ಯೂನುಸ್ · 21/109
ಅನುವಾದ ಉಚ್ಚಾರಣೆ — ಸೂರಾ ಯೂನುಸ್
وَإِذَا أَذَقْنَا النَّاسَ رَحْمَةً مِّن بَعْدِ ضَرَّاءَ مَسَّتْهُمْ إِذَا لَهُم مَّكْرٌ فِي آيَاتِنَا ۚ قُلِ اللَّهُ أَسْرَعُ مَكْرًا ۚ إِنَّ رُسُلَنَا يَكْتُبُونَ مَا تَمْكُرُونَ ۝٢١
Wa izaaa azaqnan naasa rahmatam mim ba`di darraaa`a massat hum izaa lahum makrun feee aayaatinaa; qulil laahu asra`u makraa; inna rusulanaa yaktuboona maa tamkuroon
📖 ಕನ್ನಡ ಅರ್ಥ
ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ.

🎧 ಆಲಿಸಿ


📜 ಆಯತ್ 19-23 — ಸೂರಾ ಯೂನುಸ್

19وَمَا كَانَ النَّاسُ إِلَّا أُمَّةً وَاحِدَةً فَاخْتَلَفُوا ۚ وَلَوْلَا كَلِمَةٌ سَبَقَتْ مِن رَّبِّكَ لَقُضِيَ بَيْنَهُمْ فِيمَا فِيهِ يَخْتَلِفُونَ
ಆರಂಭದಲ್ಲಿ ಸಕಲ ಜನರು ಒಂದೇ ಸಮುದಾಯದವರಾಗಿದ್ದರು, ಆನಂತರ ಅವರು ಭಿನ್ನತೆಯನ್ನು ತೋರಿದರು, ನಿಮ್ಮ ಪ್ರಭುವಿನಿಂದ ಇದಕ್ಕೆ ಮೊದಲೇ ನಿರ್ಣಯಿಸಲ್ಪಟ್ಟ ವಚನವು ಇಲ್ಲದಿರುತ್ತಿದ್ದರೆ ಅವರು ಭಿನ್ನತೆ ಹೊಂದಿದ್ದ ವಿಚಾರಗಳಲ್ಲಿ ತೀರ್ಮಾನ ಮಾಡಿಬಿಡಲಾಗುತ್ತಿತ್ತು.
20وَيَقُولُونَ لَوْلَا أُنزِلَ عَلَيْهِ آيَةٌ مِّن رَّبِّهِ ۖ فَقُلْ إِنَّمَا الْغَيْبُ لِلَّهِ فَانتَظِرُوا إِنِّي مَعَكُم مِّنَ الْمُنتَظِرِينَ
ಈ ಪೈಗಂಬರರ ಮೇಲೆ ಅವರ ಪ್ರಭುವಿನ ಕಡೆಯಿಂದ ಯಾವುದಾದರು ದೃಷ್ಟಾಂತವು ಏಕೆ ಅವತೀರ್ಣಗೊಳಿಸಲಾಗಿಲ್ಲ ? ಎಂದು ಅವರು ಹೇಳುತ್ತಾರೆ, ಉತ್ತರಿಸಿರಿ; ಅಗೋಚರ ಜ್ಞಾನವು ಕೇವಲ ಅಲ್ಲಾಹನಿಗೆ ಮಾತ್ರವಿದೆ, ಆದುದರಿಂದ ಇನ್ನು ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನು ಸಹ ನಿಮ್ಮ ಜೊತೆ ಕಾಯುತ್ತಿರುವೆನು.
21وَإِذَا أَذَقْنَا النَّاسَ رَحْمَةً مِّن بَعْدِ ضَرَّاءَ مَسَّتْهُمْ إِذَا لَهُم مَّكْرٌ فِي آيَاتِنَا ۚ قُلِ اللَّهُ أَسْرَعُ مَكْرًا ۚ إِنَّ رُسُلَنَا يَكْتُبُونَ مَا تَمْكُرُونَ
ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ.
22هُوَ الَّذِي يُسَيِّرُكُمْ فِي الْبَرِّ وَالْبَحْرِ ۖ حَتَّىٰ إِذَا كُنتُمْ فِي الْفُلْكِ وَجَرَيْنَ بِهِم بِرِيحٍ طَيِّبَةٍ وَفَرِحُوا بِهَا جَاءَتْهَا رِيحٌ عَاصِفٌ وَجَاءَهُمُ الْمَوْجُ مِن كُلِّ مَكَانٍ وَظَنُّوا أَنَّهُمْ أُحِيطَ بِهِمْ ۙ دَعَوُا اللَّهَ مُخْلِصِينَ لَهُ الدِّينَ لَئِنْ أَنجَيْتَنَا مِنْ هَٰذِهِ لَنَكُونَنَّ مِنَ الشَّاكِرِينَ
ನಿಮ್ಮನ್ನು ನೆಲ ಜಲಗಳಲ್ಲಿ ಸಾಗಿಸುವವನು ಅಲ್ಲಾಹನೇ ಆಗಿರುವನು. ನೀವು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಆ ಹಡಗು ಜನರನ್ನು ಹೊತ್ತುಕೊಂಡು ಅನುಕೂಲಕರ ಮಾರುತದ ಮೂಲಕ ಸಂಚರಿಸುತ್ತಿರುವಾಗ ಅವರು ಇದರಿಂದ ಸಂತಸದಿAದಿರುವಾಗ ಹಠಾತ್ತನೆ ಅವರ ಮೇಲೆ ಭಾರಿ ಬಿರುಗಾಳಿಯು ಬಂದು ಎಲ್ಲಾ ಕಡೆಯಿಂದಲೂ ಅಲೆಗಳು ಅಪ್ಪಳಿಸುತ್ತಿರುವಾಗ ಮತ್ತು ನಾವು ಆವರಿಸಲ್ಪಟ್ಟಿವೆಂದು ಅವರು ಮನಗಾಣುತ್ತಾರೆ. (ಆ ಸಂದರ್ಭದಲ್ಲಿ) ಎಲ್ಲರೂ ನಿಷ್ಕಳಂಕ ವಿಶ್ವಾಸದೊಂದಿಗೆ “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯು ನಾವು ಕೃತಜ್ಞರಲ್ಲಾಗಿಬಿಡುವೆವು ಎಂದು ಅಲ್ಲಾಹನನ್ನೇ ಪ್ರಾರ್ಥಿಸುತ್ತಾರೆ”
23فَلَمَّا أَنجَاهُمْ إِذَا هُمْ يَبْغُونَ فِي الْأَرْضِ بِغَيْرِ الْحَقِّ ۗ يَا أَيُّهَا النَّاسُ إِنَّمَا بَغْيُكُمْ عَلَىٰ أَنفُسِكُم ۖ مَّتَاعَ الْحَيَاةِ الدُّنْيَا ۖ ثُمَّ إِلَيْنَا مَرْجِعُكُمْ فَنُنَبِّئُكُم بِمَا كُنتُمْ تَعْمَلُونَ
ಅನಂತರ ಅಲ್ಲಾಹನು ಅವರನ್ನು ಪಾರುಮಾಡಿದಾಗ ಕೂಡಲೇ ಅವರು ಭೂಮಿಯಲ್ಲಿ ಅನ್ಯಾಯವಾಗಿ ಬಂಡಾಯ ವೆಸಗತೊಡಗುತ್ತಾರೆ. ಓ ಜನರೇ ! ನಿಮ್ಮ ಬಂಡಾಯವು ನಿಮಗೆ ಆಪತ್ತಾಗಿಬಿಡಲಿದೆ. ಇದು ಇಹಲೋಕ ಜೀವನದ ತಾತ್ಕಾಲಿಕ ಸುಖಸೌಕರ್ಯ ಮಾತ್ರ. ಅನಂತರ ನಿಮಗೆ ನಮ್ಮ ಬಳಿಗೆ ಮರಳಲಿಕ್ಕಿರುವುದು. ಆಮೇಲೆ ನಾವು ನಿಮಗೆ ನಿಮ್ಮ ಕೃತ್ಯಗಳನ್ನೆಲ್ಲಾ ತಿಳಿಸಿಕೊಡುವೆವು.
ಯೂನುಸ್ಕುರಾನ್ ಸೂಚಿ
109ಆಯತ್
MeccanRevelation
21ಆಯತ್

ಅನುವಾದ — ಯೂನುಸ್ 21

ಸೂರಾ ಯೂನುಸ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ…

ಸೂರಾ ಆಯತ್ 21/109 — ಸೂರಾ ಯೂನುಸ್ يونس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂನುಸ್ ಆಲಿಸಿ, ಸೂರಾ ಯೂನುಸ್ ಅನುವಾದ, ಸೂರಾ ಯೂನುಸ್ mp3, ಸೂರಾ ಯೂನುಸ್ pdf. ಆಯತ್ 19–23. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers