ಅಲ್-ಮಾಇದಾ · 43/120
ಅನುವಾದ ಉಚ್ಚಾರಣೆ — ಸೂರಾ ಅಲ್-ಮಾಇದಾ
وَكَيْفَ يُحَكِّمُونَكَ وَعِندَهُمُ التَّوْرَاةُ فِيهَا حُكْمُ اللَّهِ ثُمَّ يَتَوَلَّوْنَ مِن بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ ۝٤٣
Wa kaifa yuhakkimoonaka wa `indahumut Tawraatu feehaa hukmul laahi summa yatawallawna mim ba`di zaalik; wa maaa ulaaa`ika bilmu`mineen
📖 ಕನ್ನಡ ಅರ್ಥ
ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು ವಿಮುಖರಾಗುತ್ತಿರುವಾಗ ಅವರು ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಲ್ಲ.

🎧 ಆಲಿಸಿ


📜 ಆಯತ್ 41-45 — ಸೂರಾ ಅಲ್-ಮಾಇದಾ

41۞ يَا أَيُّهَا الرَّسُولُ لَا يَحْزُنكَ الَّذِينَ يُسَارِعُونَ فِي الْكُفْرِ مِنَ الَّذِينَ قَالُوا آمَنَّا بِأَفْوَاهِهِمْ وَلَمْ تُؤْمِن قُلُوبُهُمْ ۛ وَمِنَ الَّذِينَ هَادُوا ۛ سَمَّاعُونَ لِلْكَذِبِ سَمَّاعُونَ لِقَوْمٍ آخَرِينَ لَمْ يَأْتُوكَ ۖ يُحَرِّفُونَ الْكَلِمَ مِن بَعْدِ مَوَاضِعِهِ ۖ يَقُولُونَ إِنْ أُوتِيتُمْ هَٰذَا فَخُذُوهُ وَإِن لَّمْ تُؤْتَوْهُ فَاحْذَرُوا ۚ وَمَن يُرِدِ اللَّهُ فِتْنَتَهُ فَلَن تَمْلِكَ لَهُ مِنَ اللَّهِ شَيْئًا ۚ أُولَٰئِكَ الَّذِينَ لَمْ يُرِدِ اللَّهُ أَن يُطَهِّرَ قُلُوبَهُمْ ۚ لَهُمْ فِي الدُّنْيَا خِزْيٌ ۖ وَلَهُمْ فِي الْآخِرَةِ عَذَابٌ عَظِيمٌ
ಓ ಸಂದೇಶವಾಹಕರೇ, ನಾವು ಸತ್ಯವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಕಪಟವಿಶ್ವಾಸಿಗಳ ಪೈಕಿ ಮತ್ತು ಯಹೂದರ ಪೈಕಿ ಸತ್ಯನಿಷೇಧದೆಡೆಗೆ ಧಾವಿಸುತ್ತಿರುವವರ ಅವಸ್ಥೆಯು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಕೆಲವರು ಹೀಗಿರುತ್ತಾರೆ ಅವರು ಸುಳ್ಳು ವದಂತಿಗಳನ್ನು ಆಲಿಸುವವರೂ, ಮತ್ತು ನಿಮ್ಮ ಬಳಿಗೆ ಇದುವರೆಗೂ ಬರದಂತಹ ಜನರ ಗೂಢಾಚಾರರೂ ಆಗಿದ್ದಾರೆ. ಅವರು ಗ್ರಂಥ ವಾಕ್ಯಗಳನ್ನು ಅವುಗಳ ನೈಜ ಸ್ಥಾನದಿಂದ ಬದಲಿಸುತ್ತಾರೆ. ಮತ್ತು ಹೇಳುತ್ತಾರೆ (ಪೈಗಂಬರರ ಬಳಿ) ಇದೇ ವಿಧಿಯು ನಿಮಗೆ ನೀಡಲಾಗುವುದಾದರೆ ನೀವು ಅದನ್ನು ಸ್ವೀಕರಿಸಿರಿ. ಇದೇ ವಿಧಿಯು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ. ಅಲ್ಲಾಹನು ಯಾರನ್ನಾದರೂ ಗೊಂದಲಗೊಳಿಸಲು ಇಚ್ಚಿಸಿದರೆ ಅವನಿಗೆ ಅಲ್ಲಾಹನಿಂದ ಏನನ್ನೂ ತಡೆಯಲೂ ನಿಮಗೆ ಸಾಧ್ಯವಿಲ್ಲ. ಅಲ್ಲಾಹನು ಅವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲೂ ಕಠಿಣ ಶಿಕ್ಷೆಯಿದೆ.
42سَمَّاعُونَ لِلْكَذِبِ أَكَّالُونَ لِلسُّحْتِ ۚ فَإِن جَاءُوكَ فَاحْكُم بَيْنَهُمْ أَوْ أَعْرِضْ عَنْهُمْ ۖ وَإِن تُعْرِضْ عَنْهُمْ فَلَن يَضُرُّوكَ شَيْئًا ۖ وَإِنْ حَكَمْتَ فَاحْكُم بَيْنَهُم بِالْقِسْطِ ۚ إِنَّ اللَّهَ يُحِبُّ الْمُقْسِطِينَ
ಅವರು ಸುಳ್ಳನ್ನು ಆಸಕ್ತಿಯಿಂದ ಆಲಿಸುವವರೂ ನಿಷಿದ್ಧವಾದ ಸಂಪಾದನೆಯನ್ನು ಧಾರಾಳವಾಗಿ ತಿನ್ನುವವರೂ ಆಗಿದ್ದಾರೆ. ಅವರು ನಿಮ್ಮ ಬಳಿಗೆ ಬರುವುದಾದರೆ ಅವರ ನಡುವೆ ನೀವು ತೀರ್ಪು ನೀಡಿರಿ. ಅಥವಾ ಅವರನ್ನು ಕಡೆಗಣಿಸಿರಿ. ನೀನು ಅವರನ್ನು ಕಡೆಗಣಿಸುವುದಾದರೆ ಅವರು ನಿಮಗೆ ಯಾವ ತೊಂದರೆಯನ್ನು ಉಂಟುಮಾಡಲಾರರು. ಆದರೆ ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಸಮ್ಮತವಾದ ತೀರ್ಪನ್ನು ನೀಡಿರಿ. ಖಂಡಿತವಾಗಿಯು ನ್ಯಾಯ ಪಾಲಿಸುವವರನ್ನು ಅಲ್ಲಾಹನು ಮೆಚ್ಚುತ್ತಾನೆ.
43وَكَيْفَ يُحَكِّمُونَكَ وَعِندَهُمُ التَّوْرَاةُ فِيهَا حُكْمُ اللَّهِ ثُمَّ يَتَوَلَّوْنَ مِن بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ
ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು ವಿಮುಖರಾಗುತ್ತಿರುವಾಗ ಅವರು ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದಾದರೂ ಹೇಗೆ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಲ್ಲ.
44إِنَّا أَنزَلْنَا التَّوْرَاةَ فِيهَا هُدًى وَنُورٌ ۚ يَحْكُمُ بِهَا النَّبِيُّونَ الَّذِينَ أَسْلَمُوا لِلَّذِينَ هَادُوا وَالرَّبَّانِيُّونَ وَالْأَحْبَارُ بِمَا اسْتُحْفِظُوا مِن كِتَابِ اللَّهِ وَكَانُوا عَلَيْهِ شُهَدَاءَ ۚ فَلَا تَخْشَوُا النَّاسَ وَاخْشَوْنِ وَلَا تَشْتَرُوا بِآيَاتِي ثَمَنًا قَلِيلًا ۚ وَمَن لَّمْ يَحْكُم بِمَا أَنزَلَ اللَّهُ فَأُولَٰئِكَ هُمُ الْكَافِرُونَ
ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಯಹೂದರ ನಡುವೆ ಅಲ್ಲಾಹನಿಗೆ ಶರಣಾಗತರಾದ ಪೈಗಂಬರರೂ, ಪುಣ್ಯಪುರುಷರೂ, ಧರ್ಮವಿದ್ವಾಂಸರೂ ತೌರಾತ್‌ಗನುಗುಣವಾಗಿ ತೀರ್ಪು ನೀಡುತ್ತಿದ್ದರು. ಏಕೆಂದರೆ ಅವರಿಗೆ ಅಲ್ಲಾಹನ ಆ ಗ್ರಂಥದ ಸಂರಕ್ಷಣೆಯನ್ನು ವಹಿಸಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. (ಯಹೂದಿ ಪುರೋಹಿತರೇ) ನೀವು ಜನರನ್ನು ಭಯಪಡಬೇಡರಿ. ನನ್ನನ್ನು ಮಾತ್ರ ಭಯಪಡಿರಿ. ನನ್ನ ಸೂಕ್ತಿಗಳನ್ನು ನೀವು ತುಚ್ಛ ಬೆಲೆಗೆ ಮಾರಬೇಡಿರಿ. ಯಾರು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ತೀರ್ಪು ನೀಡುವುದಿಲ್ಲವೋ ಅವರೇ ನಿಷೇಧಿಗಳಾಗಿದ್ದಾರೆ.
45وَكَتَبْنَا عَلَيْهِمْ فِيهَا أَنَّ النَّفْسَ بِالنَّفْسِ وَالْعَيْنَ بِالْعَيْنِ وَالْأَنفَ بِالْأَنفِ وَالْأُذُنَ بِالْأُذُنِ وَالسِّنَّ بِالسِّنِّ وَالْجُرُوحَ قِصَاصٌ ۚ فَمَن تَصَدَّقَ بِهِ فَهُوَ كَفَّارَةٌ لَّهُ ۚ وَمَن لَّمْ يَحْكُم بِمَا أَنزَلَ اللَّهُ فَأُولَٰئِكَ هُمُ الظَّالِمُونَ
ನಾವು ಯಹೂದರಿಗೆ ತೌರಾತ್‌ನಲ್ಲಿ ಹೀಗೆ ವಿಧಿಸಿದ್ದೆವು ಅಂದರೆ ಪ್ರಾಣದ ಬದಲಿಗೆ ಪ್ರಾಣ. ಕಣ್ಣಿನ ಬದಲಿಗೆ ಕಣ್ಣು, ಮೂಗಿನ ಬದಲಿಗೆ ಮೂಗು, ಕಿವಿಯ ಬದಲಿಗೆ ಕಿವಿ, ಹಲ್ಲಿನ ಬದಲಿಗೆ ಹಲ್ಲು ಮತ್ತು ಗಾಯಗಳಿಗೂ ತತ್ಸಮಾನ ಪ್ರತೀಕಾರವಿದೆ. ನಂತರ ಯಾರಾದರೂ ಆ ಮುಯ್ಯಿ (ಪರಿಹಾರ ಧನ) ಕ್ಷಮಿಸುವುದಾದರೆ ಅದು ಅವನ (ಪಾಪಗಳ) ಪ್ರಾಯಶ್ಚಿತವಾಗಿದೆ. ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿದ್ದಾರೆ.
ಅಲ್-ಮಾಇದಾಕುರಾನ್ ಸೂಚಿ
120ಆಯತ್
MedinanRevelation
43ಆಯತ್

ಅನುವಾದ — ಅಲ್-ಮಾಇದಾ 43

ಸೂರಾ ಅಲ್-ಮಾಇದಾ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಬಳಿ ಅಲ್ಲಾಹನ ವಿಧಿ ನಿಯಮಗಳಿರುವ ತೌರಾತ್ ಇದ್ದು ಆ ಬಳಿಕ ಅವರು…

ಸೂರಾ ಆಯತ್ 43/120 — ಸೂರಾ ಅಲ್-ಮಾಇದಾ المائدة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಾಇದಾ ಆಲಿಸಿ, ಸೂರಾ ಅಲ್-ಮಾಇದಾ ಅನುವಾದ, ಸೂರಾ ಅಲ್-ಮಾಇದಾ mp3, ಸೂರಾ ಅಲ್-ಮಾಇದಾ pdf. ಆಯತ್ 41–45. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers