ಇಬ್ರಾಹೀಮ್ · 23/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
وَأُدْخِلَ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا بِإِذْنِ رَبِّهِمْ ۖ تَحِيَّتُهُمْ فِيهَا سَلَامٌ ۝٢٣
Wa udkhilal lazeena aamanoo wa `amilus saalihaati Jannaatin tajree min tahtihal anhaaru khaalideena feehaa bi izni Rabbihim tahiyyatuhum feeha salaam
📖 ಕನ್ನಡ ಅರ್ಥ
ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ ಅವರು ಅವರ ಪ್ರಭುವಿನ ಅಪ್ಪಣೆಯಿಂದ ಸದಾ ವಾಸಿಸುವರು. ಅಲ್ಲಿ ಅವರ ಸ್ವಾಗತ ಕೋರುವಿಕೆಯು ಸಲಾಮ್(ಶಾಂತಿ) ಎಂದಾಗಿರುವುದು.

🎧 ಆಲಿಸಿ


📜 ಆಯತ್ 21-25 — ಸೂರಾ ಇಬ್ರಾಹೀಮ್

21وَبَرَزُوا لِلَّهِ جَمِيعًا فَقَالَ الضُّعَفَاءُ لِلَّذِينَ اسْتَكْبَرُوا إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا مِنْ عَذَابِ اللَّهِ مِن شَيْءٍ ۚ قَالُوا لَوْ هَدَانَا اللَّهُ لَهَدَيْنَاكُمْ ۖ سَوَاءٌ عَلَيْنَا أَجَزِعْنَا أَمْ صَبَرْنَا مَا لَنَا مِن مَّحِيصٍ
ಸಕಲರೂ ಅಲ್ಲಾಹನ ಮುಂದೆ ಹಾಜರಾಗುವರು. ಆಗ ದುರ್ಬಲರು ಅಹಂಕಾರಿಗಳಾಗಿದ್ದವರೊAದಿಗೆ ಹೇಳುವರು; ನಾವಂತೂ ನಿಮ್ಮ ಅನುಯಾಯಿಗಳಾಗಿದ್ದೆವು ಆದ್ದರಿಂದ ಅಲ್ಲಾಹನ ಯಾತನೆಯಿಂದ ರಕ್ಷಿಸಲಿಕ್ಕಾಗಿ ನೀವು ಏನಾದರೂ ಮಾಡಬಲ್ಲಿರಾ? ಅವರು ಉತ್ತರ ನೀಡುವವರು; ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಮುನ್ನಡೆಸುತ್ತಿದ್ದರೆ ಖಂಡಿತ ನಾವು ನಿಮಗೆ ಮಾರ್ಗದರ್ಶನ ನೀಡುತ್ತಿದ್ದೆವು. ಇನ್ನು ನಾವು ಕೂಗಾಡಿದರು ಅಥವ ಸಹನೆ ವಹಿಸಿದರೂ ಸಮಾನವಾಗಿದೆ. ನಮಗೆ ಪಾರಾಗುವ ಯಾವುದೇ ಮಾರ್ಗವಿಲ್ಲ.
22وَقَالَ الشَّيْطَانُ لَمَّا قُضِيَ الْأَمْرُ إِنَّ اللَّهَ وَعَدَكُمْ وَعْدَ الْحَقِّ وَوَعَدتُّكُمْ فَأَخْلَفْتُكُمْ ۖ وَمَا كَانَ لِيَ عَلَيْكُم مِّن سُلْطَانٍ إِلَّا أَن دَعَوْتُكُمْ فَاسْتَجَبْتُمْ لِي ۖ فَلَا تَلُومُونِي وَلُومُوا أَنفُسَكُم ۖ مَّا أَنَا بِمُصْرِخِكُمْ وَمَا أَنتُم بِمُصْرِخِيَّ ۖ إِنِّي كَفَرْتُ بِمَا أَشْرَكْتُمُونِ مِن قَبْلُ ۗ إِنَّ الظَّالِمِينَ لَهُمْ عَذَابٌ أَلِيمٌ
ಕಾರ್ಯವು ತೀರ್ಮಾನಿಸಲ್ಪಟ್ಟಾಗ ಶೈತಾನನು ಹೇಳುವನು; ಖಂಡಿತ ಅಲ್ಲಾಹನು ನಿಮಗೆ ಸತ್ಯವಾದ ವಾಗ್ದಾನವನ್ನು ಮಾಡಿದ್ದನು. ಮತ್ತು ನಾನು ನಿಮಗೆ ವಾಗ್ದಾನಗಳನ್ನು ಮಾಡಿದ್ದೆನು. ಆದರೆ ಅದನ್ನು ಉಲ್ಲಂಘಿಸಿಬಿಟ್ಟಿರುವೆನು. ನಿಮ್ಮ ಮೇಲೆ ನನ್ನ ಯಾವುದೇ ಒತ್ತಡ ಇರಲಿಲ.್ಲ ಹೌದು ನಾನು ನಿಮ್ಮನ್ನು ಕರೆದೆನು ಮತ್ತೆ ನೀವು ನನ್ನ ಕರೆಗೆ ಓಗೊಟ್ಟಿರಿ. ಆದ್ದರಿಂದ ನೀವು ನನ್ನನ್ನು ಆಕ್ಷೇಪಿಸಬೇಡಿರಿ. ಸ್ವತಃ ನಿಮ್ಮನ್ನೇ ಆಕ್ಷೇಪಿಸಿಕೊಳ್ಳಿರಿ ನಾನೂ ನಿಮಗೆ ನೆರವು ನೀಡಲಾರೆ. ಇದಕ್ಕೆ ಮೊದಲು ನೀವು ನನ್ನನ್ನು ಅಲ್ಲಾಹನ ಸಹಭಾಗಿಯನ್ನಾಗಿ ನಿಶ್ಚಯಿಸಿದ್ದನ್ನು ನಾನು ನಿರಾಕರಿಸುತ್ತೇನೆ. ಖಂಡಿತವಾಗಿಯೂ ಅಕ್ರಮಿಗಳಿಗೆ ವೇದನಾಜನಕ ಯಾತನೆ ಇರುವುದು.
23وَأُدْخِلَ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا بِإِذْنِ رَبِّهِمْ ۖ تَحِيَّتُهُمْ فِيهَا سَلَامٌ
ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ ಅವರು ಅವರ ಪ್ರಭುವಿನ ಅಪ್ಪಣೆಯಿಂದ ಸದಾ ವಾಸಿಸುವರು. ಅಲ್ಲಿ ಅವರ ಸ್ವಾಗತ ಕೋರುವಿಕೆಯು ಸಲಾಮ್(ಶಾಂತಿ) ಎಂದಾಗಿರುವುದು.
24أَلَمْ تَرَ كَيْفَ ضَرَبَ اللَّهُ مَثَلًا كَلِمَةً طَيِّبَةً كَشَجَرَةٍ طَيِّبَةٍ أَصْلُهَا ثَابِتٌ وَفَرْعُهَا فِي السَّمَاءِ
ಅಲ್ಲಾಹನು ಪವಿತ್ರ ವಚನದ ಉಪಮೆಯನ್ನು ಹೇಗೆ ಕೊಟ್ಟಿರುವನೆಂದು ನೀವು ನೋಡಿಲ್ಲವೆ? ಒಂದು ಉತ್ತಮವಾದ ಮರದಂತೆ; ಅದರ ಬೇರುಗಳು ಬಲಿಷÀ್ಠವಾಗಿವೆ ಮತ್ತು ಅದರ ಕೊಂಬೆಗಳು ಆಕಾಶಕ್ಕೇರಿವೆ.
25تُؤْتِي أُكُلَهَا كُلَّ حِينٍ بِإِذْنِ رَبِّهَا ۗ وَيَضْرِبُ اللَّهُ الْأَمْثَالَ لِلنَّاسِ لَعَلَّهُمْ يَتَذَكَّرُونَ
ಅದು ತನ್ನ ಪ್ರಭುವಿನ ಅಪ್ಪಣೆಯಿಂದ, ಸದಾಕಾಲ ತನ್ನ ಫಲವನ್ನು ನೀಡುತ್ತಿರುತ್ತದೆ. ಮತ್ತು ಜನರು ಉಪದೇಶ ಸ್ವೀಕರಿಸಲೆಂದು ಅಲ್ಲಾಹನು ಅವರಿಗಾಗಿ ಉಪಮೆಗಳನ್ನು ವಿವರಿಸುತ್ತಾನೆ.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
23ಆಯತ್

ಅನುವಾದ — ಇಬ್ರಾಹೀಮ್ 23

ಸೂರಾ ಇಬ್ರಾಹೀಮ್ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ…

ಸೂರಾ ಆಯತ್ 23/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 21–25. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers