ಅಲ್-ಬಕರಾ · 258/286
ಅನುವಾದ ಉಚ್ಚಾರಣೆ — ಸೂರಾ ಅಲ್-ಬಕರಾ
أَلَمْ تَرَ إِلَى الَّذِي حَاجَّ إِبْرَاهِيمَ فِي رَبِّهِ أَنْ آتَاهُ اللَّهُ الْمُلْكَ إِذْ قَالَ إِبْرَاهِيمُ رَبِّيَ الَّذِي يُحْيِي وَيُمِيتُ قَالَ أَنَا أُحْيِي وَأُمِيتُ ۖ قَالَ إِبْرَاهِيمُ فَإِنَّ اللَّهَ يَأْتِي بِالشَّمْسِ مِنَ الْمَشْرِقِ فَأْتِ بِهَا مِنَ الْمَغْرِبِ فَبُهِتَ الَّذِي كَفَرَ ۗ وَاللَّهُ لَا يَهْدِي الْقَوْمَ الظَّالِمِينَ ۝٢٥٨
Alam tara ilal lazee Haaajja Ibraaheema fee Rabbiheee an aataahullaahul mulka iz qaala Ibraaheemu Rabbiyal lazee yuhyee wa yumeetu qaala ana uhyee wa yumeetu qaala ana uhyee wa umeetu qaala Ibraaheemu fa innal laaha yaatee bishshamsi minal mashriqi faati bihaa minal maghribi fabuhital lazee kafar; wallaahu laa yahdil qawmaz zaalimeen
📖 ಕನ್ನಡ ಅರ್ಥ
ಅಲ್ಲಾಹನು ಅಧಿಪತ್ಯ ನೀಡಿದ ಕಾರಣದಿಂದ (ಪೈಗಂಬರ್) ಇಬ್ರಾಹೀಮ ರೊಂದಿಗೆ ಅವರ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸಿದವನ ಕಡೆಗೆ ನೀವು ನೋಡಲಿಲ್ಲವೇ? ನನ್ನ ಪ್ರಭು ಜೀವ ಮತ್ತು ಮರಣ ನೀಡುವವನಾಗಿರುವನು ಎಂದು ಇಬ್ರಾಹೀಮ್(ಅ) ಹೇಳಿದಾಗ ನಾನೂ ಜೀವ ಮತ್ತು ಮರಣವನ್ನು ಕೊಡುತ್ತೇನೆ ಎಂದು ಅವನು ಹೇಳಿದನು. ಆಗ (ಪೈಗಂಬರ್) ಇಬ್ರಾಹೀಮ್ ಹೇಳಿದರು; ಅಲ್ಲಾಹನು ಪೂರ್ವದಿಂದ ಸೂರ್ಯನನ್ನು ತರುತ್ತಾನೆ. ನೀನದನ್ನು ಪಶ್ಚಿಮದಿಂದ ತಾ. ಆಗ ಆ ಸತ್ಯನಿಷೇಧಿ ದಿಗ್ಭçಮೆಗೊಂಡನು ಮತ್ತು ಅಲ್ಲ್ಲಾಹನು ಅಕ್ರಮಿ ಜನರಿಗೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.

🎧 ಆಲಿಸಿ


📜 ಆಯತ್ 256-260 — ಸೂರಾ ಅಲ್-ಬಕರಾ

256لَا إِكْرَاهَ فِي الدِّينِ ۖ قَد تَّبَيَّنَ الرُّشْدُ مِنَ الْغَيِّ ۚ فَمَن يَكْفُرْ بِالطَّاغُوتِ وَيُؤْمِن بِاللَّهِ فَقَدِ اسْتَمْسَكَ بِالْعُرْوَةِ الْوُثْقَىٰ لَا انفِصَامَ لَهَا ۗ وَاللَّهُ سَمِيعٌ عَلِيمٌ
ಧರ್ಮ ಸ್ವೀಕಾರದ ವಿಷಯದಲ್ಲಿ ಯಾವುದೇ ಬಲವಂತವಿಲ್ಲ. ಸನ್ಮಾರ್ಗವೂ ದುರ್ಮಾರ್ಗದಿಂದ ಪೂರ್ಣ ಬೇರ್ಪಟ್ಟು ಪ್ರತ್ಯೇಕವಾಗಿದೆ. ಆದ್ದರಿಂದ ಯಾರು ಮಿಥ್ಯಾರಾಧ್ಯರನ್ನು ತಿರಸ್ಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ ಅವನು ಎಂದಿಗೂ ಮುರಿಯದ ಸದೃಢ ಆಶ್ರಯವನ್ನು ಅವಲಂಬಿಸಿದನು. ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
257اللَّهُ وَلِيُّ الَّذِينَ آمَنُوا يُخْرِجُهُم مِّنَ الظُّلُمَاتِ إِلَى النُّورِ ۖ وَالَّذِينَ كَفَرُوا أَوْلِيَاؤُهُمُ الطَّاغُوتُ يُخْرِجُونَهُم مِّنَ النُّورِ إِلَى الظُّلُمَاتِ ۗ أُولَٰئِكَ أَصْحَابُ النَّارِ ۖ هُمْ فِيهَا خَالِدُونَ
ಸತ್ಯವಿಶ್ವಾಸಿಗಳ ರಕ್ಷಕ ಮಿತ್ರನು ಅಲ್ಲಾಹನಾಗಿದ್ದಾನೆ. ಅವನು ಅವರನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರುತ್ತಾನೆ. ಮತ್ತು ಸತ್ಯ ನಿಷೇಧಿಗಳ ಮಿತ್ರರು ಮಿಥ್ಯಾರಾಧ್ಯರಾಗಿದ್ದಾರೆ. ಅವರು ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕೊಂಡೊಯ್ಯುತ್ತಾರೆ. ಅವರು ನರಕವಾಸಿಗಳು. ಅವರು ಅದರಲ್ಲಿ ಶಾಶ್ವತರಾಗಿರುವರು.
258أَلَمْ تَرَ إِلَى الَّذِي حَاجَّ إِبْرَاهِيمَ فِي رَبِّهِ أَنْ آتَاهُ اللَّهُ الْمُلْكَ إِذْ قَالَ إِبْرَاهِيمُ رَبِّيَ الَّذِي يُحْيِي وَيُمِيتُ قَالَ أَنَا أُحْيِي وَأُمِيتُ ۖ قَالَ إِبْرَاهِيمُ فَإِنَّ اللَّهَ يَأْتِي بِالشَّمْسِ مِنَ الْمَشْرِقِ فَأْتِ بِهَا مِنَ الْمَغْرِبِ فَبُهِتَ الَّذِي كَفَرَ ۗ وَاللَّهُ لَا يَهْدِي الْقَوْمَ الظَّالِمِينَ
ಅಲ್ಲಾಹನು ಅಧಿಪತ್ಯ ನೀಡಿದ ಕಾರಣದಿಂದ (ಪೈಗಂಬರ್) ಇಬ್ರಾಹೀಮ ರೊಂದಿಗೆ ಅವರ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸಿದವನ ಕಡೆಗೆ ನೀವು ನೋಡಲಿಲ್ಲವೇ? ನನ್ನ ಪ್ರಭು ಜೀವ ಮತ್ತು ಮರಣ ನೀಡುವವನಾಗಿರುವನು ಎಂದು ಇಬ್ರಾಹೀಮ್(ಅ) ಹೇಳಿದಾಗ ನಾನೂ ಜೀವ ಮತ್ತು ಮರಣವನ್ನು ಕೊಡುತ್ತೇನೆ ಎಂದು ಅವನು ಹೇಳಿದನು. ಆಗ (ಪೈಗಂಬರ್) ಇಬ್ರಾಹೀಮ್ ಹೇಳಿದರು; ಅಲ್ಲಾಹನು ಪೂರ್ವದಿಂದ ಸೂರ್ಯನನ್ನು ತರುತ್ತಾನೆ. ನೀನದನ್ನು ಪಶ್ಚಿಮದಿಂದ ತಾ. ಆಗ ಆ ಸತ್ಯನಿಷೇಧಿ ದಿಗ್ಭçಮೆಗೊಂಡನು ಮತ್ತು ಅಲ್ಲ್ಲಾಹನು ಅಕ್ರಮಿ ಜನರಿಗೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.
259أَوْ كَالَّذِي مَرَّ عَلَىٰ قَرْيَةٍ وَهِيَ خَاوِيَةٌ عَلَىٰ عُرُوشِهَا قَالَ أَنَّىٰ يُحْيِي هَٰذِهِ اللَّهُ بَعْدَ مَوْتِهَا ۖ فَأَمَاتَهُ اللَّهُ مِائَةَ عَامٍ ثُمَّ بَعَثَهُ ۖ قَالَ كَمْ لَبِثْتَ ۖ قَالَ لَبِثْتُ يَوْمًا أَوْ بَعْضَ يَوْمٍ ۖ قَالَ بَل لَّبِثْتَ مِائَةَ عَامٍ فَانظُرْ إِلَىٰ طَعَامِكَ وَشَرَابِكَ لَمْ يَتَسَنَّهْ ۖ وَانظُرْ إِلَىٰ حِمَارِكَ وَلِنَجْعَلَكَ آيَةً لِّلنَّاسِ ۖ وَانظُرْ إِلَى الْعِظَامِ كَيْفَ نُنشِزُهَا ثُمَّ نَكْسُوهَا لَحْمًا ۚ فَلَمَّا تَبَيَّنَ لَهُ قَالَ أَعْلَمُ أَنَّ اللَّهَ عَلَىٰ كُلِّ شَيْءٍ قَدِيرٌ
ಅಥವಾ ಛಾವಣಿಗಳೊಂದಿಗೆ ಕುಸಿದು ಬಿದ್ದಿದ್ದಂತಹ ನಾಡೊಂದನ್ನು ಹಾದು ಹೋಗುತ್ತಿದ್ದ ವ್ಯಕ್ತಿಯ ದೃಷ್ಟಾಂತವನ್ನು ನೀವು ನೋಡಲಿಲ್ಲವೇ? ಅವನು ಹೇಳಿದನು. ಇದರ ನಿರ್ಜೀವಾವಸ್ಥೆಯ ಬಳಿಕ ಅಲ್ಲಾಹನು ಇದನ್ನು ಹೇಗೆ ಜೀವಂತಗೊಳಿಸುವನು? ಆಗ ಅವನನ್ನು ಅಲ್ಲಾಹನು ನೂರು ವರ್ಷಗಳವರೆಗೆ ಮರಣಗೊಳಿಸಿದನು. ಅನಂತರ ಅವನನ್ನು ಎಬ್ಬಿಸಿ ಕೇಳಿದನು; ನಿನ್ನ ಮೇಲೆ ಎಷ್ಟು ಕಾಲ ಸರಿದಿದೆ? ಒಂದು ದಿನ ಅಥವಾ ದಿನದ ಸ್ವಲ್ಪ ಸಮಯ ಎಂದನು. ಅಲ್ಲಾಹನು ಹೇಳಿದನು; ಹಾಗಲ್ಲ! ವಸ್ತುತಃ ನೀನು ನೂರು ವರ್ಷಗಳ ಕಾಲ ಈ ಸ್ಥಿತಿಯಲಿದ್ದೆ ಇನ್ನು ನೀನು ನಿನ್ನ ಆಹಾರ ಪಾನೀಯದೆಡೆಗೆ ನೋಡು. ಒಂದಿಷ್ಟೂ ಹಾಳಾಗಿರುವುದಿಲ್ಲ. ಮತ್ತು ನಿನ್ನ ಕತ್ತೆಯೆಡೆಗೂ ನೋಡು(ಅದರ ಅಸ್ಥಿಪಂಜರವೂ ಶಿಥಿಲವಾಗಿ ಹೋಗಿದೆ). ನಾವು ನಿನ್ನನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡುತ್ತೇವೆ. ನೀನು ಎಲುಬುಗಳೆಡೆಗೆ ನೋಡು ನಾವು ಅವುಗಳನ್ನು ಹೇಗೆ ಸೃಷ್ಟಿಸುತ್ತೇವೆ ಅನಂತರ ಅವುಗಳಿಗೆ ಮಾಂಸವನ್ನು ಹೊದಿಸುತ್ತೇವೆಂದು. ಹಾಗೇಯೇ, ಅವನಿಗೆ ಎಲ್ಲವೂ ಸ್ಪಷ್ಟವಾದಾಗ ನಿಸ್ಸಂಶಯವಾಗಿಯು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನೆಂದು ನಾನು ಖಂಡಿತವಾಗಿ ಅರಿತಿದ್ದೇನೆ ಎಂದು ಹೇಳಿದನು.
260وَإِذْ قَالَ إِبْرَاهِيمُ رَبِّ أَرِنِي كَيْفَ تُحْيِي الْمَوْتَىٰ ۖ قَالَ أَوَلَمْ تُؤْمِن ۖ قَالَ بَلَىٰ وَلَٰكِن لِّيَطْمَئِنَّ قَلْبِي ۖ قَالَ فَخُذْ أَرْبَعَةً مِّنَ الطَّيْرِ فَصُرْهُنَّ إِلَيْكَ ثُمَّ اجْعَلْ عَلَىٰ كُلِّ جَبَلٍ مِّنْهُنَّ جُزْءًا ثُمَّ ادْعُهُنَّ يَأْتِينَكَ سَعْيًا ۚ وَاعْلَمْ أَنَّ اللَّهَ عَزِيزٌ حَكِيمٌ
(ಇಬ್ರಾಹೀಮ್(ಅ)) ಓ ನನ್ನ ಪ್ರಭು ನೀನು ಮೃತರನ್ನು ಹೇಗೆ ಜೀವಂತಗೊಳಿಸುವೆAಬುದನ್ನು ನನಗೆ ತೋರಿಸಿಕೊಡು ಎಂದು ನಿವೇದಿಸಿದರು. ಅವನು (ಅಲ್ಲಾಹ್)ಹೇಳಿದನು; ನಿನಗೆ ನಂಬಿಕೆಯಿಲ್ಲವೇ? ಅವರು ಹೇಳಿದರು; ಏಕಿಲ್ಲ ಆದರೆ ಇದು ನನ್ನ ಮನಸ್ಸಿಗೆ ಸಮಾಧಾನವಾಗಲೆಂದಾಗಿದೆ. ಅವನು (ಅಲ್ಲಾಹ್) ಹೇಳಿದನು; ನೀನು ನಾಲ್ಕು ಪಕ್ಷಿಗಳನ್ನು ಹಿಡಿದು ಅವುಗಳನ್ನು ಪಳಗಿಸಿ ನಂತರ ತುಂಡರಿಸಿ ಒಂದೊAದು ಭಾಗವನ್ನು ಪ್ರತಿಯೊಂದು ಬೆಟ್ಟದ ಮೇಲಿಡು. ಅನಂತರ ನೀನು ಅವುಗಳನ್ನು ಕೂಗಿ ಕರೆ. ಅವು ಧಾವಿಸುತ್ತಾ ನಿನ್ನೆಡೆಗೆ ಬರುವುವು ಮತ್ತು ನಿಶ್ಚಯವಾಗಿಯು ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆಂಬುದನ್ನು ತಿಳಿದುಕೊಳ್ಳಿರಿ.
ಅಲ್-ಬಕರಾಕುರಾನ್ ಸೂಚಿ
286ಆಯತ್
MedinanRevelation
258ಆಯತ್

ಅನುವಾದ — ಅಲ್-ಬಕರಾ 258

ಸೂರಾ ಅಲ್-ಬಕರಾ ಆಯತ್ 258 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಅಧಿಪತ್ಯ ನೀಡಿದ ಕಾರಣದಿಂದ (ಪೈಗಂಬರ್) ಇಬ್ರಾಹೀಮ ರೊಂದಿಗೆ ಅವರ ಪ್ರಭುವಿನ ವಿಚಾರದಲ್ಲಿ…

ಸೂರಾ ಆಯತ್ 258/286 — ಸೂರಾ ಅಲ್-ಬಕರಾ البقرة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಕರಾ ಆಲಿಸಿ, ಸೂರಾ ಅಲ್-ಬಕರಾ ಅನುವಾದ, ಸೂರಾ ಅಲ್-ಬಕರಾ mp3, ಸೂರಾ ಅಲ್-ಬಕರಾ pdf. ಆಯತ್ 256–260. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers