ಅಲ್-ಹದೀದ್ · 21/29
ಅನುವಾದ ಉಚ್ಚಾರಣೆ — ಸೂರಾ ಅಲ್-ಹದೀದ್
سَابِقُوا إِلَىٰ مَغْفِرَةٍ مِّن رَّبِّكُمْ وَجَنَّةٍ عَرْضُهَا كَعَرْضِ السَّمَاءِ وَالْأَرْضِ أُعِدَّتْ لِلَّذِينَ آمَنُوا بِاللَّهِ وَرُسُلِهِ ۚ ذَٰلِكَ فَضْلُ اللَّهِ يُؤْتِيهِ مَن يَشَاءُ ۚ وَاللَّهُ ذُو الْفَضْلِ الْعَظِيمِ ۝٢١
Saabiqooo ilaa maghfiratim mir Rabbikum wa jannatin `arduhaa ka-`ardis samaaa`i wal ardi u`iddat lillazeena aamanoo billaahi wa Rusulih; zaalika fadlul laahi yu`teehi many yashaaa`; wal laahu zul fadlil `azeem
📖 ಕನ್ನಡ ಅರ್ಥ
(ಓ ನನ್ನ ದಾಸರೇ) ನೀವು ತಮ್ಮ ಪ್ರಭುವಿನ ಕ್ಷಮೆ ಮತ್ತು ಆಕಾಶ, ಭೂಮಿಗಳಷ್ಟೂ ವಿಶಾಲವುಳ್ಳ ಸ್ವರ್ಗೋದ್ಯಾನದ ಕಡೆಗೆ ಧಾವಿಸಿರಿ, ಇದು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಿಗೆ ಸಿದ್ಧಗೊಳಿಸಲಾಗಿದೆ, ಇದು ಅಲ್ಲಾಹನ ಅನುಗ್ರಹವಾಗಿದೆ, ಅವನು ಇದನ್ನು ತಾನಿಚ್ಛಿದವರಿಗೆ ದಯಪಾಲಿಸುವನು ಮತ್ತು ಅಲ್ಲಾಹನು ಮಹಾ ಅನುಗ್ರಹವಂತನಾಗಿದ್ದಾನೆ.

🎧 ಆಲಿಸಿ


📜 ಆಯತ್ 19-23 — ಸೂರಾ ಅಲ್-ಹದೀದ್

19وَالَّذِينَ آمَنُوا بِاللَّهِ وَرُسُلِهِ أُولَٰئِكَ هُمُ الصِّدِّيقُونَ ۖ وَالشُّهَدَاءُ عِندَ رَبِّهِمْ لَهُمْ أَجْرُهُمْ وَنُورُهُمْ ۖ وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ
ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದವರೇ ತಮ್ಮ ಪ್ರಭುವಿನ ಸನ್ನಿಧಿಯಲ್ಲಿ ಸತ್ಯವಂತರೂ ಮತ್ತು ಸಾಕ್ಷಿಗಳೂ ಆಗಿದ್ದಾರೆ, ಅವರಿಗೆ ಅವರ ಪ್ರತಿಫಲವೂ, ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದವರೇ ನರಕದವರಾಗಿದ್ದಾರೆ.
20اعْلَمُوا أَنَّمَا الْحَيَاةُ الدُّنْيَا لَعِبٌ وَلَهْوٌ وَزِينَةٌ وَتَفَاخُرٌ بَيْنَكُمْ وَتَكَاثُرٌ فِي الْأَمْوَالِ وَالْأَوْلَادِ ۖ كَمَثَلِ غَيْثٍ أَعْجَبَ الْكُفَّارَ نَبَاتُهُ ثُمَّ يَهِيجُ فَتَرَاهُ مُصْفَرًّا ثُمَّ يَكُونُ حُطَامًا ۖ وَفِي الْآخِرَةِ عَذَابٌ شَدِيدٌ وَمَغْفِرَةٌ مِّنَ اللَّهِ وَرِضْوَانٌ ۚ وَمَا الْحَيَاةُ الدُّنْيَا إِلَّا مَتَاعُ الْغُرُورِ
ತಿಳಿಯಿರಿ; ಇಹಲೋಕದ ಜೀವನವು ಆಟ, ವಿನೋದ, ಶೃಂಗಾರ ಮತ್ತು ಪರಸ್ಪರರ ನಡುವೆ ಜಂಭ ಕೊಚ್ಚಿಕೊಳ್ಳುವುದು, ಸಂಪತ್ತು ಸಂತಾನಗಳಲ್ಲಿ ಪೈಪೋಟಿ ನಡೆಸುವುದು ಮಾತ್ರವಾಗಿದೆ. ಅದರ ಉಪಮೆಯು ಒಂದು ಮಳೆಯಂತಿದೆ. ಅದ್ದರಿಂದ ಬೆಳೆದಿರುವ ಕೃಷಿಯು ಕೃಷಿಕರನ್ನು ಆಕರ್ಷಿಸುತ್ತದೆ, ಅನಂತರ ಅದು ಬಲಿತು ಹಳದಿ ವರ್ಣಕ್ಕೆ ತಿರುಗಿರುವುದಾಗಿ ನೀವು ಕಾಣುವಿರಿ, ಬಳಿಕ ಅದು ಒಣಗಿ ಹೊಟ್ಟಾಗಿಬಿಡುತ್ತದೆ. ಪರಲೋಕದಲ್ಲಿ (ದುರ್ಜನರಿಗೆ) ಅತ್ಯುಗ್ರ ಶಿಕ್ಷೆಯಿದೆ. ಹಾಗು (ಸಜ್ಜನರಿಗೆ) ಅಲ್ಲಾಹನ ಕಡೆಯ ಕ್ಷಮೆ ಹಾಗು ಸಂಪ್ರೀತಿ ಇದೆ. ಮತ್ತು ಈ ಇಹಲೋಕದ ಜೀವನವು ವಂಚನಾತ್ಮಕ ಸರಕಲ್ಲದೇ ಬೇರೇನು ಅಲ್ಲ.
21سَابِقُوا إِلَىٰ مَغْفِرَةٍ مِّن رَّبِّكُمْ وَجَنَّةٍ عَرْضُهَا كَعَرْضِ السَّمَاءِ وَالْأَرْضِ أُعِدَّتْ لِلَّذِينَ آمَنُوا بِاللَّهِ وَرُسُلِهِ ۚ ذَٰلِكَ فَضْلُ اللَّهِ يُؤْتِيهِ مَن يَشَاءُ ۚ وَاللَّهُ ذُو الْفَضْلِ الْعَظِيمِ
(ಓ ನನ್ನ ದಾಸರೇ) ನೀವು ತಮ್ಮ ಪ್ರಭುವಿನ ಕ್ಷಮೆ ಮತ್ತು ಆಕಾಶ, ಭೂಮಿಗಳಷ್ಟೂ ವಿಶಾಲವುಳ್ಳ ಸ್ವರ್ಗೋದ್ಯಾನದ ಕಡೆಗೆ ಧಾವಿಸಿರಿ, ಇದು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಿಗೆ ಸಿದ್ಧಗೊಳಿಸಲಾಗಿದೆ, ಇದು ಅಲ್ಲಾಹನ ಅನುಗ್ರಹವಾಗಿದೆ, ಅವನು ಇದನ್ನು ತಾನಿಚ್ಛಿದವರಿಗೆ ದಯಪಾಲಿಸುವನು ಮತ್ತು ಅಲ್ಲಾಹನು ಮಹಾ ಅನುಗ್ರಹವಂತನಾಗಿದ್ದಾನೆ.
22مَا أَصَابَ مِن مُّصِيبَةٍ فِي الْأَرْضِ وَلَا فِي أَنفُسِكُمْ إِلَّا فِي كِتَابٍ مِّن قَبْلِ أَن نَّبْرَأَهَا ۚ إِنَّ ذَٰلِكَ عَلَى اللَّهِ يَسِيرٌ
ಭೂಮಿಯಲ್ಲಾಗಲಿ ಸ್ವತಃ ನಿಮ್ಮಲ್ಲಾಗಲಿ ಸಂಭವಿಸುವ ಯಾವುದೇ ವಿಪತ್ತು ನಾವು ಅವನನ್ನು ಸೃಷ್ಟಿಸುವ ಮುಂಚೆ ಅದನ್ನು ಒಂದು ಗ್ರಂಥದಲ್ಲಿ ದಾಖಲಿಸದೇ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಅತೀ ಸುಲಭವಾಗಿದೆ.
23لِّكَيْلَا تَأْسَوْا عَلَىٰ مَا فَاتَكُمْ وَلَا تَفْرَحُوا بِمَا آتَاكُمْ ۗ وَاللَّهُ لَا يُحِبُّ كُلَّ مُخْتَالٍ فَخُورٍ
ಇದೇಕೆಂದರೆ ನಿಮಗುಂಟಾದ ನಷ್ಟದ ಬಗ್ಗೆ ನೀವು ವ್ಯಥೆ ಪಡಬಾರದೆಂದು ಅಥವ ನಿಮಗೆ ದಯಪಾಲಿಸಲಾದ ವಸ್ತುವಿನ ಮೇಲೆ ನೀವು ಹಿಗ್ಗಬಾರದೆಂದಾಗಿದೆ. ಗರ್ವತೋರುವ ದುರಭಿಮಾನಿಗಳನ್ನು ಅಲ್ಲಾಹನು ಮೆಚ್ಚುವುದಿಲ್ಲ.
ಅಲ್-ಹದೀದ್ಕುರಾನ್ ಸೂಚಿ
29ಆಯತ್
MedinanRevelation
21ಆಯತ್

ಅನುವಾದ — ಅಲ್-ಹದೀದ್ 21

ಸೂರಾ ಅಲ್-ಹದೀದ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ನನ್ನ ದಾಸರೇ) ನೀವು ತಮ್ಮ ಪ್ರಭುವಿನ ಕ್ಷಮೆ ಮತ್ತು ಆಕಾಶ, ಭೂಮಿಗಳಷ್ಟೂ…

ಸೂರಾ ಆಯತ್ 21/29 — ಸೂರಾ ಅಲ್-ಹದೀದ್ الحديد (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹದೀದ್ ಆಲಿಸಿ, ಸೂರಾ ಅಲ್-ಹದೀದ್ ಅನುವಾದ, ಸೂರಾ ಅಲ್-ಹದೀದ್ mp3, ಸೂರಾ ಅಲ್-ಹದೀದ್ pdf. ಆಯತ್ 19–23. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers