ಅಲ್-ಹಶ್ರ್ · 11/24
ಅನುವಾದ ಉಚ್ಚಾರಣೆ — ಸೂರಾ ಅಲ್-ಹಶ್ರ್
۞ أَلَمْ تَرَ إِلَى الَّذِينَ نَافَقُوا يَقُولُونَ لِإِخْوَانِهِمُ الَّذِينَ كَفَرُوا مِنْ أَهْلِ الْكِتَابِ لَئِنْ أُخْرِجْتُمْ لَنَخْرُجَنَّ مَعَكُمْ وَلَا نُطِيعُ فِيكُمْ أَحَدًا أَبَدًا وَإِن قُوتِلْتُمْ لَنَنصُرَنَّكُمْ وَاللَّهُ يَشْهَدُ إِنَّهُمْ لَكَاذِبُونَ ۝١١
Alam tara ilal lazeena naafaqoo yaqooloona li ikhwaanihimul lazeena kafaroo min ahlil kitaabi la`in ukhrijtum lanakhrujanna ma`akum wa laa nutee`u feekum ahadan abadanw-wa in qootiltum lanansuran nakum wallaahu yashhadu innahum lakaaziboon
📖 ಕನ್ನಡ ಅರ್ಥ
(ಓ ಪೈಗಂಬರರೇ) ನೀವು ಕಪಟ ವಿಶ್ವಾಸಿಗಳನ್ನು ನೋಡಲಿಲ್ಲವೇ ? ಅವರು ಗ್ರಂಥದವರಾದ ತಮ್ಮ ಸತ್ಯನಿಷೇಧಿ ಸಹೋದರರಿಗೆ ಹೇಳುತ್ತಾರೆ; ನೀವು ಗಡಿಪಾರುಗೊಳಿಸಲ್ಪಟ್ಟರೆ ಖಂಡಿತ ನಾವು ಸಹ ನಿಮ್ಮೊಂದಿಗೆ ಹೊರಡುತ್ತೇವೆ ಹಾಗೂ ನಿಮ್ಮ ವಿಚಾರದಲ್ಲಿ ಎಂದಿಗೂ ಯಾರನ್ನು ಅನುಸರಿಸಲಾರೆವು ಇನ್ನು ನಿಮ್ಮೊಂದಿಗೆ ಯುದ್ಧ ಮಾಡಲಾದರೆ ಖಂಡಿತ ನಾವು ನಿಮಗೆ ಸಹಾಯಮಾಡುತ್ತೇವೆ, ಆದರೆ ಇವರು ನಿಜವಾಗಿಯೂ ಸುಳ್ಳುಗಾರರಾಗಿದ್ದಾರೆಂದು ಅಲ್ಲಾಹನು ಸಾಕ್ಷö್ಯವಹಿಸುತ್ತಾನೆ.

🎧 ಆಲಿಸಿ


📜 ಆಯತ್ 9-13 — ಸೂರಾ ಅಲ್-ಹಶ್ರ್

9وَالَّذِينَ تَبَوَّءُوا الدَّارَ وَالْإِيمَانَ مِن قَبْلِهِمْ يُحِبُّونَ مَنْ هَاجَرَ إِلَيْهِمْ وَلَا يَجِدُونَ فِي صُدُورِهِمْ حَاجَةً مِّمَّا أُوتُوا وَيُؤْثِرُونَ عَلَىٰ أَنفُسِهِمْ وَلَوْ كَانَ بِهِمْ خَصَاصَةٌ ۚ وَمَن يُوقَ شُحَّ نَفْسِهِ فَأُولَٰئِكَ هُمُ الْمُفْلِحُونَ
ಮತ್ತು ಆ ಸೊತ್ತು ಮುಹಾಜಿರ್‌ಗಳ ಆಗಮನಕ್ಕೆ ಮುಂಚೆ ಸತ್ಯವಿಶ್ವಾಸ ಸ್ವೀಕರಿಸಿ ಮದೀನಾದಲ್ಲಿ ವಾಸವಾಗಿದ್ದವರಿಗೂ ಇದೆ. ಅವರು ತಮ್ಮೆಡೆಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ ಹಾಗೂ ಮುಹಾಜಿರ್‌ಗಳಿಗೆ ನೀಡಲಾದ ಧನದ ಕುರಿತು ಅವರು ತಮ್ಮ ಹೃದಯಗಳಲ್ಲಿ ಯಾವ ಪ್ರಯಾಸವನ್ನು ಕಾಣುವುದಿಲ್ಲ ಮತ್ತು ಸ್ವತಃ ತಮಗೆ ಅಗತ್ಯವಿದ್ದರೂ ತಮ್ಮ ಮೇಲೆ ಇತರರಿಗೆ ಆದ್ಯತೆ ನೀಡುತ್ತಾರೆ (ವಸ್ತುತಃ) ಯಾರು ತನ್ನಲ್ಲಿನ ಲೋಭತನದಿಂದ ರಕ್ಷಿಸಲ್ಪಡುತ್ತಾರೋ ಅವರೇ ವಿಜಯಿಗಳು.
10وَالَّذِينَ جَاءُوا مِن بَعْدِهِمْ يَقُولُونَ رَبَّنَا اغْفِرْ لَنَا وَلِإِخْوَانِنَا الَّذِينَ سَبَقُونَا بِالْإِيمَانِ وَلَا تَجْعَلْ فِي قُلُوبِنَا غِلًّا لِّلَّذِينَ آمَنُوا رَبَّنَا إِنَّكَ رَءُوفٌ رَّحِيمٌ
ಮತ್ತು ಆ ಸೊತ್ತು ಅವರ ನಂತರ ಬಂದವರಿಗೂ ಆಗಿದೆ, ಅವರು ಹೀಗೆ ಪ್ರಾರ್ಥಿಸುತ್ತಾರೆ, ಓ ನಮ್ಮ ಪ್ರಭುವೇ ನಮ್ಮನ್ನು ಮತ್ತು ನಮಗಿಂತ ಮೊದಲು ಸತ್ಯವಿಶ್ವಾಸ ಸ್ವೀಕರಿಸಿದ ಆ ನಮ್ಮ ಸಹೋದರರನ್ನು ಕ್ಷಮಿಸಿಬಿಡು ಹಾಗೂ ನಮ್ಮ ಹೃದಯಗಳಲ್ಲಿ ಸತ್ಯ ವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನು ಇರಿಸದಿರು, ಓ ನಮ್ಮ ಪ್ರಭುವೇ ನಿಸ್ಸಂಶಯವಾಗಿಯೂ ನೀನು ಕೃಪಾಳು, ಕರುಣಾನಿಧಿಯು ಆಗಿರುವೆ.
11۞ أَلَمْ تَرَ إِلَى الَّذِينَ نَافَقُوا يَقُولُونَ لِإِخْوَانِهِمُ الَّذِينَ كَفَرُوا مِنْ أَهْلِ الْكِتَابِ لَئِنْ أُخْرِجْتُمْ لَنَخْرُجَنَّ مَعَكُمْ وَلَا نُطِيعُ فِيكُمْ أَحَدًا أَبَدًا وَإِن قُوتِلْتُمْ لَنَنصُرَنَّكُمْ وَاللَّهُ يَشْهَدُ إِنَّهُمْ لَكَاذِبُونَ
(ಓ ಪೈಗಂಬರರೇ) ನೀವು ಕಪಟ ವಿಶ್ವಾಸಿಗಳನ್ನು ನೋಡಲಿಲ್ಲವೇ ? ಅವರು ಗ್ರಂಥದವರಾದ ತಮ್ಮ ಸತ್ಯನಿಷೇಧಿ ಸಹೋದರರಿಗೆ ಹೇಳುತ್ತಾರೆ; ನೀವು ಗಡಿಪಾರುಗೊಳಿಸಲ್ಪಟ್ಟರೆ ಖಂಡಿತ ನಾವು ಸಹ ನಿಮ್ಮೊಂದಿಗೆ ಹೊರಡುತ್ತೇವೆ ಹಾಗೂ ನಿಮ್ಮ ವಿಚಾರದಲ್ಲಿ ಎಂದಿಗೂ ಯಾರನ್ನು ಅನುಸರಿಸಲಾರೆವು ಇನ್ನು ನಿಮ್ಮೊಂದಿಗೆ ಯುದ್ಧ ಮಾಡಲಾದರೆ ಖಂಡಿತ ನಾವು ನಿಮಗೆ ಸಹಾಯಮಾಡುತ್ತೇವೆ, ಆದರೆ ಇವರು ನಿಜವಾಗಿಯೂ ಸುಳ್ಳುಗಾರರಾಗಿದ್ದಾರೆಂದು ಅಲ್ಲಾಹನು ಸಾಕ್ಷö್ಯವಹಿಸುತ್ತಾನೆ.
12لَئِنْ أُخْرِجُوا لَا يَخْرُجُونَ مَعَهُمْ وَلَئِن قُوتِلُوا لَا يَنصُرُونَهُمْ وَلَئِن نَّصَرُوهُمْ لَيُوَلُّنَّ الْأَدْبَارَ ثُمَّ لَا يُنصَرُونَ
ಅವರೇನಾದರೂ ಗಡಿಪಾರುಗೊಳಿಸಲ್ಪಟ್ಟರೆ ಇವರು ಅವರೊಂದಿಗೆ ಹೊರಡಲಾರರು ಮತ್ತು ಅವರೊಂದಿಗೆ ಯುದ್ಧ ಮಾಡಲಾರದೆ ಇವರು ಅವರಿಗೆ ಸಹಾಯವನ್ನೂ ಮಾಡಲಾರರು ಮತ್ತು ಇವರು ಅವರಿಗೆ ಸಹಾಯ ಮಾಡಲು ಮುಂದೆ ಬಂದರೂ ಖಂಡಿತ ಬೆನ್ನು ತಿರುಗಿಸಿ ಓಡುವರು ಬಳಿಕ ಅವರಿಗೆ ಯಾವ ಸಹಾಯವೂ ದೊರಕಲಾರದು.
13لَأَنتُمْ أَشَدُّ رَهْبَةً فِي صُدُورِهِم مِّنَ اللَّهِ ۚ ذَٰلِكَ بِأَنَّهُمْ قَوْمٌ لَّا يَفْقَهُونَ
( ಓ ಸತ್ಯ ವಿಶ್ವಾಸಿಗಳೇ) ಅವರ ಹೃದಯಗಳಲ್ಲಿ ಅಲ್ಲಾಹನ ಭಯಕ್ಕಿಂತಲೂ ನಿಮ್ಮ ಭಯವಿದೆ. ಇದೇಕೆಂದರೆ ಅವರು ಅವಿವೇಕಿಗಳಾಗಿದ್ದಾರೆ.
ಅಲ್-ಹಶ್ರ್ಕುರಾನ್ ಸೂಚಿ
24ಆಯತ್
MedinanRevelation
11ಆಯತ್

ಅನುವಾದ — ಅಲ್-ಹಶ್ರ್ 11

ಸೂರಾ ಅಲ್-ಹಶ್ರ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ನೀವು ಕಪಟ ವಿಶ್ವಾಸಿಗಳನ್ನು ನೋಡಲಿಲ್ಲವೇ ? ಅವರು ಗ್ರಂಥದವರಾದ ತಮ್ಮ…

ಸೂರಾ ಆಯತ್ 11/24 — ಸೂರಾ ಅಲ್-ಹಶ್ರ್ الحشر (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಶ್ರ್ ಆಲಿಸಿ, ಸೂರಾ ಅಲ್-ಹಶ್ರ್ ಅನುವಾದ, ಸೂರಾ ಅಲ್-ಹಶ್ರ್ mp3, ಸೂರಾ ಅಲ್-ಹಶ್ರ್ pdf. ಆಯತ್ 9–13. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers