ಅಲ್-ಅಹ್ಜಾಬ್ · 25/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
وَرَدَّ اللَّهُ الَّذِينَ كَفَرُوا بِغَيْظِهِمْ لَمْ يَنَالُوا خَيْرًا ۚ وَكَفَى اللَّهُ الْمُؤْمِنِينَ الْقِتَالَ ۚ وَكَانَ اللَّهُ قَوِيًّا عَزِيزًا ۝٢٥
Wa raddal laahul lazeena kafaroo bighaizihim lam yanaaloo khairaa; wa kafal laahul mu`mineenal qitaal; wa kaanal laahu Qawiyyan `Azeezaa
📖 ಕನ್ನಡ ಅರ್ಥ
ಮತ್ತು ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪದೊಂದಿಗೆ (ವಿಫಲರಾಗಿ) ಮರಳಿಸಿದನು. ಅವರು ಯಾವುದೇ ಒಳಿತನ್ನು ಪಡೆಯಲಿಲ್ಲ ಹಾಗೂ ಯುದ್ದದಲ್ಲಿ ಸತ್ಯವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ಮಹಾಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 23-27 — ಸೂರಾ ಅಲ್-ಅಹ್ಜಾಬ್

23مِّنَ الْمُؤْمِنِينَ رِجَالٌ صَدَقُوا مَا عَاهَدُوا اللَّهَ عَلَيْهِ ۖ فَمِنْهُم مَّن قَضَىٰ نَحْبَهُ وَمِنْهُم مَّن يَنتَظِرُ ۖ وَمَا بَدَّلُوا تَبْدِيلًا
ಸತ್ಯವಿಶ್ವಾಸಿಗಳ ಪೈಕಿ ಕೆಲವರು ತಾವು ಅಲ್ಲಾಹನೊಂದಿಗೆ ಮಾಡಿರುವ ಒಪ್ಪಂದವನ್ನು ನಿಜ ಮಾಡಿ ತೋರಿಸಿರುತ್ತಾರೆ. ಕೆಲವರು ಹುತಾತ್ಮರಾಗುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರ್ತಿಕರಿಸಿರುತ್ತಾರೆ ಮತ್ತು ಕೆಲವರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ ಮತ್ತು ಅವರು ಕರಾರಿನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
24لِّيَجْزِيَ اللَّهُ الصَّادِقِينَ بِصِدْقِهِمْ وَيُعَذِّبَ الْمُنَافِقِينَ إِن شَاءَ أَوْ يَتُوبَ عَلَيْهِمْ ۚ إِنَّ اللَّهَ كَانَ غَفُورًا رَّحِيمًا
ಇದು ಅಲ್ಲಾಹನು ಸತ್ಯವಂತರಿಗೆ ಅವರ ಸತ್ಯತೆಯ ಪ್ರತಿಫಲವನ್ನು ನೀಡಲೆಂದೂ, ಕಪಟ ವಿಶ್ವಾಸಿಗಳಿಗೆ ತಾನಿಚ್ಛಿಸಿದರೆ ಶಿಕ್ಷೆ ನೀಡಲೆಂದೂ ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದಾಗಿದೆ. ಅಲ್ಲಾಹನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
25وَرَدَّ اللَّهُ الَّذِينَ كَفَرُوا بِغَيْظِهِمْ لَمْ يَنَالُوا خَيْرًا ۚ وَكَفَى اللَّهُ الْمُؤْمِنِينَ الْقِتَالَ ۚ وَكَانَ اللَّهُ قَوِيًّا عَزِيزًا
ಮತ್ತು ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪದೊಂದಿಗೆ (ವಿಫಲರಾಗಿ) ಮರಳಿಸಿದನು. ಅವರು ಯಾವುದೇ ಒಳಿತನ್ನು ಪಡೆಯಲಿಲ್ಲ ಹಾಗೂ ಯುದ್ದದಲ್ಲಿ ಸತ್ಯವಿಶ್ವಾಸಿಗಳಿಗೆ ಅಲ್ಲಾಹನೇ ಸಾಕು. ಅಲ್ಲಾಹನು ಮಹಾಶಕ್ತಿವಂತನೂ, ಪ್ರಚಂಡನೂ ಆಗಿದ್ದಾನೆ.
26وَأَنزَلَ الَّذِينَ ظَاهَرُوهُم مِّنْ أَهْلِ الْكِتَابِ مِن صَيَاصِيهِمْ وَقَذَفَ فِي قُلُوبِهِمُ الرُّعْبَ فَرِيقًا تَقْتُلُونَ وَتَأْسِرُونَ فَرِيقًا
ಮತ್ತು ಗ್ರಂಥದವರ ಪೈಕಿ ಅವರಿಗೆ (ಸತ್ಯ ನಿಷೇಧಿಗಳಿಗೆ) ಬೆಂಬಲ ನೀಡಿದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿದನು. ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹಾಕಿಬಿಟ್ಟನು. ಅವರ ಒಂದು ಗುಂಪನ್ನು ನೀವು ವಧಿಸುತ್ತಿರುವಿರಿ ಮತ್ತು ಇನ್ನೊಂದು ಗುಂಪನ್ನು ಬಂಧಿಗಳನ್ನಾಗಿ ಮಾಡುತ್ತಿರುವಿರಿ.
27وَأَوْرَثَكُمْ أَرْضَهُمْ وَدِيَارَهُمْ وَأَمْوَالَهُمْ وَأَرْضًا لَّمْ تَطَئُوهَا ۚ وَكَانَ اللَّهُ عَلَىٰ كُلِّ شَيْءٍ قَدِيرًا
ಮತ್ತು ಅವನು ನಿಮ್ಮನ್ನು ಅವರ ಭೂಮಿಯ, ಅವರ ಮನೆಮಠಗಳ, ಅವರ ಸಂಪತ್ತುಗಳ ವಾರೀಸುದಾರರನ್ನಾಗಿ ಮಾಡಿದನು ಮತ್ತು ಈ ಹಿಂದೆ ನೀವು ಕಾಲಿಟ್ಟಿರದ ಭೂಮಿಯನ್ನೂ ಸಹ ದಯಪಾಲಿಸಿದನು. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
25ಆಯತ್

ಅನುವಾದ — ಅಲ್-ಅಹ್ಜಾಬ್ 25

ಸೂರಾ ಅಲ್-ಅಹ್ಜಾಬ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅಲ್ಲಾಹನು ಸತ್ಯನಿಷೇಧಿಗಳನ್ನು ಅವರ ಕೋಪದೊಂದಿಗೆ (ವಿಫಲರಾಗಿ) ಮರಳಿಸಿದನು. ಅವರು ಯಾವುದೇ ಒಳಿತನ್ನು…

ಸೂರಾ ಆಯತ್ 25/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 23–27. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers