ಆಲ್-ಇಮ್ರಾನ್ · 153/200
ಅನುವಾದ ಉಚ್ಚಾರಣೆ — ಸೂರಾ ಆಲ್-ಇಮ್ರಾನ್
۞ إِذْ تُصْعِدُونَ وَلَا تَلْوُونَ عَلَىٰ أَحَدٍ وَالرَّسُولُ يَدْعُوكُمْ فِي أُخْرَاكُمْ فَأَثَابَكُمْ غَمًّا بِغَمٍّ لِّكَيْلَا تَحْزَنُوا عَلَىٰ مَا فَاتَكُمْ وَلَا مَا أَصَابَكُمْ ۗ وَاللَّهُ خَبِيرٌ بِمَا تَعْمَلُونَ ۝١٥٣
Iz tus`idoona wa laa talwoona `alaaa ahadinw war Rasoolu yad`ookum feee ukhraakum fa asaabakum ghammam bighammil likailaa tahzanoo `alaa maa faatakum wa laa maaa asaabakum; wallaahu khabeerum bimaa ta`maloon
📖 ಕನ್ನಡ ಅರ್ಥ
ನೀವು ಯಾರನ್ನು ತಿರುಗಿಯು ನೋಡದೇ (ರಣರಂಗದಿAದ) ಪಲಾಯನ ಗೈಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು ಸಂದೇಶವಾಹಕರು ನಿಮ್ಮನ್ನು ಹಿಂದಿನಿAದ ಕರೆಯುತ್ತಿದ್ದರು. ಅಲ್ಲಾಹನು ನಿಮಗೆ ದುಃಖದ ಮೇಲೆ ದುಃಖವನ್ನು ನೀಡಿದನು. ಇದೇಕೆಂದರೆ (ಮುಂದೆ ನಿಮಗೊಂದು ಪಾಠವಾಗಲೆಂದು) ನೀವು ನಷ್ಟ ಹೊಂದಿದ ವಸ್ತುವಿನ ಕುರಿತಾಗಲೀ ನಿಮಗೆ ಬಾಧಿಸಿದ ಆಪತ್ತಿನ ಕುರಿತಾಗಲೀ ದುಃಖಿಸದಿರಲೆಂದಾಗಿದೆ. ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಸೂಕ್ಷö್ಮ ಜ್ಞಾನವುಳ್ಳವನಾಗಿದ್ದಾನೆ.

🎧 ಆಲಿಸಿ


📜 ಆಯತ್ 151-155 — ಸೂರಾ ಆಲ್-ಇಮ್ರಾನ್

151سَنُلْقِي فِي قُلُوبِ الَّذِينَ كَفَرُوا الرُّعْبَ بِمَا أَشْرَكُوا بِاللَّهِ مَا لَمْ يُنَزِّلْ بِهِ سُلْطَانًا ۖ وَمَأْوَاهُمُ النَّارُ ۚ وَبِئْسَ مَثْوَى الظَّالِمِينَ
ಸದ್ಯದಲ್ಲೇ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಇದು ಅವರು ಅಲ್ಲಾಹನೊಂದಿಗೆ ಅವನು ಯಾವ ಪುರಾವೆಯನ್ನೂ ಅವತೀರ್ಣಗೊಳಿಸದಿರುವ ವಸ್ತುಗಳನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿದುದರ ಫಲವಾಗಿದೆ. ಅವರ (ಅಂತಿಮ) ವಾಸಸ್ಥಳವು ನರಕವಾಗಿದೆ ಮತ್ತು ಆ ಅಕ್ರಮಿಗಳ ವಾಸಸ್ಥಳವು ಅದೆಷ್ಟು ನಿಕೃಷ್ಟವಾಗಿದೆ!
152وَلَقَدْ صَدَقَكُمُ اللَّهُ وَعْدَهُ إِذْ تَحُسُّونَهُم بِإِذْنِهِ ۖ حَتَّىٰ إِذَا فَشِلْتُمْ وَتَنَازَعْتُمْ فِي الْأَمْرِ وَعَصَيْتُم مِّن بَعْدِ مَا أَرَاكُم مَّا تُحِبُّونَ ۚ مِنكُم مَّن يُرِيدُ الدُّنْيَا وَمِنكُم مَّن يُرِيدُ الْآخِرَةَ ۚ ثُمَّ صَرَفَكُمْ عَنْهُمْ لِيَبْتَلِيَكُمْ ۖ وَلَقَدْ عَفَا عَنكُمْ ۗ وَاللَّهُ ذُو فَضْلٍ عَلَى الْمُؤْمِنِينَ
ಅಲ್ಲಾಹನು ನಿಮ್ಮೊಡನೆ ಮಾಡಿದ್ದ ತನ್ನ ವಾಗ್ದಾನವನ್ನು ಈಡೇರಿಸಿ ಕೊಟ್ಟಿರುವನು. ಆರಂಭದಲ್ಲಿ ಅಲ್ಲಾಹನ ಅಪ್ಪಣೆಯಿಂದ ನೀವು ಖುರೈಷರನ್ನು ವದಿಸುತ್ತಿದ್ದೀರಿ. ಅಲ್ಲಾಹನು ನೀವು ಆಶಿಸುತ್ತಿದ್ದ ವಿಜಯವನ್ನು ತೋರಿಸಿಕೊಟ್ಟನು ಬಳಿಕ ನೀವು ಪೈಗಂಬರರ ಆದೇಶವನ್ನು ಉಲ್ಲಂಘಿಸಿ ಯುದ್ಧದ ಆಯಕಟ್ಟಿನಲ್ಲಿ ಸ್ಥಿರವಾಗಿರುವ ವಿಷಯದಲ್ಲಿ ಅವಿಧೇಯತೆ ತೋರಿ ಜಗಳವಾಡತೊಡಗದಿರಿ. ಏಕೆಂದರೆ, ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಕೆಲವರ ಉದ್ದೇಶವು ಪರಲೋಕವಾಗಿತ್ತು. ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲೆಂದು ಅವರಿಂದ (ಖುರೈಷರಿಂದ) ಅಲಕ್ಷö್ಯಗೊಳಿಸಿದನು. ಆದರೂ ನಿಮ್ಮ ಪ್ರಮಾದವನ್ನು (ಯುದ್ಧದಿಂದ ಬೆನ್ನು ತೋರಿಸಿದ ಪಾಪವನ್ನು) ಖಂಡಿತವಾಗಿಯೂ ಕ್ಷಮಿಸಿರುತ್ತಾನೆ. ಅಲ್ಲಾಹನು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದರ್ಯವಂತನಾಗಿದ್ದಾನೆ.
153۞ إِذْ تُصْعِدُونَ وَلَا تَلْوُونَ عَلَىٰ أَحَدٍ وَالرَّسُولُ يَدْعُوكُمْ فِي أُخْرَاكُمْ فَأَثَابَكُمْ غَمًّا بِغَمٍّ لِّكَيْلَا تَحْزَنُوا عَلَىٰ مَا فَاتَكُمْ وَلَا مَا أَصَابَكُمْ ۗ وَاللَّهُ خَبِيرٌ بِمَا تَعْمَلُونَ
ನೀವು ಯಾರನ್ನು ತಿರುಗಿಯು ನೋಡದೇ (ರಣರಂಗದಿAದ) ಪಲಾಯನ ಗೈಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು ಸಂದೇಶವಾಹಕರು ನಿಮ್ಮನ್ನು ಹಿಂದಿನಿAದ ಕರೆಯುತ್ತಿದ್ದರು. ಅಲ್ಲಾಹನು ನಿಮಗೆ ದುಃಖದ ಮೇಲೆ ದುಃಖವನ್ನು ನೀಡಿದನು. ಇದೇಕೆಂದರೆ (ಮುಂದೆ ನಿಮಗೊಂದು ಪಾಠವಾಗಲೆಂದು) ನೀವು ನಷ್ಟ ಹೊಂದಿದ ವಸ್ತುವಿನ ಕುರಿತಾಗಲೀ ನಿಮಗೆ ಬಾಧಿಸಿದ ಆಪತ್ತಿನ ಕುರಿತಾಗಲೀ ದುಃಖಿಸದಿರಲೆಂದಾಗಿದೆ. ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಸೂಕ್ಷö್ಮ ಜ್ಞಾನವುಳ್ಳವನಾಗಿದ್ದಾನೆ.
154ثُمَّ أَنزَلَ عَلَيْكُم مِّن بَعْدِ الْغَمِّ أَمَنَةً نُّعَاسًا يَغْشَىٰ طَائِفَةً مِّنكُمْ ۖ وَطَائِفَةٌ قَدْ أَهَمَّتْهُمْ أَنفُسُهُمْ يَظُنُّونَ بِاللَّهِ غَيْرَ الْحَقِّ ظَنَّ الْجَاهِلِيَّةِ ۖ يَقُولُونَ هَل لَّنَا مِنَ الْأَمْرِ مِن شَيْءٍ ۗ قُلْ إِنَّ الْأَمْرَ كُلَّهُ لِلَّهِ ۗ يُخْفُونَ فِي أَنفُسِهِم مَّا لَا يُبْدُونَ لَكَ ۖ يَقُولُونَ لَوْ كَانَ لَنَا مِنَ الْأَمْرِ شَيْءٌ مَّا قُتِلْنَا هَاهُنَا ۗ قُل لَّوْ كُنتُمْ فِي بُيُوتِكُمْ لَبَرَزَ الَّذِينَ كُتِبَ عَلَيْهِمُ الْقَتْلُ إِلَىٰ مَضَاجِعِهِمْ ۖ وَلِيَبْتَلِيَ اللَّهُ مَا فِي صُدُورِكُمْ وَلِيُمَحِّصَ مَا فِي قُلُوبِكُمْ ۗ وَاللَّهُ عَلِيمٌ بِذَاتِ الصُّدُورِ
ತರುವಾಯ ಅವನು ಆ ದುಃಖದ ಬಳಿಕ ನಿಮ್ಮ ಮೇಲೆ ನಿರ್ಭಯತೆಯನ್ನು ಇಳಿಸಿದನು ಮತ್ತು ನಿಮ್ಮಲ್ಲಿ ಒಂದು ತಂಡಕ್ಕೆ ಸಮಾಧಾನದ ತೂಕಡಿಕೆಯು ಹತ್ತತೊಡಗಿತು. ಇನ್ನು ಕೆಲವರು ತಮ್ಮದೇ ಕುರಿತಾದ ಚಿಂತೆಯಲ್ಲಿ ಮುಳುಗಿದ್ದರು ಮತ್ತು ಅವರು ಅಲ್ಲಾಹನ ಕುರಿತು ಸತ್ಯಕ್ಕೆ ವಿರುದ್ಧವಾದ ಅಜ್ಞಾನಜನ್ಯ ತುಂಬಿದ ಸಂದೇಹಗಳನ್ನು ಮಾಡತೊಡಗಿದರು ಮತ್ತು ಹೇಳುತ್ತಿದ್ದರು: ನಮಗೆ ಯಾವುದಾದರು ವಿಷಯದಲ್ಲಿ ಅಧಿಕಾರವಿದೆಯೇ? ನೀವು ಹೇಳಿರಿ: ಸಕಲ ಕಾರ್ಯವೂ ಅಲ್ಲಾಹನ ಅಧಿಕಾರದಲ್ಲಿದೆ. ಇವರು ತಮ್ಮ ಮನಸ್ಸುಗಳಲ್ಲಿರುವ ರಹಸ್ಯವನ್ನು ನಿಮಗೆ ತಿಳಿಸುವುದಿಲ್ಲ ಮತ್ತು ಹೇಳುತ್ತಾರೆ: ನಮಗೇನಾದರೂ ಅಧಿಕಾರವಿರುತ್ತಿದ್ದರೆ ನಾವು ಇಲ್ಲಿ ಕೊಲ್ಲಲ್ಪಡುತ್ತಿರಲಿಲ್ಲ. ನೀವು ಹೇಳಿರಿ: ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಯಾರ ವಿಧಿಯಲ್ಲಿ ಕೊಲೆ ಯಾಗುವುದಿರುತ್ತದೆಯೋ ಅವರು ತಮ್ಮ ಮರಣಾ ಸ್ಥಳಕ್ಕೆ ಬರುತ್ತಿದ್ದರು. ಅಲ್ಲಾಹನಿಗೆ ನಿಮ್ಮ ಹೃದಯಗಳಲ್ಲಿ ಅಡಿಗಿರುವುದನ್ನು ಪರೀಕ್ಷಿಸಲಿಕ್ಕಿತ್ತು ಮತ್ತು ಹೃದಯಗಳಲ್ಲಿರುವ ವಿಚಾರಗಳನ್ನು ಶುದ್ಧೀಕರಿಸಲಿಕ್ಕಿತ್ತು ಮತ್ತು ಅಲ್ಲಾಹನು ಹೃದಯಗಳಲ್ಲಿರುವುದನ್ನು ತಿಳಿಯುವವನಗಿದ್ದಾನೆ.
155إِنَّ الَّذِينَ تَوَلَّوْا مِنكُمْ يَوْمَ الْتَقَى الْجَمْعَانِ إِنَّمَا اسْتَزَلَّهُمُ الشَّيْطَانُ بِبَعْضِ مَا كَسَبُوا ۖ وَلَقَدْ عَفَا اللَّهُ عَنْهُمْ ۗ إِنَّ اللَّهَ غَفُورٌ حَلِيمٌ
ಎರಡು ಸೈನ್ಯಗಳು ಕದನದಲ್ಲಿ ಎದುರು ಬದುರುಗೊಂಡ ದಿನ ನಿಮ್ಮಲ್ಲಿ ಬೆನ್ನು ತಿರುಗಿಸಿ ಓಡಿದವರಾರೋ ಅವರು ಮಾಡಿದ ಕೆಲವು ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ದಾರಿ ತಪ್ಪಿಸಿದನು. ಆದರೆ ಅಲ್ಲಾಹನು ಅವರನ್ನು ಕ್ಷಮಿಸಿದನು. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ವಿವೇಕವಂತನೂ ಆಗಿದ್ದಾನೆ.
ಆಲ್-ಇಮ್ರಾನ್ಕುರಾನ್ ಸೂಚಿ
200ಆಯತ್
MedinanRevelation
153ಆಯತ್

ಅನುವಾದ — ಆಲ್-ಇಮ್ರಾನ್ 153

ಸೂರಾ ಆಲ್-ಇಮ್ರಾನ್ ಆಯತ್ 153 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಯಾರನ್ನು ತಿರುಗಿಯು ನೋಡದೇ (ರಣರಂಗದಿAದ) ಪಲಾಯನ ಗೈಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ ಮತ್ತು…

ಸೂರಾ ಆಯತ್ 153/200 — ಸೂರಾ ಆಲ್-ಇಮ್ರಾನ್ آل عمران (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಆಲ್-ಇಮ್ರಾನ್ ಆಲಿಸಿ, ಸೂರಾ ಆಲ್-ಇಮ್ರಾನ್ ಅನುವಾದ, ಸೂರಾ ಆಲ್-ಇಮ್ರಾನ್ mp3, ಸೂರಾ ಆಲ್-ಇಮ್ರಾನ್ pdf. ಆಯತ್ 151–155. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers