ಅಲ್-ಆರಾಫ್ · 148/206
ಅನುವಾದ ಉಚ್ಚಾರಣೆ — ಸೂರಾ ಅಲ್-ಆರಾಫ್
وَاتَّخَذَ قَوْمُ مُوسَىٰ مِن بَعْدِهِ مِنْ حُلِيِّهِمْ عِجْلًا جَسَدًا لَّهُ خُوَارٌ ۚ أَلَمْ يَرَوْا أَنَّهُ لَا يُكَلِّمُهُمْ وَلَا يَهْدِيهِمْ سَبِيلًا ۘ اتَّخَذُوهُ وَكَانُوا ظَالِمِينَ ۝١٤٨
Wattakhaza qawmu Moosaa mim ba`dihee min huliyyihim `ijlan jasadal lahoo khuwaar; alam yaraw annahoo laa yukallimuhum wa laa yahdeehim sabeelaa; ittakha zoohu wa kaanoo zaalimeen
📖 ಕನ್ನಡ ಅರ್ಥ
ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು ಕರುವಿನ ಪ್ರತಿಮೆಯನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಅದು ಶಬ್ದ ಹೊರಡಿಸುವ ಒಂದು ಅಸ್ಥಿ ಪಂಜರ, ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದು ಮತ್ತು ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಂಡಿಲ್ಲವೇ? ಆದರೂ ಅವರು ಅದನ್ನು ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಅಕ್ರಮಿಗಳಾಗಿ ಬಿಟ್ಟರು.

🎧 ಆಲಿಸಿ


📜 ಆಯತ್ 146-150 — ಸೂರಾ ಅಲ್-ಆರಾಫ್

146سَأَصْرِفُ عَنْ آيَاتِيَ الَّذِينَ يَتَكَبَّرُونَ فِي الْأَرْضِ بِغَيْرِ الْحَقِّ وَإِن يَرَوْا كُلَّ آيَةٍ لَّا يُؤْمِنُوا بِهَا وَإِن يَرَوْا سَبِيلَ الرُّشْدِ لَا يَتَّخِذُوهُ سَبِيلًا وَإِن يَرَوْا سَبِيلَ الْغَيِّ يَتَّخِذُوهُ سَبِيلًا ۚ ذَٰلِكَ بِأَنَّهُمْ كَذَّبُوا بِآيَاتِنَا وَكَانُوا عَنْهَا غَافِلِينَ
ಇಹಲೋಕದಲ್ಲಿ ಅನ್ಯಾಯವಾಗಿ ಅಹಂಕಾರ ತೋರುವವರನ್ನು ನಾನು ನನ್ನ ಆದೇಶಗಳಿಂದ ದೂರಸರಿಸಿರುವೆನು ಮತ್ತು ಅವರು ಸಕಲ ದೃಷ್ಟಾಂತವನ್ನು ಕಂಡರೂ ಅದರಲ್ಲಿ ವಿಶ್ವಾಸವಿಡಲಾರರು ಮತ್ತು ಸನ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುವುದಿಲ್ಲ ಮತ್ತು ದುರ್ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವನ್ನಾಗಿ ಸ್ವೀಕರಿಸುತ್ತಾರೆ. ಇದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದುದರ ಮತ್ತು ಅವುಗಳ ಕುರಿತು ನಿರಾಕರಿಸಿದ್ದುದರ ಫಲವಾಗಿದೆ.
147وَالَّذِينَ كَذَّبُوا بِآيَاتِنَا وَلِقَاءِ الْآخِرَةِ حَبِطَتْ أَعْمَالُهُمْ ۚ هَلْ يُجْزَوْنَ إِلَّا مَا كَانُوا يَعْمَلُونَ
ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದರೋ ಅವರ ಸಕಲ ಕರ್ಮಗಳು ನಿಷ್ಫಲವಾಗಿ ಬಿಟ್ಟವು. ಅವರಿಗೆ ಅವರು ಮಾಡಿಕೊಳ್ಳುತ್ತಿದ್ದುದನ್ನೇ ಶಿಕ್ಷೆಯಾಗಿ ನೀಡಲಾಗುವುದು.
148وَاتَّخَذَ قَوْمُ مُوسَىٰ مِن بَعْدِهِ مِنْ حُلِيِّهِمْ عِجْلًا جَسَدًا لَّهُ خُوَارٌ ۚ أَلَمْ يَرَوْا أَنَّهُ لَا يُكَلِّمُهُمْ وَلَا يَهْدِيهِمْ سَبِيلًا ۘ اتَّخَذُوهُ وَكَانُوا ظَالِمِينَ
ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು ಕರುವಿನ ಪ್ರತಿಮೆಯನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಅದು ಶಬ್ದ ಹೊರಡಿಸುವ ಒಂದು ಅಸ್ಥಿ ಪಂಜರ, ಅದು ಅವರೊಂದಿಗೆ ಮಾತನಾಡುವುದಿಲ್ಲವೆಂದು ಮತ್ತು ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಂಡಿಲ್ಲವೇ? ಆದರೂ ಅವರು ಅದನ್ನು ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಅಕ್ರಮಿಗಳಾಗಿ ಬಿಟ್ಟರು.
149وَلَمَّا سُقِطَ فِي أَيْدِيهِمْ وَرَأَوْا أَنَّهُمْ قَدْ ضَلُّوا قَالُوا لَئِن لَّمْ يَرْحَمْنَا رَبُّنَا وَيَغْفِرْ لَنَا لَنَكُونَنَّ مِنَ الْخَاسِرِينَ
ಮತ್ತು ಅವರು (ಕರುವನ್ನು ಆರಾಧಿಸುವವರು) ಪಶ್ಚಾತ್ತಾಪ ಪಡುವವರಾದಾಗ ಮತ್ತು ತಾವು ನಿಜವಾಗಿಯು ಪಥಭ್ರಷ್ಟರಾಗಿದ್ದೇವೆಂದು ಅವರು ಮನಗಂಡಾಗ ಹೇಳಿದರು: ನಮ್ಮ ಪ್ರಭೂ, ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ನಮ್ಮ ಪಾಪವನ್ನು ಕ್ಷಮಿಸದಿದ್ದರೆ ಖಂಡಿತ ನಾವು ನಷ್ಟ ಹೊಂದುವವರಲ್ಲಾಗುವೆವು.
150وَلَمَّا رَجَعَ مُوسَىٰ إِلَىٰ قَوْمِهِ غَضْبَانَ أَسِفًا قَالَ بِئْسَمَا خَلَفْتُمُونِي مِن بَعْدِي ۖ أَعَجِلْتُمْ أَمْرَ رَبِّكُمْ ۖ وَأَلْقَى الْأَلْوَاحَ وَأَخَذَ بِرَأْسِ أَخِيهِ يَجُرُّهُ إِلَيْهِ ۚ قَالَ ابْنَ أُمَّ إِنَّ الْقَوْمَ اسْتَضْعَفُونِي وَكَادُوا يَقْتُلُونَنِي فَلَا تُشْمِتْ بِيَ الْأَعْدَاءَ وَلَا تَجْعَلْنِي مَعَ الْقَوْمِ الظَّالِمِينَ
ಮತ್ತು ಮೂಸಾ ತಮ್ಮ ಜನರೆಡೆಗೆ ಕೋಪಿತರಾಗಿ ಹಾಗು ದುಃಖಿತರಾಗಿ ಮರಳಿದಾಗ ಹೇಳಿದರು: ನೀವು ನನ್ನ ನಂತರ ಅತಿ ನಿಕೃಷ್ಟ ಉತ್ತರಾಧಿಕಾರವನ್ನು ತೋರಿದಿರಿ. ನಿಮ್ಮ ಪ್ರಭುವಿನ ಆದೇಶಕ್ಕೆ ಮೊದಲೇ ನೀವು ಆತುರ ಪಟ್ಟಿರುವಿರಾ? ಮತ್ತು ಅವರು ಕೂಡಲೇ ಫಲಕಗಳನ್ನು ಕೆಳಗಡೆ ಹಾಕಿ ತಮ್ಮ ಸಹೊದರನ ತಲೆಗೂದಲನ್ನು ಹಿಡಿದು ತಮ್ಮೆಡೆಗೆ ಎಳೆಯ ತೊಡಗಿದರು. ಹಾರೂನ್ ಹೇಳಿದರು: ನನ್ನ ತಾಯಿ ಪುತ್ರನೇ, ಜನರು ನನ್ನನ್ನು ಬಲಹೀನನ್ನಾಗಿ ಮಾಡಿಬಿಟ್ಟರು ಮತ್ತು ನನ್ನನ್ನು ಕೊಂದುಬಿಡುವಷ್ಟಕ್ಕು ತಲುಪಿದರು. ಆದ್ದರಿಂದ ನೀನು ನನ್ನ ಮೇಲೆ ಶತ್ರುಗಳು ನಗುವಂತೆ ಮಾಡದಿರು ಮತ್ತು ಅಕ್ರಮಿಗಳ ಸಾಲಿನಲ್ಲಿ ನನ್ನನ್ನು ಸೇರಿಸದಿರು.
ಅಲ್-ಆರಾಫ್ಕುರಾನ್ ಸೂಚಿ
206ಆಯತ್
MeccanRevelation
148ಆಯತ್

ಅನುವಾದ — ಅಲ್-ಆರಾಫ್ 148

ಸೂರಾ ಅಲ್-ಆರಾಫ್ ಆಯತ್ 148 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾರವರು ತೂರ್ ಯಾತ್ರೆ ಹೋದ ಬಳಿಕ ಅವರ ಜನತೆಯು ತಮ್ಮ ಆಭರಣಗಳಿಂದ ಒಂದು…

ಸೂರಾ ಆಯತ್ 148/206 — ಸೂರಾ ಅಲ್-ಆರಾಫ್ الأعراف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆರಾಫ್ ಆಲಿಸಿ, ಸೂರಾ ಅಲ್-ಆರಾಫ್ ಅನುವಾದ, ಸೂರಾ ಅಲ್-ಆರಾಫ್ mp3, ಸೂರಾ ಅಲ್-ಆರಾಫ್ pdf. ಆಯತ್ 146–150. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers