್ಟವರು ಹೇಳುವರು: ನಿಶ್ಚಯವಾಗಿಯು ಇಂದಿನ ದಿನವಂತು ಸತ್ಯನಿಷೇಧಿಗಳಿಗೆ ಅಪಮಾನ ಮತ್ತು ಕೆಡುಕು ಅಂಟಿಕೊAಡು ಬಿಟ್ಟಿತು.
الَّذِينَ تَتَوَفَّاهُمُ الْمَلَائِكَةُ ظَالِمِي أَنفُسِهِمْ ۖ فَأَلْقَوُا السَّلَمَ مَا كُنَّا نَعْمَلُ مِن سُوءٍ ۚ بَلَىٰ إِنَّ اللَّهَ عَلِيمٌ بِمَا كُنتُمْ تَعْمَلُونَ ۝٢٨
📖 ಅನುವಾದ ಆಯತ್ 28
ತಮ್ಮ ಮೇಲೆಯೇ ಅಕ್ರಮವೆಸಗುತ್ತಿರುವ ಸ್ಥಿತಿಯಲ್ಲಿ ಸತ್ಯನಿಷೇಧಿಗಳ ಪ್ರಾಣವನ್ನು ಮಲಕ್‌ಗಳು ವಶಪಡಿಸಿಕೊಳ್ಳುವಾಗ ಅವರು ಸಂಪೂರ್ಣವಾಗಿ ಶರಣಾಗುವರು; ಅವರು ಹೇಳುವರು ನಾವು ದುಷ್ಕೃತ್ಯವನ್ನು ಎಸಗುತ್ತಿರಲಿಲ್ಲ. (ಹೇಳಲಾಗುವುದು) ಯಾಕಿಲ್ಲ? ನೀವು ಮಾಡುತ್ತಿದ್ದ ದುಷ್ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.
فَادْخُلُوا أَبْوَابَ جَهَنَّمَ خَالِدِينَ فِيهَا ۖ فَلَبِئْسَ مَثْوَى الْمُتَكَبِّرِينَ ۝٢٩
📖 ಅನುವಾದ ಆಯತ್ 29
ಆದುದರಿಂದ ನೀವು ನರಕದ ದ್ವಾರಗಳಲ್ಲಿ ಪ್ರವೇಶಿಸಿರಿ. ನೀವು ಅದರಲ್ಲಿ ಶಾಶ್ವತವಾಗಿರುವಿರಿ. ಕೊನೆಗೆ ಅಹಂಕಾರಿಗಳ ವಾಸಸ್ಥಾನವು ಅದೆಷ್ಟು ಕೆಟ್ಟದು!.
۞ وَقِيلَ لِلَّذِينَ اتَّقَوْا مَاذَا أَنزَلَ رَبُّكُمْ ۚ قَالُوا خَيْرًا ۗ لِّلَّذِينَ أَحْسَنُوا فِي هَٰذِهِ الدُّنْيَا حَسَنَةٌ ۚ وَلَدَارُ الْآخِرَةِ خَيْرٌ ۚ وَلَنِعْمَ دَارُ الْمُتَّقِينَ ۝٣٠
📖 ಅನುವಾದ ಆಯತ್ 30
ಮತ್ತು ಭಯಭಕ್ತಿಯನ್ನಿರಿಸಿಕೊಂಡವರೊAದಿಗೆ: ನಿಮ್ಮ ಪ್ರಭುವು ಏನನ್ನು ಅವತೀರ್ಣಗೊಳಿಸಿರುವನು? ಎಂದು ಕೇಳಲಾದಾಗ ಅವರು ಉತ್ತರಿಸುವರು: ಅತ್ಯುತ್ತಮವಾದುದ್ದನ್ನು ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ. ಮತ್ತು ಪರಲೋಕ ಭವನವಂತು ಅತ್ಯುತ್ತಮವಾಗಿರುವುದು ಮತ್ತು ಭಯಭಕ್ತಿಯುಳ್ಳವರ ಭವನವು ಅದೆಷ್ಟು ಉತ್ತಮವಾದುದು!
جَنَّاتُ عَدْنٍ يَدْخُلُونَهَا تَجْرِي مِن تَحْتِهَا الْأَنْهَارُ ۖ لَهُمْ فِيهَا مَا يَشَاءُونَ ۚ كَذَٰلِكَ يَجْزِي اللَّهُ الْمُتَّقِينَ ۝٣١
📖 ಅನುವಾದ ಆಯತ್ 31
ಶಾಶ್ವತ ನಿವಾಸವಾದ ಸ್ವರ್ಗೋದ್ಯಾನಗಳಲ್ಲಿ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅಲ್ಲಿ ಅವರು ಇಚ್ಛಿಸುವುದೆಲ್ಲವೂ ಅವರಿಗಿರುವುದು. ಅಲ್ಲಾಹನು ಭಯ ಭಕ್ತಿಯುಳ್ಳವರಿಗೆ ಇದೇ ಪ್ರಕಾರ ಪ್ರತಿಫಲ ನೀಡುತ್ತಾನೆ.
الَّذِينَ تَتَوَفَّاهُمُ الْمَلَائِكَةُ طَيِّبِينَ ۙ يَقُولُونَ سَلَامٌ عَلَيْكُمُ ادْخُلُوا الْجَنَّةَ بِمَا كُنتُمْ تَعْمَلُونَ ۝٣٢
📖 ಅನುವಾದ ಆಯತ್ 32
ಮಲಕ್‌ಗಳು ಅವರ ಪ್ರಾಣವನ್ನು ಅವರು ಪರಿಶುದ್ಧರಾಗಿರುವ ಸ್ಥಿತಿಯಲ್ಲಿ ವಶಪಡಿಸಿಕೊಳ್ಳುವರು. ನಿಮ್ಮ ಮೇಲೆ ಶಾಂತಿ ಇರಲಿ. ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ಸ್ವರ್ಗೋದ್ಯಾನವನ್ನು ಪ್ರವೇಶಿಸಿರಿ ಎನ್ನುವರು.
هَلْ يَنظُرُونَ إِلَّا أَن تَأْتِيَهُمُ الْمَلَائِكَةُ أَوْ يَأْتِيَ أَمْرُ رَبِّكَ ۚ كَذَٰلِكَ فَعَلَ الَّذِينَ مِن قَبْلِهِمْ ۚ وَمَا ظَلَمَهُمُ اللَّهُ وَلَٰكِن كَانُوا أَنفُسَهُمْ يَظْلِمُونَ ۝٣٣
📖 ಅನುವಾದ ಆಯತ್ 33
ಇವರು ತಮ್ಮ ಬಳಿಗೆ ದೇವಚರರು ಬರಲಿ ಅಥವಾ ನಿಮ್ಮ ಪ್ರಭುವಿನ ಆದೇsÀಶವು ಬರಲಿ ಎಂದೇ ನಿರೀಕ್ಷಿಸುತ್ತಿದ್ದಾರೆಯೇ? ಇವರ ಮುಂಚಿನವರು ಸಹ ಇದೇ ಪ್ರಕಾರ ಮಾಡಿದ್ದರು ಅವರ ಮೇಲೆ ಅಲ್ಲಾಹನು ಯಾವುದೇ ಅಕ್ರಮವನ್ನೆಸಗಲಿಲ್ಲ ಬದಲಾಗಿ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು.
فَأَصَابَهُمْ سَيِّئَاتُ مَا عَمِلُوا وَحَاقَ بِهِم مَّا كَانُوا بِهِ يَسْتَهْزِئُونَ ۝٣٤
📖 ಅನುವಾದ ಆಯತ್ 34
ಕೊನಗೆ ಅವರು ಎಸಗಿರುವ ದುಷ್ಕೃತ್ಯಗಳ ಪರಿಣಾಮವು ಅವರಿಗೆ ಎರಗಿತು. ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಬಿಟ್ಟಿತು.
وَقَالَ الَّذِينَ أَشْرَكُوا لَوْ شَاءَ اللَّهُ مَا عَبَدْنَا مِن دُونِهِ مِن شَيْءٍ نَّحْنُ وَلَا آبَاؤُنَا وَلَا حَرَّمْنَا مِن دُونِهِ مِن شَيْءٍ ۚ كَذَٰلِكَ فَعَلَ الَّذِينَ مِن قَبْلِهِمْ ۚ فَهَلْ عَلَى الرُّسُلِ إِلَّا الْبَلَاغُ الْمُبِينُ ۝٣٥
📖 ಅನುವಾದ ಆಯತ್ 35
ಬಹುದೇವಾರಾಧಕರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಜರಾಗಲಿ ಅವನ ಹೊರತು ಬೇರಾವುದನ್ನೂ ಆರಾಧಿಸುತ್ತಿರಲಿಲ್ಲ ಮತ್ತು ಅವನ ಆಜ್ಞೆಯ ಹೊರತು ನಾವೇನನ್ನೂ ನಿಷಿದ್ಧ ಮಾಡುತ್ತಿರಲಿಲ್ಲ. ಇವರ ಮುಂಚಿನವರೂ ಹೀಗೆ ಮಾಡಿದ್ದರು. ಸಂದೇಶವಾಹಕರ ಮೇಲಂತೂ ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊರತು ಬೇರೇನಾದರೂ ಹೊಣೆಗಾರಿಕೆ ಇದೆಯೇ?
وَلَقَدْ بَعَثْنَا فِي كُلِّ أُمَّةٍ رَّسُولًا أَنِ اعْبُدُوا اللَّهَ وَاجْتَنِبُوا الطَّاغُوتَ ۖ فَمِنْهُم مَّنْ هَدَى اللَّهُ وَمِنْهُم مَّنْ حَقَّتْ عَلَيْهِ الضَّلَالَةُ ۚ فَسِيرُوا فِي الْأَرْضِ فَانظُرُوا كَيْفَ كَانَ عَاقِبَةُ الْمُكَذِّبِينَ ۝٣٦
📖 ಅನುವಾದ ಆಯತ್ 36
ಪ್ರತಿಯೊಂದು ಸಮುದಾಯದಲ್ಲೂ ನಾವು ಓರ್ವ ಸಂದೇಶವಾಹಕನನ್ನು ಕಳುಹಿಸಿದ್ದೇವೆ: ಜನರೇ ಅಲ್ಲಾಹನ ಆರಾಧನೆಯನ್ನು ಮಾಡಿರಿ ಮತ್ತು ತಾಗೂತ್ (ಮಿಥ್ಯದೇವರು)ಗಳಿಂದ ದೂರವಿರಿ ಎಂದು(ಎAಬ ಸಂದೇಶದೊAದಿಗೆ) ಅವರಲ್ಲಿ ಕೆಲವರಿಗಂತು ಅಲ್ಲಾಹನು ಸನ್ಮಾರ್ಗ ತೋರಿದನು ಮತ್ತು ಇನ್ನು ಕೆಲವರ ಮೇಲೆ ಮಾರ್ಗ ಭ್ರಷ್ಟತೆಯು ಖಚಿತವಾಗಿಬಿಟ್ಟಿತು. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸುಳ್ಳಾಗಿಸಿದವರ ಗತಿ ಏನಾಯಿತೆಂದು ನೋಡಿರಿ.
إِن تَحْرِصْ عَلَىٰ هُدَاهُمْ فَإِنَّ اللَّهَ لَا يَهْدِي مَن يُضِلُّ ۖ وَمَا لَهُم مِّن نَّاصِرِينَ ۝٣٧
📖 ಅನುವಾದ ಆಯತ್ 37
(ಓ ಪೈಗಂಬರರೇ) ನೀವು ಅವರ ಸನ್ಮಾಮಾರ್ಗಕ್ಕಾಗಿ ಎಷ್ಟೇ ಹಂಬಲಿಸಿದರೂ ಅಲ್ಲಾಹನು ತಾನು ಮಾರ್ಗ ಭ್ರಷ್ಟಗೊಳಿಸಿದವರಿಗೆ ಸನ್ಮಾರ್ಗ ತೋರುವುದಿಲ್ಲ ಮತ್ತು ಅವರ ಸಹಾಯಕರಾರು ಇರಲಾರರು.
وَأَقْسَمُوا بِاللَّهِ جَهْدَ أَيْمَانِهِمْ ۙ لَا يَبْعَثُ اللَّهُ مَن يَمُوتُ ۚ بَلَىٰ وَعْدًا عَلَيْهِ حَقًّا وَلَٰكِنَّ أَكْثَرَ النَّاسِ لَا يَعْلَمُونَ ۝٣٨
📖 ಅನುವಾದ ಆಯತ್ 38
ಮರಣ ಹೊಂದಿದವರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವುದಿಲ್ಲವೆಂದು ಅವರು ದೃಢ ಆಣೆ ಹಾಕಿ ಹೇಳುತ್ತಾರೆ. ಏಕಿಲ್ಲಾ; ಖಂಡಿತ ಇದಂತು ಅಲ್ಲಾಹನು ತನ್ನ ಮೇಲೆ ನಿರ್ಭಂಧಗೊಳಿಸಿದ ಒಂದು ವಾಗ್ದಾನವಾಗಿದೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
لِيُبَيِّنَ لَهُمُ الَّذِي يَخْتَلِفُونَ فِيهِ وَلِيَعْلَمَ الَّذِينَ كَفَرُوا أَنَّهُمْ كَانُوا كَاذِبِينَ ۝٣٩
📖 ಅನುವಾದ ಆಯತ್ 39
(ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳು ತಾವು ಸುಳ್ಳರಾಗಿದ್ದೇವೆಂಬುದನ್ನು ಅರಿಯಲಿಕ್ಕಾಗಿದೆ.
إِنَّمَا قَوْلُنَا لِشَيْءٍ إِذَا أَرَدْنَاهُ أَن نَّقُولَ لَهُ كُن فَيَكُونُ ۝٤٠
📖 ಅನುವಾದ ಆಯತ್ 40
ನಾವು ಯಾವುದಾದರೂ ವಸ್ತುವನ್ನು ಬಯಸಿದರೆ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತೇವೆ. ಆಗಲೇ ಅದು ಆಗಿಬಿಡುತ್ತದೆ.
وَالَّذِينَ هَاجَرُوا فِي اللَّهِ مِن بَعْدِ مَا ظُلِمُوا لَنُبَوِّئَنَّهُمْ فِي الدُّنْيَا حَسَنَةً ۖ وَلَأَجْرُ الْآخِرَةِ أَكْبَرُ ۚ لَوْ كَانُوا يَعْلَمُونَ ۝٤١
📖 ಅನುವಾದ ಆಯತ್ 41
ಅಕ್ರಮಕ್ಕೊಳಗಾದ ನಂತರ ಯಾರು ಅಲ್ಲಾಹನ ಮಾರ್ಗದಲ್ಲಿ ನಾಡನ್ನು ತ್ಯಜಿಸಿರುವರೋ ನಾವು ಅವರಿಗೆ ಇಹಲೋಕದಲ್ಲಿ ಅತ್ಯುತ್ತಮವಾದ ನೆಲೆಯನ್ನು ದಯಪಾಲಿಸುವೆವು ಮತ್ತು ವಾಸ್ತವದಲ್ಲಿ ಪರಲೋಕದ ಪ್ರತಿಫಲವು ಅತ್ಯಂತ ದೊಡ್ಡದಾಗಿದೆ. ಅವರು ಅರಿಯುತ್ತಿದ್ದರೆ!
الَّذِينَ صَبَرُوا وَعَلَىٰ رَبِّهِمْ يَتَوَكَّلُونَ ۝٤٢
📖 ಅನುವಾದ ಆಯತ್ 42
ಅವರಾದರೂ ಸಹನೆ ವಹಿಸಿದವರು ಮತ್ತು ತಮ್ಮ ಪ್ರಭುವಿನ ಮೇಲೆಯೇ ಭರವಸೆ ಯನ್ನಿಸಿರಿದವರಾಗಿದ್ದಾರೆ.
وَمَا أَرْسَلْنَا مِن قَبْلِكَ إِلَّا رِجَالًا نُّوحِي إِلَيْهِمْ ۚ فَاسْأَلُوا أَهْلَ الذِّكْرِ إِن كُنتُمْ لَا تَعْلَمُونَ ۝٤٣
📖 ಅನುವಾದ ಆಯತ್ 43
ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು. ಇನ್ನು ನಿಮಗೆ ಅರಿವಿಲ್ಲದಿದ್ದರೆ ಜ್ಞಾನಿಗಳೊಡನೆ ವಿಚಾರಿಸಿರಿ.
بِالْبَيِّنَاتِ وَالزُّبُرِ ۗ وَأَنزَلْنَا إِلَيْكَ الذِّكْرَ لِتُبَيِّنَ لِلنَّاسِ مَا نُزِّلَ إِلَيْهِمْ وَلَعَلَّهُمْ يَتَفَكَّرُونَ ۝٤٤
📖 ಅನುವಾದ ಆಯತ್ 44
ಗತ ಪೈಗಂಬರರನ್ನು ನಾವು ಪುರಾವೆ ಮತ್ತು ಗ್ರಂಥಗಳೊAದಿಗೆ ಕಳುಹಿಸಿದೆವು ಮತ್ತು ಈ ಕುರ್‌ಆನನ್ನು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿರುತ್ತೇವೆ. ಜನರಿಗಾಗಿ ಅವತೀರ್ಣಗೊಳಿಸಲಾ ಗಿರುವುದನ್ನು ನೀವು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ಮತ್ತು ಅವರು ಚಿಂತಿಸುವ ಸಲುವಾಗಿ.
أَفَأَمِنَ الَّذِينَ مَكَرُوا السَّيِّئَاتِ أَن يَخْسِفَ اللَّهُ بِهِمُ الْأَرْضَ أَوْ يَأْتِيَهُمُ الْعَذَابُ مِنْ حَيْثُ لَا يَشْعُرُونَ ۝٤٥
📖 ಅನುವಾದ ಆಯತ್ 45
(ಪೈಗಂಬರರನ್ನು ಸಂಕಷ್ಟಕ್ಕೀಡು ಮಾಡಲು) ದುಷ್ಟ ತಂತ್ರವನ್ನು ಹೂಡುತ್ತಿರುವವರು ಅಲ್ಲಾಹನು ತಮ್ಮನ್ನು ಭೂಮಿಯೊಳಗೆ ಹೂತು ಬಿಡಬಹುದು ಅಥವಾ ಅನಿರೀಕ್ಷಿತವಾಗಿ ತಮ್ಮೆಡೆಗೆ ಶಿಕ್ಷೆಯು ಎರಗಿಸಿಬಿಡಬಹುದೆಂಬ ವಿಚಾರದಿಂದ ನಿರ್ಭೀತರಾಗಿರುವರೇ?
أَوْ يَأْخُذَهُمْ فِي تَقَلُّبِهِمْ فَمَا هُم بِمُعْجِزِينَ ۝٤٦
📖 ಅನುವಾದ ಆಯತ್ 46
ಅಥವಾ ಅವರು ನಡೆದಾಡುತ್ತಿರುವಾಗ ಹಿಡಿದು ಬಿಡಬಹುದೆಂಬ ವಿಚಾರದಿಂದ (ನಿರ್ಭೀತರಾಗಿರುವರೇ?) ಮತ್ತು ಅವರು ಅಲ್ಲಾಹನನ್ನು ಸೋಲಿಸಲಾರರು.
أَوْ يَأْخُذَهُمْ عَلَىٰ تَخَوُّفٍ فَإِنَّ رَبَّكُمْ لَرَءُوفٌ رَّحِيمٌ ۝٤٧
📖 ಅನುವಾದ ಆಯತ್ 47
ಅಥವಾ ಅವರು ಭಯಭೀತರಾಗಿರುವ ಸ್ಥಿತಿಯಲ್ಲಿ ಹಿಡಿದು ಬಿಡಬಹುದೆಂಬ ವಿಚಾರದಿಂದ. (ನಿರ್ಭೀತರಾಗಿರುವರೇ?) ನಿಜವಾಗಿಯು ನಿಮ್ಮ ಪ್ರಭುವು ಮಹಾ ದಯಾಮಯನು, ಕರುಣಾನಿಧಿಯು ಆಗಿರುತ್ತಾನೆ.
أَوَلَمْ يَرَوْا إِلَىٰ مَا خَلَقَ اللَّهُ مِن شَيْءٍ يَتَفَيَّأُ ظِلَالُهُ عَنِ الْيَمِينِ وَالشَّمَائِلِ سُجَّدًا لِّلَّهِ وَهُمْ دَاخِرُونَ ۝٤٨
📖 ಅನುವಾದ ಆಯತ್ 48
ಅಲ್ಲಾಹನು ಸೃಷ್ಟಿಸಿರುವ ವಸ್ತುಗಳ ನೆರಳು ಬಲಕ್ಕೂ, ಎಡಕ್ಕೂ ಬಾಗಿ ವಿನಮ್ರತೆಯಿಂದ ಅಲ್ಲಾಹನ ಮುಂದೆ ಸಾಷ್ಟಾಂಗವೆರಗುತ್ತಿರುವುದನ್ನು ಅವರು ನೋಡಲಿಲ್ಲವೇ?
وَلِلَّهِ يَسْجُدُ مَا فِي السَّمَاوَاتِ وَمَا فِي الْأَرْضِ مِن دَابَّةٍ وَالْمَلَائِكَةُ وَهُمْ لَا يَسْتَكْبِرُونَ ۝٤٩
📖 ಅನುವಾದ ಆಯತ್ 49
ಭೂಮಿಯಲ್ಲಿಯು, ಆಕಾಶಗಳಲ್ಲಿಯು, ಇರುವ ಜೀವಿಗಳೆಲ್ಲವೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತವೆ ಮತ್ತು ಮಲಕ್‌ಗಳೆÉಲ್ಲರೂ ಸಹ ಮತ್ತು ಅವರು ಅಹಂಭಾವ ತೋರಿಸುವುದಿಲ್ಲ.
يَخَافُونَ رَبَّهُم مِّن فَوْقِهِمْ وَيَفْعَلُونَ مَا يُؤْمَرُونَ ۩ ۝٥٠
📖 ಅನುವಾದ ಆಯತ್ 50
ತಮ್ಮ ಮೇಲಿರುವ ತಮ್ಮ ಪ್ರಭುವನ್ನು ಅವರು ಭಯಪಡುತ್ತಾರೆ ಹಾಗೂ ತಮಗೆ ಆಜ್ಞಾಪಿಸಲಾದಂತೆ ಅವರು ಕಾರ್ಯ ನಿರ್ವಹಿಸುತ್ತಾರೆ.
۞ وَقَالَ اللَّهُ لَا تَتَّخِذُوا إِلَٰهَيْنِ اثْنَيْنِ ۖ إِنَّمَا هُوَ إِلَٰهٌ وَاحِدٌ ۖ فَإِيَّايَ فَارْهَبُونِ ۝٥١
📖 ಅನುವಾದ ಆಯತ್ 51
ಅಲ್ಲಾಹನು ಹೇಳುತ್ತಾನೆ: ನೀವು ಎರಡೆರಡು ಆರಾಧ್ಯರನ್ನು ಮಾಡಿಕೊಳ್ಳಬೇಡಿರಿ. ಆರಾಧ್ಯನಂತು ಕೇವಲ ಏಕೈಕನು ಮಾತ್ರ. ಆದ್ದರಿಂದ ನೀವು ನನ್ನನ್ನು ಮಾತ್ರ ಭಯಪಡಿರಿ.
وَلَهُ مَا فِي السَّمَاوَاتِ وَالْأَرْضِ وَلَهُ الدِّينُ وَاصِبًا ۚ أَفَغَيْرَ اللَّهِ تَتَّقُونَ ۝٥٢
📖 ಅನುವಾದ ಆಯತ್ 52
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಆಗಿದೆ ಮತ್ತು ಅವನದೇ ಅನುಸರಣೆಯು ಕಡ್ಡಾಯವಾಗಿರುತ್ತದೆ. ಹಾಗಿದ್ದೂ ನೀವು ಅಲ್ಲಾಹನನ್ನು ಬಿಟ್ಟು ಇತರರನ್ನು ಭಯಪಡುತ್ತಿರುವಿರಾ?
وَمَا بِكُم مِّن نِّعْمَةٍ فَمِنَ اللَّهِ ۖ ثُمَّ إِذَا مَسَّكُمُ الضُّرُّ فَإِلَيْهِ تَجْأَرُونَ ۝٥٣
📖 ಅನುವಾದ ಆಯತ್ 53
ನಿಮ್ಮ ಬಳಿಯಿರುವ ಪ್ರತಿಯೊಂದು ಅನುಗ್ರಹವು ಅಲ್ಲಾಹನಿಂದಲೇ ದೊರೆತಿದೆ ಮತ್ತು ನಿಮಗೆ ಯಾವುದಾದರು ವಿಪತ್ತು ಬಾಧಿಸಿದರೆ ಅವನೆಡೆಗೇ ನೀವು ಮೊರೆ ಹೋಗುತ್ತಿರಿ.
ثُمَّ إِذَا كَشَفَ الضُّرَّ عَنكُمْ إِذَا فَرِيقٌ مِّنكُم بِرَبِّهِمْ يُشْرِكُونَ ۝٥٤
📖 ಅನುವಾದ ಆಯತ್ 54
ಆದರೆ ಅವನು ನಿಮ್ಮಿಂದ ಆ ಸಂಕಷ್ಟವನ್ನು ನೀಗಿಸಿದಾಗ ನಿಮ್ಮಲ್ಲಿನ ಒಂದು ವಿಭಾಗ ತಮ್ಮ ಪ್ರಭುವಿನೊಂದಿಗೆ ಕೂಡಲೇ ಸಹಭಾಗಿತ್ವವನ್ನು ಕಲ್ಪಿಸತೊಡಗುತ್ತದೆ.
لِيَكْفُرُوا بِمَا آتَيْنَاهُمْ ۚ فَتَمَتَّعُوا ۖ فَسَوْفَ تَعْلَمُونَ ۝٥٥
📖 ಅನುವಾದ ಆಯತ್ 55
ಇದು ನಾವು ಅವರಿಗೆ ದಯಪಾಲಿಸಿದ ಅನುಗ್ರಹಕ್ಕೆ ಅವರು ಕೃತಘ್ನತೆ ತೋರಲೆಂದಾಗಿದೆ. ಆದುದರಿಂದ ನೀವು ಅಲ್ಪ ಸುಖಭೋಗಗಳನ್ನು ಅನುಭವಿಸಿರಿ. ಸಧ್ಯದಲ್ಲೇ ನೀವು ತಿಳಿಯುವಿರಿ.
وَيَجْعَلُونَ لِمَا لَا يَعْلَمُونَ نَصِيبًا مِّمَّا رَزَقْنَاهُمْ ۗ تَاللَّهِ لَتُسْأَلُنَّ عَمَّا كُنتُمْ تَفْتَرُونَ ۝٥٦
📖 ಅನುವಾದ ಆಯತ್ 56
ಮತ್ತು ನಾವು ಅವರಿಗೆ ನೀಡಿರುವ ಜೀವನಾಧಾರದಿಂದ ಅವರ ವಾಸ್ತವಿಕತೆಯನ್ನು ಅರಿಯದಿರುವವರ ಪಾಲನ್ನು ನಿಶ್ಚಯಿಸಿಕೊಳ್ಳುತ್ತಾರೆ. ಅಲ್ಲಾಹನಾಣೆ ನಿಮ್ಮ ಸುಳ್ಳಾರೋಪದ ಕುರಿತು ಖಂಡಿತವಾಗಿಯು ನಿಮ್ಮೊಂದಿಗೆ ವಿಚಾರಿಸಲಾಗುವುದು.
وَيَجْعَلُونَ لِلَّهِ الْبَنَاتِ سُبْحَانَهُ ۙ وَلَهُم مَّا يَشْتَهُونَ ۝٥٧
📖 ಅನುವಾದ ಆಯತ್ 57
ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳನ್ನು ನಿಶ್ಚಯಿಸುತ್ತಾರೆ ಅವನಾದರೋ ಪರಮ ಪಾವನನು ಮತ್ತು ಅವರಿಗಾದರೋ ತಮ್ಮ ಇಷ್ಟದಂತೆ (ಗಂಡನ್ನು) ನಿಶ್ಚಯಿಸಿಕೊಳ್ಳುತ್ತಾರೆ.
وَإِذَا بُشِّرَ أَحَدُهُم بِالْأُنثَىٰ ظَلَّ وَجْهُهُ مُسْوَدًّا وَهُوَ كَظِيمٌ ۝٥٨
📖 ಅನುವಾದ ಆಯತ್ 58
ಅವರ ಪೈಕಿ ಯಾರಿಗಾದರು ಹೆಣ್ಣು ಮಗು ಹುಟ್ಟಿದ ಸುವಾರ್ತೆಯನ್ನು ಕೊಡಲಾದರೆ ಅವನ ಮುಖ ಕಳೆಗುಂದಿ ಬಿಡುತ್ತದೆ ಮತ್ತು ಅವನು ಒಳಗೊಳಗೇ ಕೊರಗುತ್ತಾನೆ.
يَتَوَارَىٰ مِنَ الْقَوْمِ مِن سُوءِ مَا بُشِّرَ بِهِ ۚ أَيُمْسِكُهُ عَلَىٰ هُونٍ أَمْ يَدُسُّهُ فِي التُّرَابِ ۗ أَلَا سَاءَ مَا يَحْكُمُونَ ۝٥٩
📖 ಅನುವಾದ ಆಯತ್ 59
ಈ ಕೆಟ್ಟ ಸುದ್ದಿಯ ನಿಮಿತ್ತ ಅವನು ಜನರಿಂದ ತಲೆಮರೆಸಿಕೊಂಡು ತಿರುಗುತ್ತಾನೆ. ಈ ಅಪಮಾನದೊಂದಿಗೆ ತಾನು ಅದನ್ನು ಇರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹೂತುಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ! ಅವರು ಅದೆಂತಹ ಕೆಟ್ಟ ತೀರ್ಮಾನವನ್ನು ಕೈಗೊಳ್ಳುತ್ತಿದ್ದಾರೆ.
لِلَّذِينَ لَا يُؤْمِنُونَ بِالْآخِرَةِ مَثَلُ السَّوْءِ ۖ وَلِلَّهِ الْمَثَلُ الْأَعْلَىٰ ۚ وَهُوَ الْعَزِيزُ الْحَكِيمُ ۝٦٠
📖 ಅನುವಾದ ಆಯತ್ 60
ಪರಲೋಕದಲ್ಲಿ ವಿಶ್ವಾಸವಿಡದವರಿಗೇ ಕೆಟ್ಟ ಉಪಮೆ ಇರುವುದು ಅಲ್ಲಾಹನಿಗಂತು ಮಹೋನ್ನತವಾದ ಉಪಮೆಯಿದೆ ಮತ್ತು ಅವನು ಮಹಾ ಪ್ರಚಂಡನು, ಯುಕ್ತಿಪೂರ್ಣನು ಆಗಿರುವನು.
وَلَوْ يُؤَاخِذُ اللَّهُ النَّاسَ بِظُلْمِهِم مَّا تَرَكَ عَلَيْهَا مِن دَابَّةٍ وَلَٰكِن يُؤَخِّرُهُمْ إِلَىٰ أَجَلٍ مُّسَمًّى ۖ فَإِذَا جَاءَ أَجَلُهُمْ لَا يَسْتَأْخِرُونَ سَاعَةً ۖ وَلَا يَسْتَقْدِمُونَ ۝٦١
📖 ಅನುವಾದ ಆಯತ್ 61
ಅಲ್ಲಾಹನು ಜನರನ್ನು ಅವರ ಅಕ್ರಮದ ನಿಮಿತ್ತ ಹಿಡಿಯುತ್ತಿದ್ದರೆ ಭೂಮುಖದ ಮೇಲೆ ಯಾವೊಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನಂತು ಅವರಿಗೆ ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಅವರ ಆ ನಿಶ್ಚಿತ ಅವಧಿಯು ಬಂದಾಗ ಅವರು ಒಂದು ಗಳಿಗೆಯಷ್ಟು ಹಿಂದೆಯೂ ಸರಿಯಲಾರರು ಮತ್ತು ಮುಂದೆಯೂ ಸರಿಯಲಾರರು.
وَيَجْعَلُونَ لِلَّهِ مَا يَكْرَهُونَ وَتَصِفُ أَلْسِنَتُهُمُ الْكَذِبَ أَنَّ لَهُمُ الْحُسْنَىٰ ۖ لَا جَرَمَ أَنَّ لَهُمُ النَّارَ وَأَنَّهُم مُّفْرَطُونَ ۝٦٢
📖 ಅನುವಾದ ಆಯತ್ 62
ಅವರು ತಮಗೆ ಇಷ್ಟವಿಲ್ಲದ್ದನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ ಮತ್ತು ಅವರ ನಾಲಿಗೆಗಳು ತಮಗೇ ಪರಲೋಕದಲ್ಲಿ ಅತ್ಯುತ್ತಮವಾದುದಿದೆ ಎಂದು ಸುಳ್ಳು ವಾದಿಸುತ್ತಾರೆ. ಹಾಗಲ್ಲ! ವಾಸ್ತವದಲ್ಲಿ ಅವರಿಗೆ ನರಕಾಗ್ನಿಯಿದೆ ಮತ್ತು ಅವರು ನರಕವಾಸಿಗಳ ಮುಂದಾಳುಗಳಾಗಿರುತ್ತಾರೆ.
تَاللَّهِ لَقَدْ أَرْسَلْنَا إِلَىٰ أُمَمٍ مِّن قَبْلِكَ فَزَيَّنَ لَهُمُ الشَّيْطَانُ أَعْمَالَهُمْ فَهُوَ وَلِيُّهُمُ الْيَوْمَ وَلَهُمْ عَذَابٌ أَلِيمٌ ۝٦٣
📖 ಅನುವಾದ ಆಯತ್ 63
(ಓ ಪೈಗಂಬರರೇ) ಅಲ್ಲಾಹನಾಣೆ. ನಾವು ನಿಮಗಿಂತ ಮುಂಚಿನ ಅನೇಕ ಸಮುದಾಯಗಳೆಡೆಗೂ ನಮ್ಮ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಆದರೆ ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕವಾಗಿ ಮಾಡಿ ತೋರಿಸಿದನು. ಅವನೇ ಇಂದು ಅವರ ಆಪ್ತಮಿತ್ರನಾಗಿದ್ದಾನೆ. ಮತ್ತು ಅವರಿಗೆ ವೇದನಾಜನಕ ಶಿಕ್ಷೆಯಿರುವುದು.
وَمَا أَنزَلْنَا عَلَيْكَ الْكِتَابَ إِلَّا لِتُبَيِّنَ لَهُمُ الَّذِي اخْتَلَفُوا فِيهِ ۙ وَهُدًى وَرَحْمَةً لِّقَوْمٍ يُؤْمِنُونَ ۝٦٤
📖 ಅನುವಾದ ಆಯತ್ 64
ಅವರು ಹೊಂದಿರುವ ಭಿನ್ನಾಭಿಪ್ರಾಯಗಳ ವಸ್ತು ಸ್ಥಿತಿಯನ್ನು ನೀವು ಅವರಿಗೆ ವಿವರಿಸಿ ಕೊಡಲಿಕ್ಕಾಗಿಯೇ ನಾವು ಈ ಗ್ರಂಥವನ್ನು ನಿಮ್ಮ ಮೇಲೆ ಅವತೀರ್ಣಗೊಳಿಸಿರುತ್ತೇವೆ. ಮತ್ತು ಇದು ಸತ್ಯವಿಶ್ವಾಸವಿರಿಸಿದ ಜನರಿಗೆ ಸನ್ಮಾರ್ಗವೂ, ಕಾರುಣ್ಯವೂ ಆಗಿದೆ.
وَاللَّهُ أَنزَلَ مِنَ السَّمَاءِ مَاءً فَأَحْيَا بِهِ الْأَرْضَ بَعْدَ مَوْتِهَا ۚ إِنَّ فِي ذَٰلِكَ لَآيَةً لِّقَوْمٍ يَسْمَعُونَ ۝٦٥
📖 ಅನುವಾದ ಆಯತ್ 65
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ ನಿರ್ಜೀವವಾಗಿದ್ದ ಭೂಮಿಯನ್ನು ಅದರ ಮೂಲಕ ಜೀವಂತಗೊಳಿಸಿದನು. ನಿಜವಾಗಿಯೂ ಗಮನವಿಟ್ಟು ಕೇಳುವವರಿಗೆ ಇದರಲ್ಲೊಂದು ದೃಷ್ಟಾಂತವಿದೆ.
وَإِنَّ لَكُمْ فِي الْأَنْعَامِ لَعِبْرَةً ۖ نُّسْقِيكُم مِّمَّا فِي بُطُونِهِ مِن بَيْنِ فَرْثٍ وَدَمٍ لَّبَنًا خَالِصًا سَائِغًا لِّلشَّارِبِينَ ۝٦٦
📖 ಅನುವಾದ ಆಯತ್ 66
ಖಂಡಿತವಾಗಿಯು ನಿಮಗೆ ಜಾನುವಾರುಗಳಲ್ಲೊಂದು ಪಾಠವಿದೆ. ಅದರ ಹೊಟ್ಟೆಯೊಳಗಿನ ಸಗಣಿ ಹಾಗೂ ರಕ್ತದ ಮಧ್ಯದಿಂದ ಶುದ್ಧವಾದ ಹಾಲನ್ನು ನಾವು ನಿಮಗೆ ಕುಡಿಸುತ್ತೇವೆ. ಅದು ಕುಡಿಯುವವರಿಗೆ ಸ್ವಾಧಿಷ್ಟಕರವಾಗಿದೆ.
وَمِن ثَمَرَاتِ النَّخِيلِ وَالْأَعْنَابِ تَتَّخِذُونَ مِنْهُ سَكَرًا وَرِزْقًا حَسَنًا ۗ إِنَّ فِي ذَٰلِكَ لَآيَةً لِّقَوْمٍ يَعْقِلُونَ ۝٦٧
📖 ಅನುವಾದ ಆಯತ್ 67
ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು ಮದ್ಯಪಾನೀಯಗಳನ್ನು ಮತ್ತು ಉತ್ತಮವಾದ ಆಹಾರವನ್ನು ಸಿದ್ಧಪಡಿಸುತ್ತೀರಿ. ನಿಶ್ಚಯವಾಗಿಯು ಬುದ್ಧಿವಂತ ಜನರಿಗೆ ಇದರಲ್ಲಿ ನಿದರ್ಶನವಿದೆ.
وَأَوْحَىٰ رَبُّكَ إِلَى النَّحْلِ أَنِ اتَّخِذِي مِنَ الْجِبَالِ بُيُوتًا وَمِنَ الشَّجَرِ وَمِمَّا يَعْرِشُونَ ۝٦٨
📖 ಅನುವಾದ ಆಯತ್ 68
ನಿಮ್ಮ ಪ್ರಭುವು ಜೇನು ನೊಣಕ್ಕೆ ನೀನು ಪರ್ವತಗಳಲ್ಲೂ, ಮರಗಳಲ್ಲೂ ಹಾಗೂ ಜನರಿಂದ ನಿರ್ಮಿಸಲಾದ ಎತ್ತರದ ಕಟ್ಟಡಗಳಲ್ಲೂ ನಿನ್ನ ಗೂಡುಗಳನ್ನು ನಿರ್ಮಿಸು ಎಂದು ಸಂದೇಶ ನೀಡಿದನು .
ثُمَّ كُلِي مِن كُلِّ الثَّمَرَاتِ فَاسْلُكِي سُبُلَ رَبِّكِ ذُلُلًا ۚ يَخْرُجُ مِن بُطُونِهَا شَرَابٌ مُّخْتَلِفٌ أَلْوَانُهُ فِيهِ شِفَاءٌ لِّلنَّاسِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ ۝٦٩
📖 ಅನುವಾದ ಆಯತ್ 69
ನೀನು ಎಲ್ಲಾ ವಿಧದ ಫಲಪುಷ್ಪಗಳ ರಸವನ್ನು ಹೀರು ಮತ್ತು ನಿನ್ನ ಪ್ರಭುವಿನ ಸರಳವಾದ ಮಾರ್ಗಗಳಲ್ಲಿ ಸಂಚರಿಸುತ್ತಿರು. ಅವುಗಳ ಹೊಟ್ಟೆಗಳಿಂದ ವಿಭನ್ನ ಬಣ್ಣಗಳ ಪಾನೀಯವು ಹೊರ ಬರುತ್ತದೆ. ಅದರಲ್ಲಿ ಜನರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಚಿಂತಕರಿಗೆ ಇದರಲ್ಲೊಂದು ನಿದರ್ಶನವಿದೆ.
وَاللَّهُ خَلَقَكُمْ ثُمَّ يَتَوَفَّاكُمْ ۚ وَمِنكُم مَّن يُرَدُّ إِلَىٰ أَرْذَلِ الْعُمُرِ لِكَيْ لَا يَعْلَمَ بَعْدَ عِلْمٍ شَيْئًا ۚ إِنَّ اللَّهَ عَلِيمٌ قَدِيرٌ ۝٧٠
📖 ಅನುವಾದ ಆಯತ್ 70
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿರುವನು. ನಂತರ ನಿಮಗೆ ಮರಣ ನೀಡುವನು. ನಿಮ್ಮ ಪೈಕಿ ಕೆಲವರು ಅರಿವನ್ನು ಹೊಂದಿದ ಬಳಿಕವೂ ಏನೂ ಅರಿಯದವರಂತೆ ಅತೀ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಸರ್ವ ಸಮರ್ಥನೂ ಆಗಿದ್ದಾನೆ.
وَاللَّهُ فَضَّلَ بَعْضَكُمْ عَلَىٰ بَعْضٍ فِي الرِّزْقِ ۚ فَمَا الَّذِينَ فُضِّلُوا بِرَادِّي رِزْقِهِمْ عَلَىٰ مَا مَلَكَتْ أَيْمَانُهُمْ فَهُمْ فِيهِ سَوَاءٌ ۚ أَفَبِنِعْمَةِ اللَّهِ يَجْحَدُونَ ۝٧١
📖 ಅನುವಾದ ಆಯತ್ 71
ಅಲ್ಲಾಹನು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೇಲೆ ಜೀವನಾಧಾರದಲ್ಲಿ ಶ್ರೇಷ್ಠಗೊಳಿಸಿರುವನು. ಶ್ರೇಷ್ಠತೆ ನೀಡಲ್ಪಟ್ಟವರು ತಮ್ಮ ಸಂಪತ್ತನ್ನು ತಮ್ಮ ಗುಲಾಮರಿಗೆ ಅವರು ಅದರಲ್ಲಿ ಸಮಾನರಾಗಲು ಒಪ್ಪಿಸಲಾರರು. (ನೀವು ಅಲ್ಲಾಹನ ದಾಸರನ್ನು ಅವನ ಸರಿಮಾನರನ್ನಾಗಿ ಹೇಗೆ ನಿಶ್ಚಯಿಸುವಿರಿ) ಹೀಗಿರುವಾಗ ಅವರು ಅಲ್ಲಾಹನ ಅನುಗ್ರಹಗಳನ್ನು ನಿರಾಕರಿಸುತ್ತಿದ್ದಾರೆಯೇ?
وَاللَّهُ جَعَلَ لَكُم مِّنْ أَنفُسِكُمْ أَزْوَاجًا وَجَعَلَ لَكُم مِّنْ أَزْوَاجِكُم بَنِينَ وَحَفَدَةً وَرَزَقَكُم مِّنَ الطَّيِّبَاتِ ۚ أَفَبِالْبَاطِلِ يُؤْمِنُونَ وَبِنِعْمَتِ اللَّهِ هُمْ يَكْفُرُونَ ۝٧٢
📖 ಅನುವಾದ ಆಯತ್ 72
ಅಲ್ಲಾಹನು ನಿಮಗಾಗಿ ನಿಮ್ಮ ವರ್ಗದಿಂದಲೇ ನಿಮ್ಮ ಜೋಡಿಗಳನ್ನುಂಟು ಮಾಡಿದನು ಮತ್ತು ನಿಮ್ಮ ಪತ್ನಿಯರಿಂದ ನಿಮಗಾಗಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ದಯಪಾಲಿಸಿದನು ಹಾಗೂ ನಿಮಗೆ ಶುದ್ಧವಾದ ವಸ್ತುಗಳಿಂದ ಆಹಾರವನ್ನು ನೀಡಿದನು. ಹಾಗಿದ್ದೂ ಜನರು ಸತ್ಯವನ್ನು ಬಿಟ್ಟು, ಮಿಥ್ಯದಲ್ಲಿ ವಿಶ್ವಾಸವಿಡುತ್ತಿದ್ದಾರೆಯೇ? ಮತ್ತು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆಯನ್ನು ತೋರುತ್ತಿದ್ದಾರೆಯೇ?
وَيَعْبُدُونَ مِن دُونِ اللَّهِ مَا لَا يَمْلِكُ لَهُمْ رِزْقًا مِّنَ السَّمَاوَاتِ وَالْأَرْضِ شَيْئًا وَلَا يَسْتَطِيعُونَ ۝٧٣
📖 ಅನುವಾದ ಆಯತ್ 73
ಅಲ್ಲಾಹನ ಹೊರತು ಆಕಾಶಗಳಿಂದಾಗಲೀ, ಭೂಮಿಯಿಂದಾಗಲೀ ಅವರಿಗೆ ಜೀವನಾಧಾರವನ್ನು ಕೊಡುವ ಅಧಿಕಾರವಿಲ್ಲದ ಒಂದಿಷ್ಟೂ ಸಾಮರ್ಥ್ಯವಿಲ್ಲದವ ರನ್ನು ಅವರು ಆರಾಧಿಸುತ್ತಿದ್ದಾರೆ.
فَلَا تَضْرِبُوا لِلَّهِ الْأَمْثَالَ ۚ إِنَّ اللَّهَ يَعْلَمُ وَأَنتُمْ لَا تَعْلَمُونَ ۝٧٤
📖 ಅನುವಾದ ಆಯತ್ 74
ಇನ್ನು ನೀವು ಅಲ್ಲಾಹನಿಗೆ ಉಪಮೆಗಳನ್ನು ಕಲ್ಪಿಸಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಅರಿಯುವುದಿಲ್ಲ.
۞ ضَرَبَ اللَّهُ مَثَلًا عَبْدًا مَّمْلُوكًا لَّا يَقْدِرُ عَلَىٰ شَيْءٍ وَمَن رَّزَقْنَاهُ مِنَّا رِزْقًا حَسَنًا فَهُوَ يُنفِقُ مِنْهُ سِرًّا وَجَهْرًا ۖ هَلْ يَسْتَوُونَ ۚ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ ۝٧٥
📖 ಅನುವಾದ ಆಯತ್ 75
ಅಲ್ಲಾಹನು ಒಂದು ಉಪಮೆಯನ್ನು ಕೊಡುತ್ತಾನೆ: ಪರಾಧೀನನಾದ ಯಾವ ಅಧಿಕಾರವೂ ಹೊಂದಿಲ್ಲದ ಒಬ್ಬ ಗುಲಾಮ ಮತ್ತು ನಾವು ನಮ್ಮ ಬಳಿಯಿಂದ ಉತ್ತಮ ಜೀವನಾಧಾರವನ್ನು ದಯಪಾಲಿಸಿದ್ದು ಅವನು ಅದರಿಂದ ರಹಸ್ಯವಾಗಿಯು, ಬಹಿರಂಗವಾಗಿಯು ಖರ್ಚು ಮಾಡುವ ಮತ್ತೊಬ್ಬ. ಏನು ಇವರಿಬ್ಬರೂ ಸಮಾನರಾಗುವರೇ? ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು. ಅದರೆ, ಅವರ ಪೈಕಿ ಹೆಚ್ಚಿನವರು ಅರಿಯುವುದಿಲ್ಲ.
وَضَرَبَ اللَّهُ مَثَلًا رَّجُلَيْنِ أَحَدُهُمَا أَبْكَمُ لَا يَقْدِرُ عَلَىٰ شَيْءٍ وَهُوَ كَلٌّ عَلَىٰ مَوْلَاهُ أَيْنَمَا يُوَجِّههُّ لَا يَأْتِ بِخَيْرٍ ۖ هَلْ يَسْتَوِي هُوَ وَمَن يَأْمُرُ بِالْعَدْلِ ۙ وَهُوَ عَلَىٰ صِرَاطٍ مُّسْتَقِيمٍ ۝٧٦
📖 ಅನುವಾದ ಆಯತ್ 76
ಅಲ್ಲಾಹನು ಇಬ್ಬರು ಪುರುಷರ ಇನ್ನೊಂದು ಉಪಮೆಯನ್ನು ಉದಾಹರಿಸುತ್ತಾನೆ; ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಮೂಕನು, ಅವನು ತನ್ನ ಯಜಮಾನನಿಗೆ ಭಾರವಾಗಿರುತ್ತಾನೆ. ಇವನು ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಏನು ಅವನು ಮತ್ತು ನ್ಯಾಯಪಾಲನೆಯನ್ನು ಆದೇಶಿಸುವ ಮತ್ತು ಋಜುವಾದ ಮಾರ್ಗದಲ್ಲೇ ಇರುವ ಇನ್ನೊಬ್ಬನು ಸಮಾನರಾಗುವರೇ?
وَلِلَّهِ غَيْبُ السَّمَاوَاتِ وَالْأَرْضِ ۚ وَمَا أَمْرُ السَّاعَةِ إِلَّا كَلَمْحِ الْبَصَرِ أَوْ هُوَ أَقْرَبُ ۚ إِنَّ اللَّهَ عَلَىٰ كُلِّ شَيْءٍ قَدِيرٌ ۝٧٧
📖 ಅನುವಾದ ಆಯತ್ 77
ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ಮತ್ತು ಪ್ರಳಯ ಸಮಯವು ಕಣ್ಣಿನ ರೆಪ್ಪೆ ಬಡಿದಂತೆಯೇ ಅಥವಾ ಅದಕ್ಕಿಂತಲೂ ಅತಿ ಸಮೀಪದಲ್ಲಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೂ ಸಮರ್ಥನಿದ್ದಾನೆ.
وَاللَّهُ أَخْرَجَكُم مِّن بُطُونِ أُمَّهَاتِكُمْ لَا تَعْلَمُونَ شَيْئًا وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۙ لَعَلَّكُمْ تَشْكُرُونَ ۝٧٨
📖 ಅನುವಾದ ಆಯತ್ 78
ಅಲ್ಲಾಹನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ನೀವೇನೂ ಅರಿಯದಂತಹ ಸ್ಥಿತಿಯಲ್ಲಿ ನಿಮ್ಮನ್ನು ಹೊರ ತಂದನು ಅವನೇ ನಿಮಗೆ ಕಿವಿಯನ್ನೂ, ಕಣ್ಣುಗಳನ್ನೂ, ಹೃದಯಗಳನ್ನೂ ನೀಡಿದನು. ಬಹುಶಃ ನೀವು ಕೃತಜ್ಞತೆ ತೋರಬಹುದು.
أَلَمْ يَرَوْا إِلَى الطَّيْرِ مُسَخَّرَاتٍ فِي جَوِّ السَّمَاءِ مَا يُمْسِكُهُنَّ إِلَّا اللَّهُ ۗ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ ۝٧٩
📖 ಅನುವಾದ ಆಯತ್ 79
ಆಜ್ಞಾವಿಧೇಯರಾಗಿ ಅಂತರಿಕ್ಷದಲ್ಲಿರುವ ಹಕ್ಕಿಗಳನ್ನು ಅವರು ನೋಡಲಿಲ್ಲವೇ? ಅವುಗಳನ್ನು ಅಲ್ಲಾಹನ ಹೊರತು ಯಾರೂ ಆಧರಿಸಿ ಹಿಡಿದಿರುವುದಿಲ್ಲ. ನಿಸ್ಸಂದೇಹವಾಗಿಯೂ ಸತ್ಯವಿಶ್ವಾಸವಿಡುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
وَاللَّهُ جَعَلَ لَكُم مِّن بُيُوتِكُمْ سَكَنًا وَجَعَلَ لَكُم مِّن جُلُودِ الْأَنْعَامِ بُيُوتًا تَسْتَخِفُّونَهَا يَوْمَ ظَعْنِكُمْ وَيَوْمَ إِقَامَتِكُمْ ۙ وَمِنْ أَصْوَافِهَا وَأَوْبَارِهَا وَأَشْعَارِهَا أَثَاثًا وَمَتَاعًا إِلَىٰ حِينٍ ۝٨٠
📖 ಅನುವಾದ ಆಯತ್ 80
ಅಲ್ಲಾಹನು ನಿಮಗಾಗಿ ನಿಮ್ಮ ಮನೆಗಳನ್ನು ನೆಮ್ಮದಿಯ ತಾಣವನ್ನಾಗಿ ಮಾಡಿದನು ಮತ್ತು ಅವನು ನಿಮಗಾಗಿ ಜಾನುವಾರುಗಳ ಚರ್ಮದ ಮನೆಗಳನ್ನು ನಿಶ್ಚಯಿಸಿದನು. ನಿಮ್ಮ ಯಾತ್ರಾ ದಿನದಲ್ಲೂ, ತಂಗುವ ದಿನದಲ್ಲೂ ನೀವು ಅವುಗಳನ್ನು ಹಗುರವಾಗಿ ಕಾಣುತ್ತೀರಿ ಮತ್ತು ಅವುಗಳ ಉಣ್ಣೆ, ರೋಮ, ಮತ್ತು ಕೂದಲುಗಳಿಂದ ಅವನು ಅನೇಕ ಸಾಮಗ್ರಿಗಳನ್ನೂ, ಒಂದು ನಿಶ್ಚಿತ ಕಾಲಾವಧಿವರೆಗೆ ನಿಮ್ಮ ಉಪಯೋಗಕ್ಕೆ ಬರುವ ವಸ್ತುಗಳನ್ನಾಗಿ ಮಾಡಿ ಕೊಟ್ಟನು.
وَاللَّهُ جَعَلَ لَكُم مِّمَّا خَلَقَ ظِلَالًا وَجَعَلَ لَكُم مِّنَ الْجِبَالِ أَكْنَانًا وَجَعَلَ لَكُمْ سَرَابِيلَ تَقِيكُمُ الْحَرَّ وَسَرَابِيلَ تَقِيكُم بَأْسَكُمْ ۚ كَذَٰلِكَ يُتِمُّ نِعْمَتَهُ عَلَيْكُمْ لَعَلَّكُمْ تُسْلِمُونَ ۝٨١
📖 ಅನುವಾದ ಆಯತ್ 81
ಅಲ್ಲ್ಲಾಹನೇ ನಿಮಗಾಗಿ ತಾನು ಸೃಷ್ಟಿಸಿದವುಗಳಿಂದ ನೆರಳನ್ನು ಮಾಡಿದನು. ಅವನೇ ನಿಮಗಾಗಿ ಪರ್ವತಗಳಲ್ಲಿ ಆಶ್ರಯ ತಾಣವನ್ನು ನಿರ್ಮಿಸಿದನು ಅವನೇ ನಿಮಗಾಗಿ ಉಷ್ಣತಾಪಗಳಿಂದ ನಿಮ್ಮನ್ನು ರಕ್ಷಿಸುವಂತಹ ಉಡುಪುಗಳನ್ನು, ಯುದ್ಧದ ಸಂದರ್ಭಗಳಲ್ಲಿ ನಿಮಗೆ ಪ್ರಯೋಜನ ನೀಡುವಂತಹ ಉಡುಪುಗಳನ್ನು ಮಾಡಿದನು. ಇದೇ ಪ್ರಕಾರ ಅವನು ತನ್ನ ಸಂಪೂರ್ಣ ಅನುಗ್ರಹವನ್ನು ನೀಡುತ್ತಾನೆ. ಬಹುಷಃ ಅಲ್ಲಾಹನಿಗೆ ನೀವು ಆಜ್ಞಾವಿಧೇಯರಾಗಬಹುದು.
فَإِن تَوَلَّوْا فَإِنَّمَا عَلَيْكَ الْبَلَاغُ الْمُبِينُ ۝٨٢
📖 ಅನುವಾದ ಆಯತ್ 82
ಅದಾಗ್ಯೂ ಅವರು ವಿಮುಖರಾದರೆ ನಿಮ್ಮ ಮೇಲೆ ಸುಸ್ಪಷ್ಟವಾಗಿ ಸಂದೇಶ ತಲುಪಿಸುವುದಷ್ಟೇ ಹೊಣೆಯಾಗಿದೆ.
يَعْرِفُونَ نِعْمَتَ اللَّهِ ثُمَّ يُنكِرُونَهَا وَأَكْثَرُهُمُ الْكَافِرُونَ ۝٨٣
📖 ಅನುವಾದ ಆಯತ್ 83
ಅವರು ಅಲ್ಲಾಹನ ಅನುಗ್ರಹಗಳನ್ನು ಅರಿತೂ, ಅವುಗಳನ್ನು ನಿರಾಕರಿಸುತ್ತಾರೆ ಮತ್ತು ಅವರ ಪೈಕಿ ಹೆಚ್ಚಿನವರು ಕೃತಘ್ನರಾಗಿದ್ದಾರೆ.
وَيَوْمَ نَبْعَثُ مِن كُلِّ أُمَّةٍ شَهِيدًا ثُمَّ لَا يُؤْذَنُ لِلَّذِينَ كَفَرُوا وَلَا هُمْ يُسْتَعْتَبُونَ ۝٨٤
📖 ಅನುವಾದ ಆಯತ್ 84
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ನಿಲ್ಲಿಸುವ ದಿನ (ಅವರ ಅವಸ್ಥೆ ಏನಾಗಬಹುದು) ಆಗ ಸತ್ಯ ನಿಷೇಧಿಗಳಿಗೆ (ನೆಪಹೂಡಲು) ಅನುಮತಿ ನೀಡಲಾಗುವುದಿಲ್ಲ ಮತ್ತು ಅವರಿಗೆ ಪಶ್ಚಾತ್ತಾಪ ಪಟ್ಟು ಮರಳುವ ಅವಕಾಶವೂ ಇರಲಾರದು.
وَإِذَا رَأَى الَّذِينَ ظَلَمُوا الْعَذَابَ فَلَا يُخَفَّفُ عَنْهُمْ وَلَا هُمْ يُنظَرُونَ ۝٨٥
📖 ಅನುವಾದ ಆಯತ್ 85
ಅಕ್ರಮಿಗಳು ಯಾತನೆಯನ್ನು ಕಂಡಾಗ! ಅವರಿಂದ ಅದನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.
وَإِذَا رَأَى الَّذِينَ أَشْرَكُوا شُرَكَاءَهُمْ قَالُوا رَبَّنَا هَٰؤُلَاءِ شُرَكَاؤُنَا الَّذِينَ كُنَّا نَدْعُو مِن دُونِكَ ۖ فَأَلْقَوْا إِلَيْهِمُ الْقَوْلَ إِنَّكُمْ لَكَاذِبُونَ ۝٨٦
📖 ಅನುವಾದ ಆಯತ್ 86
ಬಹುದೇವಾರಾಧಕರು (ಪರಲೋಕದಲ್ಲಿ) ತಮ್ಮ ಸಹಭಾಗಿಗಳನ್ನು (ಆರಾಧ್ಯರನ್ನು) ಕಂಡಾಗ! ಓ ನಮ್ಮ ಪ್ರಭುವೇ, ನಾವು ನಿನ್ನ ಹೊರತು ಕರೆದು ಬೇಡುತ್ತಿದ್ದಂತಹ ನಮ್ಮ ಸಹಭಾಗಿಗಳು ಇವರೇ ಎಂದು ಹೇಳುವರು. ಆಗ ಅವರು ನೀವು ಶುದ್ಧ ಸುಳ್ಳರು ಎಂದು ಉತ್ತರ ಕೊಡುವರು.
وَأَلْقَوْا إِلَى اللَّهِ يَوْمَئِذٍ السَّلَمَ ۖ وَضَلَّ عَنْهُم مَّا كَانُوا يَفْتَرُونَ ۝٨٧
📖 ಅನುವಾದ ಆಯತ್ 87
ಅಂದು ಅವರೆಲ್ಲರೂ (ಬಹುದೇವಾರಾಧಕರು) ಅಲ್ಲಾಹನೆಡೆಗೇ ವಿಧೇಯತೆ ತೋರುವರು ಮತ್ತು ಅವರು ರಚಿಸುತ್ತಿದ್ದ ಸುಳ್ಳುಗಳೆಲ್ಲವೂ ಅವರಿಂದ ಕಾಣೆಯಾಗಿ ಬಿಡುವುದು.
الَّذِينَ كَفَرُوا وَصَدُّوا عَن سَبِيلِ اللَّهِ زِدْنَاهُمْ عَذَابًا فَوْقَ الْعَذَابِ بِمَا كَانُوا يُفْسِدُونَ ۝٨٨
📖 ಅನುವಾದ ಆಯತ್ 88
ಸತ್ಯನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದವರಿಗೆ ಇಹದಲ್ಲಿ ಅವರು ಕ್ಷೆÆÃಭೆ ಹರಡಿದ್ದ ಫಲವಾಗಿ ನಾವು ಯಾತನೆಯ ಮೇಲೆ ಯಾತನೆಯನ್ನು ಹೆಚ್ಚಿಸುತ್ತಾ ಹೋಗುವೆವು.
وَيَوْمَ نَبْعَثُ فِي كُلِّ أُمَّةٍ شَهِيدًا عَلَيْهِم مِّنْ أَنفُسِهِمْ ۖ وَجِئْنَا بِكَ شَهِيدًا عَلَىٰ هَٰؤُلَاءِ ۚ وَنَزَّلْنَا عَلَيْكَ الْكِتَابَ تِبْيَانًا لِّكُلِّ شَيْءٍ وَهُدًى وَرَحْمَةً وَبُشْرَىٰ لِلْمُسْلِمِينَ ۝٨٩
📖 ಅನುವಾದ ಆಯತ್ 89
ನಾವು ಪ್ರತಿಯೊಂದು ಸಮುದಾಯದಿಂದ ಅವರ ವಿರುದ್ಧವೇ ಸಾಕ್ಷಿಯನ್ನು ನಿಲ್ಲಿಸುವ ದಿನ. ನಿಮ್ಮನ್ನು ಇವರೆಲ್ಲರ ಮೇಲೆ ಒಬ್ಬ ಸಾಕ್ಷಿಯನ್ನಾಗಿಸಿ ತರುವೆವು ಮತ್ತು ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಎಲ್ಲಾ ವಿಷಯಗಳ ಸ್ಪಷ್ಟ ವಿವರಣೆಯಾಗಿ ಮತ್ತು ಶರಣಾಗುವವರಿಗೆ ಸನ್ಮಾರ್ಗವೂ, ಕಾರುಣ್ಯವೂ, ಸುವಾರ್ತೆಯೂ ಆಗಿ ಅವತೀರ್ಣಗೊಳಿಸಿರುತ್ತೇವೆ.
۞ إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَىٰ وَيَنْهَىٰ عَنِ الْفَحْشَاءِ وَالْمُنكَرِ وَالْبَغْيِ ۚ يَعِظُكُمْ لَعَلَّكُمْ تَذَكَّرُونَ ۝٩٠
📖 ಅನುವಾದ ಆಯತ್ 90
ಅಲ್ಲಾಹನು ನ್ಯಾಯ, ಪರೋಪಕಾರ ಹಾಗೂ ಆಪ್ತ ಸಂಬAಧಿಕರೊAದಿಗೆ ಔದಾರ್ಯ ತೋರುವ ಆದೇಶ ನೀಡುತ್ತಾನೆ ಮತ್ತು ನಿರ್ಲಜ್ಜೆಯ ಕೃತ್ಯಗಳಿಂದ, ಅಶ್ಲೀಲ ಕೃತ್ಯಗಳಿಂದ, ಅತಿಕ್ರಮ, ದೌರ್ಜನ್ಯದಿಂದಲೂ ನಿಮ್ಮನ್ನು ತಡಯುತ್ತಾನೆ. ನೀವು ಉಪದೇಶ ಸ್ವೀಕರಿಸುವವರಾಗಲು ಅವನು ನಿಮಗೆ ಉಪದೇಶಗಳನ್ನು ನೀಡುತ್ತಾನೆ.
وَأَوْفُوا بِعَهْدِ اللَّهِ إِذَا عَاهَدتُّمْ وَلَا تَنقُضُوا الْأَيْمَانَ بَعْدَ تَوْكِيدِهَا وَقَدْ جَعَلْتُمُ اللَّهَ عَلَيْكُمْ كَفِيلًا ۚ إِنَّ اللَّهَ يَعْلَمُ مَا تَفْعَلُونَ ۝٩١
📖 ಅನುವಾದ ಆಯತ್ 91
ನೀವು ಅಲ್ಲಾಹನೊಡನೆ ಕರಾರು ಮಾಡಿದ್ದರೆ ಅದನ್ನು ಪಾಲಿಸಿರಿ ಮತ್ತು ನೀವು ಮಾಡಿದ ಪ್ರಮಾಣಗಳನ್ನು ಅವುಗಳ ದೃಢೀಕರಣದ ನಂತರ ಉಲ್ಲಂಘಿಸಬೇಡಿರಿ. ವಸ್ತುತಃ ನೀವು ಅಲ್ಲಾಹನನ್ನು ನಿಮ್ಮ ಜಾಮೀನುದಾರನನ್ನಾಗಿ ನಿಶ್ಚಯಿಸಿಕೊಂಡಿರುವಿರಿ. ಖಂಡಿತವಾಗಿಯೂ ಅಲ್ಲಾಹನು ನೀವು ಮಾಡುತ್ತಿರುವುದೆಲ್ಲವನ್ನು ಅರಿಯುತ್ತಾನೆ.
وَلَا تَكُونُوا كَالَّتِي نَقَضَتْ غَزْلَهَا مِن بَعْدِ قُوَّةٍ أَنكَاثًا تَتَّخِذُونَ أَيْمَانَكُمْ دَخَلًا بَيْنَكُمْ أَن تَكُونَ أُمَّةٌ هِيَ أَرْبَىٰ مِنْ أُمَّةٍ ۚ إِنَّمَا يَبْلُوكُمُ اللَّهُ بِهِ ۚ وَلَيُبَيِّنَنَّ لَكُمْ يَوْمَ الْقِيَامَةِ مَا كُنتُمْ فِيهِ تَخْتَلِفُونَ ۝٩٢
📖 ಅನುವಾದ ಆಯತ್ 92
ತಾನು ನೂತ ನೂಲನ್ನು ಅದು ಗಟ್ಟಿಯಾದ ಬಳಿಕ ತುಂಡು ತುಂಡಾಗಿಸುವ ಒಬ್ಬಳಂತೆ ನೀವಾಗಬೇಡಿರಿ. ಒಂದು ಸಮುದಾಯವು ಇನ್ನೊಂದು ಸಮುದಾಯಕ್ಕಿಂತ ಜನಸಮೃದ್ಧವಾಗಲೆಂದು ನೀವು ನಿಮ್ಮ ಶಪಥಗಳನ್ನು ಪರಸ್ಪರರಿಗೆ ಮೋಸದ ಮಾರ್ಗವನ್ನಾಗಿ ಮಾಡುತ್ತೀರಿ. ವಾಸ್ತವದಲ್ಲಿ ಅಲ್ಲಾಹನು ಈ ಒಪ್ಪಂದದ ಮೂಲಕ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಖಂಡಿತವಾಗಿಯು ಅಲ್ಲಾಹನು ಪುನರುತ್ಥಾನದ ದಿನದಂದು ನೀವು ಭಿನ್ನತೆ ಹೊಂದಿರುವ ಪ್ರತಿಯೊಂದು ಸಂಗತಿಯನ್ನು ಸ್ಪಷ್ಟವಾಗಿ ವಿವರಿಸಿಕೊಡಲಿದ್ದಾನೆ.
وَلَوْ شَاءَ اللَّهُ لَجَعَلَكُمْ أُمَّةً وَاحِدَةً وَلَٰكِن يُضِلُّ مَن يَشَاءُ وَيَهْدِي مَن يَشَاءُ ۚ وَلَتُسْأَلُنَّ عَمَّا كُنتُمْ تَعْمَلُونَ ۝٩٣
📖 ಅನುವಾದ ಆಯತ್ 93
ಅಲ್ಲಾಹನು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನು ಒಂದೇ ಜನಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ನೀಡುತ್ತಾನೆ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಕುರಿತು ವಿಚಾರಣೆಗೊಳಗಾಗಲಿದ್ದೀರಿ.
وَلَا تَتَّخِذُوا أَيْمَانَكُمْ دَخَلًا بَيْنَكُمْ فَتَزِلَّ قَدَمٌ بَعْدَ ثُبُوتِهَا وَتَذُوقُوا السُّوءَ بِمَا صَدَدتُّمْ عَن سَبِيلِ اللَّهِ ۖ وَلَكُمْ عَذَابٌ عَظِيمٌ ۝٩٤
📖 ಅನುವಾದ ಆಯತ್ 94
ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನೆಯ ಮಾರ್ಗವನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ಪಾದಗಳು (ಇಸ್ಲಾಮಿನಲ್ಲಿ) ಸ್ಥಿರಗೊಂಡ ಬಳಿಕ ಜಾರಿಹೋಗಬಹುದು ನೀವು ಅಲ್ಲಾಹನ ಮಾರ್ಗದಿಂದ ತಡೆದ ಕಾರಣಕ್ಕಾಗಿ ಕೇಡನ್ನು ಸವಿಯಿರಿ. ಹಾಗೂ ನಿಮಗೆ ಮಹಾ ಯಾತನೆಯಿರುವುದು.
وَلَا تَشْتَرُوا بِعَهْدِ اللَّهِ ثَمَنًا قَلِيلًا ۚ إِنَّمَا عِندَ اللَّهِ هُوَ خَيْرٌ لَّكُمْ إِن كُنتُمْ تَعْلَمُونَ ۝٩٥
📖 ಅನುವಾದ ಆಯತ್ 95
ಅಲ್ಲಾಹನ ಒಪ್ಪಂದವನ್ನು ಅತ್ಯಲ್ಪ ಲಾಭಕ್ಕಾಗಿ ನೀವು ಮಾರಬೇಡಿರಿ. ನೀವು ತಿಳಿದಿದ್ದರೆ ಅಲ್ಲಾಹನ ಬಳಿ ಇರುವುದೇ (ಪುಣ್ಯವೇ) ನಿಮಗೆ ಅತ್ಯುತ್ತಮವಾಗಿದೆ.
مَا عِندَكُمْ يَنفَدُ ۖ وَمَا عِندَ اللَّهِ بَاقٍ ۗ وَلَنَجْزِيَنَّ الَّذِينَ صَبَرُوا أَجْرَهُم بِأَحْسَنِ مَا كَانُوا يَعْمَلُونَ ۝٩٦
📖 ಅನುವಾದ ಆಯತ್ 96
ನಿಮ್ಮ ಬಳಿಯಲ್ಲಿರುವುದೆಲ್ಲವೂ ಅಳಿದುಹೋಗಲಿದೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಬಾಕಿ ಉಳಿಯುವುದು. ಖಂಡಿತ ನಾವು ಸಹನೆ ವಹಿಸಿದವರಿಗೆ ಅವರ ಸತ್ಕರ್ಮಗಳ ಫಲವಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡಲಿರುವೆವು.
مَنْ عَمِلَ صَالِحًا مِّن ذَكَرٍ أَوْ أُنثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُم بِأَحْسَنِ مَا كَانُوا يَعْمَلُونَ ۝٩٧
📖 ಅನುವಾದ ಆಯತ್ 97
ಪುರುಷನಾಗಿರಲಿ, ಸ್ತಿçÃಯಾಗಿರಲಿ ಯಾರು ಸತ್ಯ ವಿಶ್ವಾಸವನ್ನಿರಿಸಿಕೊಂಡು ಸತ್ಕರ್ಮವನ್ನು ಕೈಗೊಳ್ಳುವರೋ ನಾವು ಅವನಿಗೆ ಪರಿಶುದ್ದ ಜೀವನವನ್ನು ದಯಪಾಲಿಸುವೆವು ಮತ್ತು ಅವರಿಗೆ ತಮ್ಮ ಸತ್ಕರ್ಮಗಳಿಗನುಸಾರ ಉತ್ತಮ ಪ್ರತಿಫಲವನ್ನು ಕರುಣಿಸುವೆವು.
فَإِذَا قَرَأْتَ الْقُرْآنَ فَاسْتَعِذْ بِاللَّهِ مِنَ الشَّيْطَانِ الرَّجِيمِ ۝٩٨
📖 ಅನುವಾದ ಆಯತ್ 98
ನೀವು ಕುರ್‌ಆನ್ ಪಠಿಸುವುದಾದರೆ ಶಪಿಸಲ್ಪಟ್ಟ ಶÉÊತಾನನಿಂದ ಅಲ್ಲಾಹನ ಅಭಯ ಯಾಚಿಸಿರಿ.
إِنَّهُ لَيْسَ لَهُ سُلْطَانٌ عَلَى الَّذِينَ آمَنُوا وَعَلَىٰ رَبِّهِمْ يَتَوَكَّلُونَ ۝٩٩
📖 ಅನುವಾದ ಆಯತ್ 99
ಸತ್ಯವಿಶ್ವಾಸವನ್ನಿಟ್ಟು ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿರಿಸಿದವರ ಮೇಲೆ ಅವನ ಯಾವುದೇ ಪ್ರಾಬಲ್ಯವು ನಡೆಯದು.
إِنَّمَا سُلْطَانُهُ عَلَى الَّذِينَ يَتَوَلَّوْنَهُ وَالَّذِينَ هُم بِهِ مُشْرِكُونَ ۝١٠٠
📖 ಅನುವಾದ ಆಯತ್ 100
ಆದರೆ ಅವನ (ಶೈತಾನನ) ಪ್ರಾಬಲ್ಯವಂತು ಕೇವಲ ಅವನನ್ನು ಆಪ್ತಮಿತ್ರನನ್ನಾಗಿ ಸ್ವೀಕರಿಸಿಕೊಂಡವರ ಹಾಗೂ ಅವನ ದುಷ್ಪೆçÃರಣೆಗಳಿಂದ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸಿಕೊಂಡವರ ಮೇಲೆ ಮಾತ್ರ ನಡೆಯುತ್ತದೆ.
وَإِذَا بَدَّلْنَا آيَةً مَّكَانَ آيَةٍ ۙ وَاللَّهُ أَعْلَمُ بِمَا يُنَزِّلُ قَالُوا إِنَّمَا أَنتَ مُفْتَرٍ ۚ بَلْ أَكْثَرُهُمْ لَا يَعْلَمُونَ ۝١٠١
📖 ಅನುವಾದ ಆಯತ್ 101
ನಾವು ಒಂದು ಸೂಕ್ತಿಯ ಸ್ಥಾನದಲ್ಲಿ ಇನ್ನೊಂದು ಸೂಕ್ತಿಯನ್ನು ಬದಲಿಸಿದಾಗ ಏನನ್ನು ಅವತೀರ್ಣಗೊಳಸಿಬೇಕೆಂದು ಅಲ್ಲಾಹನೇ ಚೆನ್ನಾಗಿ ಬಲ್ಲನು ನೀವೇ ಸ್ವಯಂ ಸೃಷ್ಟಿಸಿರುವಿರಿ ಎಂದು ಅವರು(ಸತ್ಯನಿಷೇಧಿಗಳು) ಹೇಳುತ್ತಾರೆ. ವಾಸ್ತವದಲ್ಲಿ ಅವರ ಪೈಕಿ ಹೆಚ್ಚಿನವರು ಅರಿಯುವುದೇ ಇಲ್ಲ.
قُلْ نَزَّلَهُ رُوحُ الْقُدُسِ مِن رَّبِّكَ بِالْحَقِّ لِيُثَبِّتَ الَّذِينَ آمَنُوا وَهُدًى وَبُشْرَىٰ لِلْمُسْلِمِينَ ۝١٠٢
📖 ಅನುವಾದ ಆಯತ್ 102
ಹೇಳಿರಿ: ಸತ್ಯವಿಶ್ವಾಸಿಗಳನ್ನು ಸದೃಢಗೊಳಿಸಲಿಕ್ಕಾಗಿ, ಮತ್ತು ವಿಧೇಯರಾಗುವವರಿಗೆ ಮಾರ್ಗದರ್ಶನ ಹಾಗೂ ಶುಭವಾರ್ತೆಯಾಗಲಿಕ್ಕಾಗಿ ಇದನ್ನು ಪವಿತ್ರಾತ್ಮನು ನಿಮ್ಮ ಪ್ರಭುವಿನ ಕಡೆಯಿಂದ ಸತ್ಯದೊಂದಿಗೆ ಅವತೀರ್ಣಗೊಳಿಸಿದನು.
وَلَقَدْ نَعْلَمُ أَنَّهُمْ يَقُولُونَ إِنَّمَا يُعَلِّمُهُ بَشَرٌ ۗ لِّسَانُ الَّذِي يُلْحِدُونَ إِلَيْهِ أَعْجَمِيٌّ وَهَٰذَا لِسَانٌ عَرَبِيٌّ مُّبِينٌ ۝١٠٣
📖 ಅನುವಾದ ಆಯತ್ 103
ಒಬ್ಬ ವ್ಯಕ್ತಿ ಇವನಿಗೆ(ಪೈಗಂಬರರಿಗೆ) ಅದನ್ನು ಕಲಿಸುತ್ತಿದ್ದಾನೆಂದು ಸತ್ಯನಿಷೇಧಿಗಳು ಹೇಳುತ್ತಿದ್ದಾರೆಂಬುದನ್ನು ನಮಗೆ ಚೆನ್ನಾಗಿ ಗೊತ್ತಿದೆ. ಇವರು ಯಾರ ಕಡೆಗೆ ಬೆಟ್ಟು ಮಾಡುತ್ತಿದ್ದಾರೋ ಅವನ ಭಾಷೆಯು ಅರಬೇತರವಾಗಿದೆ. ಮತ್ತು ಈ ಕುರ್‌ಆನ್ ಅಂತು ಸುಸ್ಪಷ್ಟ ಅರಬೀ ಭಾಷೆಯಲ್ಲಿದೆ.
إِنَّ الَّذِينَ لَا يُؤْمِنُونَ بِآيَاتِ اللَّهِ لَا يَهْدِيهِمُ اللَّهُ وَلَهُمْ عَذَابٌ أَلِيمٌ ۝١٠٤
📖 ಅನುವಾದ ಆಯತ್ 104
(ವಾಸ್ತವದಲ್ಲಿ) ಅಲ್ಲಾಹನ ಸೂಕ್ತಿಗಳ ಮೇಲೆ ವಿಶ್ವಾಸವಿಡದವರಿಗೆ ಅಲ್ಲಾಹನು ಮಾರ್ಗದರ್ಶನ ನೀಡುವುದಿಲ್ಲ ಮತ್ತು ಅವರಿಗೆ ವೇದನಾಜನಕ ಯಾತನೆಯಿದೆ.
إِنَّمَا يَفْتَرِي الْكَذِبَ الَّذِينَ لَا يُؤْمِنُونَ بِآيَاتِ اللَّهِ ۖ وَأُولَٰئِكَ هُمُ الْكَاذِبُونَ ۝١٠٥
📖 ಅನುವಾದ ಆಯತ್ 105
ಅಲ್ಲಾಹನ ಸೂಕ್ತಿಗಳಲ್ಲಿ ವಿಶ್ವಾಸವಿಡದವರೇ ಸುಳ್ಳನ್ನು ಸೃಷ್ಟಿಸುತ್ತಾರೆ ಮತ್ತು ಇವರೇ ಸುಳ್ಳುಗಾರರಾಗಿದ್ದಾರೆ.
مَن كَفَرَ بِاللَّهِ مِن بَعْدِ إِيمَانِهِ إِلَّا مَنْ أُكْرِهَ وَقَلْبُهُ مُطْمَئِنٌّ بِالْإِيمَانِ وَلَٰكِن مَّن شَرَحَ بِالْكُفْرِ صَدْرًا فَعَلَيْهِمْ غَضَبٌ مِّنَ اللَّهِ وَلَهُمْ عَذَابٌ عَظِيمٌ ۝١٠٦
📖 ಅನುವಾದ ಆಯತ್ 106
ಯಾರು ಸತ್ಯವಿಶ್ವಾಸದ ಬಳಿಕ ನಿಷೇಧ ತಾಳುತ್ತಾನೋ ಬಲವಂತಕ್ಕೊಳಗಾದವನ ಹೊರತು ಮತ್ತು ಅವನ ಹೃದಯವು ಸತ್ಯವಿಶ್ವಾಸದಲ್ಲಿ ಸದೃಢವಾಗಿದೆ. ಆದರೆ ಯಾರು ತೆರೆದ ಹೃದಯದಿಂದ ಸತ್ಯನಿಷೇಧ ಕೈಗೊಳ್ಳುತ್ತಾನೋ ಅಂತಹವರ ಮೇಲೆ ಅಲ್ಲಾಹನ ಕ್ರೊಧÀವಿದೆ ಮತ್ತು ಅವರಿಗೆ ಮಹಾ ಯಾತನೆ ಇರುವುದು.
ذَٰلِكَ بِأَنَّهُمُ اسْتَحَبُّوا الْحَيَاةَ الدُّنْيَا عَلَى الْآخِرَةِ وَأَنَّ اللَّهَ لَا يَهْدِي الْقَوْمَ الْكَافِرِينَ ۝١٠٧
📖 ಅನುವಾದ ಆಯತ್ 107
ಇದೇಕೆಂದರೆ ಅವರು ಪರಲೋಕದ ಬದಲು ಐಹಿಕ ಜೀವನವನ್ನು ಮೆಚ್ಚಿದರು. ಖಂಡಿತವಾಗಿಯು ಅಲ್ಲಾಹನು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗ ತೋರುವುದಿಲ್ಲ.
أُولَٰئِكَ الَّذِينَ طَبَعَ اللَّهُ عَلَىٰ قُلُوبِهِمْ وَسَمْعِهِمْ وَأَبْصَارِهِمْ ۖ وَأُولَٰئِكَ هُمُ الْغَافِلُونَ ۝١٠٨
📖 ಅನುವಾದ ಆಯತ್ 108
ಅಲ್ಲಾಹನು ಅವರ ಹೃದಯಗಳ ಮೇಲೂ, ಕಿವಿಗಳ ಮೇಲೂ ಹಾಗೂ ಕಣ್ಣುಗಳ ಮೇಲೂ ಮುದ್ರೆ ಹಾಕಿರುತ್ತಾನೆ ಮತ್ತು ಇಂಥವರೇ ಅಲಕ್ಷö್ಯರಾಗಿದ್ದಾರೆ.
لَا جَرَمَ أَنَّهُمْ فِي الْآخِرَةِ هُمُ الْخَاسِرُونَ ۝١٠٩
📖 ಅನುವಾದ ಆಯತ್ 109
ಇವರೇ ಪರಲೋಕದಲ್ಲಿ ನಷ್ಟ ಹೊಂದುವವರಾಗಿರುತ್ತಾರೆ. ಎಂಬುದರಲ್ಲಿಸAದೇಹವೇ ಇಲ್ಲ.
ثُمَّ إِنَّ رَبَّكَ لِلَّذِينَ هَاجَرُوا مِن بَعْدِ مَا فُتِنُوا ثُمَّ جَاهَدُوا وَصَبَرُوا إِنَّ رَبَّكَ مِن بَعْدِهَا لَغَفُورٌ رَّحِيمٌ ۝١١٠
📖 ಅನುವಾದ ಆಯತ್ 110
(ಆದರೆ) ಯಾರು ದೌರ್ಜನ್ಯಕ್ಕೊಳಗಾದ ನಂತರ ವಲಸೆ ಹೋದರೋ ಅನಂತರ ಹೋರಾಟ ನಡೆಸಿದರೋ ಮತ್ತು ಸಹನೆ ವಹಿಸಿದರೋ ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಇದರ ನಂತರ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
۞ يَوْمَ تَأْتِي كُلُّ نَفْسٍ تُجَادِلُ عَن نَّفْسِهَا وَتُوَفَّىٰ كُلُّ نَفْسٍ مَّا عَمِلَتْ وَهُمْ لَا يُظْلَمُونَ ۝١١١
📖 ಅನುವಾದ ಆಯತ್ 111
ಪ್ರತಿಯೊಬ್ಬನೂ ತನ್ನ ರಕ್ಷಣೆಗಾಗಿ ವಾದಿಸುತ್ತಾ ಬರುವ ದಿನದಂದು(ಅAದು) ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿರುವುದರ ಪರಿಪೂರ್ಣ ಪ್ರತಿಫಲವನ್ನು ನೀಡಲಾಗುವುದು ಮತ್ತು ಅವರು ಅನ್ಯಾಯಕ್ಕೊಳಗಾಗಲಾರರು.
وَضَرَبَ اللَّهُ مَثَلًا قَرْيَةً كَانَتْ آمِنَةً مُّطْمَئِنَّةً يَأْتِيهَا رِزْقُهَا رَغَدًا مِّن كُلِّ مَكَانٍ فَكَفَرَتْ بِأَنْعُمِ اللَّهِ فَأَذَاقَهَا اللَّهُ لِبَاسَ الْجُوعِ وَالْخَوْفِ بِمَا كَانُوا يَصْنَعُونَ ۝١١٢
📖 ಅನುವಾದ ಆಯತ್ 112
ಅಲ್ಲಾಹನು ಸಂಪೂರ್ಣ ನಿರ್ಭೀತಿ ಹಾಗು ಸಂತೃಪ್ತಿಯಿAದ ಜೀವನ ಸಾಗಿಸುತ್ತಿದ್ದ ಒಂದು ನಾಡಿನ ಉಪಮೆಯನ್ನು ನೀಡುತ್ತಾನೆ. ಅದರ ಜೀವನಾಧಾರವು ಎಲ್ಲಾ ಕಡೆಯಿಂದಲೂ ಸಮೃದ್ಧವಾಗಿ ಬರುತ್ತಿತ್ತು. ಅನಂತರ ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನರಾದರು. ಆಗ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯದ ರುಚಿಯನ್ನು ಸವಿಸಿದನು. ಇದು ಅವರು ಮಾಡುತ್ತಿದ್ದಂತಹ ಕೃತ್ಯಗಳ ಪ್ರತಿಫಲವಾಗಿತ್ತು.
وَلَقَدْ جَاءَهُمْ رَسُولٌ مِّنْهُمْ فَكَذَّبُوهُ فَأَخَذَهُمُ الْعَذَابُ وَهُمْ ظَالِمُونَ ۝١١٣
📖 ಅನುವಾದ ಆಯತ್ 113
ನಿಶ್ಚಯವಾಗಿಯು ಅವರೆಡೆಗೆ ಅವರಿಂದಲೇ ಆದ ಸಂದೇಶವಾಹಕರೊಬ್ಬರು ಬಂದರು ಆದರೆ ಅವರು ಅವರನ್ನು ಸುಳ್ಳಾಗಿಸಿ ಬಿಟ್ಟರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಯಾತನೆಯು ಅವರನ್ನು ಹಿಡಿದು ಬಿಟ್ಟಿತು.
فَكُلُوا مِمَّا رَزَقَكُمُ اللَّهُ حَلَالًا طَيِّبًا وَاشْكُرُوا نِعْمَتَ اللَّهِ إِن كُنتُمْ إِيَّاهُ تَعْبُدُونَ ۝١١٤
📖 ಅನುವಾದ ಆಯತ್ 114
ಆದ್ದರಿಂದ ಅಲ್ಲಾಹನು ನಿಮಗೆ ದಯಪಾಲಿಸಿರುವ ಧರ್ಮಸಮ್ಮತ ಹಾಗು ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿರಿ. ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
إِنَّمَا حَرَّمَ عَلَيْكُمُ الْمَيْتَةَ وَالدَّمَ وَلَحْمَ الْخِنزِيرِ وَمَا أُهِلَّ لِغَيْرِ اللَّهِ بِهِ ۖ فَمَنِ اضْطُرَّ غَيْرَ بَاغٍ وَلَا عَادٍ فَإِنَّ اللَّهَ غَفُورٌ رَّحِيمٌ ۝١١٥
📖 ಅನುವಾದ ಆಯತ್ 115
ನಿಶ್ಚಯವಾಗಿಯು ನಿಮ್ಮ ಮೇಲೆ ಶವ, ರಕ್ತ, ಹಂದಿ ಮಾಂಸ, ಮತ್ತು ಯಾವುದರ ಮೇಲೆ ಅಲ್ಲಾಹನ ಹೊರತು ಇತರರ ನಾಮ ಉಚ್ಛರಿಸಲಾಗಿದೆಯೋ ಅವು ನಿಷಿದ್ಧವಾಗಿವೆ. ಆದರೆ ಯಾರಾದರೂ ವಿವಶನಾದರೆ ಮತ್ತು ಅವನು ಹಂಬಲಿಸುವವನೊ, ಮೇರೆ ಮೀರುವವನೊ ಆಗಿಲ್ಲದಿದ್ದರೆ ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
وَلَا تَقُولُوا لِمَا تَصِفُ أَلْسِنَتُكُمُ الْكَذِبَ هَٰذَا حَلَالٌ وَهَٰذَا حَرَامٌ لِّتَفْتَرُوا عَلَى اللَّهِ الْكَذِبَ ۚ إِنَّ الَّذِينَ يَفْتَرُونَ عَلَى اللَّهِ الْكَذِبَ لَا يُفْلِحُونَ ۝١١٦
📖 ಅನುವಾದ ಆಯತ್ 116
ನಿಮ್ಮ ನಾಲಿಗೆಗಳಿಂದ ಯಾವುದೇ ವಸ್ತುವನ್ನು ಸುಳ್ಳು ಸುಳ್ಳಾಗಿ ಇದು ಧರ್ಮ ಸಮ್ಮತವಾದುದು ಮತ್ತು ಇದು ನಿಷಿದ್ಧವಾದುದು ಎಂದು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲಿಕ್ಕಾಗಿ ಹೇಳಬೇಡಿರಿ. ತಿಳಿದುಕೊಳ್ಳಿರಿ! ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸುವವರು ಯಶಸ್ವಿಯಾಗಲಾರರು.
مَتَاعٌ قَلِيلٌ وَلَهُمْ عَذَابٌ أَلِيمٌ ۝١١٧
📖 ಅನುವಾದ ಆಯತ್ 117
ಅವರ ಸುಖಾನುಭವವು ಅತ್ಯಲ್ಪವಾದುದು ಮಾತ್ರ ನಂತರ ಅವರಿಗೆ ವೇದನಾಜನಕ ಯಾತನೆಯಿರುವುದು.
وَعَلَى الَّذِينَ هَادُوا حَرَّمْنَا مَا قَصَصْنَا عَلَيْكَ مِن قَبْلُ ۖ وَمَا ظَلَمْنَاهُمْ وَلَٰكِن كَانُوا أَنفُسَهُمْ يَظْلِمُونَ ۝١١٨
📖 ಅನುವಾದ ಆಯತ್ 118
ನಾವು ಯಹೂದರ ಮೇಲೆ ನಿಷಿದ್ಧಗೊಳಿಸಿದವುಗಳನ್ನು ನಿಮಗೆ ಮೊದಲೇ ವಿವರಿಸಿಕೊಟ್ಟಿದ್ದೇವೆ. ನಾವು ಅವರ ಮೇಲೆ ಅನ್ಯಾಯ ಮಾಡಿರಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆ ಅನ್ಯಾಯ ಮಾಡುತ್ತಿದ್ದರು.
ثُمَّ إِنَّ رَبَّكَ لِلَّذِينَ عَمِلُوا السُّوءَ بِجَهَالَةٍ ثُمَّ تَابُوا مِن بَعْدِ ذَٰلِكَ وَأَصْلَحُوا إِنَّ رَبَّكَ مِن بَعْدِهَا لَغَفُورٌ رَّحِيمٌ ۝١١٩
📖 ಅನುವಾದ ಆಯತ್ 119
ನಂತರ ಯಾರು ಅಜ್ಞಾನದಿಂದ ದುಷ್ಕೃತ್ಯವನ್ನು ಎಸಗಿ ತರುವಾಯ ಪಶ್ಚಾತ್ತಾಪ ಪಟ್ಟರೆ ಹಾಗೂ ತಮ್ಮ ಸುಧಾರಣೆಯನ್ನು ಮಾಡಿಕೊಂಡರೆ ನಿಸ್ಸಂಶಯವಾಗಿಯು ಇದರ ನಂತರ ನಿಮ್ಮ ಪ್ರಭುವು ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
إِنَّ إِبْرَاهِيمَ كَانَ أُمَّةً قَانِتًا لِّلَّهِ حَنِيفًا وَلَمْ يَكُ مِنَ الْمُشْرِكِينَ ۝١٢٠
📖 ಅನುವಾದ ಆಯತ್ 120
ನಿಸ್ಸಂಶಯವಾಗಿಯು ಇಬ್ರಾಹೀಮ್ ಸ್ವಯಂ ಒಂದು ಸಮುದಾಯ ವಾಗಿದ್ದರು ಹಾಗೂ ಅಲ್ಲಾಹನಿಗೆ ವಿಧೇಯರೂ, ಏಕನಿಷ್ಠರೂ ಆಗಿದ್ದರು ಮತ್ತು ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
شَاكِرًا لِّأَنْعُمِهِ ۚ اجْتَبَاهُ وَهَدَاهُ إِلَىٰ صِرَاطٍ مُّسْتَقِيمٍ ۝١٢١
📖 ಅನುವಾದ ಆಯತ್ 121
ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಜ್ಞರಾಗಿದ್ದರು. ಅಲ್ಲಾಹನು ಅವರನ್ನು (ತನ್ನ ದೌತ್ಯಕಾರ್ಯಕ್ಕೆ) ಆಯ್ಕೆ ಮಾಡಿಕೊಂಡನು ಹಾಗೂ ಅವರಿಗೆ ಋಜುವಾದ ಮಾರ್ಗವನ್ನು ತೋರಿಸಿದನು.
وَآتَيْنَاهُ فِي الدُّنْيَا حَسَنَةً ۖ وَإِنَّهُ فِي الْآخِرَةِ لَمِنَ الصَّالِحِينَ ۝١٢٢
📖 ಅನುವಾದ ಆಯತ್ 122
ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ನೀಡಿದೆವು ನಿಸ್ಸಂಶಯವಾಗಿಯೂ ಅವರು ಪರಲೋಕದಲ್ಲೂ ಸಜ್ಜನರಲ್ಲಾಗಿರುವರು.
ثُمَّ أَوْحَيْنَا إِلَيْكَ أَنِ اتَّبِعْ مِلَّةَ إِبْرَاهِيمَ حَنِيفًا ۖ وَمَا كَانَ مِنَ الْمُشْرِكِينَ ۝١٢٣
📖 ಅನುವಾದ ಆಯತ್ 123
(ಓ ಪೈಗಂಬರರೇ) ತರುವಾಯ ನೀವು ಏಕನಿಷ್ಠರಾದ ಇಬ್ರಾಹೀಮರವರ ಪಥವನ್ನು ಅನುಸರಿಸಿರಿ ಎಂದು ನಾವು ನಿಮ್ಮೆಡೆಗೆ ದಿವ್ಯವಾಣಿ ಮಾಡಿದೆವು. ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ.
إِنَّمَا جُعِلَ السَّبْتُ عَلَى الَّذِينَ اخْتَلَفُوا فِيهِ ۚ وَإِنَّ رَبَّكَ لَيَحْكُمُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ ۝١٢٤
📖 ಅನುವಾದ ಆಯತ್ 124
ಸಬ್ತ್ ದಿನದ ಆಚರಣೆಯು ಅದರಲ್ಲಿ ಭಿನ್ನತೆ ಹೊಂದಿದವರ ಮೇಲೆಯೇ ನಿಶ್ಚಯಿಸಲಾಗಿತ್ತು ನಿಶ್ಚಯವಾಗಿಯೂ ನಿಮ್ಮ ಪ್ರಭೂ ಪ್ರಳಯ ದಿನದಂದು ಅವರು ಭಿನ್ನಾಭಿಪ್ರಾಯ ಹೊಂದಿದ ವಿಚಾರಗಳ ಕುರಿತು ಅವರ ನಡುವೆ ತೀರ್ಮಾನ ಮಾಡಲಿದ್ದಾನೆ.
ادْعُ إِلَىٰ سَبِيلِ رَبِّكَ بِالْحِكْمَةِ وَالْمَوْعِظَةِ الْحَسَنَةِ ۖ وَجَادِلْهُم بِالَّتِي هِيَ أَحْسَنُ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ ۖ وَهُوَ أَعْلَمُ بِالْمُهْتَدِينَ ۝١٢٥
📖 ಅನುವಾದ ಆಯತ್ 125
ನೀವು ನಿಮ್ಮ ಪ್ರಭುವಿನ ಮಾರ್ಗದೆಡೆಗೆ ಯುಕ್ತಿ ಹಾಗೂ ಸದುಪದೇಶದೊಂದಿಗೆ ಜನರನ್ನು ಆಹ್ವಾನಿಸಿರಿ ಹಾಗೂ ಅವರೊಂದಿಗೆ ಅತ್ಯುತ್ತಮ ರೀತಿಯಿಂದ ಸಂವಾದ ನಡೆಸಿರಿ. ಖಂಡಿತವಾಗಿಯೂ ನಿಮ್ಮ ಪ್ರಭು ತನ್ನ ಮಾರ್ಗದಿಂದ ಭ್ರಷ್ಟರಾದವರನ್ನು ಚೆನ್ನಾಗಿ ಬಲ್ಲನು ಮತ್ತು ಅವನು ಸನ್ಮಾರ್ಗ ಹೊಂದಿದವರನ್ನು ಚೆನ್ನಾಗಿ ಅರಿಯುತ್ತಾನೆ.
وَإِنْ عَاقَبْتُمْ فَعَاقِبُوا بِمِثْلِ مَا عُوقِبْتُم بِهِ ۖ وَلَئِن صَبَرْتُمْ لَهُوَ خَيْرٌ لِّلصَّابِرِينَ ۝١٢٦
📖 ಅನುವಾದ ಆಯತ್ 126
ನೀವು ಪ್ರತಿಕಾರ ಕೈಗೊಳ್ಳುವುದಾದರೆ ನಿಮಗೆ ಎಷ್ಟು ಪ್ರಹಾರ ಬಿದ್ದಿದೆಯೋ ಅಷ್ಟು ಮಾತ್ರವೇ ಪ್ರತಿಕಾರಪಡೆಯಿರಿ. ಇನ್ನು ನೀವು ಸಹನೆ ವಹಿಸುವುದಾದರೆ ನಿಸ್ಸಂಶಯವಾಗಿಯು ಸಹನಾಶೀಲರಿಗೆ ಇದು ಅತ್ಯುತ್ತಮವಾಗಿದೆ.
وَاصْبِرْ وَمَا صَبْرُكَ إِلَّا بِاللَّهِ ۚ وَلَا تَحْزَنْ عَلَيْهِمْ وَلَا تَكُ فِي ضَيْقٍ مِّمَّا يَمْكُرُونَ ۝١٢٧
📖 ಅನುವಾದ ಆಯತ್ 127
ನೀವು ಸಹನೆ ವಹಿಸಿರಿ. ನಿಮ್ಮ ಸಹನೆಯು ಅಲ್ಲಾಹನ ಪುಷ್ಠಿಯಿಂದಲೇ ಸಾಧ್ಯ ಮತ್ತು ಅವರ ಕುರಿತು ದುಃಖಿತರಾಗಬೇಡಿರಿ ಹಾಗೂ ಸತ್ಯನಿಷೇಧಿಗಳು ನಡೆಸುತ್ತಿರುವ ಕುತಂತ್ರಗಳ ಬಗ್ಗೆ ನೀವು ಸಂಕಟಕ್ಕೊಳಗಾಗದಿರಿ.
إِنَّ اللَّهَ مَعَ الَّذِينَ اتَّقَوا وَّالَّذِينَ هُم مُّحْسِنُونَ ۝١٢٨
📖 ಅನುವಾದ ಆಯತ್ 128
ನಿಶ್ಚಯವಾಗಿಯು ಅಲ್ಲಾಹನು ಭಯ ಭಕ್ತಿಯುಳ್ಳವರ ಮತ್ತು ಒಳಿತನ ಪಾಲಕರ ಜೊತೆಯಲ್ಲಿದ್ದಾನೆ.
← 15 ಅನ್-ನಹ್ಲ್ (16/114) 17 →
ಓದಿ ಸೂರಾ ಅನ್-ನಹ್ಲ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

16النحل An-Nahl 📚 128 ಆಯತ್ مكية

ಆಯತ್‌ವಾರು – ಸೂರಾ ಅನ್-ನಹ್ಲ್ — 128 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers